Author: kannadanewsnow09

ಬೆಂಗಳೂರು: ತುಮಕೂರಿನಲ್ಲಿ ಕೋಪರೇಟಿವ್ ಸೊಸೈಟಿಯನ್ನು ಬ್ಯಾಂಕ್ ಮಾಡಬೇಕು ಎಂಬ ಪ್ರಯತ್ನ ಮಾಡಲಾಗುತ್ತಿದೆ. ಹೊಸ ಕಟ್ಟಡ ನಿರ್ಮಿಸುವ ಸಲುವಾಗಿ ಸಮಾಜ ಕಲ್ಯಾಣ ಸಚಿವರನ್ನು ಭೇಟಿ ಮಾಡಲಾಗಿದೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಸ್ಪಷ್ಟಪಡಿಸಿದರು. ಕ್ರೆಸೆಂಟ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಸಚಿವರಾದ ಹೆಚ್.ಸಿ.ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ನಮ್ಮ ತಂದೆಯವರು 1994ರಲ್ಲಿ ಹರ್ತಿಕೋಟೆ ಕೋಪರೇಟಿವ್ ಸೊಸೈಟಿಯನ್ನು ಪ್ರಾರಂಭಿಸಿದ್ದರು. ದಲಿತ ಸಮುದಾಯದಿಂದ ಸಂಸ್ಥೆ ಪ್ರಾರಂಭಿಸಿ ಸೇವೆ ಮಾಡಿಕೊಂಡು ಬರಲಾಗಿದೆ. ನಮ್ಮ ತಂದೆಯವರು ತೀರಿಕೊಂಡ ನಂತರ, ನಾನೇ ಅದರ ಅಧ್ಯಕ್ಷನಾಗಿ ಕೆಲಸ‌ ಮಾಡುತ್ತಿದ್ದೇನೆ. 3500 ಜನ ಸದಸ್ಯರಿದ್ದಾರೆ. ಕೋಆಪರೇಟಿವ್ ಸೊಸೈಟಿಯನ್ನು ಬ್ಯಾಂಕ್ ಮಾಡಬೇಕೆಂಬ ಪ್ರಯತ್ನ ಮಾಡಲಾಗುತ್ತಿದೆ. ಸರ್ಕಾರದಿಂದ‌ ಜಾಗ ಕೊಟ್ಟಿದ್ದಾರೆ. ಆ ಜಾಗದಲ್ಲಿ ಹೊಸ ಕಟ್ಟಡ ಕಟ್ಟಬೇಕು. ಸಮಾಜ ಖ್ಯಾಣ ಇಲಾಖೆಯಿಂದ ಸಹಾಯ ಆಗಬಹುದು ಎಂಬ ನಿಟ್ಟಿನಲ್ಲಿ ಹೆಚ್.ಸಿ.ಮಹದೇವಪ್ಪ ಅವರನ್ನು ಭೇಟಿ ಮಾಡಲು, ಸೊಸೈಟಿಯ ನಿರ್ದೇಶಕರು ಮತ್ತು ಸದಸ್ಯರು ಸಮಯ ತೆಗೆದುಕೊಂಡಿದ್ದರು. ನಾನು ಕೋಆಪರೇಟಿವ್ ಅಧ್ಯಕ್ಷನಾಗಿ, ಮನವಿ…

