Author: kannadanewsnow09

ನವದೆಹಲಿ: 2025ಕ್ಕೆ ತೆರೆ ಬೀಳಲು ಕೆಲವೇ ದಿನಗಳು ಬಾಕಿ ಇರುವಾಗ, ಹೊಸ ವರ್ಷದ ಆಗಮನವು ಹೊಸ ಕ್ಯಾಲೆಂಡರ್‌ಗಳು ಮತ್ತು ನಿರ್ಣಯಗಳಿಗಿಂತ ಹೆಚ್ಚಿನದನ್ನು ತರುತ್ತದೆ. ಹಾಗಾದ್ರೆ ಜನವರಿ 1, 2026ರಿಂದ ಏನೆಲ್ಲ ಬದಲಾವಣೆ ಅಂತ ಮುಂದೆ ಓದಿ. ಜನವರಿ 1, 2026 ರಿಂದ, ರೈತರು, ಸಂಬಳ ಪಡೆಯುವ ನೌಕರರು, ಯುವಜನರು ಮತ್ತು ವ್ಯಾಪಕ ಸಾರ್ವಜನಿಕರ ಮೇಲೆ ನೇರವಾಗಿ ಪರಿಣಾಮ ಬೀರುವ ಹಲವಾರು ನೀತಿ ಮತ್ತು ನಿಯಂತ್ರಕ ಬದಲಾವಣೆಗಳು ಜಾರಿಗೆ ಬರಲಿವೆ. ಬ್ಯಾಂಕಿಂಗ್ ನಿಯಮಗಳು, ಸಾಮಾಜಿಕ ಮಾಧ್ಯಮ ನಿಯಮಗಳು, ಇಂಧನ ಬೆಲೆಗಳು ಮತ್ತು ಸರ್ಕಾರಿ ಯೋಜನೆಗಳು ಎಲ್ಲವನ್ನೂ ಪರಿಷ್ಕರಣೆಗೆ ಒಳಪಡಿಸಲಾಗುತ್ತಿದೆ. ಪ್ರತಿ ಹೊಸ ವರ್ಷವು ಅಸ್ತಿತ್ವದಲ್ಲಿರುವ ನಿಯಮಗಳಿಗೆ ಬದಲಾವಣೆಗಳನ್ನು ತರುತ್ತಿದ್ದರೂ, 2026 ಹಲವಾರು ದೊಡ್ಡ ಬದಲಾವಣೆಗಳನ್ನು ಕಾಣುವ ನಿರೀಕ್ಷೆಯಿದೆ. ದತ್ತಾಂಶ ಸಂರಕ್ಷಣೆ ಮತ್ತು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆಯ ಮೇಲಿನ ಸರ್ಕಾರದ ನವೀಕೃತ ತಳ್ಳುವಿಕೆ, ಬ್ಯಾಂಕಿಂಗ್ ಮಾನದಂಡಗಳಲ್ಲಿನ ಪರಿಷ್ಕರಣೆಗಳೊಂದಿಗೆ, ಜನರು ಹೇಗೆ ವಹಿವಾಟು ನಡೆಸುತ್ತಾರೆ, ಖರ್ಚು ಮಾಡುತ್ತಾರೆ ಮತ್ತು ಸೇವೆಗಳನ್ನು ಹೇಗೆ ಪ್ರವೇಶಿಸುತ್ತಾರೆ ಎಂಬುದನ್ನು ಬದಲಾಯಿಸುವ…

