Author: kannadanewsnow09

ಶಿವಮೊಗ್ಗ: ಸಾಗರ ಉಪ ವಿಭಾಗದ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ್ ಅಂಡ್ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದಂತ ಆರೋಪಿಯನ್ನು ಮಾಲು ಸಹಿತ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದದಿಂದ ಶಿವಮೊಗ್ಗ ಜಿಲ್ಲೆಯ ಆನಂದಪುರದಲ್ಲಿನ ಯಡೆಹಳ್ಳಿ ವೃತ್ತಕ್ಕೆ ವ್ಯಕ್ತಿಯೊಬ್ಬ ಜಿಂಕೆ ಚರ್ಮವನ್ನು ಮಾರಾಟ ಮಾಡೋದಕ್ಕೆ ಆಗಮಿಸುತ್ತಿದ್ದನು. ಈ ಮಾಹಿತಿಯು ಸಾಗರ ಉಪ ವಿಭಾಗದ ಅರಣ್ಯ ಸಂಚಾರಿದಳದ ಪಿಎಸ್ಐ ವಿನಾಯಕ್ ಗೆ ಸಿಕ್ಕಿತ್ತು. ಕೂಡಲೇ ಅಲರ್ಟ್ ಆದಂತ ಅವರು, ತಮ್ಮ ಸಿಬ್ಬಂದಿಗಳೊಂದಿಗೆ ಮಫ್ತಿಯಲ್ಲಿ ಆನಂದಪುರದ ಯಡೆಹಳ್ಳಿ ವೃತ್ತಕ್ಕೆ ಹೋಗಿ ಕಾರ್ಯಾಚರಣೆಗೆ ಇಳಿದಿದ್ದರು. ನವಲಗುಂದದಿಂದ ಆನಂದಪುರದ ಯಡೆಹಳ್ಳಿ ಸರ್ಕಲ್ ಗೆ ಬಸ್ಸಿನಲ್ಲಿ ಬಂದು ಇಳಿದು ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸಿದ್ದಾನೆ. ಆ ವೇಳೆ ಕೂಡಲೇ ವಶಕ್ಕೆ ಪಡೆದು, ಆತ ತಂದಿದ್ದಂತ ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಚಿಂಕೆ ಚರ್ಮ ಪರ್ತೆಯಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಯನ್ನು ಧಾರವಾಡದ ನವಲಗುಂದದ ಅರ್ಜುನ್ ಬಿನ್ ರಾಮಪ್ಪ ಎಂಬುದಾಗಿ ಗುರುತಿಸಲಾಗಿದೆ. ಜಿಂಕೆ ಚರ್ಮದ…