Read More

ಬೆಂಗಳೂರು : ಡ್ರಗ್ಸ್ ಮುಕ್ತ ಕರ್ನಾಟಕ ನನ್ನ ಗುರಿ. ಇದು ನಿಮ್ಮ ಗುರಿಯೂ ಆಗಲಿ. ಇದರಿಂದ ಇಡೀ ಕರ್ನಾಟಕ ಜನತೆ ಪೊಲೀಸ್ ಇಲಾಖೆಗೆ ಕೃತಜ್ಞತೆ ಸಲ್ಲಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಆಯೋಜಿಸಿದ್ದ ಪೊಲೀಸ್ ಸಿಬ್ಬಂದಿಯ ನೂತನ ಪೀಕ್ ಕ್ಯಾಚ್ ವಿತರಣೆ, ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ ಉದ್ಘಾಟನೆ ಹಾಗೂ ಸನ್ಮಿತ್ರ ಕಾರ್ಯಯೋಜನೆ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ಯುವ ಶಕ್ತಿ, ವಿದ್ಯಾರ್ಥಿ ಯುವಜನರ ಚೈತನ್ಯ ಮತ್ತು ಸಾಮರ್ಥ್ಯ ಮಾದಕ ವಸ್ತುಗಳಿಂದ ಬಲಿ ಆಗಬಾರದು. ಇದಕ್ಕೆ ಪೊಲೀಸ್ ಇಲಾಖೆ ಕಟಿಬದ್ದ ನಿಲುವು ತಳೆಯಬೇಕು ಎಂದರು. ಮಂಗಳೂರು ಹತೋಟಿಗೆ ಬಂದಿದ್ದು ನಮ್ಮ ಅಧಿಕಾರಿಗಳಿಂದಲೇ: ಸಿಎಂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಘರ್ಷಣೆ, ಅನೈತಿಕ ಪೊಲೀಸ್ ಗಿರಿ ಹೆಚ್ಚಾಗಿತ್ತು. ಹಿಂದಿದ್ದ ಅಧಿಕಾರಿಗಳು ನಿಯಂತ್ರಣ ಮಾಡಲಿಲ್ಲ. ಇಬ್ಬರು ಅಧಿಕಾರಿಗಳನ್ನು ಬದಲಾಯಿಸಿ ಆದೇಶ ಹೊರಡಿಸಿದೆ. ಈಗ ದಕ್ಷಿಣ ಕನ್ನಡ ಜಿಲ್ಲೆ ನಿಯಂತ್ರಣದಲ್ಲಿದೆ. ಈ ಸಾಧನೆ ಮಾಡಿದ್ದೂ…

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಯಾಗಿ ಐಎಎಸ್ ಅಧಿಕಾರಿ ಕೆ.ಎಂ ಗಾಯತ್ರಿ ಅವರನ್ನು ನೇಮಕ ಮಾಡಿ ಆದೇಶಿಸಿದೆ. ಈ ಕುರಿತಂತೆ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27ಎ ಅನ್ವಯ ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳಊರು ಈ ಸಂಘಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದಂತ ಐಎಎಸ್ ಅಧಿಕಾರಿ ಕೆ.ಎಂ ಗಾಯತ್ರಿ ಅವರನ್ನು ಮುಂದಿನ ಮೂರು ತಿಂಗಳ ಅವಧಿಗೆ ಅಥವಾ ಕಲಂ 25ರ ವಿಚಾರಣೆ ಪೂರ್ಣಗೊಳ್ಳುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದ್ದಾರೆ. ಈ ಆದೇಶವನ್ನು ಉಚ್ಚ ನ್ಯಾಯಾಲಯದ ರಿಟ್ ಅರ್ಜಿಯ ಅನುಸಾರ ನೀಡಿರುವ ಮಧ್ಯಂತರ ಆದೇಶದಂತೆ ನ್ಯಾಯಾಲಯದ ಗಮನಕ್ಕೆ ತಂದು ನ್ಯಾಯಾಲಯವು ನೀಡುವ ನಿರ್ದೇಶನದ ನಂತ್ರ ಈ ಆದೇಶವನ್ನು ಅನುಷ್ಠಾನಗೊಳಿಸುವುದು ಎಂದಿದ್ದಾರೆ. ಉಚ್ಚ ನ್ಯಾಲಾಯವು ಈ ಪ್ರಕರಣದಲ್ಲಿ ನೀಡುವ ನಿರ್ದೇಶನದಂತೆ ಆಡಳಿತಾಧಿಕಾರಿಯು ಸಂಘದ ಪ್ರಭಾರವನ್ನು ವಹಿಸಿಕೊಂಡು,…

