Author: kannadanewsnow09

ಮಂಡ್ಯ: ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ 57 ಬಾಲ್ಯ ವಿವಾಹ ನಡೆದು ಎಫ್.ಐ.ಆರ್ ದಾಖಲಿಸಲಾಗಿದೆ. ಬಾಲ್ಯ ವಿವಾಹ ನಡೆಯುವ ಮೊದಲೇ ಅಧಿಕಾರಿಗಳು ಪತ್ತೆ ಹಚ್ಚಿ ತಡೆಗಟ್ಟಬೇಕಿತ್ತು. ಬಾಲ್ಯ ವಿವಾಹ ತಡೆಗಟ್ಟಲು ವಿಫಲರಾದ ಅಧಿಕಾರಿಗಳಿಗೆ ನೊಟೀಸ್ ಜಾರಿ ಮಾಡುವಂತೆ ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸೇರಿದಂತೆ ವಿವಿಧ ವಿಷಯಗಳ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಮದುವೆಯ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆಯಾ ಗ್ರಾಮದ ಪಿ.ಡಿ.ಓ, ಶಾಲೆಯ ಮುಖ್ಯೋಪಾಧ್ಯಾಯರ ಗಮನಕ್ಕೆ ಬರುತ್ತಿಲ್ಲ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಪ್ರೌಢಶಾಲೆಯ ಹೆಣ್ಣು ಮಗು 3 ದಿನ ಕ್ಕಿಂತ ಹೆಚ್ಚು ಶಾಲೆಗೆ ಬರುತ್ತಿಲ್ಲ ಎಂದರೆ ಪರಿಶೀಲನೆ ನಡೆಸಬೇಕು ಎಂದರು. ಮಂಡ್ಯ ಜಿಲ್ಲೆಯು ತಲಾದಯದಲ್ಲಿ ಆರನೇ ಸ್ಥಾನದಲ್ಲಿದೆ. ತಲಾದಯ ಪ್ರತಿ ವರ್ಷಕ್ಕೆ ಅಂದಾಜು ರೂ 2,32,000/- ಇದೆ. ಆದರೂ ಸಹ ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ನಡೆಯುತ್ತಿದೆ ಎಂದರೆ…

Read More

ಶಿವಮೊಗ್ಗ: ಜನವಿರೋಧಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರದ ವಿರುದ್ಧ ಬೃಹತ್ ಹೋರಾಟ ಮಾಡಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಪ್ರಕಟಿಸಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನವಿರೋಧಿ ಕಾಂಗ್ರೆಸ್ ಸರಕಾರ ಕಿತ್ತೊಗೆಯುವ ವರೆಗೂ ಹೋರಾಟ ಮುಂದುವರೆಸಲು ನಿರ್ಧರಿಸಿದ್ದೇವೆ. ಜೂನ್ 13ರಂದು ಬೆಂಗಳೂರು ಮಹಾನಗರದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಇದೆ. ಬಿಜೆಪಿ ಕಾರ್ಯಕರ್ತರು, ಘಟನೆಯಲ್ಲಿ ನೊಂದ ಕುಟುಂಬಗಳ ಸದಸ್ಯರು, ನೊಂದವರು ಬರಲಿದ್ದಾರೆ. ಸುಮಾರು 15- 20 ಸಾವಿರ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಸೇರಲಿದ್ದಾರೆ ಎಂದು ವಿವರಿಸಿದರು. ಆರ್‍ಸಿಬಿ ಗೆಲುವಿನ ಸಂಭ್ರಮಾಚರಣೆಯಲ್ಲಿ ನಡೆದ ಕಾಲ್ತುಳಿತ, 11 ಸಾವಿನ ಸಂಬಂಧ ದುರ್ಘಟನೆಯಲ್ಲಿ ಆರೋಪಿ ನಂಬರ್ 1 ಆರ್‍ಸಿಬಿ ಅಲ್ಲ; ಆರ್‍ಸಿಬಿ, ಕೆಎಸಿಎ, ಡಿಎನ್‍ಎ ಅವರು ಕೂಡ ಆರೋಪಿಗಳೇ ಆಗಿದ್ದಾರೆ. ಮುಖ್ಯಮಂತ್ರಿಗಳೇ ಆರೋಪಿ ನಂಬರ್ 1, ಉಪ ಮುಖ್ಯಮಂತ್ರಿಗಳು ಎಡರನೇ ಆರೋಪಿ, ಕೈಕಟ್ಟಿ ಕುಳಿತಿದ್ದ ಗೃಹ ಸಚಿವ ಪರಮೇಶ್ವರ್ ಅವರು ಆರೋಪಿ ನಂಬರ್ 3; ನಂತರದ ಹೊಣೆಗಾರರು…

Read More

ನವದೆಹಲಿ: 2025 ರ ಪ್ರಶಸ್ತಿಯನ್ನು ಗೆದ್ದ ಕೇವಲ ಒಂದು ವಾರದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League -IPL) ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru -RCB) ಹೊಸ ಮಾಲೀಕರನ್ನು ಹುಡುಕುವ ಸಾಧ್ಯತೆಯಿದೆ. ಫ್ರಾಂಚೈಸಿಯ ಪ್ರಸ್ತುತ ಮಾಲೀಕರಾದ ಡಿಯಾಜಿಯೊ ಪಿಎಲ್‌ಸಿ ಮಾರುಕಟ್ಟೆಯಲ್ಲಿದ್ದು, ಫ್ರಾಂಚೈಸಿಯನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮಾರಾಟ ಮಾಡಲು ನೋಡುತ್ತಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ತಂಡವು ತನ್ನ ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆದ್ದ ನಂತರ ಬ್ರ್ಯಾಂಡ್ ಕಂಡಿರುವ ಗರಿಷ್ಠ ಮಟ್ಟದ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ. ಇದು 18 ವರ್ಷಗಳ ಸುದೀರ್ಘ ವಿರಾಮಕ್ಕೆ ಅಂತ್ಯ ಹಾಡಿದೆ. ಆರ್‌ಸಿಬಿಯನ್ನು ಭಾರತದಲ್ಲಿ ಡಯಾಜಿಯೊ ಪಿಎಲ್‌ಸಿ ಮೂಲಕ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ನಡೆಸುತ್ತಿದೆ. ಇದು ಈಗಾಗಲೇ ಸಂಭಾವ್ಯ ಹೂಡಿಕೆದಾರರೊಂದಿಗೆ ಮಾತುಕತೆ ನಡೆಸುತ್ತಿದೆ. ಫ್ರಾಂಚೈಸಿಯ ಮೌಲ್ಯಮಾಪನದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಸಂಪೂರ್ಣ ಮಾರಾಟಕ್ಕಾಗಿ ಮಾಲೀಕರು 2 ಬಿಲಿಯನ್ ಯುಎಸ್‌ಡಿ (ಸುಮಾರು INR 16,834 ಕೋಟಿ)…

Read More

ಮನೆಯಲ್ಲಿ ಹಣ ಸಂಪಾದಿಸುವವರು ಈ ದೀಪ ಹಚ್ಚಿದರೆ ಇನ್ನೂ ಹೆಚ್ಚು ಗಳಿಸುತ್ತಾರೆ! ಹಣದ ಹರಿವು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದಕ್ಕಾಗಿ ನವಧಾನ್ಯ ದೀಪ ಹಚ್ಚುವ ರಹಸ್ಯ. ನವಧಾನ್ಯಗಳ ಮಿಶ್ರಣದ ದೈವ ದೀಪಾರಾಧನೆಯ ಪ್ರಯೋಜನಗಳು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ,…

Read More

ನವದೆಹಲಿ: ಆಧಾರ್ ಕಾರ್ಡ್ ( Aadhaar Card ) ಹೊಂದಿರುವವರು ಜೂನ್ 14, 2025 ರವರೆಗೆ ತಮ್ಮ ವಿವರಗಳನ್ನು ಉಚಿತವಾಗಿ ನವೀಕರಿಸಲು ಅವಕಾಶವಿದೆ ಎಂದು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India – UIDAI)  ಘೋಷಿಸಿದೆ. ಕೇವಲ ಐದು ದಿನಗಳು ಉಳಿದಿರುವಾಗ, ಈ ಸೌಲಭ್ಯವನ್ನು ಇನ್ನೂ ಪಡೆಯದ ನಿವಾಸಿಗಳು ತ್ವರಿತವಾಗಿ ಕಾರ್ಯನಿರ್ವಹಿಸಬೇಕು. ಗಡುವಿನ ನಂತರ, ಬಳಕೆದಾರರು ನವೀಕರಣಗಳಿಗಾಗಿ 50 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಉಚಿತ ನವೀಕರಣ ಆಯ್ಕೆಯು myAadhaar ಪೋರ್ಟಲ್ ಮೂಲಕ ಮಾತ್ರ ಅನ್ವಯಿಸುತ್ತದೆ. ಬಳಕೆದಾರರು ತಮ್ಮ ದಾಖಲೆಗಳು ಮತ್ತು ಹೆಸರು, ವಿಳಾಸ ಮತ್ತು ಜನ್ಮ ದಿನಾಂಕದಂತಹ ಜನಸಂಖ್ಯಾ ವಿವರಗಳನ್ನು ನವೀಕರಿಸಲು ಆನ್‌ಲೈನ್‌ನಲ್ಲಿ ಲಾಗಿನ್ ಮಾಡಬಹುದು. ಆದಾಗ್ಯೂ, ಫಿಂಗರ್‌ಪ್ರಿಂಟ್‌ಗಳು ಅಥವಾ ಐರಿಸ್ ಸ್ಕ್ಯಾನ್‌ಗಳಂತಹ ಬಯೋಮೆಟ್ರಿಕ್ ಮಾಹಿತಿಯನ್ನು ಒಳಗೊಂಡ ನವೀಕರಣಗಳನ್ನು ಆಧಾರ್ ಸೇವಾ ಕೇಂದ್ರದಲ್ಲಿ ಮಾಡಬೇಕು ಮತ್ತು ಉಚಿತ ಸೇವೆಯ ಅಡಿಯಲ್ಲಿ ಒಳಗೊಳ್ಳುವುದಿಲ್ಲ. ಗಡುವು ಒಮ್ಮೆ ವಿಸ್ತರಿಸಲಾಗಿದೆ, ಮತ್ತೆ ವಿಸ್ತರಿಸೋದು ಡೌಟ್ ಯುಐಡಿಎಐ ನೀಡಿದ ಮೊದಲ ವಿಸ್ತರಣೆ…