Read More

ನವದೆಹಲಿ : ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಕ್ರಿಕೆಟಿಗರು ಮತ್ತು ಅಧಿಕಾರಿಗಳ ಪಂದ್ಯ ಶುಲ್ಕವನ್ನು ಬಿಸಿಸಿಐ ದ್ವಿಗುಣಗೊಳಿಸಿದೆ. ಇದು ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನಿಂದ ಪ್ರೇರಿತವಾಗಿದೆ ಮತ್ತು ಸರ್ಕ್ಯೂಟ್‌ನಾದ್ಯಂತ ಹೆಚ್ಚು ಸಮಾನ ವೇತನ ರಚನೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಮಂಡಳಿಯ ಅಪೆಕ್ಸ್ ಕೌನ್ಸಿಲ್ ಈ ಗಣನೀಯ ಹೆಚ್ಚಳವನ್ನು ಅನುಮೋದಿಸಿದೆ. ಪರಿಷ್ಕೃತ ವೇತನ ರಚನೆಯ ಪ್ರಕಾರ, ದೇಶೀಯ ಪಂದ್ಯಾವಳಿಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಹಿರಿಯ ಮಹಿಳಾ ಕ್ರಿಕೆಟಿಗರು ಈಗ ದಿನಕ್ಕೆ 50,000 ರೂ. ಗಳಿಸುತ್ತಾರೆ. ಇದು ಅಸ್ತಿತ್ವದಲ್ಲಿರುವ ಪ್ರತಿ ಪಂದ್ಯದ ದಿನಕ್ಕೆ 20,000 ರೂ. (ಮೀಸಲುಗಾಗಿ ರೂ. 10,000) ಗಿಂತ ಗಮನಾರ್ಹ ಏರಿಕೆಯಾಗಿದೆ. ಹಿರಿಯ ಮಹಿಳಾ ದೇಶೀಯ ಏಕದಿನ ಪಂದ್ಯಾವಳಿಗಳು ಮತ್ತು ಬಹು-ದಿನದ ಸ್ಪರ್ಧೆಗಳಿಗೆ, ಮೊದಲ XI ನಲ್ಲಿರುವ ಆಟಗಾರ್ತಿಯರಿಗೆ ದಿನಕ್ಕೆ 50,000 ರೂ. ಪಡೆಯುತ್ತಾರೆ, ಆದರೆ ಮೀಸಲು ಆಟಗಾರರಿಗೆ ದಿನಕ್ಕೆ 25,000 ರೂ.ಗಳಂತೆ ಅರ್ಧದಷ್ಟು ಮೊತ್ತವನ್ನು ನೀಡಲಾಗುತ್ತದೆ. ರಾಷ್ಟ್ರೀಯ T20 ಪಂದ್ಯಾವಳಿಗಳಲ್ಲಿ, ಮೊದಲ XI ಆಟಗಾರ್ತಿಯರಿಗೆ ಪ್ರತಿ ಪಂದ್ಯದ ದಿನಕ್ಕೆ 25,000…

Read More

ಚಿತ್ರದುರ್ಗ: ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ನೀಡುವಂತ ಇಂದಿರಾ ಪ್ರಿಯದರ್ಶಿನಿ ರಾಜ್ಯ ಪರಿಸರ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮಾಲತೇಶ್ ಅರಸ್ ಹರ್ತಿಕೋಟೆಗೆ ಪ್ರದಾನ ಮಾಡಲಾಯಿತು. ಸಚಿವರಾದ ಡಿ.ಸುಧಾಕರ್, ಮಂಡಳಿ ಅಧ್ಯಕ್ಷರಾದ ನರೇಂದ್ರ ಸ್ವಾಮಿ, ಶಾಸಕರಾದ ರಘುಮೂರ್ತಿ, ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ಆಯೋಗದ ಅಧ್ಯಕ್ಷರಾದ ಪಿ ರಘು, ಎಡಿಸಿ ಕುಮಾರ ಸ್ವಾಮಿ, ಅರಣ್ಯ ಇಲಾಖೆಯ ಅಧಿಕಾರಿಗಳು ಜೊತೆಗೂಡಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮಾಲತೇಶ್ ಅರಸ್ ಹರ್ತಿಕೋಟೆ ಪರಿಚಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ (ರಿ) ಯ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ , 23 ವರ್ಷಗಳಿಂದ ನಿರಂತರವಾಗಿ ಪರಿಸರ ಸಂರಕ್ಷಣೆಯ ಹೋರಾಟಗಾರ. ಪರಿಸರ ಸಂರಕ್ಷಣೆ ಎಂದರೆ ಕೇವಲ ಒಂದು ಕಾರ್ಯವಲ್ಲ, ಅದು ಮಾನವೀಯ ಬದುಕಿನ ನಾಡಿಯಂತೆ ಅಳವಡಿಸಿಕೊಳ್ಳಬೇಕಾದ ಕರ್ತವ್ಯವೆಂದು ನಂಬಿ ಕಳೆದ ಎರಡು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ವ್ಯಕ್ತಿ — ಮಾಲತೇಶ್ ಅರಸ್ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯವರು. ಮಾಲತೇಶ್…

Read More

ಹುಬ್ಬಳ್ಳಿ : ಹುಬ್ಬಳ್ಳಿ ತಾಲೂಕಿನ ಇನಾಮ್ ವೀರಾಪೂರ ಗ್ರಾಮದಲ್ಲಿ ತಂದೆಯೇ ತನ್ನ ವಿವಾಹಿತ ಗರ್ಭಿಣಿ ಮಗಳನ್ನು ಅಮಾನುಷವಾಗಿ ಹತ್ಯೆಗೈದಿರುವುದನ್ನು ಖಂಡಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಹೇಳಿದ್ದಾರೆ. ಪ್ರಕರಣದ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ಈ ಘಟನೆ ಕೇಳಿ ದಿಗ್ಭ್ರಮೆಯುಂಟಾಗಿದೆ. ಕೃತ್ಯ ಎಸಗಿದವರಿಗೆ ನಮ್ಮ ಕಾನೂನು ವ್ಯವಸ್ಥೆ ಸೂಕ್ತ ಶಿಕ್ಷೆ ಕೊಡಲಿದೆ. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ʼಜಾತಿ ಸುಡೋ ಮಂತ್ರಕಿಡಿ ಪ್ರೀತಿʼ ಎಂದು ರಾಷ್ಟ್ರಕವಿ ಕುವೆಂಪು ಹೇಳಿದ್ದರು. ಆದರೆ ಆ ಜಾತಿ ಎಂಬ ವಿಷಬೀಜವೇ ಇವತ್ತು ಒಂದು ಅಮಾಯಕ ಗರ್ಭಿಣಿಯ ಜೀವವನ್ನು ಬಲಿ ತೆಗೆದುಕೊಂಡಿದೆ. ಇಂತಹ ಘಟನೆ ಮತ್ತೆಂದೂ ಘಟಿಸದಿರಲಿ! ಎಂದು ಪ್ರತಿಕ್ರಿಯಿಸಿದ್ದಾರೆ. https://kannadanewsnow.com/kannada/his-father-is-doctor-andre-the-doctor-who-saved-the-life-of-a-man-injured-in-an-accident-by-performing-an-operation-on-the-road/ https://kannadanewsnow.com/kannada/big-news-rbis-big-shock-for-those-taking-loans-against-gold-from-now-on-60-loan-for-10-grams-of-gold/

Read More

ಮೈಸೂರು: ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ ಎಂಬ ಬಿಜೆಪಿ ಆರೋಪ ಹಾಸ್ಯಾಸ್ಪದ. ಬಿಜೆಪಿ ಮಾತ್ರ ಏಕೆ ಇದನ್ನು ವಿರೋಧಿಸುತ್ತದೆ? ಪ್ರಚೋದನಕಾರಿ ಭಾಷಣ ಮಾಡುವವರು ಮಾತ್ರ ಭಯಪಡಬೇಕು. ಪ್ರಚೋದನಾಕಾರಿ ಭಾಷಣ ಮಾಡದೆ ಹೋದರೆ ಸುಮ್ಮನೆ ಪ್ರಕರಣ ದಾಖಲಿಸುವುದಿಲ್ಲ. ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ಏಕೆ ನೋಡಿಕೊಳ್ಳುತ್ತಿದ್ದಾರೆ? ಎಂಬುದಾಗಿ ಸಿಎಂ ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ. ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಉತ್ತರಿಸಿದಂತ ಅವರು, ದ್ವೇಷ ಭಾಷಣದಿಂದ ಸಮಾಜದಲ್ಲಿ ಶಾಂತಿ ನೆಲೆಸುತ್ತದೆಯೇ? ಶಾಂತಿ ಹಾಗೂ ಭ್ರಾತೃತ್ವ ಕಾಪಾಡಲು ಈ ಮಸೂದೆ ಜಾರಿ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದ್ವೇಷ ಭಾಷಣ ಹೆಚ್ಚಾಗುತ್ತಿದೆ. ಅದನ್ನು ನಿಯಂತ್ರಿಸಲೆಂದು ಮಸೂದೆ ರೂಪಿಸಿದ್ದೇವೆ. ಬಿಜೆಪಿ ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿರುವುದು ಅವರು ದ್ವೇಷ ಭಾಷಣ ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ ಎಂದಿದ್ದಾರೆ. ಫೆಬ್ರವರಿ – ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ. ಪರಿಶೀಲಿಸಿ ಬಿಡುಗಡೆ ಮಾಡಲಾಗುವುದು. 23 ತಿಂಗಳ ಗೃಹಲಕ್ಷ್ಮಿ ಹಣವನ್ನು ಸರ್ಕಾರದ ಬಳಿ ಹಣವಿಲ್ಲದೆ ಕೊಡಲು ಸಾಧ್ಯವಾಗುತ್ತಿತ್ತೇ?…

Read More

ಕೇರಳ: ಡಾಕ್ಟರ್ ಅಂದ್ರೆ ದೇವರ ಸಮಾನ ಅನ್ನೋದು ಇದಕ್ಕೆ ಇರಬೇಕು. ಆ ಮೂಲಕ ಕೆಲವು ವೈದ್ಯರನ್ನು ಹೀಗಿರಬೇಕು ಅಂತ ಜನರು ಎದುರು ನೋಡುತ್ತಾರೆ. ಅವರಿಗೆಲ್ಲ ಡಿಫರೆಂಟ್ ಎನ್ನುವಂತೆ ಇವರಪ್ಪ ಡಾಕ್ಟರ್ ಅಂದ್ರೆ ಎನ್ನುವ ರೀತಿಯಲ್ಲಿ ಅಪಘಾತಗೊಂಡಿದ್ದ ವ್ಯಕ್ತಿಗೆ ರೋಡಲ್ಲೇ ಆಪರೇಷನ್ ಮಾಡಿ ಆತನ ಜೀವವನ್ನು ವೈದ್ಯರೊಬ್ಬರು ಉಳಿಸಿರುವಂತ ಘಟನೆ ಕೇರಳದಲ್ಲಿ ನಡೆದಿದೆ. ಕೇರಳದ ಕೊಚ್ಚಿಯಲ್ಲಿ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಗಾಯಗೊಂಡು ಒದ್ದಾಡುತ್ತಿದ್ದನು. ಆ ಮಾರ್ಗದಲ್ಲಿಯೇ ಸಾಗುತ್ತಿದ್ದಂತ ಮೂವರು ಯುವ ವೈದ್ಯರು ಲಭ್ಯವಿರುವಂತ ರೇಜರ್ ಬ್ಲೇಡ್ ಸೇರಿದಂತೆ ಇತರೆ ವಸ್ತುಗಳನ್ನು ಬಳಸಿಕೊಂಡು ಗಾಯಾಳು ಯುವಕನಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಿ, ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಕಾರ್ಯಕ್ಕೆ ಭಾರೀ ಮೆಚ್ಚುಗೆಯೇ ವ್ಯಕ್ತವಾಗಿದೆ. ಕೇರಳದ ಕೊಟ್ಟಾಯಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರ ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದಂತ ಡಾ.ಬಿ ಮನೂಪ್, ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯ ಡಾ.ಥಾಮಸ್ ಪೀಟರ್ ಮತ್ತು ಡಾ.ಧಿಡಿಯಾ ಕೆ ಥಾಮಸ್ ಎಂಬುವರೇ ಈ ರೀತಿಯಾಗಿ ರಸ್ತೆಯಲ್ಲೇ ಅಪಘಾತದಿಂದ…