Read More

ಶಿವಮೊಗ್ಗ: ರಾಜ್ಯ ಸರ್ಕಾರದ ಆಡಳಿತವು ಎಷ್ಟು ಪ್ರಭಾವದ ದುರುಪಯೋಗದಲ್ಲಿ ಮುಳುಗಿದೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಪೆರಸಂದ್ರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ವಂಚನೆ ಪ್ರಕರಣವೇ ಸಾಕ್ಷಿಯಾಗಿದೆ. ತೆಲಂಗಾಣದ ವ್ಯಾಪಾರಿಗಳು ಕರ್ನಾಟಕದ ರೈತರಿಂದ 1.89 ಕೋಟಿ ರೂ. ಮೌಲ್ಯದ ಜೋಳವನ್ನು ಖರೀದಿ ಮಾಡಿ ಹಣ ಪಾವತಿಸದೇ ಮೋಸಮಾಡಿದ ಪ್ರಕರಣದಲ್ಲಿ, ಆರೋಪಿತರಾದ ಅಕ್ಬರ್ ಪಾಷಾ ಅವರನ್ನು ರಕ್ಷಿಸಲು ರಾಜ್ಯದ ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಜಮೀರ್ ಅಹ್ಮದ್ ಖಾನ್ ರವರು ನೇರವಾಗಿ ಠಾಣೆಯ ಅಧಿಕಾರಿಗಳಿಗೆ ಕರೆ ಮಾಡಿ ಪ್ರಭಾವ ಬೀರುವ ಪ್ರಯತ್ನ ಮಾಡಿದ್ದಾರೆ ಎಂಬ ಗಂಭೀರ ಮಾಹಿತಿ ಸಾಕ್ಷಿಯೊಡನೆ ಹೊರಬಂದಿದೆ. ಇದು ರೈತರ ಪರ ನಿಲ್ಲಬೇಕಾದ ಸಚಿವರ ನೈತಿಕ ಪತನವನ್ನು ತೋರಿಸುತ್ತದೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ದುಃಖಕರ ಸಂಗತಿ ಎಂದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರಾದ ಪ್ರದೀಪ್ ಈಶ್ವರ್ ರವರು ರೈತರ ಪರ ಒಂದು ಶಬ್ದವನ್ನೂ ಮಾತಾಡುವ…

Read More

ನವದೆಹಲಿ: ದೆಹಲಿಯ ವಿಮಾನ ನಿಲ್ದಾಣದಲ್ಲೇ ಬಸ್ ಹೊತ್ತಿ ಉರಿದಿದೆ. ವಿಮಾನದ ಪಕ್ಕದಲ್ಲೇ ಬಸ್ ಹೊತ್ತಿ ಉರಿದಿದ್ದರಿಂದ ಕೆಲ ಕಾಲ ಆತಂಕಕ್ಕೂ ಕಾರಣವಾಗಿತ್ತು. ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3ನಲ್ಲಿ ಈ ಘಟನೆ ಸಂಭವಿಸಿದೆ. ಪ್ರಯಾಣಿಕರನ್ನು ಕರೆದೊಯ್ಯುವ ಬಸ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಇಡೀ ಬಸ್ಸಿಗೆ ವ್ಯಾಪಿಸಿದ್ದರಿಂದ ಧಗಧಗಿಸಿ ಹೊತ್ತಿ ಉರಿದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://twitter.com/GOD3636/status/1983070154335629548

Read More

ಶಿವಮೊಗ್ಗ: ದಿನ ಬೆಳಗಾದರೇ ಸಾಕು ಶಾಸಕ ಗೋಪಾಲಕೃಷ್ಣ ಬೇಳೂರು ನಿವಾಸದ ಬಳಿಯಲ್ಲಿ ಜನರ ದಂಡೇ ನೆರೆದಿರುತ್ತದೆ. ತಮ್ಮನ್ನು ಕಾಣಲು ಬರುವಂತ ಜನರನ್ನು ಸಮಾಧಾನದಿಂದಲೇ ಅವರ ಕಷ್ಟಗಳನ್ನು ಆಲಿಸುವಂತ ಅವರು, ತಮ್ಮ ಕೈಲಾಸ ಸಹಾಯ, ಅವರ ಕೆಲಸವನ್ನು ಸ್ಥಳದಲ್ಲೇ ಮಾಡಿಕೊಟ್ಟು, ಜನರಲ್ಲಿ ಜಾನಾನುರಾಗಿ ನಾಯಕರೆನಿಸಿಕೊಂಡಿದ್ದಾರೆ. ಇಂತಹ ಅವರು ಇದೀಗ ಮಾನವೀಯತೆ ಜೊತೆಗೆ, ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದು ಮತ್ತೆ ಸುದ್ದಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದ ಕೆಂಚನಾಲ ಗ್ರಾಮ ಮನು ಎಂಬ ಯುವಕ ಬೈಕ್ ನಲ್ಲಿ ತೆರಳುತ್ತಿದ್ದಾಗ ಅಪಘಾತ ಉಂಟಾಗಿತ್ತು. ತಲೆಗೆ ತೀವ್ರ ಪೆಟ್ಟುಗೊಂಡಿದ್ದಂತ ಆತ ಕೋಮಾದಲ್ಲಿದ್ದಾನೆ. ಚಿಕಿತ್ಸೆಗೆ ಕುಟುಂಬಸ್ಥರು ತಮ್ಮ ಬಡತನದ ನಡುವೆಯೂ ಲಕ್ಷಾಂತರ ಹೊಂದಿಸಿ, ಕೊಡಿಸುತ್ತಿದ್ದಾರೆ. ಈ ಕುಟುಂಬ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿವಾಸಕ್ಕೆ ತೆರಳಿ ತಮ್ಮ ಮಗನ ಚಿಕಿತ್ಸಗೆ ನೆರವಾಗುವಂತೆ ವಿನಂತಿಸಿತ್ತು. ಈ ವಿಷಯ ತಿಳಿದಂತ ಶಾಸಕ ಗೋಪಾಲಕೃಷ್ಣ ಬೇಳೂರು, ಕೂಡಲೇ ಬೈಕ್ ಅಪಘಾತದಲ್ಲಿ ಗಾಯಗೊಂಡು ಕೋಮಾದಲ್ಲಿರುವಂತ ಕೆಂಚನಾಲ ಗ್ರಾಮದ ಮನು ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಿದ್ದಾರೆ. ಈ…

