Author: kannadanewsnow09

ಬೆಂಗಳೂರು: ನಗರದಲ್ಲಿ ಭೀಕರ ರಸ್ತೆ ಅಪಘಾತ ಉಂಟಾಗಿದೆ. ಏರ್ ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿಯಲ್ಲಿ ಬೈಕಿನಿಂದ ಸ್ಕಿಡ್ ಆಗಿ ಬಿದ್ದಂತ ಮಹಿಳೆಯ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಕೋಗಿಲು ಕ್ರಾಸ್ ಬಳಿಯಲ್ಲಿ ಬೈಕ್ ನಲ್ಲಿ ಪತಿ, ಮಕ್ಕಳ ಜೊತೆಗೆ ಮಹಿಳೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಬೈಕ್ ಪಂಕ್ಚರ್ ಆಗಿ ಸ್ಕಿಡ್ ಆಗಿ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ಬೈಕಿನಿಂದ ಪತಿ, ಮಹಿಳೆ, ಮಗು ಕೆಳಗೆ ಬಿದ್ದಿದ್ದಾರೆ. ಬೈಕಿನ ಹಿಂದಿನಿಂದ ಬರುತ್ತಿದ್ದಂತ ಸಿಮೆಂಟ್ ಲಾರಿಯೊಂದು ಬೈಕಿನಿಂದ ಕೆಳಗೆ ಬಿದ್ದಂತ ಮಹಿಳೆಯ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಯಲಹಂಕ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/i-will-surrender-before-the-peoples-representatives-court-in-bengaluru-former-minister-vinay-kulkarni/ https://kannadanewsnow.com/kannada/rt-pcr-test-made-mandatory-for-ministers-before-meeting-pm-modi-amid-covid-19-surge-report/

Read More

ಧಾರವಾಡ: ಬಿಜೆಪಿಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕೋರ್ಟ್ ನೀಡಿರುವಂತ ಆದೇಶಕ್ಕೆ ತಲೆಬಾಗುತ್ತೇನೆ. ಕೋರ್ಟ್ ಆದೇಶದ ಕಾರಣದಿಂದ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಮುಂದೆ ಶರಣಾಗುವುದಾಗಿ ಮಾಜಿ ಸಚಿವ ವಿನಯ್ ಕುಲಕರ್ಣಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನನ್ನ ವಿರುದ್ಧ ಹುನ್ನಾರ ನಡೆದಿದೆ. ನಾನು ಈಗ ಅಸಹಾಯಕ ಸ್ಥಿತಿಯಲ್ಲಿ ಇದ್ದೇನೆ. ಆದರೇ ಸತ್ಯಕ್ಕೆ ಎಂದಿಗೂ ಜಯವಿದೆ. ಸತ್ಯಕ್ಕೆ ಜಯ ಸಿಗುತ್ತದೆ ಎನ್ನುವ ನಂಬಿಕೆ ನನಗಿದೆ ಎಂದರು. ನನ್ನ ಕ್ಷೇತ್ರದಲ್ಲಿ ನಾನು ಇಲ್ಲದೇ ಇದ್ದರೂ ನನ್ನ ಪತ್ನಿ, ಪಕ್ಷದ ಮುಖಂಡರು ಜನರ ಸಂಕಷ್ಟಗಳಿಗೆ ಸ್ಪಂದಿಸುವಂತ ಕೆಲಸ ಮಾಡುತ್ತಿದ್ದಾರೆ. ನಾನು ಕ್ಷೇತ್ರದ ಜನರ ಸಂಕಷ್ಟ ಪರಿಹಾರಕ್ಕಾಗಿ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸೂಚಿಸಿರುವುದಾಗಿ ಹೇಳಿದರು. ಅಂದಹಾಗೇ ಶಾಸಕ ವಿನಯ್ ಕುಲಕರ್ಣಿಗೆ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನೀಡಿದ್ದಂತ ಜಾಮೀನನ್ನು ಸುಪ್ರೀಂ ಕೋರ್ಟ್ ಜೂನ್.6ರಂದು ರದ್ದುಪಡಿಸಲಾಗಿತ್ತು. ಅಲ್ಲದೇ ಒಂದು ವಾರದಲ್ಲಿ ವಿಚಾರಣಾ ಕೋರ್ಟ್ ಮುಂದೆ ಶರಣಾಗುವಂತೆಯೂ ಆದೇಶ ಮಾಡಿತ್ತು. ಹೀಗಾಗಿ ಶಾಸಕ…

