Subscribe to Updates
Get the latest creative news from FooBar about art, design and business.
Author: kannadanewsnow09
ಮ್ಯಾನ್ಮಾರ್: ಕೆಲ ದಿನಗಳ ಹಿಂದಷ್ಟೇ 7.7 ತೀವ್ರತೆಯಲ್ಲಿ ಮ್ಯಾನ್ಮಾರ್ ನಲ್ಲಿ ಭೂಕಂಪನ ಉಂಟಾಗಿತ್ತು. ಈ ಪ್ರಬಲ ಭೂಕಂಪನದಿಂದ 1644 ಮಂದಿ ಸಾವನ್ನಪ್ಪಿದ್ದಾರೆ. ಇದೀಗ ಮತ್ತೆ 5.1ರ ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಮ್ಯಾನ್ಮಾರ್ ಸರ್ಕಾರವು 7.7 ತೀವ್ರತೆಯಲ್ಲಿ ಭೂಕಂಪನ ಉಂಟಾದ ಬಳಿಕ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿತ್ತು. ಜೊತೆಗೆ ಮತ್ತೆ ಭೂಕಂಪನ ಆಗುವಂತ ಮುನ್ಸೂಚನೆಯನ್ನು ನೀಡಲಾಗಿತ್ತು. ಈಗ ಅದರಂತೆಯೇ ಮತ್ತೆ 5.1ರ ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಹೀಗಾಗಿ ಭೂಮಿ ಕಂಪಿಸಿದ್ದರಿಂದ ಮ್ಯಾನ್ಮಾರ್ ಜನರು ಬೆಚ್ಚಿ ಬೀಳುವಂತೆ ಆಗಿದೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್ಜಿಎಸ್) ಭೂಕಂಪದ ತೀವ್ರತೆಯನ್ನು 5.1 ಎಂದು ದಾಖಲಿಸಿದೆ. ಏತನ್ಮಧ್ಯೆ, ಭೂಕಂಪವು 4.6 ತೀವ್ರತೆಯಲ್ಲಿ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ತಿಳಿಸಿದೆ. ಅದೇ ಸಮಯದಲ್ಲಿ, ಯುರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ (ಇಎಂಎಸ್ಸಿ) ರಿಕ್ಟರ್ ಮಾಪಕವು 5.2 ರಷ್ಟಿತ್ತು ಎಂದು ಹೇಳಿದೆ. ಭಾನುವಾರ ಮಧ್ಯಾಹ್ನ 12 ರಿಂದ 1 ಗಂಟೆಯ ನಡುವೆ ಮ್ಯಾನ್ಮಾರ್ನ ಮಾಂಡಲೆಯಲ್ಲಿ ಭೂಕಂಪ ಸಂಭವಿಸಿದೆ. “ಎಂನ ಇಕ್ಯೂ:…
ಬಾಗಲಕೋಟೆ: ಕೋಡಿಮಠ ಶ್ರೀಗಳ ಭವಿಷ್ಯ ನುಡಿಯಂತೆ, ಮತ್ತೊಂದು ಶಾಕಿಂಗ್ ಭವಿಷ್ಯವನ್ನು ಬೀಳಗಿಯ ಜಕನೇರನಕಟ್ಟೆ ಭವಿಷ್ಯ ನುಡಿಯಲಾಗಿದೆ. ವಿಶ್ವದ ಉತ್ತರ ಮತ್ತು ಮಧ್ಯ ಭಾಗದಲ್ಲಿ ಭೂಕಂಪನವಾಗಲಿದೆ. ಮುಂಬರುವಂತ ದಿನಗಳಲ್ಲಿ ರಾಜಕೀಯ ವ್ಯಕ್ತಿಗಳಿಗೆ ಕಂಟಕ ಎದುರಾಗವಿದೆ ಅಂತ ಶಾಕಿಂಗ್ ಭವಿಷ್ಯ ನುಡಿಯಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಹೊರವಲಯದಲ್ಲಿ ರೈತರಿಂದ ಜಕನೇರನಕಟ್ಟೆ ಭವಿಷ್ಯವಾಣಿಯನ್ನು ನುಡಿಯಲಾಗಿದೆ. ಯುಗಾದಿ ಪಾಡ್ಯದ ದಿನದ ವಿಶೇಷ ಭವಿಷ್ಯ ಇದಾಗಿದ್ದು, ನಿಜವಾಗುವುದೆಂದೇ ನಂಬಿದ್ದಾರೆ. ಇಂದು ಬೀಳಗಿ ಪಟ್ಟಣದಲ್ಲಿ ಯುಗಾದಿ ಪಾಡ್ಯದ ದಿನ ವಿಶೇಷ ಭವಿಷ್ಯವನ್ನು ನುಡಿಯಲಾಗಿದ್ದು, ವಿಶ್ವದ ಉತ್ತರ ಹಾಗೂ ಮಧ್ಯ ಭಾಗದಲ್ಲಿ ಭೂಕಂಪನಕ್ಕೆ ತತ್ತರಿಸಿ ಹೋಗಲಿದೆ ಎಂಬುದಾಗಿ ಹೇಳಲಾಗಿದೆ. ಅಲ್ಲದೇ ರಾಜಕೀಯ ವ್ಯಕ್ತಿಗಳಿಗೆ ಮುಂಬರುವ ದಿನಗಳಲ್ಲಿ ಕಂಟಕ ಕಾದಿದೆ ಎಂಬುದಾಗಿ ಭವಿಷ್ಯ ನುಡಿಯಲಾಗಿದೆ. ಅಂದಹಾಗೇ ಮಣ್ಣನಿಂದ ಒಂದು ಕಟ್ಟೆ ನಿರ್ಮಿಸಿ, ಅದಕ್ಕೆ ಜಕನೇರನಕಟ್ಟೆ ಎಂಬುದಾಗಿ ಜನರು ಬೀಳಗಿಯಲ್ಲಿ ಕರೆಯುತ್ತಾರೆ. ಈ ಕಟ್ಟೆಯ ಮೇಲೆ ಬಸವಣ್ಣನ ಮಣ್ಣಿನ ಮೂರ್ತಿ ಮಾಡಿ, ಬಿಂದಿಗೆ ನೀರು ಇರಿಸಿ ಪೂಜೆ ಮಾಡಿ, ತೆರಳುತ್ತಾರೆ. ರಾತ್ರಿ ಅಲ್ಲಿ…
ಹಾಸನ: ಜಿಲ್ಲೆಯಲ್ಲಿ ಅಡುಗೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡ ಪರಿಣಾಮ, ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಕಲಗೋಡು ತಾಲ್ಲೂಕಿನ ಕೊಣನೂರಿನಲ್ಲಿ ಇಂದು ಈ ಘಟನೆ ನಡೆದಿದೆ. ಪಟೇಲ್ ರಾಮೇಗೌಡ ಎಂಬುವರ ಮನೆಯಲ್ಲಿ ತಿಥಿ ಕಾರ್ಯದ ನಿಮಿತ್ತ ಸಿಹಿ ತಿಂಡಿ ತಯಾರಿಕೆಯಲ್ಲಿ ತೊಡಿಗಿದ್ದಾಗ ಈ ದುರ್ಘಟನೆ ನಡೆದಿದೆ. ಸಿಲಿಂಡರ್ ಸ್ಟೋಟದಲ್ಲಿ ಮೀನಾಕ್ಷಿ, ಮಂಗಳಾ, ರಾಧಾ ಸೇರಿದಂತೆ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಸ್ಪೋಟದ ತೀವ್ರತೆಯಿಂದಾಗಿ ಮನೆಯಲ್ಲಿದ್ದಂತ ವಸ್ತುಗಳಿಗೂ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಈ ಸಂಬಂಧ ಅರಕಲಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/
