Author: kannadanewsnow09

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ರೈಲ್ವೆ ಸಚಿವಾಲಯದ ಒಟ್ಟು ಅಂದಾಜು ವೆಚ್ಚ 6,456 ಕೋಟಿ ರೂ.ಗಳ (ಅಂದಾಜು) 3 (ಮೂರು) ಯೋಜನೆಗಳಿಗೆ ತನ್ನ ಅನುಮೋದನೆ ನೀಡಿದೆ. ಅನುಮೋದಿತ ಯೋಜನೆಗಳು ಸಂಪರ್ಕವಿಲ್ಲದ ಪ್ರದೇಶಗಳನ್ನು ಸಂಪರ್ಕಿಸುವ ಮೂಲಕ ವ್ಯವಸ್ಥಾಪನಾ ದಕ್ಷತೆಯನ್ನು ಸುಧಾರಿಸುತ್ತವೆ. ಅಸ್ತಿತ್ವದಲ್ಲಿರುವ ಲೈನ್ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ ಮತ್ತು ಸಾರಿಗೆ ಜಾಲಗಳನ್ನು ಹೆಚ್ಚಿಸುತ್ತವೆ. ಇದರ ಪರಿಣಾಮವಾಗಿ ಸುವ್ಯವಸ್ಥಿತ ಪೂರೈಕೆ ಸರಪಳಿಗಳು ಮತ್ತು ತ್ವರಿತ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಹೊಸ ಮಾರ್ಗದ ಪ್ರಸ್ತಾಪಗಳು ನೇರ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಚಲನಶೀಲತೆಯನ್ನು ಸುಧಾರಿಸುತ್ತವೆ. ಭಾರತೀಯ ರೈಲ್ವೆಗೆ ವರ್ಧಿತ ದಕ್ಷತೆ ಮತ್ತು ಸೇವಾ ವಿಶ್ವಾಸಾರ್ಹತೆಯನ್ನು ಒದಗಿಸುತ್ತವೆ. ಮಲ್ಟಿ-ಟ್ರ್ಯಾಕಿಂಗ್ ಪ್ರಸ್ತಾಪವು ಕಾರ್ಯಾಚರಣೆಯನ್ನು ಸರಾಗಗೊಳಿಸುತ್ತದೆ ಮತ್ತು ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಭಾರತೀಯ ರೈಲ್ವೆಯಾದ್ಯಂತ ಅತ್ಯಂತ ಜನನಿಬಿಡ ವಿಭಾಗಗಳಲ್ಲಿ ಹೆಚ್ಚು ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಯನ್ನು ಒದಗಿಸುತ್ತದೆ. ಈ ಯೋಜನೆಗಳು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ,…

