Subscribe to Updates
Get the latest creative news from FooBar about art, design and business.
Author: kannadanewsnow09
ಶಿವ ಮಂತ್ರಂ ಈ ಜಗತ್ತನ್ನು ರಕ್ಷಿಸುವ ಮತ್ತು ರಕ್ಷಿಸುವ ಅದ್ಭುತ ದೇವತೆಗಳಲ್ಲಿ ಶಿವನು ಒಬ್ಬ. ಶಿವನನ್ನು ಪೂಜಿಸಿದರೆ ಪುನರ್ಜನ್ಮ ಇರುವುದಿಲ್ಲ. ಅಂತಹ ಭಗವಾನ್ ಶಿವನನ್ನು ನಾವು ಆದಾಯವನ್ನು ಹೆಚ್ಚಿಸಲು ಅಥವಾ ಕುಟುಂಬದಲ್ಲಿ ಸಂತೋಷಕ್ಕಾಗಿ ಪೂಜಿಸಬೇಕಾದರೆ, ನಾವು ಅವರ ಪಂಚಾಚಾರ ಮಂತ್ರವನ್ನು ಹೇಗೆ ಜಪಿಸಬೇಕು ಎಂಬುದನ್ನು ನಾವು ಈ ಆಧ್ಯಾತ್ಮಿಕ ಪೋಸ್ಟ್ನಲ್ಲಿ ನೋಡಲಿದ್ದೇವೆ. ಸಾಮಾನ್ಯವಾಗಿ ಶಿವನ ಆರಾಧಕರು ಶಿವನ ಕೃಪೆಗೆ ಪಾತ್ರರಾಗಲು ಓಂ ನಮಶಿವಾಯ ಎಂಬ ಮಂತ್ರವನ್ನು ಪಠಿಸುತ್ತಾರೆ. ಈ ಮಂತ್ರವನ್ನು ಪ್ರತಿನಿತ್ಯ ಪಠಿಸುವವರೂ ಇದ್ದಾರೆ. ಶಿವನನ್ನು ಪೂಜಿಸುವಾಗ ಮಾತ್ರ ಅದನ್ನು ಜಪಿಸುವ ಜನರಿದ್ದಾರೆ. ಈ ಮಂತ್ರವನ್ನು ಜಪಿಸುವುದರಿಂದ ನಮ್ಮ ಮನಸ್ಸು ಯಾವುದರ ಮೇಲೂ ಮೋಹದಿಂದ ಮುಕ್ತವಾಗುತ್ತದೆ. ಹೀಗಾದರೆ ಕುಟುಂಬಕ್ಕೆ ಹೊಂದಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಹಣ ಸೇರಿಸುವ, ದ್ರವ್ಯ ಸೇರಿಸುವ, ಸಂಸಾರವನ್ನು ನೋಡುವ ಮತ್ತು ಸಂಸಾರವನ್ನು ಚೆನ್ನಾಗಿ ನೋಡಿಕೊಳ್ಳುವ ಯೋಚನೆಯಿಲ್ಲದೆ, ಶಿವನೇ ಮುಖ್ಯ, ಅವನಿಲ್ಲದೆ ಬೇರೇನೂ ಇಲ್ಲ ಎಂದು ಭಾವಿಸಿ ಮಂಗಳಕರವಾದ ತಪಸ್ಸಿನ ಹಂತ ತಲುಪುತ್ತದೆ. ಹಾಗಾಗಿ ಮಠಕ್ಕೆ ಹೋಗಬಯಸುವವರು ಓಂ ನಮಃಶಿವಾಯ…
ಹುಬ್ಬಳ್ಳಿ: ಜಿಲ್ಲೆಯಲ ವೀರಾಪುರ ಓಣಿಯಲ್ಲಿ ನಡೆದಿದ್ದಂತ ಯುವತಿ ಅಂಜಲಿ ಅಂಬಿಗೇರಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ಬೆಂಡಿಗೇರಿ ಠಾಣೆ ಇನ್ಸ್ ಪೇಕ್ಟರ್ ಹಾಗೂ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಯುವತಿ ಅಂಜಲಿ ಅಂಬಿಗೇರಿಯನ್ನು ವಿಶ್ವ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ಈ ಪ್ರಕರಣದ ನಂತ್ರ ಆರೋಪಿ ವಿಶ್ವ ಪರಾರಿಯಾಗಿದ್ದನು. ಆತನ ಬಂಧನಕ್ಕಾಗಿ ಎರಡು ತಂಡವನ್ನು ರಚಿಸಲಾಗಿದೆ. ಈ ಬೆನ್ನಲ್ಲೇ ಯುವತಿ ಅಂಜಲಿ ಅಂಬಿಗೇರಿಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಅಜ್ಜಿ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ವಹಿಸಬೇಕಿದ್ದಂತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಿದ್ದರು. ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಬೆಂಡಿಗೇರಿ ಠಾಣೆಯ ಇನ್ಸ್ ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ರೇಖಾ ಎಂಬುವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.…
ನವದೆಹಲಿ: ನೈಋತ್ಯ ಮಾನ್ಸೂನ್ ( southwest monsoon ) ಮೇ 31 ರ ಸುಮಾರಿಗೆ ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ. ಇದು ಭಾರತದ ಕೃಷಿ ಆಧಾರಿತ ಆರ್ಥಿಕತೆಗೆ ನಿರ್ಣಾಯಕವಾದ ನಾಲ್ಕು ತಿಂಗಳ ಮಳೆ ಋತುವಿಗೆ ವೇದಿಕೆಯನ್ನು ಕಲ್ಪಿಸುತ್ತದೆ. “ಈ ವರ್ಷ, ನೈಋತ್ಯ ಮಾನ್ಸೂನ್ ಮೇ 31 ರಂದು ಕೇರಳವನ್ನು ಪ್ರವೇಶಿಸುವ ಸಾಧ್ಯತೆಯಿದೆ” ಎಂದು ಭಾರತ ಹವಾಮಾನ ಇಲಾಖೆ ( India Meteorological Department-IMD) ಬುಧವಾರ ತಿಳಿಸಿದೆ. ಇದು ಬೇಗನೆ ಅಲ್ಲ. ಕೇರಳದಲ್ಲಿ ಮಾನ್ಸೂನ್ ಪ್ರಾರಂಭವಾಗುವ ಸಾಮಾನ್ಯ ದಿನಾಂಕ ಜೂನ್.1 ಆಗಿರುವುದರಿಂದ ಇದು ಸಾಮಾನ್ಯ ದಿನಾಂಕಕ್ಕೆ ಹತ್ತಿರದಲ್ಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಬುಧವಾರ ಹೇಳಿದ್ದಾರೆ. ಕಳೆದ ವರ್ಷ, ಜೂನ್-ಸೆಪ್ಟೆಂಬರ್ ನೈಋತ್ಯ ಮಾನ್ಸೂನ್ ಋತುವಿನಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿತ್ತು. ಖಾರಿಫ್ ಬೆಳೆಗೆ ಹೆಚ್ಚಿನ ಬಿತ್ತನೆ ಈ ಅವಧಿಯಲ್ಲಿ ನಡೆಯುವುದರಿಂದ ಜೂನ್ ಮತ್ತು ಜುಲೈ ಅನ್ನು ಕೃಷಿಗೆ ಪ್ರಮುಖ ಮಾನ್ಸೂನ್ ತಿಂಗಳುಗಳೆಂದು ಪರಿಗಣಿಸಲಾಗುತ್ತದೆ. ಹೇರಳವಾದ ಮಳೆಗೆ ಅನುಕೂಲಕರವಾದ ಎರಡು…
