Author: kannadanewsnow09

ದೇವಾಲಯದಲ್ಲಿ ಮನೆಯಲ್ಲಿರುವಂತೆ ಮರದಿಂದಲ್ಲದೆ ಹೊಸಿಲನ್ನು ಕಲ್ಲಿನಿಂದ ನಿರ್ಮಿಸುತ್ತಾರೆ. ಕಲ್ಲು ಪರ್ವತಕ್ಕೆ ಸೇರಿದುದಾಗಿದೆ. ಭದ್ರನೆಂಬ ಋಷಿಯು ಭದ್ರವೆಂಬ ಪರ್ವತವಾಗಿಯೂ, ಹಿಮವಂತ ನೆಂಬ ಭಕ್ತನು ಹಿಮಾಲಯವಾಗಿಯೂ, ನಾರಾಯಣನೆಂಬ ಭಕ್ತನು ನಾರಾಯಣಾದ್ರಿಯಾಗಿಯೂ ಅವತರಿಸಿದರೆಂದು ಪುರಾಣಗಳು ಹೇಳುತ್ತಿವೆ. ದೇವರು ಆ ಭಕ್ತರಿಗಾಗಿ ಆ ಬೆಟ್ಟಗಳ ಮೇಲೆಯೇ ನೆಲೆಸಿದ್ದಾನೆ. ಆದುದರಿಂದ ಆ ಬೆಟ್ಟದ ಕಲ್ಲಿನಿಂದ ಬಂದ ಕಲ್ಲನ್ನೇ ಹೊಸಿಲಾಗಿ ಮಾರ್ಪಡಿಸಿ ಇಡುತ್ತಾರೆ. ಪ್ರತಿದಿನವೂ ದೇವರನ್ನು ದರ್ಶನ ಮಾಡುವ ಆ ಹೊಸಿಲಿನ ಪುಣ್ಯಕ್ಕೆ ನಮಸ್ಕರಿಸುತ್ತಾ ಹಾಗೆಯೇ ಅಂತಹ ಮಹಾಭಕ್ತನನ್ನು ದಾಟುತ್ತಿರುವುದಕ್ಕೆ ಕ್ಷಮಿಸೆಂದು ಬೇಡಿಕೊಳ್ಳುವುದೇ ಹೊಸಿಲಿಗೆ ನಮಸ್ಕರಿಸುವುದರಲ್ಲಿನ ಅಂತರಾರ್ಥವಾಗಿದೆ. https://youtu.be/5NzsEehoEi4 ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ…

Read More

ಬೆಂಗಳೂರು: ರಾಜ್ಯದ ಅರ್ಚಕರಿಗೆ ಸಚಿವ ರಾಮಲಿಂಗಾರೆಡ್ಡಿ ಗುಡ್ ನ್ಯೂಸ್ ನೀಡಿದ್ದಾರೆ. 14 ಸಾವಿರ ಅರ್ಚಕರ ಬ್ಯಾಂಕ್ ಖಾತೆಗೆ ತಸ್ತಿಕ್ ಮೊತ್ತ ನೇರವಾಗಿ ಜಮೆ ಮಾಡುವುದಾಗಿ ತಿಳಿಸಿದ್ದಾರೆ. ದೇವಸ್ಥಾನಗಳ ಅರ್ಚಕರಿಗೆ ತಸ್ತಿಕ್‌ ಮೊತ್ತ ನೇರ ಪಾವತಿ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಅಗತ್ಯ ದಾಖಲೆ ಒದಗಿಸಿದ 14 ಸಾವಿರ ಅರ್ಚಕರ ಬ್ಯಾಂಕ್‌ ಖಾತೆಗಳಿಗೆ ತಸ್ತಿಕ್‌ ಮೊತ್ತ ನೇರ ಜಮೆಯಾಗುತ್ತಿದ್ದು, ಉಳಿದ 21 ಸಾವಿರ ಅರ್ಚಕರಿಗೆ ಈ ಸೌಲಭ್ಯ ವಿಸ್ತರಣೆಯಾಗಲಿದೆ ಎಂದು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. https://twitter.com/KarnatakaVarthe/status/1932424713151586740 https://kannadanewsnow.com/kannada/a-single-phone-call-rs-1-4-crores-disappeared-from-the-account-you-will-be-shocked-to-know-how-it-happened/

