Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕದಿಂದ ಕಳ್ಳಸಾಗಾಣೆ ಮಾಡುತ್ತಿದ್ದಂತ 3.15 ಕೋಟಿ ನಗದನ್ನು ಕೇರಳ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಕೇರಳದ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ಮಾಡಿ, 3.15 ಕೋಟಿ ಕಳ್ಳಸಾಗಾಣಿಕೆ ಮಾಡುತ್ತಿದ್ದಂತ ಹಣವನ್ನು ಜಪ್ತಿ ಮಾಡಿದ್ದಾರೆ. ಕಾರು ಮಾಡಿ ಫೈ ಮಾಡಿಕೊಂಡು ಸಾಗಿಸುತ್ತಿದ್ದಾಗ ಅನುಮಾನಗೊಂಡು ಪರಿಶೀಲನೆ ಮಾಡಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕಾರಿನ ಸೀಟು ಸೇರಿದಂತೆ ವಿವಿಧೆಡೆಯಲ್ಲಿ ಕಂತೆ ಕಂತೆ ಹಣವನ್ನು ಬಚ್ಚಿಟ್ಟು ಕರ್ನಾಟಕದಿಂದ ಕಳ್ಳಸಾಗಾಣಿಕೆ ಮಾಡುತ್ತಿದ್ದಾಗ ಕಾರು ಸಮೇತ ಕದೀಮರು ಸಿಕ್ಕಿಬಿದ್ದಿದ್ದಾರೆ. ಈ ಸಂಬಂಧ ಮೂವರನ್ನು ವಶಕ್ಕೆ ಪಡೆದಿರುವಂತ ಪೊಲೀಸರು, ದೊರೆತ ಕೋಟಿ ಕೋಟಿ ಹಣದ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. https://kannadanewsnow.com/kannada/new-labor-codes-to-be-implemented-across-the-country-from-today-what-are-the-benefits-heres-the-information/ https://kannadanewsnow.com/kannada/breaking-central-government-takes-important-step-for-workers-welfare-new-labour-codes-to-come-into-effect-from-today/
ಬೆಂಗಳೂರು: ನಗರದ ಶಕ್ತಿ ಕೇಂದ್ರ ವಿಧಾನಸೌಧದ ಮುಂದೆಯೇ ನೇಪಾಳಿ ಗ್ಯಾಂಗ್ ಪುಂಡಾಟ ಮೆರೆದಿತ್ತು. ಈ ಸಂಬಂಧ 11 ಆರೋಪಿಗಳನ್ನು ಎಡೆಮುರಿಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಭಾನುವಾರದಂದು ಬೆಂಗಳೂರಿನ ಹಲವೆಡೆ ತಿರುಗಾಡಿದ್ದಂತ ನೇಪಾಳಿ ಗ್ಯಾಂಗ್, ವಿಧಾನಸೌಧ, ಮೆಟ್ರೋ ನಿಲ್ದಾಣಕ್ಕೂ ಬಂದಿತ್ತು. ಈ ಗ್ಯಾಂಗ್ ಸದಸ್ಯರ ನಡುವೆಯೇ ಗಲಾಟೆಯಾಗಿ, ವಿಧಾನಸೌಧದ ಮುಂದೆಯೇ ಮಾರಾಮಾರಿ ಮಾಡಿಕೊಂಡಿದ್ದರು. ದಿಢೀರ್ ವಿಧಾನಸೌಧದ ಮುಂದೆ ಮಾರಾಮಾರಿಯಿಂದ ಸಾರ್ವಜನಿಕರು ಬೆಚ್ಚಿ ಬಿದ್ದಿದ್ದರು. ಗುಂಪು ಚದುರಿಸೋದಕ್ಕೆ ಸ್ಥಳದಲ್ಲಿದ್ದಂತ ಪೊಲೀಸರು ಲಾಠಿ ಬೀಸಿದ್ದರು. ಆ ಬಳಿಕ ನೇಪಾಳಿ ಗ್ಯಾಂಗ್ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಂದಹಾಗೇ ಓರ್ವ ಯುವತಿಯ ವಿಚಾರವಾಗಿ ಈ ಗಲಾಟೆಯಾಗಿದೆ ಎನ್ನಲಾಗುತ್ತಿದೆ. ಜೊತೆಗೆ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಈ ವಿಧಾನಸೌಧದ ಮುಂದೆಯೇ ಪುಂಡಾಟ ಮೆರಿದ್ದರು. ಈ ಗಲಾಟೆ ಸಂಬಂಧ ದೂರು ದಾಖಲಾದ ಹಿನ್ನಲೆಯಲ್ಲಿ ವಿಚಾರಣೆಯ ಬಳಿಕ ಇದೀಗ 11 ಮಂದಿಯನ್ನು ಪೊಲೀಸರು ಅರೆಸ್ಟ್ ಮಾಡಲಾಗಿದೆ. https://kannadanewsnow.com/kannada/new-labor-codes-to-be-implemented-across-the-country-from-today-what-are-the-benefits-heres-the-information/ https://kannadanewsnow.com/kannada/shivamogga-hosanagar-taluk-bjp-president-mattimane-subrahmanya-passes-away-due-to-heart-attack/ https://kannadanewsnow.com/kannada/breaking-central-government-takes-important-step-for-workers-welfare-new-labour-codes-to-come-into-effect-from-today/
ಶಿವಮೊಗ್ಗ: ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯರಾಗಿದ್ದಂತ ಮತ್ತಿಮನೆ ಸುಬ್ರಹ್ಮಣ್ಯ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಅವರನ್ನು ಕೂಡಲೇ ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಅಂದಾಹೇ ಹೊಸನಗರ ತಾಲ್ಲೂಕು ಬಿಜೆಪಿ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ ಅವರು ಸುಬ್ಬಣ್ಣ ಎಂಬುದಾಗಿಯೇ ತಾಲ್ಲೂಕಲ್ಲಿ ಗುರ್ತಿಸಿಕೊಂಡಿದ್ದವರು. ಕಾರ್ಯಕರ್ತರಿಂದ ಹಿಡಿದು, ದೊಡ್ಡ ಮಟ್ಟದ ನಾಯಕರೊಂದಿಗೂ ಆತ್ಮೀಯ ಸ್ನೇಹವನ್ನು ಹೊಂದಿದ್ದವರು. ಸಮಾಜಮುಖಿ ಕೆಲಸದಲ್ಲೂ ತೊಡಗಿಸಿಕೊಂಡಿದ್ದಂತ ಸುಬ್ಬಣ್ಣ, ಇದೀಗ ಹೃದಯಾಘಾತದಿಂದ ನಿಧನರಾಗುವ ಮೂಲಕ ಇನ್ನಿಲ್ಲವಾಗಿದ್ದಾರೆ. https://kannadanewsnow.com/kannada/new-labor-codes-to-be-implemented-across-the-country-from-today-what-are-the-benefits-heres-the-information/ https://kannadanewsnow.com/kannada/beware-of-scammers-claiming-to-be-rto-challan-dont-click-on-such-apk-file-even-if-you-are-mistaken/ https://kannadanewsnow.com/kannada/breaking-central-government-takes-important-step-for-workers-welfare-new-labour-codes-to-come-into-effect-from-today/
ಬೆಂಗಳೂರು: ರಾಜ್ಯ ಸರ್ಕಾರದಿಂದ ಶೇ.50ರಷ್ಟು ರಿಯಾಯಿತಿಯಲ್ಲಿ ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸೋದಕ್ಕೆ ಮತ್ತೆ ಅವಕಾಶ ನೀಡಿದೆ. ಈ ಬೆನ್ನಲ್ಲೇ ಆನ್ ಲೈನ್ ವಂಚಕರ ಜಾಲವೂ ಸಕ್ರೀಯವಾಗಿದೆ. ಆರ್ ಟಿ ಓ ಚಲನ್ ಎಂಬುದಾಗಿ ಆಪ್ ಫೈಲ್ ಬಂದಿದ್ದರೇ ಕ್ಲಿಕ್ ಮಾಡಬೇಡಿ ಎಂಬುದಾಗಿ ಇಲಾಖೆ ಎಚ್ಚರಿಸಿದೆ. ಈ ಕುರಿತಂತೆ ಸಾರಿಗೆ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ಆರ್.ಟಿ.ಓ ಚಲನ್ ಎಂದು ನಂಬಿಸಿ ವಂಚಿಸುತ್ತಾರೆ. ಎಚ್ಚರ..! ಯಾವುದೇ ಕಾರಣಕ್ಕೂ ಇಂಥ Apk ಫೈಲ್ಗಳ ಮೇಲೆ ಕ್ಲಿಕ್ ಮಾಡದಿರಿ ಎಂಬುದಾಗಿ ಮನವಿ ಮಾಡಿದೆ. ಇನ್ನೂ ಒಂದು ವೇಳೆ ನೀವು ವಾಹನಗಳ ಸಂಚಾರ ನಿಯಮ ಉಲ್ಲಂಘನೆಯ ದಂಡದಲ್ಲಿ ಶೇ.50ರಷ್ಟು ರಿಯಾಯಿತಿ ಪಡೆದು, ಪಾವತಿಸೋದಕ್ಕೆ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವಂತೆ ತಿಳಿಸಿದೆ. ವಾಹನ ಮಾಲೀಕರು ಆರ್ ಟಿ ಓ ಚಲನ್ ಎಂಬುದಾಗಿ ಬಂದಂತ Apk ಫೈಲ್ ಡೌನ್ ಲೋಡ್ ಮಾಡಿಕೊಂಡರೇ, ಮೊಬೈಲ್ ನಲ್ಲಿನ ಗೌಪ್ಯ ದತ್ತಾಂಶಗಳನ್ನು ಆನ್ ಲೈನ್ ಕಳ್ಳರು ಕದಿಯೋ ಸಾಧ್ಯತೆ ಇದೆ. ಆ…
ಬೆಂಗಳೂರು : “ನನ್ನ ಬಳಿ ಯಾವ ಬಣವೂ ಇಲ್ಲ. ನಾನು ಯಾವುದೇ ಬಣದ ನಾಯಕನಲ್ಲ. ನಾನು 140 ಶಾಸಕರ ಅಧ್ಯಕ್ಷ. 140 ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯಿಸಿದರು. ಕೆಲವು ಶಾಸಕರು, ಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ, ಮತ್ತೊಂದೆಡೆ ಡಿನ್ನರ್ ಮೀಟಿಂಗ್ ನಡೆಯುತ್ತಿದೆ ಎಂದು ಕೇಳಿದಾಗ, “ಯಾವ ಗುಂಪನ್ನು ದೆಹಲಿಗೆ ಕರೆದುಕೊಂಡು ಹೋಗಲು ನನಗೆ ಇಚ್ಛೆ ಇಲ್ಲ. ನಾನು ಗುಂಪುಗಾರಿಕೆ ಮಾಡುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನದ ಆಕಾಂಕ್ಷೆ ಇರುವವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗುವುದು ಸಹಜ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಹಕ್ಕು ಅವರಿಗೆ ಇದೆ. ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ. ಕೆಲವರು ಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೆ,…
ನವದೆಹಲಿ: ದುಬೈ ವಾಯು ಪ್ರದರ್ಶನದಲ್ಲಿ ಶುಕ್ರವಾರ ನಡೆದ ಪ್ರದರ್ಶನದ ವೇಳೆ ಭಾರತದ ಸ್ಥಳೀಯ ನಿರ್ಮಿತ ಯುದ್ಧ ವಿಮಾನ ತೇಜಸ್ ಪತನಗೊಂಡಿತು. ಯುದ್ಧ ವಿಮಾನವು ಮಧ್ಯಾಹ್ನ 2.10 ರ ಸುಮಾರಿಗೆ (ಸ್ಥಳೀಯ ಸಮಯ) ಪತನಗೊಂಡಿತು. ವಿಮಾನವು ಪ್ರೇಕ್ಷಕರಿಗೆ ಆಕಾಶದಲ್ಲಿ ಪ್ರದರ್ಶನ ನೀಡುತ್ತಿತ್ತು ಭಾರತೀಯ ಎಚ್ಎಎಲ್ ತೇಜಸ್ ಸ್ಥಳೀಯ ಸಮಯ ಮಧ್ಯಾಹ್ನ 2:10 ರ ಸುಮಾರಿಗೆ ಪ್ರೇಕ್ಷಕರಿಗೆ ಪ್ರದರ್ಶನ ನೀಡುತ್ತಿದ್ದಾಗ ಪತನಗೊಂಡಿತು. ಪೈಲಟ್ ಹೊರಹೋಗುವಲ್ಲಿ ಯಶಸ್ವಿಯಾದರೋ ಇಲ್ಲವೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಜನಸಮೂಹದಲ್ಲಿದ್ದ ಜನರು ನೋಡುತ್ತಿದ್ದಂತೆ ವಿಮಾನ ನಿಲ್ದಾಣದ ಮೇಲೆ ಕಪ್ಪು ಹೊಗೆ ಏರಿತು. ದುಬೈ ವಾಯು ಪ್ರದರ್ಶನದಲ್ಲಿ ಪ್ರೇಕ್ಷಕರು ಅಪಘಾತವನ್ನು ಚಿತ್ರೀಕರಿಸಿದ್ದಾರೆ. https://twitter.com/clashreport/status/1991815112530047097
ದುಬೈ: ದುಬೈ ವಾಯು ಪ್ರದರ್ಶನದಲ್ಲಿ ನಡೆದ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನಗೊಂಡಿತು. ಈ ಘಟನೆ ಕ್ಯಾಮೆರಾದಲ್ಲಿಯೂ ಸೆರೆಯಾಗಿದ್ದು, ಇದೀಗ ವಿಡಿಯೋ ವೈರಲ್ ಆಗುತ್ತಿದೆ. ವಿಮಾನವು ಇದ್ದಕ್ಕಿದ್ದಂತೆ ಗಾಳಿಯಲ್ಲಿ ಅಲುಗಾಡುತ್ತಾ, ತೀವ್ರವಾಗಿ ಪಲ್ಟಿಯಾಗಿ, ನಂತರ ನಿಯಂತ್ರಣ ಕಳೆದುಕೊಂಡು ನೆಲದ ಮೇಲೆ ಬೆಂಕಿ ಹೊತ್ತಿಕೊಂಡಿರುವುದನ್ನು ಇದು ತೋರಿಸುತ್ತದೆ. ವಿಮಾನ ನಿಲ್ದಾಣದ ಪರಿಧಿಯ ಬಳಿಯ ಪತನದ ಪ್ರದೇಶದಿಂದ ಭಾರೀ ಹೊಗೆ ಮತ್ತು ಬೆಂಕಿ ಏರುತ್ತಿದ್ದಂತೆ ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಪೈಲಟ್ನ ಸ್ಥಿತಿ ಮತ್ತು ಪತನದ ಕಾರಣದ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. https://twitter.com/sarcastic_us/status/1991816391033532903 