Author: kannadanewsnow09

ಬೆಂಗಳೂರು: ರಾಜ್ಯ ಸರ್ಕಾರದಿಂದ ನೆರವು ಪಡೆಯುವ ಸಹಕಾರಿ ಸಂಘಗಳ ನೌಕರರೂ ಲೋಕಾಯುಕ್ತ ವ್ಯಾಪ್ತಿಗೆ ಬರುತ್ತವೆ ಎಂಬುದಾಗಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹಣಕಾಸು ನೆರವು ಪಡೆದುಕೊಳ್ಳುವ ಸಹಕಾರ ಸಂಘದ ಸಿಬ್ಬಂದಿ ಸಹ ಭ್ರಷ್ಟಾಚಾರ ನಿಯಂತ್ರಣಾ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಅಲ್ಲದೆ, ಹಾಸನ ಜಿಲ್ಲೆಯ ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್ ವಿರುದ್ಧ ದಾಖಲಾಗಿರುವ ಆದಾಯ ಮೀರಿ ಆಸ್ತಿ ಪ್ರಕರಣ ಕುರಿತು ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅನುಮತಿ ನೀಡುವಂತೆ ಸಂಘಕ್ಕೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ. ಭ್ರಷ್ಟಾಚಾರದ ಆರೋಪದಲ್ಲಿ ಸಂಘದ ಕಾರ್ಯದರ್ಶಿ ಸಿ.ಎ.ಕೀರ್ತಿಕುಮಾರ್‌ ವಿರುದ್ಧ ತನಿಖೆಗೆ ಅನುಮತಿ ನಿರಾಕರಿಸಿ ನಿರ್ಣಯ ಕೈಗೊಂಡಿದ್ದ ಸಂಘದ ಕ್ರಮ ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಹೈಕೋಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರು, ತಾನು ಸರ್ಕಾರಿ ಸಂಸ್ಥೆಯಲ್ಲ ಎಂದು ಹಿರೇಕಡಲೂರು ಪ್ರಾಥಮಿಕ ಕೃಷಿ ಪತ್ತಿನ…

Read More

ಮಂಡ್ಯ : ಮದ್ದೂರು ತಾಲೂಕಿನ ಜನತೆಗೆ ಉತ್ತಮ ಚಿಕಿತ್ಸೆ ಹಾಗೂ ಆರೋಗ್ಯದ ಸೌಲಭ್ಯಗಳ ದೃಷ್ಟಿಯಿಂದ ನಗರದಲ್ಲಿ ಟ್ರಾಮಾಕೇರ್ ಸೆಂಟರ್ ತೆರೆಯಲು ಸಚಿವರುಗಳ ಸಭೆಯಲ್ಲಿ ತೀರ್ಮಾನವಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು. ಮದ್ದೂರು ನಗರದ ಶ್ರೀ ಗುರುಶಾಂತಪ್ಪ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಪ್ರಯೋಗಾಲಯ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಮದ್ದೂರು ನಗರದಲ್ಲಿ ಟ್ರಾಮಾಕೇರ್ ಸೆಂಟರ್ ಆರಂಭಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ತೀರ್ಮಾನವಾಗಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ಆ ಕನಸು ಈಡೇರಲಿಲ್ಲ. ಹೀಗಾಗಿ ಮದ್ದೂರಿನಲ್ಲಿಯೇ ಟ್ರಾಮಾ ಕೇರ್ ಸೆಂಟರ್ ತೆರೆಯಲು ಈಗಾಗಲೇ ಕಳೆದೆಂದು ತಿಂಗಳ ಹಿಂದೆಯೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ನಾನು ಕೂಡ ಅವರ ಜೊತೆಗೂಡಿ ಸಭೆ ನಡೆಸಲಾಗಿದ್ದು, ಸಭೆಯಲ್ಲೂ ಒಮ್ಮತದಿಂದ ನಿರ್ಣಯವಾಗಿದೆ. ಹೀಗಾಗಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಮದ್ದೂರಿನಲ್ಲೆ ಟ್ರಾಮಾ…