Read More

ಬೆಂಗಳೂರು: ಬೆಂಗಳೂರಿನ ಶ್ರೀ ಚಾಮರಾಜೇಂದ್ರ ಕಬ್ಬನ್ ಉದ್ಯಾನವನದಲ್ಲಿ ಸ್ವಚ್ಛತೆಯನ್ನು ಕಾಪಾಡಲು ಹಾಗೂ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ಉದ್ಯಾನವನದ ಆವರಣದಲ್ಲಿ ಅನುಮತಿಸಬಹುದಾದ ಚಟುವಟಿಕೆಗಳು, ನಿಷೇಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ಸರ್ಕಾರವು 2025ನೇ ಏಪ್ರಿಲ್ 23 ರಂದು ಜಾರಿ ಮಾಡಿ ಆದೇಶಿಸಿದೆ. ಕಬ್ಬನ್ ಉದ್ಯಾನವನದ ಸಂರಕ್ಷಣಾ ಹಿತದೃಷ್ಟಿಯಿಂದ ರಚಿಸಲಾಗಿರುವ ನಿಯಮಗಳನ್ನು ಉಲ್ಲಂಘಿಸಿದ ಪ್ರತಿ ಒಬ್ಬರಿಗೆ ಗರಿಷ್ಠ ರೂ.500/- ಗಳವರೆಗೆ ದಂಡ ವಿಧಿಸಲು ಹಾಗೂ ಪದೇ ಪದೇ ಉಲ್ಲಂಘಿಸಿದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲು ತೋಟಗಾರಿಕೆ ನಿರ್ದೇಶಕರು, ಬೆಂಗಳೂರು ಇವರು ತೋಟಗಾರಿಕೆ ಉಪ ನಿರ್ದೇಶಕರು, ಶ್ರೀ ಚಾಮರಾಜೇಂದ್ರ (ಕಬ್ಬನ್) ಉದ್ಯಾನವನ, ಬೆಂಗಳೂರು ರವರಿಗೆ ಅಥವಾ ಸಂಬಂಧಿಸಿದ ಸೂಕ್ತ ಅಧಿಕಾರಿಗೆ ಅವಕಾಶ ಕಲ್ಪಿಸಿಕೊಡುವಂತೆ ಆದೇಶಿಸಿದೆ. ಉಲ್ಲಂಘಿಸಿದ ದಂಡದ ಮೊತ್ತ ಹಾಗೂ ಷರತ್ತಿಗೊಳಪಟ್ಟು ಅನುಮತಿಸಲು ವಿಧಿಸಿರುವ ಮೊತ್ತವನ್ನು ಸುವರ್ಣ ಕರ್ನಾಟಕ ಉದ್ಯಾನವನ ಪ್ರತಿಷ್ಠಾನನದ ಖಾತೆಗೆ ಜಮೆ ಮಾಡುವುದು. ಅನುಮತಿಸಬಹುದಾದ ಚಟುವಟಿಕೆಗಳು, ನಿಷೇಧಿಸಿದ ಚಟುವಟಿಕೆಗಳು ಹಾಗೂ ಪಾಲಿಸಬೇಕಾದ ಇತರೆ ಅವಶ್ಯಕ ನಿಯಮಗಳನ್ನು ವ್ಯಾಪಕ ಪ್ರಚಾರ ಪಡಿಸಲು…

