Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ತನ್ನ ಗ್ರಾಹಕರಿಗೆ ಸ್ವಿಗ್ಗಿ ಇನ್ಸ್ಟಾಮಾರ್ಟ್ “ಕ್ವಿಕ್ ಇಂಡಿಯಾ ಮೂವ್ಮೆಂಟ್ 2025” ಪ್ರಾರಂಭಿಸುವುದಾಗಿ ಘೋಷಿಸಿತು. ಈ ಮಾರಾಟವು ಖರೀದಿದಾರರಿಗೆ ತ್ವರಿತ ವಿತರಣೆಯೊಂದಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ತರುತ್ತದೆ, ಈ ಮಾರಾಟವು ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 28, 2025 ರವರೆಗೆ ಇನ್ಸ್ಟಾಮಾರ್ಟ್ ಅಪ್ಲಿಕೇಶನ್ ಮತ್ತು ಸ್ವಿಗ್ಗಿ ಅಪ್ಲಿಕೇಶನ್ ಎರಡರಲ್ಲೂ ನೇರ ಪ್ರಸಾರವಾಗಲಿದೆ. ಗ್ರಾಹಕರು 50-90% ವರೆಗೆ ಬೃಹತ್ ರಿಯಾಯಿತಿ ಪಡೆಯಬಹುದು. ಅದರಲ್ಲೂ ಎಲೆಕ್ಟ್ರಾನಿಕ್ಸ್, ಅಡುಗೆಮನೆ ಪದಾರ್ಥಗಳು, ಊಟ, ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ, ಆಟಿಕೆ ಸೇರಿದಂತೆ ಹಲವು ವಸ್ತುಗಳ ಮೇಲೆ ರಿಯಾಯಿತಿ ಒದಗಿಸಲಿದ್ದು, ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆ ತಲುಪಿಸಲಿದೆ. 50,000 ಕ್ಕೂ ಹೆಚ್ಚು ಉತ್ಪನ್ನಗಳ ಕೊಡುಗೆಯೊಂದಿಗೆ, ಇನ್ಸ್ಟಾಮಾರ್ಟ್ ಹಬ್ಬದ ಶಾಪಿಂಗ್ ಅನ್ನು ಋತುವಿನ ಅತಿದೊಡ್ಡ ಕೊಡುಗೆಗಳಿಗೆ ವೇಗ ಮತ್ತು ಅನುಕೂಲತೆಯನ್ನು ತರುವ ಮೂಲಕ ಮರುಕಲ್ಪನೆ ಮಾಡುತ್ತಿದೆ. ವಸ್ತುಗಳ ಮೇಲೆ ಇನ್ನಷ್ಟು ರಿಯಾಯಿತಿ ದೊರೆಯಲು ವಿವಿಧ ಬ್ಯಾಂಕ್ಗಳ ಕಾರ್ಡ್ಗಳಿಗೆ ರಿಯಾಯಿತಿ ಇರಲಿದೆ. ಪ್ರಮುಖವಾಗಿ ಎಲ್ಲಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗಳೊಂದಿಗೆ ₹1000*…
ಬೆಂಗಳೂರು: ಕಳೆದ ವರ್ಷ ಪ್ರಾರಂಭವಾದ ITCಯ ಸನ್ಫೀಸ್ಟ್ ಮಾರಿ ಲೈಟ್ ಸ್ಟ್ರಾಂಗ್ ಟೀಮ್ ನೇಮ್ಪ್ಲೇಟ್ ಅಭಿಯಾನವು ಭಾರತದಲ್ಲಿ ಯಶಸ್ವಿಯಾಗಿದ್ದು, ಸಮಾನತೆಯನ್ನು ಎತ್ತಿ ಹಿಡಿದಿದೆ. ಈ ಉಪಕ್ರಮವು ಭಾರತೀಯ ಮನೆಗಳಲ್ಲಿ ಸಮಾನತೆಯನ್ನು ಪ್ರತಿಪಾದಿಸುವ ಬ್ರ್ಯಾಂಡ್ನ ಅಚಲ ಬದ್ಧತೆಯಾಗಿದ್ದು, ಸನ್ಫೀಸ್ಟ್ ಮಾರಿ ಲೈಟ್ ಸಮಾನ ಪಾಲುದಾರಿಕೆಯ ಅಗತ್ಯವನ್ನು ನಿರಂತರವಾಗಿ ಪ್ರತಿಪಾದಿಸುತ್ತಿದೆ. ಈ ವರ್ಷ ಇದನ್ನು ಒಂದು ಹೆಜ್ಜೆ ಮುಂದೆ ತೆಗೆದುಕೊಂಡು, ಸನ್ಫೀಸ್ಟ್ ಮಾರಿ ಲೈಟ್ ಬೆಂಗಳೂರಿನಲ್ಲಿ ‘ಮಿಸ್ಸಿಂಗ್ ವೈಫ್’ ಎಂಬ ಶೀರ್ಷಿಕೆಯ ಕುತೂಹಲಕಾರಿ ಅಭಿಯಾನ ಪ್ರಾರಂಭಿಸಿತ್ತು. ಈ ಸಂದೇಶವನ್ನು ವರ್ಧಿಸಲು ಸೃಜನಶೀಲ ಮತ್ತು ಭಾವನಾತ್ಮಕವಾಗಿ ಶಕ್ತಿಯುತವಾದ ವಿಧಾನವನ್ನು ಅಳವಡಿಸಿಕೊಂಡಿದೆ. ಮನೆಯ ನಾಮಫಲಕಗಳಲ್ಲಿ ಸಂಗಾತಿಯ ಹೆಸರಿನ ಅನುಪಸ್ಥಿತಿಯು ಬಹುತೇಕ ಗಮನಕ್ಕೆ ಬರುವುದಿಲ್ಲ, ಆದ್ದರಿಂದ ಮನೆಗಳಲ್ಲಿ ಸಮಾನತೆ, ಗೌರವ ಮತ್ತು ಹಂಚಿಕೆಯ ಗುರುತಿನ ಬಗ್ಗೆ ಸಂಭಾಷಣೆಗಳನ್ನು ಹುಟ್ಟುಹಾಕುವ ಬಗ್ಗೆ ಈ ಅಭಿಯಾನವು ಗಮನ ಸೆಳೆಯಿತು. ಅಭಿಯಾನದ ಭಾಗವಾಗಿ, ಬೆಂಗಳೂರಿನಾದ್ಯಂತ ಕುತೂಹಲಕಾರಿ OOH ಸೃಜನಶೀಲರು “ನಿಖಿಲ್ ಅವರ ಪತ್ನಿ ಕಾಣೆಯಾಗಿದ್ದಾರೆ.” ಎಂಬ ಒನ್-ಲೈನರ್ಗಳನ್ನು ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸುವ ಮೂಲಕ…
ಬೆಂಗಳೂರು: ಮದ್ದೂರಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಹಿಂದೂ-ಮುಸ್ಲೀಂ ಯಾರೇ ಕಾನೂನು ಕೈಗೆತ್ತಿಕೊಂಡಿದ್ದರೂ ಕಾನೂನು ಕ್ರಮ ಗ್ಯಾರಂಟಿ. ನಾವು ಅದರಲ್ಲಿ ಮುಲಾಜೇ ಇಲ್ಲ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ. ಇಂದು ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮದ್ದೂರಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆದಿದೆ. ಮಸೀದಿ ಬಳಿಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ. ಈ ವೇಳೆಯಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಗಲಾಟೆಗೆ ಯತ್ನಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದರು. ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ 21 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ನಾವು ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಹಿಂದೂ, ಮುಸ್ಲೀಂ ಎನ್ನುವ ಬೇಧ ಭಾವವಿಲ್ಲ. ಕಾನೂನು ಕೈಗೆತ್ತಿಕೊಂಡ ಎಲ್ಲರ ವಿರುದ್ಧವೂ ಕಾನೂನು ಕ್ರಮ ಆಗಲಿದೆ ಎಂದರು ಹೇಳಿದರು. ಮದ್ದೂರಿನ ಗಲಾಟೆ ಸಂಬಂಧ ಜಿಲ್ಲಾ…