Read More

ನವದೆಹಲಿ: ಇಲ್ಲಿರುವಂತ ಬಾಂಗ್ಲಾದೇಶ ಹೈಕಮಿಷನ್‌ನಲ್ಲಿ ಕಾನ್ಸುಲರ್ ಸೇವೆಗಳು ಮತ್ತು ವೀಸಾ ವಿತರಣೆಯನ್ನು ಮುಂದಿನ ಸೂಚನೆ ಬರುವವರೆಗೂ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯದ ಹಲವಾರು ಹಿರಿಯ ಅಧಿಕಾರಿಗಳು ಪ್ರೋಥೋಮ್ ಅಲೋಗೆ ಈ ಬೆಳವಣಿಗೆಯನ್ನು ದೃಢಪಡಿಸಿದರು, ಮಿಷನ್‌ನಲ್ಲಿನ ಎಲ್ಲಾ ಕಾನ್ಸುಲರ್ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು. ಅಖಂಡ ಹಿಂದೂ ರಾಷ್ಟ್ರ ಸೇನಾ ಗುಂಪಿನ ಸುಮಾರು 20–25 ಸದಸ್ಯರು ಶನಿವಾರ ತಡರಾತ್ರಿ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿದ ನಂತರ ಅಮಾನತುಗೊಳಿಸಲಾಗಿದೆ. ಪ್ರತಿಭಟನಾಕಾರರು ಬಾಂಗ್ಲಾದೇಶ ವಿರೋಧಿ ಘೋಷಣೆಗಳನ್ನು ಕೂಗಿದರು ಮತ್ತು ಭಾರತದಲ್ಲಿನ ಬಾಂಗ್ಲಾದೇಶದ ಹೈಕಮಿಷನರ್ ಎಂ ರಿಯಾಜ್ ಹಮೀದುಲ್ಲಾ ಅವರಿಗೆ ಬೆದರಿಕೆ ಹಾಕಿದರು ಎಂದು ಆರೋಪಿಸಲಾಗಿದೆ. ಪ್ರದರ್ಶನವು ಸುಮಾರು 20 ನಿಮಿಷಗಳ ಕಾಲ ನಡೆಯಿತು ಎಂದು ವರದಿಯಾಗಿದೆ. ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಬಾಂಗ್ಲಾದೇಶದ ವಿದೇಶಾಂಗ ಸಲಹೆಗಾರ ಮೊಹಮ್ಮದ್ ತೌಹಿದ್ ಹೊಸೈನ್, ಹೈಕಮಿಷನ್ ದೆಹಲಿಯಲ್ಲಿ ಹೆಚ್ಚು ಸುರಕ್ಷಿತ ರಾಜತಾಂತ್ರಿಕ ವಲಯದಲ್ಲಿದೆ ಎಂದು ಗಮನಿಸಿ, ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. “ಮಿಷನ್ ಅತ್ಯಂತ…

Read More

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೇ ಇರುವ ವಾಣಿಜ್ಯ ಬಳಕೆ ಕಟ್ಟಡಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ ಆದ್ಯತೆಯನ್ನು ನೀಡಿರುವುದಾಗಿ ಜಿಬಿಎ ಆಯುಕ್ತ ಡಿ.ಎಸ್.ರಮೇಶ್ ತಿಳಿಸಿದ್ದಾರೆ. ಬೆಂಗಳೂರು ಪೂರ್ವ ನಗರ ಪಾಲಿಕೆಯ ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಆಯುಕ್ತರಾದ ಡಿ.ಎಸ್.ರಮೇಶ್ ರವರ ಮಾರ್ಗದರ್ಶನದಂತೆ ಬಹು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಸುಸ್ಥಿದಾರರಾಗಿರುವ ವಸತಿಯೇತರ ಬಳಕೆಯ ಬ್ಯಾಂಕ್, ಹೋಟೆಲ್, ವಾಣಿಜ್ಯ ಸಂಕೀರ್ಣ ಆಸ್ತಿಗಳನ್ನು ಸೀಲಿಂಗ್ ಮಾಡುವ ಮೂಲಕ ಬಾಕಿದಾರರರಿಗೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ನೀಡಲಾಯಿತು. ಆಸ್ತಿ ತೆರಿಗೆ ವಸೂಲಾತಿಗೆ ಸೀಲಿಂಗ್ ಮೂಲಕ ಕಾರ್ಯಾಚರಣೆ ಒಂದು ಮತ್ತು ಅದಕ್ಕಿಂತಲೂ ಹೆಚ್ಚಿನ ವರ್ಷಗಳ ಆಸ್ತಿ ತೆರಿಗೆ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳಿಗೆ ನಿಯಮಾನುಸಾರ ಈಗಾಗಲೇ ನೋಟಿಸ್ ನೀಡಿ ಸಾಕಷ್ಟು ಸಮಯಾವಕಾಶ ನೀಡಿದ್ದರೂ ಸಹಾ, ಆಸ್ತಿ ತೆರಿಗೆ ಪಾವತಿಸಿರುವುದಿಲ್ಲ.ಅಂತಹ ಸ್ವತ್ತುಗಳನ್ನು ವಲಯ ಜಂಟಿ ಆಯುಕ್ತರಾದ ಡಾ.ದಾಕ್ಷಾಯಿಣಿ.ಕೆ. ರವರ ನೇತೃತ್ವದಲ್ಲಿ ತಂಡ ರಚಿಸಿ ಉಪ ವಿಭಾಗವಾರು ಅತಿ ಹೆಚ್ಚು ಬಾಕಿ ಆಸ್ತಿ ತೆರಿಗೆ ಉಳಿಸಿಕೊಂಡಿರುವ ಸ್ವತ್ತುಗಳನ್ನು ಸೀಲಿಂಗ್ ಮಾಡುವ ಮೂಲಕ ತೆರಿಗೆ ವಸೂಲಾತಿಗೆ…