Read More

ನವದೆಹಲಿ: 2025 ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ನಡೆದ ಮಹತ್ವದ ಆಚರಣೆಯಲ್ಲಿ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೂನ್ 9 ರಂದು ಏಳು ದಂತಕಥೆ ಆಟಗಾರರನ್ನು ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರಿಸಿತು. ಈ ವರ್ಷದ ವರ್ಗವು ಐದು ಪುರುಷ ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರನ್ನು ಒಳಗೊಂಡಿದೆ, ಅವರೆಲ್ಲರೂ ಆಟದಲ್ಲಿ ಶಾಶ್ವತ ಪರಂಪರೆಯನ್ನು ಬಿಟ್ಟಿದ್ದಾರೆ. ಆಟಗಾರರಲ್ಲಿ ಎಂಎಸ್ ಧೋನಿ, ಮ್ಯಾಥ್ಯೂ ಹೇಡನ್, ಗ್ರೇಮ್ ಸ್ಮಿತ್, ಹಾಶಿಮ್ ಆಮ್ಲಾ ಮತ್ತು ಸನಾ ಮಿರ್ ಸೇರಿದ್ದಾರೆ. ‘ಎ ಡೇ ವಿಥ್ ದಿ ಲೆಜೆಂಡ್ಸ್’ ಎಂಬ ವಿಶೇಷ ಉಪಕ್ರಮದ ಭಾಗವಾಗಿ ಈ ಸೇರ್ಪಡೆ ಸಮಾರಂಭವನ್ನು ಐಸಿಸಿಯ ಅಧಿಕೃತ ಮಾಧ್ಯಮ ಪಾಲುದಾರರಲ್ಲಿ ನೇರ ಪ್ರಸಾರ ಮಾಡಲಾಯಿತು, ಇದು ವಿಶ್ವಾದ್ಯಂತ ಕ್ರಿಕೆಟ್ ಅಭಿಮಾನಿಗಳಿಗೆ ಈ ಸಂದರ್ಭವನ್ನು ವೀಕ್ಷಿಸಲು ಮತ್ತು ಕ್ರೀಡೆಯ ವೀರರನ್ನು ಗೌರವಿಸಲು ಅವಕಾಶ ಮಾಡಿಕೊಟ್ಟಿತು. “ಒತ್ತಡದ ನಡುವೆಯೂ ಶಾಂತಚಿತ್ತತೆ, ಅಸಮಾನವಾದ ಯುದ್ಧತಂತ್ರದ ನಡೆ, ಆದರೆ ಕಡಿಮೆ ಮಾದರಿಯ ಕ್ರಿಕೆಟ್‌ನಲ್ಲಿ ಹೊಸ ಪ್ರತಿಭೆ ತೋರಿದ್ದಕ್ಕಾಗಿ…

Read More

ಮೈಸೂರು: ರೈಲ್ವೆ ಕಾಮಗಾರಿ ಸೇರಿದಂತೆ ವಿವಿಧ ಕಾರಣದಿಂದಾಗಿ ಸ್ಥಗಿತಗೊಂಡಿದ್ದಂತ ಈ ಮಾರ್ಗದಲ್ಲಿ ರೈಲುಗಳ ಸಂಚಾರ ಮತ್ತೆ ಆರಂಭಿಸುತ್ತಿರುವುದಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗವು ತಿಳಿಸಿದೆ. ಇಂದು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಗಿರೀಶ ಧರ್ಮರಾಜ ಕಲಗೊಂಡ ಅವರು, ಹಬ್ಬನಗಟ್ಟ ಮತ್ತು ಅರಸೀಕೆರೆ ನಡುವಿನ ಲೈನ್ ಬ್ಲಾಕ್ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಮೊದಲು ರದ್ದುಪಡಿಸಲಾದ, ಭಾಗಶಃ ರದ್ದುಪಡಿಸಲಾದ ಹಾಗೂ ನಿಯಂತ್ರಿಸಲಾದ ಕೆಳಕಂಡ ರೈಲುಗಳು ಈಗ ನಿಗದಿತ ವೇಳಾಪಟ್ಟಿ ಹಾಗೂ ಮಾರ್ಗದಂತೆ ಪುನಃ ಚಾಲನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ. 1.ರೈಲು ಸಂಖ್ಯೆ 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ. 2.ರೈಲು ಸಂಖ್ಯೆ 16206 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್, 10.05.2025 ರಂದು ಆರಂಭವಾಗುವ ಪ್ರಯಾಣ, ಮೊದಲು ರದ್ದುಪಡಿಸಲಾಗಿದ್ದು, ಇದೀಗ ನಿಯಮಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸುತ್ತದೆ. 3.ರೈಲು ಸಂಖ್ಯೆ 16205 ತಾಳಗುಪ್ಪ – ಮೈಸೂರು…

