Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ 24 x 7 ಕುಡಿಯುವ ನೀರು ಸರಬರಾಜು ಯೋಜನೆಯು ಅತ್ಯಂತ ಯಶಸ್ವಿಯಾಗಿದ್ದು, ಅರ್ಥ್ ವಾಟರ್ ಫೌಂಡೇಷನ್ ರವರ ವತಿಯಿಂದ ಆಯೋಜಿಸಲಾದ 2026 ರ ರಾಷ್ಟ್ರ ಮಟ್ಟದಲ್ಲಿ ನಡೆದ ಜಾಗತಿಕ ಸುಸ್ಥಿರತೆ ಮತ್ತು ನಾವೀನ್ಯತೆ ಪ್ರಶಸ್ತಿಯಡಿ “ಎಕ್ಸಲೆನ್ಸ್ ಇನ್ ಸಸ್ಟೆೈನಬಲ್ ಅರ್ಬನ್ ಡ್ರಿಂಕಿAಗ್ ವಾಟರ್” ನಲ್ಲಿ ಪಾಲ್ಗೊಂಡಿದ್ದು, ಮೊದಲನೇ ಸ್ಥಾನ ಪಡೆದುಕೊಂಡಿದೆ ಎಂದು ಕನನೀಸ ಮತ್ತು ಒ.ಚ ಮಂಡಳಿ ವಿಭಾದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ. ಈ ಯೋಜನೆಯ ವಿವರಗಳನ್ನು ಮಾರ್ಚ್ 2024 ರಲ್ಲಿ ಬಿಡುಗಡೆಯಾದ ‘ಡ್ರಿಂಕ್ ಫ್ರಮ್ ಟ್ಯಾಪ್ ಸಿಪಿಹೆಚ್ಇಇಒ’ ಕೈಪಿಡಿಯಲ್ಲಿ ಕೇಸ್ ಸ್ಟಡಿಯಾಗಿ ಸಹ ಸೇರಿಸಲಾಗಿದೆ. 24×7 ನೀರು ಸರಬರಾಜು ಯೋಜನೆಯ ಅನುಷ್ಠಾನಕ್ಕೂ ಮೊದಲು ವಿತರಣಾ ವ್ಯವಸ್ಥೆಯು ಸುಮಾರು 1970 ರ ದಶಕಗಳಿಂದ ಹಂತ ಹಂತವಾಗಿ ಅಳವಡಿಸಲಾದ (ಕ್ಯಾಸ್ಟ್ ಐರನ್) ಮತ್ತು ಪಿವಿಸಿ ಪೈಪ್ಲೈನ್ಗಳನ್ನು ಒಳಗೊಂಡಿದೆ. ದಶಕಗಳ ಕಾಲದ ಬಳಕೆ ಮತ್ತು ಪೈಪ್ಲೈನ್ಗಳಲ್ಲಿ ಕಂಡುಬರುತ್ತಿರುವ ವಿಪರೀತ ಸೋರಿಕೆಯಿಂದಾಗಿ, ಒಟ್ಟಾರೆ ವಿತರಣಾ ಜಾಲದ ಕಾರ್ಯದಕ್ಷತೆಯು ಕ್ಷೀಣಿಸಿತ್ತು. ಇದಲ್ಲದೆ,…
ಬೆಂಗಳೂರು: 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕನ್ನು ಸಾವಯವ ತಾಲೂಕು ಆಗಿ ಘೋಷಿಸಿರುವುದಕ್ಕೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು. 2025-26ರ ಬಜೆಟ್ ಕುರಿತು ಸದನದಲ್ಲಿ ಮಾತನಾಡಿದ ಅವರು, ಹಣವನ್ನು ಯಾವ ಇಲಾಖೆಗೆ ನಿಗದಿಪಡಿಸುವುದು ಮುಖ್ಯವಲ್ಲ, ರಾಜ್ಯದ ಪ್ರತಿಯೊಬ್ಬ ಪ್ರಜೆಗೆ ಏನನ್ನು ಕೊಡುತ್ತೇವೆ ಎಂಬುದನ್ನು ಚರ್ಚಿಸಬೇಕಾಗುತ್ತದೆ. ಅದರ ಕುರಿತು ನಾವು ಆಲೋಚಿಸಬೇಕಾಗುತ್ತದೆ ಎಂದರು. ಆರೋಗ್ಯ ಇಲಾಖೆಯಲ್ಲಿ ಆಸ್ಪತ್ರೆಗಳಿಗೆ ಅತಿಹೆಚ್ಚಿನ ಮೊತ್ತವನ್ನು ನಿಯೋಜನೆ ಮಾಡಲಾಗಿದೆ. ಆದರೆ ಅಲ್ಲಿ ರೆವೆನ್ಯೂ ಹೆಲ್ತ್ ಎಕ್ಸ್ಪೆಂಡಿಚರ್; ಔಷಧಿ, ಚಿಕಿತ್ಸೆ ಮತ್ತು ನಿರ್ವಹಣೆಗೆ ಹಣವನ್ನು 6.3% ಕಡಿಮೆ ಮಾಡಿದ್ದೇವೆ. ಇದನ್ನು