Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಪ್ರಸಕ್ತ ಸಾಲಿನ ಶೇ.24.10%, 7.25% ಮತ್ತು 5% ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪಸಂಖ್ಯಾತ ಮತ್ತು ದೈಹಿಕ ವಿಕಲಚೇತನರ ಫಲಾನುಭವಿಗಳಿಂದ ವೈಯಕ್ತಿಕ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಜಗಳೂರು ಪಟ್ಟಣ ಪಂಚಾಯಿತಿಯ ಕಚೇರಿಯಲ್ಲಿ ಪಡೆದು ಜೂನ್ 30 ರೊಳಗಾಗಿ ಕಚೇರಿಗೆ ಸಲ್ಲಿಸಬೇಕೆಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ.ಸಿ ತಿಳಿಸಿದ್ದಾರೆ. ಅರ್ಚಕರಿಗೆ ಮಾಸಿಕ ಗೌರವಧನಕ್ಕೆ ಅರ್ಜಿ ಆಹ್ವಾನ ಜೈನ್ ಸಮುದಾಯ ಬಸದಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಧಾನ ಮತ್ತು ಸಹಾಯಕ ಅರ್ಚಕರುಗಳಿಗೆ ಹಾಗೂ ಸಿಖ್ ಗುರುದ್ವಾರಗಳಲ್ಲಿರುವ ಮುಖ್ಯ ಮತ್ತು ಸಹಾಯಕ ಗ್ರಂಥಿಗಳಿಗೆ ಮಾಸಿಕ ಗೌರವಧನ ಪಡೆಯಲಿಚ್ಚಿಸುವ ಅರ್ಹ ಫಲಾನುಭವಿಗಳಿಂದ ನಿಗಧಿತ ನಮೂನೆಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಜೂನ್ 26 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಫಲಾನುಭವಿಗಳು ಜಿಲ್ಲೆಯ ಜೈನ್ ಬಸದಿಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಸಂಘಗಳ ನೊಂದಣಿ ಕಾಯ್ದೆ ಅಥವಾ ಇತರೆ ಸಂಬಂಧಪಟ್ಟ ಕಾಯ್ದೆ ಅನ್ವಯ ನೊಂದಣಿಯಾದ ಪ್ರಧಾನ ಅರ್ಚಕ, ಗ್ರಂಥಿಗೆ ಮಾಸಿಕ ರೂ.6000/, ಸಹಾಯಕ ಗ್ರಂಥಿ, ಅರ್ಚಕರಿಗೆ ಮಾಸಿಕ ರೂ.5000/ ಗೌರವಧನ…
ಗುಜರಾತ್: ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದ ನಂತರ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಡಿಎನ್ಎ ಹೋಲಿಕೆಯಾಗಿದೆ ಎಂದು ರಾಜ್ಯದ ಗೃಹ ಸಚಿವ ಹರ್ಷ ಸಾಂಘವಿ ಭಾನುವಾರ ದೃಢಪಡಿಸಿದರು. https://twitter.com/ANI/status/1934152108317585661 ಜೂನ್ 12 ರಂದು ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ಅಪಘಾತದಲ್ಲಿ ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಾಣ ಕಳೆದುಕೊಂಡರು. ಇಂದು, ಬೆಳಿಗ್ಗೆ 11:10 ರ ಸುಮಾರಿಗೆ, ಅವರ ಡಿಎನ್ಎ ಹೊಂದಾಣಿಕೆಯಾಗಿದೆ. ಅವರು ಹಲವಾರು ವರ್ಷಗಳ ಕಾಲ ರಾಜ್ಯದ ಜನರಿಗಾಗಿ ಕೆಲಸ ಮಾಡಿದರು…” ಎಂದು ಗುಜರಾತ್ ಗೃಹ ಸಚಿವ ಹರ್ಷ್ ಸಾಂಘ್ವಿ ಹೇಳಿದ್ದಾರೆ. ಅವರ ಪಾರ್ಥಿವ ಶರೀರದ ಸಾಗಣೆ ಮಾಡಲು ಮಾಜಿ ಸಿಎಂ ವಿಜಯ್ ರೂಪಾನಿ ಕುಟುಂಬಸ್ಥರು ಆಸ್ಪತ್ರೆಯ ಬಳಿ ನೆರೆದಿದ್ದಾರೆ. ಇಂದೇ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ನೆರವೇರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಅಹಮದಾಬಾದ್ ಏರ್ ಇಂಡಿಯಾ ಅಪಘಾತದಲ್ಲಿ ಸಾವನ್ನಪ್ಪಿದ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರ ಮೃತದೇಹವನ್ನು ಕೆಲವು ದಿನಗಳ ನಂತರ ಗುರುತಿಸಲಾಗಿದೆ
ಬೆಂಗಳೂರು: ನಗರದಲ್ಲಿ BMTC ಸಿಬ್ಬಂದಿ ಮೇಲೆ ಪದೇಪದೆ ನಡೆಯುತ್ತಿರುವ ಹಲ್ಲೆ ಮತ್ತು ಅವಮಾನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಪತ್ರ ಬರೆದು ಆಗ್ರಹಿಸಿದ್ದಾರೆ. ಈ ಕುರಿತಂತೆ ಪತ್ರ ಬರೆದಿರುವಂತ ಅವರು, ಈ ಹಿಂದೆಯೂ ಹಲವಾರು ಈ ರೀತಿಯ ಪ್ರಕರಣಗಳು ನಡೆದಿದ್ದು, ನಾನು ಪೊಲೀಸ್ ಆಯುಕ್ತರು ಬೆಂಗಳೂರುರವರಿಗೆ ಪತ್ರ ಬರೆದು ಸೂಕ್ತ ಕ್ರಮ ತೆಗೆದುಕೊಳ್ಳಲು ಹಾಗೂ ಈ ಸಂಬಂಧ ಖುದ್ದು ವ್ಯವಸ್ಥಾಪಕ ನಿರ್ದೇಶಕರು ಬಿಎಂಟಿಸಿ ರವರಿಗೆ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ವಿವರಿಸಲು ಕೂಡ ಸೂಚಿಸಿರುತ್ತೇನೆ. ಈ ಎಲ್ಲಾ ಕ್ರಮಗಳ ಹೊರತಾಗಿಯೂ ಮತ್ತೊಂದು ಪ್ರಕರಣವು ಎರಡು ದಿನಗಳಿಂದಷ್ಟೇ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದು ಆಘಾತಕಾರಿಯಾಗಿದೆ ಎಂದಿದ್ದಾರೆ. ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ಮಹಿಳಾ ಟೆಕ್ಕಿಯೊಬ್ಬರು ತಾವು ಕೋರಿದ ಕಡೆ ಬಸ್ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಚಾಲಕ ಹುಸೇನ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ…
