Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಆಂಜಿಯೋಪ್ಲ್ಯಾಸ್ಟಿ ಪ್ರಾರಂಭದಿಂದಲೂ ಗಮನಾರ್ಹ ಪ್ರಗತಿಯನ್ನು ಕಂಡಿದೆ. ಆರಂಭದಲ್ಲಿ, ಕಿರಿದಾದ ಅಪಧಮನಿಗಳನ್ನು ವಿಸ್ತರಿಸಲು ಬಲೂನ್ ಆಂಜಿಯೋಪ್ಲ್ಯಾಸ್ಟಿಯನ್ನು ಬಳಸಲಾಗುತ್ತಿತ್ತು, ಆದರೆ ಹೆಚ್ಚಿನ ಪ್ರಮಾಣದ ರೆಸ್ಟೆನೋಸಿಸ್ ಸ್ಟೆಂಟ್ಗಳ ಬೆಳವಣಿಗೆಗೆ ಕಾರಣವಾಯಿತು. ಸ್ಟೆಂಟ್ಗಳು ಫಲಿತಾಂಶಗಳನ್ನು ಸುಧಾರಿಸಿದರೂ, ಅವು ಇನ್-ಸ್ಟೆಂಟ್ ರೆಸ್ಟೆನೋಸಿಸ್ ಮತ್ತು ಸ್ಟೆಂಟ್ ಥ್ರಂಬೋಸಿಸ್ನಂತಹ ಹೊಸ ತೊಡಕುಗಳನ್ನು ಪರಿಚಯಿಸಿದವು. ಆಂಜಿಯೋಪ್ಲ್ಯಾಸ್ಟಿಯಲ್ಲಿನ ಇತ್ತೀಚಿನ ಆವಿಷ್ಕಾರವೆಂದರೆ ಸ್ಟೆಂಟ್ಲೆಸ್ ಡ್ರಗ್-ಎಲ್ಯೂಟಿಂಗ್ ಬಲೂನ್ (DEB), ಇದು ಬಲೂನ್ ಆಂಜಿಯೋಪ್ಲ್ಯಾಸ್ಟಿಯ ಪ್ರಯೋಜನಗಳನ್ನು ಡ್ರಗ್ ಎಲ್ಯೂಷನ್ನ ವಿರೋಧಿ ಪ್ರಸರಣ ಪರಿಣಾಮಗಳೊಂದಿಗೆ ಸಂಯೋಜಿಸುತ್ತದೆ. ಸ್ಟೆಂಟ್ಲೆಸ್ DEBಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳ ಪ್ರಯೋಜನಗಳು ಸ್ಟೆಂಟ್ಲೆಸ್ DEBಗಳು ಜೀವಕೋಶ ಪ್ರಸರಣವನ್ನು ತಡೆಯುವ, ಗಾಯದ ಅಂಗಾಂಶದ ಬೆಳವಣಿಗೆಯನ್ನು ಕಡಿಮೆ ಮಾಡುವ ಮತ್ತು ರೆಸ್ಟೆನೋಸಿಸ್ ಅಪಾಯವನ್ನು ಕಡಿಮೆ ಮಾಡುವ ಔಷಧದಿಂದ ಲೇಪಿತವಾದ ಬಲೂನ್ಗಳಾಗಿವೆ. ಬಲೂನ್ ಅನ್ನು ಉಬ್ಬಿಸಿದಾಗ, ಔಷಧವನ್ನು ಅಪಧಮನಿಯ ಗೋಡೆಗೆ ಬಿಡುಗಡೆ ಮಾಡಲಾಗುತ್ತದೆ, ಇದು ಸ್ಥಳೀಯ ಚಿಕಿತ್ಸಕ ಪರಿಣಾಮವನ್ನು ಒದಗಿಸುತ್ತದೆ. ನಂತರ ಬಲೂನನ್ನು ಡಿಫ್ಲೇಟ್ ಮಾಡಿ ತೆಗೆಯಲಾಗುತ್ತದೆ, ಇದರಿಂದ ಯಾವುದೇ ಶಾಶ್ವತ ಇಂಪ್ಲಾಂಟ್ ಉಳಿಯುವುದಿಲ್ಲ. ಈ ವಿಧಾನವು ಸ್ಟೆಂಟ್-ಸಂಬಂಧಿತ…
ಬೆಂಗಳೂರು : ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆ ಜತೆಗೆ ಯಾವ ಕಾಲಕ್ಕೂ ವಿದ್ಯುತ್ ಕೊರತೆಯಾಗದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ದ 56ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, “ವಿದ್ಯುತ್ ಉತ್ಪಾದನೆಯಲ್ಲಿ ರಾಜ್ಯವು ಸ್ವಾವಲಂಬನೆ ಸಾಧಿಸಿದೆ. ಮುಂದಿನ ದಿನಗಳಲ್ಲಿ ಯಾವ ಸಂದರ್ಭದಲ್ಲೂ ವಿದ್ಯುತ್ ಕೊರತೆ ಆಗಬಾರದು. ಆ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು,” ಎಂದರು. “ಜಲ, ಉಷ್ಣ, ಸೌರ, ಪವನ, ಅನಿಲ ಮಾತ್ರವಲ್ಲ ತ್ಯಾಜ್ಯದಿಂದಲೂ ವಿದ್ಯುತ್ ಉತ್ಪಾದಿಸುವ ಮೂಲಕ ಕೆಪಿಸಿಎಲ್ ಅತ್ಯುತ್ತಮ ಸಾಧನೆ ಮಾಡಿದೆ. ಆ ಮೂಲಕ ಅತಿ ಹೆಚ್ಚು ಮೂಲಗಳಿಂದ ವಿದ್ಯುತ್ ಉತ್ಪಾದಿಸುವ ರಾಜ್ಯವಾಗಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಯಲ್ಲಿ ನಿಲ್ಲಿಸಿದೆ,” ಎಂದು ಹೇಳಿದರು. “ನಾನು ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗ ನಮ್ಮ ಊರಿನಲ್ಲಿ ವಿದ್ಯುತ್ ಇರಲಿಲ್ಲ. 7-8ನೇ ತರಗತಿಯಲ್ಲಿರುವಾಗ ನಮ್ಮ ಊರಿಗೆ ವಿದ್ಯುತ್ ಬಂತು. ಆದರೆ, ಇಂದು ವಿದ್ಯುತ್ ಸಂಪರ್ಕ…
ಬೆಂಗಳೂರು: ಇಬ್ಬರು ಸ್ನೇಹಿತೆಯರಿಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಹಣವನ್ನು ಸುಲಿಗೆ ಮಾಡಲಾಗಿದೆ. ಸ್ನೇಹಿತೆಯರನ್ನು ಬೆತ್ತಲೆಗೊಳಿಸಿ ವೀಡಿಯೋ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವಂತ ಘಟನೆ ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದೆ. ಇಬ್ಬರು ಸ್ನೇಹಿತೆಯರನ್ನು ಬೆತ್ತಲೆಗೊಳಿಸಿದ ವೀಡಿಯೋ ತೋರಿಸಿ 58,000 ಹಣವನ್ನು ಸುಲಿಗೆ ಮಾಡಲಾಗಿದೆ. ಇದಷ್ಟೇ ಅಲ್ಲದೇ ಮತ್ತೆ ಮತ್ತೆ ಹಣ ನೀಡುವಂತೆ ಕಿರುಕುಳ ಕೂಡ ನೀಡಲಾಗಿದೆ. ಅಕ್ರಮ ಹಣ ವರ್ಗಾವಣೆ ಮಾಡಿದ್ದೀರೆಂದು ಡಿಜಿಟಲ್ ಅರೆಸ್ಟ್ ಆರೋಪಿಗಳು ಬೆದರಿಕೆ ಮಾಡಿ ಈ ಸುಲಿಗೆ ಮಾಡಲಾಗಿದೆ. ಸ್ನೇಹಿತರಿಗೆ ವೀಡಿಯೋ ಕರೆ ಮಾಡಿ ಸೈಬರ್ ವಂಚಕರಿಂದ ಈ ಕೃತ್ಯ ಎಸಗಲಾಗಿದೆ. ಇದಷ್ಟೇ ಅಲ್ಲದೇ ದೈಹಿಕ ತಪಾಸಣೆ ಹೆಸರಿನಲ್ಲಿ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಲಾಗಿದೆ. ದೈಹಿಕ ತಪಾಸಣೆ ಹೆಸರಿನಲ್ಲಿ ಸ್ನೇಹಿತೆಯರನ್ನು ವಿವಸ್ತ್ರಗೊಳಿಸಿ ಕಿರುಕುಳ ನೀಡಲಾಗಿದೆ. ಸುಮಾರು 9 ಗಂಟೆ ಕಾಲ ಕಿರುಕುಳಕ್ಕೊಳಗಾದ ಬಾಲ್ಯ ಸ್ನೇಹಿತೆಯರು ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. https://kannadanewsnow.com/kannada/karnataka-sslc-examination-3-results-announced-check-the-result-in-this-way/ https://kannadanewsnow.com/kannada/transfer-of-municipal-commissioners-for-a-single-day-state-government-order/