ಕಳೆದ ವರ್ಷದಷ್ಟಾದರೂ ಇಡಬೇಕು ಎಂದು ನಾನು ನಿಮ್ಮ ಮೂಲಕ ಆಗ್ರಹ ಮಾಡುತ್ತೇನೆ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದರು. ಆಸ್ಪತ್ರೆ ಕಟ್ಟುವುದು ಹೆಚ್ಚುಗಾರಿಕೆಯಲ್ಲ, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ನೇಮಕ ಮಾಡಬೇಕು. ವೈದ್ಯರು, ನರ್ಸ್, ಗ್ರೂಪ್ ಡಿ ಸೇರಿದಂತೆ ಸುಮಾರು 38 ಸಾವಿರ ವಿವಿಧ ಹುದ್ದೆಗಳು ಆರೋಗ್ಯ…
ಶಿವಮೊಗ್ಗ : ಜಿಲ್ಲೆಯ ಗಾಜನೂರು ಡಾ. ಕಾರುಣ್ಯ ಜೆ.ಜೆ. ಇವರು ಬೆಂಗಳೂರು ಅಮೆಜಾನ್ ಸೆಲ್ಲರ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಹರಿಯಾಣ ಗುರಂಗಾವ್ ಕ್ಲಿಕ್ಟೆಕ್ ರೀಟೈಲ್ ಪ್ರೈವೇಟ್ ಲಿಮಿಟೆಡ್ ಇವರ ಮೇಲೆ ಗುಣಮಟ್ಟ ಸರಿಯಿಲ್ಲದ ಲಿಟ್ಮ್ಯಾನ್ ಸ್ಟೆತೋಸ್ಕೋಪ್ ನೀಡಿದ್ದು, ಸೇವಾನ್ಯೂನ್ಯತೆ ಎಸಗಿರುತ್ತಾರೆ ಎಂದು ವಕೀಲ ಮೂಲಕ ನೀಡಿದ್ದ ದೂರನ್ನು ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಂದ ದೂರುದಾರರಿಗೆ ಸೂಕ್ತ ಪರಿಹಾರ ನೀಡುವಂತೆ ತೀರ್ಪು ನೀಡಿದೆ. ದೂರುದಾರರು 2023ರ ನವೆಂಬರ್ನಲ್ಲಿ ಅಮೆಜಾನ್ ಸೆಲ್ಲರ್ನಿಂದ ಲಿಟ್ಮ್ಯಾನ್ ಸ್ಟೆತೋಸ್ಕೋಪ್ ಆನ್ಲೈನ್ ಮೂಲಕ ರೂ. 10,024/-ಗಳನ್ನು ಪಾವತಿಸಿ ಬುಕ್ ತರಿಸಿದ್ದು, ಇದರ ಗುಣಮಟ್ಟ ಸರಿಯಿಲ್ಲದ್ದರಿಂದ ವಾಪಾಸ್ಸು ಮಾಡಿರುತ್ತಾರೆ. ಆದರೆ 3 ರಿಂದ 10 ದಿನಗಳೊಳಗಾಗಿ ಹಣ ವಾಪಸ್ಸು ಮಾಡಲಾಗುವುದೆಂದು ತಿಳಿಸಿದ್ದರೂ, ಹಣ ವಾಪಸ್ಸು ಮಾಡದಿದ್ದರಿಂದ ಲೀಗಸ್ ನೋಟೀಸ್ಗೂ ಎದುರುದಾರರು ಯಾವುದೇ ಪ್ರತ್ಯುತ್ತರ ನೀಡದೆ ಸೇವಾನ್ಯೂನತೆ ಎಸಗಿರುತ್ತಾರೆ ಎಂದು ಆಯೋಗಕ್ಕೆ ದೂರನ್ನು ಸಲ್ಲಿಸಿರುತ್ತಾರೆ. ಆಯೋಗವು ದೂರನ್ನು ದಾಖಲಿಸಿಕೊಂಡು ಎರಡೂ ಎದುರುದಾರರಿಗೆ ನೋಟೀಸ್ ನೀಡಿದ್ದು, ಎದುರುದಾರರು ಆಯೋಗಕ್ಕೆ…
ಬೆಂಗಳೂರು/ಮಂಗಳೂರು : ದಿನಗೂಲಿ ನೌಕರರನ್ನು ಕಾಯಂಗೊಳಿಸುವ ಸಂಬಂಧ ಹೈಕೋರ್ಟ್ ಮಹತ್ವದ ತೀರ್ಪುಗಳನ್ನು ಪ್ರಕಟಿಸಿದೆ. 1986ರಲ್ಲಿ ಸಾಂವಿಧಾನಾತ್ಮಕ ಹುದ್ದೆಗೆ ನೇಮಕವಾಗಿರುವ ನೌಕರರ ಪೈಕಿ ದಕ್ಷಿಣಕನ್ನಡ ಜಿಲ್ಲೆಯ ನಾಲ್ವರು ಮಹಿಳೆಯರ ಸೇವೆಯನ್ನು ಖಾಯಂಗೊಳಿಸಬೇಕೆಂದು ಹೈಕೋರ್ಟ್ ಪ್ರತ್ಯೇಕ ತೀರ್ಪುಗಳನ್ನು ಪ್ರಕಟಿಸಿದೆ. ಈ ಎಲ್ಲಾ ನೌಕರರು ಈಗ ನಿವೃತ್ತಿಯಲ್ಲಿದ್ದು, ನಿವೃತ್ತರಾಗಿ ಹಲವು ವರ್ಷಗಳ ನಂತರ ಈ ತೀರ್ಪುಗಳು ಬಂದಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಡಕಚೇರಿ ಆರಂಭ ಸಂದರ್ಭದಲ್ಲಿ (1986ರಲ್ಲಿ) ಈ ನೇಮಕಾತಿ ನಡೆದಿತ್ತು. ಆದರೆ, ಅವರ ಖಾಯಮಾತಿಗೆ ಜಿಲ್ಲಾಡಳಿತ ನಿರಾಕರಿಸಿತ್ತು. ಉಮಾದೇವಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಇವರಿಗೂ ಅನ್ವಯವಾಗುತ್ತದೆ. ಆದರೂ, ಕಂದಾಯ ಇಲಾಖೆಯಲ್ಲಿನ ಕ್ಲರಿಕಲ್ ಲೋಪದಿಂದಾಗಿ ಈ ನೌಕರರ ಹೆಸರುಗಳು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿದೇಯಕ ಪಟ್ಟಿಗೆ ಸೇರ್ಪಡೆಯಾಗಿದ್ದವು. ಈ ವಿದೇಯಕ ಪಟ್ಟಿಯಲ್ಲಿರುವವರ ಹುದ್ದೆ ಖಾಯಮಾತಿಗೆ ಅರ್ಹವಲ್ಲ ಎಂದು ನೆಪವೊಡ್ಡಿ ಸರ್ಕಾರವು ಈ ನೌಕರರ ಖಾಯಮಾತಿಗೆ ನಿರಾಕರಿಸುತ್ತಾ ಬಂದಿದೆ. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ನೌಕರರು ಪ್ರತ್ಯೇಕವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪೈಕಿ ಸುಮತಿ ಬಾಯಿ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಭಾಗದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ 110 ಕೆವಿ ವಿದ್ಯುತ್ ಗ್ರಿಡ್ ನಿರ್ಮಾಣ ಕಾಮಗಾರಿಗೆ ಪದೇ ಪದೇ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೋಮಶೇಖರ್ ಲಾವಿಗೆರೆ ನೇತೃತ್ವದಲ್ಲಿ ಮೂರು ಪಂಚಾಯತಿಗಳ ರೈತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿಯಿಂದ ಗ್ರಿಡ್ ಬಳಿಯವರೆಗೆ ಬೈಕ್ ಜಾಥಾ ನಡೆಸಿದರು. ಸಾಗರ ಉಪವಿಭಾಗದ ಎಸಿ (AC) ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದಂತ ಅವರು, ಸಾಗರ ತಾಲೂಕಿನ ತ್ಯಾಗರ್ತಿ ಸುತ್ತಮುತ್ತಲಿನ ಮೂರು ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಕೈಗೆತ್ತಿಕೊಂಡಿರುವ 110 ಕೆವಿ ಗ್ರಿಡ್ ಕಾಮಗಾರಿಗೆ ಸತತವಾಗಿ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಯು ಈ ಭಾಗದ ರೈತರ ಪಾಲಿಗೆ ಅತ್ಯಂತ ಅವಶ್ಯಕವಾಗಿದ್ದು, ಪದೇ ಪದೇ ಕಿಡಿಗೇಡಿಗಳು ವಿನಾಕಾರಣ ತೊಂದರೆ ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಇತ್ತೀಚೆಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೆಸಿಬಿ ಚಾಲಕರು ಹಾಗೂ ಗುತ್ತಿಗೆದಾರರ ಪರವಾಗಿ ಬಂದಿದ್ದ ಕಾರ್ಮಿಕರ…
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮೊದಲ ಆವೃತ್ತಿಯ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ (RR) ತಂಡ ಈಗ ಅಮೆರಿಕ ಮೂಲದ ಉದ್ಯಮಿಗಳ ಪಾಲಾಗಿದೆ. ಅಮೆರಿಕದ ಖ್ಯಾತ ತಂತ್ರಜ್ಞಾನ ಉದ್ಯಮಿ ಕಲ್ ಸೋಮಾನಿ (Kal Somani) ನೇತೃತ್ವದ ಒಕ್ಕೂಟವು ಈ ಫ್ರಾಂಚೈಸಿಯನ್ನು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು ₹13,600 ಕೋಟಿ) ಮೊತ್ತಕ್ಕೆ ಖರೀದಿಸಿದೆ. ಸುದ್ದಿಯ ಮುಖ್ಯಾಂಶಗಳು: ದಾಖಲೆ ಬೆಲೆ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು 1 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದು, ಇದು ಲೀಗ್ನ ಅತ್ಯಂತ ದುಬಾರಿ ವ್ಯವಹಾರ ಎಂದು ಗುರುತಿಸಿಕೊಂಡಿದೆ. ಜಾಗತಿಕ ದಿಗ್ಗಜರ ಬೆಂಬಲ: ಈ ಖರೀದಿಯಲ್ಲಿ ಕಲ್ ಸೋಮಾನಿ ಅವರಿಗೆ ವಿಶ್ವದ ಅತಿದೊಡ್ಡ ರಿಟೇಲ್ ಸಂಸ್ಥೆ ವಾಲ್ಮಾರ್ಟ್ (Walmart) ಕುಟುಂಬದ ರಾಬ್ ವಾಲ್ಟನ್ ಮತ್ತು ಜಾಗತಿಕ ವಾಹನ ಉದ್ಯಮದ ದೈತ್ಯ ಫೋರ್ಡ್ (Ford) ಕುಟುಂಬದ ಶೀಲಾ ಫೋರ್ಡ್ ಹ್ಯಾಂಪ್ ಸಾಥ್ ನೀಡಿದ್ದಾರೆ. ಯಾರು ಈ ಕಲ್ ಸೋಮಾನಿ?: ಸೋಮಾನಿ ಅವರು ಈ ಹಿಂದೆ…
ನವದೆಹಲಿ: ಭಾರತೀಯ ರೈಲ್ವೆಯು ರೈಲು ಟಿಕೆಟ್ ರದ್ದತಿ ಶುಲ್ಕ ಮತ್ತು ರೀಫಂಡ್ (ಹಣ ಮರುಪಾವತಿ) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು 2026ರ ಏಪ್ರಿಲ್ 1 ರಿಂದ ಏಪ್ರಿಲ್ 15ರ ಅವಧಿಯಲ್ಲಿ ಹಂತ ಹಂತವಾಗಿ ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ ರದ್ದತಿ ಶುಲ್ಕದ ವಿವರಗಳು ಹೀಗಿವೆ: ಪ್ರಯಾಣಕ್ಕೆ 72 ಗಂಟೆಗಳಿಗಿಂತ ಮುಂಚಿತವಾಗಿ: ಟಿಕೆಟ್ ರದ್ದುಗೊಳಿಸಿದರೆ, ಪ್ರತಿ ಪ್ರಯಾಣಿಕರಿಗೆ ನಿಗದಿತ ಕನಿಷ್ಠ ರದ್ದತಿ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ಮರುಪಾವತಿಸಲಾಗುತ್ತದೆ. 