Read More

ಬೆಂಗಳೂರು: ಬೆಂಗಳೂರಿನ ಉತ್ತರ ಭಾಗದಲ್ಲಿ ಪಾರ್ಕಿಂಗ್ ನಿಷೇಧಿತ ವಲಯಗಳಲ್ಲಿ ನಿಲ್ಲಿಸಲಾದ ವಾಹನಗಳನ್ನು ಮತ್ತೆ ಟೋಯಿಂಗ್ ಮಾಡಿಕೊಂಡು ಕೊಂಡೊಯ್ಯಲಾಗಿದೆ. ಈ ಮೂಲಕ ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭಗೊಂಡಿದ್ದು, ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೇ 500 ದಂಡ ತೆರಬೇಕಾಗಿದ್ದು ಗ್ಯಾರಂಟಿಯಾಗಿದೆ. ಮಂಗಳವಾರ, ಈಶಾನ್ಯ ಉಪವಿಭಾಗದ ಸಂಚಾರ ಪೊಲೀಸರು ಬ್ಯಾಟರಾಯನಪುರದ ಫೀನಿಕ್ಸ್ ಮಾಲ್ ಆಫ್ ಏಷ್ಯಾದ ಸುತ್ತಮುತ್ತಲಿನ ಪಾರ್ಕಿಂಗ್ ನಿಷೇಧಿತ ವಲಯಗಳಲ್ಲಿ ನಿಲ್ಲಿಸಲಾದ ಕಾರುಗಳನ್ನು ಎತ್ತಿಕೊಂಡು ಹೋಗಲು ಪ್ರಾರಂಭಿಸಿದರು. ವಿಶೇಷವಾಗಿ ಸಂಜೆ ಈ ಪ್ರದೇಶದಲ್ಲಿ ನಿಯಮಿತವಾಗಿ ಉಂಟಾಗುವ ಸಂಚಾರ ದಟ್ಟಣೆಯನ್ನು ನಿವಾರಿಸಲು. ಯಾವುದೇ ಖಾಸಗಿ ವ್ಯಕ್ತಿಗಳ ಹಸ್ತಕ್ಷೇಪವಿಲ್ಲದೆ, ಮಾಲ್ ಸುತ್ತಲೂ ನಿಲ್ಲಿಸಲಾದ ವಾಹನಗಳನ್ನು ಎಳೆಯಲು ಅವರು ತಮ್ಮ ಸ್ವಂತ ವಾಹನ ಮತ್ತು ಸಿಬ್ಬಂದಿಯನ್ನು ಬಳಸುತ್ತಿದ್ದಾರೆ. ನಾವು ನಮ್ಮ ಸಿಬ್ಬಂದಿ ನಿರ್ವಹಿಸುವ ನಮ್ಮ ಸ್ವಂತ ವಾಹನವನ್ನು ಬಳಸಿದ್ದೇವೆ. ಆದ್ದರಿಂದ ಯಾರನ್ನೂ ಒಪ್ಪಂದದ ಆಧಾರದ ಮೇಲೆ ನೇಮಿಸಲಾಗಿಲ್ಲ. ಯಾವುದೇ ಟೋಯಿಂಗ್ ಶುಲ್ಕವನ್ನು ಸಂಗ್ರಹಿಸಲಾಗುವುದಿಲ್ಲ, ನೋ ಪಾರ್ಕಿಂಗ್ ಉಲ್ಲಂಘನೆಗಾಗಿ ರೂ. 500 ದಂಡವನ್ನು ಮಾತ್ರ ವಿಧಿಸಲಾಗುತ್ತದೆ ಎಂದು ಚಟುವಟಿಕೆಯ…