Read More

ನವದೆಹಲಿ : ಸಣ್ಣ ಪ್ರಮಾಣದಲ್ಲಿ ಅಂಗಡಿ ನಡೆಸುತ್ತಿರುವವರು ಮತ್ತು ಕಿರು ಉದ್ಯಮಗಳು ಸಹ ಈಗ ದೊಡ್ಡ ಪ್ರಮಾಣದ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳ ಜೊತೆಗೆ ಸ್ಪರ್ಧಿಸಲು ಸಾಧ್ಯವಾಗುತ್ತದೆ. ಸಣ್ಣ ಅಂಗಡಿಯವರು ತಮ್ಮ ವ್ಯವಹಾರಗಳನ್ನು ಬೆಳೆಸಲು ಸಹಾಯ ಮಾಡುವುದಕ್ಕಾಗಿ ರಿಲಯನ್ಸ್ ಜಿಯೋ ಎಐ ಸಹಾಯಕವನ್ನು ಪರಿಚಯಿಸಿದೆ. ಈ ಎಐ ಸಹಾಯಕವು ದಿನದ ಇಪ್ಪತ್ನಾಲ್ಕು ಗಂಟೆಯೂ ನೆರವಾಗುತ್ತದೆ. ಅದು ಹೇಗೆಂದರೆ ಗ್ರಾಹಕರ ಕರೆಗಳನ್ನು ಸ್ವೀಕರಿಸುವುದು, ಆರ್ಡರ್ ಗಳನ್ನು ತೆಗೆದುಕೊಳ್ಳುವುದು, ಪ್ರಶ್ನೆಗಳಿಗೆ ಉತ್ತರಿಸುವುದು, ಆರ್ಡರ್ ಗಳನ್ನು ಪ್ರೊಸೆಸ್ ಮಾಡುವುದು, ವಿತರಣೆಗಳನ್ನು ಖಚಿತಪಡಿಸುವುದು, ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸುವುದು ಮತ್ತು ದೃಢೀಕರಣ ಸಂದೇಶಗಳನ್ನು ಕಳುಹಿಸುವುದು- ಹೀಗೆ ಎಲ್ಲವನ್ನೂ ತಪ್ಪದೆ ಮಾಡುತ್ತದೆ. ರಿಲಯನ್ಸ್ ಜಿಯೋ ಈ ತಂತ್ರಜ್ಞಾನವನ್ನು ಇಂಡಿಯಾ ಮೊಬೈಲ್ ಕಾಂಗ್ರೆಸ್ 2025ರಲ್ಲಿ ಪ್ರದರ್ಶಿಸಿತು. ಕಿರು ಉದ್ಯಮಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಜಿಯೋ ಏಜೆಂಟಿಕ್ ಎಐ ಸಹಾಯಕವು ಸದ್ಯಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತನಾಡಬಲ್ಲದು. ಪರೀಕ್ಷಾರ್ಥವಾಗಿ ಶೀಘ್ರದಲ್ಲಿಯೇ ತೆಲುಗು ಮತ್ತು ಕನ್ನಡದಲ್ಲಿ ಪ್ರಾರಂಭ ಆಗಲಿದೆ. ಕಂಪನಿಯು ಇದನ್ನು 10 ಭಾರತೀಯ ಭಾಷೆಗಳಲ್ಲಿ ಪ್ರಾರಂಭಿಸಲು ಯೋಜಿಸಿದೆ. ಭಾರತೀಯ…