72 ಗಂಟೆಯಿಂದ 24 ಗಂಟೆಗಳ ಒಳಗೆ: ರೈಲು ಹೊರಡುವ 72 ಗಂಟೆಗಳಿಂದ 24 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ, ಟಿಕೆಟ್ ದರದ ಶೇ. 25 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. 24 ಗಂಟೆಯಿಂದ 8 ಗಂಟೆಗಳ ಒಳಗೆ: ಪ್ರಯಾಣಕ್ಕೆ 24 ಗಂಟೆಗಳಿಂದ 8 ಗಂಟೆಗಳ ಮೊದಲು ರದ್ದುಗೊಳಿಸಿದರೆ, ಟಿಕೆಟ್ ದರದ ಶೇ. 50 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. 8 ಗಂಟೆಗಿಂತ ಕಡಿಮೆ ಅವಧಿಯಲ್ಲಿ: ರೈಲು ಹೊರಡಲು 8…
ಶಿವಮೊಗ್ಗ : ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕ್ಷಯರೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಡಿಹೆಚ್ಓ ಡಾ. ನಟರಾಜ.ಕೆ.ಎಸ್ ತಿಳಿಸಿದರು. ನಗರ ಆರೋಗ್ಯ ಕೇಂದ್ರ ತುಂಗಾನಗರ ವ್ಯಾಪ್ತಿಯ ನೇತಾಜಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಈ ವರ್ಷದ ಘೋಷಣೆಯಡಿ ಏರ್ಪಡಿಸಲಾಗಿದ್ದ “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು” ಎಂಬ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳಿಂದ ದೂರವಿದ್ದು, ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಕ್ಷಯರೋಗ ಸೇರಿದಂತೆ ಯಾವುದೇ ರೋಗದಿಂದ ದೂರ ಉಳಿಯಬಹುದಾಗಿದೆ. ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಕಳೆದ ವರ್ಷದಲ್ಲಿ ಭಾರತದಲ್ಲಿ 25 ಲಕ್ಷ ಟಿಬಿ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 1806 ಪ್ರಕರಣ ವರದಿಯಾಗಿದೆ. ಇತ್ತೀಚಿನ ವರ್ಷದಲ್ಲಿ ಕ್ಷಯ ರೋಗ ಹರಡುವ ಪ್ರಮಾಣ ಶೇ.21 ಕಡಿಮೆ ಯಾಗಿದೆ. ಈ ಪ್ರಮಾಣವನ್ನು ಇನ್ನೂ ತಗ್ಗಿಸುವ ಅವಶ್ಯಕತೆ…
