Subscribe to Updates
Get the latest creative news from FooBar about art, design and business.
Author: kannadanewsnow09
ಪಾಟ್ನಾ: ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ಮತ್ತು ರಾಘೋಪುರದಿಂದ ಹೊಸದಾಗಿ ಆಯ್ಕೆಯಾದ ಶಾಸಕ ತೇಜಸ್ವಿ ಯಾದವ್ ಅವರು ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. https://twitter.com/ANI/status/1990368342243508240 ರಾಘೋಪುರದ ಆರ್ಜೆಡಿ ಶಾಸಕ ತೇಜಸ್ವಿ ಯಾದವ್ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಹೀನಾಯ ಸೋಲು ಕಂಡಿತ್ತು. ಎನ್ ಡಿ ಎ ಭರ್ಜರಿ ಗೆಲುವು ಸಾಧಿಸಿ, ಸರ್ಕಾರ ರಚನೆಯ ತಯಾರಿಯಲ್ಲಿದೆ. https://kannadanewsnow.com/kannada/shivamogga-minority-relatives-should-provide-good-education-to-their-children-mla-gopalakrishna-belur/ https://kannadanewsnow.com/kannada/if-the-cabinet-is-expanded-d-k-shivakumar-will-be-punished-opposition-leader-r-ashoka/
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಇಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗುತ್ತಿರುವುದೇಕೆ? ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ನಲ್ಲಿ ಮುಖ್ಯಮಂತ್ರಿ ಬದಲಾಗಲಿದ್ದಾರೆ ಎಂದು ನಾನು ಪದೇ ಪದೆ ಹೇಳಿದ್ದೆ. ಆದರೂ ಆ ರೀತಿ ಇಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈಗ ಡಿ.ಕೆ.ಶಿವಕುಮಾರ್ ಸೋದರರು ದೆಹಲಿಗೆ ಹೋಗಿ ಕುಳಿತಿದ್ದಾರೆ. ಸಿಎಂ ಬದಲಾವಣೆ ಇಲ್ಲವೆಂದ ಮೇಲೆ ಎಲ್ಲರೂ ಮಲ್ಲಿಕಾರ್ಜುನ ಖರ್ಗೆಯವನ್ನು ಏಕೆ ಭೇಟಿಯಾಗುತ್ತಿದ್ದಾರೆ? ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ, ವನ್ಯಜೀವಿ-ಮಾನವ ಸಂಘರ್ಷ ಜೋರಾಗಿದೆ, ಮಳೆ ಹಾನಿ ಪರಿಹಾರ ನೀಡಿಲ್ಲ. ಹೀಗೆ ಅನೇಕ ಸಮಸ್ಯೆಗಳಿದ್ದರೂ ಸಿಎಂ ಕುರ್ಚಿಗಾಗಿ ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯುತ್ತಿದೆ. ಸಚಿವ ಸಂಪುಟ ವಿಸ್ತರಣೆಯಾದರೆ ಡಿ.