Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಅಳ್ನಾವರ್ – ದಾಂಡೇಲಿ ನಡುವೆ ಹೊಸ DEMU ರೈಲು ಸೇವೆಗಳ ಪ್ರಾರಂಭಕ್ಕೆ ಫೆಬ್ರವರಿ.7ರಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. 1. ಉದ್ಘಾಟನಾ ವಿಶೇಷ ಸೇವೆ ಮೇಲಿನ ರೈಲು ಸೇವೆಗಳ ಪ್ರಾರಂಭದ ಅಂಗವಾಗಿ, ವಿ.ಸೋಮಣ್ಣ, ಮಾನ್ಯ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರು, ಕೆಳಗಿನ ವಿವರಗಳಂತೆ ಉದ್ಘಾಟನಾ ವಿಶೇಷ DEMU ರೈಲು ಸೇವೆಗೆ ಹಸಿರು ನಿಶಾನೆ ನೆರವೇರಿಸಲಿದ್ದಾರೆ: * ರೈಲು ಸಂಖ್ಯೆ: 07371 (ಒಂದು ದಿಕ್ಕಿನ ಉದ್ಘಾಟನಾ ವಿಶೇಷ) * ಪ್ರಾರಂಭಿಕ ನಿಲ್ದಾಣ: ದಾಂಡೇಲಿ ರೈಲು ನಿಲ್ದಾಣ * ದಿನಾಂಕ ಮತ್ತು ವಾರ: 07.02.2026 (ಶನಿವಾರ) * ಸಮಯ: ಸಂಜೆ 04:00 ಗಂಟೆಗೆ 2. ನಿಯಮಿತ ರೈಲು ಸೇವೆಗಳು ನಿಯಮಿತ DEMU ರೈಲು ಸೇವೆಗಳು 09.02.2026 ರಿಂದ ಕೆಳಗಿನ ಕಾರ್ಯಾಚರಣಾ ವಿವರಗಳೊಂದಿಗೆ ಪ್ರಾರಂಭವಾಗಲಿವೆ: ರೈಲು ಸಮಯಗಳು – ಅಳ್ನಾವರ್ ಜಂಕ್ಷನ್ ↔ ದಾಂಡೇಲಿ ↔ ಅಳ್ನಾವರ್ ಜಂಕ್ಷನ್ ಅಳ್ನಾವರ್ ಜಂಕ್ಷನ್ನಿಂದ ದಾಂಡೇಲಿಗೆ *…
ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. ಈ ಪ್ರಯುಕ್ತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಗಣಪತಿ ಕೆರೆಯಲ್ಲಿ ಬೋಟಿಂಗ್ ಗೆ ಚಾಲನೆ ನೀಡಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಗಣಪತಿ ಕೆರೆಯಲ್ಲಿ ಮಾರಿಕಾಂಬ ಜಾತ್ರಾ ಮಹೋತ್ಸವದ ಪ್ರಯುಕ್ತ ಬೋಟಿಂಗ್ ಗೆ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಆ ಬಳಿಕ ತಾವು ಕೂಡ ಒಂದೆರಡು ಸುತ್ತು ಬೋಟಿಂಗ್ ಮಾಡಿದರು. ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮಾರಿಕಾಂಬ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ ಗಣಪತಿ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಬೋಟಿಂಗ್ ಅನುಭವ ಅತ್ಯದ್ಭುತವಾಗಿತ್ತು. ಸಾಗರದ ಸಮಸ್ತ ನಾಗರೀಕರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು. https://youtu.be/NJOR14q-_ws?si=SBta3NWRSwGOtEjW ಇದೇ ವೇಳೆ ಸಮೀಪದಲ್ಲೇ ಇದ್ದಂತ ಶಾಲಾ ಮಕ್ಕಳು ಶಾಸಕರನ್ನು ಕೈ ಬೀಸಿ ಮಾತನಾಡಿಸಿದಾಗ, ಅವರನ್ನೆಲ್ಲ ಕರೆದುಕೊಂಡು ಬಂದು, ಶಾಲಾ ಮಕ್ಕಳಿಗೂ ಗಣಪತಿ ಕೆರೆಯಲ್ಲಿ ಒಂದು ರೌಂಡ್ ಬೋಟಿಂಗ್ ಮಾಡಿಸಿದರು. ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬೋಟಿಂಗ್…
