Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಇಂದು ಮಲೆನಾಡು ಪ್ರದೇಶದ ಇತಿಹಾಸ ಮತ್ತು ಅಭಿವೃದ್ಧಿಯ ಹೆಮ್ಮೆಯ ಸಂಕೇತವಾದ ಸಾಗರ ಜಂಬಗಾರು ರೈಲು ನಿಲ್ದಾಣದಲ್ಲಿ ಸ್ಟೇಷನ್ ಮಹೋತ್ಸವವನ್ನು ಆಚರಿಸಲಾಯಿತು. ರೈಲ್ವೆ ಇಲಾಖೆಯ ಅಧಿಕೃತ ದಾಖಲೆಗಳ ಪ್ರಕಾರ, ಈ ನಿಲ್ದಾಣವು 1938–39ರಲ್ಲಿ ಸ್ಥಾಪನೆಯಾಗಿ ಹಲವು ದಶಕಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸ್ಟೇಷನ್ ಮಹೋತ್ಸವವು ಭಾರತೀಯ ರೈಲ್ವೆಯ ಮಹತ್ವದ ಉಪಕ್ರಮವಾಗಿದ್ದು, ರೈಲು ನಿಲ್ದಾಣಗಳ ಇತಿಹಾಸ, ಪರಂಪರೆ, ಅಭಿವೃದ್ಧಿ ಹಾಗೂ ಸಾರ್ವಜನಿಕ ಸೇವೆಯ ಪಾತ್ರವನ್ನು ಜನರಿಗೆ ಪರಿಚಯಿಸುವುದು ಇದರ ಉದ್ದೇಶವಾಗಿದೆ. ವಿಶೇಷವಾಗಿ ಶಾಲಾ ಮಕ್ಕಳನ್ನು ಒಳಗೊಂಡಂತೆ ಯುವ ಪೀಳಿಗೆಗೆ ರಾಷ್ಟ್ರ ನಿರ್ಮಾಣದಲ್ಲಿ ರೈಲ್ವೆಯ ಮಹತ್ವವನ್ನು ಅರಿವುಗೊಳಿಸುವುದಕ್ಕೆ ಇದು ಸಹಕಾರಿಯಾಗಿದೆ. ಭಾರತೀಯ ರೈಲ್ವೆ ದಾಖಲೆಗಳಲ್ಲಿ ಸಾಗರವನ್ನು ಅಧಿಕೃತವಾಗಿ ಸಾಗರ ಜಂಬಗಾರು ಎಂದು ದಾಖಲಿಸಲಾಗಿದೆ. ಸಾಗರಕ್ಕೆ ಸೇವೆ ನೀಡಿದ ಮೊದಲ ರೈಲು ನಿಲ್ದಾಣವು ಬಸವನ ಹೊಳೆ ಅತ್ತ ಇರುವ ಜಂಬಗಾರು ಗ್ರಾಮದಲ್ಲಿ ಸ್ಥಾಪಿತವಾಗಿತ್ತು. ಮೀಟರ್ ಗೇಜ್ ಅವಧಿಯಲ್ಲಿ ಸಾಗರ ಜಂಬಗಾರು ನಿಲ್ದಾಣವನ್ನು ಎಸ್ಆರ್ ಎಫ್ ಕೋಡ್ನಿಂದ ಗುರುತಿಸಲಾಗುತ್ತಿದ್ದು, ತಾಲಗುಪ್ಪ ನಿಲ್ದಾಣಕ್ಕೆ ಟಿಎಲ್ ಜಿಪಿ…
ಬೆಂಗಳೂರು: ಕರ್ನಾಟಕ ಸರ್ಕಾರವು ಅನುಷ್ಠಾನಕ್ಕೆ ತರುತ್ತಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025 ಅನ್ನು ಯಾವುದೇ ಕಾರಣಕ್ಕೆ ಅಂಗೀಕರಿಸದಂತೆ ಬಿಜೆಪಿ ವತಿಯಿಂದ ನಾಡಿದ್ದು ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಅವರು ತಿಳಿಸಿದ್ದಾರೆ. ನಗರದಲ್ಲಿ ಇಂದು ಕೆ.ಜಿ. ರಸ್ತೆ ಬಳಿ ಇರುವ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ನಾಡಿದ್ದು ಮಾನ್ಯ ರಾಜ್ಯಪಾಲರಿಗೆ ಮನವಿ ಕೊಡಲಿದ್ದು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಅವರು ನೇತೃತ್ವ ವಹಿಸುವರು. ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಭಾಗವಹಿಸುತ್ತಾರೆ ಎಂದು ತಿಳಿಸಿದರು. ಈ ವಿಧೇಯಕದ ವಿರುದ್ಧ ಇವತ್ತು ಇಲ್ಲಿ ಸಾಂಕೇತಿಕವಾಗಿ ಮೌನ ಪ್ರತಿಭಟನೆ ಮಾಡುತ್ತಿದ್ದೇವೆ. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಇವತ್ತು ಹೋರಾಟ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಮಸೂದೆ ವಾಪಸ್ ಪಡೆಯುವಂತೆ ಕಾನೂನು ರೀತಿಯ ಹೋರಾಟ…
ಬೆಂಗಳೂರು: 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪೂರ್ವ ಭಾವಿ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಡೆಸಿದರು. ಅವರ ಸಭೆಯ ಮುಖ್ಯಾಂಶ ಹೈಲೈಟ್ಸ್ ಮುಂದಿದೆ ಓದಿ.. ಇಂದು ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 06ರ ವರೆಗೆ ನಡೆಯಲಿದೆ. ಹಿರಿಯ ಚಲನಚಿತ್ರ ಕಲಾವಿದರು, ನಿರ್ದೇಶಕರು ನಿರ್ಮಾಪಕರು ಆದ ಪ್ರಕಾಶ್ ರಾಜ್ ಅವರನ್ನು 17ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ (Brand Ambassador) ಆಗಿ ನೇಮಿಸಲಾಗಿದೆ ಎಂದರು. ಅಂತರಾಷ್ಟ್ರೀಯ ಚಲನಚಿತ್ರ ಉತ್ಸವದ ಉದ್ಘಾಟನೆ ವಿಧಾನಸೌಧದ ಮುಂಭಾಗದಲ್ಲಿ ಭವ್ಯ ಮೆಟ್ಟಿಲುಗಳ ಮೇಲೆ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವದಲ್ಲಿ ಮಹಿಳಾ ಸಬಲೀಕರಣ ಕುರಿತಾದ ಥೀಮ್ ಇರಲಿದೆ. ರಾಜಾಜಿನಗರದ ಲುಲುಮಾಲ್ನಲ್ಲಿರುವ ಸಿನಿ ಪೊಲಿಸ್ನ 11 ಸ್ಕಿನ್ಗಳಲ್ಲಿ ಚಿತ್ರೋತ್ಸವದ ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ ಎಂದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಏಷಿಯನ್, ಭಾರತೀಯ ಮತ್ತು ಕನ್ನಡ ಸಿನಿಮಾ ಸ್ಪರ್ಧಾತ್ಮಕ ವಿಭಾಗಗಳಿಗೆ ಚಲನಚಿತ್ರಗಳ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಈ…
