Subscribe to Updates
Get the latest creative news from FooBar about art, design and business.
Author: kannadanewsnow09
ಚಿತ್ರದುರ್ಗ: ಪೂರ್ವಜರು ಆರಂಭಿಸಿದ ಸಂಪ್ರದಾಯ ಹಳೆಯ ಕಾಲದ ಆಭರಣಗಳಿದ್ದಂತೆ ಅವುಗಳನ್ನು ಇಂದಿನ ಪೀಳಿಗೆ ಹೊಸ ಡಿಸೈನ್ ಮಾಡಿಕೊಂಡು ಬಳಸುವಂತೆ ನಾವು ಸಂಪ್ರದಾಯವನ್ನು ಉಳಿಸಬೇಕು ಎಂದು ಚಿತ್ರದುರ್ಗ ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ,ಶಿವಕುಮಾರ್ ಅಭಿಪ್ರಾಯಪಟ್ಟರು. ಚಿತ್ರದುರ್ಗದ ಸ್ಟೇಡಿಯಂ ರಸ್ತೆಯಲ್ಲಿರುವ ವೀರ ಸೌಧದಲ್ಲಿ ಪತಾಂಜಲಿ ಮಹಿಳಾ ಯೋಗ ಸಮಿತಿಯಿಂದ ನಡೆದ ಯೋಗ ಶಿಕ್ಷಕರತರಭೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮಪೂರ್ವಜರು ಆಚರಿಸುತಿದ್ದ, ಎಲ್ಲಾ ಸಂಪ್ರದಾಯ ನಮ್ಮ ಆರೋಗ್ಯಕ್ಕೆಪೂರಕವಾಗಿವೆ. ಆದರೆ ಇಂದಿನ ಸಮಾಜದಲ್ಲಿ ಶರೀರಕ್ಕಿಂತ ಹೆಚ್ಚಾಗಿ ಮನಸಿನ ಕಾಯಿಲೆ ಹೆಚ್ಚಾಗಿವೆ. ಹೀಗಾಗಿ ಯೋಗ ಸೇರಿದಂತೆ ನಮ್ಮ ಪೂರ್ವಜರು ಆರಂಭಿಸಿದ್ದ ಎಲ್ಲಾ ಸಾಂಪ್ರದಾಯಿಕ ಆಚರಣೆಗಳನ್ನು ನಾವು ಮುನ್ನಡೆಸಬೇಕಿದೆ. ಆ ಸಂಪ್ರದಾಯಗಳು ನಮ್ಮ ಆರೋಗ್ಯ ರಕ್ಷಣೆಗೆ ದಾರಿದೀಪವಾಗಿವೆ. ಆದರೆ ಇಂದಿನ ಮಹಿಳೆಯರು ಆ ಸಾಂಪ್ರದಾಯಿಕ ಆಚರಣೆಗಳನ್ನು ಮರೆತು ಸಾಮರಸ್ಯ ಕದಡುವ ಧಾರವಾಹಿಗಳತ್ತ ಮಾರು ಹೋಗುತ್ತಿದ್ದಾರೆ. ಈ ಹಿಂದೆ ಕೋವಿಡ್ ಮಹಾಮಾರಿ ಆರಂಭವಾದಾಗ ಸಾಮಾಜಿಕ ಅಂತರಪಾಲಿಸುವಂತೆ ಸೂಚಿಸಿದ್ದಾಗ,ಪ್ರಾಣಭಯದಿಂದ ಎಲ್ಲರು ಅದನ್ನು ಪಾಲಿಸಿದೆವು. ಅಂತೆಯೇ ಈಗಿನ ಪೀಳಿಗ ಸಹ ವೈಜ್ಞಾನಿಕ ತತ್ವ ಪಾಲಿಸಿದ್ರೆ ನಮ್ಮ…
ಬೆಂಗಳೂರು: ಕನ್ನಡ ಕಲಿಕೆಗೆ ಅನ್ಯಭಾಷಿಗರು ಆಸಕ್ತಿ ತೋರಿದರೇ, ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆ ಆರಂಭಿಸಲಾಗಿದೆ. ಇದಕ್ಕಾಗಿ ಕಲಿಕಾ ಕೇಂದ್ರ ಆರಂಭಿಸಲು ಇಚ್ಛಿಸುವವರು ಈ ರೀತಿ ಅರ್ಜಿ ಸಲ್ಲಿಸಬಹುದು. ಅನ್ಯ ಭಾಷಿಗರಿಗೆ ಕನ್ನಡ ಕಲಿಸಲು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರವು ʼಕನ್ನಡೇತರರಿಗೆ ಕನ್ನಡ ಕಲಿಸುವ ಯೋಜನೆʼಯನ್ನು ಪ್ರಾರಂಭಿಸಿದೆ. ಕನ್ನಡ ಕಲಿಕಾ ಕೇಂದ್ರಗಳನ್ನು ನಡೆಸಲು ಇಚ್ಛಿಸುವವರು ಪ್ರಾಧಿಕಾರದ ಇ-ಮೇಲ್ ವಿಳಾಸ secretary.kanpra@gmail.com ಅಥವಾ chairman.kanpra@gmail.com ಗೆ ಸಂಪರ್ಕಿಸಬಹುದು. ಹೆಚ್ಚಿನ ವಿವರಕ್ಕಾಗಿ 080 22286773 ಕ್ಕೆ ಕರೆ ಮಾಡಬಹುದು. https://twitter.com/KarnatakaVarthe/status/1817167511860727977 https://kannadanewsnow.com/kannada/opposition-mlas-agree-to-set-up-skydeck-near-nice-road-discuss-in-cabinet-meeting-dk-shivakumar-shivakumar/ https://kannadanewsnow.com/kannada/ban-on-tourists-visiting-muttatti-tourist-spot/
ಬೆಂಗಳೂರು: “ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಬೆಂಗಳೂರಿನಲ್ಲಿ 250 ಮೀ. ಸ್ಕೈಡೆಕ್ ನಿರ್ಮಿಸಲು ಮುಂದಾಗಿದ್ದು, ವಿರೋಧ ಪಕ್ಷಗಳ ನಾಯಕರು, ಶಾಸಕರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಶಾಸಕರ ಸಭೆ ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲಿ ಚರ್ಚೆಯಾದ ವಿಚಾರಗಳ ಬಗ್ಗೆ ಶನಿವಾರ ಮಾಹಿತಿ ನೀಡಿದರು. “250 ಮೀಟರ್ ಎತ್ತರದ ಈ ಸ್ಕೈಡೆಕ್ ಗಾಗಿ 25 ಎಕರೆ ಜಾಗ ಅಗತ್ಯವಿದೆ. ಕೊಮ್ಮಘಟ್ಟ ಹಾಗೂ ಬೆಂಗಳೂರು ವಿವಿ ಬಳಿಯ ಜಾಗವನ್ನು ನೋಡಿದ್ದೆವು. ಬೆಂಗಳೂರು ಬೆಳೆಯುತ್ತಿರುವಾಗ ಬೆಂಗಳೂರು ವಿವಿಯ ಬಳಿ 25 ಎಕರೆ ಭೂಮಿ ವ್ಯರ್ಥ ಮಾಡುವುದು ಬೇಡ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದು ಎಂದು ಶಾಸಕರು ಅಭಿಪ್ರಾಯಪಟ್ಟರು. ಹೀಗಾಗಿ ಈಗ ನೈಸ್ ರಸ್ತೆಯ ಬಳಿ ಮಾಡಲು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಎಲ್ಲಾ ಶಾಸಕರು ಒಪ್ಪಿದ್ದಾರೆ” ಎಂದು…