Read More

ಬೆಂಗಳೂರು: ​ನಮ್ಮ ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನಕ್ಕೆ ಹೆಸರಾಗಿದೆ. ಈಗ ನಮ್ಮ ಯುವ ಪ್ರತಿಭೆಗಳು ನೇರವಾಗಿ ಮಂಗಳ ಗ್ರಹದ ಮಿಷನ್‌ಗಳಿಗೆ ಕೈಜೋಡಿಸುವ ಅವಕಾಶ ಬಂದಿದೆ. ನಗರದ ಹೃದಯ ಭಾಗವಾದ ಜಯನಗರದಲ್ಲಿರುವ ಪಾರ್ಸೆಕ್‌ (ParSEC) ಸೆಂಟರ್‌ ಹಾಗೂ ಮೇಕರ್ಸ್‌ ಅಡ್ಡದಲ್ಲಿ 2025ರ ಡಿಸೆಂಬರ್ 19 ರಿಂದ 21ರವರೆಗೆ ‘ಹಾರ್ಡ್‌ವೇರ್ ಹ್ಯಾಕಥಾನ್ 2.0 – ಜರ್ನಿ ಟು ಮಾರ್ಸ್’ ಹಮ್ಮಿಕೊಳ್ಳಲಾಗಿದೆ. ​ಇದು 72 ಗಂಟೆಗಳ ಕಾಲ ನಡೆಯುವ ಒಂದು ಸ್ಪೆಷಲ್ ಹಾರ್ಡ್‌ವೇರ್ ಹ್ಯಾಕಥಾನ್ ಆಗಿದೆ. ಮಂಗಳ ಗ್ರಹದಲ್ಲಿ ಮನುಷ್ಯರು ಬದುಕಲು ಮತ್ತು ಪ್ರಯಾಣಿಸಲು ನೆರವಾಗುವ ಅತ್ಯಾಧುನಿಕ ಟೆಕ್ ಪರಿಹಾರಗಳನ್ನು ಇಲ್ಲಿ ವಿನ್ಯಾಸಗೊಳಿಸಬೇಕು ಮತ್ತು ಪ್ರೋಟೋಟೈಪ್ ಮಾಡಬೇಕು. ​ ಇದರಲ್ಲಿ ಏನು ವಿಶೇಷ? ಮೇಕರ್‌ಗಳು ಮತ್ತು ಎಂಜಿನಿಯರ್‌ಗಳ ಕೆಲಸ ಸುಲಭವಾಗಿಸಲು, ನಿಮ್ಮದೇ ವಿನ್ಯಾಸದ ಪಿಸಿಬಿ (ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್) ಕೇವಲ 24 ಗಂಟೆಗಳ ಒಳಗೆ ಸ್ಥಳದಲ್ಲಿಯೇ ತಯಾರಿಸಿ ಕೊಡಲಾಗುತ್ತದೆ. ಜತೆಗೆ, ಸರ್ಕ್ಯೂಟ್ ವಿನ್ಯಾಸ, ಬಿಸಿನೆಸ್ ಪ್ಲ್ಯಾನಿಂಗ್ ಮತ್ತು ಹಣ ಹೂಡಿಕೆದಾರರ ಮುಂದೆ ಪ್ರದರ್ಶಿಸುವ ತರಬೇತಿ ಕಾರ್ಯಾಗಾರಗಳು…

Read More

ಬೆಂಗಳೂರು: ಆಕ್ಸಿಸ್ ಮ್ಯಾಕ್ಸ್ ಲೈಫ್ ಸಂಸ್ಥೆ ಸಹಯೋಗದಲ್ಲಿ ಶಿಲ್ಪಾ ಫೌಂಡೇಶನ್, ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿದಡಿ (ಸಿಎಸ್‌‌ಆರ್) ಬನ್ನೇರುಘಟ್ಟ ರಸ್ತೆಯ ಬಿಳೇಕಹಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಕ್ ವಿತರಿಸಲಾಯಿತು. ಹತ್ತಾರು ಶಾಲೆಗಳ ನೂರಾರು ವಿದ್ಯಾರ್ಥಿಗಳಿಗೆ ಬ್ಯಾಕ್ ವಿತರಿಸುವ‌ ಕಾರ್ಯ ನಿರಂತರವಾಗಿ ನಡೆಸಿಕೊಂಡು ಬರಲಾಗುವುದು. ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಸಿಕ್ಕಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಯಾರೂ ಸಹ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಲ್ಪಾ ಫೌಂಡೇಶನ್‌‌ನ ಇಎಸ್‌‌ಜಿ ಮತ್ತು ಸಾಮಾಜಿಕ ಕಾರ್ಯಕ್ರಮದ ಕಾರ್ಯನಿರ್ವಾಹಕ ಮುಖ್ಯಸ್ಥ ಡಾ.ಸತೀಶ್ ಬೆಟ್ಟಪ್ಪ ಹೇಳಿದರು. ಆಕ್ಸಿಸ್ ಮ್ಯಾಕ್ಸ್ ಲೈಫ್‌‌ನ ವಲಯ ಉಪಾಧ್ಯಕ್ಷ ಕೆ.ಸುಧಾಕರ ಶೆಟ್ಟಿ, ಪ್ರಾದೇಶಿಕ ವ್ಯವಸ್ಥಾಪಕ ಎಂ.ಸಂತೋಷ್, ಜೆ.ಪಿ.ನಗರದ ಶಾಖಾ ವ್ಯವಸ್ಥಾಪಕ ರಾಮ್ ಪ್ರಸಾದ್ ಮತ್ತಿತರರಿದ್ದರು.

