Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯದಲ್ಲಿ ಬಿಸಿಲ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಮುಂಗಾರು ಮಳೆ ಕೈಕೊಟ್ಟ ನಂತ್ರ, ನೀರಿನ ಆಹಾಕಾರದ ನಡುವೆ ಬಿಸಿಲಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಈ ನಡುವೆ ಏಪ್ರಿಲ್.3, 4ರಂದು ತಾಪಮಾನ ಮತ್ತಷ್ಟು ಹೆಚ್ಚಾಗಲಿದೆ. ಎಚ್ಚರದಿಂದ ಇರುವಂತೆ ಹಾವಮಾನ ಇಲಾಖಎ ಮುನ್ಸೂಚನೆ ನೀಡಿದೆ. ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಹವಾಮಾನ ಇಲಾಖೆಯು, ಶಾಖದ ಅಲೆಯ ಎಚ್ಚರಿಕೆ: ರಾಜ್ಯದ ಉತ್ತರ ಒಳನಾಡಿನ ಕಲಬುರಗಿ, ಬಾಗಲಕೋಟೆ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 03.04.2024 ರಿಂದ 05.04.2024 ರವರೆಗೆ ಶಾಖದ ಅಲೆಯ ಹೆಚ್ಚಾಗಿ ಇರುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. https://twitter.com/KarnatakaSNDMC/status/1774343047469220230 ರಾಜ್ಯದಲ್ಲಿ ‘ಬಿಸಿಲಾಘಾತ’ಕ್ಕೆ ಇಬ್ಬರು ಬಲಿ | Heat Stroke ರಾಯಚೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ಮನೆಯಿಂದ ಹೊಸ ಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಲಾಘಾತಕ್ಕೆ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕಲಬುರ್ಗಿ ಜಿಲ್ಲೆಯ ಆಲಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ಶರಣಪ್ಪ ಸಮಗಾರ(42) ತೊಡಗಿದ್ದರು. ನಾಲ್ಕು…
ಬೆಂಗಳೂರು: ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಕಾರಿನಲ್ಲಿ ತೆರಳುತ್ತಿದ್ದಂತ ಮಹಿಳೆಯನ್ನು ಫಾಲೋ ಮಾಡಿಕೊಂಡು, ಚೇಸ್ ಮಾಡಿಕೊಂಡು ಬಂದಂತ ಮೂವರು ಕಿಡಿಗೇಡಿಗಳು, ಮಹಿಳೆಗೆ ಕಿರುಕುಳ ನೀಡಿರೋ ಘಟನೆ ನಡೆದಿತ್ತು. ಈ ಸಂಬಂಧ ಮಹಿಳೆ ನೀಡಿದಂತ ದೂರು ಆಧರಿಸಿ, ಪೊಲೀಸರು ಮೂವರು ಪುಂಡರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಮಡಿವಾಳದಿಂದ ಕೋರಮಂಗಲದವರೆಗೆ ಮಹಿಳೆಯೊಬ್ಬರ ಕಾರನ್ನು ಚೇಸ್ ಮಾಡಿಕೊಂಡು ಒಂದೇ ಬೈಕ್ ನಲ್ಲಿ ಮೂವರು ಪುಂಡರು ತೆರಳಿದ್ದಾರೆ. ದಾರಿ ಮಧ್ಯೆ ಕಾರು ಸುತ್ತುವರೆದು, ಡೋರ್ ಓಪನ್ ಮಾಡೋದಕ್ಕೂ ಪ್ರಯತ್ನಿಸಿ, ಮಹಿಳೆಗೆ ಕಿರುಕುಳ ನೀಡಿದ್ದಾರೆ. ಕಾರು ಫಾಲೋ ಮಾಡಿ ಬೈಕಲ್ಲಿ ಪುಂಡರು ಬಂದಿದ್ದನ್ನು