ಮೈಸೂರು: ರೈಲ್ ಮದದ್ ದೂರಿನ ಮೂಲಕ ರೈಲಿನಲ್ಲಿ ಕಳೆದುಹೋದ ಚಿನ್ನದ ಸರ ಮಾಲೀಕರಿಗೆ ಮೈಸೂರಿನ ರೈಲ್ವೆ ರಕ್ಷಣಾ ಪಡೆ ಮರಳಿಸಿದೆ. 08 ಜೂನ್ 2025 ರಂದು ರೈಲು ಸಂಖ್ಯೆ 16231 (ತಿರುಚಿರಾಪಳ್ಳಿ – ಕೆಎಸ್ಆರ್ ಬೆಂಗಳೂರು) ನಲ್ಲಿ ಪ್ರಯಾಣಿಸಿದ ಸಾಂಗವಿ ಎಂಬ ಪ್ರಯಾಣಿಕರು 09.06.2025 ರಂದು ರೈಲ್ ಮದದ್ ಮೂಲಕ ಚಿನ್ನದ ಸರ ಕಳೆದುಹೋದ ಬಗ್ಗೆ ದೂರು ನೀಡಿದ್ದಾರೆ. ಬೋಗಿ ಸಂಖ್ಯೆ B1, ಸೀಟು ಸಂಖ್ಯೆ 71 ನಲ್ಲಿ ಪ್ರಯಾಣಿಸುತ್ತಿದ್ದು, ತಾನು ಶೌಚಾಲಯಕ್ಕೆ ಹೋಗಿದ್ದಾಗ ಚಿನ್ನದ ಸರ ಶೌಚಾಲಯದಲ್ಲಿ ಬಿದ್ದಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದರು. ಈ ದೂರನ್ನು ದಾಖಲಿಸಿ ಸಂಬಂಧಿತ ಬೋಗಿಯನ್ನು ಮೈಸೂರಿನಲ್ಲಿ ಪ್ರಾಥಮಿಕ ನಿರ್ವಹಣೆ ಮಾಡಲಾಯಿತು. ದೂರನ್ನು ಪೂರಕವಾಗಿ ಗಮನಿಸಿ, ನಿರ್ವಹಣಾ ತಂಡವು ಬಯೋ-ಟಾಯ್ಲೆಟ್ ಟ್ಯಾಂಕ್ ಅನ್ನು ತೆರೆದು ಶುದ್ಧಪಡಿಸುವ ಕಾರ್ಯಾಚರಣೆ ವೇಳೆ, ಕಳೆದುಹೋದ ಚಿನ್ನದ ಸರವನ್ನು ಪತ್ತೆ ಹಚ್ಚಿತು. ಆ ಚಿನ್ನದ ಸರವನ್ನು ತಕ್ಷಣವೇ ರೈಲ್ವೆ ರಕ್ಷಣಾ ಪಡೆಯ (ಆರ್ಪಿಎಫ್) ಅಧಿಕಾರಿಗಳಿಗೆ ಹಸ್ತಾಂತರಿಸಿ, ಅಗತ್ಯ ಕಾನೂನು ಕ್ರಮಗಳು ಕೈಗೊಳ್ಳಲಾಯಿತು ಮತ್ತು…
ತಮಿಳುನಾಡು: ಇಂಧನ ಕೊರತೆಯಿಂದಾಗಿ ಬ್ರಿಟಿಷ್ ಎಫ್ -35 ಫೈಟರ್ ಜೆಟ್ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇಂಧನ ಕೊರತೆಯಿಂದಾಗಿ ಶನಿವಾರ ರಾತ್ರಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್ ಎಫ್ -35 ಯುದ್ಧ ವಿಮಾನ ತುರ್ತು ಭೂಸ್ಪರ್ಶ ಮಾಡಿತು. ಇಂಧನ ತುಂಬಿಸಲು ಕೇಂದ್ರ ಅನುಮತಿಗಾಗಿ ಕಾಯುತ್ತಿರುವುದಾಗಿ ತಿಳಿದು ಬಂದಿದೆ. ಚಾರ್ ಧಾಮ್ ಮಾರ್ಗದಲ್ಲಿ 6 ವಾರಗಳಲ್ಲಿ 5 ಅಪಘಾತಗಳು ಉತ್ತರಾಖಂಡವು ಸುಮಾರು 40 ದಿನಗಳ ಅವಧಿಯಲ್ಲಿ ಚಾರ್ ಧಾಮ್ ಮಾರ್ಗದಲ್ಲಿ ಕನಿಷ್ಠ ಆರು ಹೆಲಿಕಾಪ್ಟರ್ ಅಪಘಾತಗಳಿಗೆ ಸಾಕ್ಷಿಯಾಗಿದೆ. ಭಾನುವಾರದ ಹೆಲಿಕಾಪ್ಟರ್ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಆರು ಯಾತ್ರಿಕರು (ಐದು ವಯಸ್ಕರು ಮತ್ತು ಒಂದು ಮಗು) ಮತ್ತು ಒಬ್ಬ ಪೈಲಟ್ ಇದ್ದ ಹೆಲಿಕಾಪ್ಟರ್, ಕೇದಾರನಾಥ ದೇವಸ್ಥಾನದಿಂದ ಉತ್ತರಾಖಂಡದ ಗುಪ್ತಕಾಶಿಗೆ ಹಾರುತ್ತಿದ್ದಾಗ ಗೌರಿಕುಂಡ್ ಮತ್ತು ಸೋನ್ಪ್ರಯಾಗ್ ನಡುವಿನ ಕಾಡಿನಲ್ಲಿ ಪತನಗೊಂಡಿತು. 10 ನಿಮಿಷಗಳ ಪ್ರಯಾಣದ ಸಮಯದಲ್ಲಿ ಸಾವನ್ನಪ್ಪಿದ ಯಾತ್ರಿಕರು ಉತ್ತರಾಖಂಡ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ನವರು. ಮೇ ಮತ್ತು ಜೂನ್ ನಡುವಿನ ಚಾರ್…