Read More

ಶಿವಮೊಗ್ಗ: ರಾಜ್ಯ ಸರ್ಕಾರದಿಂದ ಹೊಸನಗರ ತಾಲ್ಲೂಕಿನ ತ್ರೈಮಾಸಿಕ ಕೆಡಿಪಿಯ ನಾಮ ನಿರ್ದೇಶಿತ ಸದಸ್ಯರನ್ನಾಗಿ ಕಾಂಗ್ರೆಸ್ ಘಟಕದ ಅಧ್ಯಕ್ಷ ನಾಗೇಂದ್ರ ಜೋಗಿ ಅವರನ್ನು ನೇಮಕ ಮಾಡಿ ಆದೇಶಿಸಿತ್ತು. ಇಂತಹ ನಾಗೇಂದ್ರ ಜೋಗಿ ಅವರಿಗೆ ನಿಟ್ಟೂರು ಗ್ರಾಮಸ್ಥರಿಂದ ಅಭಿನಂದನೆಯನ್ನು ಸಲ್ಲಿಸಲಾಯಿತು. ಇಂದು ನಿಟ್ಟೂರಿನಲ್ಲಿ ನೂತನವಾಗಿ ಹೊಸನಗರ ತಾಲೂಕು ತ್ರೈಮಾಸಿಕ ಕೆ ಡಿ ಪಿ ಸದಸ್ಯರಾಗಿ ನಾಮನಿರ್ದೇಶನಗೊಂಡ ನಮ್ಮ ನಿಟ್ಟೂರು ಕಾಂಗ್ರೆಸ್ ಘಟಕದ ಅಧ್ಯಕ್ಷರು ನಮ್ಮ ಆತ್ಮೀಯರು ಆಗಿರುವ ನಾಗೇಂದ್ರ ಜೋಗಿ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ನಾಮನಿರ್ದೇಶನ ಮಾಡಿದ ಸಾಗರ- ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೂ ನಿಟ್ಟೂರು ಗ್ರಾಮಸ್ಥರು ಧನ್ಯವಾದಗಳನ್ನು ತಿಳಿಸಿದರು. ಇದೇ ವೇಳೆ ನಾಮನಿರ್ದೇಶನಕ್ಕೆ ಸಹಕರಿಸಿದ ಹೊಸನಗರ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರಾಗಿರುವ ಬಿಜಿ ಚಂದ್ರಮೌಳಿ ಗೌಡ ಹಾಗೂ ನಗರ ಹೋಬಳಿಯ ಯುವ ಮುಖಂಡರು ನಮ್ಮ ನಾಯಕರು ಆಗಿರುವ ಮಾಸ್ತಿಕಟ್ಟೆ ಸುಬ್ರಮಣ್ಯ ಇವರಿಗೆ ನಿಟ್ಟೂರು ಘಟಕದ ಪರವಾಗಿ ಧನ್ಯವಾದಗಳು ತಿಳಿಸಲಾಯಿತು. ಈ ವೇಳೆ ಮಾತನಾಡಿದಂತ ನಿಟ್ಟೂರು ಗ್ರಾಮ ಪಂಚಾಯ್ತಿ…

Read More

ಮುಂಬೈ : ಪ್ಯಾರಿಸ್ ಒಲಿಂಪಿಕ್-2024ರ ಐತಿಹಾಸಿಕ ವೀಕ್ಷಣೆ ದಾಖಲೆ ಪ್ರಸ್ತುತಿಯ ನಂತರದಲ್ಲಿ ಜಿಯೋಸಿನಿಮಾದಲ್ಲಿ ಪ್ಯಾರಾಲಿಂಪಿಕ್ ಗೇಮ್ಸ್ ಪ್ಯಾರಿಸ್-2024ರ ನೇರಪ್ರಸಾರದ ಘೋಷಣೆಯನ್ನು ವಯಾಕಾಮ್18 ಮಾಡುತ್ತಿದೆ. ಫ್ರೆಂಚ್ ರಾಜಧಾನಿಯಲ್ಲಿ ಆಗಸ್ಟ್ 28ರಿಂದ ಸೆಪ್ಟೆಂಬರ್ 8ರವರೆಗೆ ಪ್ಯಾರಾಲಿಂಪಿಕ್ ನಡೆಯಲಿದೆ. ಜಿಯೋಸಿನಿಮಾದಲ್ಲಿ 12 ದಿನಗಳ ಕ್ರೀಡಾಕೂಟದ ನೇರಪ್ರಸಾರ ನೀಡುವ ಜೊತೆಗೆ ಸ್ಪೋರ್ಟ್ಸ್18 ಟಿವಿ ನೆಟ್‌ವರ್ಕ್‌ನಲ್ಲಿ ಸ್ಪರ್ಧೆಗಳ ದೈನಂದಿನ ಮುಖ್ಯಾಂಶಗಳನ್ನು ಸಹ ನೀಡಲಾಗುತ್ತದೆ. ಜಿಯೋಸಿನಿಮಾ ಎರಡು ಏಕಕಾಲೀನ ಫೀಡ್‌ಗಳಲ್ಲಿ ವೀಕ್ಷಕರಿಗೆ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024ರ ಅತ್ಯುತ್ತಮ ಕ್ರೀಡಾಸ್ಪರ್ಧೆಗಳ ಸಮಗ್ರ ಪ್ರಸ್ತುತಿಯನ್ನು ನೀಡಲಿದೆ. ವೀಕ್ಷಕರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್-2024ರ ಉದ್ಘಾಟನಾ ಸಮಾರಂಭವನ್ನು ಇಂದು (ಬುಧವಾರ) ರಾತ್ರಿ 11:30 (ಭಾರತೀಯ ಕಾಲಮಾನ)ರಿಂದ ವೀಕ್ಷಿಸಲು ಸಾಧ್ಯವಾಗುತ್ತದೆ . ಆಗಸ್ಟ್ 29ರಿಂದ(ಗುರುವಾರ)ಪ್ರತಿದಿನ ಮಧ್ಯಾಹ್ನ 12ರಿಂದ ಕ್ರೀಡಾಸ್ಪರ್ಧೆಗಳ ನೇರಪ್ರಸಾರವನ್ನು ಕಾಣಬಹುದಾಗಿರುತ್ತದೆ. ಪ್ಯಾರಿಸ್ ಒಲಿಂಪಿಕ್ಸ್ ಪ್ರಸ್ತುತಿಯು ಭಾರತದಲ್ಲಿ 17 ಕೋಟಿಗೂ ಅಧಿಕ ವೀಕ್ಷಕರು, 1,500 ಕೋಟಿ ನಿಮಿಷಗಳ ವೀಕ್ಷಣೆಯ ಅಭೂತಪೂರ್ವ ದಾಖಲೆಯನ್ನು ನಿರ್ಮಿಸಿದ ಬಗ್ಗೆ ವಯಾಕಾಮ್18 ಘೋಷಣೆ ಮಾಡಿದ ಬೆನ್ನಲ್ಲೇ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್-2024ರ ನೇರಪ್ರಸಾರದ ಬಗ್ಗೆಯೂ ಅಧಿಕೃತ…