ಚಿತ್ರದುರ್ಗ: ನಗರದ ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆಯಲ್ಲಿ 9 ಡಿಜೆ ಬಳಕೆ ಮಾಡಲಾಗುತ್ತಿದೆ. ಆ ಮೂಲಕ ಅದ್ಧೂರಿಯಾಗಿ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ ಎನ್ನುವಂತ ಪೋಸ್ಟ್ ವೈರಲ್ ಆಗಿತ್ತು. ಆ ಬಗ್ಗೆ ಚಿತ್ರದುರ್ಗ ಪೊಲೀಸ್ ಇಲಾಖೆ ಸ್ಪಷ್ಟನೆ ಏನು ಅಂತ ಮುಂದೆ ಓದಿ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಚಿತ್ರದುರ್ಗಾ ಜಿಲ್ಲಾ ಪೊಲೀಸ್ ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ:13.09.2025 ರಂದು ಚಿತ್ರದುರ್ಗ ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ ವಿವಿಧ ಕಡೆಯಿಂದ 9 DJ ತರಿಸಲಾಗುತ್ತಿದೆ ಎಂಬುದಾಗಿ ಪೊಸ್ಟ್ ಹರಿದಾಡುತ್ತಿರುತ್ತದೆ ಎಂದು ತಿಳಿಸಿದೆ. ಸದರಿ ಮಾಹಿತಿ ಸತ್ಯಕ್ಕೆ ದೂರವಾಗಿರುತ್ತದೆ ಹಾಗೂ ಈ ವಿಷಯಕ್ಕೆ ಸಂಬಂಧಿಸದಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಯಾವುದೇ ಡಿಜೆ ಬಳಕೆಗೆ ಅನುಮತಿ ನೀಡಿರುವುದಿಲ್ಲ. ಆದ್ದರಿಂದ ಈ ರೀತಿಯ ಸುಳ್ಳು ಸುದ್ದಿಗಳನ್ನು ಸಾರ್ವಜನಿಕರು ನಂಬಬಾರದೆಂದು ಜಿಲ್ಲಾ ಪೊಲೀಸ್ ವತಿಯಿಂದ ಸೂಚಿಸಲಾಗಿರುತ್ತದೆ ಎಂದು ಸ್ಪಷ್ಟ ಪಡಿಸಿದೆ. ಈ ರೀತಿ ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.…
ಬೆಂಗಳೂರು: ಮಂಡ್ಯದ ಮದ್ದೂರಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಉಂಟಾದಂತ ಕಲ್ಲು ತೂರಾಟ ಪ್ರಕರಣದಲ್ಲಿ 21 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇಂತಹ ಕೃತ್ಯವೆಸಗುವ ಯಾರೇ ಆದರೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಬೆಂಗಳೂರಿನ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮದ್ದೂರಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ನಡೆದಿದೆ. ಮಸೀದಿ ಬಳಿಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ. ಈ ವೇಳೆಯಲ್ಲಿ ಕೆಲವರು ಗುಂಪು ಕಟ್ಟಿಕೊಂಡು ಗಲಾಟೆಗೆ ಯತ್ನಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದರು. ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೂರ್ತಿ ಮೆರವಣಿಗೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ 21 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ನಾವು ಯಾರೇ ತಪ್ಪು ಮಾಡಿದ್ರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇವೆ. ಹಿಂದೂ, ಮುಸ್ಲೀಂ ಎನ್ನುವ ಬೇಧ ಭಾವವಿಲ್ಲ. ಕಾನೂನು ಕೈಗೆತ್ತಿಕೊಂಡ ಎಲ್ಲರ ವಿರುದ್ಧವೂ ಕಾನೂನು ಕ್ರಮ ಆಗಲಿದೆ ಎಂದರು ಹೇಳಿದರು. ಮದ್ದೂರಿನ ಗಲಾಟೆ…
