Subscribe to Updates
Get the latest creative news from FooBar about art, design and business.
Author: kannadanewsnow09
ರಾಜಸ್ಥಾನ: ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 497 ರ ಅಡಿಯಲ್ಲಿ ವ್ಯಭಿಚಾರದ ಅಪರಾಧವು ಇದಕ್ಕೆ ಅಪವಾದವಾಗಿದೆ, ಆದರೆ ಇದನ್ನು ಈಗಾಗಲೇ 2018 ರಲ್ಲಿ ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ರದ್ದುಗೊಳಿಸಿದೆ ಎಂದು ನ್ಯಾಯಮೂರ್ತಿ ಬೀರೇಂದ್ರ ಕುಮಾರ್ ಹೇಳಿದರು. “ಎಸ್.ಖುಷ್ಬೂ ವರ್ಸಸ್ ಕನ್ನಿಯಮ್ಮಾಳ್ ಮತ್ತು ಇತರರ ಪ್ರಕರಣದಲ್ಲಿ ವಯಸ್ಕರು ಆಯ್ಕೆಯ ಮೇರೆಗೆ ಲೈಂಗಿಕ ಸಂಬಂಧದಲ್ಲಿ ತೊಡಗಿದಾಗ ಯಾವುದೇ ಶಾಸನಬದ್ಧ ಅಪರಾಧವಿಲ್ಲ, ಇದು ಈ ಹಿಂದೆ ಐಪಿಸಿ ಸೆಕ್ಷನ್ 497 ರ ಅಡಿಯಲ್ಲಿ ವ್ಯಭಿಚಾರಕ್ಕೆ ಅಪವಾದವಾಗಿತ್ತು, ನಂತರ ಅದನ್ನು ರದ್ದುಪಡಿಸಲಾಗಿದೆ, ಅದು ಅಪರಾಧವಲ್ಲ ಎಂಬುದಾಗಿ ಮಹತ್ವದ ತೀರ್ಪು ನೀಡಿದ್ದಾರೆ. ಏನಿದು ಪ್ರಕರಣ? ಭಾರತೀಯ ದಂಡ ಸಂಹಿತೆಯ ಸೆಕ್ಷನ್ 366 (ಮಹಿಳೆಯನ್ನು ಅಪಹರಿಸುವುದು, ಅಪಹರಿಸುವುದು ಅಥವಾ ಮದುವೆಯಾಗಲು ಒತ್ತಾಯಿಸುವುದು) ಅಡಿಯಲ್ಲಿ ದಾಖಲಾದ ಎಫ್ಐಆರ್ ಅನ್ನು ನ್ಯಾಯಾಲಯ ರದ್ದುಗೊಳಿಸಿದ ಆದೇಶವನ್ನು ಹಿಂಪಡೆಯುವಂತೆ ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ಎಫ್ಐಆರ್ ದಾಖಲಿಸಿದ ವ್ಯಕ್ತಿ ತನ್ನ ಹೆಂಡತಿಯನ್ನು ಮೂವರು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವಿಚಾರಣೆಯ…
ಹಾವೇರಿ: ಕಾಂಗ್ರೆಸ್ ಪಕ್ಷ ಹುಟ್ಟಿದ್ದೇ ಸುಳ್ಳಿನಿಂದ ಮಹಾತ್ಮಾ ಗಾಂಧಿಯವರು ಸ್ವಾತಂತ್ರ್ಯ ಬಂದ ನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಹೇಳಿದ್ದರು. ಇವರು ಕಾಂಗ್ರೆಸ್ ನ್ನು ವಿಸರ್ಜಿಸದೆ ಸುಳ್ಳು ಹೇಳಿಕೊಂಡೆ ಬರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ನದಿ ಹರಳಹಳ್ಳಿಯಲ್ಲಿ ಚುನಾವಣಾ ಪ್ರಚಾರಕ್ಕೂ ಮುಂಚೆ ಮಾಧ್ಯಮಗಳಿಗೆ ಮಾತನಾಡಿದ ಅವರು, ಬಿಜೆಪಿಯ ಕೇಂದ್ರ ನಾಯಕರು ಒಬ್ಬೊಬ್ಬರು ಒಂದೊಂದು ಸುಳ್ಳು ಹೇಳುತ್ತಾರೆ ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಕಾಂಗ್ರೆಸ್ ನಿರಂತರವಾಗಿ ಸುಳ್ಳು