ಕೆ.ಶಿವಕುಮಾರ್ಗೆ ಪಂಗನಾಮ ಸಿಗಲಿದೆ. ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿದ್ದು ವ್ಯರ್ಥವಾಗಲಿದೆ ಎಂದರು. ಚೆನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವಿನ ಬಗ್ಗೆ ಅರಣ್ಯ ಸಚಿವರು ಉತ್ತರ ನೀಡಬೇಕಿದೆ. ಇದು ಆಘಾತಕಾರಿ ಸಂಗತಿಯಾಗಿದ್ದು, ಈ ಬಗ್ಗೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿದೆ. ಬೆಳಗಾವಿ ಅಧಿವೇಶನದಲ್ಲಿ…
ಶಿವಮೊಗ್ಗ : ಅಲ್ಪಸಂಖ್ಯಾತ ಬಾಂಧವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮಕ್ಕಳು ಇಂಜಿನಿಯರ್, ವೈದ್ಯರು ಅಗಿ ಸಮಾಜದ ಉನ್ನತ ಸ್ಥಾನಕ್ಕೆ ತಲುಪುವ ವಾತಾವರಣ ಸೃಷ್ಟಿಸಿ ಎಂದು ಸಾಗರ ಶಾಸಕ ಹಾಗೂ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಂಬುದಾಗಿ ಕರೆ ನೀಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಗ್ರೀನ್ ಎಂಬೆಸ್ಸಿ ಕಟ್ಟಡದಲ್ಲಿ ಸೋಮವಾರ ಅಂಜುಮನ್ ಎ ಸಾಗರ ಸಂಸ್ಥೆ ವತಿಯಿಂದ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಸರ್ಕಾರ ಅನುದಾನ ಕೊಡುವುದು ಸ್ವಲ್ಪ ವಿಳಂಬವಾಗಬಹುದು. ಆದರೆ ನಿಮ್ಮ ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಇಂತಹ ತರಬೇತಿ ಸಂಸ್ಥೆಗಳಿಗೆ ಸಹಕಾರ ನೀಡಿದರೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿ ಸಂಸ್ಥೆಗಳು ಶೇ.100ರಷ್ಟು ಫಲಿತಾಂಶ ಪಡೆಯುತ್ತಿರುವುದು ಗಮನಾರ್ಹ ಸಂಗತಿ ಎಂದರು. ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ಮೊಟಕುಗೊಳಿಸಬೇಡಿ. ನಾನು ಜಾತಿಮತ ಪಂಥ ನೋಡಿ ರಾಜಕೀಯ ಮಾಡುವವನಲ್ಲ. ನನ್ನದು ಮಾನವ ಧರ್ಮಕ್ಕೆ ಆದ್ಯತೆ. ನಿಮ್ಮ ಸಂಸ್ಥೆಗೆ, ಶೈಕ್ಷಣಿಕ ಅಭಿವೃದ್ದಿಗೆ ಬೇಕಾದ ಅಗತ್ಯ ಸಹಕಾರ…
