Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ನನಗೂ ಅಣ್ಣ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಎಂಬ ಆಸೆ ಇದೆ. ಆದರೇ ಅದಕ್ಕೆ ಕಾಲ ಕೂಡಿ ಬರಬೇಕಲ್ವ ಎಂಬುದಾಗಿ ಮಾಜಿ ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕಾಂಗ್ರೆಸ್ ಹೈಕಮಾಂಡ್ ಅವರನ್ನು ಡಿ.ಕೆ ಶಿವಕುಮಾರ್ ಭೇಟಿಯಾಗಿದ್ದರಲ್ಲಿ ಯಾವುದೇ ಹೊಸತು ಇಲ್ಲ. ಅವರು ನಿರಂತರವಾಗಿ ಭೇಟಿ ಮಾಡುತ್ತಲೇ ಇರುತ್ತಾರೆ. ಅವರ ಮುಂದೆ ಡಿಮ್ಯಾಂಡ್ ಇದೋದಕ್ಕೆ ಏನಿದೆ. ಅವರನ್ನು ಪಾರ್ಟಿಯೇ ಡಿಸಿಎಂ ಮಾಡಿದೆಯಲ್ಲ ಇನ್ನೇನು ಬೇಕು ಎಂಬುದಾಗಿ ತಿಳಿಸಿದರು. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದಾರೆ. ಸಿಎಂ ಸ್ಥಾನ ಬೇಕು ಅಂತ ಅವರನ್ನು ಚೇರ್ ನಿಂದ ಎಳೆದು ಕೂರಿಸೋದಕ್ಕೆ ಆಗುತ್ತಾ? ಎಂಬುದಾಗಿ ಪ್ರಶ್ನಿಸಿದರು. ದೆಹಲಿಗೆ ಹೋದಾಗಲೆಲ್ಲ ಹೈಕಮಾಂಡ್ ಭೇಟಿ ಸಾಮಾನ್ಯವೇ ಆಗಿದೆ. ಅವರ ಜೊತೆಗೆ ಪಕ್ಷದ ಅಧ್ಯಕ್ಷರಾಗಿರುವಂತ ಡಿ.ಕೆ ಶಿವಕುಮಾರ್ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಡಿಕೆ ಶಿವಕುಮಾರ್ ಹೈಕಮಾಂಡ್ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು. https://kannadanewsnow.com/kannada/karnataka-bandh-on-march-22-no-postponement-of-class-7-8-9-exams-says-minister-madhu-bangarappa/ https://kannadanewsnow.com/kannada/breaking-woman-staff-sexually-assaulted-at-bbmp-office-this-officer-asks-if-she-has-contracted-hiv-if-she-goes-on-leave/
ಬೆಂಗಳೂರು: ಬೆಳಗಾವಿಯಲ್ಲಿನ ಮರಾಠಿಗರ ಪುಂಡಾಟ ಖಂಡಿಸಿ ಮಾರ್ಚ್.22ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾವೆ. ಇದೇ ಸಂದರ್ಭದಲ್ಲಿ ನಿಗದಿಯಾಗಿರುವಂತ 7, 8 ಮತ್ತು 9ನೇ ತರಗತಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲ್ಲ ಅಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರ್ಚ್.22ರಂದು 7, 8 ಹಾಗೂ 9ನೇ ತರಗತಿ ಪರೀಕ್ಷೆ ನಿಗದಿಯಾಗಿವೆ. ಅದೇ ದಿನ ಕರ್ನಾಟಕ ಬಂದ್ ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದಾವೆ. ಆದರೂ ಯಾವುದೇ ಪರೀಕ್ಷೆ ಮುಂದೂಡಿಕೆ ಮಾಡೋದಿಲ್ಲ. ಪರೀಕ್ಷೆಯ ಪಾಡಿಗೆ ನಡೆಯಲಿದೆ. ಮಕ್ಕಳ ಪರೀಕ್ಷೆಗೆ ತೊಂದರೆಯಾಗದಂತೆ ಬಂದ್ ಮಾಡೋರು ಸಹಕಾರ ನೀಡುವಂತೆ ಕೋರಿದರು. ಕರ್ನಾಟಕ ಬಂದ್ ಗೆ ಕರೆ ನೀಡಿರೋರು ಮಕ್ಕಳನ್ನು ಪರೀಕ್ಷೆಗೆ ಹೋಗಬೇಡಿ ಅಂತ ಯಾರೂ ಹೇಳಿಲ್ಲ. ಯಾವುದೇ ಮಕ್ಕಳು ಗೊಂದಲಕ್ಕೆ ಒಳಗಾಗ ಬಾರದು. ನಿಗದಿಯಂತೆ 7, 8, 9ನೇ ತರಗತಿ ಪರೀಕ್ಷೆಗಳು ನಡೆಯಲಿದ್ದಾವೆ. ಮುಂದೂಡಿಕೆ ಮಾಡುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು. https://kannadanewsnow.com/kannada/breaking-woman-staff-sexually-assaulted-at-bbmp-office-this-officer-asks-if-she-has-contracted-hiv-if-she-goes-on-leave/ https://kannadanewsnow.com/kannada/european-allies-canada-back-zelenskys-verbal-spat-with-trump-trump-zelensky/
ಬೆಂಗಳೂರು: ಒಂದನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಈ ನಿಯಮದಲ್ಲಿ ಯಾವುದೇ ಸಡಿಲಿಕೆ ಮಾಡುವುದಿಲ್ಲ. ಅದು ಸಾಧ್ಯವೂ ಇಲ್ಲ ಎಂಬುದಾಗಿ ಶಾಲಾ ಶಿಕ್ಷಣ ಸಚಿವ ಮಧು ಎಸ್ ಬಂಗಾರಪ್ಪ ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಶಾಲಾ ದಾಖಲಾತಿಗೆ 6 ವರ್ಷ ಮಕ್ಕಳ ವಯಸ್ಸು ಆಗಿರಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗಿದೆ. ಈ ಆದೇಶ ಮಾರ್ಪಾಡಿಗೆ ಕೋರ್ಟ್ ಗೆ ಹೋಗಲಾಗಿತ್ತು. ಆದರೇ ಕೋರ್ಟ್ ಅರ್ಜಿ ವಜಾಗೊಳಿಸಿದೆ. ನಾವು ಕೋರ್ಟ್ ಆದೇಶವನ್ನು ಪಾಲನೆ ಮಾಡಲಿದ್ದೇವೆ ಎಂದರು. ಒಂದನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಒಂದು, ಎರಡು ತಿಂಗಳು ಕಡಿಮೆ ಇದ್ದ ಮಕ್ಕಳಿಗೆ ಶಾಲಾ ದಾಖಲಾತಿಗೆ ಅವಕಾಶ ನೀಡಿದ್ರೇ ಮತ್ತೊಬ್ಬರು ಕೇಳುತ್ತಾರೆ. ಎಷ್ಟೋ ಪೋಷಕರು 6 ವರ್ಷಕ್ಕೆ 7 ದಿನ ಕಡಿಮೆ ಇದೆ ಅಂತಾನೂ ಹೇಳಿದ್ದಾರೆ. ಆದರೇ 1ನೇ ತರಗತಿಗೆ ಮಕ್ಕಳ ದಾಖಲಾತಿಗೆ 6 ವರ್ಷ ಕಡ್ಡಾಯವಾಗಿದೆ. ಒಂದು, ಎರಡು ತಿಂಗಳು ಕಡಿಮೆ ಇದೆ ಎನ್ನುವ ಕಾರಣಕ್ಕೆ ದಾಖಲಾತಿಗೆ ಅವಕಾಶ…
ಬೆಂಗಳೂರು: ದೇಶಾದ್ಯಂತ ಮಲ ಹೋರುವ ಪದ್ದತಿಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ಇದನ್ನು ಮೀರಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ಪ್ರೋತ್ಸಾಹಿಸಿದ್ದಲ್ಲಿ ನಿಮಗೆ 2-7 ವರ್ಷ ಜೈಲು ಶಿಕ್ಷೆ ಅಥವಾ 2-5 ಲಕ್ಷ ದಂಡ ವಿಧಿಸಬಹುದು. ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅಂದರೆ ಮಲ ಹೋರುವ ಪದ್ದತಿ ಶಿಕ್ಷಾರ್ಹ ಅಪರಾಧವಾಗಿದೆ. ಶೌಚಾಲಯ ಗುಂಡಿಯ ಮಲ ತ್ಯಾಜ್ಯವನ್ನು ತೆರವುಗೊಳಿಸಲು ಕಡ್ಡಾಯವಾಗಿ ಸಕ್ಕಿಂಗ್ ವಾಹನವನ್ನು ಬಳಸಬೇಕು ಅಂತ ತಿಳಿಸಿದೆ. ಇನ್ನೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಅನ್ನು ನೀವು ಪ್ರೋತ್ಸಾಹಿಸಿ, ಮಲ ಹೋರಿಸಿದ್ದೇ ಆದಲ್ಲಿ ನಿಮ್ಮ ವಿರುದ್ಧ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ 2 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಇದಲ್ಲದೇ 2 ರಿಂದ 5 ಲಕ್ಷ ದಂಡವನ್ನು ಹಾಕಬಹುದು. ಜೊತೆಗೆ ಶಿಕ್ಷೆ ಅಥವಾ ದಂಡ ಎರಡನ್ನು ನ್ಯಾಯಾಲಯ ವಿಧಿಸಬಹುದಾಗಿದೆ ಎಂಬುದಾಗಿ ಎಚ್ಚರಿಸಿದೆ. ಒಟ್ಟಾರೆಯಾಗಿ ಮ್ಯಾನುಯಲ್ ಸ್ಕ್ಯಾವೆಂಜರ್ ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ವಸತಿ ಅಧಿನಿಯಮ…
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಲ್ಲಿ ಒಂದು ಹೊಸ ಪಿಂಚಣಿ ಯೋಜನೆ ರದ್ದುಗೊಳಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂಬುದಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಮೊದಲ ಆದೇಶವೊಂದು ಹೊರಬಿದ್ದಿದೆ. ಅದೇನು ಅಂತ ಮುಂದೆ ಓದಿ. ದಿನಾಂಕ: 1.4.2006 ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಡಿಫೈನ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿ ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಸರ್ಕಾರಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಈ ಆದೇಶದ ವ್ಯಾಪ್ತಿಗೊಳಪಡುವ ಸರ್ಕಾರಿ ನೌಕರರಿಂದ ದಿನಾಂಕ: 30.6.2024 ರೊಳಗೆ ಅಭಿಮತವನ್ನು ಪಡೆದು ಕ್ರೋಢೀಕೃತ ಪ್ರಸ್ತಾವನೆಯನ್ನು ಸರ್ಕಾರದ ಪರಿಶೀಲನೆಗಾಗಿ ಸಲ್ಲಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿತ್ತು ಎಂದಿದ್ದಾರೆ. ಮುಂದುವರೆದು ದಿನಾಂಕ: 24.1.2024 ರ ಸರ್ಕಾರಿ ಆದೇಶದನ್ವಯ ಡಿಫೆನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್.ಪಿ.ಎಸ್. ಪ್ರಾನ್ ಖಾತೆಯಲ್ಲಿ ಜಮೆಯಾಗಿರುವ ಸರ್ಕಾರದ ಹಾಗೂ…
