Subscribe to Updates
Get the latest creative news from FooBar about art, design and business.
Author: kannadanewsnow09
ನವದೆಹಲಿ: ಭಾರತದ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾ ಮಂಗಳವಾರ ಫಿನ್ಲ್ಯಾಂಡ್ನಲ್ಲಿ ನಡೆದ ಪಾವೊ ನುರ್ಮಿ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಗೆದ್ದರು. 2022 ರಲ್ಲಿ ಇಲ್ಲಿ ಬೆಳ್ಳಿ ಗೆದ್ದ ಚೋಪ್ರಾ, ಸ್ಪರ್ಧೆಯ ಪ್ರಮುಖ ಭಾಗಕ್ಕೆ ಕ್ಷೇತ್ರವನ್ನು ಮುನ್ನಡೆಸುವ ತಮ್ಮ ಮೂರನೇ ಪ್ರಯತ್ನದಲ್ಲಿ 85.97 ಮೀಟರ್ ಗೆಲುವಿನ ಪ್ರಯತ್ನವನ್ನು ಮಾಡಿದರು, ಇದರಲ್ಲಿ 19 ವರ್ಷದ ಜರ್ಮನ್ ಪ್ರತಿಭೆ ಮ್ಯಾಕ್ಸ್ ಡೆಹ್ನಿಂಗ್ ಕೂಡ ಇದ್ದರು, ಅವರು 90 ಮೀಟರ್ ಕ್ಲಬ್ನ ಕಿರಿಯ ಸದಸ್ಯರಾಗಿದ್ದಾರೆ. ಟೋನಿ ಕೆರನೆನ್ 84.19 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರೆ, ಅವರ ಸಹವರ್ತಿ ಮತ್ತು ಕಳೆದ ಆವೃತ್ತಿಯ ಚಿನ್ನದ ಪದಕ ವಿಜೇತ ಆಲಿವರ್ ಹೆಲಾಂಡರ್ 83.96 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು. https://twitter.com/WorldAthletics/status/1803120512828112984 ದೋಹಾ ಡೈಮಂಡ್ ಲೀಗ್ನಲ್ಲಿ ಎರಡನೇ ಸ್ಥಾನ ಮತ್ತು ಕಳೆದ ತಿಂಗಳು ಭುವನೇಶ್ವರದಲ್ಲಿ ನಡೆದ ಫೆಡರೇಶನ್ ಕಪ್ನಲ್ಲಿ ಚಿನ್ನ ಗೆದ್ದ ನಂತರ 26 ವರ್ಷದ ಚೋಪ್ರಾ ಈ…
ಮುಂಬೈ: ಜಸ್ಲೋಕ್ ಆಸ್ಪತ್ರೆ, ರಹೇಜಾ ಆಸ್ಪತ್ರೆ, ಸೆವೆನ್ ಹಿಲ್ಸ್ ಆಸ್ಪತ್ರೆ, ಕೊಹಿನೂರ್ ಆಸ್ಪತ್ರೆ, ಕೆಇಎಂ ಆಸ್ಪತ್ರೆ, ಜೆಜೆ ಆಸ್ಪತ್ರೆ ಮತ್ತು ಸೇಂಟ್ ಜಾರ್ಜ್ ಆಸ್ಪತ್ರೆ ಸೇರಿದಂತೆ ಮುಂಬೈನಾದ್ಯಂತ 50 ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದಿವೆ. ವಿಪಿಎನ್ ನೆಟ್ವರ್ಕ್ ಬಳಸಿ ಬೆದರಿಕೆ ಇಮೇಲ್ಗಳನ್ನು ಕಳುಹಿಸಲಾಗಿದೆ ಎಂದು ಮುಂಬೈ ಪೊಲೀಸರು ದೃಢಪಡಿಸಿದ್ದಾರೆ. ಕಳುಹಿಸುವವರ ಗುರುತು ಮತ್ತು ಬೆದರಿಕೆಯ ಉದ್ದೇಶವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮುಂಬೈನ ಹಿಂದೂಜಾ ಕಾಲೇಜ್ ಆಫ್ ಕಾಮರ್ಸ್ ಅನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ ಹುಸಿ ಇಮೇಲ್ ಕೂಡ ಸಂಸ್ಥೆಗೆ ಬಂದಿದೆ ಎಂದು ಎಎನ್ಐ ವರದಿ ಮಾಡಿದೆ. “ಸ್ಥಳೀಯ ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ತಲುಪಿ ತನಿಖೆಯನ್ನು ಪ್ರಾರಂಭಿಸಿದರು ಆದರೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ. ಮುಂಬೈನ ವಿಪಿ ರೋಡ್ ಪೊಲೀಸ್ ಠಾಣೆ ಈ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚೆನ್ನೈ, ಪಾಟ್ನಾ ಮತ್ತು ಜೈಪುರ ಸೇರಿದಂತೆ 41 ವಿಮಾನ ನಿಲ್ದಾಣಗಳಿಗೆ…