ಬೆಂಗಳೂರು: ಉತ್ತಮ ಶಾಲೆಗಳಿಗೆ ಸೇರಿಸಬೇಕು ಎಂಬುದು ಅನೇಕ ಮಕ್ಕಳ ಪೋಷಕರ ಆಸೆ. ಇದಕ್ಕೆ ಅವಕಾಶ ಮಾಡಿಕೊಟ್ಟಿದ್ದು ಆರ್ ಟಿಇ. ಈಗ ಆರ್ ಟಿ ಇ ಅಡಿಯಲ್ಲಿ ಅರ್ಜಿ ಸಲ್ಲಿಕೆಗೆ ಅವದಿಯನ್ನು ಮೇ.20ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಹಂಚಿಕೊಂಡಿದ್ದು, ಏಪ್ರಿಲ್.22ರವರೆಗೆ ಆರ್ ಟಿ ಇ ಅಡಿಯಲ್ಲಿ ದಾಖಲಾತಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಇದನ್ನು ಪೋಷಕರ ಕೋರಿಕೆ, ಮನವಿಯ ಮೇರೆಗೆ ಮೇ.20ರವರಗೆ ವಿಸ್ತರಣೆ ಮಾಡಲಾಗಿದೆ ಎಂದಿದ್ದಾರೆ. ಮೇ 30ರ ವರೆಗೆ ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ದತೆ ಕುರಿತ ಅರ್ಜಿಗಳ ಪರಿಶೀಲನೆ ನಡೆಸಲಿದ್ದು, ಪಟ್ಟಿಯನ್ನು ಅಂತಿಮಗೊಳಿಸಿದ ನಂತರ ಜೂನ್ 1 ರಂದು ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಜೂನ್ 5 ರಂದು ಆನ್ ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಲಾಗುತ್ತದೆ. ಜೂನ್ 6 ರಿಂದ ಶಾಲೆಗಳಲ್ಲಿ ಆರ್ಟಿಇ ಅಡಿ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಳ್ಳಲಿದೆ. ಜೂನ್ 6 ರಿಂದ 14ರ…
ಕೆಎನ್ಎನ್ ಸ್ಪೋರ್ಟ್ಸ್: ಫೆಡರೇಶನ್ ಕಪ್ 2024ರ ಪಂದ್ಯಾವಳಿಯಲ್ಲಿ ಭಾರತದ ನೀರಜ್ ಚೋಪ್ರಾ ಅವರು ಜಾವಲಿನ್ ಫೈನಲ್ ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. ನೀರಜ್ ಚೋಪ್ರಾ 82.27 ಮೀಟರ್ ದೂರ ಜಿಗಿದು ಚಿನ್ನ ಗೆದ್ದರು. ಡಿ.ಪಿ.ಮನು 82.06 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರು. ನೀರಜ್ ನಿಧಾನವಾಗಿ ಪ್ರಾರಂಭಿಸಿದರು. ಆದರೆ ತಮ್ಮ ನಾಲ್ಕನೇ ಪ್ರಯತ್ನದಲ್ಲಿ ಡಿಪಿ ಮನು ಅವರನ್ನು ಹಿಂದಿಕ್ಕಿದರು. ಹಾಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಪ್ರಸ್ತುತ ಫೆಡರೇಶನ್ ಕಪ್ 2024 ರ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್ನಲ್ಲಿ ಸ್ಪರ್ಧಿಸುತ್ತಿದ್ದರು. ಸ್ಥಳದಲ್ಲಿ ವರದಿಗಾರರ ಪ್ರಕಾರ, ನೀರಜ್ ತನ್ನ ತರಬೇತುದಾರರೊಂದಿಗೆ ಅನಿಮೇಟೆಡ್ ಚಾಟ್ನಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ. ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಮೈದಾನಕ್ಕಿಳಿಯುವ ಮೂಲಕ ನೀರಜ್ ಮೂರು ವರ್ಷಗಳ ನಂತರ ಫೆಡರೇಶನ್ ಕಪ್ಗೆ ಮರಳಿದ್ದಾರೆ. 2021ರಲ್ಲಿ ನೀರಜ್ 87.80 ಮೀಟರ್ ಎಸೆದು ಚಿನ್ನದ ಪದಕ ಗೆದ್ದಿದ್ದರು. ಕಳೆದ ವಾರ ದೋಹಾ ಡೈಮಂಡ್ ಲೀಗ್ನಲ್ಲಿ ನೀರಜ್ 88.36 ಮೀಟರ್ ಎಸೆದು…