Read More

ಶಿವಮೊಗ್ಗ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಮೊಬೈಲ್ ಅಂಗಡಿಗೆ ನುಗ್ಗಿ ಚಾಕುವಿನಿಂದ ಇರಿದಿರುವಂತ ಘಟನೆ ನಡೆದಿದೆ. ಶಿವಮೊಗ್ಗದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿರುವಂತ ಅಂಗಡಿಗೆ ನುಗ್ಗಿ ಮಾಲೀಕ ಸೈಯದ್ ಬರ್ಕತ್(32) ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ. ಹಳೆಯ ದ್ವೇಷದ ಹಿನ್ನಲೆಯಲ್ಲಿ ಸೈಯದ್ ಗೆ ಚಾಕುವಿನಿಂದ ಇರಿದಿರುವ ಶಂಕೆ ವ್ಯಕ್ತವಾಗಿದೆ. ಚಾಕು ಇರಿತಕ್ಕೆ ಒಳಗಾದಂತ ಸೈಯದ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/strong-opposition-to-the-inclusion-of-gejjalagere-gram-panchayat-in-maddur-municipal-council-protests-from-various-organizations/ https://kannadanewsnow.com/kannada/big-news-rbis-big-shock-for-those-taking-loans-against-gold-from-now-on-60-loan-for-10-grams-of-gold/

Read More

ಮಂಡ್ಯ : ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಸ್ಥಳೀಯ ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಕೈಗೊಂಡು ಗ್ರಾಮ ಪಂಚಾಯಿತಿ ಕಚೇರಿ ಎದುರು ಸೋಮವಾರದಿಂದ ಪ್ರತಿಭಟನೆ ಕೈಗೊಂಡಿದ್ದಾರೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾ.ಪಂ. ಕಚೇರಿ ಬಳಿ ಆಗಮಿಸಿದ ನೂರಾರು ಸಂಖ್ಯೆಯ ನಿವಾಸಿಗಳು ಪಂಚಾಯಿತಿಯನ್ನು ನಗರಸಭೆಯನ್ನಾಗಿಸಲು ಸಹಿ ಹಾಕಿರುವ ಸ್ಥಳೀಯ ಚುನಾಯಿತ ಪ್ರತಿನಿಧಿಗಳ ವಿರುದ್ಧ ಮತ್ತು ಶಾಸಕರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ಇರುವ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿರುವ ಸರ್ಕಾರ ಹಾಗೂ ಶಾಸಕ ವಿರುದ್ಧ ಕಿಡಿಕಾರಿದ ಪ್ರತಿಭಟನಾಕಾರರು ಕೂಡಲೇ ಗೆಜ್ಜಲಗೆರೆ ಪಂಚಾಯಿತಿಯನ್ನು ನಗರಸಭೆಯಿಂದ ಕೈಬಿಡುವಂತೆ ತಪ್ಪಿದಲ್ಲಿ ನಿರಂತರ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ರೈತನಾಯಕಿ ಸುನಂದ ಜಯರಾಮ್ ಮಾತನಾಡಿ, ಬೆಂಗಳೂರಿನಿಂದ ಮೈಸೂರಿನವರೆಗೂ ಶಾಸಕರುಗಳು ನಗರೀಕರಣ ಮಾಡಲು ಕೈ ಜೋಡಿದಸಿದ್ದಾರೆಂದು ಆರೋಪಿಸಿದರಲ್ಲದೆ ಈಗಾಗಲೇ ನಗರಸಭೆಯಿಂದ ಕೈಬಿಡುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ…

Read More