ನವದೆಹಲಿ: ಖಗೋಳ ಛಾಯಾಗ್ರಾಹಕ ಆಂಡ್ರ್ಯೂ ಮೆಕಾರ್ಥಿ ಅವರು ಸೂರ್ಯನನ್ನು ಮೀರಿ ಸ್ಕೈಡೈವರ್ ಬೀಳುತ್ತಿರುವಂತೆ ಕಾಣುವ ಕಾಸ್ಮಿಕ್ ಭ್ರಮೆಯನ್ನು ಚಿತ್ರಿಸಿದ್ದಾರೆ. ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರವನ್ನು ಹೋಲುವ ಈ ಅತಿವಾಸ್ತವಿಕ ದೃಶ್ಯವನ್ನು ಅರಿಜೋನಾ ಮೂಲದ ಛಾಯಾಗ್ರಾಹಕ ಸೆರೆಹಿಡಿದಿದ್ದಾರೆ. ಅವರು ತಮ್ಮ ನಾಟಕೀಯ ಸೌರ ಚಿತ್ರಣಕ್ಕೆ ಹೆಸರುವಾಸಿಯಾಗಿದ್ದಾರೆ. ನವೆಂಬರ್ 8 ರ ಶನಿವಾರ, ಬೆಳಿಗ್ಗೆ 9 ಗಂಟೆಗೆ MST (ಬೆಳಿಗ್ಗೆ 11 ಗಂಟೆಗೆ EST), ಮೆಕಾರ್ಥಿ ಬೀಳುವ ಸ್ಕೈಡೈವರ್ ಅನ್ನು ಸೂರ್ಯನ ಉರಿಯುತ್ತಿರುವ ಡಿಸ್ಕ್ ವಿರುದ್ಧ ಸಂಪೂರ್ಣವಾಗಿ ಫ್ರೇಮ್ ಮಾಡುವಲ್ಲಿ ಯಶಸ್ವಿಯಾದರು. ನಂತರ ಅವರು ಬಹಿರಂಗಪಡಿಸಿದರು – ಅವರು “ದಿ ಫಾಲ್ ಆಫ್ ಇಕಾರ್ಸ್” ಎಂದು ಸೂಕ್ತವಾಗಿ ಹೆಸರಿಸಿದ ಈ ಶಾಟ್ “ಸಂಪೂರ್ಣವಾಗಿ ಅಸಂಬದ್ಧ” ಪ್ರಮಾಣದ ಯೋಜನೆಯನ್ನು ಬಯಸುತ್ತದೆ ಮತ್ತು ಅವರ ಮಾತಿನಲ್ಲಿ ಹೇಳುವುದಾದರೆ, “ಈ ರೀತಿಯ ಮೊದಲ ಫೋಟೋ ಆಗಿರಬಹುದು”. ಫ್ರೇಮ್ನಲ್ಲಿರುವ ಸ್ಕೈಡೈವರ್ ಯೂಟ್ಯೂಬರ್ ಮತ್ತು ಸಂಗೀತಗಾರ ಗೇಬ್ರಿಯಲ್ ಸಿ. ಬ್ರೌನ್, ಅವರು ಸುಮಾರು 3,500 ಅಡಿ (1,070 ಮೀಟರ್) ಎತ್ತರದಲ್ಲಿ ಸಣ್ಣ ಪ್ರೊಪೆಲ್ಲರ್…
ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ಹಿತರಕ್ಷಣಾ ಸಮಿತಿ ಭರ್ಜರಿ ತಯಾರಿ: 33 ಅಭ್ಯರ್ಥಿಗಳು ಕಣಕ್ಕೆ
ಶಿವಮೊಗ್ಗ : ಜಿಲ್ಲೆಯ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣೆಗೆ ನಮ್ಮ ಮಾರಿಕಾಂಬ ಹಿತರಕ್ಷಣಾ ಸಮಿತಿಯಿಂದ ಒಟ್ಟು 33 ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ ಎಂದು ಸಮಿತಿ ಸಂಚಾಲಕ ಎಂ.ಡಿ.ಆನoದ್ ತಿಳಿಸಿದ್ದಾರೆ. ಈ ಮೂಲಕ ಸಾಗರದ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ಕಣಕ್ಕೆ ಹಿತರಕ್ಷಣಾ ಸಮಿತಿ ಧುಮುಕೋದನ್ನು ಖಚಿತ ಪಡಿಸಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪಾರದರ್ಶಕ ಹಾಗೂ ದೇವಸ್ಥಾನವನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲು ಆಸಕ್ತಿ ಇರುವ ನಮ್ಮ ತಂಡಕ್ಕೆ ಮತದಾರರು ಬೆಂಬಲ ನೀಡಬೇಕು. ಹಾಲಿ ಸಮಿತಿ 13 ವರ್ಷಗಳಿಂದ ಅನಧಿಕೃತವಾಗಿ ಆಡಳಿತ ನಡೆಸಿಕೊಂಡು ಬರುತ್ತಿದೆ. ಲೆಕ್ಕಪತ್ರವನ್ನು ಪಾರದರ್ಶಕವಾಗಿ ಇರಿಸಿರಲಿಲ್ಲ. ಇದೀಗ ಮತ್ತೆ ಚುನಾವಣೆ ನಿಲ್ಲಲು ಹಾಲಿ ಅಧ್ಯಕ್ಷ ನಾಗೇಂದ್ರ ಕೆ.ಎನ್. ಮತದಾರರಿಗೆ ಫೋನ್ ಮೂಲಕ ಬೆಂಬಲ ಯಾಚನೆ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು. 13 ವರ್ಷ ಆಡಳಿತ ನಡೆಸಿ, ನಾಲ್ಕು ಜಾತ್ರೆ ಮಾಡಿದರೂ ಮತ್ತೆ ನಾಗೇಂದ್ರ ಮತ್ತವರ ತಂಡ…