ಬೆಂಗಳೂರು: ಪೊಲೀಸರು ವಾಟ್ಸ್ ಆಪ್ ಮೂಲಕ ನೋಟಿಸ್ ನೀಡುವಂತಿಲ್ಲ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ. ತಮಿಳುನಾಡಿನ ಪವನ್ ಕುಮಾರ್ ಎಂಬುವರಿಗೆ ಬೆಂಗಳೂರಿನ ಆಡುಗೋಡಿ ಠಾಣೆಯ ಪೊಲೀಸರು ವಾಟ್ಸ್ ಆಪ್ ಮೂಲಕ ನೋಟಿಸ್ ಕಳುಹಿಸಿದ್ದರು. ಸುಪ್ರೀಂ ಕೋರ್ಟ್ ಕೆಲ ದಿನಗಳ ಹಿಂದೆ ವಾಟ್ಸ್ ಆಪ್ ಮೂಲಕ ನೋಟಿಸ್ ನೀಡುವಂತಿಲ್ಲ ಎಂಬುದಾಗಿ ಪ್ರಕರಣವೊಂದರಲ್ಲಿ ನೀಡಿದ್ದಂತ ತೀರ್ಪಿನ ಹಿನ್ನಲೆಯಲ್ಲಿ, ಈ ನೋಟಿಸ್ ರದ್ದುಗೊಳಿಸುವಂತೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರದಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರು ಅರ್ಜಿಯ ವಿಚಾರಣೆ ನಡೆಸಿದರು. ಈ ಅಭ್ಯಾಸವು ಕಾನೂನಿನಲ್ಲಿ ಅನುಮತಿಸಲಾಗುವುದಿಲ್ಲ ಎಂಬುದಾಗಿ ಅಭಿಪ್ರಾಯ ಪಟ್ಟರು. ಅಲ್ಲದೇ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ವಾಟ್ಸ್ ಅಪ್ ಮೂಲಕ ನೋಟಿಸ್ ನೀಡುವುದು ಶಾಸನಬದ್ಧ ಅವಶ್ಯಕತೆಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ ಎಂದರು. ಅರ್ಜಿದಾರರ ಪರವಾಗಿ ವಕೀಲ ಜ್ಞಾನೇಶ ಎನ್ ಐ ವಾದಿಸಿ, ಈ ನೋಟಿಸ್ ಕಾನೂನು ನಿಬಂಧನೆಗಳಿಗೆ ಅನುಗುಣವಾಗಿಲ್ಲ. ಇದು ಅಮಾನ್ಯವಾಗಿದೆ ರದ್ದುಗೊಳಿಸುವಂತೆ ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ…
ನವದೆಹಲಿ: ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಶುಕ್ರವಾರ ಸಂಜೆ ಪ್ರಮುಖ ಸ್ಥಗಿತವನ್ನು ಎದುರಿಸಿತು. ಇದು ಸಾವಿರಾರು ಬಳಕೆದಾರರನ್ನು ನಿರಾಶೆಗೊಳಿಸಿತು. ಏಕೆಂದರೆ ಅವರ ಸಂದೇಶಗಳು ತಲುಪಿಸಲಾಗಲಿಲ್ಲ. ರಾತ್ರಿ 9 ಗಂಟೆ ಸುಮಾರಿಗೆ ಈ ವಿಷಯ ಬೆಳಕಿಗೆ ಬಂದಿದ್ದು, ಬಳಕೆದಾರರು ಸಾಮಾಜಿಕ ಮಾಧ್ಯಮಗಳಲ್ಲಿ ಅಡ್ಡಿಯನ್ನು ವರದಿ ಮಾಡಲು ಮುಗಿಬಿದ್ದಿದ್ದಾರೆ. ಸ್ಥಗಿತ ಟ್ರ್ಯಾಕಿಂಗ್ ಪ್ಲಾಟ್ಫಾರ್ಮ್ ಡೌನ್ ಡಿಟೆಕ್ಟರ್ ಪ್ರಕಾರ, ರಾತ್ರಿ 9 ಗಂಟೆ ಸುಮಾರಿಗೆ ವಾಟ್ಸಾಪ್ ಸ್ಥಗಿತಕ್ಕೆ ಸಂಬಂಧಿಸಿದಂತೆ 4,400 ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ನಿಖರವಾದ ಕಾರಣವು ಅಸ್ಪಷ್ಟವಾಗಿದ್ದರೂ, ವ್ಯಾಪಕವಾದ ಅಡಚಣೆಯು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಲಿಲ್ಲ. https://kannadanewsnow.com/kannada/president-donald-trump-declares-english-as-us-national-language/ https://kannadanewsnow.com/kannada/breaking-brutal-murder-in-chikkaballapur-miscreants-kill-bar-supplier-over-petty-issue/
ನವದೆಹಲಿ: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆಬ್ರವರಿ 28) ಇಂಗ್ಲಿಷ್ ಅನ್ನು ಯುನೈಟೆಡ್ ಸ್ಟೇಟ್ಸ್ನ ಅಧಿಕೃತ ಭಾಷೆಯಾಗಿ ಗೊತ್ತುಪಡಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ ಎಂದು ಶ್ವೇತಭವನ ತಿಳಿಸಿದೆ. ಈ ಆದೇಶವು ಫೆಡರಲ್ ಧನಸಹಾಯವನ್ನು ಪಡೆಯುವ ಸರ್ಕಾರಿ ಸಂಸ್ಥೆಗಳು ಮತ್ತು ಸಂಸ್ಥೆಗಳಿಗೆ ಇಂಗ್ಲಿಷ್ ಹೊರತುಪಡಿಸಿ ಇತರ ಭಾಷೆಯಲ್ಲಿ ದಾಖಲೆಗಳು ಮತ್ತು ಸೇವೆಗಳನ್ನು ನೀಡುವುದನ್ನು ಮುಂದುವರಿಸಬೇಕೆ ಎಂದು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಮುಂಬರುವ ಆದೇಶದ ಬಗ್ಗೆ ಫ್ಯಾಕ್ಟ್ ಶೀಟ್ ತಿಳಿಸಿದೆ. ಫೆಡರಲ್ ಧನಸಹಾಯವನ್ನು ಪಡೆದ ಸರ್ಕಾರ ಮತ್ತು ಸಂಸ್ಥೆಗಳು ಇಂಗ್ಲಿಷ್ ಅಲ್ಲದ ಭಾಷಿಕರಿಗೆ ಭಾಷಾ ಸಹಾಯವನ್ನು ಒದಗಿಸಬೇಕು ಎಂಬ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಆದೇಶವನ್ನು ಕಾರ್ಯನಿರ್ವಾಹಕ ಆದೇಶವು ರದ್ದುಪಡಿಸುತ್ತದೆ. ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ಈ ಆದೇಶದ ಬಗ್ಗೆ ಮೊದಲು ವರದಿ ಮಾಡಿದೆ. https://kannadanewsnow.com/kannada/whatsapp-facebook-shut-down-in-india-other-parts-of-the-world/ https://kannadanewsnow.com/kannada/national-award-for-ksrtc-and-md-anbukumar/
ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವೆಡೆ ವಾಟ್ಸ್ ಆಪ್ ಹಾಗೂ ಫೇಸ್ ಬುಕ್ ಸೇವೆ ಸ್ಥಗಿತಗೊಂಡಿದೆ. ಹೀಗಾಗಿ ಬಳಕೆದಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿ ಎಂಬುದಾಗಿ ವರದಿಯಾಗಿದೆ. ವಾಟ್ಸಾಪ್ ಮತ್ತು ಫೇಸ್ಬುಕ್ ಮೆಸೆಂಜರ್ ಶುಕ್ರವಾರ ಸ್ಥಗಿತಗೊಂಡಿವೆ. ಆನ್ಲೈನ್ ಸ್ಥಗಿತಗಳನ್ನು ಪತ್ತೆಹಚ್ಚುವ ಪ್ಲಾಟ್ಫಾರ್ಮ್ ಡೌನ್ಡೆಟೆಕ್ಟರ್, ಈ ಬಗ್ಗೆ ಯುನೈಟೆಡ್ ಸ್ಟೇಟ್ಸ್ನಲ್ಲಿ ವಾಟ್ಸಾಪ್ ಬಗ್ಗೆ 4000 ಕ್ಕೂ ಹೆಚ್ಚು ವರದಿಗಳನ್ನು ಮತ್ತು ಭಾರತದಲ್ಲಿ 10,000 ಕ್ಕೂ ಹೆಚ್ಚು ವರದಿಗಳನ್ನು ತೋರಿಸಿದೆ. ಈ ಸಮಸ್ಯೆಗಳಿಗೆ ಮೆಟ್ಸ್ ಇನ್ನೂ ಪ್ರತಿಕ್ರಿಯಿಸಿಲ್ಲ. ಆದರೇ ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ಸೇವೆ ಸ್ಥಗಿತದಿಂಗಾಗಿ ಬಳಕೆದಾರರು ಸಮಸ್ಯೆಗೆ ಸಿಲುಕುವಂತೆ ಆಗಿದೆ. https://kannadanewsnow.com/kannada/national-award-for-ksrtc-and-md-anbukumar/ https://kannadanewsnow.com/kannada/breaking-brutal-murder-in-chikkaballapur-miscreants-kill-bar-supplier-over-petty-issue/
ಬೆಂಗಳೂರು: ಕೆ ಎಸ್ ಆರ್ ಟಿ ಸಿ ಗೆ ಮತ್ತು ವ್ಯವಸ್ಥಾಪಕ ನಿರ್ದೇಶಕರಿಗೆ Governance now 11th PSU ರಾಷ್ಟ್ರೀಯ ಪ್ರಶಸ್ತಿ ಮತ್ತು PSU ನಾಯಕತ್ವ ಪ್ರಶಸ್ತಿ -2025 ಲಭಿಸಿದೆ. ಈ ಬಗ್ಗೆ ಕೆ ಎಸ್ ಆರ್ ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ನವದೆಹಲಿಯಲ್ಲಿ Governance Now ಅವರು ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿಗಮಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕರು ಅನ್ಬುಕುಮಾರ್ ಭಾಆಸೇ, ಅವರಿಗೆ PSU ಆತ್ಮನಿರ್ಭರ್ ನಾಯಕತ್ವ ಪ್ರಶಸ್ತಿಯನ್ನುಸತೀಶ್ ಚಂದ್ರ ದುಬೆ, ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವರು, ಭಾರತ ಸರ್ಕಾರರವರು ಮತ್ತು ಸತ್ಯಪಾಲ್ ಸಿಂಗ್, ಮಾಜಿ ಕೇಂದ್ರ ಸರ್ಕಾರದ ರಾಜ್ಯ ಸಚಿವರು ಮಾನವ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಮತ್ತು ಗಂಗಾ ನದಿ ಕಾಯಕಲ್ಪ ಇಲಾಖೆ ಅವರು ಪ್ರಶಸ್ತಿ ಪ್ರದಾನ ಮಾಡಿದರು. ನಿಗಮದಲ್ಲಿ ಒಟ್ಟು 1314 ಬಸ್ಸುಗಳು ಪುನಶ್ಚೇತನಗೊಂಡಿದ್ದು, ಕರ್ನಾಟಕ ಸಾರಿಗೆ 1184 , ನಗರ ಸಾರಿಗೆ 115, ಐರಾವತ ಕ್ಲಬ್ ಕ್ಲಾಸ್ 15 ಬಸ್ಸುಗಳನ್ನು…