Author: kannadanewsnow09

ಬೆಂಗಳೂರು: ನಗರದಲ್ಲಿ ಭೀಕರ ಕೃತ್ಯವೊಂದು ಬೆಳಕಿಗೆ ಬಂದಿದೆ. ಬೈಕ್ ಒಂದಕ್ಕೆ ಕಾರು ಗುದ್ದಿಸಿ ಕೊಲೆಗೆ ಯತ್ನಿಸಿದಂತ ಘಟನೆ ನಡೆದಿದೆ. ಈ ಇಡೀ ಕೃತ್ಯವು ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಂಗಳೂರಲ್ಲಿ ಕಾರೊಂದು ಬೈಕಿಗೆ ಗುದ್ದಿಸಿ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬರನ್ನು ಕೊಲೆಗೆ ಯತ್ನಿಸಿದಂತ ಭೀಕರ ಕೃತ್ಯ ನಡೆದಿದೆ. ಬೈಕ್ ಸವಾರ ಹಾರನ್ ಮಾಡಿದ್ದಕ್ಕೆ ಸಿಟ್ಟಾದಂತ ಕಾರು ಚಾಲಕ, ಆತನನ್ನು ಹತ್ಯೆಗೆ ಯತ್ನಿಸಲಾಗಿದೆ. ಸಾಫ್ಟ್ ವೇರ್ ಇಂಜಿನಿಯರ್ ಸುಕ್ರುತ್ ಕೇಶವ್ ಎಂಬಾತನಿಂದ ಈ ಕೃತ್ಯವನ್ನು ಎಸಗಲಾಗಿದೆ. ಹಾರ್ನ್ ಮಾಡಿದ್ದಕ್ಕೆ ಬೈಕಿಗೆ ಕಾರು ಗುದ್ದಿಸಿ ಹತ್ಯೆಯನ್ನು ಮಾಡೋದಕ್ಕೆ ಯತ್ನಿಸಿರುವಂತ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಕ್ಟೋಬರ್ 26ರಂದು ನಡೆದಿದ್ದಂತ ಘಟನೆ, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರು ಚಾಲಕ ಸುಕ್ರುತ್ ಕೇಶವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. https://kannadanewsnow.com/kannada/railway-works-two-memu-trains-on-mysore-division-cancelled/ https://kannadanewsnow.com/kannada/good-news-good-news-for-employees-epfos-important-decision-now-automatic-transfer-of-pf-money-to-new-account/

Read More

ಮೈಸೂರು: ಇಲ್ಲಿನ ನ್ಯೂ ಗುಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿ ನಡೆಯುವುದರಿಂದ ಕೆಳಕಂಡ ರೈಲುಗಳು 7 ದಿನಗಳ ಕಾಲ ಭಾಗಶಃ ರದ್ದುಪಡಿಲಾಗಿದೆ. ವಿವರಗಳು ಕೆಳಗಿನಂತಿವೆ: ರೈಲು ಸಂಖ್ಯೆ 66553 ಕೆಎಸ್‌ಆರ್ ಬೆಂಗಳೂರು – ಅಶೋಕಪುರಂ ಮೆಮು ದಿನಾಂಕ 13 ನವೆಂಬರ್, 2, 4, 9, 11, 30 ಡಿಸೆಂಬರ್ 2025 ಹಾಗೂ 1 ಜನವರಿ 2026 ರಂದು ಪ್ರಯಾಣ ಆರಂಭಿಸುವ ರೈಲು ಪಾಂಡವಪುರ ಮತ್ತು ಅಶೋಕಪುರಂ ನಡುವೆ ಭಾಗಶಃ ರದ್ದುಪಡಿಸಲ್ಪಡುತ್ತದೆ. ಈ ರೈಲು ಪಾಂಡವಪುರದಲ್ಲೇ ಪ್ರಯಾಣ ಕೊನೆಗೊಳ್ಳಲಿದೆ. ರೈಲು ಸಂಖ್ಯೆ 66580 ಅಶೋಕಪುರಂ – ಕೆಎಸ್‌ಆರ್ ಬೆಂಗಳೂರು ಮೆಮು ದಿನಾಂಕ 13 ನವೆಂಬರ್, 2, 4, 9, 11, 30 ಡಿಸೆಂಬರ್ 2025 ಹಾಗೂ 1 ಜನವರಿ 2026 ರಂದು ಪ್ರಯಾಣ ಆರಂಭಿಸುವ ರೈಲು ಅಶೋಕಪುರಂ ಮತ್ತು ಪಾಂಡವಪುರ ನಡುವೆ ಭಾಗಶಃ ರದ್ದುಪಡಿಸಲಾಗುತ್ತದೆ. ಈ ರೈಲು ಅಶೋಕಪುರಂ ಬದಲು ಪಾಂಡವಪುರದಿಂದಲೇ ತನ್ನ ಪ್ರಯಾಣ ಆರಂಭಿಸಲಿದೆ. https://kannadanewsnow.com/kannada/customs-officials-seize-hydroponic-cannabis-worth-rs-6-97-crore-at-bengaluru-airport/ https://kannadanewsnow.com/kannada/good-news-good-news-for-employees-epfos-important-decision-now-automatic-transfer-of-pf-money-to-new-account/