ಬೆಂಗಳೂರು: ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-3ರ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ. ಫಲಿತಾಂಶವನ್ನು ಯಾವ ರೀತಿ ಚೆಕ್ ಮಾಡಬೇಕು ಎನ್ನುವ ಬಗ್ಗೆ ಮುಂದೆ ಓದಿ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಜುಲೈ 2025ರ ಮಾಹೆಯಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆ-3 ನ್ನು ದಿನಾಂಕ:05.07.2025 ರಿಂದ 12.07.2025 ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಮುಕ್ತಾಯವಾಗಿದೆ ಎಂದು ತಿಳಿಸಿದ್ದಾರೆ. ರಿಸಲ್ಟ್ ಈ ರೀತಿ ಚೆಕ್ ಮಾಡಿ ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷೆ-3ರ ಫಲಿತಾಂಶವನ್ನು https://karresults.nic.in ಮತ್ತು https://kseab.karnataka.gov.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ನೊಂದಣಿ ಸಂಖ್ಯೆ ಸೇರಿದಂತೆ ಇತರೆ ಮಾಹಿತಿ ನೀಡಿ ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ. 2025 ರ ಎಸ್ಎಸ್ಎಲ್ಸಿ ಪರೀಕ್ಷೆ-3 ರ ಫಲಿತಾಂಶದ ಅಂಕಿ ಅಂಶಗಳು 1. 2025 ಎಸ್ ಎಸ್ ಎಲ್ ಸಿ ಪರೀಕ್ಷೆ – 3 ಅನ್ನು ದಿನಾಂಕ…
ಬೆಂಗಳೂರು: ಕೋರ್ಟ್ ಗೆ ತೆರಳುತ್ತಿದ್ದ ತಂದೆ-ಮಗನನ್ನು ಅಪಹರಿಸಿ ಆಂಧ್ರದಲ್ಲಿ ಬರ್ಬರ ಕೊಲೆ ಮಾಡಿರುವಂತ ಘಟನೆ ನಡೆದಿದೆ. ಬೆಂಗಳೂರಿನ ಕಾಡುಗೋಡಿ ಮೂಲದ ಉದ್ಯಮಿಗಳು ಕೋರ್ಟ್ ಗೆ ತೆರಳುತ್ತಿದ್ದಂತ ಸಂದರ್ಭದಲ್ಲಿ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಅವರನ್ನು ಆಂಧ್ರಪ್ರದೇಶಕ್ಕೆ ಅಪಹರಿಸಿ ಕರೆದೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಂತ ಉದ್ಯಮಿ ವೀರಸ್ವಾಮಿ, ಪ್ರಶಾಂತ್ ರೆಡ್ಡಿಯನ್ನು ಕೊಲೆ ಮಾಡಲಾಗಿದೆ. ಕಾರ್ಪೊರೇಷನ್ ಚುನಾವಣೆಗೆ ನಿಲ್ಲೋದಕ್ಕೆ ವೀರಸ್ವಾಮಿ, ಪ್ರಶಾಂತ್ ಸಿದ್ಧತೆ ನಡೆಸಿದ್ದರು. ಮಹದೇವಪುರ ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್ ಹತ್ಯೆ ಮಾಡಲಾಗಿದೆ. ಆಂಧ್ರದ ಬಾಪೆಟ್ಲ ಜಿಲ್ಲೆಯ ಚೆಕ್ ಬೌನ್ಸ್ ಕೇಸ್ ದಾಖಲಾಗಿತ್ತು. https://kannadanewsnow.com/kannada/transfer-of-municipal-commissioners-for-a-single-day-state-government-order/ https://kannadanewsnow.com/kannada/use-this-technique-to-prevent-the-practice-of-witchcraft-from-affecting-the-home/