ಮೈಸೂರು: ಆಪರೇಷನ್ ನಾರ್ಕೋಸ್ ಆಧೀನದಲ್ಲಿ ಮೈಸೂರು ವಿಭಾಗದ ರೈಲ್ವೆ ರಕ್ಷಣಾ ಪಡೆ 2025ರ ಜೂನ್ 14ರಂದು ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಸ್ಯಾಮ್ ಪ್ರಕಾಶ್ ಜೆ.ಆರ್, ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು/ಆರ್ಪಿಎಫ್/ಮೈಸೂರು ಅವರ ನಿರ್ದೇಶನದಂತೆ, ವಿಶೇಷ ತಂಡವು ರೈಲು ಸಂಖ್ಯೆ 18111 ಟಾಟಾನಗರ – ಯಶವಂತಪುರ ಎಕ್ಸ್ಪ್ರೆಸ್ನ ಬಿರೂರು – ಕಡೂರು ಮಾರ್ಗದಲ್ಲಿ ಬೋಗಿ ಸಂಖ್ಯೆ. S5 ರಲ್ಲಿ ತಪಾಸಣೆ ನಡೆಸಿದರು. ಈ ತಂಡದಲ್ಲಿ ಅನಂದ ಬಿ, ಸಹಾಯಕ ಉಪನಿರೀಕ್ಷಕ/ಸಿಬಿಐ/ಮೈಸೂರು, ಶಿವನಂದ ಟಿ, ಮುಖ್ಯ ಕಾನ್ಸ್ಟೇಬಲ್/ದಾವಣಗೆರೆ, ಮುಜಮ್ಮಿಲ್ ಖಾನ್, ಕಾನ್ಸ್ಟೇಬಲ್/ಮೈಸೂರು, ಮತ್ತು ಜಿ. ಶಿವಮೂರ್ತಿ, ಸಹಾಯಕ ಉಪನಿರೀಕ್ಷಕ/ಆರ್ಪಿಎಫ್/ಅರಸೀಕೆರೆಯವರು ಸೇರಿದ್ದರು. ಈ ಸಂಯುಕ್ತ ಕಾರ್ಯಾಚರಣೆಯ ಫಲವಾಗಿ ಗಾಂಜಾ ವಶಪಡಿಸುವಲ್ಲಿ ಯಶಸ್ವಿಯಾದರು. ಪರಿಶೀಲನೆ ವೇಳೆ ಮಹೇಂದ್ರ ದಾಸ್ (ವಯಸ್ಸು 57), ಧನು ರವಿ ದಾಸ್ ಅವರ ಪುತ್ರ, ಬಿಹಾರದ ಜಮುಯ್ ಜಿಲ್ಲೆಯ ಸೋನಾ ಗ್ರಾಮದ ನಿವಾಸಿಯಾಗಿರುವ ಹಾಗೂ ಈ ರೈಲಿನಲ್ಲಿ ನಲ್ಲಿ ಬೆಡ್ರೋಲ್ ಸಿಬ್ಬಂದಿಯಾಗಿ ಕೆಲಸಮಾಡುತ್ತಿದ್ದ ವ್ಯಕ್ತಿಯು 5.050 ಕೆಜಿ ಗಾಂಜಾ ಹೊಂದಿರುವ ಚೀಲವನ್ನು…
ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋ ಮೀಟರ್ ದೂರದಲ್ಲಿರುವ ಈ ಪವಿತ್ರ ಪುಣ್ಯಧಾಮಕ್ಕೆ ಇಡಗುಂಜಿ ಎಂದು ಹೆಸರು ಹೇಗೆ ಬಂತು ಗೊತ್ತೆ. ಇಡಾ ಎಂದರೆ ಎಡ, ಕುಂಜು ಎಂದರೆ ಗಿಡಗಂಟೆಗಳಿಂದ ತುಂಬಿರುವ ಅರಣ್ಯಪ್ರದೇಶ. ಶರಾವತಿಯ ಎಡ ಭಾಗದಲ್ಲಿರುವ ಅರಣ್ಯದ ರಮಣೀಯತೆಗೆ ಮನಸೋತು ನಾರದ ಮರ್ಷಿಗಳು ಈ ಹೆಸರು ಇಟ್ಟರೆಂದು ಸ್ಥಳ ಪುರಾಣ ಹೇಳುತ್ತದೆ. ದೈವಜ್ಞ ಪಂಡಿತ್ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ್ ತಾಂತ್ರಿಕ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆ ನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ವಿದ್ಯಾಧರ್ ನಕ್ಷತ್ರಿ ಪ್ರಧಾನ ತಾಂತ್ರಿಕ ತಪ್ಪದೆ ಕರೆ ಮಾಡಿ 9686268564 ಇತಿಹ್ಯ: ಪ್ರಾಚೀನ ಕಾಲದಲ್ಲಿ ಇಲ್ಲಿ ವಾಲಖಿಲ್ಯಾದಿ ಋಷಿಗಳೂ…
