Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಯುನೆಸ್ಕೋ ಮಾಹಿತಿಯ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಜಾಗತಿಕವಾಗಿ 1,600 ಕ್ಕೂ ಹೆಚ್ಚು ಪತ್ರಕರ್ತರು ಹತ್ಯೆಯಾಗಿರುವುದು ನೋವಿನ ಸಂಗತಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು. ಬೆಂಗಳೂರಿನಲ್ಲಿ ಯುನೆಸ್ಕೊ, ಪತ್ರಕರ್ತರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಸುರಕ್ಷತೆ, ಕಾನೂನು ಸಬಲೀಕರಣ ಮತ್ತು ಭಾರತದಲ್ಲಿ ಪತ್ರಕರ್ತರ ಲಿಂಗ-ಪ್ರತಿಕ್ರಿಯಾತ್ಮಕ ರಕ್ಷಣೆ ಕುರಿತ ಮೂರು ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಇನ್ನೂ ನೋವಿನ ಸಂಗತಿ ಅಂದರೆ, ಸುಮಾರು ಶೇ.80 ಪ್ರಕರಣಗಳಲ್ಲಿ, ಅಪರಾಧಿಗಳನ್ನು ಎಂದಿಗೂ ನ್ಯಾಯದ ಮುಂದೆ ತರಲಾಗಿಲ್ಲ ಎಂದು ಅವರು ವಿಷಾದಿಸಿದರು. ಸತ್ಯದ ನೆಲೆಯಲ್ಲಿ ಹೋರಾಟ ಮಾಡುತ್ತಿರುವ ಪ್ರಪಂಚದಾದ್ಯಂತ ಪತ್ರಕರ್ತರು ಇಂದಿಗೂ ಬೆದರಿಕೆಗಳು, ಕಿರುಕುಳ ಮತ್ತು ಜೀವಹಾನಿಯನ್ನು ಎದುರಿಸುತ್ತಲೇ ಇದ್ದಾರೆ ಎಂದರು. ಭಾರತದಲ್ಲಿಯೂ ಸಹ, ಭ್ರಷ್ಟಾಚಾರ, ಪರಿಸರ ಸಮಸ್ಯೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯನ್ನು ವರದಿ ಮಾಡುವ ವರದಿಗಾರರು ಬೆದರಿಕೆ ಅಥವಾ ಹಿಂಸೆಯನ್ನು ಎದುರಿಸಿದ ಪ್ರಕರಣಗಳನ್ನು ನಾವು ನೋಡಿದ್ದೇವೆ. ವಾಕ್ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಧೃಢವಾಗಿ ನಿಂತ ಗೌರಿ ಲಂಕೇಶ್ರಂತಹ…
ಬೆಂಗಳೂರು: ಬೆಳಗಾವಿಯ ಸೈದಾಪುರದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ ಕಬ್ಬು ತುಂಬಿದ್ದಂತ 100ಕ್ಕೂ ಹೆಚ್ಚು ಟ್ರ್ಯಾಕ್ಟರ್ ಟ್ರಾಲಿಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಘಟನೆಯ ಬಗ್ಗೆ ತೀವ್ರ ಖೇದ ವ್ಯಕ್ತ ಪಡಿಸಿರುವಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತಂತೆ ಬೆಳಗಾವಿಯ ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ಅವರಿಗೆ ದೂರವಾಣಿ ಕರೆ ಮಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು. ಜೊತೆಗೆ ಅಧಿಕಾರಿಗಳೊಂದಿಗೂ ಮಾತನಾಡಿದಂತ ಅವರು, ಅವರಿಂದಲೂ ಮಾಹಿತಿಯನ್ನು ಪಡೆದರು. ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ರೈತರು ತಮ್ಮ ಟ್ರ್ಯಾಕ್ಟರ್ ಗಳನ್ನೇ ಸುಡ್ತಾರಾ? ಸರ್ಕಾರ ಏನ್ಮಾಡಬೇಕು ಎಲ್ಲ ಮಾಡಿದೆ. ಯಾರದ್ದೋ ಮನಸ್ಸಿನಲ್ಲಿ ಅಸೂಯೆ ಇರಬೇಕು ಎಂದರು. ರೈತರಾದವರು ಯಾರೂ ಕೂಡ ಈ ರೀತಿ ಮಾಡುವುದಿಲ್ಲ. ಇತಿಹಾಸದಲ್ಲೇ ಯಾವ ಸರ್ಕಾರ ಕೊಡದ ದರ ನಾವು ಕೊಟ್ಟಿದ್ದೇವೆ. ರಾಜ್ಯದಲ್ಲಿ ಇಡೀ ರೈತ ಸಂಕುಲ ತುಂಬಾ ಸಂತೋಷದಿಂದ ಇದೆ ಎಂದರು. ಜ್ವಲಿಸಿದ ಕಬ್ಬು ಬೆಳೆಗಾರರ ಕಿಚ್ಚು: ಬೆಳಗಾವಿಯಲ್ಲಿ 100ಕ್ಕೂ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ ವ್ಯಾಪ್ತಿಯ ರೈತರಿಗೆ ಮಹತ್ವದ ಸೂಚನೆಯನ್ನು ಪೊಲೀಸರು ನೀಡಿದ್ದಾರೆ. ಪೊಲೀಸರ ಸೂಚನೆಯನ್ನು ಅನುಸರಿಸಿ ರೈತರು ಕಾರ್ಯಪ್ರವೃತ್ತರಾಗುವಂತೆ ಮನವಿ ಮಾಡಲಾಗಿದೆ. ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸಾಗರದ ಆನಂದಪುರ ಠಾಣೆಯ PSI ಪ್ರವೀಣ್ ಎಸ್.ಪಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ತಮ್ಮ ಬೆಳೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಈ ಕೆಳಕಂಡಂತೆ ಕ್ರಮವಹಿಸಲು ಸೂಚಿಸಿದ್ದಾರೆ. * ಅಡಿಕೆ/ಶುಂಠಿ ಕೊಯ್ದು ಒಣಗಿಸುವ ರೈತಾಪಿ ಕೆಲಸ ಠಾಣಾ ವ್ಯಾಪ್ತಿಯಲ್ಲಿ ಚಾಲನೆಯಲ್ಲಿರುವುದರಿಂದ ಹೆಚ್ಚಾಗಿ ಅಡಿಕೆ/ಶುಂಠಿ ಒಣಗಿಸುವ ಕಣಗಳ ಬಳಿ CCTV ಕಣ್ಗಾವಲು ಅಳವಡಿಸಲು ಕೋರಿದ್ದಾರೆ. * ಅಡಿಕೆ/ಶುಂಠಿ ಒಣಗಿಸುವ ಸ್ಥಳದಲ್ಲಿ ಉತ್ತಮ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದ್ದಾರೆ. * ಅಡಿಕೆ/ಶುಂಠಿಯ ವ್ಯಾಪಾರ/ಖೇಣಿ ಪದ್ಧತಿಯು ಹೆಚ್ಚಾಗಿ ನಂಬಿಕೆ ಆಧಾರದ ಮೇಲೆ ನಡೆಯುತ್ತಿದ್ದು ಹಲವಾರು ರೈತರು ಮೋಸ ಹೋದಂತ ಘಟನೆಗಳು ನಡೆಯುತಿದ್ದು, ಸಮರ್ಪಕ ದಾಖಲಾತಿಗಳೊಂದಿಗೆ ವ್ಯವಹಾರ ನಡೆಸಲು ಕೋರಿದ್ದಾರೆ. * ಸಂಪೂರ್ಣ ಪರಿಚಯವಿಲ್ಲದ ಹೊರ ಸ್ಥಳದ ವ್ಯಕ್ತಿಗಳೊಂದಿಗೆ ವ್ಯವಹಾರ ಮಾಡುವಾಗ ಜಾಗರೂಕತೆಯಿಂದ ವ್ಯವಹರಿಸಿ, ಸಮರ್ಪಕ…
ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಆಕ್ರೋಶದ ಕಿಚ್ಚು ಜ್ವಲಿಸಿದೆ. ರೂ.3,500 ಪ್ರತಿ ಟನ್ ಕಬ್ಬಿಗೆ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಡೆಸುತ್ತಿದ್ದಂತ ಹೋರಾಟ ತೀವ್ರ ಸ್ವರೂಪಕ್ಕೆ ತಿರುಗಿದೆ. ಸಕ್ಕರೆ ಕಾರ್ಖಾನೆಯ ಮುಂದೆ ನಿಲ್ಲಿಸಿದ್ದಂತ ಬೈಕ್, ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಟ್ರಾಲಿ ಸೇರಿದಂತೆ 100ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಮುಧೋಳದ ಸೈದಾಪುರದಲ್ಲಿ ಕಬ್ಬು ಬೆಳೆಗಾರರ ಆಕ್ರೋಶವು ಕಟ್ಟೆ ಹೊಡೆದಿದೆ. ಸೈದಾಪುರದ ಸಕ್ಕರೆ ಕಾರ್ಖಾನೆಯ ಬಳಿಯಲ್ಲಿ ನಿಲ್ಲಿಸಿದ್ದಂತ ವಾಹನಗಳಿಗೆ ಪ್ರತಿಭಟನಾ ನಿರತ ರೈತರು ಬೆಂಕಿ ಹಚ್ಚಿದ್ದಾರೆ. ಬೈಕ್, ಟ್ರ್ಯಾಕ್ಟರ್ ಗೆ ಇಟ್ಟಂತ ಬೆಂಕಿಯು ಕ್ಷಣಾರ್ಥದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ ಟ್ರ್ಯಾಕ್ಟರ್ ಟ್ರಾಲಿಗಳಿಗೆ ತಗುಲಿದ ಪರಿಣಾಮ ಧಗಧಗಿಸಿ ಹೊತ್ತಿ ಉರಿಯುತ್ತಿವೆ. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ತಾಗುವಂತೆ ಉರಿಯುತ್ತಿದ್ದು, 100ಕ್ಕೂ ಹೆಚ್ಚು ಟ್ರಾಲಿಗಳು ಬೆಂಕಿಗೆ ಆಹುತಿಯಾಗಿವೆ. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. https://kannadanewsnow.com/kannada/good-news-for-those-who-applied-for-bed-studies-another-opportunity-for-document-verification/ https://kannadanewsnow.com/kannada/good-news-good-news-for-employees-epfos-important-decision-now-automatic-transfer-of-pf-money-to-new-account/
ನಿಮ್ಮ ಮನೆಯ ಪೂಜಾ ಕೋಣೆಯಲ್ಲಿ ಪ್ರತಿದಿನ ಈ ಒಂದು ಮಂತ್ರವನ್ನು ಸರಳವಾಗಿ ಪಠಿಸಿ. ನಿಮ್ಮ ಮನೆಯನ್ನು ಕಾಡುವ ಎಲ್ಲಾ ಸಮಸ್ಯೆಗಳು ಹಾರಿಹೋಗುತ್ತವೆ. ನಾವು ನಮ್ಮ ಮನೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತೇವೆ. ನಾವು ವಾಸಿಸುವ ಮನೆಯಲ್ಲಿ ಅಹಿತಕರ ವಾತಾವರಣವಿದ್ದರೆ, ನಾವು ಏನನ್ನೂ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಮನೆಗಳಲ್ಲಿ ಇಂತಹ ಅಹಿತಕರ ವಾತಾವರಣದಿಂದ ಕುಟುಂಬದಲ್ಲಿ ಅನಾವಶ್ಯಕ ಕಲಹಗಳು ಉಂಟಾಗುವುದು, ಆ ಮನೆಗಳ ನಿವಾಸಿಗಳಿಗೆ ಮಾನಸಿಕ ಚಡಪಡಿಕೆ, ಆರ್ಥಿಕ ಸಂಕಷ್ಟ ಇತ್ಯಾದಿಗಳು ಉಂಟಾಗಬಹುದು. ಈ ಗಾಯತ್ರಿ ಮಂತ್ರಕ್ಕೆ ಮೇಲಿನ ತೊಂದರೆಗಳು ಬರದಂತೆ ತಡೆಯುವ ಶಕ್ತಿ ಇದೆ. ಆ ಮ್ಯಾಜಿಕ್ ಏನು ? ಆ ಮಂತ್ರವನ್ನು ಸರಿಯಾಗಿ ಉಚ್ಚರಿಸುವುದು ಹೇಗೆ? ಇಲ್ಲಿ ನಾವು ಅದರ ಬಗ್ಗೆ ತಿಳಿಯಬಹುದು. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ನಂ 1ವಶೀಕರಣ ಸ್ಪೆಷಲಿಸ್ಟ್ ಒಂದು ಕರೆಯಲ್ಲಿ ಪರಿಹಾರ ತಿಳಿಸುತ್ತಾರೆ ತಾವು ಎಷ್ಟೋ ಜ್ಯೋತಿಷ್ಯರಲ್ಲಿ ಕೇಳಿಯು ಪರಿಹಾರ ಸಿಗದೇ ಮನನೊಂದಿದ್ದರೆ…
ಬೆಂಗಳೂರು: ರಾಜ್ಯದ ವಿವಿಧ ಕಾರ್ಮಿಕ ಕಾಯ್ದೆಗಳ ಅಡಿ ನೋಂದಾಯಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಮಹಿಳಾ ಕಾರ್ಮಿಕರಿಗೆ ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ವೇತನ ಸಹಿತ ರಜೆ ನೀಡುವ ಕಲ್ಪಿಸುವ ಸಂಬಂಧ ಸರ್ಕಾರ ಅಧಿಕೃತ ಆದೇಶ ಪ್ರಕಟಸಿದೆ. ಋತುಚಕ್ರ ರಜೆ ನೀತಿ – 2025ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಅಂಕಿತ ದೊರೆತಿತ್ತು. ಮಹಿಳೆಯೆರಿಗೆ ಅನುಕೂಲವಾಗುವ ಹಾಗೂ ಅವರ ಸಬಲೀಕರಣಕ್ಕೆ ಬೆಂಬಲ ನೀಡುವ ಹಲವಾರು ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಇದೀಗ ಇವುಗಳ ಜೊತೆ ಋತುಚಕ್ರ ರಜೆ ಮತ್ತೊಂದು ಸೇರ್ಪಡೆಯಾಗಲಿದೆ. ಹಿನ್ನೆಲೆ: ಈ ಹಿಂದೆ ಕಾರ್ಮಿಕ ಇಲಾಖೆಯು ಮಾಸಿಕ ಋತುಸ್ರಾವದ ರಜೆ ನೀತಿಗಾಗಿ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಆದರೆ ಈ ನೀತಿಯನ್ನು ಸಮಗ್ರವಾಗಿ ಜಾರಿಗೆ ತರಬೇಕು ಎಂದು ಬಯಸಿದ್ದ ಸಚಿವರು, ನಿರಂತರ ಸಭೆ, ಚರ್ಚೆ ಮತ್ತು ಸಂವಾದಗಳಿಗೆ ವೇದಿಕೆ ಒದಗಿಸಿದ್ದರು. ಉದ್ಯೋಗಸ್ಥ ಮಹಿಳೆಯರಿಗೆ ಋತುಚಕ್ರದ ರಜೆ ಸಂಬಂಧ. ಸರ್ಕಾರ ಕ್ರೈಸ್ಟ್ ವಿಶ್ವವಿದ್ಯಾಲಯದ ಕಾನೂನು ವಿಭಾಗದ…
ಬಾಗಲಕೋಟೆ: ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರ ಪ್ರತಿಭಟನೆ ಕಿಚ್ಚು ಸ್ಪೋಟಗೊಂಡಿದೆ. ಟ್ರ್ಯಾಕ್ಟರ್, ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಲಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೆ ರೈತರು ಬೆಂಕಿ ಇಟ್ಟು ಆಕ್ರೋಶವನ್ನು ಹೊರ ಹಾಕಿದ್ದಾರೆ. ಮುಧೋಳದ ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆಯ ಮುಂದೆ ಈ ಘಟನೆ ನಡೆದಿದೆ. ಪ್ರತಿ ಟನ್ ಕಬ್ಬಿಗೆ 3,500 ಘೋಷಿಸುವಂತೆಯೂ ಆಗ್ರಹಿಸುತ್ತಿರುವಂತ ಕಬ್ಬು ಬೆಳೆಗಾರರು, ಮುಧೋಳದ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ನಿಲ್ಲಿಸಿದ್ದಂತ ಟ್ರ್ಯಾಕ್ಟರ್, ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಿದ್ದಾರೆ. ಅಂದಹಾಗೇ ರಾಜ್ಯ ಸರ್ಕಾರವು ಪ್ರತಿ ಟನ್ ಕಬ್ಬಿಗೆ 3,200 ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರಿಗೆ 50 + ಸರ್ಕಾರದಿಂದ 50 ರೂಪಾಯಿ ಸೇರಿದಂತೆ ರೂ.3,300 ನೀಡಲು ನಿರ್ಧರಿಸಿತ್ತು. ಆದರೇ ಕಬ್ಬು ಬೆಳೆಗಾರರರು ರೂ.3,500 ಪ್ರತಿ ಟನ್ ಕಬ್ಬಿಗೆ ನೀಡುವಂತೆ ಒತ್ತಾಯಿಸಿ…
ಮುಧೋಳ: ಕಬ್ಬಿನ ಬಾಕಿ ಬಿಲ್ ಪಾವತಿಗೆ ರೈತರ ಪ್ರತಿಭಟನೆ ಕಿಚ್ಚು ಸ್ಪೋಟಗೊಂಡಿದೆ. ಟ್ರ್ಯಾಕ್ಟರ್, ಬೈಕ್ ಸೇರಿದಂತೆ 20ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶವನ್ನು ಹೊರ ಹಾಕಲಾಗಿದೆ. ಮುಧೋಳದಲ್ಲಿ ಸಕ್ಕರೆ ಕಾರ್ಖಾನೆ ಮುಂದೆ ನಿಲ್ಲಿಸಿದ್ದಂತ 20ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಿಗೆ ರೈತರು ಬೆಂಕಿ ಇಟ್ಟು ಆಕ್ರೋಶವನ್ನು ಹೊರ ಹಾಕಿದ್ದಾರೆ. ಮುಧೋಳದ ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆಯ ಮುಂದೆ ಈ ಘಟನೆ ನಡೆದಿದೆ.
ನವದೆಹಲಿ: ದೆಹಲಿ ಸ್ಫೋಟದ ತನಿಖೆ ಗುರುವಾರ ಹೊಸ ತಿರುವು ಪಡೆದುಕೊಂಡಿದ್ದು, ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮೂರನೇ ಕಾರನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ದಾಳಿಗಳಲ್ಲಿ ಸಾವಿರಾರು ಕಿಲೋಗ್ರಾಂಗಳಷ್ಟು ಸ್ಫೋಟಕಗಳು, ಡಿಟೋನೇಟರ್ಗಳು, ಟೈಮರ್ಗಳು ಮತ್ತು ಇತರ ಬಾಂಬ್ ತಯಾರಿಸುವ ಉಪಕರಣಗಳನ್ನು ವಶಪಡಿಸಿಕೊಂಡ ವೈದ್ಯರು, ಧರ್ಮಗುರುಗಳು ಮತ್ತು ಉದ್ಯಮಿಗಳನ್ನು ಒಳಗೊಂಡ “ರಾಷ್ಟ್ರೀಯ, ಬಿಳಿ ಕಾಲರ್ ಭಯೋತ್ಪಾದಕ ಮಾಡ್ಯೂಲ್” ಅನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಪ್ರಾಥಮಿಕ ತನಿಖೆಯ ಪ್ರಕಾರ, ಭಯೋತ್ಪಾದಕರು ಬಹು ನಗರಗಳಲ್ಲಿ ಸಂಘಟಿತ ಸ್ಫೋಟಗಳ ಸರಣಿಯನ್ನು ನಡೆಸಲು 32 ವಾಹನಗಳಲ್ಲಿ ಸ್ಫೋಟಕಗಳನ್ನು ತುಂಬಲು ಯೋಜಿಸಿದ್ದರು. https://twitter.com/ANI/status/1988667025250832539 ವರದಿಗಳ ಪ್ರಕಾರ, ಅಧಿಕಾರಿಗಳು ಈಗ ಫರಿದಾಬಾದ್ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಕ್ಯಾಂಪಸ್ನಿಂದ ಮಾರುತಿ ಸುಜುಕಿ ಬ್ರೆಝಾವನ್ನು ವಶಪಡಿಸಿಕೊಂಡಿದ್ದಾರೆ. ಈ ವಾಹನವನ್ನು ಪ್ರಮುಖ ಆರೋಪಿ ಮತ್ತು ವಿಶ್ವವಿದ್ಯಾಲಯದ ಅಧ್ಯಾಪಕ ಡಾ. ಶಾಹೀನ್ ಶಾಹಿದ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಉಮರ್ ನಬಿ ಮತ್ತು ಅವರ ಸಹಚರರು ಸ್ಫೋಟಕಗಳನ್ನು ಅಳವಡಿಸಿದ ಬಹು ವಾಹನಗಳು ಮತ್ತು ಅಸಾಲ್ಟ್ ರೈಫಲ್ ಗುಂಡಿನ ದಾಳಿಯನ್ನು ಒಳಗೊಂಡ “ಅದ್ಭುತ ಭಯೋತ್ಪಾದಕ ದಾಳಿ”ಯನ್ನು ಯೋಜಿಸಿದ್ದಾರೆ ಎಂದು…
ಬೆಂಗಳೂರು: ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನ ಸೇರಿದಂತೆ ಮಹತ್ವದ ವಿಚಾರಗಳನ್ನು ಚರ್ಚಿಸಲಾಯಿತು. ಆ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದಿನ ರಾಜ್ಯ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್ ಕೆ ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಇಂದಿನ ಸಂಪುಟ ಸಭೆಯಲ್ಲಿ 18 ವಿಚಾರಗಳ ಬಗ್ಗೆ ಚರ್ಚೆಯಾಯ್ತು. ಒಟ್ಟಾರೆ 20 ವಿಚಾರಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಯ್ತು. ಮೇಕೆದಾಟು ಯೋಜನೆ ಅನುಷ್ಠಾನದ ವಿಚಾರಕ್ಕೆ ತಮಿಳು ನಾಡು ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಂಡಿದೆ. ಇದು ಈ ಯೋಜನೆ ವಿಚಾರ ದಲ್ಲಿ ನಮ್ಮ ಮುಂದಿನ ಹೆಜ್ಜೆ ಇಡಲು ಹಸಿರು ನಿಶಾನೆ ಸಿಕ್ಕಂತಾಗಿದೆ. ಈ ಸಂತೋಷಕ್ಕೆ ಸಂಪುಟ ಸಿಎಂ ಹಾಗೂ ಡಿಸಿಎಂ ಅವರನ್ನ ಅಭಿನಂದಿಸಿತು. ಬೆಳಗಾವಿ ಚಳಿಗಾಲದ ಅಧಿವೇಶನ ಡಿಸೆಂಬರ್ 8 ರಿಂದ 19 ರವರೆಗೆ ನಡೆಯಲಿದೆ ಎಂದರು. ಸಚಿವ ಸಂಪುಟದ ಮೂರು ಉಪಸಮಿತಿಗಳು ( 1.ಕುನ್ಹಾ ಸಮಿತಿ,ಕೋವಿಡ್ , 2. ರಾಜ್ಯದ ವಿವಿಗಳ ಆರ್ಥಿಕ ಪರಿಸ್ಥಿತಿ ಪರಾಮರ್ಶೆ…