Read More

ನವದೆಹಲಿ: ಬುಧವಾರ ಸೋನಮ್ ರಘುವಂಶಿ ಅವರು ತಮ್ಮ ಪತಿ ರಾಜಾ ರಘುವಂಶಿ ಹತ್ಯೆಯಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ವಿಚಾರಣೆಯ ಸಂದರ್ಭದಲ್ಲಿ ಸೋನಮ್ ಈ ತಪ್ಪೊಪ್ಪಿಕೊಂಡಿದ್ದಾರೆ. ಅಧಿಕಾರಿಗಳು ಈಗ ಸಿಆರ್‌ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಅವರ ಔಪಚಾರಿಕ ಹೇಳಿಕೆಯನ್ನು ದಾಖಲಿಸಲು ಯೋಜಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ಪೊಲೀಸರು ಆಕೆಯ ತಪ್ಪೊಪ್ಪಿಗೆಯನ್ನು ವೀಡಿಯೊ ಚಿತ್ರೀಕರಣ ಮಾಡಲು ಸಹ ಸಿದ್ಧತೆ ನಡೆಸುತ್ತಿದ್ದರು, ಇದು ಮುಂದೆ ಪ್ರಾಸಿಕ್ಯೂಷನ್ ಪ್ರಕರಣದಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದು. ರಾಜಾ ರಘುವಂಶಿ ಕೊಲೆ ಪ್ರಕರಣದ ಇತರ ಆರೋಪಿಗಳೊಂದಿಗೆ ಸೋನಮ್ ರಘುವಂಶಿಯನ್ನು ಬುಧವಾರ ಶಿಲ್ಲಾಂಗ್‌ನ ಸದರ್ ಪೊಲೀಸ್ ಠಾಣೆಯಲ್ಲಿ ಮೇಘಾಲಯ ಪೊಲೀಸ್ ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿತು. ಐವರು ಆರೋಪಿಗಳನ್ನು ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. https://kannadanewsnow.com/kannada/good-news-for-the-states-farmers-cm-launches-kusum-c-project-henceforth-electricity-will-be-supplied-even-during-the-day/ https://kannadanewsnow.com/kannada/rt-pcr-test-made-mandatory-for-ministers-before-meeting-pm-modi-amid-covid-19-surge-report/

Read More

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡ ಜನಾಂಗದ ಮಕ್ಕಳ ಹಣವನ್ನು ರಾಜಕಾರಣಕ್ಕೆ ಬಳಸಿಕೊಂಡವರಿಗೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅದೇ ಹಣದಲ್ಲಿ ಇವತ್ತು ಸಂಸದರು ಮತ್ತು ವಿಧಾನಸಭಾ ಸದಸ್ಯರಾಗಿರಬಹುದು. ಆದರೆ ಈ ನಾಡಿನ ಜನ ಎಲ್ಲವನ್ನು ನೋಡುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ತಿಳಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ಸಂಸದ ತುಕಾರಾಮ್, ಬಳ್ಳಾರಿ ನಗರ ಶಾಸಕ ನಾರ ಭರತ್ ರೆಡ್ಡಿ, ಕೂಡ್ಲಿಗಿ ಶಾಸಕ ಡಾ. ಶ್ರೀನಿವಾಸ್ ಮ್ತತು ಕಂಪ್ಲಿ ಶಾಸಕ ಗಣೇಶ್ ಇವರೆಲ್ಲರ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ದಾಳಿ ಆಗುತ್ತಿದೆ. ಈ ನಾಯಕರು ಬಹಳಷ್ಟು ಸಾಚಾವೆಂದು ಮತನಾಡುತ್ತಿದ್ದರು. ಇವರೆಲ್ಲ ಮಾಡುವುದೆಲ್ಲ ಅನಾಚಾರ; ಮನೆಮುಂದೆ ಬೃಂದಾವನ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು. ಬಹಳಷ್ಟು ಜನರು ಇವರನ್ನು ಸಾಚಾಗಳು; ಮಾತನಾಡುವ ರೀತಿ ನಡೆದುಕೊಳ್ಳತ್ತಾರೆ ಎಂದು…

Read More

ಬೆಂಗಳೂರು: ನೈಋತ್ಯ ರೈಲ್ವೆಯು ಮೇ 2025 ರಲ್ಲಿ ಪ್ರಯಾಣಿಕರ ಸೇವೆ, ಡಿಜಿಟಲ್ ನವೀನತೆ ಮತ್ತು ಆದಾಯದಲ್ಲಿ ಪ್ರಗತಿಯನ್ನು ದಾಖಲಿಸಿದ್ದು, ಗಮನಾರ್ಹ ಸಾಧನೆಗಳೊಂದಿಗೆ ಹರ್ಷ ವ್ಯಕ್ತ ಪಡಿಸಿದೆ. ಈ ಕುರಿತಂತೆ ಹುಬ್ಬಳ್ಳಿಯ ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರ ಸೌಲಭ್ಯಗಳಲ್ಲಿ ಸುಧಾರಣೆ: ಹುಬ್ಬಳ್ಳಿ ವಿಭಾಗದಲ್ಲಿ ಹೊಸ “ಮಾರ್ಗದರ್ಶಕ್ ಡಿಜಿಟಲ್ ನಕ್ಷೆ ಮತ್ತು ಸಂಚರಣೆ ವ್ಯವಸ್ಥೆ” ಪರಿಚಯಿಸಲಾಗಿದೆ. ಹುಬ್ಬಳ್ಳಿ (2) ಮತ್ತು ಮೈಸೂರು (4) ನಿಲ್ದಾಣಗಳಲ್ಲಿ ಒಟ್ಟು ಆರು ಹೊಸ ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳನ್ನು (ATVM) ಸ್ಥಾಪಿಸಲಾಗಿದೆ. ಪಾರ್ಕಿಂಗ್ ಮತ್ತು ರೇಡಿಯೋ ಟ್ಯಾಕ್ಸಿಗಳ ಸೇವೆಗಾಗಿ ಹೊಸ ಒಪ್ಪಂದಗಳನ್ನು ಕೈಗೊಳ್ಳಲಾಯಿತು: ಎಸ್‌ಎಂವಿಬಿಯಲ್ಲಿ ಪ್ರವೇಶ ನಿಯಂತ್ರಿತ ಪಾರ್ಕಿಂಗ್ ಸೇವೆಗೆ ₹69.40 ಲಕ್ಷ ಮತ್ತು ಹುಬ್ಬಳ್ಳಿಯಲ್ಲಿ ₹56.00 ಲಕ್ಷಗಳ ಒಪ್ಪಂದಗಳನ್ನು ಮಾಡಲಾಯಿತು. ಮೈಸೂರಿನಲ್ಲಿ ಮೊಬೈಲ್ ಪರಿಕರಗಳ ಕಿಯೋಸ್ಕ್‌ಗೆ ₹30.90 ಲಕ್ಷ ಮತ್ತು ಕೆಎಸ್‌ಆರ್ ಬೆಂಗಳೂರು ನಗರದಲ್ಲಿ ಹವಾನಿಯಂತ್ರಿತ ಮಲ್ಟಿಕ್ಯೂಸಿನ್ ಕೋಚ್ ರೆಸ್ಟೋರೆಂಟ್‌ಗೆ ₹215.46 ಲಕ್ಷಗಳ…