ನವದೆಹಲಿ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರ ಡಿಎನ್ಎ ಹೊಂದಾಣಿಕೆಗಳ ಸಂಖ್ಯೆ 27ಕ್ಕೆ ಏರಿಕೆಯಾಗಿದೆ. ಇವರಲ್ಲಿ 3 ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ. ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದ ನಂತರ ನಡೆಯುತ್ತಿರುವ ಗುರುತಿನ ಪ್ರಕ್ರಿಯೆಯ ಭಾಗವಾಗಿ, ಇನ್ನೂ 16 ಡಿಎನ್ಎ ವರದಿಗಳು ಪೂರ್ಣಗೊಂಡಿದ್ದು, ಒಟ್ಟು ಸಂಖ್ಯೆ 27 ಕ್ಕೆ ಏರಿದೆ. ಇಂದು ಸಂಜೆ ವೇಳೆಗೆ, 11 ವರದಿಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿತ್ತು. ಆಸ್ಪತ್ರೆ ಅಧಿಕಾರಿಗಳು ಸಾವನ್ನಪ್ಪಿದವರ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ. ಇಂದು, ಇನ್ನೂ ಮೂರು ವ್ಯಕ್ತಿಗಳ ಅವಶೇಷಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಅಹಮದಾಬಾದ್ ವಿಮಾನ ದುರಂತ: ಮೃತರ ಕುಟುಂಬಗಳಿಗೆ 25 ಲಕ್ಷ ಹೆಚ್ಚುವರಿ ಮಧ್ಯಂತರ ಪರಿಹಾರ ಘೋಷಿಸಿದ ಏರ್ ಇಂಡಿಯಾ ನವದೆಹಲಿ: ಗುಜರಾತಿನ ಅಹಮದಾಬಾದ್ ನಲ್ಲಿ ಸಂಭವಿಸಿದಂತ ವಿಮಾನ ದುರಂತದಲ್ಲಿ ಮೃತರಾದಂತ ಕುಟುಂಬಸ್ಥರಿಗೆ ತಲಾ 1 ಕೋಟಿ ಪರಿಹಾರವನ್ನು ಟಾಟಾ ಗ್ರೂಪ್ ಘೋಷಣೆ ಮಾಡಿತ್ತು. ಇದೀಗ ಏರ್ ಇಂಡಿಯಾವು ಮೃತರ ಕುಟುಂಬಗಳಿಗೆ 25 ಲಕ್ಷ ಹೆಚ್ಚುವರಿ ಮಧ್ಯಂತರ ಪರಿಹಾರ ಘೋಷಿಸಿದೆ. ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ…
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಅವರ ಪುತ್ರಿಗೆ ಇಂದು ಪ್ರಕಟವಾದಂತ ನೀಟ್ ಯುಜಿ ಪರೀಕ್ಷೆಯಲ್ಲಿ 444 ಶ್ರೇಣಿಯನ್ನು ಪಡೆದಿದ್ದಾರೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಗನ್ ಮ್ಯಾನ್ ಆಗಿ ಜಗದೀಶ್ ಡಿ.ಪಿ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಪುತ್ರಿ ಕೃತಿಕ.ಜೆ ಇಂದು ಪ್ರಕಟವಾದಂತ ನೀಟ್ ಯುಜಿ ಪರೀಕ್ಷೆಯಲ್ಲಿ 444 Rank ಪಡೆದಿದ್ದಾರೆ. ಕೃತಿಕ.