ಫಿನ್ಲ್ಯಾಂಡ್ : ಭಾರತದ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಫಿನ್ಲ್ಯಾಂಡ್ನಲ್ಲಿ ನಡೆಯುತ್ತಿರುವ ಪಾವೊ ನುರ್ಮಿ ಗೇಮ್ಸ್ 2024ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಫಿನ್ಲ್ಯಾಂಡ್ನಲ್ಲಿ ನಡೆದ ಎಂಟು ಜನರ ಫೀಲ್ಡ್ ಸ್ಪರ್ಧೆಯಲ್ಲಿ ಚೋಪ್ರಾ 85.97 ಮೀಟರ್ ಎಸೆದು ಈ ಕಾರ್ಯಕ್ರಮವನ್ನು ಗೆದ್ದರು. ಚೋಪ್ರಾ ಋತುವಿನ ಮೂರನೇ ಸ್ಪರ್ಧೆಯಲ್ಲಿ ಆಡುತ್ತಿದ್ದರು ಮತ್ತು ಗಾಯದ ಮುನ್ನೆಚ್ಚರಿಕೆಯಿಂದಾಗಿ ಕಳೆದ ತಿಂಗಳು ಜೆಕಿಯಾದಲ್ಲಿ ನಡೆದ ಒಸ್ಟ್ರಾವಾ ಗೋಲ್ಡನ್ ಸ್ಪೈಕ್ ಅಥ್ಲೆಟಿಕ್ಸ್ ಮೀಟ್ನಿಂದ ಹೊರಗುಳಿದಿದ್ದರು. ಆದರೆ ಹಾಲಿ ಒಲಿಂಪಿಕ್ ಚಾಂಪಿಯನ್ ಮುಂದಿನ ತಿಂಗಳು ಪ್ಯಾರಿಸ್ ಒಲಿಂಪಿಕ್ಸ್ಗೆ ಮುಂಚಿತವಾಗಿ ಅವರನ್ನು ಸಂತೋಷಪಡಿಸುವ ವಿಹಾರದೊಂದಿಗೆ ಮರಳಿದರು. ಮೂರನೇ ಪ್ರಯತ್ನದಲ್ಲಿ ಅವರು 85.97 ಮೀಟರ್ ಎಸೆದು ಫಿನ್ಲ್ಯಾಂಡ್ನಲ್ಲಿ ಚಿನ್ನ ಗೆಲ್ಲಲು ಹಾಲಿ ಒಲಿಂಪಿಕ್ ಚಾಂಪಿಯನ್ಗೆ ಸಾಕಾಗಿತ್ತು. ನೀರಜ್ 83.62 ಮೀಟರ್ ಎಸೆದು ಸ್ಪರ್ಧೆಯನ್ನು ಪ್ರಾರಂಭಿಸಿದರು ಮತ್ತು ಆರಂಭಿಕ ಸುತ್ತಿನ ನಂತರ ಮುನ್ನಡೆ ಸಾಧಿಸಿದರು. ಎರಡನೇ ಸುತ್ತಿನ ನಂತರ ಫಿನ್ಲ್ಯಾಂಡ್ನ ಆಲಿವರ್ ಹೆಲಾಂಡರ್ ಅವರು ಹೆಲಾಂಡರ್ ತಮ್ಮ ಈಟಿಯನ್ನು 83.96 ಮೀ.ಗೆ ಎಸೆದಿದ್ದರಿಂದ…
ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವಂತ ಪಂಚ ಗ್ಯಾರಂಟಿ ಯೋಜನೆಯನ್ನು ಯಾವುದೇ ಕಾರಣಕ್ಕೂ ಬಂದ್ ಮಾಡಲ್ಲ. ಇದನ್ನು ಸಿಎಂ ಸಿದ್ಧರಾಮಯ್ಯ ಕೂಡ ಸ್ಪಷ್ಟ ಪಡಿಸಿದ್ದಾರೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ಪ್ರವಾಸಿ ಮಂದಿರದಲ್ಲಿ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಸಿಎಂ ಸಿದ್ಧರಾಮಯ್ಯ ಮಂಡಿಸಿದಂತ ಮೊದಲ ಬಜೆಟ್ ಅರ್ಧ ವಾರ್ಷಿಕ ಬಜೆಟ್ ಆಗಿದೆ. ಶಾಸಕರಿಗೆ ಬರುವ ಅನುದಾನ ಬಂದಿದೆ. ಈ ಸಾರಿ ಬಜೆಟ್ ನಲ್ಲಿ ಶಾಸಕರಿಗೆ ಮತ್ತಷ್ಟು ಅನುದಾನ ಸಿಗಲಿದೆ. ಶಾಸಕರಿಗೆ ನೀಡುವಂತ ಅನುದಾನದಲ್ಲಿ ಯಾವುದೇ ಕೊರತೆಯಾಗಿಲ್ಲ ಅಂತ ಹೇಳಿದರು. ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೂಢೀಕರಣಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿಲ್ಲ. ಪಂಚ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಈಗಾಗಲೇ ಅನುದಾನ ಮೀಸಲಿಟ್ಟಿದೆ. ಗ್ಯಾರಂಟಿ ಯೋಜನೆಗಳಿಗೆ ಅನುದಾನದಲ್ಲಿ ಯಾವುದೇ ಕೊರತೆಯಿಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಲ್ಲ. ಈ ಬಗ್ಗೆ ಸಿಎಂ ಸಿದ್ಧರಾಮಯ್ಯ ಕೂಡ ಸ್ಪಷ್ಟಪಡಿಸಿದ್ದಾರೆ ಎಂದರು.…
ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರ 3 ರೂ ತೈಲ ಬೆಲೆ ಏರಿಕೆ ಮಾಡಿದ್ದಕ್ಕೆ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಬಿಜೆಪಿ ಸರ್ಕಾರ ಅವಧಿಯಲ್ಲಿ ರೂ.90 ಏರಿಕೆ ಕಂಡಾಗ ಏಕೆ ಮಾತನಾಡಲಿಲ್ಲ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು. ಅಲ್ಲದೇ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ತೈಲ ಬೆಲೆ ಏರಿಕೆ ಮಾಡಿರುವುದನ್ನು ಅವರು ಸಮರ್ಥಿಸಿಕೊಂಡರು. ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಕ್ರೂಢೀಕರಣದ ಸಲುವಾಗಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡೋದಕ್ಕೆ ಅಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆಯೂ ಇಲ್ಲ ಎಂಬುದಾಗಿ ಹೇಳಿದರು. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ 60 ರೂ ಇದ್ದಂತ ತೈಲಬೆಲೆ ರೂ.90ಕ್ಕೆ ಏರಿಕೆಯಾಗಿತ್ತು. ಆಗ ಯಾರೂ ಮಾತನಾಡಲಿಲ್ಲ. ಈಗ ಕೇವಲ 3 ರೂ ಏರಿಕೆ ಮಾಡಿದ ತಕ್ಷಣ ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ. ಆಗ ಯಾಕೆ ಮಾತನಾಡಲಿಲ್ಲ ಅಂತ ಪ್ರಶ್ನಿಸಿದರು. ತೈಲ ಬೆಲೆ ಏರಿಕೆಯ ಹಿಂದೆ ಗ್ಯಾರಂಟಿ ಯೋಜನೆಗೆ ಹಣ…
ವಿಜಯಪುರ: ಜಿಲ್ಲೆಯಲ್ಲಿ ಇಂದು ಘೋರ ದುರಂತವೊಂದು ಸಂಭವಿಸಿದೆ. ತಮ್ಮ ಜಮೀನಿನಲ್ಲಿ ನೀರು ತುಂಬಿದ್ದಂತ ಗುಂಡಿಗೆ ಬಿದ್ದಂತ ಓರ್ವನನ್ನು ರಕ್ಷಿಸಲು ಹೋಗಿ, ಮೂವರು ಧಾರುಣವಾಗಿ ಸಾವನ್ನಪ್ಪಿರುವಂತ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ಎಮ್ಮೆ ಮೇಯಿಸಲು ನೀಲಮ್ಮ ಎಂಬುವರು ಹೋಗಿದ್ದರು. ಜಮೀನಿನ ಗುಂಡಿಯಲ್ಲಿ ನಿಂತಿದ್ದಂತ ನೀರನ್ನು ಎಮ್ಮೆಗೆ ಕುಡಿಸೋದಕ್ಕೆ ಹೋಗಿ, ಗುಂಡಿಗೆ ತಾವು ಬಿದ್ದಿದ್ದಾರೆ. ಈ ವೇಳೆ ರಕ್ಷಣೆಗಾಗಿ ಹೊಲದಲ್ಲೇ ಇದ್ದಂತ ಮುತ್ತಪ್ಪ ಕಿಲಾರಹಟ್ಟಿ ಎಂಬುವರನ್ನು ಕೂಗಿದ್ದಾರೆ. ನೀಲಮ್ಮನನ್ನು ರಕ್ಷಿಸಲು ಹೋಗಿ ಮುತ್ತಪ್ಪ ಕಿಲಾರಹಟ್ಟಿ ನೀರಲ್ಲಿ ಮುಳುಗಿದ್ದಾರೆ. ಇವರು ಸಾವು ಬದುಕಿನ ನಡುವೆ ಮುಳುಗುತ್ತ ಹೋರಾಡುತ್ತಿದ್ದದ್ದು ಕಂಡಂತ ಶಿವು ಯಾಳವಾರ ಅವರು ಇಬ್ಬರನ್ನು ರಕ್ಷಿಸೋದಕ್ಕೆ ಹೋಗಿ, ತಾವು ನೀರಿನಿಂದ ಅವರನ್ನು ರಕ್ಷಿಸಿ ಮೇಲೆ ಬರಲಾಗದೇ ಧಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಮೂಲಕ ನೀಲಮ್ಮ ಕಿಲಾರಹಟ್ಟಿ (16), ಮುತ್ತಪ್ಪ ಕಿಲಾರಹಟ್ಟಿ (24) ಹಾಗೂ ಶಿವ ಯಾಳವಾರ(25) ಎಂಬುವರು ಧಾರುಣವಾಗಿ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಈ ಸಂಬಂಧ…