Read More

ಬೆಂಗಳೂರು:  ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನ ಯೋಜನೆಯ ಅಡಿಯಲ್ಲಿ 2.50 ಲಕ್ಷ, 3 ಲಕ್ಷ ಪ್ರೋತ್ಸಾಹಧನಕ್ಕೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ. ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಯಾರಿಗೆಲ್ಲ ಪ್ರೋತ್ಸಾಹಧನ? ಎಷ್ಟು ನೀಡಲಾಗುತ್ತೆ ಗೊತ್ತಾ? ಪರಿಶಿಷ್ಟ ಜಾತಿ ಯುವಕರು ಇತರೆ ಜಾತಿಯ ಯುವತಿಯರನ್ನು ವಿವಾಹವಾದಲ್ಲಿ, ಅಂತಹ ದಂಪತಿಗಳಿಗೆ ರೂ.2.50 ಲಕ್ಷಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಯುವತಿಯರು ಇತರೆ ಜಾತಿಯ ಯುವಕರನ್ನು ವಿವಾಹವಾದಲ್ಲಿ, ಅಂತಹ ದಂತಿಗಳಿಗೆ ರೂ.3 ಲಕ್ಷಗಳ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ಹೇಗೆ? ಅಂತರ್ಜಾತಿ ವಿವಾಹಿತ ದಂಪತಿಗಳು ವಿವಾಹವನ್ನು ಉಪ ನೋಂದಣಿ ಕಚೇರಿಯಲ್ಲಿ ನೋಂದಾಯಿಸಬೇಕು. ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅಂತರ್ಜಾತಿ ವಿವಾಹಿತರು ಪ್ರೋತ್ಸಾಹಧನಕ್ಕಾಗಿ https://swdservices.karnataka.gov.in/swIncentive/ICM/ICMHome.aspx ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಿ. ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು ಯುವತಿಯ ವಯಸ್ಸು 18 ರಿಂದ 42 ವರ್ಷ, ಯುವಕನ…