ಗಮನಿಸಿದಂತ ಮಹಿಳೆ, ಆತಂಕದಿಂದ ತಕ್ಷಣವೇ 112ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದರು. ಮಡಿವಾಳದಿಂದ ಕೋರಮಂಗಲದವರೆಗೆ ಬಿಂಬಾಲಿಸಿ ಬಂದಿದ್ದಂತ ಪುಂಡರು, ಮಹಿಳೆಯ ಕಾರು ಅಡ್ಡಗಡ್ಡಿ ಕಿರುಕುಳ ನೀಡಿದ್ದಾರೆ ಎಂಬುದಾಗಿ ಮಹಿಳೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆದರಿಸಿ ಪುಂಡರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗೆ…
ಬೆಂಗಳೂರು: ನಗರದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮುಂದುವರೆದಿದೆ. ಕಾರಿನಲ್ಲಿ ತೆರಳುತ್ತಿದ್ದಂತ ಮಹಿಳೆಯನ್ನು ಫಾಲೋ ಮಾಡಿಕೊಂಡು, ಚೇಸ್ ಮಾಡಿಕೊಂಡು ಬಂದಂತ ನಾಲ್ಕೈದು ಕಿಡಿಗೇಡಿಗಳು, ಮಹಿಳೆಗೆ ಕಿರುಕುಳ ನೀಡಿರೋ ಘಟನೆ ನಡೆದಿದೆ. ಬೆಂಗಳೂರಿನ ಮಡಿವಾಳದಿಂದ ಕೋರಮಂಗಲದವರೆಗೆ ಮಹಿಳೆಯೊಬ್ಬರ ಕಾರನ್ನು ಚೇಸ್ ಮಾಡಿಕೊಂಡು ಬೈಕ್ ನಲ್ಲಿ ತೆರಳಿದಂತ ಪುಂಡರು, ಕಾರು ಸುತ್ತುವರೆದು, ಮಹಿಳೆಗೆ ಕಿರುಕುಳ ನೀಡಿರೋದಾಗಿ ತಿಳಿದು ಬಂದಿದೆ. ಕಾರು ಫಾಲೋ ಮಾಡಿ ಬೈಕಲ್ಲಿ ಪುಂಡರು ಬಂದಿದ್ದನ್ನು ಗಮನಿಸಿದಂತ ಮಹಿಳೆ, ಆತಂಕದಿಂದ ತಕ್ಷಣವೇ 112ಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತ ದುಷ್ಕರ್ಮಿಗಳು ಸ್ಥಳದಿಂದ ಎಸ್ಕೇಪ್ ಆಗಿರೋದ್ದಾರೆ. ಮಡಿವಾಳದಿಂದ ಕೋರಮಂಗಲದವರೆಗೆ ಬಿಂಬಾಲಿಸಿ ಬಂದಿದ್ದಂತ ಪುಂಡರು, ಮಹಿಳೆಯ ಕಾರು ಅಡ್ಡಗಡ್ಡಿ ಕಿರುಕುಳ ನೀಡಿದ್ದಾರೆ ಎಂಬುದಾಗಿ ಮಹಿಳೆ ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆದರಿಸಿ ಪುಂಡರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದಾರೆ. https://kannadanewsnow.com/kannada/bengaluru-traffic-on-this-route-to-be-closed-for-1-year-from-today/ https://kannadanewsnow.com/kannada/no-new-change-in-tax-rules-from-today-finance-ministry/
ಬೆಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಸಮರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಳಿದಿದ್ದಾರೆ. ಮೈಸೂರು-ಕೊಡಗು, ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲೇ ಬೇಕು ಅಂತ ಪಣ ತೊಟ್ಟಿರುವಂತ ಅವರು, ಇಂದಿನಿಂದ ಮೂರು ದಿನ ಮೈಸೂರು ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ಬೆಳಿಗ್ಗೆ 10.15ಕ್ಕೆ ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಮೈಸೂರಿಗೆ ತೆರಳಲಿದ್ದಾರೆ. 