Subscribe to Updates
Get the latest creative news from FooBar about art, design and business.
Author: kannadanewsnow09
ಮೈಸೂರು: ರೈಲ್ವೆ ಕಾರ್ಯಾಚರಣಾ ಕಾರಣಗಳಿಂದಾಗಿ, ಪೂರ್ವ ಮಧ್ಯ ರೈಲ್ವೆಯು ಕೆಳಕಂಡ ರೈಲುಗಳ ನಿರ್ಗಮನ /ಆಗಮನ ಸಮಯಗಳಲ್ಲಿ ಪರಿಷ್ಕರಣೆ ಮಾಡಿರುವುದಾಗಿ ತಿಳಿಸಿದೆ. ಈ ಪರಿಷ್ಕೃತ ಸಮಯಗಳು ಕೆಳಗೆ ಸೂಚಿಸಿರುವ ದಿನಾಂಕಗಳಿಂದ ಜಾರಿಗೆ ಬರಲಿವೆ: ರೈಲು ಸಂಖ್ಯೆ 12577 ದರ್ಬಾಂಗ – ಮೈಸೂರು ಎಕ್ಸ್ಪ್ರೆಸ್ ದರ್ಬಾಂಗ ನಿಲ್ದಾಣದಿಂದ ಹೊರಡುವ ಸಮಯವನ್ನು 15:35 ಗಂಟೆಯಿಂದ 15:30 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 07 ಏಪ್ರಿಲ್ 2026ರಿಂದ ಅನ್ವಯವಾಗಲಿದೆ. ರೈಲು ಸಂಖ್ಯೆ 12578 ಮೈಸೂರು – ದರ್ಬಾಂಗ ಎಕ್ಸ್ಪ್ರೆಸ್ ದರ್ಬಾಂಗ ನಿಲ್ದಾಣಕ್ಕೆ ಆಗಮಿಸುವ ಸಮಯವನ್ನು 16:00 ಗಂಟೆಯಿಂದ 16:10 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 06 ಫೆಬ್ರವರಿ 2026ರಿಂದ ಅನ್ವಯವಾಗಲಿದೆ. ರೈಲು ಸಂಖ್ಯೆ 15227 ಎಸ್ಎಂವಿಟಿ ಬೆಂಗಳೂರು – ಮುಜಾಫರ್ ಪುರ್ ಎಕ್ಸ್ಪ್ರೆಸ್ ಮುಜಾಫರ್ ಪುರ್ ನಿಲ್ದಾಣಕ್ಕೆ ಆಗಮಿಸುವ ಸಮಯವನ್ನು 01:45 ಗಂಟೆಯಿಂದ 01:50 ಗಂಟೆಗೆ ಪರಿಷ್ಕರಿಸಲಾಗಿದೆ. ಈ ಬದಲಾವಣೆ 05 ಫೆಬ್ರವರಿ 2026ರಿಂದ ಅನ್ವಯವಾಗಲಿದೆ. https://kannadanewsnow.com/kannada/ban-on-advertisements-promoting-tobacco-products-in-state-transport-buses-and-bus-stops/ https://kannadanewsnow.com/kannada/confident-group-chairman-c-j-roy-committed-suicide-by-shooting-himself-with-a-pistol/
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಟಿ ದಾಳಿಗೆ ಹೆದರಿ ಸಿ.ಜೆ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ ರಾಯ್ ಅವರು ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಲ್ಯಾಂಗ್ ಫರ್ಡ್ ರಸ್ತೆಯಲ್ಲಿರುವ ಬಂಗಲೆಯಲ್ಲಿ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಸಿ.ಜೆ ರಾಯ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಂತ ವೇಳೆಯಲ್ಲೇ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. https://kannadanewsnow.com/kannada/threatening-a-female-officer-case-rajeev-gowda-granted-conditional-bail/ https://kannadanewsnow.com/kannada/ban-on-advertisements-promoting-tobacco-products-in-state-transport-buses-and-bus-stops/
ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ ರಾಯ್ ಅವರು ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೇಲೆ ಪದೇ ಪದೇ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಇಂದು ಕೂಡ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದರು. ಈ ಹಿನ್ನಲೆಯಲ್ಲಿ ಅವರು ಐಟಿ ದಾಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. https://kannadanewsnow.com/kannada/ban-on-advertisements-promoting-tobacco-products-in-state-transport-buses-and-bus-stops/ https://kannadanewsnow.com/kannada/threatening-a-female-officer-case-rajeev-gowda-granted-conditional-bail/
ಚಿಕ್ಕಬಳ್ಳಾಪುರ: ಶಿಡ್ಲಘಟ್ಟದ ಪೌರಾಯುಕ್ತೆ ಅಮೃತಾ ಗೌಡಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದಂತ ಘಟನೆ ಸಂಬಂಧ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬಂಧನದ ಬಳಿಕ ಜೈಲುಪಾಲಾಗಿದ್ದರು. ಅವರಿಗೆ ಇಂದು ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾಗೌಡ ಅವರಿಗೆ ಬ್ಯಾನರ್ ತೆರವಿನ ಸಂಬಂಧ ದೂರವಾಣಿ ಕರೆ ಮಾಡಿದ್ದಂತ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು, ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದರು. ಈ ಸಂಬಂಧ ಪೌರಾಯುಕ್ತೆ ಅವರ ವಿರುದ್ಧ ದೂರು ನೀಡಿದ್ದರು. ಈ ದೂರು ಆಧರಿಸಿ ಪೊಲೀಸರು ಕೇರಳದ ಗಡಿಯಲ್ಲಿ ರಾಜೀವ್ ಗೌಡ ಅವರನ್ನು ಬಂಧಿಸಿದ್ದರು. ಅವರಿಗೆ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಇಂದು ಅವರು ಜಾಮೀನು ಕೋರಿ ಸಲ್ಲಿಸಿದ್ದಂತ ಅರ್ಜಿಯನ್ನು ಶಿಡ್ಲಘಟ್ಟ ಜೆಎಂಎಫ್ ಸಿ ಕೋರ್ಟ್ ವಿಚಾರಣೆ ನಡೆಸಿತು. ರಾಜೀವ್ ಗೌಡ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. https://kannadanewsnow.com/kannada/injustice-without-funding-betrayal-of-kannadigas-by-bjp-government-at-the-centre-congress-kidi/ https://kannadanewsnow.com/kannada/ban-on-advertisements-promoting-tobacco-products-in-state-transport-buses-and-bus-stops/
ವಿಧಾನಸಭೆಯಲ್ಲಿ ಋತುಚಕ್ರ ರಜೆ, ಗಿಗ್ ಕಾರ್ಮಿಕರಿಗೆ ವಿಮೆ, ಸಂಚಾರಿ ಆರೋಗ್ಯ ಘಟಕದ ಸೇವೆ ಕುರಿತು ಶಾಸಕಿ ನಯನಾ ಪ್ರಶಂಸೆ
ಬೆಂಗಳೂರು : ಕಾರ್ಮಿಕ ಇಲಾಖೆಯ ಜಾರಿ ಮಾಡಿರುವ ಮೂರು ಮಹತ್ವದ ಯೋಜನೆಗಳಿಗೆ ವಿಧಾನಸಭೆಯ ಕಲಾಪದಲ್ಲಿ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಋತುಚಕ್ರ ರಜೆ ನೀತಿ, ಕರ್ನಾಟಕ ಪ್ಲಾಟ್ಫಾರಂ ಆಧಾರಿತ ಗಿಗ್ ಕಾರ್ಮಿಕರ ವಿಮಾ ಯೋಜನೆ ಹಾಗೂ ಸಂಚಾರಿ ಆರೋಗ್ಯ ಘಟಕಗಳ ಬಗ್ಗೆ ಕಲಾಪದ ವೇಳೆ ಮಾತನಾಡಿದ ಶಾಸಕಿ, ಕಾರ್ಮಿಕ ಇಲಾಖೆಯ ಕಾರ್ಯವೈಖರಿಗೆ ಧನ್ಯವಾದಗಳನ್ನು ತಿಳಿಸಿದರು. ಸರ್ಕಾರಿ ಹಾಗೂ ನೋಂದಾಯಿತ ಕೈಗಾರಿಕೆ ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ 18 ರಿಂದ 52 ವರ್ಷದ ಖಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಮಹಿಳಾ ಕಾರ್ಮಿಕರಿಗೆ ತಿಂಗಳಿಗೆ ಒಂದು ವೇತನ ಸಹಿತ ಋತುಚಕ್ರ ರಜೆ ನೀಡಲಾಗುತ್ತಿದೆ. ವರ್ಷದಲ್ಲಿ 12 ರಜೆಗಳನ್ನು ಸರ್ಕಾರ ನೀಡಿದೆ. ಇದೊಂದು ಐತಿಹಾಸಿಕ ನಿರ್ಣಯ ಎಂದ ಅವರು, ಇಂತಹ ಮಹತ್ವದ ರಜೆಯನ್ನು ಜಾರಿ ಮಾಡಿದ ಸರ್ಕಾರಕ್ಕೆ ಎಲ್ಲ ಮಹಿಳೆಯರ ಪರವಾಗಿ ಧನ್ಯವಾದಗಳು ಎಂದರು. ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ ಕಾರ್ಮಿಕ ಇಲಾಖೆ ಜಾರಿ ಮಾಡಿರುವ ಕರ್ನಾಟಕ ಪ್ಲಾಟ್ಫಾರಂ ಆಧಾರಿತ…