Read More

ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯವರ ಟ್ರಸ್ಟ್‍ಗೆ ನಿಯಮ ಮೀರಿ ತರಾತುರಿಯಲ್ಲಿ 5 ಎಕರೆ ಜಮೀನು ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತರಾತುರಿಯಲ್ಲಿ ನೀಡಿರುವುದರ ಹಿಂದಿನ ಉದ್ದೇಶ ಏನು? ಒಂದೇ ದಿನದಲ್ಲಿ ಜಾಗ ಮಂಜೂರು ಮಾಡಿದ್ದಾರೆ. ಮರುದಿನವೇ (6ರಿಂದ) ಮಂಜೂರಾತಿ ಪತ್ರವೂ ಕೊಟ್ಟಿದ್ದಾರೆ ಎಂದು ತಿಳಿಸಿದರು. ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಎಂಡ್ ಡಿ) ಕೇಂದ್ರ, ಇನೊವೇಶನ್, ಎಕ್ಸಲೆನ್ಸ್ ಟೆಕ್ನಿಕಲ್ ಇನ್‍ಸ್ಟಿಟ್ಯೂಟ್, ಎಜುಕೇಶನಲ್ ಇನ್‍ಸ್ಟಿಟ್ಯೂಟ್, ಬ್ಯಾಂಕ್ ಮೊದಲಾದವುಗಳಿಗೆ ಸೌಲಭ್ಯ ನೀಡುವ ನಿವೇಶನ ಎಂದು ತಿಳಿಸಿದ್ದಾರೆ. ಇದೇ ಕೆಐಎಡಿಬಿ 14-2-2023ರಂದು ಒಂದು ಅಧಿಕೃತ ಜ್ಞಾಪಕ ಪತ್ರ ಬಿಡುಗಡೆ ಮಾಡಿತ್ತು. ಜನವರಿ 12ರ ಸಭೆಯ ನಿರ್ಧಾರ ಅದಾಗಿತ್ತು. ಕೈಗಾರಿಕಾ ಪ್ರದೇಶದಲ್ಲಿ ಲಭ್ಯ ವಾಣಿಜ್ಯ ಉದ್ದೇಶದ ನಿವೇಶನಗಳನ್ನು 10 ವರ್ಷಗಳ ಲೀಸ್- ಸೇಲ್ ಡೀಡ್ ಮೂಲಕ ಏಲಂನಲ್ಲಿ ನಿಗದಿತ…

Read More

ಮಂಡ್ಯ: ಪ್ರಿಯಾಂಕ ಖರ್ಗೆ ಮಾತಿಗೆ ಮುಂಚೆ ಊರಿಗೆಲ್ಲ ಬುದ್ಧಿ ಹೇಳುತ್ತಿದ್ದರು. ಈಗ ಅವರೇ ಬುದ್ಧಿ ಹೇಳಿಸಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಮಂಡ್ಯ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಸಚಿವರು ಮಾಧ್ಯಮಗಳ ಜತೆ ಮಾತನಾಡಿದರು. ಖರ್ಗೆ ಅವರ ಕುಟುಂಬ ಕೆಐಡಿಬಿಯಿಂದ ಸಿಎ ಸೈಟ್ ಪಡೆದಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು; ಹಲವಾರು ಜನರಿಗೆ ಈ ರೀತಿಯಲ್ಲಿ ಜಾಗ ಕೊಟ್ಟಿದ್ದಾರೆ, ಬೇಕಾದಷ್ಟು ಪ್ರಕರಣಗಳು ನಡೆದಿವೆ. ಖರ್ಗೆ ಅವರು ದೇಶಕ್ಕೆ, ನಾಡಿಗೆಲ್ಲ ಬುದ್ದಿ ಹೇಳುವವರು, ಉಪದೇಶ ಮಾಡುವವರು. ಯಾವ ಆಧಾರದ ಮೇಲೆ ಈ ಜಾಗವನ್ನು ಇವರು ತೆಗೆದುಕೊಂಡಿದ್ದಾರೆ? ಎಂದು ಕೇಂದ್ರ ಸಚಿವರು ಪ್ರಶ್ನಿಸಿದರು. ದುಡ್ಡು ಕೊಟ್ಟು ಖರೀದಿಸಲು ಆಗುತ್ತಿರಲಿಲ್ಲವಾ? ಖಾಸಗಿ ಜಮೀನು ಖರೀದಿ ಮಾಡಬಹುದಿತ್ತು. ಕೆಐಎಡಿಬಿ ಜಾಗವೇ ಬೇಕಿತ್ತಾ? ಇದು ಅಧಿಕಾರ ದುರಪಯೋಗ. ದೇಶಕ್ಕೆ ಬುದ್ದಿ ಹೇಳುವವರು ಇದಕ್ಕೆ ಉತ್ತರ ಹೇಳಬೇಕು ಎಂದು ಅವರು ಟೀಕಿಸಿದರು. ರಾಜಭವನ ಚಲೋಗೆ ಸಚಿವರ ವ್ಯಂಗ್ಯ:…

Read More

ಮಂಡ್ಯ: ಇಂದು ಮಂಡ್ಯ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್, ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ಗೆ ಭಾರೀ ಮುಖಭಂಗವೇ ಆಗಿದೆ. ಮಂಡ್ಯ ನಗರ ಸಭೆಯು 35 ಸದಸ್ಯರ ಬಲ ಹೊಂದಿದೆ. ಇದರಲ್ಲಿ ಎಂಪಿ 1, ಶಾಸಕ 1 ಸೇರಿ 37 ಜನರಿಗೆ ಮತದಾನದ ಹಕ್ಕು ಹೊಂದಿದ್ದರು. ಒಟ್ಟು ಜೆಡಿಎಸ್‌ 18 ಸದಸ್ಯರಿದ್ದರೇ, ಒಟ್ಟು ಬಿಜೆಪಿಯ 2 ಸದಸ್ಯರು ಇದ್ದಾರೆ. ಒಟ್ಟು ಕಾಂಗ್ರೆಸ್‌ನ 10 ಸದಸ್ಯರು. ಒಟ್ಟು ಪಕ್ಷೇತರ 5 ಸದಸ್ಯರು. ಜೆಡಿಎಸ್‌ 15+, ಬಿಜೆಪಿ 2+, ಕಾಂಗ್ರೆಸ್‌ನಿಂದ ಅಪರೇಷನ್ 1+, ಸಂಸದ 1 = ಜೆಡಿಎಸ್‌ 19 ಸದಸ್ಯರ ಸಂಖ್ಯಾಬಲವಿತ್ತು. ಕಾಂಗ್ರೆಸ್ 9+, ಪಕ್ಷೇತರ 5+, ಜೆಡಿಎಸ್‌ನಿಂದ ಅಪರೇಷನ್ 3+, ಶಾಸಕ 1 = 18 ಸದಸ್ಯರ ಬಲವಿತ್ತು. ಅಂತಿಮವಾಗಿ ಮಂಡ್ಯ ನಗರಸಭೆ ಜೆಡಿಎಸ್ ತೆಕ್ಕೆಗೆ ಸೇರಿದೆ. ಮಂಡ್ಯ ನಗರಸಭೆ ಗದ್ದುಗೆಯನ್ನು ಜೆಡಿಎಸ್ ಏರಿದೆ. ಆಪರೇಷನ್‌ಗೆ ಸೆಡ್ಡು ಹೊಡೆದು ಜೆಡಿಎಸ್‌…