Read More

ನವದೆಹಲಿ: ಮುಂಬರುವಂತ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಹಾಗೂ ಜೆಡಿಯು ಮೈತ್ರಿ ಮಾಡಿಕೊಂಡಿವೆ. ಅಲ್ಲದೇ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ-ಜೆಡಿಯು ಸೀಟು ಹಂಚಿಕೆ ಅಂತಿಮವಾಗಿದ್ದು, ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾವೆ. ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ, NDA ಮೈತ್ರಿಕೂಟವು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದೆ. ಸೀಟು ಹಂಚಿಕೆ ಸೂತ್ರ ಹೀಗಿದೆ: BJP – 101 ಸ್ಥಾನಗಳು JD(U) – 101 ಸ್ಥಾನಗಳು LJP (ರಾಮ್ ವಿಲಾಸ್) – 29 ಸ್ಥಾನಗಳು RLM – 06 ಸ್ಥಾನಗಳು HAM – 06 ಸ್ಥಾನಗಳು “ಎಲ್ಲಾ NDA ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರು ಈ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸಿದ್ದಾರೆ. ಎಲ್ಲಾ ಒಡನಾಡಿಗಳು ತಮ್ಮ ಸೊಂಟವನ್ನು ಕಟ್ಟಿಕೊಂಡು ಮತ್ತೊಮ್ಮೆ ಬಿಹಾರದಲ್ಲಿ NDA ಸರ್ಕಾರವನ್ನು ರಚಿಸಲು ಸಂಕಲ್ಪಿಸಿದ್ದಾರೆ” ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಹೇಳಿದರು. https://twitter.com/TawdeVinod/status/1977353292956188810

Read More

ಅದು ಒಂದು ರೂಪಾಯಿಯಾಗಿರಲಿ ಅಥವಾ ಒಂದು ಕೋಟಿ ರೂಪಾಯಿಯಾಗಿರಲಿ, ನಾವು ಇತರರಿಂದ ಏನನ್ನಾದರೂ ಖರೀದಿಸಿದ್ದರೆ, ಅದನ್ನು ಸಾಲವೆಂದು ಪರಿಗಣಿಸಲಾಗುತ್ತದೆ. ನಾವು ಆ ಸಾಲವನ್ನು ಮರುಪಾವತಿಸಬೇಕೆಂಬ ಒಂದು ನಿರ್ದಿಷ್ಟ ಭಾವನೆ ಇದೆ. ನಾವು ಅದನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ಸಾಲ ನೀಡುವವರಿಂದ ಉಂಟಾಗುವ ಅವಮಾನವು ಮಾನಸಿಕ ಯಾತನೆಯನ್ನು ಉಂಟುಮಾಡುತ್ತದೆ ಮತ್ತು ಅನೇಕ ಜನರು ಹಾನಿಕಾರಕ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಸಾಲವು ಜೀವಗಳನ್ನು ತೆಗೆದುಕೊಳ್ಳುವ ಶಕ್ತಿಶಾಲಿ ವಿಷಯವಾಗಿದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ,…

Read More

ಮಂಡ್ಯ: RSS ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ. RSS ಅಸ್ತಿತ್ವವನ್ನ ಅಳಿಸಲು ಯಾರಿಂದಲೂ ಸಾದ್ಯವಿಲ್ಲ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಇಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಆರ್ ಎಸ್ ಎಸ್ ಚಟುವಟಿಕೆ ನಿಷೇಧಿಸುವಂತೆ ಪ್ರಿಯಾಂಕ ಖರ್ಗೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇದು ಮೂರ್ಖತನದ ವಿಚಾರವಾಗಿದೆ. ಜವಾಹರ್ ಲಾಲ್ ಇಂದ ಇಲ್ಲಿಯವರೆಗೆ ಎಲ್ಲರು ಪ್ರಯತ್ನ ಮಾಡಿದ್ದಾರೆ. RSS ಬ್ಯಾನ್ ಮಾಡಲು ಜಗತ್ತಿನ ಯಾವುದೇ ದೃಷ್ಟಶಕ್ತಿಯಿಂದಲೂ ಸಾಧ್ಯವಿಲ್ಲ. ಸೂರ್ಯ, ಚಂದ್ರ ಎಷ್ಟು ಸತ್ಯವೋ ಆರ್ ಎಸ್ ಎಸ್ ಕೂಡ ಅಷ್ಟೇ ಸತ್ಯ. RSS ಅಸ್ತಿತ್ವವನ್ನ ಅಳಿಸಲು ಯಾರಿಂದಲೂ ಸಾದ್ಯವಿಲ್ಲ ಎಂದರು. ಕಾಂಗ್ರೆಸ್ ಪಕ್ಷದವರು ಮುಸ್ಲಿಂ ತುಷ್ಟಿಕರಣಕ್ಕೆ ಇಂತಹ ಹೇಳಿಕೆ ಕೊಡ್ತಾರೆ. ದೇಶದಲ್ಲಿ ನ್ಯಾಯಾಲಯದ ವ್ಯವಸ್ಥೆ ಇದೆ. ಮುಸ್ಲಿಂ ರನ್ನ ಖುಷಿ ಪಡಿಸಲು ಪ್ರಿಯಾಂಕ ಖರ್ಗೆ ಇಂತಹ ಹೇಳಿಕೆ ಕೊಡ್ತಾರೆ ಅಷ್ಟೆ ಎಂಬುದಾಗಿ ತಿಳಿಸಿದರು. ಹಿಂದೂ ಜಾತ್ರೆ, ಹಬ್ಬ ಹರಿದಿನಗಳ ಮೇಲೆ, ಶಿವಾಜಿ, ಗಣೇಶ ಹಬ್ಬ…