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ…
ನವದೆಹಲಿ: ಆಭರಣ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ಇಂದು ಒಂದೇ ದಿನಕ್ಕೆ ಚಿನ್ನದ ದರವು ರೂ.2,400 ಹೆಚ್ಚಳವಾಗಿದೆ. ಆ ಮೂಲಕ ಒಂದೇ ದಿನಕ್ಕೆ ದಾಖಲೆ ಮಟ್ಟದಲ್ಲಿ ಆಭರಣದ ದರವು ಹೆಚ್ಚಳಗೊಂಡಿದೆ. ಡಿಸೆಂಬರ್ 23, 2025 ರಂದು, 24K ಚಿನ್ನದ ಬೆಲೆ 10 ಗ್ರಾಂಗೆ ₹138,320 ಕ್ಕೆ ತಲುಪಿದ್ದು, ಹಿಂದಿನ ಮುಕ್ತಾಯಕ್ಕೆ ಹೋಲಿಸಿದರೆ ₹2,400 ರಷ್ಟು ಏರಿಕೆ ಕಂಡಿದೆ. ಏತನ್ಮಧ್ಯೆ, 22K ಚಿನ್ನದ ಬೆಲೆ 10 ಗ್ರಾಂಗೆ ₹126,793 ಕ್ಕೆ ತಲುಪಿದೆ. ಭಾರತದಲ್ಲಿ ಚಿನ್ನದ ಬೆಲೆಗಳು ಅಂತರರಾಷ್ಟ್ರೀಯ ಸ್ಪಾಟ್ ಚಿನ್ನದ ದರಗಳು, US ಡಾಲರ್ ಏರಿಳಿತಗಳು ಮತ್ತು ಚಿನ್ನದ ಮೇಲಿನ ಆಮದು ಸುಂಕಗಳು ಸೇರಿದಂತೆ ಇತರ ವಿಷಯಗಳಿಂದ ಹೆಚ್ಚಾಗಿ ಪ್ರಭಾವಿತವಾಗಿವೆ. ಭಾರತದಲ್ಲಿ ಚಿನ್ನದ ಬೆಲೆಗಳು ದುಬೈಗಿಂತ ಹೆಚ್ಚೇ ಮುಂದುವರೆದಿದೆ. ಡಿಸೆಂಬರ್ 23, 2025 ರಂದು ಭಾರತದಲ್ಲಿ 24K ಚಿನ್ನದ ಬೆಲೆ 10 ಗ್ರಾಂಗೆ ₹138,320 ಆಗಿದ್ದರೆ, ದುಬೈನಲ್ಲಿ ₹112,816 ಆಗಿದ್ದು, ಇದು ₹25,504 ಅಥವಾ 22.61% ವ್ಯತ್ಯಾಸವನ್ನು ಪ್ರತಿಬಿಂಬಿಸುತ್ತದೆ. ಅದೇ ರೀತಿ, ಭಾರತದಲ್ಲಿ…
ಬೆಂಗಳೂರು: ರಾಜ್ಯದ ಆ ಆಸ್ಪತ್ರೆಗೆ ಬಡ ವರ್ಗದ ಜನರು ಚಿಕಿತ್ಸೆಗಾಗಿ ರೋಗಿಗಳನ್ನು ಕರೆದೊಯ್ಯೋದು ಮಾಮೂಲಿ. ಆ ಆಸ್ಪತ್ರೆಗೆ ತೆರಳೋ ರೋಗಿಗಳಿಗೆ ಚಿಕಿತ್ಸೆ ವೇಳೆಯಲ್ಲಿ ಔಷಧಿಗಾಗಿ ಬರೆದು ಕೊಡೋ ಚೀಟಿಯನ್ನು ತೆಗೆದುಕೊಂಡು ನೀವು ಔಷಧಿ ತರೋದಕ್ಕೆ ಹೋದ್ರೆ, ಅಲ್ಲಿ ನಡೆಯೋದೇ ಬೇರೆ. ಹಾಗಾದ್ರೆ ನೀವು ರಾಜ್ಯದ ಆ ಪ್ರಸಿದ್ಧ ಆಸ್ಪತ್ರೆಗೆ ಹೋಗಿ, ಔಷಧಿ ಬರೆದುಕೊಟ್ಟಾಗ ತೆಗೆದುಕೊಂಡು ಹೋಗೋ ಮುನ್ನ ಮುಂದಿನ ಸುದ್ದಿ ಓದಿ.. ಕಾಯಿಲೆ ವಾಸಿಗೆ ಪ್ರಿಸ್ಕ್ರಪ್ಪನ್ನಲ್ಲಿ (ಔಷಧ ಚೀಟಿ) ವೈದ್ಯರು ಬರೆಯುವ ಔಷಧವನ್ನೇ ಕಡ್ಡಾಯವಾಗಿ ರೋಗಿಗಳಿಗೆ ನೀಡುವುದು ಔಷಧ ಮಳಿಗೆಗಳ ಕರ್ತವ್ಯ. ಆದರೆ,ವೈದ್ಯರು ಬರೆದಿರುವ ಔಷಧ ಬದಲು ಇನ್ಯಾವುದೋ ಕೊಡುವ ಔಷಧವನ್ನು ಸೇವಿಸಿದರೆ ರೋಗಿಗಳ ದೇಹದಲ್ಲಿ ಅಡ್ಡ ಪರಿಣಾಮ ಅಥವಾ ಕೆಲವೊಮ್ಮೆ ಪ್ರಾಣಕ್ಕೂ ಅಪಾಯ ಇರುತ್ತದೆ. ಅದರಂತೆ, ರಾಜ್ಯದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯಾದ ವಿಕ್ಟೋರಿಯಾ ಹಾಗೂ ನಿಮ್ಹಾನ್ಸ್ ಆವರಣದಲ್ಲಿರುವ ‘ಜನತಾ ಬಜಾರ್ ಔಷಧ ಮಳಿಗೆಗಳು, ಬದಲಿ ಔಷಧ ಕೊಟ್ಟು ಸಾವಿರಾರು ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ. ಸಹಕಾರ ಇಲಾಖೆಯ ಅಧೀನದ ಕರ್ನಾಟಕ…
ನವದೆಹಲಿ: ಪ್ಯಾನ್ ಗೆ ಆಧಾರ್ ಸಂಖ್ಯೆ ಲಿಂಕ್ ಮಾಡೋದಕ್ಕೆ ಗಡುವಿಗೆ ಕೇವಲ ಒಂಬತ್ತು ದಿನಗಳು ಉಳಿದಿದ್ದು, ಭವಿಷ್ಯದಲ್ಲಿ ಯಾವುದೇ ಅಡೆತಡೆಗಳನ್ನು ತಪ್ಪಿಸಲು ನಾಗರಿಕರು ಡಿಸೆಂಬರ್ 31, 2025 ರೊಳಗೆ ತಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡಲು ಸೂಚಿಸಲಾಗಿದೆ. ನೀವು ನಿರ್ದಿಷ್ಟ ಸಮಯದೊಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಜನವರಿ 1, 2026 ರಿಂದ ನಿಷ್ಕ್ರಿಯಗೊಳ್ಳುತ್ತದೆ. ಪ್ಯಾನ್ ಲಿಂಕ್ ಆಧಾರ್, ಪ್ಯಾನ್-ಆಧಾರ್ ಲಿಂಕ್ ಕೊನೆಯ ದಿನಾಂಕ ಏಪ್ರಿಲ್ 3, 2025 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ, ಹಣಕಾಸು ಸಚಿವಾಲಯವು ಹೀಗೆ ಹೇಳಿದೆ: “ಆದಾಯ ತೆರಿಗೆ ಕಾಯ್ದೆ, 1961 (1961 ರ 43) ಸೆಕ್ಷನ್ 139AA ನ ಉಪವಿಭಾಗ (2A) ನಿಂದ ನೀಡಲಾದ ಅಧಿಕಾರವನ್ನು ಚಲಾಯಿಸುವಲ್ಲಿ, ಅಕ್ಟೋಬರ್ 1, 2024 ರ ಮೊದಲು ಸಲ್ಲಿಸಲಾದ ಆಧಾರ್ ಅರ್ಜಿ ನಮೂನೆಯ ದಾಖಲಾತಿ ಐಡಿ ಆಧಾರದ ಮೇಲೆ ಶಾಶ್ವತ ಖಾತೆ ಸಂಖ್ಯೆಯನ್ನು ಪಡೆದ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ಆದಾಯ…
