Author: kannadanewsnow09

ಮೈಸೂರು: ನನ್ನ ತಂದೆ ಸಿದ್ಧರಾಮಯ್ಯ ಅವರ ಮೇಲೆ ಯಾವುದೇ ಆರೋಪಗಳು ಇಲ್ಲ. ಸಿಎಂ ಸ್ಥಾನದಿಂದ ಕೆಳಗೆ ಇಳಿಸುವುದಕ್ಕೂ ಯಾವುದೇ ಕಾರಣಗಳೂ ಇಲ್ಲ. ಹೀಗಾಗಿ ನನ್ನ ತಂದೆ ಉಳಿದ ಎರಡೂವರೆ ವರ್ಷದ ಅವಧಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂಬುದಾಗಿ ಡಾ.ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಂದತ ಅವರು, ಸಿದ್ಧರಾಮಯ್ಯ ಅವರೇ ಪೂರ್ಣಾವಧಿಗೆ ಸಿಎಂ ಆಗಿರುತ್ತಾರೆ. ನಾಯಕತ್ವ ಬದಲಾವಣೆ ಚರ್ಚೆ ಸರಿಯಲ್ಲ. ಕೆಲವರು ಆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೇ ಅದನ್ನು ನಿರ್ಧರಿಸೋದು ಕಾಂಗ್ರೆಸ್ ಹೈಕಮಾಂಡ್ ಆಗಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮವಾದದ್ದು ಎಂದರು. ನನಗೆ ಮಾಹಿತಿ ಇರುವಂತೆ ಎಲ್ಲಿಯೂ ಅಧಿಕಾರ ಹಂಚಿಕೆಯ ಸೂತ್ರವೇ ರಚನೆಯಾಗಿಲ್ಲ. ನಮ್ಮ ತಂದೆಯವರಾಗಲೀ, ಕೆಲ ಹಿರಿಯ ಸಚಿವರಾಗಲೀ ಈ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಅಲ್ಲಿಗೆ ಅಧಿಕಾರ ಹಂಚಿಕೆ ಮಾತುಕತೆ ನಡೆದಿಲ್ಲವೆಂದು ಅರ್ಥ ತಾನೆ ಅಂತ ಪ್ರಶ್ನಿಸಿದರು. ಸಿಎಂ ಯಾರನ್ನು ಮಾಡಬೇಕು, ಮಾಡಬಾರದು ಎಂಬುದು ನಮ್ಮ ಶಾಸಕರು, ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟ ವಿಚಾರವಾಗಿದೆ. ಅದರ ಬಗ್ಗೆ ನಾನೇನು ಮಾತನಾಡುವುದಿಲ್ಲ ಎಂಬುದಾಗಿ…

Read More

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಯಾರಾದರೂ ಓಕೆ ನನಗೆ. ಆದರೇ ಜನರಿಗೆ ಒಳ್ಳೇದಾಗಬೇಕು ಅಷ್ಟೇ ಎಂಬುದಾಗಿ ನಟಿ ರಮ್ಯಾ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯನ್ನು ನಾನು ಡಿಸೈಡ್ ಮಾಡೋದಲ್ಲ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹಿರಿಯ ನಾಯಕರಿದ್ದಾರೆ. ನನಗೆ ಯಾರದರೂ ಓಕೆ, ರಾಜ್ಯಕ್ಕೆ ಒಳ್ಳೇದಾಗಬೇಕು ಎಂದರು. ರಾಜ್ಯದಲ್ಲಿನ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ರಾಹುಹ್ ಗಾಂಧಿ, ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್ ನಿರ್ಧರಿಸುತ್ತಾರೆ ಎಂಬುದಾಗಿ ತಿಳಿಸಿದರು. https://kannadanewsnow.com/kannada/no-situation-has-arisen-in-the-state-to-change-the-chief-minister-dr-yathindra-siddaramaiah/ https://kannadanewsnow.com/kannada/ban-on-supply-of-only-halal-meat-in-trains-nhrc-notice-to-railways-seeking-report/