ಇರಾನ್ : ಇಲ್ಲಿನ ಈಶಾನ್ಯ ನಗರ ಕಶ್ಮಾರ್ನಲ್ಲಿ ಮಂಗಳವಾರ ಸಂಭವಿಸಿದ 4.9 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 120 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಮಧ್ಯಾಹ್ನ 1:24 ಕ್ಕೆ (0954 ಜಿಎಂಟಿ) ಭೂಕಂಪ ಸಂಭವಿಸಿದೆ ಎಂದು ರಾಜ್ಯ ದೂರದರ್ಶನ ಮತ್ತು ಸ್ಥಳೀಯ ಗವರ್ನರ್ ಹೇಳಿದರೆ, ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು 10 ಕಿಲೋಮೀಟರ್ (ಆರು ಮೈಲಿ) ಆಳದಲ್ಲಿ ಸಂಭವಿಸಿದೆ ಎಂದು ಹೇಳಿದೆ. https://twitter.com/shortnewsenergy/status/1803091116352315841 https://kannadanewsnow.com/kannada/all-diploma-semester-exams-diploma-result-declared/ https://kannadanewsnow.com/kannada/breaking-drunken-driving-singer-justin-timberlake-arrested/
ಶಿವಮೊಗ್ಗ: ಮಳೆಗಾಲ ಆರಂಭಗೊಂಡ ನಂತ್ರ ಸಾಗರ ತಾಲೂಕಿನಲ್ಲಿ ದಿನೇ ದಿನೇ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿವೆ. ಇವುಗಳ ನಿಯಂತ್ರಣ ಸಂಬಂಧ ಇಂದು ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ, ನಿಯಂತ್ರಣಕ್ಕಾಗಿ ಕೆಲ ಖಡಕ್ ಸೂಚನೆ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ. ಇಂದು ಸಾಗರದ ಪ್ರವಾಸಿ ಮಂದಿರದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಗ್ಯೂನಿಂದ ಆಸ್ಪತ್ರೆಯ ಸಿಬ್ಬಂದಿಯೇ ಸಾವನ್ನಪ್ಪಿದ್ದು ದುರಾದೃಷ್ಠಕರ ಸಂಗತಿಯಾಗಿದೆ. ಸಾಗರ ತಾಲೂಕಿನಲ್ಲಿ ಡೆಂಗ್ಯೂ ನಿಯಂತ್ರಣದ ಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಡಾ.ನಾಗೇಂದ್ರಪ್ಪ ವರ್ಗಾವಣೆಗೆ ಸೂಚನೆ ಪ್ರಸೂತಿ ತಜ್ಞ ವೈದ್ಯ ಡಾ.ನಾಗೇಂದ್ರಪ್ಪ ಅವರ ಯಡವಟ್ಟುಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಅದರೊಟ್ಟಿಗೆ ಅವರ ವಿರುದ್ಧ ದೂರುಗಳು ಜಾಸ್ತಿಯಾಗುತ್ತಿದ್ದಾವೆ. ಅವರನ್ನು ಹೊಸನಗರ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು. ಅಲ್ಲಿನ ಪ್ರಸೂತಿ ವೈದ್ಯರನ್ನು ಈ ಕೂಡಲೇ ಸಾಗರ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು ಅಂತ…