ಬೆಂಗಳೂರು: ನಗರದಲ್ಲಿ ನಿಯಮ ಪಾಲಿಸದ ಪಿಜಿ, ಹೋಟೆಲ್ ಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಬಿಗ್ ಶಾಕ್ ನೀಡಿದೆ. ಅದೇ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಪಿ.ಜಿ ಗಳ ಹಾಗೂ ಹೋಟೆಲ್ ಗಳ ಪರಿಶೀಲನೆ ಹಾಗೂ ರೂ.2,57,100/- ದಂಡ ವಸೂಲಿ ಮಾಡಿರುವುದಾಗಿ ಆಯುಕ್ತ ಕೆ ಎನ್ ರಮೇಶ್ ತಿಳಿಸಿದ್ದಾರೆ. ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ : 12-01-2026 ರಿಂದ ದಿನಾಂಕ : 04-02-2026ರ ವರೆಗೆ ಜಯನಗರ, ಬೆಂಗಳೂರು ದಕ್ಷಿಣ, ಬಿಟಿಎಂ ಲೇಔಟ್ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಪೇಯಿಂಗ್ ಗೆಸ್ಟ್ ವಸತಿ ಗೃಹಗಳಲ್ಲಿ (PG) ಹಾಗೂ ಹೋಟೆಲ್ ಉದ್ದಿಮೆಗಳಲ್ಲಿ ಶುದ್ಧ ಕುಡಿಯುವ ನೀರು, ಶುಚಿತ್ವ, ಅಡುಗೆ ಕೋಣೆ ನೈರ್ಮಲ್ಯ, ಸುರಕ್ಷತೆ, ಉತ್ತಮ ಶೌಚಾಲಯ ವ್ಯವಸ್ಥೆ, ಅಗ್ನಿಶಾಮಕ ಸಾಧನಗಳು ಹಾಗೂ ಸಿ.ಸಿ.ಟಿ.ವಿ ಕ್ಯಾಮರಾ ಅಳವಡಿಕೆ ಮತ್ತು FSSA ನ ಆಹಾರ ಸುರಕ್ಷತಾ ಪ್ರಮಾಣ ಪತ್ರ ಇತ್ಯಾದಿ ಮೂಲಭೂತ ಸೌಕರ್ಯಗಳು ಇರುವ ಬಗ್ಗೆ ಪರಿಶೀಲನೆ ನಡೆಸಲಾಗಿದ್ದು, ನ್ಯೂನತೆಗಳು ಕಂಡುಬಂದಿವೆ ಎಂದಿದ್ದಾರೆ.…
ಶಿಲ್ಲಾಂಗ್ : ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಮೈನ್ಸಿಂಗಟ್-ಥಾಂಗ್ಸ್ಕೊ ಪ್ರದೇಶದ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಡೈನಮೈಟ್ ಸ್ಫೋಟದಲ್ಲಿ 10 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೂರದಲ್ಲಿರುವ ಕಲ್ಲಿದ್ದಲು ಗಣಿ ಪ್ರದೇಶದಿಂದ 10 ಮಂದಿ ಶವಗಳನ್ನು ಹೊರತೆಗೆಯಲಾಗಿದೆ. ಸುಟ್ಟ ಗಾಯಗಳಾಗಿರುವ ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಶಿಲ್ಲಾಂಗ್ಗೆ ಸ್ಥಳಾಂತರಿಸಲಾಗಿದೆ ಎಂದು ಪೂರ್ವ ಜೈಂಟಿಯಾ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ತಿಳಿಸಿದ್ದಾರೆ. ಮೇಘಾಲಯಯ ಜೈಂಟಿಯಾ ಹಿಲ್ಸ್ ನಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಆಗಮಿಸಿ, ಸ್ಪೋಟದಿಂದ ಗಾಯಗೊಂಡಿರುವಂತ ಗಾಯಾಳುಗಳನ್ನು