ಗೃಹಪ್ರವೇಶಕ್ಕೆ ಮನೆ ಯಜಮಾನನ ಜಾತಕವನ್ನು ನೋಡಿ ಮುಹೂರ್ತವನ್ನು ನಿಷ್ಕರ್ಷೆ ಮಾಡಬೇಕು ಆದರೆ ಸ್ಥೂಲವಾಗಿ ವಾರ ತಿಥಿ ನಕ್ಷತ್ರ ಲಗ್ನ ಕಾಲ ದ್ವಾದಶ ಸುದ್ದಿ ಬಗ್ಗೆ ಸ್ವಲ್ಪ ತಿಳುವಳಿಕೆ ಅಗತ್ಯ. ವೈಶಾಖ ಮಾಸದಲ್ಲಿ ಗೃಹಪ್ರವೇಶ ನಡೆಸಿದ್ದಲ್ಲಿ ಬಹು ಪ್ರಶಸ್ತ ಪ್ರದವಾದದ್ದು. ಜೇಷ್ಠ ಮಾಸವು ಶುಭ ಪಾಲ್ಗುಣ ಸಂಪತ್ಕರ ಮಾಘಮಾಸದಲ್ಲಿ ಸುಖ ಸಂತೋಷ ಮತ್ತು ಧಾನ್ಯ ಸಮೃದ್ಧಿ ವಾರಗಳಲ್ಲಿ ಸೋಮವಾರ ಬುಧವಾರ ಗುರುವಾರ ಶುಕ್ರವಾರ ಸಂಪತ್ಕರ ತಿಥಿಗಳಲ್ಲಿ ತೃತಿಯ ಪಂಚಮಿ ಸಪ್ತಮಿ ದಶಮಿ ತ್ರಯೋದಶಿ ಶ್ರೇಷ್ಠ. ರಕ್ತ ತಿಥಿ ದಗ್ದ ಯೋಗ ತಿಥಿಗಳು ಭದ್ರ ಕರಣ ಶುಕ್ಲ ಷಷ್ಟಿಗಳು ಬಹುಳ ಏಕಾದಶಿ ಮೊದಲ ಶುಕ್ಲ ಪ್ರತಿಪದಿಯ ವರೆಗೆ ಪ್ರದೋಷಗಳು ಸೂರ್ಯನನ್ನು ತನಗೆದುರಿಗಿರುವ ಶುಕ್ರನನ್ನು ಬಿಟ್ಟು ಗೃಹಪ್ರವೇಶ ಮಾಡತಕ್ಕದ್ದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ನಕ್ಷತ್ರಿ ತಂತ್ರಿ ನಂ:- 9686268564. ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ…
ಮಂಡ್ಯ : ರಾಜ್ಯದ 25 ಜಿಲ್ಲೆಗಳಲ್ಲಿ ಈ ಬಾರಿ ವಾಡಿಕೆಗಿಂತ ಶೇಕಡಾ 28ರಷ್ಟು ಹೆಚ್ಚು ಮಳೆಯಾಗಿದ್ದು, ಬೆಂಗಳೂರು ಗ್ರಾಮಾಂತರ,ಕೋಲಾರ. ಚಿಕ್ಕಬಳ್ಳಾಪುರ ಸೇರಿದಂತೆ 5 ಜಿಲ್ಲೆಗಳಲ್ಲಿ ಕಡಿಮೆ ಮಳೆಯಾಗಿರುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಅವರು ಇಂದು ಶ್ರೀರಂಗಪಟ್ಟಣದಲ್ಲಿ ವೆಲ್ಲಸ್ಲಿ ಸೇತುವೆ ಪರಿಶೀಲನೆ ನಡೆಸಿದ ನಂತರ ಮಾತನಾಡಿ ಬಹುತೇಕ ಜಲಾಶಯಗಳು ಭರ್ತಿಯಾಗಿದೆ.ಕೆ ಆರ್ ಎಸ್ ಜಲಾಶಯದಿಂದ 1ಲಕ್ಷಕ್ಕೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದ್ದು 1ಲಕ್ಷ 60ಸಾವಿರ ಕೂಸೆಕ್ಸ್ ನೀರು ತಮಿಳುನಾಡಿಗೆ ಹರಿಬಿಡಲಾಗುತ್ತಿದೆ ಎಂದರು. ಕೃಷ್ಣ ನದಿಯಲ್ಲೂ ಕೂಡ 2.5 ಲಕ್ಷ ನೀರನ್ನು ಅಣೆಕಟ್ಟೆಯಿಂದ ನದಿಗೆ ಬಿಡಲಾಗುತ್ತಿದೆ. ಪ್ರವಾಹದ ಮಟ್ಟಕ್ಕಿಂತ ನೀರಿನ ಹರಿವಿನ ಪ್ರಮಾಣ ಕಡಿಮೆ ಇದೆ.ಮಳೆ ಬಿಡುವು ಕೊಟ್ಟಿರುವುದರಿಂದ ಪ್ರವಾಹ ಪರಿಸ್ಥಿತಿ ಸುಧಾರಿಸುವ ಹಂತದಲ್ಲಿದೆ. ಹೇಮಾವತಿ ಹಾಗೂ ಕಾವೇರಿ ನದಿ ಪಾತ್ರದಲ್ಲಿರುವ ಹಾಸನ. ಕೆ ಆರ್ ಪೇಟೆ. ಟಿ. ನರಸೀಪುರ. ಶ್ರೀರಂಗಪಟ್ಟಣ ತಾಲ್ಲೂಕುಗಳ ತಗ್ಗು ಪ್ರದೇಶದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಡಳಿತವನ್ನು ಚುರುಕು ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು. ಕೆ.ಆರ್.ಪೇಟೆಯ…