Read More

ಬೆಂಗಳೂರು: ನಗರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಾಚರಣೆಯ ವೇಳೆಯಲ್ಲಿ ಬರೋಬ್ಬರಿ 6.97 ಕೋಟಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ಸೀಜ್ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು, ದಿನಾಂಕ 11-11-2025ರಂದು, ಬೆಂಗಳೂರಿನ ಕೆಐಎಯಲ್ಲಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಆಗಮಿಸುತ್ತಿದ್ದ ಪ್ರಯಾಣಿಕನನ್ನು ತಡೆದು ₹69.60 ಲಕ್ಷ ಮೌಲ್ಯದ 2.760 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ವಶಪಡಿಸಿಕೊಂಡರು. ಪ್ರಯಾಣಿಕನನ್ನು ಎನ್‌ಡಿಪಿಎಸ್ ಕಾಯ್ದೆ, 1985ರ ಅಡಿಯಲ್ಲಿ ಬಂಧಿಸಲಾಗಿದೆ ಎಂದಿದೆ. https://twitter.com/blrcustoms/status/1988910162858385714 ಇನ್ನೂ ನಿನ್ನೆಯ ದಿನಾಂಕ 12-11-2025ರಂದು ಬೆಂಗಳೂರಿನ ಕೆಐಎಯಲ್ಲಿರುವ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ₹5.53 ಕೋಟಿ ಮೌಲ್ಯದ 15.79 ಕೆಜಿ ಹೈಡ್ರೋಪೋನಿಕ್ ಗಾಂಜಾವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದಾರೆ.  ಈ ವ್ಯಕ್ತಿಗಳನ್ನು ಎನ್‌ಡಿಪಿಎಸ್ ಕಾಯ್ದೆ, 1985ರ ಅಡಿಯಲ್ಲಿ ಬಂಧಿಸಲಾಯಿತು ಎಂಬುದಾಗಿ ತಿಳಿಸಿದೆ. https://twitter.com/blrcustoms/status/1988910906550419956 https://kannadanewsnow.com/kannada/good-news-for-those-looking-to-start-a-chicken-farm-applications-invited-for-free-training/ https://kannadanewsnow.com/kannada/big-shock-for-former-cm-bs-yediyurappa-high-court-refuses-to-cancel-summons-in-pocso-case/ https://kannadanewsnow.com/kannada/good-news-for-those-who-applied-for-bed-studies-another-opportunity-for-document-verification/

Read More

ಉಜಿರೆ : ನಿರುದ್ಯೋಗಿ ಯುವ-ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ /ಉದ್ಯೋಗಗಳನ್ನು ಕಲ್ಪಿಸಿರುವ ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಹೊಸ ತರಬೇತಿ ಕಲ್ಲು ಮತ್ತು ಕಾಂಕ್ರೀಟ್ ಕೆಲಸಗಳು (Masonry and Concrete Works) 30 ದಿನದ ಉಚಿತ ತರಬೇತಿ ಊಟ-ವಸತಿಯೊಂದಿಗೆ ನಡೆಯಲಿದೆ. ಆಸಕ್ತಿರುವ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು 18 ರಿಂದ 50 ವರ್ಷಗಳ ವಯೋಮಿತಿಯ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಂಸ್ಥೆಯ ವೆಬ್ ಸೈಟ್ ನಲ್ಲಿ (www.rudsetujire.com) ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಬರೆದು ಅರ್ಜಿಯನ್ನು : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ-574240, ಬೆಳ್ತಂಗಡಿ ದ.ಕ ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ…