Read More

ರಾಜಸ್ಥಾನ: ಇಲ್ಲಿನ ಜೈಪುರದಲ್ಲಿ ಮಂಗಳವಾರ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ಹೈಟೆನ್ಷನ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಕನಿಷ್ಠ 12 ಮಂದಿ ಸುಟ್ಟ ಗಾಯಗಳಾಗಿವೆ. ನಗರದ ಮನೋಹರಪುರ ಪ್ರದೇಶದಿಂದ ಈ ಘಟನೆ ವರದಿಯಾಗಿದೆ. ವಿವರಗಳ ಪ್ರಕಾರ, ತೋಡಿ ಗ್ರಾಮದಲ್ಲಿರುವ ಇಟ್ಟಿಗೆ ಗೂಡುಗೆ ಕಾರ್ಮಿಕರನ್ನು ಸಾಗಿಸುತ್ತಿದ್ದಾಗ ಗೂಡು ಸ್ಥಳದ ಬಳಿ ಅಪಘಾತ ಸಂಭವಿಸಿದೆ. ಘಟನೆಯ ನಂತರ, ಬಸ್ ಬೆಂಕಿಯಲ್ಲಿ ಮುಳುಗಿ, ಹಲವಾರು ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣ ರಕ್ಷಿಸಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಐದು ಕಾರ್ಮಿಕರನ್ನು ಉನ್ನತ ಚಿಕಿತ್ಸೆಗಾಗಿ ಜೈಪುರಕ್ಕೆ ಕಳುಹಿಸಲಾಗಿದೆ, ಉಳಿದ ಬಲಿಪಶುಗಳಿಗೆ ಶಹಪುರ ಉಪ-ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ಪಡೆದ ಕೂಡಲೇ ಮನೋಹರಪುರ ಪೊಲೀಸರು ಸ್ಥಳಕ್ಕೆ ತಲುಪಿದರು. ದೊಡ್ಡ ಲೋಪ ಬೆಳಕಿಗೆ ಬಂದಿದೆ ಪ್ರಕರಣದ ಕುರಿತು ಹೆಚ್ಚಿನ ವಿವರಗಳು ಹೊರಬಿದ್ದಂತೆ, ಬಸ್ಸಿನ ಛಾವಣಿಗೆ ಕಟ್ಟಿಹಾಕಲಾದ ದ್ವಿಚಕ್ರ ವಾಹನದಿಂದ ಬೆಂಕಿ ಪ್ರಾರಂಭವಾಗಿದೆ ಎಂದು ಶಂಕಿಸಲಾಗಿದೆ.…