Read More

ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರ ಬಹು ದಿನಗಳ ಬೇಡಿಕೆಯಲ್ಲಿ ಎನ್ ಪಿ ಎಸ್ ರದ್ದುಗೊಳಿಸಿ, ಓಪಿಎಸ್ ಜಾರಿ ಮಾಡುವುದಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸುವುದಾಗಿ ಹೇಳಿತ್ತು. ಅದರಂತೆ ಈಗ ರಾಜ್ಯ ಸರ್ಕಾರವು ಈ ಇಲಾಖೆಯ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ ಅಧಿಕೃತ ಆದೇಶ ಮಾಡಿದೆ. ಈ ಸಂಬಂಧ ಬೆಂಗಳೂರು ಜಲ ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಹಾಗೂ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೊಳಪಟ್ಟ ನೌಕರರು ದಿನಾಂಕ 01-04-2006ರ ಪೂರ್ವದಲ್ಲಿ ಬ್ಯಾಕ್ ಲಾಗ್ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆ ಹೊಂದಿ ದಿನಾಂಕ 01-04-2006ರ ನಂತ್ರದಲ್ಲಿ ಮಂಡಳಿಯ ಸೇವೆಗೆ ಸೇರಿರುವುದರಿಂದ ಸರ್ಕಾರದ ಆದೇಶದನ್ವಯ ಅವರನ್ನು ಹಿಂದಿನ ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ( OPS) ವ್ಯಾಪ್ತಿಗೊಳಪಡಿಸಿ ಆದೇಶಿಸಿದ್ದಾರೆ. ಈ ಅಧಿಕಾರಿ, ನೌಕರರು ಎನ್ ಪಿ ಎಸ್ ವಂತಿಕೆಗಳನ್ನು ಹಿಂಪಡೆದು ಇತ್ಯರ್ಥಪಡಿಸಲು ಸರ್ಕಾರದ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಅನುಸರಿಸಲು ಕ್ರಮವಹಿಸುವುದು. ಮಂಡಳಿಯ ಎಲ್ಲಾ ಬಟವಾಡೆ ಅಧಿಕಾರಿಗಳು ಮೇಲಿನ ಅಧಿಕಾರಿ, ನೌಕರರ…

Read More

ಮಂಡ್ಯ: ಬಿರಿಯಾನಿ ಅಂದ್ರೆ ಅನೇಕರು ಇಷ್ಟ ಪಡ್ತಾರೆ. ರುಚಿಯಾಗಿದ್ದರಂತೂ ಆ ಹೋಟೆಲ್ ಗೆ ಖಾಯಂ ಗಿರಾಕಿ ಆಗಿಬಿಡ್ತಾರೆ. ಹೀಗೆ ನೀವು ಬಿರಿಯಾನಿ ರುಚಿಯಾಗಿರುತ್ತೆ ಅಂತ ತಿನ್ನೋದಕ್ಕೆ ಹೋಗೋ ಮುನ್ನಾ ಶಾಕಿಂಗ್ ಸುದ್ದಿ ಮುಂದಿದೆ ಓದಿ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಚಿನಕುರಳಿ ಗ್ರಾಮದಲ್ಲಿ ಜನರಿಗೆ ನಾಯಿ‌ ಮಾಂಸ ತಿನ್ನಿಸುತ್ತಿದ್ದ ಅನ್ಯಕೋಮಿನ ವ್ಯಕ್ತಿ ಬಂಧಿಸಲಾಗಿದೆ. ಚಿನಕುರಳಿ ಗ್ರಾಮದಲ್ಲಿ ಮದೀನಾ ಹೆಸರಿನ ಹೋಟೇಲ್ ಅನ್ನು ಅನ್ಯಕೋಮಿನ ವ್ಯಕ್ಯಿ ನಡೆಸುತ್ತಿದ್ದನು. ತನ್ನ ಹೋಟೇಲ್ ನಲ್ಲಿ ಬಿರಿಯಾನಿಗೆ ನಾಯಿ ಮಾಂಸ ಬೆರಿಸಿ ಜನರಿಗೆ ತಿನ್ನಿಸ್ತಿದ್ದ ಆರೋಪ ಮಾಡಲಾಗಿತ್ತು. ಮಂಗಳವಾರದಂದು ನಾಯಿ ಮಾಂಸದ ಸಾಕ್ಷಿಯೊಂದಿಗೆ ಜನರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಹೀಗಾಗಿ ಹೋಟೆಲ್ ಮಾಲೀಕ ಅಜಾದ್ ನನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದಕ್ಕೂ ಮುನ್ನಾ ಮದೀನಾ ಹೋಟೇಲ್ ನಲ್ಲಿ ನಾಯಿ ಮಾಂಸದ ಬಿರಿಯಾನಿ ತಿನ್ನಿಸಿದ್ದಕ್ಕೆ ರೊಚ್ಚಿಗೆದ್ದ ಜನರಿಂದ ಆರೋಪಿಗೆ ಧರ್ಮಧೇಟು ನೀಡಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಪಾಂಡವಪುರ…

Read More

ನವದೆಹಲಿ: 2025 ರಲ್ಲಿ ಅಂದಾಜು 1.46 ಶತಕೋಟಿ ಜನರೊಂದಿಗೆ ಭಾರತವು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಮುಂದುವರೆದಿದ್ದರೂ, ದೇಶದ ಒಟ್ಟು ಫಲವತ್ತತೆ ದರವು 1.9 ಕ್ಕೆ ಇಳಿದಿದೆ. ಇದು ಬದಲಿ ಮಟ್ಟ 2.1 ಕ್ಕಿಂತ ಕಡಿಮೆಯಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) ಇತ್ತೀಚಿನ ವರದಿಯಲ್ಲಿ ತಿಳಿಸಲಾಗಿದೆ. 2025 ರ ವಿಶ್ವ ಜನಸಂಖ್ಯಾ ಸ್ಥಿತಿ (SOWP) ವರದಿಯು ನಿಜವಾದ ಬಿಕ್ಕಟ್ಟು ಜನಸಂಖ್ಯೆಯ ಗಾತ್ರದಲ್ಲಿಲ್ಲ, ಬದಲಿಗೆ ಯಾವಾಗ, ಮತ್ತು ಎಷ್ಟು ಮಕ್ಕಳನ್ನು ಹೊಂದಬೇಕು ಎಂಬುದನ್ನು ಮುಕ್ತವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ಧರಿಸುವ ವ್ಯಕ್ತಿಗಳ ಹಕ್ಕನ್ನು ಬೆಂಬಲಿಸುವ ವ್ಯಾಪಕ ಸವಾಲುಗಳಲ್ಲಿದೆ ಎಂದು ಒತ್ತಿಹೇಳುತ್ತದೆ. ಯುಎನ್ ವರದಿಯು “ಪ್ರಸ್ತುತ ಭಾರತದ ಜನಸಂಖ್ಯೆ 1,463.9 ಮಿಲಿಯನ್” ಎಂದು ಅಂದಾಜಿಸಿದೆ. “ಭಾರತವು ಈಗ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದ್ದು, ಸುಮಾರು 1.5 ಶತಕೋಟಿ ಜನರನ್ನು ಹೊಂದಿದೆ. ಇದು ಕುಸಿಯಲು ಪ್ರಾರಂಭಿಸುವ ಮೊದಲು ಸುಮಾರು 1.7 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ” ಎಂದು ವರದಿ ಹೇಳಿದೆ.…

Read More

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಮುಂದುವರೆದಿದೆ. ಇಂದು ಇಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ. ಅಲ್ಲದೇ 67 ಜನರಿಗೆ ಕೊರೋನಾ ಪಾಸಿಟಿವ್ ಅಂತ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕಳೆದ 24 ಗಂಟೆಯಲ್ಲಿ 571 ಜನರನ್ನು ಕೋವಿಡ್ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 67 ಜನರಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿಸಿದೆ. ಇನ್ನೂ ಕಳೆದ 24 ಗಂಟೆಯಲ್ಲಿ ಸೋಂಕಿತರಾದಂತ 165 ಜನರು ಗುಣಮುಖರಾಗಿದ್ದಾರೆ. ಆರು ಮಂದಿ ಸೋಂಕಿತರು ಆಸ್ಪತ್ರೆಯಲ್ಲಿ, 453 ಜನರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸದ್ಯ 459 ಸಕ್ರೀಯ ಸೋಂಕಿತರು ಇರುವುದಾಗಿ ಹೇಳಿದೆ. https://twitter.com/DHFWKA/status/1932442924887036155 https://kannadanewsnow.com/kannada/the-theoretical-approval-for-the-caste-census-report-decision-for-re-survey-cm-siddaramaiah/ https://kannadanewsnow.com/kannada/a-single-phone-call-rs-1-4-crores-disappeared-from-the-account-you-will-be-shocked-to-know-how-it-happened/