ರಕ್ಷಿಸುವಂತ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಬೆಂಗಳೂರು: ಶಾಸಕ ಸತೀಶ್ ಸೈಲ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಅಕ್ರಮ ಅದಿರು ರಪ್ತು ಕೇಸಲ್ಲಿ ಜಾರಿ ನಿರ್ದೇಶನಾಲಯ ದಾಖಲಿಸಿದ್ದಂತ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಶಾಸಕ ಸತೀಶ್ ಸೈಲ್ ಅವರು ಅಕ್ರಮ ಅದಿರು ರಪ್ತು ಪ್ರಕರಣದಲ್ಲಿ ಅನಾರೋಗ್ಯದ ಕಾರಣ ನೀಡಿ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿತು. ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದಂತ ನ್ಯಾಯಪೀಠವು, ಲಿವರ್ ಸಮಸ್ಯೆಯಿರುವ ಕಾರಣ ಚಿಕಿತ್ಸೆಗೆ ಅಗತ್ಯತೆಯ ಕಾರಣ ನೀಡಿ, ವೈದ್ಯಕೀಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ. ಇನ್ನೂ ಜಾಮೀನು ಮಂಜೂರು ವೇಳೆಯಲ್ಲಿ ಕೆಲ ಷರತ್ತುಗಳನ್ನು ವಿಧಿಸಿದೆ. 5 ಲಕ್ಷದ ಮೌಲ್ಯದ ಬಾಂಡ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ಶಾಸಕ ಸತೀಶ್ ಸೈಲ್ ಗೆ ಹೈಕೋರ್ಟ್ ತಿಳಿಸಿದೆ.
ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಖಾಲಿ ಜಾಗದಲ್ಲಿ ಹಾಕಿದ್ದ ಕಸಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಧಗಧಗಿಸಿ ಉರಿದಿದೆ. ಬೆಂಗಳೂರಿನ ಜೆಪಿ ನಗರದ ಶ್ರೀನಿಧಿ ಲೇಔಟ್ ನಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಸ್ಥಳದಲ್ಲಿ ಮರ ಇದ್ದಿದ್ದರಿಂದ ಹೊತ್ತಿ ಬೆಂಕಿ ಉರಿದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸದ್ಯ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ.
ನವದೆಹಲಿ: ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಗುರುವಾರ ಭಾರತದ ಮೊದಲ ಸಹಕಾರಿ ನೇತೃತ್ವದ ರೈಡ್-ಹೇಲಿಂಗ್ ವೇದಿಕೆಯಾದ ಭಾರತ್ ಟ್ಯಾಕ್ಸಿಗೆ ಚಾಲನೆ ನೀಡಲಿದ್ದಾರೆ. ಎರಡು ತಿಂಗಳ ಯಶಸ್ವಿ ಪೈಲಟ್ ಕಾರ್ಯಕ್ರಮದ ನಂತರ ಭಾರತ್ ಟ್ಯಾಕ್ಸಿ ಉದ್ಘಾಟನೆಯಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಭಾರತ್ ಟ್ಯಾಕ್ಸಿ ಸೇವೆಯ ಆರಂಭವು ದೇಶದ ಚಲನಶೀಲತೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸಬಹುದು, ಏಕೆಂದರೆ ಇದು ಪ್ರಸ್ತುತ ಮಾರುಕಟ್ಟೆಯ ಬಹುಪಾಲು