ಪ್ಯಾರೀಸ್: ಇಲ್ಲಿ ನಡೆಯುತ್ತಿರುವಂತ ಪ್ಯಾರಿಸ್ ಒಲಿಂಪಿಕ್ಸ್ 2024ರ ಬ್ಯಾಡ್ಮಿಂಟನ್ ನ ಎರಡನೇ ಸುತ್ತಿನಲ್ಲಿ ಭಾರತ ಲಕ್ಷ್ಯ ಸೇನ್ ಗೆಲುವು ಸಾಧಿಸಿ, ಸೆಮಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಪದಕ ಗೆಲುವಿನ ಭರವಸೆಯನ್ನು ಮೂಡಿಸಿದ್ದಾರೆ. ಲಕ್ಷ್ಯ ಸೇನ್ 21-8, 22-20 ನೇರ ಗೇಮ್ ಗಳಿಂದ ಗೆದ್ದರು. ಅವರು ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ನ ಎರಡನೇ ಸುತ್ತಿಗೆ ಮುನ್ನಡೆಯುತ್ತಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್ನ ಆರಂಭಿಕ ಪಂದ್ಯದಲ್ಲಿ ಭಾರತದ ಸ್ಟಾರ್ ಶಟ್ಲರ್ ಕೆವಿನ್ ಕಾರ್ಡನ್ ಅವರನ್ನು 21-8, 22-20 ಅಂತರದಿಂದ ಸೋಲಿಸಿದರು. ಸೇನ್ ಅವರ ಮುಂದಿನ ಸೆಮಿಫೈನಲ್ ಪಂದ್ಯ ಸೋಮವಾರ ವಿಶ್ವದ 52 ನೇ ಶ್ರೇಯಾಂಕದ ಜೂಲಿಯನ್ ಕರಗ್ಗಿ ವಿರುದ್ಧ ನಡೆಯಲಿದೆ. https://kannadanewsnow.com/kannada/do-you-know-how-many-trees-and-damaged-vehicles-have-been-damaged-in-bengaluru/ https://kannadanewsnow.com/kannada/ban-on-tourists-visiting-muttatti-tourist-spot/
ಬೆಂಗಳೂರು: ನಗರದಲ್ಲಿ ಇಂದು ಸುರಿದಂತೆ ಜೋರು ಗಾಳಿ ಸಹಿತ ಮಳೆಯಿಂದಾಗಿ ಹಲವೆಡೆ ಮರಗಳು ಮುರಿದು ಬಿದ್ದಿವೆ. ಅಲ್ಲದೇ ಮರಗಳ ಕೆಳಗೆ ನಿಲ್ಲಿಸಲಾಗಿದ್ದಂತ ವಾಹನಗಳು ಜಖಂಗೊಂಡಿದ್ದಾವೆ. ಹಾಗಾದ್ರೇ ಇಂದು ಜೋರು ಗಾಳಿ, ಮಳೆಗೆ ಬಿದ್ದ ಮರಗಳು, ಜಖಂಗೊಂಡ ವಾಹನಗಳು ಎಷ್ಟು ಅಂತ ಮುಂದೆ ಓದಿ. ಬೆಂಗಳೂರು ನಗರದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದಿನಾಂಕ: 27.07.2024ರಂದು ಗಾಳಿಯ ರಭಸಕ್ಕೆ ಈ ಕೆಳಕಂಡ ಸ್ಥಳಗಳಲ್ಲಿ ಮರ / ರೆಂಬೆ ಕೊಂಬೆಗಳು ರಸ್ತೆಗೆ ಮುರಿದು ಬಿದ್ದಿದ್ದು, ಅದರ ವಿವರ ಈ ಕೆಳಕಂಡಂತಿರುತ್ತದೆ. 