Read More

ನವದೆಹಲಿ : ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎದ್ದಿರುವ ಹಿನ್ನಲೆಯಲ್ಲಿ, ಈಗಾಗಲೇ ಸಲ್ಲಿಕೆಯಾಗಿರುವ ಜಾತಿಗಣತಿ ವರದಿಗೆ ತಾತ್ವಿಕ ಒಪ್ಪಿಗೆ ನೀಡಿ, ಸಮೀಕ್ಷೆಗೆ ಮರುಗಣತಿ ನಡೆಸಲು ನಿರ್ಧಾರ ಕೈಗೊಂಡಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇಂದು ಕರ್ನಾಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗಿದೆ. ವಿವಿಧ ಜಾತಿಗಳ ಸಂಘಸಂಸ್ಥೆಗಳು, ಮಠಾಧೀಶರು, ಸಮುದಾಯದಗಳ ಮುಖಂಡರು, ಸಚಿವರು ಜಾತಿಗಣತಿ ವರದಿ ಬಗ್ಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚಿಸಲಾಗಿ, ಜಾತಿಗಣತಿ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳುವುದು ಹಾಗೂ ಜಾತಿ ಗಣತಿಯ ದತ್ತಾಂಶ ಹತ್ತು ವರ್ಷ ಹಳೆಯದಾಗಿರುವುದರಿಂದ ಮರುಗಣತಿ ಮಾಡಲು ತೀರ್ಮಾನಿಸಲಾಗಿದೆ. ಈಗಾಗಲೇ ಪರಿಶಿಷ್ಟ ಜಾತಿಗಳ ಜನಗಣತಿ ನಡೆದಂತೆ, ಇತರೆ ಜಾತಿಗಳ ಗಣತಿಯನ್ನು ಹೊಸದಾಗಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಮೀಕ್ಷಾ ಕಾರ್ಯವನ್ನು 90 ದಿನದೊಳಗೆ ಪೂರ್ಣಗೊಳಿಸಿ ವರದಿ ನೀಡಬೇಕಾಗುವುದು ಎಂದು ತಿಳಿಸಿದರು. ಕಾಲ್ತುಳಿತ ಪ್ರಕರಣ: ಸರ್ಕಾರದ ಕ್ರಮಗಳ ಬಗ್ಗೆ ವರಿಷ್ಠರಿಗೆ ವಿವರಣೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದ…

Read More

ಬೆಂಗಳೂರು: ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ತಯಾರಿಕಾ ವಲಯದಲ್ಲಿ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸರಕಾರವು 6 ಪ್ರಮುಖ ವಲಯಗಳ ಪ್ರಗತಿಗೆ ಪ್ರತ್ಯೇಕ ಟಾಸ್ಕ್-ಫೋರ್ಸ್ ಗಳನ್ನು ರಚಿಸಲಿದೆ. ಇದಕ್ಕೆ ಬೇಕಾದ ಸಮಗ್ರ ಟೌನ್-ಶಿಪ್ ಗಳ ಅಭಿವೃದ್ಧಿಯಿಂದ ಹಿಡಿದು ಕೈಗಾರಿಕಾ ಪ್ರದೇಶಗಳಿಂದ ಮಂಗಳೂರು ಮತ್ತು ಚೆನ್ನೈ ಬಂದರುಗಳಿಗೆ ಬೇಕಾದ ಸಮರ್ಪಕ ಸಂಪರ್ಕದವರೆಗೆ ಪ್ರತಿಯೊಂದು ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಮಂಗಳವಾರ ಹೇಳಿದ್ದಾರೆ. ತಯಾರಿಕಾ ವಲಯದ ಬಲವರ್ಧನೆಗೆ ಆಗಬೇಕಾದ ಕಾಯಕಲ್ಪ ಕುರಿತು 60 ಕಂಪನಿಗಳ 80 ಮುಖ್ಯಸ್ಥರು ಮತ್ತು ಸಿಇಒಗಳೊಂದಿಗೆ ನಡೆದ `ಉತ್ಪಾದನಾ ಮಂಥನ’ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ಸಮಾವೇಶದಲ್ಲಿ ಏರೋಸ್ಪೇಸ್ ಮತ್ತು ಡಿಫೆನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ಸ್, ಕ್ಯಾಪಿಟಲ್ ಗೂಡ್ಸ್ ಮತ್ತು ರೋಬೋಟಿಕ್ಸ್, ಆಟೋ ಮತ್ತು ಎಲೆಕ್ಟ್ರಿಕ್ ವೆಹಿಕಲ್ಸ್, ಟೆಕ್ನಿಕಲ್ ಮತ್ತು ಎಂಎಂಎಫ್ ಬೇಸ್ಡ್ ಟೆಕ್ಸ್ಟೈಲ್ಸ್ ಹಾಗೂ ಪಾದರಕ್ಷೆ, ಗೊಂಬೆ ಮತ್ತು ಎಫ್ಎಂಸಿಜಿ ಉತ್ಪನ್ನಗಳನ್ನು ಒಳಗೊಂಡಿರುವ ಗ್ರಾಹಕ ಉತ್ಪನ್ನಗಳ ವಲಯಗಳ ಮೇಲೆ ಗಮನ…

