Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ : ಮೆಸ್ಕಾಂ ಮಾಹಿತಿ ತಂತ್ರಜ್ಞಾನ(ಐಟಿ) ವ್ಯವಸ್ಥೆಯ ತುರ್ತು ನಿರ್ವಹಣಾ ಕಾರ್ಯ ಹಮ್ಮಿಕೊಂಡಿದ್ದು, ಬಂಟ್ವಾಳ, ಕಡೂರು, ತರೀಕೆರೆ, ಪುತ್ತೂರು, ಉಡುಪಿ, ಮಂಗಳೂರು, ಶಿಕಾರಿಪುರ, ಸಾಗರ, ಶಿವಮೊಗ್ಗ, ಭಧ್ರಾವತಿ, ಚಿಕ್ಕಮಗಳೂರು ನಗರ ಪ್ರದೇಶಗಳಲ್ಲಿ ಮೆಸ್ಕಾಂ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ, ಹೊಸಸಂಪರ್ಕ ಇತ್ಯಾದಿ ಸೇವೆಗಳು ಅ.24 ರಾತ್ರಿ 08.00 ಗಂಟೆಯಿಂದ ಅ.25 ರ ಮಧ್ಯಾಹ್ನ 01.00 ಗಂಟೆಯವರೆಗೆ ಲಭ್ಯವಿರುವುದಿಲ್ಲ. ನಗರ ಪ್ರದೇಶದ ಗ್ರಾಹಕರು ಬಿಲ್ ಪಾವತಿಗಾಗಿ ಹೆಚ್ಚಾಗಿ ಬಳಸುವ ಮೆಸ್ಕಾಂನ ಜಾಲತಾಣ (www.mescom.org.in) ಮೆಸ್ಕಾಂನ ಮೊಬೈಲ್ ಆಪ್ (ನನ್ನಮೆಸ್ಕಾಂ), ಕರ್ನಾಟಕ ಒನ್ ಕೌಂಟರ್ಗಳು, ಅಂಚೆ ಕಛೇರಿಯ ಕೌಂಟರ್ಗಳು ಹಾಗೂ ಇತರೆ ಬಿ,ಬಿ.ಪಿ.ಎಸ್.ನ ಚಾನಲ್ಗಳಲ್ಲಿ ಮೇಲೆ ತಿಳಿಸಿದ ಸಮಯದಲ್ಲಿ, ನಗರಪ್ರದೇಶದ ಗ್ರಾಹಕರಿಗೆ ಆನ್ ಲೈನ್ ಸೇವೆಗಳು ಲಭ್ಯವಿರುವುದಿಲ್ಲ, ಅಡಚಣೆಗಾಗಿ ವಿಷಾದಿಸುತ್ತಾ ಗ್ರಾಹಕರು ಸಹಕಾರ ನೀಡಬೇಕೆಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. https://kannadanewsnow.com/kannada/muhurat-fixed-for-bangalores-historic-and-famous-peanut-festival-this-time-the-festival-has-been-extended-to-5-days/ https://kannadanewsnow.com/kannada/bjp-prepares-for-gba-elections-coordinator-team-appointed-under-vijayendras-leadership/
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆಗೆ ಬಿಜೆಪಿ ಸಿದ್ಧಗೊಂಡಿದೆ. ಇದಕ್ಕೆ ಪೂರಕ ಎನ್ನುವಂತೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಸಂಯೋಜಕರ ತಂಡವನ್ನು ನೇಮಕ ಮಾಡಲಾಗಿದೆ. ಈ ಸಂಬಂಧ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆ ಸಂಬಂಧಿತ ಚಟುವಟಿಕೆಗಳಿಗೆ ಈ ಕೆಳಕಂಡಂತೆ ನನ್ನ ನೇತೃತ್ವದಲ್ಲಿ ಪ್ರಾಧಿಕಾರದ ಸಂಯೋಜಕರ ತಂಡ, ಸಂಘಟನಾತ್ಮಕ ಜಿಲ್ಲೆಯ ಸಂಯೋಜಕರು ಹಾಗೂ 5 ಪಾಲಿಕೆಗಳಿಗೆ ಪ್ರಮುಖರು ಹಾಗೂ ಸಹ ಪ್ರಮುಖರನ್ನಾಗಿ ನಿಯೋಜಿಸಿರುವುದಾಗಿ ತಿಳಿಸಿದ್ದಾರೆ. ಹೀಗಿದೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಂಯೋಜಕರ ಪಟ್ಟಿ ಬಿವೈ ವಿಜಯೇಂದ್ರ ಆರ್.