ಇಂದಿನ ಕಾಲದಲ್ಲಿ ಹಿತ ಶತ್ರುಗಳು ಗುಪ್ತ ಶತ್ರುಗಳು ಕಣ್ಣಿಗೆ ಕಾಣದಂತೆ ಪ್ರಯೋಗಾದಿಗಳನ್ನು ಮಾಡುತ್ತಲೇ ಇರುತ್ತಾರೆ ಇದರಿಂದ ರಕ್ಷಣೆ ಹೇಗೆ ಎಂಬ ಸಂಶಯ ಪ್ರತಿಯೊಬ್ಬರಲ್ಲೂ ಬರುವುದು ಸಹಜ ಅದಕ್ಕಾಗಿ. ತಂತ್ರ ಈ ರೀತಿ ಇದೆ ಮನೆಯ ಮುಖ್ಯದ್ವಾರದ ಮುಂದೆ ಹಾಗೂ ಹಿಂದೆ ಶುದ್ಧವಾದ ಪೂಜೆ ಅರಿಶಿಣವನ್ನು ಹಾಗೂ ಗಂಗಾಜಲವನ್ನು ಸ್ವಲ್ಪ ಮಿಕ್ಸ್ ಮಾಡಿ ಪೇಸ್ಟ್ ರೀತಿ ಮಾಡಿಕೊಂಡು ನಿಮ್ಮ ಎರಡು ಕೈಗಳನ್ನು ಒತ್ತಿದಾಗ ಹಸ್ತದ ಅಚ್ಚನ್ನು ನಿಮ್ಮ ಮನೆಯ ಬಾಗಿಲ ಮುಂದೆ ಹಾಗೂ ಹಿಂದೆ ಮೂಡುವಂತೆ ಮಾಡಬೇಕು. ಈ ಒಂದು ಸಣ್ಣ ತಂತ್ರದಿಂದ ನಿಮ್ಮ ಮನೆಯಾಗಲಿ ಅಂಗಡಿಯಾಗಿರಬಹುದು ಫ್ಯಾಕ್ಟರಿ ಆಗಿರಬಹುದು ದೊಡ್ಡ ದೊಡ್ಡ ಕಾರ್ಖಾನೆ ಆಗಿರಬಹುದು ಆಫೀಸ್ ಗಳಾಗಿರಬಹುದು ಇವೆಲ್ಲವುದಕ್ಕೂ ಯಾರು ಏನೇ ಮಾಡಿದರು ತಾಗುವುದಿಲ್ಲ . ನಿಮ್ಮ ಮನೆ ಅಥವಾ ಫ್ಯಾಕ್ಟರಿ ಹೊಸದಿರಲಿ ಹಳೆಯದೇ ಇರಲಿ ಈ ತಂತ್ರವನ್ನು ಮಾಡಿ ಕೃತ್ರಿಮ ಪ್ರಯೋಗಾದಿಗಳಿಂದ ರಕ್ಷಣೆಯನ್ನು ಪಡೆಯಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು…
ಮೈಸೂರು: ಉಕ್ಕಡಮ್ಮ ದೇವಾಲಯದಲ್ಲಿ ಭೀಮನ ಅಮಾವಾಸ್ಯಾ ಹಬ್ಬದ ಪ್ರಯುಕ್ತ ಯಾತ್ರಿಕರ ಸುಗಮ ಪ್ರಯಾಣಕ್ಕಾಗಿ, ಕೆಳಕಂಡ ರೈಲುಗಳಿಗೆ ಪಾಂಡವಪುರ ರೈಲು ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ನೀಡಲು ತೀರ್ಮಾನಿಸಲಾಗಿದೆ. ಈ ತಾತ್ಕಾಲಿಕ ನಿಲುಗಡೆ ಜುಲೈ 24, 2025 ರಂದು ಒಂದು ದಿನ ಜಾರಿಗೆ ಇರಲಿದೆ. ಪಾಂಡವಪುರದಲ್ಲಿ ತಾತ್ಕಾಲಿಕ ನಿಲುಗಡೆ ನೀಡುವ ರೈಲುಗಳ ವಿವರಗಳು ಇಂತಿವೆ: ರೈಲು ಸಂಖ್ಯೆ 12613 ಮೈಸೂರು–ಕೆಎಸ್ಆರ್ ಬೆಂಗಳೂರು ಒಡೆಯರ್ ಎಕ್ಸ್ಪ್ರೆಸ್, ಬೆಳಿಗ್ಗೆ 11:48 ಕ್ಕೆ ಆಗಮಿಸಿ 11:49 ಕ್ಕೆ ನಿರ್ಗಮಿಸುತ್ತದೆ ರೈಲು ಸಂಖ್ಯೆ 20659 ಮೈಸೂರು–ಕೆಎಸ್ಆರ್ ಬೆಂಗಳೂರು ರಾಜ್ಯರಾಣಿ ಎಕ್ಸ್ಪ್ರೆಸ್, ಮಧ್ಯಾಹ್ನ 15:08 ಕ್ಕೆ ಆಗಮಿಸಿ 15:09 