10.40ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿರುವಂತ ಅವರು ಅಲ್ಲಿಂದ ರಸ್ತೆ ಮೂಲಕ ನಂಜನಗೂಡು ತಾಲೂಕಿನ ಬಿಳಿಗೆರೆಗೆ 11 ಗಂಟೆಗೆ ತಲುಪಲಿದ್ದಾರೆ. ಬಿಳಿಗೆರೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ. ಆ ನಂತ್ರ ತಿ.ನರಸೀಪುರದಲ್ಲಿ ಮಧ್ಯಾನ್ನ.3 ಗಂಟೆಗೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಸಂಜೆ 6 ಗಂಟೆಗೆ ಮೈಸೂರಿನ ಬಿಷಪ್ ಅವರ ನಿವಾಸಕ್ಕೆ ಭೇಟಿ ನೀಡಲಿದ್ದು, ಮೈಸೂರಲ್ಲೇ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್.2ರಂದು ಬೆಳಿಗ್ಗೆ 10 ಗಂಟೆಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಂಕರಮಠಕ್ಕೆ ಭೇಟಿ ನೀಡಲಿದ್ದಾರೆ. 11 ಗಂಟೆಗೆ ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ನಡೆಸಲಿದ್ದಾರೆ.…
ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ಗಳು ಮತ್ತು 5 ಕೆಜಿ ಎಫ್ಟಿಎಲ್ (ಫ್ರೀ ಟ್ರೇಡ್ ಎಲ್ಪಿಜಿ) ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಿವೆ ಎಂದು ಮೂಲಗಳು ಎಎನ್ಐಗೆ ತಿಳಿಸಿವೆ. 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು 30.50 ರೂ.ಗೆ ಇಳಿಸಲಾಗಿದೆ. ಏಪ್ರಿಲ್ 1 ರಿಂದ ದೆಹಲಿಯಲ್ಲಿ ಬೆಲೆಯನ್ನು 1764.50 ಕ್ಕೆ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 5 ಕೆಜಿ ಎಫ್ಟಿಎಲ್ ಸಿಲಿಂಡರ್ ಬೆಲೆಯನ್ನು 7.50 ರೂ.ಗೆ ಇಳಿಸಲಾಗಿದೆ. ಮಾರ್ಚ್ 1 ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಅನಿಲ ಸಿಲಿಂಡರ್ಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದವು. ಇಂಧನ ವೆಚ್ಚಗಳು ಮತ್ತು ಮಾರುಕಟ್ಟೆ ಚಲನಶಾಸ್ತ್ರದಲ್ಲಿನ ಏರಿಳಿತಗಳ ಸಮಯದಲ್ಲಿ ಬೆಲೆಗಳಲ್ಲಿನ ಈ ಪರಿಷ್ಕರಣೆ ಕಂಡುಬಂದಿದೆ. ಫೆಬ್ರವರಿ 1 ರಂದು, ಇಂಡೇನ್ ಗ್ಯಾಸ್ ಸಿಲಿಂಡರ್ಗಳ ಬೆಲೆಗಳು ಮೆಟ್ರೋ ನಗರಗಳಲ್ಲಿ ಬದಲಾಗುತ್ತವೆ, ದೆಹಲಿ, ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಪ್ರತಿಯೊಂದೂ ವಿಭಿನ್ನ ದರಗಳನ್ನು ಹೊಂದಿವೆ. ಆದಾಗ್ಯೂ, ಮಾರ್ಚ್ 1 ರ ಆಗಮನದೊಂದಿಗೆ,…