Read More

ಶಿವಮೊಗ್ಗ: ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿಯ ದೂಗೂರು ಅರಣ್ಯದಲ್ಲಿ ಕೆಲ ದಿನಗಳಿಂದ ಬೀಡು ಬಿಟ್ಟಿದ್ದಂತ ಜೋಡಿ ಕಾಡಾನೆಗಳನ್ನು, ಒಂದೇ ದಿನಕ್ಕೆ ಅಂಬಲಿಗೋಳ ವ್ಯಾಪ್ತಿಗೆ ಮುಟ್ಟಿಸೋದಕ್ಕೆ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ನಾಳೆಯೂ ಅಂಬಲಿಗೋಳ ವ್ಯಾಪ್ತಿಯ ಅರಣ್ಯ ಇಲಾಖೆಯಿಂದ ಶೆಟ್ಟಿಹಳ್ಳಿ ವೈಲ್ಡ್ ಲೈಫ್ ಸೆಂಚುರಿ ಕಡೆಗೆ ಓಡಿಸೋ ಕಾರ್ಯಾಚರಣೆ ಮುಂದುವರೆಯಲಿದೆ ಎಂಬುದಾಗಿ ಸಾಗರ-ಸೊರಬ ಡಿಎಫ್ಓ ಮೋಹನ್ ಕುಮಾರ್ ಮಾಹಿತಿ ನೀಡಿದ್ದಾರೆ. ಕೈಸೋಡಿಯ ರೈತ ಉಮೇಶ್ ಇಪತ್ತಕ್ಕೂ ಹೆಚ್ಚು ಭತ್ತ ತುಂಬಿದ ಚೀಲ ನಾಶ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಹೋಬಳಿಗೆ ಡಿಸೆಂಬರ್.1ರಂದು ಜೋಡಿ ಕಾಡಾನೆಗಳು ಎಂಟ್ರಿಯಾಗಿದ್ದವು. ಕಾನಹಳ್ಳಿ, ಕೈಸೋಡಿ ವ್ಯಾಪ್ತಿಯ ಹಲವೆಡೆ ರೈತರ ಬೆಳೆಯನ್ನು ನಾಶ ಪಡಿಸಿದ್ದವು.  ಅದರಲ್ಲೂ ಕೈಸೋಡಿ ಗ್ರಾಮದ ಉಮೇಶ್ ಎಂಬುವರಿಗೆ ಸೇರಿದಂತ ಇಪ್ಪತ್ತಕ್ಕೂ ಹೆಚ್ಚು ಭತ್ತ ತುಂಬಿದ್ದ ಚೀಲಗಳನ್ನು ಆನೆಗಳು ಸಂಪೂರ್ಣ ನಾಶ ಮಾಡಿದ್ದವು. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿ, ರೈತ ಉಮೇಶ್ ಕಂಗಾಲಾಗಿದ್ದಾರೆ. ಇದಲ್ಲದೇ ಕೈಸೋಡಿಯ ಪುಟ್ಟಪ್ಪ ಎಂಬುವರಿಗೆ ಸೇರಿದ ಭತ್ತ, ಮಂಜಪ್ಪ ಎಂಬುವರ…

Read More

ಬೆಂಗಳೂರು: ಪ್ಲಾಸ್ಟಿಕ್ ಉದ್ಯಮ ವಲಯದ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರಕಾರವು ಮಂಗಳೂರು ಮತ್ತು ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ 200 ಎಕರೆಯಲ್ಲಿ ಸುಸಜ್ಜಿತ `ಪ್ಲಾಸ್ಟಿಕ್ ಪಾರ್ಕ್’ ಸ್ಥಾಪಿಸಲಿದೆ. ಉದ್ಯಮಿಗಳು ತಮಗೆ ಎಲ್ಲಿ ಬೇಕೋ ಅಲ್ಲಿ ಅರ್ಜಿ ಹಾಕಿಕೊಳ್ಳಬಹುದು. ಸರಕಾರ ತ್ವರಿತವಾಗಿ ಭೂಮಿ ಕೊಡುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಶನಿವಾರ ಇಲ್ಲಿ ನಡೆದ ಪ್ಲಾಸ್ಟ್ ಇಂಡಿಯಾ-2026 ಪ್ರದರ್ಶನ ಮೇಳದ ಪೂರ್ವಭಾವಿ ಉದ್ಘಾಟನಾ ಸಮಾವೇಶದಲ್ಲಿ ಅವರು ಪಾಲ್ಗೊಂಡಿದ್ದರು. ಕರ್ನಾಟಕದ ಪ್ಲಾಸ್ಟಿಕ್ ಉದ್ಯಮಿಗಳಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 12ನೇ ವರ್ಷದ ಈ ಅಂತಾರಾಷ್ಟ್ರೀಯ ಸಮಾವೇಶವು ಮುಂದಿನ ವರ್ಷ ಫೆ.5ರಿಂದ 10ರವರೆಗೆ ದೆಹಲಿಯ ಭಾರತ ಮಂಟಪದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ವಲಯಕ್ಕೆ ಬೇಕಾದ ಪ್ರತಿಭಾವಂತ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಂಶೋಧನೆಗಾಗಿ ಕೇಂದ್ರೀಯ ಪೆಟ್ರೋಕೆಮಿಕಲ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯು (ಸಿಐಪಿಇಟಿ) ಇಲ್ಲಿ ತನ್ನ ಕ್ಯಾಂಪಸ್ ತೆರೆಯಲಿದೆ ಎಂದೂ ತಿಳಿಸಿದ್ದಾರೆ. ದೇಶದಲ್ಲಿ ಪ್ಲಾಸ್ಟಿಕ್…

Read More

ದೇವನಹಳ್ಳಿ : “ಬೆಂಗಳೂರು ದಕ್ಷಿಣ ಹಾಗೂ ಉತ್ತರ ಜಿಲ್ಲೆಗಳಲ್ಲಿ ಹೊಸ ಬೆಂಗಳೂರು ನಿರ್ಮಾಣ ಮಾಡಿ ವಿಶ್ವದ ಜನರನ್ನು ಆಕರ್ಷಿಸಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ನೂತನ ಕಛೇರಿ ಕಟ್ಟಡವನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ದೇವನಹಳ್ಳಿಯ ಅಂಬಿಕಾ ಲೇಔಟ್ ನಲ್ಲಿ ಶನಿವಾರ ಉದ್ಘಾಟಿಸಿ ಮಾತನಾಡಿದರು. “ಎತ್ತಿನಹೊಳೆ ಹಾಗೂ ಕಾವೇರಿ ನೀರನ್ನು ಈ ಭಾಗಕ್ಕೆ ನೀಡಬೇಕು ಎಂದು ಮುನಿಯಪ್ಪನವರು ನನ್ನ ಮೇಲೆ ಬಹಳ ಒತ್ತಡ ಹಾಕುತ್ತಿದ್ದಾರೆ. ನಾನು ಮಂತ್ರಿಯಾದ ಬಳಿಕ ಬೆಂಗಳೂರು ನಗರಕ್ಕೆ ಪ್ರತ್ಯೇಕವಾಗಿ 6 ಟಿಎಂಸಿ ನೀರನ್ನು ಮೀಸಲಿಡಲು ಆದೇಶ ಹೊರಡಿಸಿರುವೆ” ಎಂದರು. “ನೀವೆಲ್ಲರೂ ನಮ್ಮ ನೀರು ನಮ್ಮ ಹಕ್ಕು ಎಂದು ಮೇಕೆದಾಟು ಹೋರಾಟದಲ್ಲಿ ಭಾಗವಹಿಸಿ ಹೆಜ್ಜೆ ಹಾಕಿದಿರಿ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನಮ್ಮ ರಾಜ್ಯದ ಪರವಾಗಿ ತೀರ್ಪು ನೀಡಿದೆ. ಈ ವಿಚಾರದಲ್ಲಿ ನಮ್ಮ ಹಸ್ತಕ್ಷೇಪವಿಲ್ಲ. ತಾಂತ್ರಿಕ ವಿಚಾಗಳೇನೆ ಇದ್ದರು ಕೇಂದ್ರ ಜಲ ಆಯೋಗ ತೀರ್ಮಾನ ಮಾಡಬೇಕು ಎಂದು ತಿಳಿಸಿದೆ.…