ಕ್ಕೆ ನಿರ್ಗಮಿಸುತ್ತದೆ ರೈಲು ಸಂಖ್ಯೆ 16232 ಮೈಸೂರು–ಕಡಲೂರ ಪೋರ್ಟ್ ಎಕ್ಸ್ಪ್ರೆಸ್, ಸಂಜೆ 16:32 ಕ್ಕೆ ಆಗಮಿಸಿ 16:33 ಕ್ಕೆ ನಿರ್ಗಮಿಸುತ್ತದೆ ರೈಲು ಸಂಖ್ಯೆ 20660 ಕೆಎಸ್ಆರ್ ಬೆಂಗಳೂರು–ಮೈಸೂರು ರಾಜ್ಯರಾಣಿ ಎಕ್ಸ್ಪ್ರೆಸ್, ಮಧ್ಯಾಹ್ನ 13:20 ಕ್ಕೆ ಆಗಮಿಸಿ 13:21 ಕ್ಕೆ ನಿರ್ಗಮಿಸುತ್ತದೆ ರೈಲು ಸಂಖ್ಯೆ 12614 ಕೆಎಸ್ಆರ್ ಬೆಂಗಳೂರು–ಮೈಸೂರು ಒಡೆಯರ್…
ಬೆಂಗಳೂರು: ಕೇಂದ್ರ ಸರ್ಕಾರ ನಡೆಸುತ್ತಿರುವುದು ಜಾತಿಗಣತಿ. ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ನಡೆಸುತ್ತಿದ್ದು ಗುರುವಾರ ಅಧಿಕೃತ ಆದೇಶ ಹೊರಡಿಸಲಾಗುತ್ತದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದರು. ಬುಧವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದು ಮಹತ್ವದ ವಿಚಾರಗಳನ್ನು ಚರ್ಚೆ ನಡೆಸಲಾಗಿದೆ. ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವರದಿ ರಚನೆಯ ಸಿದ್ಧತೆಗಳು ಅಂತಿಮಗೊಳ್ಳುತ್ತಿದ್ದು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ನೇತೃತ್ವದ ನಿಯೋಗವು ಮುಂದಿನ ಸೋಮವಾರ ತೆಲಂಗಾಣಕ್ಕೆ ತೆರಳಿ ಅಲ್ಲಿನ ಸಮೀಕ್ಷೆಯ ಪದ್ಧತಿಯನ್ನು ಅಧ್ಯಯನ ನಡೆಸಲಿದೆ ಎಂದರು. ಕಾಂತರಾಜು ಅವರ ವರದಿ ರಚಿಸಿ 10 ವರ್ಷ ಕಳೆದಿರುವುದರಿಂದ ರಾಜ್ಯದಲ್ಲಿ ಮತ್ತೊಮ್ಮೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ವರದಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಆಯೋಗಕ್ಕೆ ನಿರ್ದೇಶನ ನೀಡಿದ್ದಾರೆ ಎಂದು…
ಬೆಂಗಳೂರು: ನಗರದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದತೆ ತಪ್ಪೊಪ್ಪಿಕೊಂಡ ಮೂವರು ಆರೋಪಿಗಳಿಗೆ 7 ವರ್ಷ ಕಠಿಣ ಶಿಕ್ಷೆಯನ್ನು ನೀಡಿ NIA ವಿಶೇಷ ಕೋರ್ಟ್ ಆದೇಶಿಸಿದೆ. ಈ ಕುರಿತಂತೆ ಇಂದು ಎನ್ ಐ ಎ ವಿಶೇಷ ಕೋರ್ಟ್ ತೀರ್ಪು ಪ್ರಕಟಿಸಿದ್ದು, ಎ14 ಸೈಯದ್ ಇಕ್ರಮುದ್ದೀನ್ ಆಲಿಯಾಸ್ ನವೀದ್, ಎ16 ಸೈಯದ್ ಆಸಿಫ್, ಎ18 ಮೊಹಮ್ಮದ್ ಆತೀಫ್ ಗೆ 7 ವರ್ಷ ಕಠಿಣ ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ನೂ ಇದಲ್ಲದೇ ಮೂವರು ಆರೋಪಿಗಳಿಗೆ ತಲಾ 46 ಸಾವಿರ ದಂಡವನ್ನು ವಿಧಿಸಿ ಎನ್ಐಎ ವಿಶೇಷ ಕೋರ್ಟ್ ಆದೇಶಿಸಿದೆ. ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತರಾಗಿದ್ದಂತ ಅಪರಾಧಿಗಳು ಇವರಾಗಿದ್ದಾರೆ. ಗಲಭೆ ನಡೆಸಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಆರೋಪವಿತ್ತು. ಎನ್ಐಎ ಪರ ಎಸ್ ಪಿಪಿ ಪಿ.ಪ್ರಸನ್ನ ಕುಮಾರ್ ವಾದಿಸಿದ್ದರು. https://kannadanewsnow.com/kannada/transfer-of-municipal-commissioners-for-a-single-day-state-government-order/ https://kannadanewsnow.com/kannada/breaking-the-government-has-made-an-important-decision-to-conduct-re-census-in-the-state-from-september-22-to-october-7/
ಬೆಂಗಳೂರು: ನಗರದಲ್ಲಿ ಕೆಪಿಎಂಇ ನಿಯಮ ಉಲ್ಲಂಘಿಸಿ ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆಯಿಂದ ಬಿಗ್ ಶಾಕ್ ನೀಡಲಾಗಿದೆ. ಸಾವಿರಾರು ರೂಪಾಯಿ ದಂಡವನ್ನು ವಿಧಿಸಿದ್ದರೇ, ಕೆಲ ಆಸ್ಪತ್ರೆಗಳ ವಿರುದ್ಧ ಎಫ್ಐಆರ್ ಕೂಡ ದಾಖಲಿಸಲಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾಹಿತಿ ನೀಡಿದ್ದು, ಮಾನ್ಯ ಜಿಲ್ಲಾಧಿಕಾರಿಗಳು ಬೆಂಗಳೂರು ನಗರ ಜಿಲ್ಲೆ ರವರ ಅಧ್ಯಕ್ಷತೆಯಲ್ಲಿ ದಿನಾಂಕ: 23.07.2025 ರಂದು ಪೂರ್ವಾಹ್ನ 10:30 ಗಂಟೆಗೆ ನಡೆದ ಕೆಪಿಎಂಇ ನೋಂದಣಿ ಮತ್ತು ಕುಂದು ಕೊರತೆ ಪ್ರಾಧಿಕಾರದ ಸಭೆಯಲ್ಲಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೆಪಿಎಂಇ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಖಾಸಗಿ ವೈದ್ಯಕೀಯ ಸಂಸ್ಥೆಗಳು/ಆಸ್ಪತ್ರೆಗಳು/ಕ್ಲಿನಿಕ್ಗಳು/ಪುನರ್ವಸತಿ ಕೇಂದ್ರಗಳ ಒಟ್ಟು 58 ಪ್ರಕರಣಗಳನ್ನು ಮಂಡಿಸಲಾಗಿದ್ದು, ಸದರಿ ಸಂಸ್ಥೆಗಳಿಗೆ ಮಾನ್ಯ ಜಿಲ್ಲಾಧಿಕಾರಿಗಳು ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ಆದೇಶಿಸಿರುತ್ತಾರೆ ಎಂದು ತಿಳಿಸಿದ್ದಾರೆ. ದಂಡ ವಿಧಿಸಿರುವಂತ ಆಸ್ಪತ್ರೆಗಳ ಪಟ್ಟಿ ಹೀಗಿದೆ.. ಮಾರುತಿ ಕ್ಲಿನಿಕ್, ತಿಗಳರಪಾಳ್ಯ ಮೇನ್ ರೋಡ್, ಆಂಧ್ರಹಳ್ಳಿ, ಬೆಂಗಳಊರು – ರೂ.50,000 ಶಾರದಾ ಕ್ಲಿನಿಕ್ ( ಮೌಲ್ಯ ಕ್ಲಿನಿಕ್),…