Read More

ಮಂಡ್ಯ : ಕಾರಿನಲ್ಲಿ ತೆರಳುವಂತವರು ಮುಂಭಾಗದಲ್ಲಿನ ಡ್ರೈವರ್ ಹಾಗೂ ಕೋ ಪ್ಯಾಸೆಂಜರ್ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ. ಸೀಟ್ ಬೆಲ್ಟ್ ಧರಿಸಿದ್ದಾಗ ಮಾತ್ರವೇ ಮುಂಭಾಗದಲ್ಲಿನ ಏರ್ ಬ್ಯಾಗ್ ಓಪನ್ ಆಗಿ ಅಮೂಲ್ಯ ಜೀವ ಉಳಿಯೋದಕ್ಕೆ ಸಾಧ್ಯ. ಒಂದು ವೇಳೆ ನೀವು ಸೀಟ್ ಬೆಲ್ಟ್ ಹಾಕದೇ ಕಾರಿನಲ್ಲಿ ಹೋಗ್ತೀರಿ ಅಂದ್ರೆ ಅದಕ್ಕೂ ಮುನ್ನಾ ಮುಂದೆ ಸುದ್ದಿ ಓದಿ. ಮದ್ದೂರು – ತುಮಕೂರು ರಸ್ತೆಯ ತೊರೆಶೆಟ್ಟಿಹಳ್ಳಿ ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂವರು ಪಾದಚಾರಿಗಳಿಗೆ ಸಣ್ಣಪುಣ್ಣ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ಸಂಜೆ ಜರುಗಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಮಂಡ್ಯದ ವಿನಾಯಕ ಬಡಾವಣೆಯ ಉದಯ್, ಮದ್ದೂರು ಪಟ್ಟಣದ ನಿವಾಸಿ ಅವಿನಾಶ್ ಹಾಗೂ ಪಾದಚಾರಿಗಳಾದ ತೊರೆಶೆಟ್ಟಿಹಳ್ಳಿ ಗ್ರಾಮದ ದೀಪಿಕಾ, ಸುಶೀಲಮ್ಮ ಅವರು ಗಾಯಗೊಂಡಿದ್ದಾರೆ. ಉಮೇಶ್ ಎಂಬುವರ ಮನೆ ಸ್ವಲ್ಪ ಮಟ್ಟಿಗೆ ಜಖಂಗೊಂಡಿದೆ. ಘಟನೆ ವಿವರ: ಮದ್ದೂರು ತಾಲೂಕಿನ ತೊರೆಶೆಟ್ಟಿಹಳ್ಳಿ ಗ್ರಾಮದ ಮದ್ದೂರು – ತುಮಕೂರು ರಸ್ತೆಯಲ್ಲಿ ಕುಣಿಗಲ್ ಕಡೆಯಿಂದ…

Read More