ಹೇಳುತ್ತಲೇ ಬಂದಿದೆ. ಇಂದಿರಾಗಾಂಧಿಯವರು ಗರೀಬಿ ಹಠಾವೊ ಅಂತ ಹೇಳಿದ್ದರು. ದೇಶದಲ್ಲಿ ಈಗಲೂ ಬಡತನ ಇದೆ. ಅವರು ಸುಳ್ಳು ಹೇಳುತ್ತಾರೆ ಎನ್ನುವುದಕ್ಕೆ ಇಂದೊಂದೆ ಸಾಕ್ಷಿ ಸಾಕು ಎಂದು ಹೇಳಿದರು. ರಾಜ್ಯದಲ್ಲಿ ಮೊದಲ ಹಂತದ ನಾಮಪತ್ರ ಸಲ್ಲಿಕೆ ಮುಕ್ತಾಯ ಆಗಿದೆ. ಕಣ ಸಿದ್ದವಾಗಿದೆ. ವಿಶ್ವಾಸ ಇದೆ. ಮೊದಲ ಹಂತದಲ್ಲಿ ನಮಗೆ…
ಬೆಂಗಳೂರು: ಮೋದಿ ಒಂದು ಸುಳ್ಳು ಹೇಳ್ತಾರೆ-ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ-ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು ಹೇಳ್ತಾರೆ. ಈ ಸುಳದಳಿನ ಪಾರ್ಟಿಗೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರ್ತದಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜೀವ್ ಗೌಡ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು. ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದರು. ಒಟ್ಟಾರೆಯಾಗಿ ಮೋದಿ ಒಂದು ಸುಳ್ಳು ಹೇಳ್ತಾರೆ-ಅಮಿತ್ ಶಾ ಇನ್ನೊಂದು ಸುಳ್ಳು ಹೇಳ್ತಾರೆ-ನಿರ್ಮಲಾ ಸೀತಾರಾಮನ್ ಮತ್ತೊಂದು ಸುಳ್ಳು ಹೇಳ್ತಾರೆ. ಈ ಸುಳ್ಳಿನ ಪಕ್ಷಕ್ಕೆ ಮತ ಹಾಕಿದ್ರೆ ನಿಮ್ಮ ಮತಕ್ಕೆ ಗೌರವ ಬರತ್ತಾ ಎಂದು ಪ್ರಶ್ನಿಸಿದಂತ ಸಿಎಂ ಸಿದ್ಧರಾಮಯ್ಯ ಅವರು, ಪ್ರೊ.ರಾಜೀವ್ ಗೌಡ ಸಮರ್ಥ ಸಂಸದ ಆಗುವ, ನಾಡಿನ ಜನತೆಯ ಧ್ವನಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ. https://kannadanewsnow.com/kannada/record-sunny-temperature-in-the-country-today-gulbarga-recorded-42-7-degrees-celsius/ https://kannadanewsnow.com/kannada/four-rowdy-sheeters-deported-in-hubballi/
ನವದೆಹಲಿ: ದೇಶಾದ್ಯಂತ ಇಂದು ಬಿಸಿಲ ತಾಪಮಾನ ಮತ್ತಷ್ಟು ಹೆಚ್ಚಿದೆ. ಬರೋಬ್ಬರಿ 44.5 ಸೆಲ್ಸಿಯಸ್ ದಾಖಲಾಗುವ ಮೂಲಕ, ಹೊಸ ದಾಖಲೆಯನ್ನು ಬರೆದಿದೆ. ಕರ್ನಾಟಕದ ಗುಲ್ಬರ್ಗದಲ್ಲಿ ಇಂದು ಅತಿ ಹೆಚ್ಚು ಎನ್ನುವಂತೆ 42.7 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪಮಾನ ದಾಖಲಾಗಿದೆ. ಈ ಕುರಿತಂತೆ ಭಾರತೀಯ ಹವಾಮಾನ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಲಾಗಿದೆ. ರಾಯಲ ಸೀಮೆಯ ಕರ್ನೂಲ್ ನಲ್ಲಿ ನಿನ್ನೆ 44.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದ ತಾಪಮಾನ, ಇಂದು 43.3ಕ್ಕೆ ಇಳಿದಿತ್ತು. ನಂದ್ಯಾಲದಲ್ಲಿ 43.5 ದಾಖಲಾಗಿದ್ದರೇ, ದೇಶದಲ್ಲೇ ಅತಿಹೆಚ್ಚು ಎನ್ನುವಂತೆ ಅನಂತಪುರದಲ್ಲಿ 44.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಆಂಧ್ರಪ್ರದೇಶದ ರೆಂಟಚಿಂತಲ್ ನಲ್ಲಿ 43.4 ತಾಪಮಾನ ದಾಖಲಾಗಿದ್ದರೇ, ಕರ್ನಾಟಕ ಗುಲ್ಬರ್ಗಾದಲ್ಲಿ 42.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ತೆಲಂಗಾಣದ ನಲಗೊಂಡದಲ್ಲಿ 42, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ 42.2 ಡಿಗ್ರಿ ಸೆಲ್ಸಿಯಸ್ ತಾಪಾಮಾನ ಇಂದು ದಾಖಲಾಗಿದೆ. https://twitter.com/Indiametdept/status/1776972966284406794 https://kannadanewsnow.com/kannada/delhi-metro-constable-commits-suicide-by-shooting-himself-with-rifle/ https://kannadanewsnow.com/kannada/four-rowdy-sheeters-deported-in-hubballi/
ನವದೆಹಲಿ: ಪಾಕಿಸ್ತಾನದ ಅಮೂಲ್ಯ ಬಂದರು ನಗರವಾದ ಗ್ವಾದರ್ ಚೀನೀಯರು ಅದನ್ನು ‘ಆಶೀರ್ವದಿಸುವವರೆಗೂ’ ಮೀನುಗಾರರು ಮತ್ತು ವ್ಯಾಪಾರಿಗಳಿಂದ ಕೂಡಿದ್ದಂತ ಪಟ್ಟಣವಾಗಿತ್ತು. ಸುತ್ತಿಗೆ ಆಕಾರದ ಮೀನುಗಾರಿಕಾ ಗ್ರಾಮವು ಈಗ ಪಾಕಿಸ್ತಾನದ ಮೂರನೇ ಅತಿದೊಡ್ಡ ಬಂದರನ್ನು ಹೊಂದಿದೆ, ಇದು ಕಳಂಕಿತ ಚೀನಾದ ಉಡುಗೊರೆಯಾಗಿದೆ. ಆದಾಗ್ಯೂ, ಗ್ವಾದರ್ ಯಾವಾಗಲೂ ಪಾಕಿಸ್ತಾನದೊಂದಿಗೆ ಇರಲಿಲ್ಲ. ಇದು ಸುಮಾರು 200 ವರ್ಷಗಳ ಕಾಲ, 1950 ರ ದಶಕದವರೆಗೆ ಒಮಾನಿ ಆಳ್ವಿಕೆಯಲ್ಲಿತ್ತು. 1958 ರಲ್ಲಿ ಗ್ವಾದರ್ ಅಂತಿಮವಾಗಿ ಪಾಕಿಸ್ತಾನದ ಸ್ವಾಧೀನಕ್ಕೆ ಬರುವ ಮೊದಲು, ಇದನ್ನು ವಾಸ್ತವವಾಗಿ ಭಾರತಕ್ಕೆ ನೀಡಲಾಯಿತು. ಇದನ್ನು ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಭಾರತ ಸರ್ಕಾರ ನಿರಾಕರಿಸಿತು. ಗ್ವಾದರ್ 1783 ರಿಂದ ಒಮಾನ್ ಸುಲ್ತಾನನ ವಶದಲ್ಲಿತ್ತು. ಮುಂಬರುವ ಲೋಕಸಭಾ ಚುನಾವಣೆ ಇತ್ತೀಚೆಗೆ ಭಾರತದ ಕಾರ್ಯತಂತ್ರದ ‘ಪ್ರಮಾದಗಳಲ್ಲಿ’ ಒಂದಾದ ಕಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸುವುದನ್ನು ಮರಳಿ ತಂದಿತು. ಕಚತೀವು ಪ್ರಕರಣದಲ್ಲಿ ಭಾರತದ ಪ್ರಾದೇಶಿಕ ಹಿತಾಸಕ್ತಿಗಳನ್ನು ದುರ್ಬಲಗೊಳಿಸಿದೆ ಎಂದು ಕಾಂಗ್ರೆಸ್ ಮೇಲೆ ಬಿಜೆಪಿ ಹೊರಿಸಿರುವ ಆರೋಪವು ಹಿಂದಿನ ಆರೋಪಗಳ ಸರಣಿಯನ್ನು ಅನುಸರಿಸುತ್ತದೆ. ಆದಾಗ್ಯೂ, ಕಾಶ್ಮೀರ “ಪ್ರಮಾದ”, “ಟಿಬೆಟ್ ಅನ್ನು…
ಈ ಜನ್ಮದಲ್ಲಿ… ತಂದೆ, ತಾಯಿ, ಅಣ್ಣ, ಅಕ್ಕ, ಹೆಂಡತಿ, ಗಂಡ, ಪ್ರೇಯಸಿ, ಪ್ರಿಯಕರ, ಮಿತ್ರರು, ಶತ್ರುಗಳು ಎನ್ನುವ ಅನೇಕ ಸಂಬಂಧಗಳು ನಮಗೆ ಈ ಪ್ರಪಂಚದಲ್ಲಿ ಲಭಿಸುತ್ತದೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ ಪರಿಹಾರ ನಿಮ್ಮ ಸಮಸ್ಯೆಗಳಾದ ಅತ್ತೆ-ಸೊಸೆ ಕಿರಿಕಿರಿ, ಪ್ರೀತಿಯಲ್ಲಿ ನಂಬಿ ಮೋಸ, ಇಷ್ಟ ಪಟ್ಟವರು ನಿಮ್ಮಂತೆ ಆಗಲು, ಗಂಡ ಹೆಂಡತಿ ಕಿರಿಕಿರಿ, ಮದುವೆಯಲ್ಲಿ ಅಡೆತಡೆ, ಸಂತಾನ ಸಮಸ್ಯೆ, ಮಕ್ಕಳು ಹೇಳಿದ ಮಾತು ಕೇಳದಿದ್ದರೆ, ವಿದ್ಯಾಭ್ಯಾಸದಲ್ಲಿ ಕಿರಿಕಿರಿ, ಆರೋಗ್ಯ ಸಮಸ್ಯೆ, ಆಸ್ತಿಯಲ್ಲಿ ಕಿರಿಕಿರಿ, ಮಾಟ ಮಂತ್ರ, ಶತ್ರು ನಾಶ, ಶತ್ರು ವಶೀಕರಣ,ಭಾನಮತಿ ಕೃತಿಮ ವಶೀಕರಣ ಇನ್ನೂ ನಿಮ್ಮ ಜೀವನದ ಗುಪ್ತ ಘೋರ ನಿಗೂಢ ಸಮಸ್ಯೆಗಳಿಗೆ ಚೌಡಮ್ಮ ಪೂಜಾ ಪದ್ಧತಿಯಿಂದ ಹಾಗೂ ಕೇರಳ ಕುಟ್ಟಿಚಾತನ್…
ಬಳ್ಳಾರಿ: ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಇಟ್ಟುಕೊಂಡಿದ್ದಂತ ದಾಖಲೆಯಿಲ್ಲದ 5.60 ಕೋಟಿ ಹಣ, 3 ಕೆಜಿ ಬಂಗಾರ, 103 ಕೆಜಿ ಬೆಳ್ಳಿಯನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬಳ್ಳಾರಿಯ ಬ್ರೂಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮನೆಯೊಂದರಲ್ಲಿ ದಾಖಲೆಯಿಲ್ಲದ ಹಣ, ಚಿನ್ನಾಭರಣ ಇರಿಸಿಕೊಂಡಿರೋ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಈ ಖಚಿತ ಮಾಹಿತಿಯ ಮೇರೆಗೆ ಬಳ್ಳಾರಿ ಡಿವೈಎಸ್ಪಿ ಮತ್ತು ಬ್ರೂಸ್ ಪೇಟೆಯ ಪೊಲೀಸರು ದಾಳಿ ನಡೆಸಿದ್ದಾರೆ. ಬಳ್ಳಾರಿ ನಗರದ ಕಂಬಳಿ ಬಜಾರ್ ನ ಆಭರಣದ ಅಂಗಡಿಯ ಮಾಲೀಕರ ಮನೆಯ ಮೇಲೆ ಇಂದು ದಾಳಿ ನಡೆಸಿದ್ದು, ದಾಳಿಯ ವೇಳೆಯಲ್ಲಿ ಮನೆಯಲ್ಲಿ 5.60 ಕೋಟಿ ಹಣ, 2 ಕೋಟಿ ಮೌಲ್ಯದ 3 ಕೆಜಿ ಬಂಗಾರ, 103 ಕೆಜೆ ಬೆಳ್ಳಿ ಹಾಗೂ 21 ಕೆಜಿ ಕಚ್ಚಾ ಬೆಳ್ಳಿ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ. ಇದರ ಒಟ್ಟು ಮೌಲ್ಯ 7.5 ಕೋಟಿ ಎನ್ನಲಾಗುತ್ತಿದೆ. ಸೂಕ್ತ ದಾಖಲೆಯಿಲ್ಲದೇ ಮನೆಯಲ್ಲಿ ಇರಿಸಿಕೊಂಡಿದ್ದ ಮಾಲೀಕ ನರೇಶ್ ಎಂಬುವರನ್ನು ವಶಕ್ಕೆ ಪಡೆದು, ವಿಚಾರಣೆ ಕೂಡ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್…
ಹುಬ್ಬಳ್ಳಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವಂತ ನಾಲ್ವರು ರೌಡಿ ಶೀಟರ್ ಗಳನ್ನು ಗಡಿಪಾರು ಮಾಡಿ, ಪೊಲೀಸರು ಆದೇಶಿಸಿದ್ದಾರೆ. ಈ ಸಂಬಂಧ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಇಲಾಖೆಯಿಂದ ಎಕ್ಸ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಅದರಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದ ನಾಲ್ವರು ರೌಡಿಶೀಟರ್ ಗಳನ್ನ ಗಡಿಪಾರು ಮಾಡಲಾಗಿದೆ. 1. ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಟಿಪ್ಪು ನಗರದ ನಿವಾಸಿ ಫಯಾಜ್ ಅಹ್ಮದ್ ಮಹಮ್ಮದ್ ಅಲಿ ಹತ್ತಿವಾಲೆ ಎಂಬತನನ್ನು ಆರು ತಿಂಗಳ ಅವಧಿಗೆ ಹಾಸನ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ ಎಂದಿದೆ. https://twitter.com/compolhdc/status/1776948460220186839 2.ಕಸಬಾಪೇಟ್ ಠಾಣೆಯ ರೌಡಿಶೀಟರ್ ಹಳೇಹುಬ್ಬಳ್ಳಿ ಇಂದಿರಾನಗರ ನಿವಾಸಿ ಪೃಥ್ವಿರಾಜ್ ಪೆದ್ದಣ್ಣ ಬೇತಾಪಲ್ಲಿ ಎಂಬಾತನನ್ನು 06 ತಿಂಗಳ ಅವಧಿಗೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. 3.ಬೆಂಡಿಗೇರಿ ಠಾಣೆಯ ರೌಡಿಶೀಟರ್ ಹುಬ್ಬಳ್ಳಿಯ ಸೆಟ್ಲಮೆಂಟ್ ಶಾಂತಿನಗರ ಕಾಲನಿ ನಿವಾಸಿ ಲಕ್ಷ್ಮಣ್ ಅಲಿಯಾಸ್ ಲಕ್ಯಾ ಗಬ್ಬಿ ಪರಶುರಾಮ ಬಳ್ಳಾರಿ ಎಂಬಾತನನ್ನು 06 ತಿಂಗಳ ಅವಧಿಗೆ ರಾಯಚೂರು ಜಿಲ್ಲೆಗೆ ಗಡಿಪಾರು ಮಾಡಲಾಗಿದೆ. https://twitter.com/compolhdc/status/1776948463340785860 4. ಧಾರವಾಡ…