Read More

ಚಿತ್ತಾಪುರ: ಮಹಾನ್ ಮಾನವತಾವಾದಿ, ಸಮಾಜ ಸುಧಾರಕರು ಹಾಗೂ ವಚನ ಚಳವಳಿಯ ಶ್ರೇಷ್ಠ ಪ್ರೇರಕರಾದ ಶ್ರೀ ನಿಜಶರಣ ಅಂಬಿಗರ ಚೌಡಯ್ಯರವರ ಪ್ರತಿಮೆಯನ್ನು ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಹಾಬಾದ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ದುಷ್ಕರ್ಮಿಗಳು ವಿರೂಪಗೊಳಿಸಿರುವುದು ಅತ್ಯಂತ ಖಂಡನೀಯ ಹಾಗೂ ನಾಚಿಕೆಗೆಡು ಕೃತ್ಯವಾಗಿದೆ ಎಂಬುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ನಾಡಿನ ಎಲ್ಲೆಡೆ ವಿವಿಧ ಮಹಾ ಪುರುಷರ ಪ್ರತಿಮೆಗಳಿವೆ; ಅವರ ಚಿಂತನೆಗಳು ಜನಮನದಲ್ಲಿ ಅಳಿಸಲಾಗದ ಗುರುತು ಬಿಟ್ಟಿವೆ. ಈ ಎಲ್ಲರನ್ನೂ ನಾಡಿನ ಜನರು ಗೌರವಿಸುತ್ತಾರೆ. ಆದರೆ ಚಿತ್ತಾಪುರದಲ್ಲಿ ನಮ್ಮ ನಿಜಶರಣ ಅಂಬಿಗರ ಚೌಡಯ್ಯನವರ ಪ್ರತಿಮೆಯ ಕೈ ಮುರಿದು, ಮುಖದ ಮೇಲೆ ಹಸುವಿನ ಸಗಣಿ ಎರಚಿದ ಕೃತ್ಯ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ ಎಂದಿದ್ದಾರೆ. ವಿವಿಧ ಸಮುದಾಯಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಇಂತಹ ಕೃತ್ಯದಿಂದ ಅವರ ಭಾವನೆಗಳಿಗೆ ನೇರ ಅವಮಾನವಾಗಿದೆ. ಇದು ನಮ್ಮ ಸಾಂಸ್ಕೃತಿಕ ಪರಂಪರೆ,…

Read More

ಬೆಂಗಳೂರು: ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ, ಯಾಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧಿಸಬೇಕು ಹೇಳಿ..? ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ನೀಡುವುದು ಅಪರಾಧವೇ..? ಎಂಬುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪ್ರಶ್ನಿಸಿದ್ದಾರೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಮಕ್ಕಳಲ್ಲಿ ರಾಷ್ಟ್ರಭಕ್ತಿಯ ಸಂಸ್ಕಾರವನ್ನು ನೀಡುವುದು ಅಪರಾಧವೇ..? ನಾವು ರಾಷ್ಟ್ರದ ಘಟಕ ಎನ್ನುವುದನ್ನು ಅರ್ಥ ಮಾಡಿಸಿ ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವುದು ಸಂವಿಧಾನ ಬಾಹಿರವೇ..? ನೀವೇಕೆ ಕಣ್ಣಿದ್ದು ಕುರುಡರಾಗಿದ್ದೀರಿ, ಕಿವಿ ಇದ್ದು ಕಿವುಡರಾಗಿದ್ದೀರಿ..? ಎಂದು ಕೇಳಿದ್ದಾರೆ. ನಿಮ್ಮ ಕಲ್ಬುರ್ಗಿ ಜಿಲ್ಲೆಯಲ್ಲೇ ಮತಾಂಧರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಹಾಡು ಹಗಲೇ ತೊಡಗಿಸಿಕೊಳ್ಳುತ್ತಿರುವುದು ನಿಮಗೆ ಕಾಣುವುದಿಲ್ಲವೇ..? ಅಂದು ವಿಧಾನಸೌಧದ ಮೊಘಸಾಲೆಯಲ್ಲಿಯೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದಾಗ ನಿಮಗೆ ಕೇಳಲಿಲ್ಲವೇ..? ಆವಾಗ ಪ್ರತಿಕ್ರಿಯಿಸಲು ನಿಮ್ಮ ಬಾಯಿ ಬಿದ್ದು ಹೋಗಿತ್ತೇ..? ಎಂದು ಕಿಡಿಕಾರಿದ್ದಾರೆ. “ಭಾರತ್ ಮಾತಾ ಕೀ ಜೈ” ಎಂದರೆ ನಿಮ್ಮ ಪ್ರಕಾರ ಅದು ದೇಶದ್ರೋಹ. ಅದಕ್ಕಾಗಿ ಸಂಘದ ಶಾಖೆಗಳನ್ನು ನಿಷೇಧಿಸುವ ಮಾತನಾಡುತ್ತಿದ್ದೀರಿ. ಸಂಘದ ಶಾಖೆಗಳನ್ನು ನಿಷೇಧಿಸುತ್ತೇವೆಂಬ ತಿರುಕನ ಕನಸಿನಿಂದ…

Read More

ಬೆಂಗಳೂರು: ರ್ರೀ ಪ್ರಿಯಾಂಕ ಖರ್ಗೆಯವರೆ ನೀವು ಇನ್ನೂ ನೂರು ಜನ್ಮ ಎತ್ತಿ ಬಂದರು ನೂರರ ಸಂಭ್ರಮವನ್ನಾಚರಿಸುತ್ತಿರುವ RSS ಮುಟ್ಟಲು ಸಾಧ್ಯವಿಲ್ಲ ಎಂಬುದಾಗಿ ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಾಚಾರ್ ಹೇಳಿದ್ದಾರೆ. ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಪೋಸ್ಟ್ ಮಾಡಿರುವಂತ ಅವರು, ರ್ರೀ ಪ್ರಿಯಾಂಕ ಖರ್ಗೆಯವರೆ ನೀವು ಇನ್ನೂ ನೂರು ಜನ್ಮ ಎತ್ತಿ ಬಂದರು ನೂರರ ಸಂಭ್ರಮವನ್ನಾಚರಿಸುತ್ತಿರುವ RSS ಮುಟ್ಟಲು ಸಾಧ್ಯವಿಲ್ಲ ಎಂದಿದ್ದಾರೆ. ನೆಹೆರು,ಇಂದಿರಾ ಗಾಂಧಿ, ಪಿ. ವಿ.ನರಸಿಂಹರಾವ್ ಲೊಡ್ಡಗಳ ದಂಡು ಮತ್ತು ನಗರ ನಕ್ಸಲರು ಏನೂ ಮಾಡಲಾಗಿಲ್ಲ ಯ:ಕಶ್ಚಿತ್ ಅಪ್ಪನ ಕೃಪಾಕಟಾಕ್ಷದಿಂದ ಸಚಿವರಾಗಿರುವ ನೀವು ಹಹ್ಹ್ಹಹಾ ಎಂದು ವ್ಯಂಗ್ಯವಾಡಿದ್ದಾರೆ. ಅಂದಹಾಗೆ, ಪ್ರೈಮರಿ ಸ್ಕೂಲಿನಲ್ಲಿ ನಮಗೊಂದು ಪದ್ಯವಿತ್ತು, ತಿರುಕನೋರ್ವ ಊರ ಮುಂದೆ ಮುರುಕು ಧರ್ಮ ಶಾಲೆಯಲ್ಲಿ …. ಹಾಗೆ ನೆನಪಾಯಿತು ಎಂಬುದಾಗಿ ಕುಟುಕಿದ್ದಾರೆ. https://kannadanewsnow.com/kannada/which-are-the-top-10-inidan-states-where-woment-prefer-to-work/ https://kannadanewsnow.com/kannada/cabinet-post-fixed-for-sagar-constituency-mla-gopalakrishna-belur/