https://kannadanewsnow.com/kannada/breaking-central-government-takes-important-step-for-workers-welfare-new-labour-codes-to-come-into-effect-from-today/ https://kannadanewsnow.com/kannada/7-11-crore-cash-robbery-case-in-bengaluru-police-arrest-kingpin-ravis-wife/
ನವದೆಹಲಿ: ಭಾರತದ ಕಾರ್ಮಿಕ ಆಡಳಿತವನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಒಂದು ಹೆಗ್ಗುರುತು ಕ್ರಮದಲ್ಲಿ, ಸರ್ಕಾರವು ಶುಕ್ರವಾರ ನಾಲ್ಕು ಕಾರ್ಮಿಕ ಸಂಹಿತೆಗಳನ್ನು – ವೇತನ ಸಂಹಿತೆ (2019), ಕೈಗಾರಿಕಾ ಸಂಬಂಧ ಸಂಹಿತೆ (2020), ಸಾಮಾಜಿಕ ಭದ್ರತೆ ಸಂಹಿತೆ (2020), ಮತ್ತು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳು (OSHWC) ಸಂಹಿತೆ (2020) – ಜಾರಿಗೆ ತಂದಿದೆ – ಅಸ್ತಿತ್ವದಲ್ಲಿರುವ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುತ್ತದೆ ಮತ್ತು ತರ್ಕಬದ್ಧಗೊಳಿಸುತ್ತದೆ. ಇದನ್ನು “ಐತಿಹಾಸಿಕ ನಿರ್ಧಾರ” ಎಂದು ಕರೆದ ಸರ್ಕಾರ, ಹೊಸ ಚೌಕಟ್ಟು ದಶಕಗಳಷ್ಟು ಹಳೆಯದಾದ, ವಿಘಟಿತ ಕಾರ್ಮಿಕ ನಿಯಮಗಳನ್ನು ಸರಳಗೊಳಿಸುತ್ತದೆ, ಕಾರ್ಮಿಕರ ಕಲ್ಯಾಣವನ್ನು ಹೆಚ್ಚಿಸುತ್ತದೆ, ಸುರಕ್ಷತಾ ಮಾನದಂಡಗಳನ್ನು ಬಲಪಡಿಸುತ್ತದೆ ಮತ್ತು ಭಾರತದ ಕಾರ್ಮಿಕ ಪರಿಸರ ವ್ಯವಸ್ಥೆಯನ್ನು ಜಾಗತಿಕ ಅತ್ಯುತ್ತಮ ಅಭ್ಯಾಸಗಳೊಂದಿಗೆ ಜೋಡಿಸುತ್ತದೆ ಎಂದು ಹೇಳಿದೆ. ವರ್ಷಗಳ ಸಮಾಲೋಚನೆ ಮತ್ತು ಪೂರ್ವಸಿದ್ಧತಾ ಕಾರ್ಯಗಳ ನಂತರ, ಅನುಷ್ಠಾನವು 21 ನವೆಂಬರ್ 2025 ರಿಂದ ಜಾರಿಗೆ ಬರುತ್ತದೆ. ಭವಿಷ್ಯಕ್ಕೆ ಸಿದ್ಧವಾಗಿರುವ ಕಾರ್ಯಪಡೆಗೆ ಆಧುನಿಕ ಚೌಕಟ್ಟು ಈ ಸಂಹಿತೆಗಳು…
ಬೆಂಗಳೂರು: ನಗರದಲ್ಲಿ ಎಟಿಎಂಗೆ ತುಂಬೋದಕ್ಕೆ ಕೊಂಡೊಯ್ಯುತ್ತಿದ್ದಂತ ಹಣವನ್ನು ಆರ್ ಬಿ ಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ 7.11 ಕೋಟಿ ದರೋಡೆ ಮಾಡಿದ್ದರು. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಕಿಂಗ್ ಪಿನ್ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಲ್ಲಿ 7.11 ಕೋಟಿ ನಗದು ದರೋಡೆ ಪ್ರಕರಣದಲ್ಲಿ ಕಿಂಗ್ ಪಿನ್ ರವಿ ಎಂಬುದಾಗಿ ಪೊಲೀಸರು ತನಿಖೆಯಲ್ಲಿ ಪತ್ತೆ ಹಚ್ಚಿದ್ದರು. ಅಲ್ಲದೇ ಬಂಧಿಸಿದ್ದರು. ಈ ಪ್ರಕರಣದಲ್ಲಿ ನಿನ್ನೆ ರಾತ್ರಿ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ತನ್ನ ಪತಿ ರವಿ, 7.11 ಕೋಟಿ ದರೋಡೆ ಕೇಸಲ್ಲಿ ಭಾಗಿಯಾಗಿರೋದನ್ನು ಅವರ ಪತ್ನಿ ಕೂಡ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ನಾನೇ ಪೊಲೀಸ್ ಠಾಣೆಗೆ ಬರಬೇಕು ಎಂದುಕೊಂಡಿದ್ದೆ. ನೀವೇ ಬಂದ್ರಿ ಎಂದು ಪೊಲೀಸರ ಜೊತೆಗೆ ರವಿತ ಪತ್ನಿ ತೆರಳಿರೋದಾಗಿ ಹೇಳಲಾಗುತ್ತಿದೆ. ತನ್ನ ಪತಿ ರವಿ ಬೆಂಗಳೂರಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಲಾಸ್ ಆಗಿ ಕೆಲಸ ಇಲ್ಲದೇ ಮನೆಯಲ್ಲಿದ್ದರು. ಈ ವೇಳೆ ಏರಿಯಾದ ಹುಡುಗರನ್ನು ಸೇರಿಸಿಕೊಂಡು ರಾಬರಿಗೆ…
ಬೆಂಗಳೂರು: ಆಮ್ ಆದ್ಮಿ ಪಕ್ಷದ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪ್ರಚಾರ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಿಕಾಂತ ರಾವ್ ” ರಾಜ್ಯದಲ್ಲಿ ಎಲ್ಲೆಂದರಲ್ಲಿ ಅವ್ಯಾಹತವಾಗಿ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದು ಜನತೆ ಶಾಂತಿಯಿಂದ ಜೀವಿಸಲು ಸಾಧ್ಯವಾಗುತ್ತಿಲ್ಲ. ಹಾಡಹಗಲೇ ಸಿನಿಮಿಯ ರೀತಿಯಲ್ಲಿ ಕೋಟ್ಯಾಂತರ ಹಣವನ್ನು ಲೂಟಿ ಮಾಡುವಂತ ಪ್ರಕರಣಗಳು ನಡೆಯುತ್ತಿವೆ. ಮಹಿಳೆ ಮತ್ತು ಮಕ್ಕಳ ಮೇಲೆ ಮೇಲೆ ನಿರಂತರ ಅತ್ಯಾಚಾರ – ದೌರ್ಜನ್ಯ ಪ್ರಕರಣಗಳು, ಕೋಟ್ಯಾಂತರ ರೂಪಾಯಿಗಳ ಸೈಬರ್ ಅಪರಾಧಗಳು, ಕಳ್ಳತನ ಕೊಲೆ , ದೊಂಬಿ, ಕೋಮು ದಳ್ಳುರಿ ನಡೆಯುತ್ತಿದ್ದರೂ ಗೃಹ ಸಚಿವ ಜಿ ಪರಮೇಶ್ವರ್ ಉಡಾಫೆ ಉತ್ತರಗಳನ್ನು ನೀಡುತ್ತಾ ಸಂಪೂರ್ಣ ನಿರಂತರ ವೈಫಲ್ಯವನ್ನು ಹೊಂದುತ್ತಿದ್ದಾರೆ. ಗೃಹ ಸಚಿವರಿಗೆ ಪೊಲೀಸ್ ಇಲಾಖೆಯ ಮೇಲೆ ಎಳ್ಳಷ್ಟು ಹತೋಟಿ ಇಲ್ಲದಾಗಿದೆ. ಕೂಡಲೇ ಇಂತಹ ನಿರ್ಲಕ್ಷ್ಯ , ಬೇಜವಾಬ್ದಾರಿ ಮಂತ್ರಿಗಳನ್ನು ಸಂಪುಟದಿಂದ ಕೈ ಬಿಡಬೇಕು ” ಎಂದು ಆಗ್ರಹಿಸಿದರು. ” ಗೃಹ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಇದು ಮುಂದುವರೆದರೆ ಮುಖ್ಯಮಂತ್ರಿಗಳ ಮನೆ ಮುಂದೆ…