ನವದೆಹಲಿ: ಖ್ಯಾತ ಛಾಯಾಗ್ರಾಹಕ, ಚಲನಚಿತ್ರ ನಿರ್ಮಾಪಕ, ನಿರ್ಮಾಪಕ ಮತ್ತು ಎಫ್.ಯು.ರಾಮ್ಸೆ ಅವರ ಎರಡನೇ ಹಿರಿಯ ಪುತ್ರ ಗಂಗು ರಾಮ್ಸೆ ಭಾನುವಾರ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಚಲನಚಿತ್ರ ನಿರ್ಮಾಪಕರು ನಿಧನರಾದರು. ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಗು ರಾಮ್ಸೆ ಅವರ ಗಮನಾರ್ಹ ವೃತ್ತಿಜೀವನವು ಹಲವಾರು ದಶಕಗಳವರೆಗೆ ವ್ಯಾಪಿಸಿತು. ಇದು ಭಾರತೀಯ ಚಲನಚಿತ್ರೋದ್ಯಮದ ಮೇಲೆ ಶಾಶ್ವತ ಪರಿಣಾಮ ಬೀರಿತು. ರಾಮ್ಸೆ ಬ್ರದರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ 50 ಕ್ಕೂ ಹೆಚ್ಚು ಅಪ್ರತಿಮ ಚಲನಚಿತ್ರಗಳಿಗೆ ಗಂಗು ತಮ್ಮ ಸೃಜನಶೀಲ ದೃಷ್ಟಿಕೋನವನ್ನು ನೀಡಿದರು, ಇದರಲ್ಲಿ ಕಾಲಾತೀತ ಕ್ಲಾಸಿಕ್ಗಳಾದ ವೀರನಾ, ಪುರಾಣ ಮಂದಿರ್, ಬಂದ್ ದರ್ವಾಜಾ, ದೋ ಗಜ್ ಜಮೀನ್ ಕೆ ನಿಚೆ, ಸಮ್ರಿ, ತೆಹ್ಖಾನಾ, ಪುರಾನಿ ಹವೇಲಿ ಮತ್ತು ಖೋಜ್ ಸೇರಿವೆ. ಪ್ರಸಿದ್ಧ ಚಲನಚಿತ್ರ ನಿರ್ಮಾಪಕರು ವಿವಿಧ ಯೋಜನೆಗಳಲ್ಲಿ ಕೆಲಸ ಮಾಡಿದರು. ಸೈಫ್ ಅಲಿ ಖಾನ್ ಅವರ ಚೊಚ್ಚಲ ಚಿತ್ರ ಆಶಿಕ್ ಆವಾರಾದ ಸಾರವನ್ನು ಅವರು ಸೆರೆಹಿಡಿದಿದ್ದಾರೆ. ಕಾ ಖಿಲಾಡಿ, ಸಬ್ಸೆ…
ಬೆಂಗಳೂರು: ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಕನ್ನಡಿಗರಿಗೆ ನೈಜ. .ತರ್ಕ ಬದ್ಧ ಹಾಗೂ ಮೌಲ್ಯಯುತ ಸುದ್ದಿಗಳನ್ನ ಹೊತ್ತು ತರಲು ಗ್ಯಾರಂಟಿ ನ್ಯೂಸ್ ಸಜ್ಜಾಗಿದೆ. ಕನ್ನಡಿಗರ ಹೆಮ್ಮೆಯ ನ್ಯೂಸ್ ಚಾನಲ್ “ಗ್ಯಾರಂಟಿ ನ್ಯೂಸ್” ಹೆಸರು ಹಾಗೂ ಲೋಗೋವನ್ನ ಕರ್ನಾಟಕ ಸರ್ಕಾರದ ಮಾನ್ಯ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್ ಅನಾವರಣಗೊಳಿಸಿದರು. ಈ ವೇಳೆ ಖ್ಯಾತ ನಟ ರಾಘವೇಂದ್ರ ರಾಜ್ ಕುಮಾರ್, ಗ್ಯಾರಂಟಿ ನ್ಯೂಸ್ ವೆಬ್ ಸೈಟ್ ಲಾಂಚ್ ಮಾಡಿದ್ರು. ಲೋಗೋ ಅನಾವರಣಗೊಳಿಸಿ ಮಾತನಾಡಿದ ಗೃಹ ಸಚಿವರಾದ ಡಾ.ಜಿ. ಪರಮೇಶ್ವರ್, ಮಾಧ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ತಂಡವೇ ಗ್ಯಾರಂಟಿ ನ್ಯೂಸ್ ಚಾನಲ್ ಆರಂಭ ಮಾಡುತ್ತಿದ್ದಾರೆ. ಇತರ ಮಾಧ್ಯಮಗಳಿಗಿಂತ ವಿಭಿನ್ನವಾಗಿ ಮೂಡಿ ಬರುವ ವಿಶ್ವಾಸ ಇದೆ. ಸ್ಪರ್ಧಾತ್ಮಕ ಯುಗದಲ್ಲಿ ನೀವು ದೊಡ್ಡ ಸವಾಲನ್ನೇ ಸ್ವೀಕಾರ ಮಾಡಿದ್ದೀರಿ. ಜನತೆಗೆ ನೈಜ ಸುದ್ದಿಗಳನ್ನ ನೀಡುವ ವಿಶ್ವಾಸ. ಇಂದಿನ ಅನೇಕ ಸುದ್ದಿ ಮಾಧ್ಯಮಗಳು, ಸುದ್ದಿ ನೀಡುವ ಭರದಲ್ಲಿ ಜಡ್ಜ್ಮೆಂಟ್ ನೀಡುವ ಅಭ್ಯಾಸ ಶುರುವಾಗಿದೆ. ಸುದ್ದಿ ಮಾಧ್ಯಮವಾಗಿ ಸುದ್ದಿಯನ್ನ ಬಿತ್ತರಿದಸಬೇಕು.…