ಜೆ ಅವರಿಗೆ ಚಿಕ್ಕ ವಯಸ್ಸಿನಿಂದಲೇ ವೈದ್ಯಳಾಗುವಂತ ಕನಸಿತ್ತಂತೆ. ಈ ಕಾರಣಕ್ಕೆ ಬಾಲ್ಯದಿಂದಲೂ ವ್ಯಾಸಂಗದಲ್ಲಿ ಮುಂದಿದ್ದರು. ಇಂದು ಪ್ರಕಟವಾದಂತ ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯನ್ನು ಪುತ್ರಿ ಪಡೆದಿದ್ದು, ಟಾಪ್ ತ್ರಿ ವೈದ್ಯಕೀಯ ಕಾಲೇಜಿನಲ್ಲಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ ಎಂಬುದಾಗಿ ಹೆಚ್.ಡಿಕೆ ಗನ್ ಮ್ಯಾನ್ ಜಗದೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಂದಹಾಗೇ ಜಗದೀಶ್ ಅವರಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದರೇ, ಪುತ್ರಿ ಕೃತಿಕ ದ್ವಿತೀಯ ಪಿಯುಸಿ ಮುಗಿಸಿ, ನೀಟ್ ಪರೀಕ್ಷೆ ಬರೆದು ಎಂಬಿಬಿಎಸ್…
ವಿಯೇಟ್ನಂ: ಮಿನ್ನೇಸೋಟ ಗವರ್ನರ್ ಟಿಮ್ ವಾಲ್ಜ್ ಶನಿವಾರ ರಾಜ್ಯ ಪ್ರತಿನಿಧಿ ಮೆಲಿಸ್ಸಾ ಹಾರ್ಟ್ಮನ್ ಮತ್ತು ಅವರ ಪತಿ ಸಾವನ್ನಪ್ಪಿದ್ದಾರೆ ಮತ್ತು ರಾಜ್ಯ ಸೆನೆಟರ್ ಜಾನ್ ಹಾಫ್ಮನ್ ಮತ್ತು ಅವರ ಪತ್ನಿ ರಾಜಕೀಯ ಪ್ರೇರಿತ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂದು ಘೋಷಿಸಿದ್ದಾರೆ ಎಂದು cbsnews.com ವರದಿ ಮಾಡಿದೆ. ವರದಿಯ ಪ್ರಕಾರ, ಹಾರ್ಟ್ಮನ್ ಮತ್ತು ಅವರ ಪತಿ ಬ್ರೂಕ್ಲಿನ್ ಪಾರ್ಕ್ನಲ್ಲಿ ಗುಂಡು ಹಾರಿಸಲ್ಪಟ್ಟರೆ, ಹಾಫ್ಮನ್ ಮತ್ತು ಅವರ ಪತ್ನಿ ಚಾಂಪ್ಲಿನ್ನಲ್ಲಿ ಈ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲ್ಜ್, ಹಾರ್ಟ್ಮನ್ ಮತ್ತು ಅವರ ಪತಿಯ ಸಾವನ್ನು “ರಾಜಕೀಯ ಹತ್ಯೆ” ಎಂದು ಕರೆದರು. “ಹಾರ್ಟ್ಮನ್ ಮಿನ್ನೇಸೋಟದ ಜನರಿಗೆ ದಯೆ, ಕರುಣೆ, ಹಾಸ್ಯ ಮತ್ತು ಸೇವಾ ಪ್ರಜ್ಞೆಯಿಂದ ಸೇವೆ ಸಲ್ಲಿಸಿದ ವ್ಯಕ್ತಿ” ಎಂದು ವಾಲ್ಜ್ ಹೇಳಿದರು. “ಅವರು ಅಸಾಧಾರಣ ಸಾರ್ವಜನಿಕ ಸೇವಕಿಯಾಗಿದ್ದರು. ಮಿನ್ನೇಸೋಟದಲ್ಲಿ ಒಬ್ಬ ಪ್ರಮುಖ ವ್ಯಕ್ತಿ ಎಂದು ತಿಳಿಸಿದ್ದಾರೆ. https://kannadanewsnow.com/kannada/big-news-change-of-cm-in-november-one-of-these-two-will-definitely-become-the-cm-in-december-h-vishwanath/ https://kannadanewsnow.com/kannada/important-information-for-those-who-applied-for-the-2000-ksrtc-driver-and-conductor-positions/