Read More

ಮೈಸೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಿಸುವಂತ ಪರಿಸ್ಥಿತಿ ಉದ್ಭವಿಸಿಲ್ಲ. ಸಿದ್ಧರಾಮಯ್ಯ ವಿರುದ್ಧ ಯಾವುದೇ ಹಗರಣದ ಆರೋಪವಿಲ್ಲ. ಸಿಎಂ ಬದಲಿಸಬೇಕು ಅಂದರೆ ಏನಾದ್ರೂ ಹಗರಣ ನಡೆದಿರಬೇಕು ಎಂಬುದಾಗಿ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಿದ್ಧರಾಮಯ್ಯ ಅವರನ್ನು ಬದಲಿಸೋ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಯಾವುದೇ ಅಕ್ರಮದ ಆರೋಪವಿಲ್ಲ. ಹಾಗಾಗಿ ಸಿಎಂ ಬದಲಾವಣೆ ಪ್ರಶ್ನೆಯೇ ಉದ್ಭವಿಸಲ್ಲ ಎಂಬುದಾಗಿ ತಿಳಿಸಿದರು. ಯಾರೋ ಒಂದಿಬ್ರು ಸಿಎಂ ಬದಲಾವಣೆ ಆಗಬೇಕು ಅಂತಿದ್ದಾರೆ ಅಷ್ಟೇ. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕು. ಪಕ್ಷದ ಕಾರ್ಯಕರ್ತನಾಗಿ, ಪರಿಷತ್ ಸದಸ್ಯನಾಗಿ ಹೇಳಬೇಕು ಅಂದರೇ ಈಗಿರುವ ಪರಿಸ್ಥಿತಿ ನೋಡಿದರೇ ಸಿದ್ಧರಾಮಯ್ಯ ಐದು ವರ್ಷ ಪೂರೈಸುತ್ತಾರೆ. ಅದರಲ್ಲಿ ನೋ ಡೌಟ್ಸ್ ಎಂದರು. https://kannadanewsnow.com/kannada/delhi-road-transport-corporation-managing-director-team-of-officials-visit-ksrtc-office-in-bengaluru/ https://kannadanewsnow.com/kannada/ban-on-supply-of-only-halal-meat-in-trains-nhrc-notice-to-railways-seeking-report/

Read More

ಬೆಂಗಳೂರು: ಇಂದು ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಜಿತೇಂದ್ರ ಯಾದವ್, ಭಾಆಸೇ., ಮತ್ತು ಅಧಿಕಾರಿಗಳ ತಂಡವು‌ ಕರಾರಸಾ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ, ಭಾಆಸೇ., ಅವರನ್ನು ಕೆ.ಎಸ್.ಆರ್.ಟಿ.ಸಿ, ಕೇಂದ್ರ ಕಛೇರಿಯಲ್ಲಿ ಭೇಟಿ ನೀಡಿದರು. ಕೆ ಎಸ್ ಆರ್ ಟಿ ಸಿ ನಿಗಮದಲ್ಲಿ ವಾಹನಗಳ ಸುಗಮ ಕಾರ್ಯಾಚರಣೆ, ವಾಹನಗಳ ತಾಂತ್ರಿಕ ನಿರ್ವಹಣೆ, ಡ್ಯೂಟಿ ರೋಟಾ ವ್ಯವಸ್ಥೆ, ಮುಂಗಡ ಆಸನ ಕಾಯ್ದಿರಿಸುವಿಕೆ, ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ವಿನೂತನ ಕ್ರಮಗಳು, ಮಾಹಿತಿ ತಂತ್ರಜ್ಞಾನ ಉಪಕ್ರಮಗಳು, ಹೆಚ್.ಆರ್.ಎಂ.ಎಸ್., ಬಸ್ ನಿಲ್ದಾಣ/ ಘಟಕಗಳ ಕಾಮಗಾರಿ ಪದ್ಧತಿ, ಬಸ್ಸುಗಳ ಬ್ರ್ಯಾಂಡಿಂಗ್, ಬಸ್ಸುಗಳ ಪುನಶ್ವೇತನ ಕಾರ್ಯ, ಬಸ್ ನಿಲ್ದಾಣದ ಸ್ವಚ್ಛತೆ ಮತ್ತು ಇತರೆ ಮಾಹಿತಿಯನ್ನು ಪ್ರಾತ್ಯಕ್ಷಿಕೆಯ ಮುಖಾಂತರ ಮಾಹಿತಿ ನೀಡಿದರು. ನಿಗಮದಲ್ಲಿನ ಹೆಚ್.ಆರ್.‌ಎಂ.ಎಸ್., ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ದೆಹಲಿ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಅಳವಡಿಸಿಕೊಳ್ಳುವುದಾಗಿ ತಿಳಿಸಿದರು. ಬಸ್ಸುಗಳ ಪುನಶ್ಚೇತನ ಕಾರ್ಯಕ್ಕೂ ಸಹ ಮೆಚ್ಚುಗೆ ವ್ಯಕ್ತಪಡಿಸಿದರು. ಕೆ ಎಸ್ ಆರ್ ಟಿ ಸಿ ಉಪಕ್ರಮಗಳ ಬಗ್ಗೆ ಅಧ್ಯಯನ ನಡೆಸಲು…