Read More

ದಕ್ಷಿಣ ಕನ್ನಡ : ನಿರುದ್ಯೋಗಿ ಯುವ-ಯುವತಿಯರಿಗೆ, ಉದ್ಯೋಗವನ್ನು ಅರಸುತ್ತಿರುವವರಿಗೆ ಹಾಗೂ ಸ್ವ ಉದ್ಯೋಗ ಆಕಾಂಕ್ಷಿಗಳಿಗೆ ಆಶಾಕಿರಣವಾಗಿರುವ ಮತ್ತು ಕೇಂದ್ರ ಸರಕಾರದಿಂದ ಸ್ವ ಉದ್ಯೋಗಕ್ಕಾಗಿ ಅನುಕರಣೀಯ ಮಾದರಿ ಎಂದು ಗುರುತಿಸಲ್ಪಟ್ಟು ದೇಶದ ಪ್ರತಿ ಜಿಲ್ಲೆಯಲ್ಲೂ ಬೇರೆ ಬೇರೆ ಬ್ಯಾಂಕುಗಳಿಂದ ರುಡ್ ಸೆಟ್ ಮಾದರಿ ಸಂಸ್ಥೆಗಳನ್ನು ಸ್ಥಾಪಿಸಿ ಇಂದು ಅನೇಕ ಯುವ ಜನರಿಗೆ ಸ್ವ ಉದ್ಯೋಗ /ಉದ್ಯೋಗಗಳನ್ನು ಕಲ್ಪಿಸಿರುವ ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ 17.11.2025 ರಿಂದ 29.11.2025ರ ವರೆಗೆ 13 ದಿನದ ಉಚಿತ ತರಬೇತಿ ಊಟ-ವಸತಿಯೊಂದಿಗೆ ಕೃಷಿ ಉದ್ಯಮಿ-ಕೋಳಿ ಸಾಕಾಣಿಕೆ ತರಬೇತಿ ನಡೆಯಲಿದೆ. ಆಸಕ್ತಿರುವ ಕರ್ನಾಟಕ ರಾಜ್ಯದ ಅಭ್ಯರ್ಥಿಗಳು 18 ರಿಂದ 50 ವರ್ಷಗಳ ವಯೋಮಿತಿಯ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಸಂಸ್ಥೆಯ ವೆಬ್ ಸೈಟ್ ನಲ್ಲಿ (www.rudsetujire.com) ನೇರವಾಗಿ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಬಿಳಿ ಹಾಳೆಯಲ್ಲಿ ಬರೆದು ಅರ್ಜಿಯನ್ನು : ನಿರ್ದೇಶಕರು, ರುಡ್ ಸೆಟ್ ಸಂಸ್ಥೆ, ಸಿದ್ಧವನ, ಉಜಿರೆ-574240, ಬೆಳ್ತಂಗಡಿ ದ.ಕ ಇವರಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ…

Read More

ಬೆಂಗಳೂರು: ನಗರದಲ್ಲಿ ಸಫಾರಿ ವೇಳೆಯಲ್ಲಿ ಮಹಿಳೆ ಮೇಲೆ ಚಿರತೆ ದಾಳಿ ಮಾಡಿರುವಂತ ಘಟನೆ ನಡೆದಿದೆ. ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಈ ದಾಳಿ ನಡೆದಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಸಫಾರಿ ವೇಳೆಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿಯ ಭೀಕರ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ. 50 ವರ್ಷದ ವಹಿತ ಬಾನು ಎಂಬ ಮಹಿಳೆಯ ಮೇಲೆ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ನಲ್ಲಿ ಚಿರತೆ ದಾಳಿ ನಡೆಸಿದೆ. ಪತಿ, ಮಗನ ಜೊತೆಗೆ ಸಫಾರಿಗೆ ವಹಿತ ಬಾನು ತೆರಳಿದ್ದರು. ಕೆ ಎಸ್ ಟಿ ಡಿ ಸಿ ವಾಹನದಲ್ಲಿ ಸಫಾರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ಸಫಾರಿ ವಾಹನದ ಗ್ಲಾಸ್ ಓಪನ್ ಮಾಡಿ ಚಿರತೆ ನೋಡುತ್ತಿದ್ದಾಗ ಮಹಿಳೆಯ ಮೇಲೆ ದಾಳಿ ನಡೆಸಲಾಗಿದೆ. ಚಿರತೆ ದಾಳಿಯಿಂದಾಗಿ ಮಹಿಳೆಯ ಕೈಗೆ ಗಾಯವಾಗಿದೆ. https://kannadanewsnow.com/kannada/1-day-of-paid-menstrual-leave-per-month-for-employed-women-labor-department-orders/ https://kannadanewsnow.com/kannada/good-news-for-those-who-applied-for-bed-studies-another-opportunity-for-document-verification/