Read More

ನವದೆಹಲಿ: ಭಾರತದಲ್ಲಿ ಮುಂಬರುವ ದೇವ್ ಡೇ ಎಕ್ಸ್ ಚೇಂಜ್ ಈವೆಂಟ್ ಗೆ ಮುಂಚಿತವಾಗಿ ಪ್ರಮುಖ ಪ್ರಕಟಣೆಯಲ್ಲಿ, ಓಪನ್ ಎಐ ಭಾರತೀಯ ಬಳಕೆದಾರರಿಗೆ ಅದರ ಕೈಗೆಟುಕುವ ಪ್ರೀಮಿಯಂ ಶ್ರೇಣಿಯಾದ ಚಾಟ್ ಜಿಪಿಟಿ ಗೋಗೆ ಒಂದು ವರ್ಷದ ಉಚಿತ ಪ್ರವೇಶವನ್ನು ಒದಗಿಸುವುದಾಗಿ ಬಹಿರಂಗಪಡಿಸಿದೆ ಈ ಕ್ರಮವು ದೇಶದ ಬಳಕೆದಾರರಲ್ಲಿ ಸುಧಾರಿತ ಎಐ ಪರಿಕರಗಳ ಪ್ರವೇಶವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಭಾರತೀಯ ಬಳಕೆದಾರರಿಗೆ ಉಚಿತ ಚಾಟ್ ಜಿಪಿಟಿ ಗೋ ಓಪನ್ ಎಐನ ಪ್ರವೇಶ ಮಟ್ಟದ ಪ್ರೀಮಿಯಂ ಆವೃತ್ತಿಯಾದ ಚಾಟ್ ಜಿಪಿಟಿ ಗೋ ಸಾಮಾನ್ಯವಾಗಿ ತಿಂಗಳಿಗೆ 399 ರೂ. ಪ್ಲಸ್ ಯೋಜನೆಯ ಹೆಚ್ಚಿನ ವೆಚ್ಚವಿಲ್ಲದೆ ಸುಧಾರಿತ ಚಾಟ್ ಜಿಪಿಟಿ ವೈಶಿಷ್ಟ್ಯಗಳನ್ನು ಅನುಭವಿಸಲು ಬಳಕೆದಾರರಿಗೆ ಸಹಾಯ ಮಾಡಲು ಈ ವರ್ಷದ ಆರಂಭದಲ್ಲಿ ಈ ಸೇವೆಯನ್ನು ಪ್ರಾರಂಭಿಸಲಾಯಿತು. “ಭಾರತದಲ್ಲಿ ನಮ್ಮ ಮೊದಲ ದೇವ್ ಡೇ ಎಕ್ಸ್ ಚೇಂಜ್ ಈವೆಂಟ್ ಗೆ ಮುಂಚಿತವಾಗಿ, ಭಾರತದಾದ್ಯಂತ ಹೆಚ್ಚಿನ ಜನರಿಗೆ ಸುಧಾರಿತ ಎಐ ಅನ್ನು ಸುಲಭವಾಗಿ ಪ್ರವೇಶಿಸಲು ಮತ್ತು ಪ್ರಯೋಜನ ಪಡೆಯಲು ಸಹಾಯ ಮಾಡಲು…

Read More

ಬೆಂಗಳೂರು: ಬಳ್ಳಾರಿ ಪತ್ರಕರ್ತ ವೀರೇಶ್ ಜಿ.ಕೆ. ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2ಲಕ್ಷ ರೂ ಪರಿಹಾರ ಬಿಡುಗಡೆ ಮಾಡಿದ್ದಾರೆ. ವಿಜಯ ಕರ್ನಾಟಕ ಪತ್ರಿಕೆ ಬಳ್ಳಾರಿ ಬ್ಯೂರೋದಲ್ಲಿ ಉಪ ಸಂಪಾದಕನಾಗಿದ್ದ ವೀರೇಶ್ ಜಿ.ಕೆ. (ವೀರೇಶ್ ಕಟ್ಟೆಮ್ಯಾಗಳ) ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಕುಟುಂಬ ಆರ್ಥಿಕವಾಗಿ ಸಂಷ್ಟದಲ್ಲಿ ಸಿಲುಕಿರುವ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಪತ್ರ ಬರೆದು ಸರ್ಕಾರದ ಗಮನಕ್ಕೆ ತಂದಿದ್ದರು. ಹಾಗಾಗಿ ಬಾಕಿ ಇದ್ದ ಕಡತ ವಿಲೇವಾರಿಗೆ ಸಿಎಂ ಸೂಚಿಸಿದ್ದರು. ಕೆಯುಡಬ್ಲ್ಯೂಜೆ ಮನವಿ ಮೇರೆಗೆ ಪರಿಹಾರ ಮಂಜೂರು ಮಾಡಿದ ಸಿಎಂ‌ ಸಿದ್ದರಾಮಯ್ಯ‌ಅವರಿಗೆ, ಈ ನಿಟ್ಟಿನಲ್ಲಿ ಸಹಕಾರ ನೀಡಿದ ಸಿಎಂ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಧನ್ಯವಾದ ಸಲ್ಲಿಸಿದೆ. https://kannadanewsnow.com/kannada/good-news-for-undergraduate-students-ashoka-university-invites-applications-for-scholarships/ https://kannadanewsnow.com/kannada/employees-take-note-will-you-get-pension-if-you-leave-the-company-after-10-years-know-the-rules-of-epfo/