ನವದೆಹಲಿ: ಒಡಿಶಾದಲ್ಲಿ ಬೆಂಗಳೂರು ಕಾಮಾಕ್ಯ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಅಪಘಾತಕ್ಕೆ ಒಳಗಾಗಿದೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆ ಬಿಡುಗಡೆ ಮಾಡಲಾಗಿದೆ. ರೈಲು ಸಂಖ್ಯೆ 12551 ಬೆಂಗಳೂರು-ಕಾಮಾಕ್ಯ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ 11 ಬೋಗಿಗಳು ಪೂರ್ವ ಕರಾವಳಿ ರೈಲ್ವೆಯ ಖುರ್ದಾ ರಸ್ತೆ ವಿಭಾಗದ ಕಟಕ್-ನೆರ್ಗುಂಡಿ ರೈಲ್ವೆ ವಿಭಾಗದ ನೆರ್ಗುಂಡಿ ನಿಲ್ದಾಣದ ಬಳಿ 30.03.2025 ರಂದು (ಭಾನುವಾರ) ಬೆಳಿಗ್ಗೆ 11:54 ರ ಸುಮಾರಿಗೆ ಹಳಿ ತಪ್ಪಿವೆ ಎಂಬುದಾಗಿ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಪೂರ್ವ ಕರಾವಳಿ ರೈಲ್ವೆಯ ಜನರಲ್ ಮ್ಯಾನೇಜರ್ ಮತ್ತು ಖುರ್ದಾ ರಸ್ತೆಯ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ರವಾನಿಸಲಾಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬಾಧಿತ ರೈಲಿನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲು ವಿಶೇಷ ರೈಲು ಯೋಜಿಸಲಾಗಿದೆ ಎಂದಿದೆ. ಸಹಾಯವಾಣಿ ಸಂಖ್ಯೆ…
ಬೆಳಗಾವಿ: ಜಿಲ್ಲೆಯ ಖಾನಾಪುರದಲ್ಲಿ ಆರೂವರೆ ಎಕರೆ ಜಮೀನಿಗಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬೆಳಗಾವಿಯ ಖಾನಾಪುರದಲ್ಲಿ ಸೆರಾಮಿಕ್ಸ್ ಫ್ಯಾಕ್ಟರಿ ಸಿಬ್ಬಂದಿ ಹಾಗೂ ಸ್ಥಳೀಯರ ಮಧ್ಯೆ ಮಾರಾಮಾರಿಯೇ ನಡೆದಿದೆ. ಖಾನಾಪುರದ ವಿದ್ಯಾನಗರದಲ್ಲಿ ನೂರಾರು ಜನರು ಆರೂವರೆ ಎಕರೆ ಜಾಗಕ್ಕೆ ಜಗಳ ಆಡಿದ್ದಾರೆ. ಜಾಗ ನಮ್ಮದೆಂದು ಸ್ಥಳೀಯರು ಹಾಗೂ ಸೆರಾಮಿಕ್ಸ್ ಸಿಬ್ಬಂದಿಯ ನಡುವೆ ಉಂಟಾಗದಂತ ಜಗಳ, ತಾರಕಕ್ಕೇರಿದಾಗ ಮಾರಾಮಾರಿಯೇ ನಡೆದಿದೆ. ಶಾಹುನಗರದ ನಿವಾಸಿಗಳು ಹಾಗೂ ಸೆರಾಮಿಕ್ಸ್ ಸಿಬ್ಬಂದಿಗಳ ನಡುವೆ ಉಂಟಾಗಂತ ಜಗಳದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳು ಸೆರಾಮಿಕ್ಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಈ ಘಟನೆಯಲ್ಲಿ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಈ ಘಟನೆಯಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಸ್ಥಳದಲ್ಲೇ ಖಾನಾಪುರ ಠಾಣೆಯ ಪೊಲೀಸರು ಮೊಕ್ಕಾಂ ಹೂಡಿ ಪರಿಸ್ಥಿತಿ ನಿಯಂತ್ರಣದಲ್ಲಿ ತೊಡಗಿದ್ದಾರೆ. https://kannadanewsnow.com/kannada/one-passenger-killed-several-injured-in-another-train-accident-in-india/ https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/