1. ರೆಸಿಡೆನ್ಸಿ ರಸ್ತೆ ಬಳಿ ಮರ ಬಿದ್ದಿರುವ ಬಗ್ಗೆ: ಬೆಂಗಳೂರು ನಗರದ ರೆಸಿಡೆನ್ಸಿ ರಸ್ತೆಯಲ್ಲಿರುವ ಮೆಹಕ್ ಪರ್ಫ್ಯೂಮ್ಸ್ ಅಂಡ್ ಅಕ್ಸೆಸರೀಸ್, ರಾಡೋ ಸರ್ವೀಸ್ ಸೆಂಟರ್, ನಂ. 101, ನಿವಾರಣಾ ಕಟ್ಟಡ, ರಿಚ್ಮಂಡ್ ರಸ್ತೆ, ರಿಚ್ಮಂಡ್ ವೃತ್ತ, ಬೆಂಗಳೂರು 560025 ಇಲ್ಲಿ ನಿವೇಶನದ ಒಳಭಾಗದಲ್ಲಿ ಬೆಳೆದಿದ್ದ ಗುಲ್ಮರ್ ಮರವು ದಿನಾಂಕ: 27.07.2024ರಂದು ಗಾಳಿಯ ರಭಸಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದು ಆಟೋ ರಿಕ್ಷಾ ಸಂಖ್ಯೆ: KA…
ಉಜಿರೆ : ನೀವು ಮಾಡುವ ಸ್ವ ಉದ್ಯೋಗದಿಂದ ಇತರಿಗೆ ಉದ್ಯೋಗ ನೀಡುವುದರ ಮೂಲಕ ನಿಮ್ಮ ಉದ್ಯಮಕ್ಕೆ ನೀವೇ ಬಾಸ್ ಆಗುತ್ತೀರಿ. ಸರಕಾರ ಮತ್ತು ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದುಕೊಂಡ ಕೃಷಿಯನ್ನು ಒಂದು ಉದ್ಯಮವನ್ನಾಗಿ ಮಾಡಲು ತುಂಬಾ ಅವಕಾಶ ಇದೆ. ಕೃಷಿ ಚಟುವಟಿಕೆಗೆ ಬ್ಯಾಂಕ್ ಇವತ್ತು ಕಡಿಮೆ ಬಡ್ಡಿ ದರದಲ್ಲಿ ಬೇಕಾದಷ್ಟು ಸಾಲ ನೀಡುತ್ತದೆ. ಅದರ ಸದುಪಯೋಗ ಮಾಡಿಕೊಂಡು ನೀವು ಕೃಷಿ ಉದ್ಯಮಿಯಾಗಿ ಜೊತೆಗೆ ಇತರರನ್ನು ಸಹ ಬ್ಯಾಂಕಿನ ನೆರವು ಪಡೆದುಕೊಳ್ಳುವಂತೆ ಪ್ರೇರಣೆ ನೀಡಿ ಎಂದು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಮಾಹಾ ಪ್ರಬಂಧಕರಾದ ಸುಧಾಕರ ಕೊಟ್ಟಾರಿ ಅಭಿಪ್ರಾಯ ಪಟ್ಟರು. ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 13 ದಿನಗಳ ಕಾಲ ನಡೆದೆ ಕೃಷಿ ಉದ್ಯಮಿ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣ ಪತ್ರ ಮತ್ತು ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ್ ಖಾತೆ ಹಾಗೂ ಕೆನರಾ ಏಂಜಲ್ ಖಾತೆಯ ಪುಸ್ತಕ, ವಿತ್ತರಿಸಿ ಮಾತನಾಡಿದರು. ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿ ಯಾಗಬೇಕು. ಪಡೆದ…