ನವದೆಹಲಿ/ಬೆಂಗಳೂರು : ರಾಜ್ಯದ ಮೊಟ್ಟಮೊದಲ ‘ಸ್ಪ್ರಿಂಗ್ ಸೆನ್ಸಸ್’ (ಚಿಲುಮೆಗಳ ಗಣತಿ) ಕಾರ್ಯಾಚರಣೆಯನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು (𝗠𝗶𝗻𝗶𝘀𝘁𝗿𝘆 𝗼𝗳 𝗝𝗮𝗹 𝗦𝗵𝗮𝗸𝘁𝗶) ಶ್ಲಾಘಿಸಿದೆ. ಈ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ನೀಡಿದ ಪ್ರಶಂಸನಾ ಪತ್ರವನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಪವಿತ್ರ (𝗦𝗿𝗶 𝗕.𝗞. 𝗣𝗮𝘃𝗶𝘁𝗵𝗿𝗮) ಅವರು ನಿನ್ನೆ ಅಧಿಕೃತವಾಗಿ ಸ್ವೀಕರಿಸಿದರು. ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ (𝗜𝗿𝗿𝗶𝗴𝗮𝘁𝗶𝗼𝗻 𝗖𝗲𝗻𝘀𝘂𝘀 𝗦𝗰𝗵𝗲𝗺𝗲) ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಅಂತರ್ಜಲ ನಿರ್ದೇಶನಾಲಯವು (𝗗𝗶𝗿𝗲𝗰𝘁𝗼𝗿𝗮𝘁𝗲 𝗼𝗳 𝗚𝗿𝗼𝘂𝗻𝗱𝘄𝗮𝘁𝗲𝗿) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ. ಕರ್ನಾಟಕದ ಜೀವನಾಡಿ ಜಲಮೂಲಗಳ ಕುರಿತಾದ ದತ್ತಾಂಶ ಆಧಾರಿತ ಒಳನೋಟಗಳು (𝗗𝗮𝘁𝗮-𝗗𝗿𝗶𝘃𝗲𝗻 𝗜𝗻𝘀𝗶𝗴𝗵𝘁𝘀) ಅಂತಿಮಗೊಂಡ ಡಿಜಿಟಲ್ ಗಣತಿ ವರದಿಯ ಪ್ರಮುಖ ಅಂಶಗಳನ್ನು ವಿವರಿಸಿದ ಬಿ.ಕೆ. ಪವಿತ್ರ ಅವರು, “ಮಳೆಗಾಲದ ಭೌಗೋಳಿಕ ಸವಾಲುಗಳ ನಡುವೆಯೂ, ನಮ್ಮ ಇಲಾಖೆಯ ಸಿಬ್ಬಂದಿ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಈಗ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ಘಟನೆಯ ವಿವರ: ಕಳೆದ ಮಾರ್ಚ್.12, 2026ರಂದು ಶಾಲೆಯ ವಿದ್ಯಾರ್ಥಿ ಸುಶ್ರುತ್ ಎಂಬುವವರ ಮೇಲೆ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯ ತೀವ್ರತೆಗೆ ವಿದ್ಯಾರ್ಥಿಗೆ ತೀವ್ರ ಗಾಯವಾಗಿ ರಕ್ತ ಬಂದಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿತ್ತು. ಕಾನೂನು ಕ್ರಮ: ಆಯೋಗದ ಸೂಚನೆಯ ಮೇರೆಗೆ ಸಾಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸದಾನಂದಸ್ವಾಮಿ ಅವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಶಿಕ್ಷಕನ ವಿರುದ್ಧ ಈ ಕೆಳಗಿನ ಕಾಯ್ದೆಗಳಡಿ ಎಫ್ಐಆರ್ ದಾಖಲಿಸಲಾಗಿದೆ: ಭಾರತೀಯ ನ್ಯಾಯ ಸಂಹಿತೆ (BNS): ಸೆಕ್ಷನ್ 118 ಜುವೆನೈಲ್ ಜಸ್ಟೀಸ್ ಕಾಯ್ದೆ 2015 (JJ…