ಬೆಂಗಳೂರು: ಮಹಾರಾಷ್ಟ್ರ ಸರ್ಕಾರದಿಂದ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಕ ಮಾಡಿ, ನಿಯಮ ಉಲ್ಲಂಘಿಸಿ, ಕರ್ನಾಟಕಕ್ಕೆ ಮೋಸ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿರುವಂತ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಸೋಮಣ್ಣ ಬೇವಿನಮರದ ಅವರು ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದು ಕೂಡಲೇ ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸಿದ್ದಾರೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಸೋಮಣ್ಣ ಬೇವಿನಮರದ ಅವರು ಪತ್ರ ಬರೆದಿದ್ದಾರೆ. ಅದರಲ್ಲಿ ಉಲ್ಲೇಖ (1) ರಲ್ಲಿನ ಆದೇಶಗಳಲ್ಲಿ ಕ್ರಮವಾಗಿ ಪ್ರಾಥಮಿಕ ಶಿಕ್ಷಣ ವಿಭಾಗ, ಜಿಲ್ಲಾಪಂಚಾಯತ್ ಸಾಂಗ್ಲಿ ಹಾಗೂ ಸೊಲ್ಲಾಪುರ ಇವರಿಂದ ಜತ್ತ ಮತ್ತು ಅಕ್ಕಲಕೋಟೆ ತಾಲ್ಲೂಕಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕ್ರಮವಾಗಿ 7 ಹಾಗೂ 8 ಸಂಖ್ಯೆಯ ಕನ್ನಡ ಬಾಗದ ಶಿಕ್ಷಕರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ. ಈ ಅನ್ಯಾಯವನ್ನು ವಿರೋಧಿಸಿ ಅಲ್ಲಿನ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯನ್ನು…
ಚಿಕ್ಕಬಳ್ಳಾಪುರ: ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ( Actor Darshan ) ಪೊಲೀಸರ ಬಂಧನದಲ್ಲಿದ್ದಾರೆ. ಜೈಲು ಪಾಲಾಗೋ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ. ಇದರ ನಡುವೆ ಕೋಠಿಮಠ ಶ್ರೀಗಳು ನಟ ದರ್ಶನ್ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಅದೇನು ಅಂತ ಮುಂದೆ ಓದಿ. ಇಂದು ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಕೋಠಿಮಠದ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು, ಕೋಪದ ಕೈಗೆ ಬುದ್ಧಿ ಕೊಟ್ಟರೇ ಈ ರೀತಿಯ ಘಟನೆಗಳಿಗೆ ಸಾಕ್ಷಿಯಾಗುತ್ತದೆ ಎಂಬುದಾಗಿ ಸ್ಪೋಟಕ ಹೇಳಿಕೆ ನೀಡಿದರು. ಇನ್ನೂ ಉಮಾಪತಿ ಕೂಡ ಕೋಠಿಮಠಕ್ಕೆ ಹೋಗಾದ ಕೋಪ ಕಡಿಮೆ ಮಾಡಿಕೊಳ್ಳಬೇಕು. ತಂದೆ, ತಾಯಿ ಮಾತು ಕೇಳಬೇಕು ಅಂತ ಅಂದಿದ್ದರು. ಅದರಂತೆ ನಡೆದುಕೊಂಡ ಕಾರಣ, ಈಗ ಒಳ್ಳೆಯ ಸ್ಥಾನದಲ್ಲಿದ್ದೇನೆ ಅಂತ ಹೇಳಿದ್ದರು ಎಂಬುದಾಗಿ ನೆನಪು ಮಾಡಿಕೊಂಡರು. ನಟ ದರ್ಶನ್ ಬಗ್ಗೆ ಈ ಸ್ಪೋಟಕ ಭವಿಷ್ಯ ನುಡಿದ ಕೋಡಿ ಮಠ ಶ್ರೀ ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಕೆಲ ದಿನಗಳಿಂದ ಪೊಲೀಸರ…