Read More

ಬೆಂಗಳೂರು: ಕ್ಲಾಸಿಕ್ ಲೆಜೆಂಡ್ಸ್ ಲಿಮಿಟೆಡ್ ರಾಜಾಜಿನಗರದಲ್ಲಿ ತನ್ನ 13ನೇ ಶಾಖೆಯನ್ನು ಅಡಿಶ್ರೀ ಮೋಟಾರ್ಸ್‌ ಶೀರ್ಷಿಕೆಯಡಿ ತೆರೆದಿದ್ದು, ಜಾವಾ, ಯೆಜ್ಡಿ ಬೈಕ್‌ ಖರೀದಿದಾರರಿಗೆ ಇನ್ನಷ್ಟು ಆಪ್ತವಾಗಿದೆ. ಈ ಶಾಖೆಯಲ್ಲಿ ಕೇವಲ ಬೈಕ್‌ ಖರೀದಿಅಷ್ಟೇ ಅಲ್ಲದೆ, ಬೈಕ್‌ ಬಿಡಿಭಾಗಗಳು ಹಾಗೂ ಬೈಕ್‌ನ ಅನುಭವವನ್ನು ಪಡೆದುಕೊಳ್ಳುವ ಅವಕಾಶವೂ ಇದೆ. ಕ್ಲಾಸಿಕ್ ಲೆಜೆಂಡ್ಸ್ನ ಮುಖ್ಯ ವ್ಯವಹಾರ ಅಧಿಕಾರಿ ಶರದ್ ಅಗರ್ವಾಲ್ ಮಾತನಾಡಿ, ಕ್ಲಾಸಿಕ್‌ ಲೆಜೆಂಡ್ಸ್‌ನ 13ನೇ ಶಾಖೆಯನ್ನು ಪ್ರಾರಂಭಿಸಿದ್ದು, ಈ ಮೂಲಕ ಪ್ರತಿ ಏಳು ಕಿಲೋಮೀರ್‌ ವ್ಯಾಪ್ತಿಯಲ್ಲಿ ಒಂದೊಂದು ಶಾಖೆ ಹೊಂದಲಾಗಿದೆ. ಇದರಿಂದ ಬೈಕ್‌ ಪ್ರೇಮಿಗಳು ಜಾವಾ , ಯೆಜ್ಡಿ ಬೈಕ್‌ ಖರೀದಿಗೆ ಹೆಚ್ಚು ದೂರ ಕ್ರಮಿಸಬೇಕಿಲ್ಲ. ಇನ್ನು, ಕರ್ನಾಟಕದಾದ್ಯಂತ ಒಟ್ಟು 23 ಡೀಲರ್‌ಶಿಪ್‌ನನ್ನು ಹೊಂದಿದೆ. ಕ್ಲಾಸಿಕ್‌ ಲೆಜೆಂಡ್‌, ನಮ್ಮ ಗ್ರಾಹಕರಿಗೆ ಮೆಚ್ಚುಗೆಯಾಗುವ, ಹೆಚ್ಚು ಆರಾಮದಾಯಕ ಹಾಗೂ ಕ್ರೇಜ್‌ ಹುಟ್ಟಿಸುವ ರೀತಿಯಲ್ಲಿ ವಿನ್ಯಾಸಗೊಳಿಸಿದ್ದು, ಟೆಸ್ಟ್‌ ಡ್ರೈವ್‌, ಬಿಡಿ ಭಾಗಗಳು, ಒಂದೇ ಸೂರಿನಡಿ ಸಂಪೂರ್ಣ ಪ್ರೀಮಿಯಂ ಅನುಭವದೊಂದಿಗೆ ಸಿಗಲಿದೆ. ಬೆಂಗಳೂರಿನಲ್ಲಿರುವ ಕ್ಲಾಸಿಕ್ ಲೆಜೆಂಡ್ಸ್ನ ಸೇವೆ ಮತ್ತು ಬೆಂಬಲ ಪರಿಸರ…

Read More