ಬೆಂಗಳೂರು: ಕೇಂದ್ರ ಸರ್ಕಾರವು ಅನುದಾನ ಕೊಡದೇ ಕನ್ನಡಿಗರಿಗೆ ದ್ರೋಹ ಮಾಡಿದೆ. ಕೇಂದ್ರ ಬಿಜೆಪಿ ಸರ್ಕಾರ ಕನ್ನಡಿಗರ ವಿರುದ್ಧ ಮತ್ಸರ ಕಾರುತ್ತಿರುವುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ? ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕಾಂಗ್ರೆಸ್ ಪಕ್ಷವು, 5ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೆರಿಗೆ ಪಾಲು ಕಡಿಮೆ ಮಾಡಿದ ಕಾರಣಕ್ಕೆ ಆಯೋಗವು 11,495 ಕೋಟಿ ರೂ.ನಷ್ಟು ಹೆಚ್ಚುವರಿ ಅನುದಾನ (5,495 ಕೋಟಿ ವಿಶೇಷ ಅನುದಾನ, ಬೆಂಗಳೂರು ಪೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ) ನೀಡಲು ಶಿಫಾರಸ್ಸು ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಇದನ್ನು ಕೊಡದೇ ದ್ರೋಹ ಬಗೆದಿದೆ ಎಂದು ಗುಡುಗಿದೆ. ಬಿಜೆಪಿಯ ಅನ್ಯಾಯ ಇಷ್ಟಕ್ಕೇ ನಿಲ್ಲಲಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಕರ್ನಾಟಕದ ಪಾಲು 50%ಗಿಂತ ಹೆಚ್ಚಾಗಿದೆ. ಕೇಂದ್ರದ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುದಾನ ನೀಡದ ಕಾರಣ ಕರ್ನಾಟಕಕ್ಕೆ 23,402 ಕೋಟಿ ಹೆಚ್ಚಿನ ಹೊರೆ ಬಿದ್ದಿದೆ ಎಂಬುದಾಗಿ ತಿಳಿಸಿದೆ. ಜಲಜೀವನ್ ಮಿಷನ್ ಯೋಜನೆಯಲ್ಲಿ 13 ಸಾವಿರ ಕೋಟಿ…
ಬೆಂಗಳೂರು: ಗಣರಾಜ್ಯೋತ್ಸವದ ಸಂಭ್ರಮಾಚರಣೆಯ ಭಾಗವಾಗಿ ಜಾವಾ, ಯೆಜ್ಡಿ ಹಾಗೂ ಬಿಎಸ್ಎ ಸವಾರರು ಬಾವುಟ ಹಾರಿಸುತ್ತಾ ದೇಶಾದ್ಯಂತ ರ್ಯಾಲಿ ನಡೆಸಿದರು. ಕ್ಲಾಸಿಕ್ ಲೆಜೆಂಡ್ಸ್, ತನ್ನ ವೆಬ್ಸೈಟ್ನಲ್ಲಿ ‘ನೋಮ್ಯಾಡ್ಸ್: ರೈಡ್ ಆಸ್ ಒನ್, ರೈಡ್ ದಿ ಲೆಗಸಿ’ ಎಂಬ ಶೀರ್ಷಿಕೆಯಡಿ ಗಣರಾಜ್ಯೋತ್ಸವವನ್ನು ಬೈಕ್ ರೈಡ್ ಮಾಡುವ ಮೂಲಕ ಆಚರಿಸಲು ಆಸಕ್ತ ಯುವಸಮುದಾಯವನ್ನು ಆಹ್ವಾನಿಸಿತ್ತು. ಅಂತೆಯೇ, ದೇಶಾದ್ಯಂತ 150 ಕ್ಕೂ ಹೆಚ್ಚು ವೃತ್ತಿಪರ ಸವಾರರು, ರೈಡರ್ ತಂಡಗಳು, ಸ್ವಯಂ ಸವಾರರು ಸೇರಿ ಸುಮಾರು 2,000 ಕ್ಕೂ ಹೆಚ್ಚು ಸವಾರರು ಈ ರೈಡ್ನಲ್ಲಿ ಭಾಗಿಯಾಗಿದ್ದರು. ಈ ಕುರಿತು ಮಾತನಾಡಿ ಕ್ಲಾಸಿಕ್ ಲೆಜೆಂಡ್ಸ್ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, ಕ್ಲಾಸಿಕ್ ಲೆಜೆಂಡ್ಸ್ ಪ್ರತಿ ಆಚರಣೆಯನ್ನು ಆಸಕ್ತ ರೈಡರ್ಗಳ ಜೊತೆಗೆ ರೈಡ್ಗಳನ್ನು ಆಹ್ವಾನಿಸುವ ಮೂಲಕ ಎಲ್ಲರನ್ನು ಒಟ್ಟುಗೂಡಿಸುತ್ತದೆ. ಅಂತೆಯೇ, ಈ ಗಣರಾಜ್ಯೋತ್ಸವದ ಪ್ರಯುಕ್ತದಂದು 2 ಸಾವಿರಕ್ಕೂ ಹೆಚ್ಚು ಸವಾರರು ನಮ್ಮ ಒಗ್ಗಟ್ಟನ್ನು ಪ್ರದರ್ಶಿಸಲು ನಮ್ಮೊಂದಿಗೆ ಸೇರಿದ್ದರು. ಈ ದಿನದಂದು ಜಾವಾ, ಯೆಜ್ಡಿ ಮತ್ತು ಬಿಎಸ್ಎಯ ವಾರ್ಷಿಕ ಸವಾರಿಗಳು ವಿಭಿನ್ನ ಸವಾರರನ್ನು ನಿಕಟ…
ನವದೆಹಲಿ: ಇಂಡಿಗೋ ಏರ್ ಹೋಸ್ಟೆಸ್ ಮತ್ತು ಪೈಲಟ್ ಪ್ರೇಮಕಥೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ನಂತರ ಇಂಟರ್ನೆಟ್ನ ಹೃದಯಗಳನ್ನು ಗೆದ್ದಿದ್ದಾರೆ. ಅವರ ಲವ್ ಸ್ಟೋರಿ ಏನು ಅಂತ ಮುಂದೆ ಓದಿ. ಇಂಡಿಗೋ ಕ್ಯಾಬಿನ್ ಸಿಬ್ಬಂದಿ ಸದಸ್ಯೆಯಾಗಿ ಕೆಲಸ ಮಾಡುತ್ತಿರುವ ಸುಶ್ಮಿತಾ ಸುಭಾಷ್, ಇಂಡಿಗೋ ಪೈಲಟ್ ಸುಭಮ್ ಸೋನಿಯೊಂದಿಗಿನ ತಮ್ಮ ಸಂಬಂಧದ ವಿಶೇಷ ಕ್ಷಣವನ್ನು ದಾಖಲಿಸುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ಕಿರು ಕ್ಲಿಪ್ನಲ್ಲಿ ಸುಭಮ್ ಒಂದು ಮೊಣಕಾಲಿನ ಮೇಲೆ ಕುಳಿತು ಸುಶ್ಮಿತಾಗೆ ಹೂವುಗಳನ್ನು ಅರ್ಪಿಸುವುದನ್ನು ಸೆರೆಹಿಡಿಯಲಾಗಿದೆ, ಇಬ್ಬರೂ ತಮ್ಮ ವಿಮಾನಯಾನ ಸಮವಸ್ತ್ರವನ್ನು ಧರಿಸಿರುತ್ತಾರೆ. ನಂತರ, ದಂಪತಿಗಳು ತಮ್ಮ ಸಂಗೀತ ಸಮಾರಂಭದಲ್ಲಿ ಒಟ್ಟಿಗೆ ನೃತ್ಯ ಮಾಡುತ್ತಾರೆ. ಅವರ ವಿವಾಹ ಆಚರಣೆಗಳ ಒಂದು ನೋಟವನ್ನು ನೀಡುತ್ತಾರೆ. ಪೈಲಟ್ ಆದ ನಂತರ ಸುಭಮ್ “ಬದಲಾಗುತ್ತಾರೆ” ಎಂದು ಸುಶ್ಮಿತಾಗೆ ಆಗಾಗ್ಗೆ ಹೇಳಲಾಗುತ್ತಿತ್ತು ಎಂದು ಪಠ್ಯ ಓವರ್ಲೇ ಸೂಚಿಸುತ್ತದೆ – ವೀಡಿಯೊ ಸೂಕ್ಷ್ಮವಾಗಿ ಪ್ರತಿವಾದಿಸುತ್ತದೆ, ದಂಪತಿಗಳು ಈಗ ಸಂತೋಷದಿಂದ ಮದುವೆಯಾಗಿದ್ದಾರೆ ಎಂದು ತೋರಿಸುತ್ತದೆ. ಜನರು ಪೈಲಟ್ನಂತೆ ಇದ್ದಾಗ ಬನ್ನೆ ಕೆ…
ವಿಜಯನಗರ: ಜಿಲ್ಲೆಯಲ್ಲಿ ಮಗನಿಂದಲೇ ತಂದೆ-ತಾಯಿ, ಸಹೋದರಿಯನ್ನು ಬರ್ಬರವಾಗಿ ಹತ್ಯೆಗೈದಿರುವಂತ ಭೀಕರ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಪುತ್ರ ಅಕ್ಷಯ್ ಎಂಬಾತನೇ ಈ ಕೃತ್ಯ ಎಸಗಿದಂತ ಆರೋಪಿಯಾಗಿದ್ದಾನೆ. ತನ್ನ ತಂದೆ-ತಾಯಿ, ಸಹೋದರಿಯನ್ನು ಕೊಲೆಗೈದಿರುವಂತ ಆರೋಪಿ, ಬೆಂಗಳೂರಿಗೆ ಪರಾರಿಯಾಗಿರುವಂತ ಶಂಕೆಯನ್ನು