ಪಾಲನ್ನು ಹೊಂದಿರುವ ಉಬರ್, ರಾಪಿಡೊ ಮತ್ತು ಓಲಾದಂತಹ ಪ್ರಮುಖ ರೈಡ್-ಹೇಲಿಂಗ್ ಅಪ್ಲಿಕೇಶನ್ಗಳೊಂದಿಗೆ ಸ್ಪರ್ಧಿಸುವ ಗುರಿಯನ್ನು ಹೊಂದಿದೆ. ಭಾರತ್ ಟ್ಯಾಕ್ಸಿ ಎರಡು ವರ್ಷಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ನಗರಗಳಲ್ಲಿ ವಿಸ್ತರಿಸುವ ಗುರಿಯನ್ನು ಹೊಂದಿದೆ. ಭಾರತ್ ಟ್ಯಾಕ್ಸಿ ಎಂದರೇನು? ಬಹು-ರಾಜ್ಯ ಸಹಕಾರಿ ಸಂಘಗಳ ಕಾಯ್ದೆ, 2002ರ ಅಡಿಯಲ್ಲಿ ನೋಂದಾಯಿಸಲ್ಪಟ್ಟ ಮತ್ತು 6 ಜೂನ್ 2025 ರಂದು ಸ್ಥಾಪಿಸಲಾದ ಭಾರತ್ ಟ್ಯಾಕ್ಸಿ ಅಪ್ಲಿಕೇಶನ್ ಅನ್ನು ಕಳೆದ ಎರಡು ತಿಂಗಳುಗಳಲ್ಲಿ ಸರ್ಕಾರವು ಪ್ರಾಯೋಗಿಕವಾಗಿ ನಡೆಸಿತು. ಜನವರಿ 1 ರಂದು, ದೆಹಲಿ ಸೇರಿದಂತೆ ಆಯ್ದ ಸ್ಥಳಗಳಲ್ಲಿ…
ಬೆಂಗಳೂರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಮುಖ್ಯ ಅಭಿಯಂತರರಾದ ರಾಜೀವ್ ಕೆ.ಎನ್. ಅವರಿಗೆ, ಸಿವಿಲ್ ಎಂಜಿನಿಯರಿಂಗ್ ವಿಭಾಗದಲ್ಲಿನ ಅವರ ಮಹತ್ವದ ಸಂಶೋಧನೆಗಾಗಿ ಪ್ರತಿಷ್ಠಿತ ರೇವಾ ವಿಶ್ವವಿದ್ಯಾಲಯವು ಡಾಕ್ಟರೇಟ್ (Ph.D) ಪದವಿಯನ್ನು ನೀಡಿ ಗೌರವಿಸಿದೆ. ಕೆ ಎನ್ ರಾಜೀವ್ ಅವರು ಮಂಡಿಸಿದ “ಕಾಂಕ್ರೀಟ್ ತಯಾರಿಕೆಯಲ್ಲಿ ದ್ವಿತೀಯ ಹಂತದ ಸಂಸ್ಕರಿಸಿದ ತ್ಯಾಜ್ಯ ನೀರಿನ ಸುಸ್ಥಿರ ಮರುಬಳಕೆ” (SUSTAINABLE REUSE OF SECONDARY TREATED WASTEWATER FOR CONCRETE MANUFACTURING) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ಲಭಿಸಿದೆ. ಈ ಸಂಶೋಧನೆಯ ವಿಶೇಷವೆಂದರೆ, ಕಾಂಕ್ರೀಟ್ ತಯಾರಿಕೆಯಲ್ಲಿ ಸಂಸ್ಕರಿಸಿದ ನೀರನ್ನು ಬಳಸಿದಾಗ ಅದರ ಬಲ ಮತ್ತು ಗುಣಮಟ್ಟ ಹೇಗಿರುತ್ತದೆ ಎಂಬ ಪ್ರಯೋಗಾರ್ಥ ಪರೀಕ್ಷೆಗಳನ್ನು ವಿಶ್ವವಿಖ್ಯಾತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (IISc) ನಡೆಸಲಾಗಿದೆ. ಅಲ್ಲದೆ, ಇವರ ಸಂಶೋಧನಾ ಪ್ರಬಂಧಗಳು ಜಾಗತಿಕ ಮಟ್ಟದ ಅತ್ಯುನ್ನತ ಶ್ರೇಣಿಯಾದ ಕ್ಯೂ-1 ಮತ್ತು ಕ್ಯೂ-2 (Q1 and Q2 Level) ನ 5 ಪ್ರತಿಷ್ಠಿತ ಅಂತಾರಾಷ್ಟ್ರೀಯ…
