Subscribe to Updates
Get the latest creative news from FooBar about art, design and business.
Author: kannadanewsnow09
ಸಿದ್ಧರು ಮತ್ತು ಜ್ಞಾನಿಗಳು ಶತಮಾನಗಳ ಹಿಂದೆ ಬದುಕಿದ್ದರು ಮತ್ತು ಸತ್ತರು ಎಂಬ ಕಲ್ಪನೆ ಹೆಚ್ಚಿನ ಜನರಿಗೆ ಇದೆ. ಆ ಸಿದ್ಧರು ಮಾಡಿದ ಪವಾಡಗಳ ಪುರಾವೆಗಳು ವಿಶ್ವಾಸಾರ್ಹವಲ್ಲ ಎಂದು ಕೆಲವರು ಹೇಳುವುದನ್ನು ನಾವು ಕೇಳಿದ್ದೇವೆ. ಕಳೆದ ಶತಮಾನದ ಆರಂಭದ ವರ್ಷಗಳಲ್ಲಿ ಮೇಲಿನ ಎಲ್ಲಾ ವಿಚಾರಗಳನ್ನು ಸುಳ್ಳು ಮಾಡುವ ರೀತಿಯಲ್ಲಿ ಬದುಕಿದ ಮತ್ತು ಸಿದ್ಧಿ ಸ್ಥಿತಿಯನ್ನು ಪಡೆದವರು ಶಿರಡಿ ಸಾಯಿಬಾಬಾ. ಅವರು ಮಾಡಿದ ಅನೇಕ ಪವಾಡಗಳನ್ನು ಆ ಕಾಲದ ಸರ್ಕಾರಿ ಕಡತಗಳಲ್ಲಿ ಉಲ್ಲೇಖಿಸಲಾಗಿದೆ ಎಂಬುದು ಅವರ ದೈವಿಕ ಶಕ್ತಿಗೆ ಸಾಕ್ಷಿಯಾಗಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಸಿದ್ಧ ಪುರುಷ, ಸಾಯಿಬಾಬಾ, ತಮ್ಮ ಜೀವಿತಾವಧಿಯಲ್ಲಿ ಮಾತ್ರವಲ್ಲದೆ, ತಮ್ಮ ಸಮಾಧಿಯಾದ 100 ವರ್ಷಗಳ ನಂತರವೂ ತಮ್ಮ ನಿಜವಾದ ಭಕ್ತರ ಕುಂದುಕೊರತೆಗಳನ್ನು ಪರಿಹರಿಸುತ್ತಿದ್ದಾರೆ.…
ಕೆಂಟ್ ನ ಡಚೆಸ್ ಕ್ಯಾಥರೀನ್ ಶುಕ್ರವಾರ 92 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಬಕಿಂಗ್ಹ್ಯಾಮ್ ಅರಮನೆ ಶುಕ್ರವಾರ ಪ್ರಕಟಿಸಿದೆ. “ನಿನ್ನೆ ರಾತ್ರಿ ಕೆನ್ಸಿಂಗ್ಟನ್ ಅರಮನೆಯಲ್ಲಿ ಅವರ ಕುಟುಂಬದೊಂದಿಗೆ ಶಾಂತಿಯುತವಾಗಿ ನಿಧನರಾದರು” ಎಂದು ಅರಮನೆ ಹೇಳಿಕೆಯಲ್ಲಿ ತಿಳಿಸಿದೆ. ಬಕಿಂಗ್ಹ್ಯಾಮ್ ಅರಮನೆಯಲ್ಲಿ ಧ್ವಜವನ್ನು ಅರ್ಧಕ್ಕೆ ಇಳಿಸಲಾಗಿದೆ. ಕೆಂಟ್ ನ ಡಚೆಸ್ ಕ್ಯಾಥರೀನ್, ರಾಜಮನೆತನದ ಅತ್ಯಂತ ಹಿರಿಯ ಸದಸ್ಯೆ ಮತ್ತು ದಿವಂಗತ ರಾಣಿ ಎಲಿಜಬೆತ್ II ರ ಮೊದಲ ಸೋದರಸಂಬಂಧಿ, ಪ್ರಿನ್ಸ್ ಎಡ್ವರ್ಡ್, ಡ್ಯೂಕ್ ಆಫ್ ಕೆಂಟ್ ಅವರ ಪತ್ನಿ. https://twitter.com/RoyalFamily/status/1963920121551851554 ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ಗಳಲ್ಲಿ ಅವರು ಪರಿಚಿತ ವ್ಯಕ್ತಿಯಾಗಿದ್ದರು, ಆಗಾಗ್ಗೆ ಟ್ರೋಫಿಗಳನ್ನು ನೀಡುತ್ತಿದ್ದರು ಮತ್ತು ಆಟಗಾರರಿಗೆ ಸಾಂತ್ವನ ಹೇಳುತ್ತಿದ್ದರು, ವಿಶೇಷವಾಗಿ 1993 ರಲ್ಲಿ ಕಣ್ಣೀರು ಸುರಿಸುತ್ತಿದ್ದ ಜನ ನೊವೊಟ್ನಾ ಅವರನ್ನು ಸಾಂತ್ವನ ಹೇಳುತ್ತಿದ್ದರು. “ರಾಜ ಮತ್ತು ರಾಣಿ ಮತ್ತು ರಾಜಮನೆತನದ ಎಲ್ಲಾ ಸದಸ್ಯರು ಡ್ಯೂಕ್ ಆಫ್ ಕೆಂಟ್, ಅವರ ಮಕ್ಕಳು ಮತ್ತು ಮೊಮ್ಮಕ್ಕಳೊಂದಿಗೆ ತಮ್ಮ ನಷ್ಟದ ದುಃಖದಲ್ಲಿ ಸೇರುತ್ತಾರೆ ಮತ್ತು ಡಚೆಸ್ ಅವರು ಸಂಬಂಧ…