Read More

ಬೆಂಗಳೂರು: “ಹೈಕಮಾಂಡ್ ನಾಯಕರು ದಿಲ್ಲಿಗೆ ಕರೆದರೆ ಹೋಗುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. ಅವರು ವಿಧಾನಸೌಧದ ಬಳಿ ಕೇಳಿದಾಗ ಮಾಧ್ಯಮಗಳ ಪ್ರಶ್ನೆಗೆ ಗುರುವಾರ ಪ್ರತಿಕ್ರಿಯಿಸಿದರು. ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ದಿಲ್ಲಿಗೆ ಕರೆದು ಚರ್ಚೆ ಮಾಡುತ್ತೇವೆ ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದಾಗ, ಹೈಕಮಾಂಡ್ ನನ್ನನ್ನು ಹಾಗೂ ಮುಖ್ಯಮಂತ್ರಿಗಳನ್ನು ಕರೆದರೆ ನಾವು ಮಾತನಾಡಿಕೊಂಡು ದೆಹಲಿಗೆ ಹೋಗುತ್ತೇವೆ” ಎಂದರು.

Read More

ಬೆಂಗಳೂರು: ಈ ವರ್ಷದ ಆರಂಭದಲ್ಲಿ ರಾಜಾಜಿನಗರ ಬಳಿ ವೀಲ್ಹಿಂಗ್ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಹದಿಹರೆಯದ ಬಾಲಕನ ತಂದೆಗೆ ಬೆಂಗಳೂರಿನ ನ್ಯಾಯಾಲಯ 25,000 ರೂ. ದಂಡ ವಿಧಿಸಿದೆ. ಈ ವರ್ಷ ಮಾರ್ಚ್ 27 ರಂದು ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ 17 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಅಪಾಯಕಾರಿ ವೀಲಿ ಸವಾರಿ ಮಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ದಾರಿಹೋಕರು ಚಿತ್ರೀಕರಿಸಿದ ನಂತರ ರಾಜಾಜಿನಗರ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರ ಈ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಯಿತು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ವಾಹನವನ್ನು ಪತ್ತೆಹಚ್ಚಿ ಬಿಎನ್‌ಎಸ್ ಸೆಕ್ಷನ್ 281 (ಮಾನವ ಜೀವಕ್ಕೆ ಅಪಾಯವನ್ನುಂಟುಮಾಡುವ ಅಥವಾ ಗಾಯವನ್ನುಂಟುಮಾಡುವ ಸಾಧ್ಯತೆಯಿರುವ ಸಾರ್ವಜನಿಕ ರೀತಿಯಲ್ಲಿ ಅತಿವೇಗ ಅಥವಾ ನಿರ್ಲಕ್ಷ್ಯದ ಚಾಲನೆ ಅಥವಾ ಸವಾರಿ) ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ತೆರೆಯಲಾಯಿತು. ಅವರು ಸ್ಕೂಟರ್ ಅನ್ನು ಸಹ ವಶಪಡಿಸಿಕೊಂಡು ಕಾನೂನು ಕ್ರಮ ಕೈಗೊಂಡರು. ಆದಾಗ್ಯೂ, ಒಂದು ತಿರುವು ಸಿಕ್ಕಿತು: ಸ್ಕೂಟರ್ ಅನ್ನು ಶೇಷಾದ್ರಿಪುರಂ ನಿವಾಸಿ…