ಅಶೋಕ್ ಛಲವಾದಿ ನಾರಾಯಣಸ್ವಾಮಿ ಡಿ.ವಿ ಸದಾನಂದಗೌಡ ಎಸ್ ಸುರೇಶ್ ಕುಮಾರ್ ಕುಮಾರಿ ಶೋಭಾ ಕರಂದ್ಲಾಜೆ ಪಿ.ಸಿ ಮೋಹನ್ ಡಾ.ಸಿಎನ್ ಮಂಜುನಾಥ್ ತೇಜಸ್ವಿ ಸೂರ್ಯ ಡಾ.ಕೆ ಸುಧಾಕರ್ ಎನ್ ಎಸ್ ನಂದೀಶ್ ರೆಡ್ಡಿ. ಹೀಗಿದೆ ಸಂಘಟನಾತ್ಮಕ ಜಿಲ್ಲೆಯ ಪ್ರಮುಖರ ಪಟ್ಟಿ ಬೆಂಗಳೂರು ದಕ್ಷಿಣ-ಸಿ.ಕೆ ರಾಮಮೂರ್ತಿ ಬೆಂಗಳೂರು ಉತ್ತರ-ಎಸ್ ಹರೀಶ್ ಬೆಂಗಳೂರು ಕೇಂದ್ರ-ಎಆರ್ ಸಪ್ತಗಿರಿ…
ಮಧ್ಯಪ್ರದೇಶ: ಮಧ್ಯಪ್ರದೇಶದಾದ್ಯಂತ ಕನಿಷ್ಠ 122 ಮಕ್ಕಳು ಕಣ್ಣಿಗೆ ತೀವ್ರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 14 ಮಕ್ಕಳು “ಕಾರ್ಬೈಡ್ ಬಂದೂಕುಗಳು” ಅಥವಾ “ದೇಸಿ ಪಟಾಕಿ ಬಂದೂಕುಗಳು” ಎಂದು ಕರೆಯಲ್ಪಡುವ ಅಪಘಾತಗಳಿಂದಾಗಿ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 18 ರಂದು ರಾಜ್ಯಾದ್ಯಂತ ನಿಷೇಧ ಹೇರಿದ್ದರೂ ಸ್ಥಳೀಯ ಮಾರುಕಟ್ಟೆಗಳು ಈ ಕಚ್ಚಾ, ತಾತ್ಕಾಲಿಕ ಸಾಧನಗಳನ್ನು ಮಾರಾಟ ಮಾಡುವುದನ್ನು ಮುಂದುವರೆಸಿವೆ ಎಂದು ಹೇಳಲಾಗುತ್ತದೆ. 150-200 ರೂ.ಗಳಿಗೆ ಮಾರಾಟವಾಗುವ ಈ ಮನೆಯಲ್ಲಿ ತಯಾರಿಸಿದ ಗ್ಯಾಜೆಟ್ಗಳು ಆಟಿಕೆಗಳನ್ನು ಹೋಲುತ್ತವೆ. ಆದರೆ ಸ್ಫೋಟಕ ಸಾಧನಗಳಂತೆ ಕಾರ್ಯನಿರ್ವಹಿಸುತ್ತವೆ, ಆಗಾಗ್ಗೆ ಗಂಭೀರ ಗಾಯಗಳಿಗೆ ಕಾರಣವಾಗುತ್ತವೆ. https://twitter.com/PTI_News/status/1980998883787591897 ಈ ಸ್ಫೋಟಕ ಸಾಧನಗಳ ಅಕ್ರಮ ಮಾರಾಟಕ್ಕಾಗಿ ವಿದಿಶಾ ಪೊಲೀಸರು ಆರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಆರ್ಕೆ ಮಿಶ್ರಾ, “ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಬೈಡ್ ಬಂದೂಕುಗಳನ್ನು ಮಾರಾಟ ಮಾಡುವ ಅಥವಾ ಪ್ರಚಾರ ಮಾಡುವವರು ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದರು. ಭೋಪಾಲ್, ಇಂದೋರ್, ಜಬಲ್ಪುರ್ ಮತ್ತು ಗ್ವಾಲಿಯರ್ನ ಆಸ್ಪತ್ರೆಗಳು ಈ ಸ್ಫೋಟಕ ಸಾಧನಗಳಿಂದ ಕಣ್ಣಿನ ಗಾಯಗಳಿಂದ ಬಳಲುತ್ತಿರುವ…