ಹುಬ್ಬಳ್ಳಿ: ಇಂದು ಹುಬ್ಬಳ್ಳಿಯಲ್ಲಿ ನಡೆದಿದ್ದಂತ ಅಂಜಲಿ ಅಂಬಿಗೇರೆ ಹತ್ಯೆ ಪ್ರಕರಣ ಸಂಬಂಧ ಆರೋಪಿ ಪತ್ತೆಗಾಗಿ ಎರಡು ವಿಶೇಷ ತಂಡ ರಚನೆ ಮಾಡಲಾಗಿದೆ ಅಂತ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಅಂಜಲಿ ಅಂಬಿಗೇರ ಹತ್ಯೆ ಆರೋಪಿ ವಿಶ್ವ ಆಲಿಯಾಸ್ ಗಿರೀಶ್ ಪರಿಚಯಸ್ಥನೇ ಆಗಿದ್ದಾನೆ. ಇಂದು ಮುಂಜಾನೆ ಅಂಜಲಿಗೆ 4 ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿ, ಪರಾರಿಯಾಗಿದ್ದಾನೆ ಎಂದರು. ಅಂಜಲಿ ಮನೆಯವರ ಪ್ರಕಾರ ವಿಶ್ವ ಪ್ರೀತಿಸುತ್ತಿದ್ದನು. ಆದ್ರೇ ಅಂಜಲಿ ವಿಶ್ವ ಆಲಿಯಾಸ್ ಗಿರೀಶ್ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ. ಆರೋಪಿಯ ಪತ್ತೆಗಾಗಿ 2 ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ತಿಳಿಸಿದರು. https://kannadanewsnow.com/kannada/are-you-suffering-from-diabetes-here-are-the-control-tips/ https://kannadanewsnow.com/kannada/a-gods-miracle-in-the-state-akkanamma-finds-marammas-stone-thrown-into-lake-10-years-ago/
ದೇವಸ್ಥಾನದಲ್ಲಿ ತೀರ್ಥ ಕೊಟ್ಟಾಗ ಸಂಕಲ್ಪವನ್ನು ಮಾಡದೆ ಸೇವಿಸಿ ತಲೆಗೆ ಒರೆಸಿಕೊಂಡರೆ ಕರ್ಮಗಳನ್ನು ಹೊತ್ತಿಕೊಂಡಂತಾಗುತ್ತದೆ: ಪ್ರತಿಯೊಬ್ಬರೂ ಇಷ್ಟಪಟ್ಟು ದೇವಸ್ಥಾನಕ್ಕೆ ಹೋಗುತ್ತಾರೆ. ಎಲ್ಲರೂ ಕೂಡ ತಮ್ಮ ಕಷ್ಟಗಳು ದೂರವಾಗಲಿ, ಇಷ್ಟಾರ್ಥಗಳು ಸಿದ್ಧಿಯಾಗಲಿ, ದರಿದ್ರತನ ದೂರವಾಗಲಿ ಎಂದು ಎಲ್ಲರೂ ದೇವಸ್ಥಾನಕ್ಕೆ ತೆರಳುತ್ತಾರೆ. ಹಾಗಾಗಿ ನಮ್ಮ ಕರ್ಮಗಳು, ಪಾಪಗಳು ನಿವಾರಣೆಯಾಗಲಿ ಎಂದು ಹೋಗುತ್ತೇವೆ ಆದರೆ ದೇವಸ್ಥಾನದ ಒಳಗೆ ಪ್ರವೇಶ ಮಾಡಿದ ಮೇಲೆ ನಾವು ಮಾಡುವಂತ ಚಿಕ್ಕ ಚಿಕ್ಕ ತಪ್ಪುಗಳು ಪುನ ನಮ್ಮ ಹೆಗಲ ಮೇಲೆ ಕರ್ಮಗಳನ್ನು ಹಾಕಿ ಹೊರದಬ್ಬುತ್ತದೆ. ವಿದ್ವಾನ್ ವಿದ್ಯಾಧರ್ ತಂತ್ರಿ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ…