ಒಡಿಶಾ: ಇಲ್ಲಿನ ಚೌಡಾವಾರ್ ಬಳಿಯಲ್ಲಿ ಬೆಂಗಳೂರಿನಿಂದ ಗುವಾಹಟಿಗೆ ಹೊರಟಿದ್ದಂತ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿ ಹಲವರು ಗಾಯಗೊಂಡಿರುವಂತ ಘಟನೆ ನಡೆದಿದೆ. ಒಡಿಶಾದಲ್ಲಿನ ಚೌಡಾವಾರ್ ನಲ್ಲಿ ಕಾಮಾಕ್ಯ ರೈಲು ಹಳಿ ತಪ್ಪಿದೆ. ಈ ಪರಿಣಾಮ 11 ಬೋಗಿಗಳು ಅಪಘಾತಗೊಂಡಿದ್ದಾರೆ. ಬೆಂಗಳೂರಿನಿಂದ ಗುವಾಹಟಿಗೆ ಕಾಮಾಕ್ಯ ರೈಲು ತೆರಳುತ್ತಿತ್ತು. ಇಂತಹ ರೈಲು ಅಪಘಾತಕ್ಕೀಡಾಗಿದೆ. ಪ್ರಾಥಮಿಕ ಮಾಹಿತಿಯಂತೆ 11 ಕೋಚ್ ಗಳು ಹಳಿ ತಪ್ಪಿರುವ ಮಾಹಿತಿ ಇದೆ. ಈ ರೈಲು ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬ್ಯಾಂಕಾಕ್: ಮ್ಯಾನ್ಮಾರ್ ಅಕ್ಷರಶಹಃ ಸ್ಮಶಾನವಾಗಿದೆ. ಪ್ರಬಲ ಭೂಕಂಪನದಿಂದಾಗಿ ಮ್ಯಾನ್ಮಾರ್ ನಲ್ಲಿ ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 1644ಕ್ಕೆ ಏರಿಕೆಯಾಗಿದೆ. ಭೂಕಂಪ ಪರಿಹಾರ ಪ್ರಯತ್ನಗಳಿಗೆ ಅನುಕೂಲವಾಗುವಂತೆ ಮ್ಯಾನ್ಮಾರ್ನ ನೆರಳು ರಾಷ್ಟ್ರೀಯ ಏಕತಾ ಸರ್ಕಾರವು ಶನಿವಾರ ಏಕಪಕ್ಷೀಯ ಭಾಗಶಃ ಕದನ ವಿರಾಮವನ್ನು ಘೋಷಿಸಿತು. ಇದು ಆಡಳಿತಾರೂಢ ಮಿಲಿಟರಿಯ ವಿರುದ್ಧದ ಜನಪ್ರಿಯ ಹೋರಾಟವನ್ನು ಸಂಘಟಿಸುತ್ತದೆ. ಈ ದುರಂತದಿಂದ ದೇಶದ ಸಾವಿನ ಸಂಖ್ಯೆ 1,644 ಕ್ಕೆ ಏರಿತು. ಕೆಲವೇ ಗಂಟೆಗಳ ಹಿಂದೆ ಘೋಷಿಸಲಾದ 1,002 ಕ್ಕೆ ಹೋಲಿಸಿದರೆ ಈ ಸಂಖ್ಯೆ ತೀವ್ರ ಏರಿಕೆಯಾಗಿದ್ದು, ವ್ಯಾಪಕ ಪ್ರದೇಶದಲ್ಲಿ ಸಾವುನೋವುಗಳನ್ನು ದೃಢೀಕರಿಸುವಲ್ಲಿನ ತೊಂದರೆ ಮತ್ತು ಶುಕ್ರವಾರದ 7.7 ತೀವ್ರತೆಯ ಭೂಕಂಪದಿಂದ ಸಂಖ್ಯೆಗಳು ಬೆಳೆಯುತ್ತಲೇ ಇರುವ ಸಾಧ್ಯತೆಯನ್ನು ಎತ್ತಿ ತೋರಿಸಿದೆ. ಗಾಯಗೊಂಡವರ ಸಂಖ್ಯೆ 3,408 ಕ್ಕೆ ಏರಿತು, ಆದರೆ ಕಾಣೆಯಾದವರ ಸಂಖ್ಯೆ 139 ಕ್ಕೆ ಏರಿತು. ವಿಶೇಷವಾಗಿ ದೇಶದ ಎರಡನೇ ನಗರವಾದ ಮಂಡಲೆ ಮತ್ತು ರಾಜಧಾನಿ ನೇಪಿಟಾವ್ನ ಪ್ರಮುಖ ಪೀಡಿತ ನಗರಗಳಲ್ಲಿ ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. ಆದರೆ ಇತರ ದೇಶಗಳಿಂದ ತಂಡಗಳು ಮತ್ತು…