ಶಿವಮೊಗ್ಗ: ನಾಳೆಯಿಂದ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಹೆಲಿಕಾಪ್ಟರ್ ಹಾರಾಟ ಆರಂಭಗೊಳ್ಳಲಿದೆ. ಎಲ್ಲೆಲ್ಲಿಗೆ? ಎಷ್ಟು ದರ ಎನ್ನುವ ಮಾಹಿತಿಯನ್ನು ಆಯೋಜಕರಾದಂತ ಕಿರಣ್ ದೊಡ್ಮನಿ ನೀಡಿದ್ದಾರೆ ಮುಂದೆ ಓದಿ.. ಇಂದು ಈ ಬಗ್ಗೆ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕಿರಣ್ ದೊಡ್ಮನೆ ಅವರು, ಇದೇ ಮೊದಲ ಬಾರಿಗೆ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟೂರಿಸಂ ಆಯೋಜಿಸಲಾಗುತ್ತಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಹೆಲಿ ಟೂರಿಸಂಗೆ ಗೋಪಾಲಗೌಡ ಕ್ರೀಢಾಂಗಣದಲ್ಲಿ ಚಾಲನೆ ನೀಡಲಿದ್ದಾರೆ. ಆ ಬಳಿಕೆ ಮೊದಲು ಬುಕ್ ಮಾಡಿದವರಿಗೆ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ ಎಂದರು. ಈಗಾಗಲೇ ಹೆಲಿಕಾಪ್ಟರ್ ಮೂಲಕ ಹಾರಾಟಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಬಂಧಿಕರು, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಡೆಯವರು, ಕಾರವಾರದ ರಾಜಕಾರಣಿಯೊಬ್ಬರು, ಸ್ವಾಮೀಜಿಗಳು ಸೇರಿದಂತೆ ಹಲವರು ಬುಕ್ಕಿಂಗ್ ಮಾಡಿದ್ದಾರೆ. ಅವರೆಲ್ಲರಿಗೂ ಹೆಲಿ ಟೂರಿಸಂ…
ಶಿವಮೊಗ್ಗ: ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೆಲಿ ಟೂರಿಸಂಗೆ ಕಿರಣ್ ದೊಡ್ಮನೆ ಅವರು ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಅನುಮತಿ ಕೋರಿದ್ದರು. ಇವರ ಮನವಿಯನ್ನು ಪರಿಶೀಲಿಸಿರುವಂತ ಶಿವಮೊಗ್ಗ ಡಿಸಿ ಸಾಗರದಲ್ಲಿ ಮಾರಿ ಜಾತ್ರೆ ಪ್ರಯುಕ್ತ ಹೆಲಿ ಟ್ಯೂರಿಸಂಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಹೀಗಾಗಿ ನಾಳೆಯಿಂದ ಸಾಗರದಲ್ಲಿ ಹೆಲಿಕಾಪ್ಟರ್ ಮೂಲಕ ಪ್ರವಾಸ ಆರಂಭಗೊಳ್ಳಲಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ದಿನಾಂಕ:03.02.2026 ರಂದು ಸಾಗರದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯ ಪ್ರಯುಕ್ತ ದಿನಾಂಕ:05.02.2026 ರಿಂದ 09.02.2026 ರವರೆಗೆ ಪ್ರವಾಸಿಗರಿಗಾಗಿ ಹೆಲಿಕ್ಯಾಪ್ಟರ್ ಸೇವೆ ಒದಗಿಸುವ ಸಲುವಾಗಿ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ ಹೆಲಿಕ್ಯಾಪ್ಟರ್ ಇಳಿಸಿ ಹಾರಿಸಲು ಹಾಗೂ “ಹೆಲಿ ಟೂರಿಸಂ” ನಡೆಸಲು ಅನುಮತಿಯನ್ನು ನೀಡುವಂತೆ ಅನುಮತಿಯನ್ನು ಕೋರಿರುತ್ತಾರೆ ಎಂದಿದ್ದಾರೆ. ಮುಂದುವರೆದು ಸಾಗರ ಮಾರಿಕಾಂಬಾ ದೇವಿಯ ಜಾತ್ರೆಯ ಸಂಬಂಧ ಸಾಗರ ಗೋಪಾಲಗೌಡ ಕ್ರೀಡಾಂಗಣದಲ್ಲಿ “ಹೆಲಿ ಟೂರಿಸಂ’ ಕಾರ್ಯಾಚರಣೆಯನ್ನು ನಡೆಸುವ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ…