ಬೆಂಗಳೂರು: “ಗಬ್ಬರ್ ಸಿಂಗ್ ತೆರಿಗೆ” ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶ ಮಾಡಲಿದೆ. ತೆರಿಗೆ ಪಾವತಿ ವ್ಯವಸ್ಥೆಯ ಸಂಕೀರ್ಣತೆ ಮತ್ತು ವೆಚ್ಚದ ಹೊರೆ ಅವರ ಬದುಕನ್ನು ಸರಣಿ ಕಷ್ಟಗಳ ಸರಮಾಲೆಗೆ ಸಿಲುಕಿಸಲಿದೆ ಎಂದು ಕಳೆದ ಎಂಟು ವರ್ಷಗಳಿಂದ ನಾವು ಹೇಳುತ್ತಲೇ ಬಂದಿದ್ದೆವು. ಆದರೆ ನರೇಂದ್ರ ಮೋದಿಯವರು ನಮ್ಮ ಮಾತಿಗೆ ಕಿವಿಗೊಡದೆ ನಿರ್ಲಕ್ಷಿಸುತ್ತಲೇ ಬಂದಿದ್ದರು ಎಂಬುದಾಗಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ತೆರಿಗೆದಾರ ಜನತೆ ಮತ್ತು ವ್ಯಾಪಾರಿ ವರ್ಗದ ಮೇಲಿನ ಆರ್ಥಿಕ ಭಾರ ಮತ್ತು ಅನುಷ್ಠಾನದ ಜಂಜಾಟವನ್ನು ತಗ್ಗಿಸಲು ಅತ್ಯಗತ್ಯವಾಗಿದ್ದ ತೆರಿಗೆ ಸುಧಾರಣೆಯನ್ನು ಜಾರಿಗೆ ತರುವ ಸರಕು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿಯ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರದ ಹೊಸ ಅವಿಷ್ಕಾರವೇನಲ್ಲ. ಅತ್ಯಂತ ಅವಸರದಲ್ಲಿ ಎನ್ ಡಿ ಎ ಸರ್ಕಾರ 2017ರಲ್ಲಿ ದೋಷಪೂರ್ಣ ಜಿ.ಎಸ್.ಟಿ ಯನ್ನು ಜಾರಿಗೊಳಿಸಿದಾಗಲೇ ಲೋಕಸಭೆ ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಮತ್ತು ವಿರೋಧ…
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಡಿ ಕರ್ನಾಟಕ ತಾಂಡ ಅಭಿವೃಧ್ಧಿ ನಿಗಮದ ವತಿಯಿಂದ ಸಂತ ಸೇವಾಲಾಲ್ ರವರ ಜನ್ಮಸ್ಥಳ ಬಾಯಾಗಡ್, ಸೂರಗೊಂಡನ ಕೊಪ್ಪ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆಯಲ್ಲಿ 2 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಬಂಜಾರ ಸಮುದಾಯದ 1000 ವಿದ್ಯಾವಂತ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ/ವೃತ್ತಿಗಾಗಿ ಮಾರ್ಗದರ್ಶನ, ಸಂವಿಧಾನದ ಕುರಿತು ಅರಿವು ಹಾಗೂ ಜಾಗೃತಿ ಕುರಿತು ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು. ಪ್ರತಿ ಜಿಲ್ಲೆಯಿಂದ ಕನಿಷ್ಠ 100 ಅಭ್ಯರ್ಥಿಗಳಂತೆ ಒಟ್ಟು 1000 ಅಭ್ಯರ್ಥಿಗಳಿಗೆ ಅವಕಾಶವಿದೆ. ಹಾಗಾಗಿ, ಬಂಜಾರ ಸಮುದಾಯದವರು ತಮ್ಮ ವಲಯ ವ್ಯಾಪ್ತಿಯಲ್ಲಿ ಅರ್ಜಿ ನೋಂದಾಯಿಸಲು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕೋರಿರುತ್ತಾರೆ. ಆಸಕ್ತ ಬಂಜಾರ ಸಮುದಾಯದ ಯುವಕ-ಯುವತಿಯರು ನೋಂದಾಯಿಸಿಕೊಳ್ಳಲು https://docs.google.com/forms/u/0/d/1sZ4W5yk5UP2qo9ZUMBmrTH4c_yW6kU5XuCZIG6OayS8/viewform?pli=1&pli=1&edit_requested=true ಲಿಂಕ್ ನಲ್ಲಿ ಸಲ್ಲಿಸಿ. https://twitter.com/SWDGoK/status/1963944263630348547 https://kannadanewsnow.com/kannada/surgeon-chapped-off-his-legs-to-satisfy-sexual-desires-then-claimed-insurance-of-5-crore/ https://kannadanewsnow.com/kannada/audio-of-the-mlas-son-with-a-rowdy-sheeter-goes-viral/
ಅಂಗವಿಕಲನಾಗುವ ಬಗ್ಗೆ ಲೈಂಗಿಕವಾಗಿ “ಗೀಳು” ಹೊಂದಿದ್ದ NHS ನಾಳೀಯ ಶಸ್ತ್ರಚಿಕಿತ್ಸಕನೊಬ್ಬ ತನ್ನ ಕಾಲುಗಳನ್ನು ಹೆಪ್ಪುಗಟ್ಟಲು ಡ್ರೈ ಐಸ್ ಬಳಸಿ ಅವುಗಳನ್ನು ತೆಗೆದುಹಾಕಬೇಕಾದ ಹಂತಕ್ಕೆ ನಂತರ ತನ್ನ ವಿಮಾದಾರರಿಂದ £466,653 ಅಂದರೆ 5 ಕೋಟಿ ವಿಮೆ ಕ್ಲೈಮ್ ಮಾಡಿದ್ದಾನೆ. ರೋಗಿಗಳಿಗೆ ನೂರಾರು ಅಂಗವಿಕಲತೆಗಳನ್ನು ಮಾಡಿದ 49 ವರ್ಷದ ನೀಲ್ ಹಾಪರ್, ತನ್ನ ಸ್ವಂತ ಕಾಲುಗಳನ್ನು ತೆಗೆದುಹಾಕಿದ ಬಗ್ಗೆ ವಿಮಾದಾರರಿಗೆ ಸುಳ್ಳು ಹೇಳಿದ್ದಾಗಿ ಮತ್ತು “ನಪುಂಸಕ ತಯಾರಕ” ಎಂದು ಕರೆಯಲ್ಪಡುವ ವ್ಯಕ್ತಿಯಿಂದ ತೀವ್ರವಾದ ಅಶ್ಲೀಲತೆಯನ್ನು ಹೊಂದಿದ್ದಾಗಿ ಒಪ್ಪಿಕೊಂಡ ನಂತರ 32 ತಿಂಗಳುಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಶಸ್ತ್ರಚಿಕಿತ್ಸಕನು ವಿಮಾದಾರರಿಗೆ ತನ್ನ ಗಾಯಗಳು “ಸೆಪ್ಸಿಸ್ನ ಪರಿಣಾಮ ಮತ್ತು ಸ್ವಯಂ-ಉಂಟುಮಾಡಿಕೊಂಡಿಲ್ಲ” ಎಂದು ಹೇಳಿದನು, ವಾಸ್ತವವಾಗಿ ಅವನು ತನ್ನ ಕಾಲುಗಳನ್ನು ಮೊಣಕಾಲಿನ ಕೆಳಗೆ ಕತ್ತರಿಸಬೇಕಾದ ಮಟ್ಟಿಗೆ ಹೆಪ್ಪುಗಟ್ಟಲು ಡ್ರೈ ಐಸ್ ಅನ್ನು ಬಳಸಿದ್ದನು. ನಂತರ ಅವರು ಇಬ್ಬರು ವಿಮಾದಾರರಿಗೆ ಹಕ್ಕು ಸಲ್ಲಿಸಿದರು, ಇದರ ಪರಿಣಾಮವಾಗಿ ಒಟ್ಟು £466,653.81 ಪಾವತಿಯಾಯಿತು. ಗುರುವಾರ ಟ್ರುರೊ ಕ್ರೌನ್ ನ್ಯಾಯಾಲಯದಲ್ಲಿ ಹಾಜರಾದ ಅವರು, ಜೂನ್…
ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಜನಪ್ರಿಯತೆಯನ್ನು ತಡೆದುಕೊಳ್ಳುವುದಕ್ಕೆ ಆಗದೆ, ಕೊನೇ ಅಸ್ತ್ರವಾಗಿ ಕಾಂಗ್ರೆಸ್ ಅಪಪ್ರಚಾರಕ್ಕೆ ಇಳಿದಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಅವರು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಚುನಾವಣೆ ಅಕ್ರಮ ಇವಿಎಂಗಳ ಮೂಲಕ ನಡೆಯುತ್ತಿಲ್ಲ ಎಂಬುದು ಗೊತ್ತಾಗಿದೆ. ಮೋದಿಜೀ ಅವರ ಜನಪ್ರಿಯತೆಯಲ್ಲಿ ನಾವು ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವೇ ಇಲ್ಲ ಎನ್ನುವುದು ಅವರಿಗೆ ಅರ್ಥವಾಗಿದೆ. ಹಾಗಾಗಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಲು ಮತಗಳ್ಳತನದ ಆರೋಪವನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸ್ಥಳೀಯ ಚುನಾವಣೆಗಳನ್ನು ಮತಪತ್ರಗಳ (ಬ್ಯಾಲೆಟ್ ಪೇಪರ್) ಮೂಲಕ ನಡೆಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿದೆ. ನರೇಂದ್ರ ಮೋದಿಜೀ ಅವರು ಜಗತ್ತಿನಲ್ಲಿ ನಡೆಯುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಭಾರತ ಸವಾಲು ಒಡ್ಡುವ ರೀತಿಯಲ್ಲಿ ನಿಲ್ಲಬೇಕು ಎಂದು ಡಿಜಿಟಲ್ ಆಡಳಿತ ಮತ್ತು ಡಿಜಿಟಲ್ ವಹಿವಾಟು ಮಾಡುತ್ತಿರುವಾಗ ರಾಜ್ಯ ಸರ್ಕಾರ ಮತಪತ್ರದ ಕಡೆಗೆ ವಾಪಸ್ಸು…
ಶಿವಮೊಗ್ಗ: ರೌಡಿ ಶೀಟರ್ ಜೊತೆ ಶಾಸಕನ ಪುತ್ರ ಮಾತನಾಡಿದ್ದಾರೆ ಎನ್ನಲಾದಂತ ಆಡಿಯೋವೊಂದು ವೈರಲ್ ಆಗಿದೆ. ಈ ಮೂಲದ ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಠಿಸಿದೆ. ಭದ್ರಾವತಿ ಶಾಸಕರ ಪುತ್ರನದ್ದು ಎನ್ನಲಾದಂತ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರೌಡಿ ಜೊತೆಗೆ ಬಸವೇಶ್ ಮಾತನಾಡಿದ್ದು ಎನ್ನಲಾಗುತ್ತಿರುವಂತ ಆಡಿಯೋ ವೈರಲ್ ಆಗಿದೆ. ಜೆಡಿಎಸ್ ಫೇಸ್ ಬುಕ್ ಪೇಜ್ ನಲ್ಲಿಯೇ ಈ ವೈರಲ್ ಆಡಿಯೋ ಅಪ್ ಲೋಡ್ ಮಾಡಲಾಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಮತ್ತಷ್ಟು ವೈರಲ್ ಆಗಿದೆ. ಭದ್ರಾವತಿಯ ಶಾಸಕರ ಪುತ್ರ-ರೌಡಿಶೀಟರ್ ಜೊತೆಗಿರುವ ಪೋಟೋ ಕೂಡ ವೈರಲ್ ಆಗಿದೆ. ಹಿಂದೆ ಮಹಿಳಾ ಅಧಿಕಾರಿಗೆ ಅವಾಚ್ಯ ಪದಗಳಿಂದ ಬಸವೇಶ್ ಬೈದಿದ್ದ ಎನ್ನಲಾಗುತ್ತಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಸವೇಶ್ ಬಂಧಿಸುವಂತೆ ಆಗ್ರಹ ಕೇಳಿ ಬಂದಿದೆ. https://kannadanewsnow.com/kannada/one-in-three-people-in-india-is-dying-from-heart-related-diseases-study/ https://kannadanewsnow.com/kannada/if-the-protocol-of-the-dasara-inauguration-is-violated-it-poses-a-threat-to-the-state-central-minister-v-somannas-future/
ಚಿಕ್ಕಬಳ್ಳಾಪುರ: ಮೈಸೂರು ದಸರಾ ಉದ್ಘಾಟನೆಗೆ ಯಾರದ್ದೋ ಒತ್ತಡ, ಯಾರನ್ನೋ ಮೆಚ್ಚಿಸಲು ಬಾನು ಮುಷ್ತಾಕ್ ಆಯ್ಕೆ ಮಾಡಲಾಗಿದೆ. ಆದರೇ ದಸರಾ ಉದ್ಘಾಟನೆಯ ಶಿಷ್ಟಾಚಾರ ಉಲ್ಲಂಘಿಸಿದ್ರೆ ರಾಜ್ಯಕ್ಕೆ ಅಪಾಯ ಉಂಟಾಗಲಿದೆ ಎಂಬುದಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಸೆ.22ರಂದು ದಸರಾ ಉದ್ಘಾಟಿಸಲಿರುವ ಸಾಹಿತಿ ಬಾನು ಮುಷ್ತಾಕ್ ವಿಚಾರವಾಗಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಒಂದೊಂದು ತಿಕ್ಕಲು ಹಿಡಿಯುತ್ತದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸ್ವಂತ ನಿರ್ಧಾರವಲ್ಲ. ಇದು ಸಿಎಂ ಸಿದ್ಧರಾಮಯ್ಯ ತೆಗೆದುಕೊಂಡಿರುವ ಸ್ವಂತ ನಿರ್ಧಾರವಲ್ಲ ಎಂದರು. ಯಾರದ್ದೋ ಒತ್ತಡ, ಯಾರನ್ನೋ ಮೆಚ್ಚಿಸಲು ಬಾನು ಮುಷ್ತಾಕ್ ಆಯ್ಕೆ ಮಾಡಲಾಗಿದೆ. ದಸರಾ ಉದ್ಘಾಟನೆಯ ಶಿಷ್ಟಾಚಾರ ಉಲ್ಲಂಘಿಸಿದ್ರೆ ರಾಜ್ಯಕ್ಕೆ ಅಪಾಯ ಉಂಟಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ತೊಂದರೆಯಾಗುತ್ತಿದೆ ಎಂದರು. https://kannadanewsnow.com/kannada/one-in-three-people-in-india-is-dying-from-heart-related-diseases-study/ https://kannadanewsnow.com/kannada/decision-on-elections-based-on-experience-cm-siddaramaiah-on-evm-and-ballot-paper/
ಭಾರತದಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬರು ಹೃದಯ ಸಂಬಂಧಿ ಕಾಯಿಲೆಗಳಿಂದ ಸಾಯುತ್ತಾರೆ ಎಂದು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ, ಇದು ಎಲ್ಲಾ ಸಾವುಗಳಲ್ಲಿ ಶೇಕಡಾ 30 ಕ್ಕಿಂತ ಹೆಚ್ಚು. ಭಾರತದ ರಿಜಿಸ್ಟ್ರಾರ್ ಜನರಲ್ ಅಡಿಯಲ್ಲಿ ಸ್ಯಾಂಪಲ್ ನೋಂದಣಿ ಸಮೀಕ್ಷೆ ಅಥವಾ SRS ನಿಂದ ಪಡೆದ ಇತ್ತೀಚಿನ ಮಾಹಿತಿಯು, ಸಾವಿಗೆ ಕಾರಣಗಳು: 2021–2023 ಎಂಬ ಶೀರ್ಷಿಕೆಯ ವರದಿಯಲ್ಲಿ, ದೇಶದಲ್ಲಿನ ಎಲ್ಲಾ ಸಾವುಗಳಲ್ಲಿ ಶೇಕಡಾ 56.7 ರಷ್ಟು ಸಾಂಕ್ರಾಮಿಕವಲ್ಲದ ಕಾಯಿಲೆಗಳು ಕಾರಣವೆಂದು ಎತ್ತಿ ತೋರಿಸಿದೆ. ಆದಾಗ್ಯೂ, ಸಾಂಕ್ರಾಮಿಕ, ತಾಯಂದಿರು, ಪೆರಿನಾಟಲ್ ಮತ್ತು ಪೌಷ್ಠಿಕಾಂಶದ ಪರಿಸ್ಥಿತಿಗಳನ್ನು ಒಳಗೊಂಡಿರುವ ಒಟ್ಟು ಸಾವಿನ ಶೇಕಡಾವಾರು ಪ್ರಮಾಣವು ಶೇಕಡಾ 23.4 ರಷ್ಟಿದೆ. COVID-19 ವರ್ಷಗಳಲ್ಲಿ, ಈ ಅಂಕಿಅಂಶಗಳು ಕ್ರಮವಾಗಿ ಶೇಕಡಾ 55.7 ಮತ್ತು ಶೇಕಡಾ 24 ರಷ್ಟಿತ್ತು. ವರದಿಯ ಪ್ರಕಾರ, ಹೃದಯಾಘಾತ ಮತ್ತು ಪಾರ್ಶ್ವವಾಯು ಸೇರಿದಂತೆ ಹೃದಯ ಕಾಯಿಲೆಗಳು ಮರಣದ ಪ್ರಮುಖ ಕಾರಣಗಳಾಗಿವೆ, ನಂತರ ಶೇಕಡಾ 9.3 ರಷ್ಟು ಉಸಿರಾಟದ ಸೋಂಕುಗಳು, ಶೇಕಡಾ 6.4 ರಷ್ಟು ಕ್ಯಾನ್ಸರ್ ಮತ್ತು ಶೇಕಡಾ 5.7…
ಬೆಂಗಳೂರು : ಶಿಕ್ಷಣ ನಮ್ಮ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೆಕ್ಕ ಬಿಚ್ಚಿಟ್ಟರು. ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು. ನಾನು ರಾಜಪ್ಪ ಮೇಸ್ಟ್ರಿಂದ ಶಾಲಾ ಶಿಕ್ಷಣವನ್ನು ಹಾಗೂ ಪ್ರೊ.ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ ಎನ್ನುವ ಮೂಲಕ ತಮ್ಮ ಶಿಕ್ಷಕರನ್ನು ಸ್ಮರಿಸಿದ ಸಿ.ಎಂ.ಸಿದ್ದರಾಮಯ್ಯ ಅವರು ಇಬ್ಬರಿಗೂ ಧನ್ಯತೆ ಹೇಳಿದರು. ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣ ಅಲ್ಲ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ ಮತ್ತು ಮಹತ್ವವಾಗಿದೆ. ಇಂಥಾ ಶಿಕ್ಷಣ ನಮ್ಮ ಸರ್ಕಾರದ ಗುರಿ ಎಂದರು. ಮೊದಲೆಲ್ಲಾ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಸಂವಿಧಾನ ನಮಗೆ ಎಲ್ಲರಿಗೂ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ. ಆದ್ದರಿಂದ,…