ನವದೆಹಲಿ: 2025ಕ್ಕೆ ತೆರೆ ಬೀಳಲು ಕೆಲವೇ ದಿನಗಳು ಬಾಕಿ ಇರುವಾಗ, ಹೊಸ ವರ್ಷದ ಆಗಮನವು ಹೊಸ ಕ್ಯಾಲೆಂಡರ್ಗಳು ಮತ್ತು ನಿರ್ಣಯಗಳಿಗಿಂತ ಹೆಚ್ಚಿನದನ್ನು ತರುತ್ತದೆ. ಹಾಗಾದ್ರೆ ಜನವರಿ 1, 2026ರಿಂದ ಏನೆಲ್ಲ ಬದಲಾವಣೆ ಅಂತ ಮುಂದೆ ಓದಿ. ಜನವರಿ 1, 2026 ರಿಂದ, ರೈತರು, ಸಂಬಳ ಪಡೆಯುವ ನೌಕರರು, ಯುವಜನರು ಮತ್ತು ವ್ಯಾಪಕ ಸಾರ್ವಜನಿಕರ ಮೇಲೆ ನೇರವಾಗಿ ಪರಿಣಾಮ ಬೀರುವ ಹಲವಾರು ನೀತಿ ಮತ್ತು ನಿಯಂತ್ರಕ ಬದಲಾವಣೆಗಳು ಜಾರಿಗೆ ಬರಲಿವೆ. ಬ್ಯಾಂಕಿಂಗ್ ನಿಯಮಗಳು, ಸಾಮಾಜಿಕ ಮಾಧ್ಯಮ ನಿಯಮಗಳು, ಇಂಧನ ಬೆಲೆಗಳು ಮತ್ತು ಸರ್ಕಾರಿ ಯೋಜನೆಗಳು ಎಲ್ಲವನ್ನೂ ಪರಿಷ್ಕರಣೆಗೆ ಒಳಪಡಿಸಲಾಗುತ್ತಿದೆ. ಪ್ರತಿ ಹೊಸ ವರ್ಷವು ಅಸ್ತಿತ್ವದಲ್ಲಿರುವ ನಿಯಮಗಳಿಗೆ ಬದಲಾವಣೆಗಳನ್ನು ತರುತ್ತಿದ್ದರೂ, 2026 ಹಲವಾರು ದೊಡ್ಡ ಬದಲಾವಣೆಗಳನ್ನು ಕಾಣುವ ನಿರೀಕ್ಷೆಯಿದೆ. ದತ್ತಾಂಶ ಸಂರಕ್ಷಣೆ ಮತ್ತು ಸಾಮಾಜಿಕ ಮಾಧ್ಯಮ ಮೇಲ್ವಿಚಾರಣೆಯ ಮೇಲಿನ ಸರ್ಕಾರದ ನವೀಕೃತ ತಳ್ಳುವಿಕೆ, ಬ್ಯಾಂಕಿಂಗ್ ಮಾನದಂಡಗಳಲ್ಲಿನ ಪರಿಷ್ಕರಣೆಗಳೊಂದಿಗೆ, ಜನರು ಹೇಗೆ ವಹಿವಾಟು ನಡೆಸುತ್ತಾರೆ, ಖರ್ಚು ಮಾಡುತ್ತಾರೆ ಮತ್ತು ಸೇವೆಗಳನ್ನು ಹೇಗೆ ಪ್ರವೇಶಿಸುತ್ತಾರೆ ಎಂಬುದನ್ನು ಬದಲಾಯಿಸುವ…
ನವದೆಹಲಿ : ದೇಶೀಯ ಕ್ರಿಕೆಟ್ನಲ್ಲಿ ಮಹಿಳಾ ಕ್ರಿಕೆಟಿಗರು ಮತ್ತು ಅಧಿಕಾರಿಗಳ ಪಂದ್ಯ ಶುಲ್ಕವನ್ನು ಬಿಸಿಸಿಐ ದ್ವಿಗುಣಗೊಳಿಸಿದೆ. ಇದು ಭಾರತದ ಚೊಚ್ಚಲ ಏಕದಿನ ವಿಶ್ವಕಪ್ ಗೆಲುವಿನಿಂದ ಪ್ರೇರಿತವಾಗಿದೆ ಮತ್ತು ಸರ್ಕ್ಯೂಟ್ನಾದ್ಯಂತ ಹೆಚ್ಚು ಸಮಾನ ವೇತನ ರಚನೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಮಂಡಳಿಯ ಅಪೆಕ್ಸ್ ಕೌನ್ಸಿಲ್ ಈ ಗಣನೀಯ ಹೆಚ್ಚಳವನ್ನು ಅನುಮೋದಿಸಿದೆ. ಪರಿಷ್ಕೃತ ವೇತನ ರಚನೆಯ ಪ್ರಕಾರ, ದೇಶೀಯ ಪಂದ್ಯಾವಳಿಗಳಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿರುವ ಹಿರಿಯ ಮಹಿಳಾ ಕ್ರಿಕೆಟಿಗರು ಈಗ ದಿನಕ್ಕೆ 50,000 ರೂ. ಗಳಿಸುತ್ತಾರೆ. ಇದು ಅಸ್ತಿತ್ವದಲ್ಲಿರುವ ಪ್ರತಿ ಪಂದ್ಯದ ದಿನಕ್ಕೆ 20,000 ರೂ. (ಮೀಸಲುಗಾಗಿ ರೂ. 