ತುಮಕೂರು: ಮಧುಗಿರಿಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥದ ಶಂಕು ಸ್ಥಾಪನೆಯನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ನೆರವೇರಿಸಿದರು. ಈ ಬಳಿಕ ಮಾತನಾಡಿದ ಅವರು, ದೇಶದಲ್ಲಿಯೇ ಅತೀ ಹೆಚ್ಚು ಸ್ವಯಂ ಚಾಲಿತ ಚಾಲನಾ ಪಥವನ್ನು ಹೊಂದಿರುವ ರಾಜ್ಯವೆಂಬ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ನಮ್ಮ ರಾಜ್ಯದಲ್ಲಿ ಈಗಾಗಲೇ 7 ಟ್ರ್ಯಾಕ್ ಚಾಲನೆಯಲ್ಲಿವೆ. ಈ ವರ್ಷ 10 ಟ್ರ್ಯಾಕ್ ಪ್ರಾರಂಭವಾಗಿದೆ. 28 ಟ್ರ್ಯಾಕ್ ಗಳ ಕಾರ್ಯ ಮುಗಿಯುವ ಹಂತದಲ್ಲಿದೆ. ಒಟ್ಟು 45 ಟ್ರ್ಯಾಕ್ ಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದರು. ಮಧುಗಿರಿಯಲ್ಲಿ 3.14 ಎಕರೆ ವಿಸ್ತೀರ್ಣ ದಲ್ಲಿ ರೂ.11.50 ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಮತ್ತು ಸಾರಿಗೆ ಅಧಿಕಾರಿಗಳ ಕಛೇರಿ ಕಟ್ಟಡದ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಸಾರಿಗೆ ಬಸ್ ನಿಲ್ದಾಣ ನವೀಕರಣಕ್ಕೆ ಆದ್ಯತೆ ಹಾಗೂ ತಾಲ್ಲೂಕಿಗೆ ಮತ್ತಷ್ಟು ಬಸ್ ವ್ಯವಸ್ಥೆ ಮಾಡಲಾಗುವುದು ಎಂದು…
ಬೆಂಗಳೂರು: ಡಿಸೇಲ್ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ನಡೆದಂತ ಭೀಕರ ಅಪಘಾತದಲ್ಲಿ ಸೌದಿ ಅರೇಬಿಯಾದಲ್ಲಿ ಕನ್ನಡಿಗ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಡೀಸೆಲ್ ಟ್ಯಾಂಕರ್ ಹಾಗೂ ಬಸ್ಸಿನ ನಡುವೆ ಸೌದಿ ಅರೇಬಿಯಾದಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಧಗಧಗಿಸಿ ಹೊತ್ತಿ ಬಸ್ ಉರಿದಿತ್ತು. ಈ ಅಪಘಾತದಲ್ಲಿ 45 ಭಾರತೀಯರು ಸಜೀವ ದಹನವಾಗಿದ್ದರು. ಡೀಸೆಲ್ ಟ್ಯಾಂಕರ್, ಬಸ್ ನಡುವಿನ ಭೀಕರ ಅಪಘಾತದಲ್ಲಿ ಕರ್ನಾಟಕ ಮೂಲದ ವ್ಯಕ್ತಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಪಾಸ್ ಪೋರ್ಟ್ ನಲ್ಲಿ ಕರ್ನಾಟಕದ ಹುಬ್ಬಳ್ಳಿಯ ವಿಳಾಸವಿರುವುದಾಗಿ ಹೇಳಲಾಗುತ್ತಿದೆ. ಸೌದಿ ಅರೇಬಿಯಾ ಅಪಘಾತದಲ್ಲಿ ಹುಬ್ಬಳ್ಳಿ ಮೂಲದ ವ್ಯಕ್ತಿ ಸಾವನ್ನಪ್ಪಿರಬಹುದು ಎನ್ನಲಾಗುತ್ತಿದೆ. ವ್ಯಕ್ತಿಯ ಮೂಲ ಪತ್ತೆಗೆ ಹೈದರಾಬಾದ್ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. https://kannadanewsnow.com/kannada/power-outages-in-these-areas-of-sagar-nagar-tomorrow-due-to-road-widening-work/ https://kannadanewsnow.com/kannada/high-court-quashes-deportation-order-against-mahesh-shetty-timarodi/
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್ ಎನ್ನುವಂತೆ ಹೈಕೋರ್ಟ್, ಅವರ ವಿರುದ್ಧ ವಿಧಿಸಲಾಗಿದ್ದಂತ ಗಡಿಪಾರು ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ. ಧರ್ಮಸ್ಥಳ ಗ್ರಾಮದಲ್ಲಿನ ಬುರುಡೆ ಕೇಸ್ ಹಾಗೂ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹದ ಪ್ರಕರಣದಲ್ಲಿ ಆರೋಪಿ ಮಹೇಶ್ ಶೆಟ್ಟಿ ತಿಮರೋಡಿಗೆ ವಿಧಿಸಿದ್ದಂತ ಗಡಿಪಾರು ಶಿಕ್ಷೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದ್ ಅವರಿದ್ದಂತ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ಅಲ್ಲದೇ ಪುತ್ತೂರು ಉಪ ವಿಭಾಗಾಧಿಕಾರಿಗೆ ಸೂಕ್ತ ಕಾರಣ, ಸೆಕ್ಷನ್ ಗಳೊಂದಿಗೆ ಆದೇಶ ಹೊರಡಿಸಲು ಹೈಕೋರ್ಟ್ ಸೂಚಿಸಿದೆ. https://kannadanewsnow.com/kannada/power-outages-in-these-areas-of-sagar-nagar-tomorrow-due-to-road-widening-work/ https://kannadanewsnow.com/kannada/rare-pre-hospital-kidney-transplant-performed-by-doctors-at-sparsh-hospital-in-bengaluru-14-year-old-yemeni-boy-revived/
ಬೆಂಗಳೂರು : ತೀವ್ರ ಆಯಾಸ, ಕುಂಠಿತ ಬೆಳವಣಿಗೆ ಮತ್ತು ಪುನರಾವರ್ತಿತ ಮೂತ್ರದ ಸೋಂಕಿನ ಲಕ್ಷಣಗಳನ್ನು ಹೊಂದಿದ್ದ ಯೆಮೆನ್ನ 14 ವರ್ಷದ ಬಾಲಕನೊಬ್ಬನಿಗೆ ಅತ್ಯಂತ ಸಂಕೀರ್ಣವಾಗಿದ್ದ ಆರೋಗ್ಯ ಸ್ಥಿತಿ ನಡುವೆಯೂ ಸ್ಪರ್ಶ್ ಯಶವಂತಪುರ ಆಸ್ಪತ್ರೆ ವೈದ್ಯರು ಯಶಸ್ವಿ ಕಿಡ್ನಿ ಕಸಿ ಮಾಡುವ ಮೂಲಕ ಆತನಿಗೆ ಮರು ಜೀವ ಮತ್ತು ಜೀವನವನ್ನು ನೀಡಿದ್ದಾರೆ. ಬಾಲಕನ ಪರಿಸ್ಥಿತಿಯನ್ನು ಕಂಡು ತೀವ್ರ ಆತಂಕಗೊಳಗಾಗಿದ್ದ ಯೆಮೆನ್ ದೇಶದ ಪೋಷಕರು ಕುಟುಂಬದ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಸ್ಪರ್ಶ್ ಯಶವಂತಪುರ ಆಸ್ಪತ್ರೆಯನ್ನು ಸಂಪರ್ಕಿಸಿದ್ದರು. ವೈದ್ಯಕೀಯ ತನಿಖೆಗಳು ಗಂಭೀರವಾದ ಮೂತ್ರ ಕೋಶ ಸಮಸ್ಯೆ ಇರುವುದನ್ನು ದೃಢಪಡಿಸಿದವು – ವೆಸಿಕೌರೆಟೆರಲ್ ರಿಫ್ಲಕ್ಸ್ (VUR), ಮೂತ್ರವು ಮೂತ್ರಕೋಶದಿಂದ ಮೂತ್ರಪಿಂಡಗಳಿಗೆ ಹಿಮ್ಮುಖವಾಗಿ ಹರಿಯುವ ಸ್ಥಿತಿ, ಇದಾಗಿದ್ದು ಸುಧಾರಿಸಲಾಗದ ಮೂತ್ರಪಿಂಡದ ಹಾನಿಗೆ ಕಾರಣವಾಗುತ್ತದೆ. ಸ್ಪರ್ಶ್ ಆಸ್ಪತ್ರೆಗೆ ಬಾಲಕನನ್ನು ಚಿಕಿತ್ಸೆಗೆಂದು ಕರೆ ತಂದ ಸಂದರ್ಭದಲ್ಲಿ ಆತನ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರವಾಗಿತ್ತು. ವೈದ್ಯರಿಗೆ ಈತನಿಗೆ ಚಿಕಿತ್ಸೆ ನೀಡುವುದೇ ಬಹುದೊಡ್ಡ ಸವಾಲಾಗಿತ್ತು. ಮೂತ್ರ ಪಿಂಡ ಕಸಿ ಹೊರತಾಗಿ ಅನ್ಯ ಮಾರ್ಗಗಳಿರಲಿಲ್ಲ. ಇಂಗ್ಲಿಷ್ ಭಾಷೆಯನ್ನೂ…
ಶಿವಮೊಗ್ಗ: ಸಾಗರದ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಸಾಗರ ತಾಲ್ಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ದಿನಾಂಕ 18-11-2025ರ ಮಂಗಳವಾರದಂದು ಸಾಗರದ ಬಿಹೆಚ್ ರಸ್ತೆ ಅಗಲೀಕರಣ ಕಾಮಗಾರಿಯ ಹಿನ್ನಲೆಯಲ್ಲಿ ವಿದ್ಯುತ್ ಕಂಬ ಸ್ಥಳಾಂತರಿಸುವಂತ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ರಸ್ತೆ ಅಗಲೀಕರಣ ಕಾಮಗಾರಿಯ ಕಾರಣ ವಿದ್ಯುತ್ ಕಂಬ ಸ್ಥಳಾಂತರದಿಂದಾಗಿ ನಾಳೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿನೋಬನಗರ, ಮಂಕಳೆ, ನೆಹರುನಗರ, ಅರಳೀಕೊಪ್ಪ, ಜನ್ನತ್ ಗಲ್ಲಿ, ಸಿಗಂದೂರು ಮಾರ್ಕೆಟ್ ರಸ್ತೆ, ಜೋಸೆಫ್ ನಗರ, ಬಿಹೆಚ್ ರಸ್ತೆಗಳಲ್ಲಿ ಕರೆಂಟ್ ಇರೋದಿಲ್ಲ ಎಂದಿದೆ. ಇದಲ್ಲದೇ ಅಶೋಕ ರಸ್ತೆ, ಕೃಷ್ಣ ಗ್ಯಾರೇಜ್, ಎಲ್ಐಸಿ ಆಫೀಸ್ ಹತ್ತಿರ, ಸೊರಬ ಮಾರ್ಕೆಟ್ ರಸ್ತೆ, ತಿಲಕ್ ರಸ್ತೆ, ಶ್ರೀ ಟಾಕೀಸ್ ರೋಡ್, ಜೆಸಿ ರಸ್ತೆ, ಗಾಂಧಿನಗರ, ವಿಜಯನಗರ, ಬಿಕೆ ರಸ್ತೆ, ರಾಮನಗರ, ಹೆಗಡೆ ಫಾರಂ, ಎಸ್ ಎನ್…