Read More

ಹರಿಯಾಣ: ಹರಿಯಾಣದಲ್ಲಿ ನಡೆದ ಅರೂಟಿನ್ ಸಾಪ್ತಾಹಿಕ ಹರಾಜು, HR88B8888 ನೋಂದಣಿ ಸಂಖ್ಯೆಯು 1.17 ಕೋಟಿ ರೂ.ಗಳಿಗೆ ಮಾರಾಟವಾದಾಗ, ಒಂದು ಪ್ರಮುಖ ಸುದ್ದಿಯಾಯಿತು. ಬುಧವಾರ ಸಂಜೆ 5 ಗಂಟೆಗೆ ಅಂತಿಮ ಬಿಡ್ ಪೂರ್ಣಗೊಂಡಿದ್ದು, ಇದು ಭಾರತದಲ್ಲಿ ಇದುವರೆಗೆ ಖರೀದಿಸಿದ ಅತ್ಯಂತ ದುಬಾರಿ ಕಾರು ನಂಬರ್ ಪ್ಲೇಟ್ ಆಗಿದೆ. ಹಳೆಯ ಜನರು ಬಲವಾದ ಸಾಂಕೇತಿಕ ಆಕರ್ಷಣೆಯನ್ನು ಹೊಂದಿದ್ದಾರೆಂದು ನಂಬುವ ಅಪರೂಪದ ಅಂಕೆಗಳ ಸಂಯೋಜನೆಗಾಗಿ ಬಿಡ್ಡರ್‌ಗಳು ತೀವ್ರವಾಗಿ ಸ್ಪರ್ಧಿಸಿದ್ದರಿಂದ ದಿನವಿಡೀ ನಿರ್ಮಾಣವಾದ ಉತ್ಸಾಹ. ಹರಿಯಾಣದ ವಿಐಪಿ ನಂಬರ್ ಪ್ಲೇಟ್ ಹರಾಜು ಹೇಗೆ? ಹರಿಯಾಣವು ಫ್ಯಾನ್ಸಿ ಅಥವಾ ವಿಐಪಿ ನೋಂದಣಿ ಸಂಖ್ಯೆಗಳಿಗಾಗಿ ಪ್ರತಿ ವಾರ ಆನ್‌ಲೈನ್ ಹರಾಜನ್ನು ನಡೆಸುತ್ತದೆ. ಅರ್ಜಿಗಳು ಶುಕ್ರವಾರ ಸಂಜೆ 5 ರಿಂದ ಸೋಮವಾರ ಬೆಳಿಗ್ಗೆ 9 ರವರೆಗೆ ತೆರೆದಿರುತ್ತವೆ. ನಂತರ ಬಿಡ್ಡರ್‌ಗಳು ಅಧಿಕೃತ fancy.parivahan.gov.in ಪೋರ್ಟಲ್‌ನಲ್ಲಿ ಬುಧವಾರ ಸಂಜೆ 5 ರವರೆಗೆ ನೇರ ಹರಾಜಿನಲ್ಲಿ ಭಾಗವಹಿಸುತ್ತಾರೆ. ಈ ವಾರ, HR88B8888 ಗರಿಷ್ಠ ಆಸಕ್ತಿಯನ್ನು ಆಕರ್ಷಿಸಿತು, ಇದಕ್ಕಾಗಿ ಬಿಡ್ ಮಾಡುವ ಅವಕಾಶಕ್ಕಾಗಿ 45 ಜನರು…

Read More

ಆಹಾರ ಸೇವನೆಯಲ್ಲೂ ಕೆಲವೊಂದು ನಿಯಮಗಳು ಇವೆ. ಈ 5 ಆಹಾರ ಪದ್ಧತಿಯನ್ನು ಪಾಲಿಸದಿದ್ದರೇ ಮನೆಯಲ್ಲಿ ಬಡತನ ತಾಂಡವಾಡುತ್ತದೆ. ಭೀಷ್ಮರು ಅರ್ಜುನನಿಗೆ ಹೇಳಿದ ಆ 5 ಆಹಾರ ಗುಟ್ಟೇನು ಕೂದಲು ಬಿದ್ದ ಆಹಾರವನ್ನು ಸೇವಿಸಿದರೆ ಏನಾಗುತ್ತದೆ ಎನ್ನುವ ಬಗ್ಗೆ ಮುಂದೆ ಓದಿ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ…