Read More

ಬೆಂಗಳೂರು: ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು ವೇತನ ಸಹಿತವಾಗಿ ನೀಡಲು ಕಾರ್ಮಿಕ ಇಲಾಖೆ ಆದೇಶಿಸಿದೆ. ಉದ್ಯೋಗಸ್ಥ ಮಹಿಳೆಯರಿಗೆ ತಿಂಗಳಿಗೆ ಒಂದರಂತೆ ವರ್ಷಕ್ಕೆ 12 ಮುಟ್ಟಿನ ರಜೆಯನ್ನು (ವೇತನ ಸಹಿತ) ನೀಡುವ ಕುರಿತು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ತೋಟ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್‌ ಕಾರ್ಮಿಕರ ಕಾಯ್ದೆ, ಮೋಟಾರು ಸಾರಿಗೆ ಕಾಯ್ದೆ ಅಡಿಯಲ್ಲಿ ನೋಂದಣಿ ಆಗಿರುವ ಕೈಗಾರಿಕೆಗಳು ಮತ್ತು ಸಂಸ್ಥೆಗಳೂ ಸೇರಿದಂತೆ ಎಲ್ಲ ವಲಯಗಳಲ್ಲಿ ಕೆಲಸ ಮಾಡುತ್ತಿರುವ 18ರಿಂದ 52ರ ವಯೋಮಾನದ ಎಲ್ಲ ಕಾಯಂ, ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರಿಗೆ ಈ ಸೌಲಭ್ಯ ಸಿಗಲಿದೆ. ಷರತ್ತುಗಳು: ಆಯಾ ತಿಂಗಳ ರಜೆಯನ್ನು ಆಯಾ ತಿಂಗಳಲ್ಲೇ ಬಳಸಿಕೊಳ್ಳಬೇಕು. I ಒಂದು ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸುವಂತಿಲ್ಲ. I ಮುಟ್ಟಿನ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ನೀಡಬೇಕಿಲ್ಲ. I 52 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಈ ರಜೆಯ…

Read More

ಬೆಳಗಾವಿ: ರಾಜ್ಯದಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ತಡೆಗೆ ಕಾನೂನು ರೂಪಿಸಿದ್ದರೂ, ಕಿರುಕುಳ ಮಾತ್ರ ತಪ್ಪಿಲ್ಲ. ಇದೀಗ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕಡೋಲಿಯಲ್ಲಿ ನಡೆದಿದೆ. ಬೆಳಗಾವಿ ತಾಲ್ಲೂಕಿನ ಕಡೋಲಿಯಲ್ಲಿ ಖಾಸಗಿ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಸಾತೇರಿ ಹೊನ್ನಪ್ಪ ರುಟಕುಟೆ(78) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತ ಸಾತೇರಿ ಹೊನ್ನಪ್ಪ ರುಟಕುಟೆ ಅವರಿಗೆ ಮಣ್ಣೂರು ಗ್ರಾಮದ ಕೋ ಆಪರೇಟಿವ್ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿದೆ. 12 ಲಕ್ಷ ತೆಗೆದುಕೊಂಡಿದ್ದಂತ ಸಾಲದಲ್ಲಿ ಸುಮಾರು 4 ಲಕ್ಷದಷ್ಟು ಮರು ಪಾವತಿ ಮಾಡಿದ್ದರು. ಆದರೇ ಬಡ್ಡಿ ಹಾಗೂ ಅಸಲು ಸೇರಿದಂತೆ 16 ಲಕ್ಷ ಪಾವತಿ ಮಾಡಿ ಎಂಬುದಾಗಿ ರೈತ ಸಾತೇರಿ ಹೊನ್ನಪ್ಪಗೆ ಖಾಸಗಿ ಫೈನಾನ್ಸ್ ಸಿಬ್ಬಂದಿ ಕಿರುಕುಳ ನೀಡಿದ್ದಾಗಿ ಹೇಳಲಾಗುತ್ತಿದೆ. ಇದಷ್ಟೇ ಅಲ್ಲದೇ ಒಂದು ವೇಳೆ ಸಾಲವನ್ನು ತೀರಿಸದೇ ಇದ್ದರೇ ನಿಮ್ಮ ಮನೆ ಹರಾಜು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕಾಗಿ ಇಡೀ ಊರ…