Read More

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲು ಪಾಲಾಗಿರುವಂತ ಪವಿತ್ರಾಗೌಡಗೆ, ಮತ್ತೆ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್.9ರವರೆಗೆ ಕೋರ್ಟ್ ವಿಸ್ತರಿಸಿ ಆದೇಶಿಸಿದೆ. ಹೀಗಾಗಿ ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ ಎನ್ನುವಂತೆ ಆಗಿದೆ. ಇಂದು ಪ್ರಕರಣ ಸಂಬಂಧ ಬೆಂಗಳೂರಿನ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾಗೌಡ ಅವರ ನ್ಯಾಯಾಂಗ ಬಂಧನ ಕುರಿತಂತ ಅರ್ಜಿಯನ್ನು ವಿಚಾರಣೆ ನಡೆಸಿತು. ಜಾಮೀನು ಅರ್ಜಿಯ ವಿಚಾರಣೆಯ ನಡುವೆಯೂ ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದೆ. ಅಂದಹಾಗೇ ನಿನ್ನೆ ಕೋರ್ಟ್ ನಲ್ಲಿ ಆರೋಪಿ ಸ್ಥಾನದಲ್ಲಿರುವಂತ ಮಹಿಳೆ ಹಾಗೂ ಆನಾರೋಗ್ಯದ ಕಾರಣದಿಂದಾಗಿ ಸಿಆರ್ ಪಿಸಿ ಸೆಕ್ಷನ್ ನಡಿ 437ನಂತೆ ಆರೋಪಿ ಪವಿತ್ರಾಗೌಡಗೆ ಜಾಮೀನು ನೀಡುವಂತೆ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್ ವಾದಿಸಿದ್ದರು. ಈ ಕುರಿತಾದಂತ ವಿಚಾರಣೆ ಇಂದಿಗೆ ಮುಂದೂಡಲಾಗಿತ್ತು. ಆ ವಿಚಾರಣೆ ಬಾಕಿ ಬೆನ್ನಲ್ಲೇ, ಕೋರ್ಟ್ ಸೆಪ್ಟೆಂಬರ್.9ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶಿಸಿದೆ. https://kannadanewsnow.com/kannada/bengaluru-power-outages-in-these-areas-of-the-city-on-august-29/ https://kannadanewsnow.com/kannada/breaking-court-extends-actor-darshans-judicial-custody-till-september-9/