Read More

ನವದೆಹಲಿ: ಶಿಕ್ಷಣ ಮತ್ತು ಕೌಶಲ್ಯಗಳಿಗೆ ಪರಿಹಾರಗಳನ್ನು ಒದಗಿಸುವ ಜಾಗತಿಕ ಕಂಪನಿಯಾದ ವೀಬಾಕ್ಸ್ ಬಿಡುಗಡೆ ಮಾಡಿದ ಇಂಡಿಯಾ ಸ್ಕಿಲ್ಸ್ ರಿಪೋರ್ಟ್ 2025, ಭಾರತದಲ್ಲಿ ಮಹಿಳೆಯರ ಉದ್ಯೋಗಾವಕಾಶ ಮತ್ತು ಕೆಲಸದ ವಾತಾವರಣದ ಆದ್ಯತೆಗಳಲ್ಲಿನ ಬದಲಾವಣೆಗಳನ್ನು ಎತ್ತಿ ತೋರಿಸುತ್ತದೆ. ಹಾಗಾದ್ರೆ ವರದಿಯ ಪ್ರಕಾರ ಮಹಿಳೆಯರು ಕೆಲಸ ಮಾಡಲು ಇಷ್ಟ ಪಡುವಂತ ಟಾಪ್ 10 ಭಾರತೀಯ ರಾಜ್ಯಗಳು ಯಾವುವು ಅಂತ ಮುಂದೆ ಓದಿ. ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರುವ ನಿರೀಕ್ಷೆಯಲ್ಲಿರುವಂತ ಮಹಿಳೆಯರ ಶೇಕಡಾವಾರು ಪ್ರಮಾಣ 47.53% ಎಂದು ವರದಿ ಗಮನಸೆಳೆದಿದೆ. ಕಳೆದ ಏಳು ವರ್ಷಗಳಲ್ಲಿ ಈ ಅಂಕಿ ಅಂಶವು ಏರಿಳಿತವಾಗಿದ್ದರೂ, ಒಟ್ಟಾರೆ ಪ್ರವೃತ್ತಿ ಸಕಾರಾತ್ಮಕವಾಗಿಯೇ ಇದೆ. ಇದು ಮಹಿಳೆಯರನ್ನು ವೃತ್ತಿಜೀವನಕ್ಕೆ ಸಿದ್ಧಪಡಿಸುವಲ್ಲಿನ ಪ್ರಗತಿ ಮತ್ತು ಇನ್ನೂ ಪರಿಹರಿಸಬೇಕಾದ ಸವಾಲುಗಳನ್ನು ತೋರಿಸುತ್ತದೆ. ಮಹಿಳೆಯರು ಕೆಲಸ ಮಾಡಲು ಇಷ್ಟಪಡುವ ಟಾಪ್ 10 ರಾಜ್ಯಗಳಿವು ವೃತ್ತಿಪರವಾಗಿ ಎಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂಬುದರ ಕುರಿತು ಮಹಿಳೆಯರಿಗೆ ಸ್ಪಷ್ಟ ಆದ್ಯತೆಗಳಿವೆ ಎಂದು ವರದಿ ಸೂಚಿಸುತ್ತದೆ. ಸುರಕ್ಷಿತ ವಾತಾವರಣ, ಉತ್ತಮ ಮೂಲಸೌಕರ್ಯ ಮತ್ತು ವೃತ್ತಿ ಬೆಳವಣಿಗೆಗೆ…

Read More