ನವದೆಹಲಿ: ಇಂದನಿಂದ ಹೊಸ ತೆರಿಗೆ ನಿಯಮಗಳು ಬದಲಾವಣೆಯಾಗಲಿದ್ದಾವೆ. ಜನರ ಜೇಬು ಸುಡಲಿದೆ ಎಂಬುದಾಗಿ ಹೇಳಲಾಗುತ್ತಿತ್ತು. ಆದ್ರೇ ಯಾವುದೇ ಹೊಸ ತೆರಿಗೆ ವ್ಯವಸ್ಥೆ ಬದಲಾವಣೆ ಆಗುತ್ತಿಲ್ಲ ಎಂಬುದಾಗಿ ಹಣಕಾಸು ಸಚಿವಾಲಯ, ಜನರ ಗೊಂದಲಗಳಿಗೆ ಸ್ಪಷ್ಟೀಕರಣ ನೀಡಿದೆ. ತೆರಿಗೆಗೆ ಸಂಬಂಧಿಸಿದಂತ ಗೊಂದಲಗಳ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಸ್ಪಷ್ಟನೆ ನೀಡಿರುವಂತ ಹಣಕಾಸು ಸಚಿವಾಲಯವು, ಹೊಸ ತೆರಿಗೆ ಆಡಳಿತಕ್ಕೆ ಸಂಬಂಧಿಸಿದ ದಾರಿತಪ್ಪಿಸುವ ಮಾಹಿತಿಯನ್ನು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಡಲಾಗುತ್ತಿದೆ ಎಂಬುದು ಗಮನಕ್ಕೆ ಬಂದಿದೆ. ಆದ್ದರಿಂದ ಇದನ್ನು ಸ್ಪಷ್ಟಪಡಿಸಲಾಗಿದೆ ಎಂದಿದೆ. https://twitter.com/FinMinIndia/status/1774504330499879372 – 01.04.2024 ರಿಂದ ಯಾವುದೇ ಹೊಸ ಬದಲಾವಣೆ ಬರುತ್ತಿಲ್ಲ. – ಸೆಕ್ಷನ್ 115 ಬಿಎಸಿ (1 ಎ) ಅಡಿಯಲ್ಲಿ ಹೊಸ ತೆರಿಗೆ ಆಡಳಿತವನ್ನು ಹಣಕಾಸು ಕಾಯ್ದೆ 2023 ರಲ್ಲಿ ಪರಿಚಯಿಸಲಾಗಿದೆ, ಅಸ್ತಿತ್ವದಲ್ಲಿರುವ ಹಳೆಯ ಆಡಳಿತಕ್ಕೆ (ವಿನಾಯಿತಿಗಳಿಲ್ಲದೆ) ಹೋಲಿಸಿದರೆ (ಕೆಳಗಿನ ಕೋಷ್ಟಕ) – ಹೊಸ ತೆರಿಗೆ ಆಡಳಿತವು ಕಂಪನಿಗಳು ಮತ್ತು ಸಂಸ್ಥೆಗಳನ್ನು ಹೊರತುಪಡಿಸಿ ಇತರ ವ್ಯಕ್ತಿಗಳಿಗೆ ಅನ್ವಯಿಸುತ್ತದೆ, ಇದು 2023-24ರ ಹಣಕಾಸು ವರ್ಷದಿಂದ…
ಕಾಂಬೋಡಿಯಾ: ಕಾಂಬೋಡಿಯಾದಲ್ಲಿ ಕನಿಷ್ಠ 5,000 ಭಾರತೀಯರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ ಮತ್ತು ಭಾರತೀಯರನ್ನು ಗುರಿಯಾಗಿಸುವ ಆನ್ಲೈನ್ ವಂಚನೆಯ ಭಾಗವಾಗಲು ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ದೊಡ್ಡ ಪ್ರಮಾಣದ ಹಗರಣವು ಕಳೆದ ಆರು ತಿಂಗಳಲ್ಲಿ 500 ಕೋಟಿ ರೂ.ಗಳನ್ನು ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ವಂಚನೆಯನ್ನು ಬಹಿರಂಗಪಡಿಸಲು ಉಭಯ ದೇಶಗಳ ಪಡೆಗಳು ಒಟ್ಟಾಗಿ ಕೆಲಸ ಮಾಡಲು ಕಾರಣವಾಯಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಪ್ರಕಾರ, ಈವರೆಗೆ ಸುಮಾರು 250 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳುಹಿಸಲಾಗಿದೆ. ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್ಗಳನ್ನು ರಚಿಸಲು ಮತ್ತು ಜನರನ್ನು ಭಾರತಕ್ಕೆ ಮರಳಿ ಹಗರಣ ಮಾಡಲು ಕೇಳಲಾಗಿದೆ ಎಂದು ಸಿಕ್ಕಿಬಿದ್ದ ಸಂತ್ರಸ್ತರು ಆರೋಪಿಸಿದ್ದಾರೆ. “ಅವರು ನಮಗೆ ಆಹಾರವನ್ನು ನೀಡಲಿಲ್ಲ, ಅಥವಾ ನಾವು ಗುರಿಯನ್ನು ತಲುಪಲು ವಿಫಲವಾದರೆ ವಿಶ್ರಾಂತಿ ಪಡೆಯಲು ಬಿಡಲಿಲ್ಲ” ಎಂದು ರಕ್ಷಿಸಲ್ಪಟ್ಟ ಸಂತ್ರಸ್ತರಲ್ಲಿ ಒಬ್ಬರು ಹೇಳಿದರು. ಕಾಂಬೋಡಿಯಾದಲ್ಲಿನ ನಮ್ಮ ರಾಯಭಾರ ಕಚೇರಿಯು ಆ ದೇಶಕ್ಕೆ ಉದ್ಯೋಗಾವಕಾಶಗಳ ಆಮಿಷವೊಡ್ಡಿ ಕಾನೂನುಬಾಹಿರ ಸೈಬರ್ ಕೆಲಸವನ್ನು ಕೈಗೊಳ್ಳಲು ಒತ್ತಾಯಿಸಲ್ಪಟ್ಟ ಭಾರತೀಯ ಪ್ರಜೆಗಳ…
ನವದೆಹಲಿ: ಕಳೆದ 10 ವರ್ಷಗಳ ಆಡಳಿತ ಕೇವಲ ಟ್ರೈಲರ್ ಮಾತ್ರವಾಗಿದೆ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉತ್ತರ ಪ್ರದೇಶದ ಮೀರತ್ ನಿಂದ 2024 ರ ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಪ್ರಚಾರವನ್ನು ಪ್ರಾರಂಭಿಸಿದರು. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲೂ ಪ್ರಧಾನಿ ಮೋದಿ ಮೀರತ್ ನಿಂದ ಚುನಾವಣಾ ಪ್ರಚಾರ ಆರಂಭಿಸಿದ್ದರು. ಮುಂಬರುವ ಸಾರ್ವತ್ರಿಕ ಚುನಾವಣೆಗಳು ಕೇವಲ ಸರ್ಕಾರವನ್ನು ಆಯ್ಕೆ ಮಾಡುವ ಬಗ್ಗೆ ಅಲ್ಲ, ಆದರೆ “ವಿಕ್ಷಿತ್ ಭಾರತ್” ಅನ್ನು ಮಾಡುವ ಬಗ್ಗೆ ಎಂದು ಹೇಳಿದ ಪ್ರಧಾನಿ ಮೋದಿ, “ನಮ್ಮ ಸರ್ಕಾರವು ತನ್ನ ಮೂರನೇ ಅವಧಿಗೆ ಸಿದ್ಧವಾಗುತ್ತಿದೆ ಎಂದರು. ನಾವು ಮುಂದಿನ ಐದು ವರ್ಷಗಳ ಮಾರ್ಗಸೂಚಿಯನ್ನು ರಚಿಸುತ್ತಿದ್ದೇವೆ. ನಮ್ಮ ಮುಂದಿನ ಅವಧಿಯ ಮೊದಲ 100 ದಿನಗಳಲ್ಲಿ ನಾವು ತೆಗೆದುಕೊಳ್ಳಬೇಕಾದ ದೊಡ್ಡ ನಿರ್ಧಾರಗಳ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ಸೃಷ್ಟಿಯಾದ ಅಭಿವೃದ್ಧಿಯ ವೇಗವು ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತದೆ” ಎಂದು ಹೇಳಿದರು.…
ಪಶ್ಚಿಮ ಬಂಗಾಳ: ಇಲ್ಲಿನ ಜಲ್ಪೈಗುರಿ ಜಿಲ್ಲೆಯ ಎರಡು ಸ್ಥಳಗಳಲ್ಲಿ ಭಾನುವಾರ ಮಧ್ಯಾಹ್ನ ಮಹಿಳೆ ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 500 ಜನರು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಭಾನುವಾರ ರಾತ್ರಿ ಜಲ್ಪೈಗುರಿ ತಲುಪಿದರು. ಚಂಡಮಾರುತ ಪೀಡಿತ ಜನರನ್ನು ಭೇಟಿ ಮಾಡಲು ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು ಮತ್ತು ಜಲ್ಪೈಗುರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ಚಂಡಮಾರುತವು ಮಧ್ಯಾಹ್ನ 3.30ರ ಸುಮಾರಿಗೆ ಕೆಲವು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಹಳ್ಳಿಗಳಿಗೆ ಅಪ್ಪಳಿಸಿತು. ಸುಮಾರು 10 ನಿಮಿಷಗಳ ಕಾಲ ನಡೆಯಿತು. ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ವಿಪತ್ತು ಸಂಭವಿಸಿದೆ. ಇದರಿಂದಾಗಿ ಹಲವಾರು ಮನೆಗಳಿಗೆ ಹಾನಿಯಾಗಿದೆ ಮತ್ತು ಐದು ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದರು. ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. “ಆಡಳಿತವು ಸ್ಥಳದಲ್ಲಿದ್ದು, ಅಗತ್ಯ ಸಹಾಯವನ್ನು ಒದಗಿಸುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ಸರ್ಕಾರ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದೆ” ಎಂದು ಮುಖ್ಯಮಂತ್ರಿ ಭರವಸೆ ನೀಡಿದರು. “ಆಡಳಿತವು ಅಗತ್ಯವಿರುವ ಜನರೊಂದಿಗೆ…
ರಾಯಚೂರು: ರಾಜ್ಯದಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಬಿಸಿಲಿನ ಝಳಕ್ಕೆ ಮನೆಯಿಂದ ಹೊಸ ಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ಬಿಸಿಲಾಘಾತಕ್ಕೆ ರಾಜ್ಯದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಕಲಬುರ್ಗಿ ಜಿಲ್ಲೆಯ ಆಲಂದ ತಾಲೂಕಿನ ದಣ್ಣೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸದಲ್ಲಿ ಶರಣಪ್ಪ ಸಮಗಾರ(42) ತೊಡಗಿದ್ದರು. ನಾಲ್ಕು ದಿನಗಳ ಹಿಂದೆ ದಿಢೀರ್ ಕುಸಿದು ಬಿದ್ದಿದ್ದಂತ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಸಾವಿಗೆ ಬಿಸಿಲಾಘಾತ ಕಾರಣ ಎನ್ನಲಾಗುತ್ತಿದೆ. ಇನ್ನೂ ಬಿರು ಬಿಸಿಲಿನ ನಡುವೆಯೂ ಶ್ರೀಶೈಲಕ್ಕೆ ಪಾದಯಾತ್ರೆ ಹೊರಟಿದ್ದಂತ ಶ್ರೀಶೈಲ ದಡೂತಿ ಎಂಬ ಯುವಕ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಚಿಕ್ಕಟೊಟ್ನೆಕಲ್ ಗ್ರಾಮದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಸಾರ್ವಜನಿಕರೇ ಬೇಸಿಗೆಯ ಈ ಹೊತ್ತಲ್ಲಿ ತಪ್ಪದೇ ಈ ಸಲಹೆ ಪಾಲಿಸಿ ಪ್ರಸ್ತುತ ಬೇಸಿಗೆಯಲ್ಲಿ ಮಧ್ಯಾಹ್ನ 01 ಗಂಟೆಯಿಂದ ಸಂಜೆ 04 ಗಂಟೆಯವರೆಗೆ ಪ್ರಖರವಾದ ಬಿಸಿಲು ಕಂಡುಬರುತ್ತಿರುವ ಹಿನ್ನಲೆಯಲ್ಲಿ ತಾಯಂದಿರು, ವಯೋವೃದ್ದರು ಮತ್ತು ಚಿಕ್ಕ ಮಕ್ಕಳು ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರದಂತೆ, ಮನೆಯಲ್ಲಿಯೇ ಇರಬೇಕು ಎಂದು ಆರೋಗ್ಯ ಇಲಾಖೆ…