Read More

ನವದೆಹಲಿ: 2047ಕ್ಕೆ ವಿಕಸಿತ ಭಾರತ ಸಾಕಾರ ಮಾಡಲೇಬೇಕೆನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದ ಭಾಗವಾಗಿ ಸಿಂಟೆರ್ಡ್ ರೇರ್ ಅರ್ಥ್ ಪರ್ಮನೆಂಟ್ ಮ್ಯಾಗ್ನೆಟ್ಸ್ (REPM) ಉತ್ಪಾದನೆ ಉತ್ತೇಜಿಸಲು ₹7,280 ಕೋಟಿ ಮೊತ್ತದ ಅತ್ಯಂತ ಮಹತ್ವದ ಬೃಹತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಆರ್ ಇಪಿಎಂ ಪೂರಕ ವ್ಯವಸ್ಥೆಯನ್ನುರಾಷ್ಟ್ರದ ಉದ್ದಗಲಕ್ಕೂ ಉತ್ತೇಜಿಸಲು, ಈ ಕ್ಷೇತ್ರದಲ್ಲಿ ಸದೃಢವಾದ ಸ್ವಾವಲಂಬನೆ ಸಾಧಿಸಲು ಮತ್ತು ಜಾಗತಿಕ ಆರ್ ಇಪಿಎಂ ಮಾರುಕಟ್ಟೆಯಲ್ಲಿ ಭಾರತವನ್ನು ಪ್ರಮುಖ ರಾಷ್ಟ್ರವನ್ನಾಗಿ ಕೇಂದ್ರ ಸರ್ಕಾರವು ದಿಟ್ಟ ಇರಿಸಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಸಂಪುಟ ನಿರ್ಧಾರದ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿ ಪ್ರಧಾನಿಗಳಿಗೆ ಕೃತಜ್ಞತೆ ಸಲ್ಲಿಸಿರುವ ಸಚಿವರು; ಈ ಯೋಜನೆ 6,000 ಎಂಟಿಪಿಎ ಸಿಂಟೆರ್ಡ್ ಆರ್ ಇಪಿಎಂನ ಸ್ವದೇಶಿ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆಟೋಮೊಬೈಲ್, ರಕ್ಷಣೆ ಮತ್ತು ವೈಮಾನಿಕ ಕ್ಷೇತ್ರಗಳಿಗೆ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಮತ್ತು…

Read More

ಧಾರವಾಡ: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ನವಂಬರ್ 25, 2025 ರಂದು ಪ್ರಕಟಿಸಲಾಗಿದೆ. ಪ್ರಕಟಿತ ಕರಡು ಮತದಾರರ ಪಟ್ಟಿಯಲ್ಲಿ 43,573 ಪುರುಷರು ಮತ್ತು 30,743 ಮಹಿಳೆಯರು ಸೇರಿ ಒಟ್ಟು 74,316 ಮತದಾರರಿದ್ದಾರೆ ಎಂದು ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿಗಳು ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರಕಟಿತ ಕರಡು ಮತದಾರರ ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಬೆಳಗಾವಿ ವಿಭಾಗ ಪ್ರಾದೇಶಿಕ ಆಯುಕ್ತರು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಜಿಲ್ಲಾಧಿಕಾರಿಗಳು ಧಾರವಾಡ, ಜಿಲ್ಲಾಧಿಕಾರಿಗಳು ಗದಗ, ಜಿಲ್ಲಾಧಿಕಾರಿಗಳು ಹಾವೇರಿ ಮತ್ತು ಜಿಲ್ಲಾಧಿಕಾರಿಗಳು ಉತ್ತರಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಹಾಗೂ ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ. ಪ್ರಕಟಿತ ಕರಡು ಮತದಾರರ ಪಟ್ಟಿಯು ಬೆಂಗಳೂರು ಚುನಾವಣಾಧಿಕಾರಿ ಅವರ ವೆಬ್‍ಸೈಟ್ www.ceokarnatake.kar.nic.in ನಲ್ಲಿ ಹಾಗೂ ಬೆಳಗಾವಿ ಪ್ರಾದೇಶಿಕ ಕಾರ್ಯಾಲಯದ…

Read More