Read More

ಬೆಂಗಳೂರು: 20/66/11ಕೆವಿ ಮತ್ತಿಕೆರೆ ಎಂ ಯು ಎಸ್ ಎಸ್ ದಿನಾಂಕ 29.08.2024 ರಂದು 10:00ಗಂಟೆಗಳಿಂದ 17:00ಗಂಟೆಗಳವರೆಗೆ ವಾರ್ಷಿಕ ನಿರ್ವಹಣೆ  ಆದ್ದರಿಂದ ಈ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ. ಎಲ್.ಜಿ. ಹಳ್ಳಿ, ಆರ್.ಎಮ್.ವಿ 2ನೇ ಹಂತ, ಸಂಜೀವಪ್ಪ ಕಾಲೋನಿ, ನ್ಯೂ ಬಿ.ಇ.ಎಲ್‌ ರಸ್ತೆ, ಎಂ.ಎಸ್. ಆರ್‌ ನಗರ, ಮೋಹನ್‌ ಕುಮಾರ ನಗರ, ಪಂಪಾ ನಗರ, ಬಿ.ಕೆ. ನಗರ,ಬಾಂಬೆ ಡೈಯಿಂಗ್‌ ರಸ್ತೆ, ಯಶವಂತಪುರ ಮೊದಲನೆ ಮುಖ್ಯ ರಸ್ತೆ, ಗೋಕುಲ, ಹೆಚ್.ಎಂ.ಟಿ. ಮುಖ್ಯ ರಸ್ತೆ, ಹೆಚ್.ಎಂ.ಟಿ. ಲೇ ಔಟ್‌, ಬೃಂದಾವನ ನಗರ, ಎಸ್.ಬಿ.ಎಮ್ ಕಾಲೋನಿ, ಎಂ.ಆರ್.ಜೆ ಕಾಲೋನಿ, ವಿ.ಆರ್.ಲೇ ಔಟ್‌, ಜೆ.ಪಿ ಪಾರ್ಕ್‌ ರಸ್ತೆಗಳಲ್ಲಿ ಆಗಸ್ಟ್.29ರ ನಾಳೆ ಕರೆಂಟ್ ಇರೋದಿಲ್ಲ ಎಂಬುದಾಗಿ ಬೆಸ್ಕಾಂ ತಿಳಿಸಿದೆ. https://kannadanewsnow.com/kannada/good-news-for-railway-passengers-special-train-service-between-mysuru-and-sengottai-launched/ https://kannadanewsnow.com/kannada/breaking-court-extends-actor-darshans-judicial-custody-till-september-9/ https://kannadanewsnow.com/kannada/the-process-of-transformation-has-begun-in-jammu-and-kashmir-under-the-bjp-central-government/

Read More

ಮೈಸೂರು: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ಮತ್ತು ಸೆಂಗೊಟ್ಟೈ ನಡುವೆ ವಿಶೇಷ ರೈಲು ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಈ ಸೇವೆಯು ಎರಡು ಟ್ರಿಪ್ ಗಳಿಗೆ ಮಾತ್ರ ಲಭ್ಯವಿರುತ್ತದೆ. ಹೆಚ್ಚು ಆರಾಮದಾಯಕ ಪ್ರಯಾಣಕ್ಕಾಗಿ ಈ ಸೇವೆಯ ಲಾಭವನ್ನು ಪಡೆಯಲು ಪ್ರಯಾಣಿಕರನ್ನು ಪ್ರೋತ್ಸಾಹಿಸಲಾಗುತ್ತದೆ. ರೈಲು ವೇಳಾಪಟ್ಟಿ: 1.ರೈಲು ಸಂಖ್ಯೆ 06241 ಮೈಸೂರಿನಿಂದ ಸೆಂಗೊಟ್ಟೈ ಎಕ್ಸ್ಪ್ರೆಸ್: ಮೈಸೂರಿನಿಂದ ಸೆಪ್ಟೆಂಬರ್ 4, 2024 ರ ಬುಧವಾರ ಮತ್ತು ಸೆಪ್ಟೆಂಬರ್ 7, 2024 ರ ಶನಿವಾರ 21:20 ಗಂಟೆಗೆ ನಿರ್ಗಮಿಸುತ್ತದೆ ಮತ್ತು ಮರುದಿನ 16:50 ಗಂಟೆಗೆ ಸೆಂಗೊಟ್ಟೈಗೆ ಆಗಮಿಸುತ್ತದೆ ರೈಲು ಈ ಕೆಳಗಿನ ನಿಲ್ದಾಣಗಳಲ್ಲಿ ವಾಣಿಜ್ಯ ನಿಲುಗಡೆಗಳನ್ನು ಮಾಡುತ್ತದೆ ಮಂಡ್ಯ, ಮದ್ದೂರು, ರಾಮನಗರ, ಕೆಂಗೇರಿ, ಕೆಎಸ್ಆರ್ ಬೆಂಗಳೂರು, ಕೃಷ್ಣರಾಜಪುರಂ, ಬಂಗಾರಪೇಟೆ, ಕುಪ್ಪಂ, ಸೇಲಂ, ನಾಮಕ್ಕಲ್, ಕರೂರ್, ತಿರುಚಿರಾಪಳ್ಳಿ, ಪುದುಕೊಟ್ಟೈ, ಕಾರೈಕುಡಿ, ಶಿವಗಂಗಾ, ಮನಮದುರೈ, ಅರುಪ್ಪುಕ್ಕೊಟ್ಟೈ, ವಿರುದುನಗರ ಜಂಕ್ಷನ್, ಶಿವಕಾಶಿ, ಶ್ರೀವಿಲ್ಲಿಪುಟ್ಟೂರು, ರಾಜಪಾಲಯಂ, ಶಂಕರನ್ ಕೋವಿಲ್, ಪಂಬಾಕೋವಿಲ್ ಶಾಂಡಿ, ಕಡಯನಲ್ಲೂರ್, ತೆಂಕನಲ್ಲೂರ್. 2. ರೈಲು…