ಪೊಲೀಸರು ವ್ಯಕ್ತ ಪಡಿಸಿದ್ದಾರೆ. ಕೊಲೆ ಆರೋಪಿ ಅಕ್ಷಯ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆ ಮಾಡಿದ ಬಳಿಕ ಬೆಂಗಳೂರಿನ ತಿಲಕ್ ನಗರ ಠಾಣೆಗೆ ತೆರಳಿ ಅಸ್ಪಷ್ಟವಾಗಿ ಕೊಲೆಗೈದ ಮಾಹಿತಿಯನ್ನು ಪೊಲೀಸರ ಮುಂದೆ ನೀಡಿದ್ದಾನೆ ಎನ್ನಲಾಗಿದೆ. ಆ ಬಳಿಕ ನಾಪತ್ತೆಯಾಗಿದ್ದಾನೆ. https://kannadanewsnow.com/kannada/groom-stabbed-while-on-his-way-to-security/ https://kannadanewsnow.com/kannada/government-gives-green-signal-to-fill-2000-vacant-teaching-posts-in-government-colleges-in-the-state/
ಚಾಮರಾಜನಗರ: ಜಿಲ್ಲೆಯಲ್ಲಿ ಆರಕ್ಷತೆಗೆ ತೆರವ ವೇಳೆಯಲ್ಲಿ ವರನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದಂತ ಘಟನೆ ನಡೆದಿದೆ. ಗಾಯಗೊಂಡಿದ್ದಂತ ರವೀಶ್ ಎಂಬಾತನನ್ನು ಭೇಟಿಯಾಗಲು ಆಸ್ಪತ್ರೆಗೆ ವಧು ನಯನಾ ಭೇಟಿಯಾಗೋದಕ್ಕೆ ಹೋದಾಗ ಅವರ ಭೇಟಿಗೆ ನಿರಾಕರಿಸಿರುವಂತ ಘಟನೆ ನಡೆದಿದೆ. ಚಾಮರಾಗನಗರದ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಾಕು ಇರಿತಕ್ಕೆ ಒಳಗಾಗಿದ್ದಂತ ವರ ರವೀಶ್ ಚಿಕಿತ್ಸೆ ಪಡೆಯುತ್ತಿದ್ದರು. ಅವರನ್ನು ವಧು ನಯನಾ ಭೇಟಿಯಾಗೋದಕ್ಕೆ ತೆರಳಿದ್ದರು. ಆದರೇ ಆಕೆಯನ್ನು ಭೇಟಿಯಾಗೋದಕ್ಕೆ ರವೀಶ್ ನಿರಾಕರಿಸಿದ್ದಾರೆ. ಆದರೇ ನಯನಾ ಮಾತ್ರ ನನ್ನನ್ನೇ ಮದುವೆಯಾಗುವಂತೆ ಆತನನ್ನು ಬೇಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆಗೆ ರವೀಶ್ ಒಪ್ಪದ ಹಿನ್ನಲೆಯಲ್ಲಿ ವದು ನಯನಾ ವಾಪಾಸ್ ತೆರಳಿದ್ದಾರೆ. ಇನ್ನೂ ವರ ರವೀಶ್ ಅವರನ್ನು ಅಡ್ಡಗಟ್ಟಿ ಚಾಕು ಇರಿದಂತ ಆರೋಪಿಗಳ ಬಂಧನಕ್ಕಾಗಿ ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ. ಆರೋಪಿಗಳಿಗಾಗಿ ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಮತ್ತೊಂದೆಡೆ ಪೊಲೀಸರ ತನಿಖೆಯ ವೇಳೆಯಲ್ಲಿ ವಧುವಿನ ಪ್ರಿಯಕರನೇ ಆರತಕ್ಷತೆಗೆ ತೆರಳುತ್ತಿದ್ದಂತ ವರನ ಮೇಲೆ ದಾಳಿ ನಡೆಸಿ, ಚಾಕುವಿನಿಂದ ಇರಿದು ಕೃತ್ಯ ಎಸಗಿರೋದು ದೃಢಪಟ್ಟಿದೆ. ಸದ್ಯದಲ್ಲೇ…