ಮಂಡ್ಯ: ಮದ್ದೂರಲ್ಲಿ ಗಣೇಶ ಮೂರ್ತಿ ಮೆರವಣಿಗೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದಂತ ಹಿಂದೂ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಅರೆಸ್ಟ್ ಆಗಿರುವ ನಮ್ಮ ಹಿಂದು ಯುವಕರನ್ನ ಬಿಡುಗಡೆ ಮಾಡಬೇಕು. ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಲು ಅವಕಾಶ ಕೊಡಬೇಕು. ಲಾಠಿ ಪ್ರಹಾರ ಮಾಡಿದ ಅಧಿಕಾರಿ ವಿರುದ್ದ ಕ್ರಮ ಆಗಬೇಕು ಎಂಬುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ. ಇಂದು ಮಂಡ್ಯದ ಮದ್ದೂರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿರುವಂತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಸಮಾಧಾನದಿಂದ ಹೋರಾಟ ಮಾಡುವಂತೆ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಹೋರಾಟದಲ್ಲಿ ಬೆಂಬಲವಾಗಿ ನಿಂತಿರುವ ಜೆಡಿಎಸ್ ಮುಖಂಡರು. ನಿಖಿಲ್ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಯವರಿಗೆ ಹಾಗೂ ಪಕ್ಷಾತೀತವಾಗಿ ಬಂದಿರುವ ಕಾಂಗ್ರೆಸ್ ಕಾರ್ಯಕರ್ತರೆ ಎಂದ ಪ್ರತಾಪ್ ಸಿಂಹ ಹೇಳಿದರು. ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಸಿದ್ದರಾಮಯ್ಯ ಚಾಮುಂಡಿಗೆ ಅವಮಾನ ಮಾಡಿದ್ರು. ಮಹಿಷ ದಸರ ಮಾಡಲು ಮುಂದಾಗಿದ್ರು ಅದನ್ನ ಮೆಟ್ಟಿ ನಿಂತಿದ್ದೇವೆ. ಇದೆ ರೀತಿ ಇಲ್ಲು…
ಮಂಡ್ಯ: ಜಿಲ್ಲೆಯ ಮದ್ದೂರು ತಾಲ್ಲೂಕಿನಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಹೀಗಾಗಿ ಮದ್ದೂರಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ನಾಳೆ ಮದ್ದೂರು ತಾಲ್ಲೂಕಿನಲ್ಲಿ ಬಂದ್ ಗೆ ಹಿಂದೂ ಮುಖಂಡರು ಕರೆ ನೀಡಿದ್ದಾರೆ. ನಾಳೆ ಮದ್ದೂರಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಕಲ್ಲು ತೂರಾಟ ಖಂಡಿಸಿ, ಹಿಂದೂ ಮುಖಂಡರು ಮದ್ದೂರು ಬಂದ್ ಗೆ ಕರೆ ನೀಡಿದ್ದಾರೆ. ಅಲ್ಲದೇ ಬುಧವಾರ ಮದ್ದೂರು ತಾಲ್ಲೂಕಿನ ಎಲ್ಲಾ ಗಣೇಶ ಮೂರ್ತಿಗಳನ್ನು ಮದ್ದೂರು