Read More

ಶಿವಮೊಗ್ಗ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಗರ ಯೋಜನಾ ಕಚೇರಿಯ ತುಮರಿ ವಲಯದ ಒಕ್ಕೂಟದ ಪದಾಧಿಕಾರಿಗಳ ಕಾರ್ಯಾಗಾರವು ಸಾಗರ ತಾಲ್ಲೂಕಿನ ಕುದುರೂರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಯಶಸ್ವಿಯಾಗಿ ಜರಗಿತು. ಈ ಕಾರ್ಯಗಾರವನ್ನು ಕುದುರೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉಮಾ ನಾಗೇಂದ್ರ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿರಸಿ ವಿಭಾಗದ ಜಿಲ್ಲಾ ನಿರ್ದೇಶಕರಾದ ದಿನೇಶ್ ಅವರು ಕಾರ್ಯಕರ್ತರಿಗಿಂತಲೂ ಮಿಗಿಲಾದ ಸೇವೆಯನ್ನು ಒಕ್ಕೂಟದ ಪದಾಧಿಕಾರಿಗಳು ಸೇವೆ ನೀಡುತ್ತಿದ್ದಾರೆ ಅಭಿವೃದ್ಧಿಗೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಲು ಪದಾಧಿಕಾರಿಗಳು ತೊಡಗಿಕೊಳ್ಳಬೇಕು ಪೂಜ್ಯರ ಕನಸನ್ನು ಅನುಷ್ಟಾನ ಮಾಡುವಲ್ಲಿ ಪದಾಧಿಕಾರಿಗಳ ಸೇವೆ ಅನನ್ಯವಾಗಿದೆ ಎಂದರು. ತಮ್ಮ ಬದಲಾವಣೆಗೆ ತಾವೇ ನಿರ್ಧಾರ ಕೈಗೊಂಡು ಸ್ವ ಸಹಾಯ ಗುಂಪುಗಳನ್ನು ಸದಸ್ಯರು ನಡೆಸುತ್ತಿದ್ದಾರೆ. ಗುಂಪುಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕಾದರೆ ಗುಂಪಿನ ಪ್ರತಿನಿಧಿಗಳು ಜವಾಬ್ದಾರಿಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಸ್ವ ಸಹಾಯ ಗುಂಪುಗಳ ಅಕೌಂಟ್ ನ್ನೂ ರಾಷ್ಟ್ರೀಕೃತ ಬ್ಯಾಂಕುಗಳಲಿ ತೆರೆದು ಬ್ಯಾಂಕಿನ ಸೌಲಬ್ಯ ವನ್ನು ಒದಗಿಸಲಾಗುತ್ತಿದೆ. ಬ್ಯಾಂಕಿನ B C ಪ್ರತಿನಿಧಿಯಾಗಿ…

Read More

ಕಲಬುರ್ಗಿ: ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಕಲಬುರ್ಗಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಹೀಗಾಗಿ ನವೆಂಬರ್.16ರಂದು ಕಲಬುರ್ಗಿಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅವಕಾಶ ಸಿಕ್ಕಂತೆ ಆಗಿದೆ. ಕಲಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಕಲಬುರ್ಗಿ ಜಿಲ್ಲಾಡಳಿತ ಷರತ್ತುಬದ್ಧ ಅನುಮತಿ ನೀಡಿದೆ. ಕೇವಲ 300 ಕಾರ್ಯಕರ್ತರ ಪಥಸಂಚಲನಕ್ಕೆ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಈ ಕುರಿತು ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಕೂಡ ಮಾಹಿತಿ ನೀಡಿದ್ದಾರೆ. 800 ಜನರಿಗೆ ಅನುಮತಿ ಕೇಳಲಾಗಿತ್ತು. ಆದರೇ 300 ಜನರಿಗೆ ಅನುಮತಿ ನೀಡಲಾಗಿದೆ. 800 ಜನರಿಗೆ ಅನುಮತಿ ನೀಡಲು ಹಿರಿಯ ವಕೀಲ ಅರುಣ್ ಶ್ಯಾಮ್ ಮನವಿ ಮಾಡಿದ್ದಾರೆ. ಆದರೇ ಸರ್ಕಾರವು 300 ಕಾರ್ಯಕರ್ತರು 25 ಬ್ಯಾಂಡ್ ವಾದಕರಿಗೆ ಅನುಮತಿ ನೀಡಿದೆ ಎಂಬುದಾಗಿ ಹೇಳಿದರು. ಕೆಲವೆಡೆ 100 ರಿಂದ 150 ಜನರ ಪಥಸಂಚಲನ ನಡೆಸಲಾಗಿದೆ. ಎಲ್ಲಾ ಅಂಶಗಳನ್ನು ಪರಿಗಣಿಸಲಾಗಿದೆ ಎಂಬುದಾಗಿ ಎಜಿ ಶಶಿಕಿರಣ್ ಶೆಟ್ಟಿ ನ್ಯಾಯಪೀಠದ ಗಮನಕ್ಕೆ ತಂದರು. ಈ…

Read More