Read More

ಬೆಂಗಳೂರು: ಸೈಬರ್ ವಂಚನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ತಡೆಗೆ ಪೊಲೀಸರು ಎಷ್ಟೇ ಕ್ರಮ ವಹಿಸಿದ್ರೂ ವಂಚಕರು ಮಾತ್ರ ಮಗದೊಂದು ದಾರಿಯನ್ನು ಹಿಡಿಯುವ ಮೂಲಕ ಬ್ಯಾಂಕ್ ಗ್ರಾಹಕರ ಖಾತೆಗೆ ಕನ್ನ ಹಾಕಲಾಗುತ್ತಿದೆ. ಇದರ ನಡುವೆ ನೀವು ಈ ಆನ್ ಲೈನ್ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದೇ ಆದ್ರೇ, ನೀವು ವಂಚನೆಗೆ ಒಳಗಾಗೋಕೆ ಸಾಧ್ಯವೇ ಇಲ್ಲ. ಅವು ಏನು ಅಂತ ಮುಂದೆ ಓದಿ. ಸೋಷಿಯಲ್ ಮೀಡಿಯಾಗಳ ಬಳಕೆ ಹೆಚ್ಚಾದಂತೆ, ನಮ್ಮ ವೈಯಕ್ತಿಕ ಮಾಹಿತಿಗಳನ್ನು ಅಲ್ಲಿ ಹಂಚಿಕೊಂಡು, ಆನ್ ಲೈನ್ ವಂಚಕರಿಗೆ ನಾವೇ ಅವಕಾಶ ಮಾಡಿಕೊಡುವಂತ ನಡೆಯನ್ನು ತೋರಿ ಬಿಡುತ್ತೇವೆ. ಆದರೇ ಹೀಗೆ ಮಾಡೋದನ್ನು ತಪ್ಪಿಸಿದ್ರೇ, ಅಗತ್ಯವಿರುವ, ಗೌಪ್ಯತೆಗೆ ಧಕ್ಕೆ ಆಗದಂತ ವಿಷಯಗಳನ್ನು ಅಷ್ಟೇ ಹಂಚಿಕೊಳ್ಳುವುದರಿಂದ ನೀವು ಆನ್ ಲೈನ್ ವಂಚನೆಯನ್ನು ತಡೆಯಬಹುದಾಗಿದೆ. 5 ಆನ್ ಲೈನ್ ಸುರಕ್ಷಾ ಕ್ರಮಗಳು ಯಾವುದೇ ಕಾರಣಕ್ಕೂ ನಿಮ್ಮ ಮಾಹಿತಿಗಳಾದ ಪೂರ್ಣ ಹೆಸರು, ಮನೆಯ ವಿಳಾಸ ಮತ್ತು ನಿಮ್ಮ ಮಕ್ಕಳ ಶಾಲೆಯ ಹೆಸರನ್ನು ಇಂಟರ್ನೆಟ್ ನಲ್ಲಿ ಹಂಚಿಕೊಳ್ಳಬೇಡಿ. ಯಾವಾಗಲೂ ನಿಮ್ಮ ಕಂಪ್ಯೂಟರ್…

Read More