ಬೆಂಗಳೂರು: ರಾಜ್ಯದಲ್ಲಿ ಹತ್ತಿ ಬೆಳೆಯುವಂತ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖರೀದಿ ಬೆಲೆಯನ್ನು 45,000ಕ್ಕೆ ನಿಗದಿ ಪಡಿಸಿರುವುದೇ ಕಾರಣ. ಈ ಬೆಲೆಯನ್ನು ರೂ.60,000ಕ್ಕೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತಂತೆ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಅದರಲ್ಲಿ ನಮಸ್ಕಾರಗಳು, ಉಗ್ರೇಶ್, ಜೆ.ಡಿ.ಎಸ್ ಮುಖಂಡರು, ಸಿರಾ ವಿಧಾನಸಭಾ ಕ್ಷೇತ್ರ ತುಮಕೂರು ಜಿಲ್ಲೆ ಇವರು ಸಲ್ಲಿಸಿರುವ ಸಯಂವರ ಮನವಿಯನ್ನು ಇದರೊಂದಿಗೆ ಲಗತಿ ನಮ್ಮ ಅವಗಾಹನೆಗಾಗಿ ರವಾನಿಸಲಾಗಿದೆ ಎಂದಿದ್ದಾರೆ. ಸಿರಾ ಹಾಗೂ ಅಕಪಕದ ಪಾವಗಡ, ಮಧುಗಿರಿ, ಹಿರಿಯೂರು ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲೂಕುಗಳಲ್ಲಿನ ರೈತರಿಗೆ ಹತ್ತಿ ಮತ್ತು ಹತ್ತಿ ಬೀಜದ ಬೆಲೆ ಕಳೆದ ವರ್ಷ ರೂ. 50,000/-ಗಳು ನಿಗಧಿಯಾಗಿದ್ದು ಈ ವರ್ಷ ರೂ. 45,000/- ಗಳಿಗೆ ನಿಗಧಿಯಾಗಿದೆ. ದಿನಗೂಲಿ ಕಾರ್ಮಿಕರ ವೇತನ, ರಸಗೊಬದ್ಧ, ಕೀಟನಾಶಕ ಮತ್ತು ಕೃಷಿ ವಸ್ತುಗಳ ಬೆಳೆಗಳು ರೈತರ ಬದುಕಿಗೆ…
ಬೆಂಗಳೂರು: ನಗರದಲ್ಲಿ ವೈದ್ಯ ಪತ್ನಿ ಕೃತಿಕಾಳನ್ನು ಅನೆಸ್ತೇಶಿಯಾ ನೀಡಿ ಹತ್ಯೆಗೈದಿದ್ದಂತ ಕಿಲ್ಲರ್ ಡಾಕ್ಟರ್ ಮಹೇಂದ್ರಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಕಿಲ್ಲರ್ ಡಾಕ್ಟರ್ ಮಹೇಂದ್ರ ಜೈಲುಪಾಲಾಗಿದ್ದಾರೆ. ವೈದ್ಯೆ ಪತ್ನಿ ಕೃತಿಕಾಗೆ ಇಂಜೆಕ್ಷನ್ ನೀಡಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತಿಕಾ ಪತ್ನಿ ಆರೋಪಿ ಡಾ.ಮಹೇಂದ್ರ ಅವರನ್ನು ಬೆಂಗಳೂರಿನ 29ನೇ ಎಸಿಎಂಎಂ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದಂತ ಕೋರ್ಟ್, ಆರೋಪಿ ಡಾ.ಮಹೇಂದ್ರಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ. ಹೀಗಾಗಿ ಪತ್ನಿ ಕೃತಿಕಾಗೆ ಇಂಜೆಕ್ಷನ್ ನೀಡಿ ಹತ್ಯೆಗೈದ ಪತಿ ಡಾ.ಮಹೇಂದ್ರ ಜೈಲುಪಾಲಾಗಿದ್ದಾರೆ. https://kannadanewsnow.com/kannada/kerala-declared-as-indias-first-state-to-be-free-from-extreme-poverty/ https://kannadanewsnow.com/kannada/it-is-necessary-to-teach-the-youth-who-are-addicted-to-mobile-phones-about-the-history-of-great-personalities-minister-shivraj-tangadagi/
ಕೇರಳ: ನವೆಂಬರ್ 1, 2025 ರಂದು ತಿರುವನಂತಪುರದ ಸೆಂಟ್ರಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ರಾಜ್ಯವನ್ನು ತೀವ್ರ ಬಡತನ ಮುಕ್ತ ರಾಜ್ಯವೆಂದು ಅಧಿಕೃತವಾಗಿ ಘೋಷಿಸುವ ಮೂಲಕ ಕೇರಳ ಇತಿಹಾಸ ಸೃಷ್ಟಿಸಲಿದೆ. ಈ ಘೋಷಣೆಯು ಕೇರಳಕ್ಕೆ ಒಂದು ಹೆಗ್ಗುರುತು ಸಾಮಾಜಿಕ ಸಾಧನೆಯಾಗಿದ್ದು, ತೀವ್ರ ಬಡತನವನ್ನು ನಿರ್ಮೂಲನೆ ಮಾಡಿದ ಮೊದಲ ಭಾರತೀಯ ರಾಜ್ಯವಾಗಲಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ. ಪ್ರಮುಖ ನಟರಾದ ಮೋಹನ್ ಲಾಲ್, ಮಮ್ಮುಟ್ಟಿ ಮತ್ತು ಕಮಲ್ ಹಾಸನ್ ಅವರು ವಿಶೇಷ ಅತಿಥಿಗಳಾಗಿ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬುಧವಾರ ತಿರುವನಂತಪುರದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸ್ಥಳೀಯ ಸ್ವ-ಸರ್ಕಾರ ಸಚಿವ ಎಂ.ಬಿ. ರಾಜೇಶ್ ಅವರ ಪ್ರಕಾರ, ಈ ಕಾರ್ಯಕ್ರಮದಲ್ಲಿ ಎಲ್ಲಾ ಸಚಿವರು ಮತ್ತು ವಿರೋಧ ಪಕ್ಷದ ನಾಯಕರು ಭಾಗವಹಿಸಲಿದ್ದಾರೆ. ತೀವ್ರ ಬಡತನವನ್ನು ಕೊನೆಗೊಳಿಸುವ ನಾಲ್ಕು ವರ್ಷಗಳ ಧ್ಯೇಯ ಪ್ರಸ್ತುತ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್) ಸರ್ಕಾರದ ಮೊದಲ ಸಚಿವ ಸಂಪುಟ ನಿರ್ಧಾರಗಳಲ್ಲಿ ಒಂದಾಗಿ 2021 ರಲ್ಲಿ ಪ್ರಾರಂಭಿಸಲಾದ ತೀವ್ರ…
ಬೆಂಗಳೂರು: ಯುವ ಪೀಳಿಗೆ ಇಂದು ಮೊಬೈಲ್ ಗೀಳಿಗೆ ಬಿದ್ದಿದ್ದು, ಇವರಿಗೆ ಓದಿನ ರುಚಿ ಹತ್ತಿಸುವ ಮೂಲಕ ನಾಡಿನ ಇತಿಹಾಸ ಪುರುಷರ ಬಗ್ಗೆ ತಿಳಿಸುವ ಅಗತ್ಯತೆ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಅಭಿಪ್ರಾಯಪಟ್ಟರು. ಕಿತ್ತೂರು ರಾಣಿಚೆನ್ನಮ್ಮ ಜಯಂತಿ ಅಂಗವಾಗಿ ಕನ್ನಡ ಭವನದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನತೆಗೆ ಮೊಬೈಲ್ ಒಂದೇ ದುನಿಯಾ ಜೀವನ ಆಗಿ ಬಿಟ್ಟಿದೆ. ನಿಜಕ್ಕೂ ಇದು ದುರದೃಷ್ಟಕರ. ಒಂದು ಕುಟುಂಬದಲ್ಲಿ ಪೋಷಕರು ಮತ್ತು ಮಕ್ಕಳು ಒಟ್ಟಿಗೆ ಕುಳಿತಿದ್ದರೆ, ಒಬ್ಬರನ್ನೊಬ್ಬರು ಮಾತನಾಡದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆಗೆ ಇತಿಹಾಸದ ವಾಸ್ತವ ಸ್ಥಿತಿಯನ್ನು ತಿಳಿಸುವ ಮೂಲಕ ಓದಿನ ರುಚಿ ಹತ್ತಿಸುವ ಕೆಲಸ ಆಗಬೇಕಿದೆ. ಮಹನೀಯರ ಜಯಂತಿಗಳನ್ನ ಆಚರಣೆ ಮಾಡುವ ಮೂಲಕ ಅವರ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಚೆನ್ನಮ್ಮ…
ಬೆಂಗಳೂರು: ಡೇಟಿಂಗ್ ಆಪ್ಗಳಲ್ಲಿ ನಕಲಿ ಪ್ರೋಫೈಲ್ಗಳ ಹಾವಳಿ ತಪ್ಪಿಸಲು “ಟಿಂಡರ್” ಆಪ್ ಮೊದಲ ಬಾರಿಗೆ “ಫೇಸ್ ಚೆಕ್” ಲಾಗಿನ್ ಪರಿಚಯಿಸಿದ್ದು, ಇದು ನಕಲಿ ಪ್ರೊಫೈಲ್ ಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕೆಲಸ ಮಾಡಲಿದೆ. ಈ ಮೂಲಕ ಡೇಟಿಂಗ್ ಆಪ್ ಬಳಕೆ ದಾರರಲ್ಲಿ ವಿಶ್ವಾಸ ಬೆಳೆಸುವ ಜೊತೆಗೆ, ತಮ್ಮ ಜೊತೆಗಾರರನ್ನು ಹುಡುಕಲು ಸಹಕಾರಿಯಾಗಲಿದೆ. ಇಂತಹ ವಿಶೇಷ ಆಪ್ಷನ್ ಪರಿಚಯಿಸಿದ ಡೇಟಿಂಗ್ ಆಪ್ನಲ್ಲಿ ಟಿಂಡರ್ ಮೊದಲನೆಯದು. ಇಂದು ನಕಲಿ ಪ್ರೋಫೈಲ್ ಹಾವಳಿ ಹೆಚ್ಚಾಗುತ್ತಿದ್ದು, ಬೇರೊಬ್ಬರ ಹೆಸರಿನಲ್ಲಿ ವಂಚನೆಗಳು ನಡೆಯುತ್ತಿವೆ. ಹೀಗಾಗಿ ಫೇಸ್ಚೆಕ್ ಲಾಗಿನ್ ಮೂಲಕ ಬಳಕೆದಾರರಷ್ಟೇ ತಮ್ಮ ಪ್ರೋಪೈಲ್ ನಿರ್ಮಿಸಿ, ಅದನ್ನು ನಿರ್ವಹಣೆ ಮಾಡಲುಸಾಧ್ಯವಾಗುತ್ತದೆ. ಅತಿ ಹೆಚ್ಚು ಯುವಕರೇಇರುವ ಭಾರತದಲ್ಲಿ ಇಂತಹ ಆಪ್ಷನ್ ಹೆಚ್ಚು ಅವಶ್ಯಕವಾಗಿತ್ತು ಎಂದು ಮ್ಯಾಚ್ ಗ್ರೂಪ್ನ ಟ್ರಸ್ಟ್ & ಸೇಫ್ಟಿಯ ಹಿರಿಯ ಉಪಾಧ್ಯಕ್ಷ ಯೋಯೆಲ್ ರೋತ್ ಅಭಿಪ್ರಾಯಪಟ್ಟರು. “ಫೇಸ್ ಚೆಕ್ ನಂತಹ ಸುರಕ್ಷತಾ ವೈಶಿಷ್ಟ್ಯಗಳು ನಕಲಿ ಪ್ರೊಫೈಲ್ ಮತ್ತು ವಂಚನೆಯ ವಿರುದ್ಧದ ನಮ್ಮ ಹೋರಾಟದಲ್ಲಿ ನಿರ್ಣಾಯಕ ಸಾಧನವನ್ನು ಒದಗಿಸುತ್ತವೆ, ಇದು ಜನರು…
ಬೆಂಗಳೂರು: ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣೆ ಕಾರ್ಯ ಹಿನ್ನೆಲೆಯಲ್ಲಿ ಐದು ಎಸ್ಕಾಂಗಳ ಆನ್ ಲೈನ್ ಸೇವೆಗಳಾದ ವಿದ್ಯುತ್ ಬಿಲ್ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್ ಲೈನ್ ಆಧರಿತ ಸೇವೆಗಳು ಅಕ್ಟೋಬರ್ 24ರ ನಾಳೆ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 25ರ ಮಧ್ಯಾಹ್ನ1 ಗಂಟೆಯವರೆಗೆ ನಗರ ಪ್ರದೇಶಗಳಲ್ಲಿ ಲಭ್ಯವಿರುವುದಿಲ್ಲ. ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ ಈ ಕೆಳಕಂಡ ನಗರ ಉಪ ವಿಭಾಗದ ಗ್ರಾಹಕರಿಗೆ https://www.bescom.co.in, www.hescom.co.in, www.gescomglb.org, www.mescom.org.in ಮತ್ತು .cescmysore.in ಪೋರ್ಟಲ್ ಗಳ ಮೂಲಕ ಮಾಡುವ ಆನ್ ಲೈನ್ ಸೇವೆಗಳಾದ ಬಿಲ್ ಪಾವತಿ, ಹೊಸ ಸಂಪರ್ಕ ಲಭ್ಯವಿರುವುದಿಲ್ಲ . ಹಾಗೆಯೇ ವಿದ್ಯುತ್ ಬಿಲ್ ಪಾವತಿಗಾಗಿ ಬಳಸುವ ಬೆಸ್ಕಾಂ ಮಿತ್ರ ಆಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಮೊದಲಾದ ಥರ್ಡ್ ಪಾರ್ಟಿ ಪಾವತಿ ವಿಧಾನಗಳಲ್ಲಿ ಆನ್ ಲೈನ್ ಸೇವೆ ಅಲಭ್ಯ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ. ಬೆಸ್ಕಾಂ ಬೆಂಗಳೂರು…
ಮಂಡ್ಯ: ಜಿಲ್ಲೆಯಲ್ಲಿ ಎಐ ಚಿತ್ರಕ್ಕೆ ಜನರು ಹೈರಾಣಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಐ ಮೂಲಕ ಪೋಟೋ ಎಡಿಟ್ ಮಾಡಿ ಪ್ರವಾಸಿ ತಾಣಗಳಲ್ಲಿ ಹುಲಿ, ಚಿರತೆ ಓಡಾಟವೆಂದು ಹರಿಬಿಟ್ಟ ಕಾರಣ ಭಯಭೀತರಾಗಿದ್ದಾರೆ. ಹೌದು.. ಮಂಡ್ಯದಲ್ಲಿ ಕಿಡಿಗೇಡಿಗಳ AI ಚಿತ್ರದ ಹುಡುಗಾಟಕ್ಕೆ ಜನರು ಹೈರಾಣಾಗಿದ್ದಾರೆ. AI ಬಳಸಿ ಪ್ರವಾಸಿ ತಾಣದ ಬಳಿ ಹುಲಿ ಮತ್ತು ಚಿರತೆಗಳ ಓಡಾಟದ ಫೋಟೋ ಎಡಿಟ್ ಮಾಡಿದ್ದಾರೆ. ಎಡಿಟ್ ಮಾಡಿದ ಇಂತಹ ಚಿತ್ರಗಳನ್ನು ವೈರಲ್ ಮಾಡಿ ಜನರಲ್ಲಿ ಆತಂಕವನ್ನು ಕಿಡಿಗೇಡಿಗಳು ಮೂಡಿಸಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದ ಗಂಜಾಮ್ ಬಳಿಯ ಪ್ರವಾಸಿ ತಾಣ ಗುಂಬಸ್ ಬಳಿ ಹುಲಿ ಚಿರತೆ ಕಾಣಿಸಿಕೊಂಡ ವದಂತಿ ಹರಡಲಾಗಿದೆ. ಇದಕ್ಕೆ ಪೂರಕ ಎಂಬಂತೆ AI ಮೂಲಕ ಚಿರತೆ ಹಾಗು ಹುಲಿಗಳ ಫೋಟೋ ಎಡಿಟ್ ಮಾಡಿ ವೈರಲ್ ಆಗಿದೆ.ಇದರ ಜೊತೆಗೆ ಗ್ರಾಮಕ್ಕೆ ಚಿರತೆ ಬಂದ AI ಚಿತ್ರ ಎಡಿಟ್ ಮಾಡಿ ಆತಂಕವನ್ನು ಕಿಡಿಗೇಡುಗಳು ಮಾಡಿದ್ದಾರೆ. ಈ AI ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನರಲ್ಲಿ ಆತಂಕ ಉಂಟಾಗಿದೆ. ಇದರ ಅಸಲಿ ಸತ್ಯ ತಿಳಿಯದೆ ಸ್ಥಳೀಯ ಜನರಲ್ಲಿ ಮನೆ ಮಾಡಿದ…