ಬೆಂಗಳೂರು: ದ್ವಿತೀಯ PU ಪರೀಕ್ಷೆ-3ರಲ್ಲಿ ಉತ್ತೀರ್ಣರಾದವರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಅದೇ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಪರಿಗಣನೆಯಿಲ್ಲ ಎಂಬುದಾಗಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಹಂಚಿಕೊಂಡಿದ್ದು, ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಏಕಕಾಲಕ್ಕೆ ಸೀಟು ಹಂಚಿಕೆ ಮಾಡಲಾಗುತ್ತದೆ ಅಂತ ತಿಳಿಸಿದೆ. ಇದಲ್ಲದೇ ದ್ವಿತೀಯ ಪಿಯುಸಿ ಪರೀಕ್ಷೆ-3ರಲ್ಲಿ ಉತ್ತೀರ್ಣರಾದವರಿಗೆ ಬಿಗ್ ಶಾಕ್ ಎನ್ನುವಂತೆ ಎಂಜಿನಯರಿಂದ್, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸೀಟು ಹಂಚಿಕೆಯಲ್ಲಿ ಪರಿಗಣಿಸಲಾಗುವುದಿಲ್ಲ ಅಂತ ಸ್ಪಷಟ ಪಡಿಸಿದೆ. https://twitter.com/KarnatakaVarthe/status/1816817337552560401 https://kannadanewsnow.com/kannada/railway-passengers-these-trains-to-be-cancelled-tomorrow-tomorrow/ https://kannadanewsnow.com/kannada/ban-on-tourists-visiting-muttatti-tourist-spot/
ಬೆಂಗಳೂರು: ವಿವಿಧ ಕಾರಣಗಳಿಂದಾಗಿ ನಾಳೆ, ನಾಡಿದ್ದು ಕೆಲ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಜುಲೈ.28ರ ನಾಳೆ 13 ರೈಲು, ಜುಲೈ.29ರ ನಾಡಿದ್ದು 4 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಿಂದ ಮಾಹಿತಿ ನೀಡಲಾಗಿದ್ದು, ದಿನಾಂಕ 28-07-2024ರಂದು 13 ರೈಲುಗಳು ಹಾಗೂ ದಿನಾಂಕ 29-07-2024ರಂದು 4 ರೈಲುಗಳ ಸಂಚಾರವನ್ನು ರದ್ದುಪಡಿಸಲಾಗುತ್ತಿದೆ ಅಂತ ತಿಳಿಸಿದೆ. ದಿನಾಂಕ 28-07-2024ರಂದು ಈ ರೈಲುಗಳ ಸಂಚಾರ ರದ್ದು ರೈಲು ಸಂಖ್ಯೆ 16540 – ಮಂಗಳೂರು ಜಂಕ್ಷನ್ ಟು ಯಶವಂತಪುರ ರೈಲು ಸಂಖ್ಯೆ 07377 – ವಿಜಯಪುರ – ಮಂಗಳೂರು ಸೆಂಟ್ರಲ್ ರೈಲು ಸಂಖ್ಯೆ 06567 – ಎಸ್ ಎಂ ವಿ ಟಿ ಬೆಂಗಳೂರು ಟು ಕಾರವಾರ ರೈಲು ಸಂಖ್ಯೆ 06568 – ಕಾರವಾರ ಟು ಎಸ್ ಎಂ ವಿ ಟಿ ಬೆಂಗಳೂರು ರೈಲು ಸಂಖ್ಯೆ 16585 – ಎಸ್ ಎಂ ವಿಟಿ ಬೆಂಗಳೂರು ಟು ಮುರುಡೇಶ್ವರ್ ರೈಲು ಸಂಖ್ಯೆ 16586 – ಮುರುಡೇಶ್ವರ ಟು…