Read More

ಬೆಂಗಳೂರು: ಸುದ್ದಿ ಮನೆಯಲ್ಲಿ ಸುಧೀರ್ಘ ಅವಧಿಗೆ ಸೇವೆ ಸಲ್ಲಿಸಿ, ಸಂಜೆ ಪತ್ರಿಕೆಗೆ ಸುದ್ದಿ ಮೆರಗು ನೀಡಿದ ಅ.ಚ.ಶಿವಣ್ಣ ಅವರು, ಪತ್ರಕರ್ತರ ವೃತ್ತಿಗೂ ವಿಶ್ವಾಸರ್ಹತೆ ತಂದವರು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸ್ಮರಿಸಿದರು. ಜಯನಗರದಲ್ಲಿ ಏರ್ಪಡಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, 1980 ದಶಕದಲ್ಲಿ ಮೊಬೈಲ್ ಗಳು ಇಲ್ಲದ ಸಂದರ್ಭದಲ್ಲಿ ಪೊಲೀಸ ಇಲಾಖೆ ಮಾತ್ರ ಬಳಸುತ್ತಿದ್ದ ವಾಕೀಟಾಕಿಯನ್ನು ಸರ್ಕಾರದೊಂದಿಗೆ ಹೋರಾಟ ಮಾಡಿ ಅನುಮತಿ ಪಡೆದು, ಸುದ್ದಿ ನೀಡಲು ಬಳಸಿದ ಹೆಗ್ಗಳಿಕೆ ಶಿವಣ್ಣ ಅವರದು ಎಂದರು. ಮನೆಯಂಗಳದಲ್ಲಿ ಸನ್ಮಾನ ಕಾರ್ಯಕ್ರಮಕ್ಕಾಗಿ ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಹಬ್ಬದ ವಾತಾವರಣವನ್ನ ನಿರ್ಮಾಣ ಮಾಡಿದ್ದನ್ನು ಮರೆಯುವಂತಿಲ್ಲ. ಕೆಯುಡಬ್ಲೂೃಜೆ ಪ್ರಶಸ್ತಿ ನೀಡಿದ್ದಾಗಲೂ ಸಂಭ್ರಮಿಸಿದ್ದರು. ಮಾಧ್ಯಮ ಅಕಾಡೆಮಿಯಿಂದ ಜೀವಮಾನದ ಸಾಧನೆಗಾಗಿ ವಿಶೇಷ ಪ್ರಶಸ್ತಿ ನೀಡಿದ್ದಾಗ ಅಭಿಮಾನದಿಂದ ಹಿಗ್ಗಿದ್ದರು ಎಂದರು. ಕೆಎಸ್‌ಆರ್‌ಪಿ ಆಯುಕ್ತ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಮಾತನಾಡಿ, ಅ ಚ ಶಿವಣ್ಣ ಅವರು ಮುಂಗೋಪಿಯಾದರೂ, ಅವರ ಮನಸ್ಸು ತುಂಬಾ ಮೃದು. ಯಾರನ್ನೇ…

Read More

ಮಂಡ್ಯ : ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಂತೆ ಪ್ರತಿಯೊಬ್ಬರು ಸ್ವದೇಶಿ ವಸ್ತುಗಳನ್ನು ಉತ್ಪಾದಿಸಿ, ಬಳಸಿದರೆ ಭಾರತ ಸ್ವಾವಲಂಬಿ ಮತ್ತು ಬಲಿಷ್ಠ ದೇಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಬ್ರಿಗೇಡಿಯರ್ ಮಾಜಿ ಸೈನಿಕ ರವಿ ಮುನಿಸ್ವಾಮಿ ಅಭಿಪ್ರಾಯಪಟ್ಟರು. ಸ್ವದೇಶಿ ವಸ್ತು ಬಳಸಿ ದೇಶ ಉಳಿಸಿ ಅಭಿಯಾನದ ಅಂಗವಾಗಿ ಮಾಜಿ ಯೋಧರು, ನಿವೃತ್ತ ಕೆಎಎಸ್, ಐಎಎಸ್ ಅಧಿಕಾರಿಗಳು ಹಾಗೂ ಇನ್ನಿತರ ಸಂಘಟನೆಗಳ ಸಹಯೋಗದೊಂದಿಗೆ ಬೆಂಗಳೂರಿನಿಂದ ಸೈಕಲ್ ಜಾಥಾ ಹಮ್ಮಿಕೊಂಡಿದ್ದು, ಶನಿವಾರ ಮದ್ದೂರು ತಾಲೂಕಿನ ಸೋಮನಹಳ್ಳಿ ಸಿಪಾಯಿ ಹೋಟೆಲ್ ಬಳಿ ಆಗಮಿಸಿದಾಗ ಮಾಜಿ ಸೈನಿಕ ಸಿಪಾಯಿ ಶ್ರೀನಿವಾಸ್ ನೇತೃತ್ವದಲ್ಲಿ ಪುಷ್ಪಾರ್ಚನೆ ಮೂಲಕ ಸ್ವಾಗತಿಸಲಾಯಿತು. ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಮುನಿಸ್ವಾಮಿ ಅವರು, ಪ್ರಧಾನಿ ಮೋದಿಯವರು ದೇಶವನ್ನು ವಿಶ್ವಗುರು ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ, ಅವರು ದೇಶದ ಸೈನಿಕರು, ರೈತರು ಹಾಗೂ ಬಡವರಿಗೆ ನಿರಂತರವಾಗಿ 18 ಗಂಟೆಗಳ ಕಾಲ ಕೆಲಸ ಮಾಡುತ್ತಾ ದೇಶ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಸ್ವದೇಶಿ ದೇಶಪ್ರೇಮ ಹಾಗೂ ರಾಷ್ಟ್ರಭಕ್ತಿಗೆ ಬೇರೆ ಹೋಲಿಕೆಯಿಲ್ಲ. ಸ್ವಾತಂತ್ರ್ಯ, ಸ್ವಾಭಿಮಾನ ಆರ್ಥಿಕ…