10,000) ಗಿಂತ ಗಮನಾರ್ಹ ಏರಿಕೆಯಾಗಿದೆ. ಹಿರಿಯ ಮಹಿಳಾ ದೇಶೀಯ ಏಕದಿನ ಪಂದ್ಯಾವಳಿಗಳು ಮತ್ತು ಬಹು-ದಿನದ ಸ್ಪರ್ಧೆಗಳಿಗೆ, ಮೊದಲ XI ನಲ್ಲಿರುವ ಆಟಗಾರ್ತಿಯರಿಗೆ ದಿನಕ್ಕೆ 50,000 ರೂ. ಪಡೆಯುತ್ತಾರೆ, ಆದರೆ ಮೀಸಲು ಆಟಗಾರರಿಗೆ ದಿನಕ್ಕೆ 25,000 ರೂ.ಗಳಂತೆ ಅರ್ಧದಷ್ಟು ಮೊತ್ತವನ್ನು ನೀಡಲಾಗುತ್ತದೆ. ರಾಷ್ಟ್ರೀಯ T20 ಪಂದ್ಯಾವಳಿಗಳಲ್ಲಿ, ಮೊದಲ XI ಆಟಗಾರ್ತಿಯರಿಗೆ ಪ್ರತಿ ಪಂದ್ಯದ ದಿನಕ್ಕೆ 25,000…
ಚಿತ್ರದುರ್ಗ: ಕರ್ನಾಟಕ ರಾಜ್ಯ ಸರ್ಕಾರದ ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ನೀಡುವಂತ ಇಂದಿರಾ ಪ್ರಿಯದರ್ಶಿನಿ ರಾಜ್ಯ ಪರಿಸರ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮಾಲತೇಶ್ ಅರಸ್ ಹರ್ತಿಕೋಟೆಗೆ ಪ್ರದಾನ ಮಾಡಲಾಯಿತು. ಸಚಿವರಾದ ಡಿ.ಸುಧಾಕರ್, ಮಂಡಳಿ ಅಧ್ಯಕ್ಷರಾದ ನರೇಂದ್ರ ಸ್ವಾಮಿ, ಶಾಸಕರಾದ ರಘುಮೂರ್ತಿ, ನಿಗಮದ ಅಧ್ಯಕ್ಷರಾದ ಜಿ.ಎಸ್.ಮಂಜುನಾಥ್, ಆಯೋಗದ ಅಧ್ಯಕ್ಷರಾದ ಪಿ ರಘು, ಎಡಿಸಿ ಕುಮಾರ ಸ್ವಾಮಿ, ಅರಣ್ಯ ಇಲಾಖೆಯ ಅಧಿಕಾರಿಗಳು ಜೊತೆಗೂಡಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮಾಲತೇಶ್ ಅರಸ್ ಹರ್ತಿಕೋಟೆ ಪರಿಚಯ ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ (ರಿ) ಯ ರಾಜ್ಯಾಧ್ಯಕ್ಷರಾದ ಮಾಲತೇಶ್ ಅರಸ್ , 23 ವರ್ಷಗಳಿಂದ ನಿರಂತರವಾಗಿ ಪರಿಸರ ಸಂರಕ್ಷಣೆಯ ಹೋರಾಟಗಾರ. ಪರಿಸರ ಸಂರಕ್ಷಣೆ ಎಂದರೆ ಕೇವಲ ಒಂದು ಕಾರ್ಯವಲ್ಲ, ಅದು ಮಾನವೀಯ ಬದುಕಿನ ನಾಡಿಯಂತೆ ಅಳವಡಿಸಿಕೊಳ್ಳಬೇಕಾದ ಕರ್ತವ್ಯವೆಂದು ನಂಬಿ ಕಳೆದ ಎರಡು ದಶಕಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ವ್ಯಕ್ತಿ — ಮಾಲತೇಶ್ ಅರಸ್ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹರ್ತಿಕೋಟೆಯವರು. ಮಾಲತೇಶ್…