ಶಿವಮೊಗ್ಗ: ದಾರಿಯಲ್ಲಿ ಕಳೆದುಕೊಂಡ ವಸ್ತುವನ್ನು ಹುಡುಕೋದೇ ಕಷ್ಟ. ಇನ್ನೂ ಕೆರೆಗೆ ಎಸೆದಿದ್ದಂತ ವಸ್ತುವನ್ನು ಹುಡುಕೋದು ಸಾಧ್ಯವೇ.? ಇಲ್ಲ ಅನ್ನೋದೇ ಅನೇಕರ ಮಾತು. ಆದ್ರೇ ರಾಜ್ಯದಲ್ಲೊಂದು ದೇವರ ಪವಾಡ ಎನ್ನುವಂತೆ 10 ವರ್ಷಗಳ ಹಿಂದೆ ಕೆರೆಗೆ ಎಸೆದಿದ್ದಂತ ಮಾರಮ್ಮನ ಕಲ್ಲನ್ನು ತೆರವಿನಕೊಪ್ಪದ ಅಕ್ಕನಾಗಮ್ಮ ದೇವರು ಹುಡುಕಿಕೊಟ್ಟು ಪವಾಡ ಮೆರೆದಿದ್ದಾಳೆ. ಅದು ಹೇಗೆ.? ಏನು ಕತೆ ಅಂತ ಮುಂದೆ ಓದಿ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮಳಲಗದ್ದೆಯಲ್ಲಿ 10 ವರ್ಷಗಳ ಹಿಂದೆ ಗ್ರಾಮದಲ್ಲಿದ್ದಂತ ದೇವಸ್ಥಾನವನ್ನು ಜೀರ್ಣೋದ್ಧಾರ ಕಾರ್ಯವನ್ನು ನಡೆಸಲಾಗಿತ್ತು. ಗ್ರಾಮದ ಹಳೆಯ ದೇವಸ್ಥಾನ ತೆರವುಗೊಳಿಸಿ, ಹೊಸದಾಗಿ ದೇವಸ್ಥಾನವನ್ನು ನಿರ್ಮಿಸಲಾಗಿತ್ತು. ಈ ದೇವಸ್ಥಾನದಲ್ಲಿ ವಿದ್ಯುಕ್ತವಾಗಿ ಪರುಶುರಾಮ ಹಾಗೂ ರೇಣುಕದ ಎಲ್ಲಮ್ಮನನ್ನು ಪ್ರತಿಸ್ಥಾಪಿಸಲಾಗಿತ್ತು. ದೇವರ ಮೂರ್ತಿಗೆ ಜೀವಕಳೆಯನ್ನು ಭಟ್ರು ತುಂಬಿದ್ದರು. ಆದ್ರೇ ಹೊಸ ದೇವಸ್ಥಾನದಲ್ಲಿದ್ದಂತ ಕಲ್ಲಿನಲ್ಲಿ ಯಾವುದೇ ಶಕ್ತಿಯಿಲ್ಲ. ಅದನ್ನ ತೆಗೆದುಕೊಂಡು ಹೋಗಿ ಯಾವುದಾದರೂ ಕೆರೆಗೆ ಹಾಕಿ ಬನ್ನಿ ಅಂತ ಹೇಳಿದ್ದರು. ಹೀಗಾಗಿ ಮಳಲಗದ್ದೆಯ 8 ಜನರು ಆ ಕಲ್ಲನ್ನು ತೆಗೆದುಕೊಂಡು ಹೋಗಿ ಕೆಳದಿಯ ಕೆರೆಯಲ್ಲಿ ಹಾಕಿ…
ರಾಂಚಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಮತ್ತು ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂ ಅವರನ್ನು ಜಾರಿ ನಿರ್ದೇಶನಾಲಯ ಬುಧವಾರ ಬಂಧಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಎರಡನೇ ದಿನದ ವಿಚಾರಣೆಯ ನಂತರ ಸುಮಾರು ಆರು ಗಂಟೆಗಳ ವಿಚಾರಣೆಯ ನಂತರ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ 70 ವರ್ಷದ ಅವರನ್ನು ಏಜೆನ್ಸಿಯ ವಲಯ ಕಚೇರಿಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವಾರ ಆಲಂ ಅವರ ಆಪ್ತ ಕಾರ್ಯದರ್ಶಿ ಮತ್ತು ರಾಜ್ಯ ಆಡಳಿತ ಸೇವಾ ಅಧಿಕಾರಿ ಸಂಜೀವ್ ಕುಮಾರ್ ಲಾಲ್ (52) ಮತ್ತು ಅವರ ಮನೆಕೆಲಸಗಾರ ಜಹಾಂಗೀರ್ ಆಲಂ (42) ಅವರನ್ನು ಬಂಧಿಸಲಾಗಿತ್ತು. https://twitter.com/Mukesh_TNIE/status/1790729519227428945 ಮನಿ ಲಾಂಡರಿಂಗ್ ತನಿಖೆಯು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಅಕ್ರಮಗಳು ಮತ್ತು “ಲಂಚ” ಪಾವತಿಗೆ ಸಂಬಂಧಿಸಿದೆ. ಬಂಧಿತ ಇಬ್ಬರು ವ್ಯಕ್ತಿಗಳನ್ನು ರಿಮಾಂಡ್ಗೆ ಕೋರುವಾಗ, ಲಾಲ್ ಕೆಲವು ಪ್ರಭಾವಿ ವ್ಯಕ್ತಿಗಳ ಪರವಾಗಿ “ಕಮಿಷನ್” ಸಂಗ್ರಹಿಸಿದ್ದಾರೆ ಮತ್ತು ಗ್ರಾಮೀಣ ಇಲಾಖೆಯ “ಮೇಲಿನಿಂದ…
ಹಾವೇರಿ: ನೇಹಾ ಹಿರೇಮಠ್ ಕೊಲೆ ಪ್ರಕರಣ ಮಾಸೋ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಯುವತಿ ಹತ್ಯೆ ಘಟನೆ ನಡೆದಿದೆ. ಈ ಘಟನೆಗೆ ಕಾರಣವಾದಂತ ಕೊಲೆಗಡುಕನನ್ನು ಗಲ್ಲಿಗೇರಿಸಬೇಕು ಎಂಬುದಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ. ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಮತ್ತೊಬ್ಬ ಯುವತಿಯ ಹತ್ಯೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವುದ್ದಕ್ಕೆ ಸಾಕ್ಷಿ. ಇಂತಹ ಹೇಯ ಕೃತ್ಯ ಯಾರೇ ಮಾಡಿರಲಿ ಅವರನ್ನು ತಂದು ಗಲ್ಲಿಗೇರಿಸಿ, ಶಿಕ್ಷೆ ಕೊಡಿಸಿ ಎಂದು ಒತ್ತಾಯಿಸಿದರು. ಹಾಡಹಗಲೇ ಇಂತಹ ಘೋರ ಕೃತ್ಯ ನಡೆದರೂ ಪೊಲಿಸರು ರಾಜಕಾರಣದ ಪ್ರಕರಣಗಳು ಜಾತಿನಿಂದನೆ ಪ್ರಕರಣ ದಾಖಲಿಸುವುದು ಕ್ಲಬ್ ನಡೆಸುವುದರಲ್ಲಿ ಮಗ್ನರಾಗಿದ್ದಾರೆ. ಈ ರೀತಿಯಲ್ಲಿ ಕೊಲೆ, ಅತ್ಯಾಚಾರಗಳು ನಡೆಯುತ್ತಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ರಾಜ್ಯ ಸರಕಾರವೇ ಮುಂದೆ ನಿಂತು ಕುಮ್ಮಕ್ಕು ನೀಡುವುದನ್ನು ನಾನು ನೋಡಿರಲಿಲ್ಲ. ಇದೊಂದು ಜನವಿರೋಧಿ ಸರಕಾರ ಎಂದು ವಾಗ್ದಾಳಿ ನಡೆಸಿದರು. https://kannadanewsnow.com/kannada/slovak-prime-minister-robert-fico-was-injured-in-a-shooting-after-a-government-meeting/ https://kannadanewsnow.com/kannada/breaking-hc-gives-clean-chit-to-sandeep-lamichhane-likely-to-play-for-nepal-in-2024-t20-world-cup/