Read More

ಮಂಡ್ಯ : ಮದ್ದೂರು ನಗರದ ಪೇಟೆ ಬೀದಿಯನ್ನು 80 ಅಡಿಗೆ ಅಗಲೀಕರಣ ಮಾಡುವ ಸಂಬಂಧ ರಸ್ತೆ ಕಾಮಗಾರಿಯೂ ಸರ್ಕಾರದ ಮಟ್ಟದಲ್ಲಿ ಅಂತಿಮ ಘಟ್ಟ ತಲುಪಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಹೀಗಾಗಿ ರಸ್ತೆಯ ವಿವಿಧ ಸ್ಥಳಗಳಲ್ಲಿ ಪ್ರಮುಖ ವೃತ್ತಗಳನ್ನು ನಿರ್ಮಿಸಿ ದೇಶದ ಮಹಾನ್ ನಾಯಕರ ಪುತ್ತಳಿ ನಿರ್ಮಿಸಲು ಶಾಸಕ ಕೆ.ಎಂ.ಉದಯ್ ಖ್ಯಾತ ಶಿಲ್ಪಿ ಮೈಸೂರಿನ ಅರುಣ್ ಯೋಗಿರಾಜ್ ಅವರ ಜೊತೆ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು. ಮದ್ದೂರು ನಗರದ ಕೊಪ್ಪ ವೃತ್ತ, ಕೊಲ್ಲಿ ವೃತ್ತ, ಹೂವಿನ ವೃತ್ತ, ಕೆಮ್ಮಣ್ಣು ವೃತ್ತ, ಸರ್ಕಾರಿ ಕಾಲೇಜು ವೃತ್ತ ಹಾಗೂ ಪ್ರವಾಸಿ ಮಂದಿರದ ವೃತ್ತದವರೆಗೆ ಶಾಸಕ ಉದಯ್ ಹಾಗೂ ಅರುಣ್ ಯೋಗಿ ರಾಜ್ ಅವರು ಸ್ಥಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಮದ್ದೂರು ಪುರಸಭೆಯನ್ನು ರಾಜ್ಯ ಸರ್ಕಾರ ಈಗಾಗಲೇ ನಗರಸಭೆಯನ್ನಾಗಿ ಮೇಲ್ದರ್ಜೆಗೆರಿಸಲಾಗಿದೆ. ಹೀಗಾಗಿ ನಗರದ ಪೇಟೆ ಬೀದಿಯನ್ನು 80 ಅಡಿಗೆ ಅಗಲೀಕರಣ ಮಾಡುವ ಜೊತೆಗೆ ಸಾರ್ವಜನಿಕರಿಗೆ ಅತ್ಯಾಧುನಿಕ ಮಾದರಿಯಲ್ಲಿ…

Read More