Read More

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಕೆ.ಮಾಯಣ್ಣಗೌಡ ಅವರನ್ನು ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದಂತ ಡಾ.ಕವಿತಾ ಯೋಗಪ್ಪನವರ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದಂತ ಡಾ.ಕವಿತಾ ಯೋಗಪ್ಪನವರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಹುದ್ದೆಗೆ ಕೆ.ಮಾಯಣ್ಣಗೌಡ ಅವರನ್ನು ನೇಮಕ ಮಾಡಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ನೂತನ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಅವರು ಈ ಹಿಂದೆಯೂ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಜೂನ್.8, 2024ರಂದು ವರ್ಗಾವಣೆ ಮಾಡಲಾಗಿತ್ತು. ಇದೀಗ ಒಂದು ವರ್ಷದ ಬಳಿಕ ಮತ್ತೆ ಕೆ.ಮಾಯಣ್ಣಗೌಡ ಅವರನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ನೇಮಿಸಿ ಸರ್ಕಾರ ಆದೇಶಿಸಿದೆ. https://kannadanewsnow.com/kannada/final-e-account-distribution-to-5-lakh-citizens-by-bbmp/ https://kannadanewsnow.com/kannada/explosion-reported-aboard-singapore-flagged-container-ship-off-kerala-coast/

Read More

ಬೆಂಗಳೂರು: ನಗರದಲ್ಲಿ ನಕ್ಷೆ ಮಂಜೂರಾತಿ ಸೇರಿದಂತೆ ವಿವಿಧ ಕಾರ್ಯಗಳಿಗೆ ಇ-ಖಾತಾ ಕಡ್ಡಾಗೊಳಿಸಲಾಗಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಲಕ್ಷ ನಾಗರೀಕರಿಗೆ ಅಂತಿಮ ಇ-ಖಾತಾ ವಿತರಣೆ ಮಾಡಿರುವುದಾಗಿ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಬೆಂಗಳೂರಲ್ಲಿ ಈವರೆಗೆ 5 ಲಕ್ಷ ನಾಗರಿಕರು ಅಂತಿಮ ಇ-ಖಾತಾ ಪಡೆದಿದ್ದಾರೆ. 25 ಲಕ್ಷಕ್ಕಿಂತ ಹೆಚ್ಚು ಡ್ರಾಫ್ಟ್ ಇ-ಖಾತಾ ಆನ್‌ಲೈನ್‌ನಲ್ಲಿ ಲಭ್ಯವಿದೆ. ನಾಗರಿಕರು ತಮ್ಮ ಆಧಾರ್ ಸಂಖ್ಯೆ, ಮಾರಾಟ ದಸ್ತಾವೇಜಿನ ಸಂಖ್ಯೆ, ಆಸ್ತಿಯ ತೆರಿಗೆ ಐ.ಡಿ, ಬೆಸ್ಕಾಂ ಸಂಖ್ಯೆ (ಖಾಲಿ ಜಾಗಕ್ಕೆ ಐಚ್ಛಿಕ), ಮತ್ತು ಆಸ್ತಿಯ ಫೋಟೋ ಹಾಕಬೇಕು. ಈ ಮಾಹಿತಿಗಳನ್ನು ನೀಡಿದ ನಂತರ ನಾಗರಿಕರಿಗೆ ಅಂತಿಮ ಇ-ಖಾತಾ 1 ರಿಂದ 2 ದಿನಗಳಲ್ಲಿ ಸಿಗುತ್ತದೆ ಎಂದು ತಿಳಿಸಿದ್ದಾರೆ. ಬೆಂಗಳೂರಲ್ಲಿ ಈವರೆಗೆ ಸುಮಾರು 5 ಲಕ್ಷ ನಾಗರಿಕರಿಂದ ತಮ್ಮ ಇ-ಖಾತಾ ಪಡೆಯಲಾಗಿದೆ. ಪ್ರತಿದಿನ ಸುಮಾರು 3,000 ಜನರು ಈ ಪ್ರಕ್ರಿಯೆ ಮಾಡುತ್ತಿದ್ದಾರೆ ಮತ್ತು ಇಷ್ಟೇ ಸಂಖ್ಯೆಯವರಿಗೆ ಇ-ಖಾತಾ ಅನುಮೋದನೆ…

Read More