ಪಟ್ಟಣದಲ್ಲಿ ತಂದು ಮರೆವಣಿಗೆ ಮಾಡಿ ವಿಸರ್ಜನೆ ಮಾಡಲು ತೀರ್ಮಾನಿಸಲಾಗಿದೆ. ಮದ್ದೂರಲ್ಲಿ ಡಿಜೆ ಸಮೇತ ಸಾಮೂಹಿಕ ಗಣೇಶ ಮೂರ್ತಿ ವಿಸರ್ಜನೆ ನಡೆಸಲು ಹಿಂದೂ ಮುಖಂಡರು ಕರೆ ನೀಡಿದ್ದಾರೆ. ಹೀಗಾಗಿ ಮದ್ದೂರು ತಾಲ್ಲೂಕಿನಲ್ಲಿ ಮತ್ತಷ್ಟು ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಾಸ್ಕೋ : ಎಂಆರ್ಎನ್ಎ ಆಧಾರಿತ ಕ್ಯಾನ್ಸರ್ ಲಸಿಕೆ ಎಂಟರೊಮಿಕ್ಸ್, “100% ದಕ್ಷತೆ”ಯನ್ನು ಪ್ರದರ್ಶಿಸುವ ಮೂಲಕ ಮತ್ತು ಆರಂಭಿಕ ಕ್ಲಿನಿಕಲ್ ಪ್ರಯೋಗಗಳಲ್ಲಿ ಯಾವುದೇ ಗಂಭೀರ ಅಡ್ಡಪರಿಣಾಮಗಳನ್ನು ತೋರಿಸದೆ, ಆಂಕೊಲಾಜಿಯಲ್ಲಿ ಕ್ರಾಂತಿಕಾರಿ ಪ್ರಗತಿಯ ಭರವಸೆಯನ್ನು ಹುಟ್ಟುಹಾಕುತ್ತಿದೆ. ರಷ್ಯಾದಲ್ಲಿ ಅಭಿವೃದ್ಧಿಪಡಿಸಲಾದ ಈ ಲಸಿಕೆ, ಗೆಡ್ಡೆಗಳನ್ನು ಕುಗ್ಗಿಸುವಾಗ ಕ್ಯಾನ್ಸರ್ ಕೋಶಗಳನ್ನು ಗುರುತಿಸಲು ಮತ್ತು ನಾಶಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ತರಬೇತಿ ಮಾಡುತ್ತದೆ. ಕೀಮೋಥೆರಪಿ ಅಥವಾ ವಿಕಿರಣದಂತಹ ಸಾಂಪ್ರದಾಯಿಕ ಚಿಕಿತ್ಸೆಗಳಿಗಿಂತ ಭಿನ್ನವಾಗಿ, ಎಂಟರೊಮಿಕ್ಸ್ ಅನ್ನು ಪ್ರತಿ ರೋಗಿಗೆ ವೈಯಕ್ತೀಕರಿಸಲಾಗಿದೆ. ಎಂಗೆಲ್ಹಾರ್ಡ್ ಇನ್ಸ್ಟಿಟ್ಯೂಟ್ ಆಫ್ ಮಾಲಿಕ್ಯುಲರ್ ಬಯಾಲಜಿಯ ಸಹಯೋಗದೊಂದಿಗೆ ರಷ್ಯಾದ ರಾಷ್ಟ್ರೀಯ ವೈದ್ಯಕೀಯ ಸಂಶೋಧನಾ ವಿಕಿರಣಶಾಸ್ತ್ರ ಕೇಂದ್ರವು ಅಭಿವೃದ್ಧಿಪಡಿಸಿದ ಲಸಿಕೆಯು ನಾಲ್ಕು ನಿರುಪದ್ರವ ವೈರಸ್ಗಳನ್ನು ಬಳಸಿಕೊಂಡು ಒಂದು ವಿಶಿಷ್ಟ ವಿಧಾನವನ್ನು ಬಳಸುತ್ತದೆ. ಈ ವೈರಸ್ಗಳು ಕ್ಯಾನ್ಸರ್ ಗೆಡ್ಡೆಗಳನ್ನು ನೇರವಾಗಿ ದಾಳಿ ಮಾಡಲು ವಿನ್ಯಾಸಗೊಳಿಸಲಾಗಿದೆ ಮತ್ತು ರೋಗಿಯ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ. ಎಂಟರೊಮಿಕ್ಸ್ನ ಪ್ರಾಥಮಿಕ ಗಮನವು ಆರಂಭದಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಆಗಿದೆ. ಎಂಟರೊಮಿಕ್ಸ್ ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳು ನ್ಯೂಸ್ 18 ವರದಿಯ ಪ್ರಕಾರ,…
ಬೆಂಗಳೂರು : “ಜಗತ್ತಿನ ಯಾವುದೇ ಧರ್ಮದವರ, ಜಾತಿಯ, ಕರಿಯ, ಬಿಳಿಯ ಜನಾಂಗದ ವ್ಯಕ್ತಿಗಳ ರಕ್ತದ ಬಣ್ಣ ಕೆಂಪಾಗಿರುತ್ತದೆ. ಎಲ್ಲರ ಕಣ್ಣೀರು, ಬೆವರಿನ ರುಚಿ ಉಪ್ಪಾಗಿಯೇ ಇರುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ. ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ನಾರಾಯಣ ಗುರುಗಳ ಜಯಂತಿಯಲ್ಲಿ ಭಾಗವಹಿಸಿ ಮಾತನಾಡಿದರು. “ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವವೊಂದೇ, ಪೂಜೆ ಯಾವುದಾದರೂ ಭಕ್ತಿಯೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೆ ದೇವನೊಬ್ಬ ನಾಮ ಹಲವು. ಇದೇ ತತ್ವವನ್ನು ನಾರಾಯಣ ಗುರುಗಳು ಸಾರಿದ್ದು” ಎಂದು ಹೇಳಿದರು. ಜಾತಿ ಮೇಲೆ ನಿಂತ ವ್ಯಕ್ತಿ ನಾನಲ್ಲ “ಜಾತಿ ಹೇಳಬೇಡ, ಜಾತಿ ಕೇಳಬೇಡ, ಜಾತಿ ಮಾಡದೆ ಬದುಕನ್ನು ಸಾಗಿಸು ಎಂದವರು ನಾರಾಯಣ ಗುರುಗಳು. ಶೋಷಿತ ವರ್ಗಗಳಿಗೆ ದೇವರನ್ನು ತೋರಿಸಿದ ಸಂತಶ್ರೇಷ್ಠರು. ಇವರ ಆಚಾರ, ವಿಚಾರದಲ್ಲಿ ನಾವುಗಳು ನಡೆಯಲೇ ಬೇಕು. ನಾನು ಜಾತಿ ಮೇಲೆ ನಿಂತಿರುವ ವ್ಯಕ್ತಿಯಲ್ಲ. ಪ್ರೀತಿ, ವಿಶ್ವಾಸಕ್ಕೆ, ಮಾನವನ ಬದುಕಿನ ಉನ್ನತಿ…
ಇಸ್ರೇಲ್: ಇಸ್ರೇಲ್ ಪ್ರವಾಸದಲ್ಲಿರುವ ದಕ್ಷಿಣ ಭಾರತ ಪತ್ರಕರ್ತರ ನಿಯೋಗ ಇಸ್ರೇಲ್ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಈಡನ್ಬಾರ್ ಟಾಲ್ ಅವರ ಜೊತೆಗೆ ಸಂವಾದ ನಡೆಸಿತು. ಇದೇ ಸಂದರ್ಭದಲ್ಲಿ ಯುದ್ದ ಕೊನೆಗಾಣಿಸುವಂತೆ ಪತ್ರಕರ್ತರ ತಂಡ ಆಶಯ ವ್ಯಕ್ತಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೆಲ ಘಟನೆಗಳು ಅನಿವಾರ್ಯವಾಗಿ ಯುದ್ಧದ ಪರಿಸ್ಥಿತಿ ತಂದೊಡ್ಡಿದ್ದವು. ಇಸ್ರೇಲ್ ಶಾಂತಿಗೆ ಆದ್ಯತೆ ನೀಡುತ್ತಾ ಬಂದಿದೆ. ಈಗಲೂ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಪ್ರಯತ್ನದಲ್ಲಿದ್ದೇವೆ ಎಂದು ತಿಳಿಸಿದರು. ಭಾರತದ ಜೊತೆಗೆ ಉತ್ತಮ ಸಂಬಂಧ ಹೊಂದಿರುವುದು ನಮಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಭಾರತೀಯ ಪತ್ರಕರ್ತರ ನಿಯೋಗದ ಪರವಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ಭಾರತೀಯ ಸಂಪ್ರದಾಯದ ಶಲ್ಯ ಹಾಕಿ, ಕೆಯುಡಬ್ಲ್ಯೂಜೆ ಹೊರತಂದಿರುವ ಪತ್ರಕರ್ತ ಸಂಚಿಕೆ ಮತ್ತು ಅಮೃತಬೀಜ ಪುಸ್ತಕಗಳನ್ನು ನೀಡಿ ಗೌರವಿಸಿತು. ಹಿರಿಯ ಪತ್ರಕರ್ತರಾದ ಪ್ರಶಾಂತ ನಾತು, ಚೀ.ಜ.ರಾಜೀವ್, ರಮೇಶ್ ಕುಮಾರ್ ನಾಯಕ್, ಬಸವರಾಜು, ಮಧು ನಾಯಕ್ , ತಮಿಳುನಾಡು, ಕೇರಳ ಪತ್ರಕರ್ತರು ಜೊತೆಯಲ್ಲಿದ್ದರು.…