ವಿಜಯಪುರ: ನಾನು ಬಿಜೆಪಿ ಪಕ್ಷ ವಿರೋಧಿಯಲ್ಲ. ನಾನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ವಿರೋಧಿ. ಉತ್ತರ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪ ಮೋಸ ಮಾಡಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ಬಿಜೆಪಿಯನ್ನು ನನ್ನ ತಾಯಿ ಅಂದುಕೊಂಡಿದ್ದೇನೆ. ಹಾಗೆಯೇ ತಿಳಿದುಕೊಂಡಿದ್ದೇನೆ. ನಾನು ಯಾವತ್ತೂ ಬಿಜೆಪಿ ಪಕ್ಷ ವಿರೋಧಿ ನಡೆ ತೋರಿಲ್ಲ. ಬಿಜೆಪಿ ಪಕ್ಷ ವಿರೋಧಿಯೂ ಅಲ್ಲ. ನಾನು ಬಿಎಸ್ ಯಡಿಯೂರಪ್ಪ ವಿರೋಧಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಮುಂದುವರೆಸಿದ್ರೇ ಬೇರೆಯೇ ನಿರ್ಧಾರ ಮಾಡಲಾಗುತ್ತದೆ. ಹಿಂದೂ ಪಕ್ಷ ಕಟ್ಟುವಂತೆ ಜನರಿಂದ ಕರೆ ಬರುತ್ತಿದೆ. ಯಡಿಯೂರಪ್ಪ ಕುಟುಂಬ ವಿರೋಧ ಪಕ್ಷಗಳ ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಿಂದೂಗಳ ರಕ್ಷಣೆ ಮಾಡೋದು ಯಾರು ಎಂದು ಮಾಜಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು. https://kannadanewsnow.com/kannada/man-brutally-assaults-wife-her-sister-with-machetes-on-ugadi-festival/ https://kannadanewsnow.com/kannada/breaking-cbse-releases-new-syllabus-for-class-10-and-12-new-syllabus-for-10th-12th/
ರಾಯಚೂರು: ಕೌಟುಂಬಿಕ ಕಲಹದಿಂದಾಗಿ ಪತ್ನಿ ಹಾಗೂ ಆಕೆಯ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪತಿಯೊಬ್ಬ ಪರಾರಿಯಾಗಿರುವಂತ ಘಟನೆ ರಾಯಚೂರಿನಲ್ಲಿ ನಡೆದಿದೆ. ರಾಯಚೂರಿನ ಏಗನೂರಿನಲ್ಲಿ ಮೊದಲ ಪತ್ನಿಯಿಂದ ದೂರಾಗಿ, ಎರಡನೇ ಮದುವೆಯನ್ನು ತಿಮ್ಮಪ್ಪ ಎಂಬಾತ ಆಗಿದ್ದನು. ಮೊದಲ ಪತ್ನಿ ಪದ್ಮಾವತಿ ಜೀವನಾಂಶ ಕೋರಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೇ ಸಿಟ್ಟಿನಲ್ಲಿ ಯುಗಾದಿ ಹಬ್ಬದ ದಿನದಂದು ಇಂದು ಮನೆಗೆ ನುಗ್ಗಿದಂತ ತಿಮ್ಮಪ್ಪ, ಆಕೆಯ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಆಕೆಯನ್ನು ರಕ್ಷಿಸೋದಕ್ಕೆ ಬಂದಂತ ತಂಗಿ ಭೂದೇವಿಯ ಮೇಲೂ ಹಲ್ಲೆ ಮಾಡಿದ್ದಾನೆ. ಮಚ್ಚಿನಿಂದ ಪತ್ನಿ ಪದ್ಮಾವತಿ ಹಾಗೂ ಆಕೆಯ ಸಹೋದರಿ ಭೂದೇವಿಯ ಮೇಲೆ ಹಲ್ಲೆ ಮಾಡಿದಂತ ತಿಮ್ಮಪ್ಪ, ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದಂತ ಪದ್ಮಾವತಿ ಹಾಗೂ ಭೂದೇವಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಶುಕ್ರವಾರ ಬ್ಯಾಂಕುಗಳು ಮೇ 1 ರಿಂದ ಪ್ರತಿ ವಹಿವಾಟಿಗೆ 2 ರೂ.ಗಳಿಂದ 23 ರೂ.ಗಳಿಗೆ ಎಟಿಎಂ ನಗದು ಹಿಂಪಡೆಯುವಿಕೆಯನ್ನು ಹೆಚ್ಚಿಸಲು ಅನುಮತಿ ನೀಡಿದೆ. ಕಡ್ಡಾಯವಾದ ಐದು ಉಚಿತ ಮಾಸಿಕ ವಹಿವಾಟುಗಳನ್ನು ಮೀರಿದ ಶುಲ್ಕಗಳು ಅನ್ವಯವಾಗುತ್ತವೆ. ಪ್ರಸ್ತುತ, ಗ್ರಾಹಕರು ಉಚಿತ ವಹಿವಾಟು ಮಿತಿಯನ್ನು ಪೂರ್ಣಗೊಳಿಸಿದ ನಂತರ, ಬ್ಯಾಂಕುಗಳು ಪ್ರತಿ ವಹಿವಾಟಿಗೆ 21 ರೂ.ಗಳನ್ನು ವಿಧಿಸಲು ಅನುಮತಿಸಲಾಗಿದೆ. ಉಚಿತ ವಹಿವಾಟುಗಳನ್ನು ಮೀರಿ, ಗ್ರಾಹಕನಿಗೆ ಪ್ರತಿ ವಹಿವಾಟಿಗೆ ಗರಿಷ್ಠ 23 ರೂ.ಗಳ ಶುಲ್ಕ ವಿಧಿಸಬಹುದು. ಇದು ಮೇ 1, 2025 ರಿಂದ ಜಾರಿಗೆ ಬರಲಿದೆ ಎಂದು RBI ಸುತ್ತೋಲೆಯಲ್ಲಿ ತಿಳಿಸಿದೆ. ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಸ್ವಯಂಚಾಲಿತ ಟೆಲ್ಲರ್ ಯಂತ್ರಗಳಿಂದ (ATM ಗಳು) ಪ್ರತಿ ತಿಂಗಳು ಐದು ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸುೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ. ಅವರು ಇತರ ಬ್ಯಾಂಕ್ ಎಟಿಎಂಗಳಿಂದ ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸುೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ – ಮೆಟ್ರೋ…