Read More

ಕೇರಳದಲ್ಲಿ ಜ್ಯೋತಿಷವಿಭಾಗದ ಬಹುದೊಡ್ಡ ಸಂಘಟನೆಯಾದ ಕೇರಳ ಜ್ಯೋತಿಷ ಪರಿಷತ್ತಿನ 2025 ನೇ ಸಾಲಿನ “ದೈವಜ್ಞ ಪುರಸ್ಕಾರ”ವು ಜ್ಯೋತಿಷರತ್ನ ಬೇಳ ಶ್ರೀ ಪದ್ಮನಾಭ ಶರ್ಮಾ ಅವರಿಗೆ ನೀಡಲಾಗುತ್ತಿದೆ. 17/5/2025ರಂದು ತ್ರಿಶೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಹಲವು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು. ಕಾಸರಗೋಡಿನ ಬೇಳದವರಾದ ಶ್ರೀಯುತರು ಪ್ರಸ್ತುತ ತ್ರಿಶೂರಿನ ಸಮೀಪದ ಇರಿಂಜಾಲಕ್ಕುಡದಲ್ಲಿ ನೆಲೆಸಿದ್ದಾರೆ. https://youtu.be/5NzsEehoEi4 ಸಿದ್ಧ ಜ್ಯೋತಿಷಿಗಳಾದ ಕೈಮುಕ್ಕು ವೈದಿಕನ್ ಶ್ರೀ ಪರಮೇಶ್ವರನ್ ನಂಬೂದಿರಿಯವರ ಪ್ರಧಾನ ಶಿಷ್ಯರಾದ, ಲೋಕವಿಶ್ರುತರಾದ ಶ್ರೀ ಶರ್ಮರು ಫಲಜ್ಯೋತಿಷ, ಅಷ್ಟಮಂಗಲಪ್ರಶ್ನೆಯ ವಿಭಾಗದಲ್ಲಿ ಈ ಕಾಲದ ಅದ್ವಿತೀಯರಾಗಿದ್ದಾರೆ. ಗುರುವಾಯೂರು, ತಿರುವನಂತಪುರ , ಶಬರಿಮಲೆ, ಏಟ್ಟುಮಾನೂರು, ಕೊಲ್ಲೂರು, ಸಾಲಿಗ್ರಾಮ, ಉಡುಪಿ, ಕಟೀಲು, ಪೊಳಲಿ , ಶ್ರೀರಂಗ, ಕಾಶಿ, ಪ್ರಯಾಗ ,ತಿರುಪತಿ, ಶ್ರೀಲಂಕಾದ ಕಡಿರುಗಾಮ, ಮಸ್ಕತ್ತಿನ ಮೋತೀಶ್ವರ್ ಮಹಾದೇವ್, ಮೈಸೂರು ಚಾಮುಂಡೇಶ್ವರಿ, ನಂಜನಗೂಡು ಮುಂತಾದ ಹಲವಾರು ಮಹಾಕ್ಷೇತ್ರಗಳಲ್ಲಿ ಅಷ್ಟಮಂಗಲಪ್ರಶ್ನೆಯನ್ನು ಯಶಸ್ವಿಯಾಗಿ ನೆರವೇರಿಸಿದ ಗರಿಮೆ ಇವರದು. ಕಾಂಚಿ ಶ್ರೀಗಳಿಂದ ಜ್ಯೋತಿಷರತ್ನ ಬಿರುದು , ಉಡುಪಿಯಲ್ಲಿ ಹೋರಾ ಧೌರೇಯ ಬಿರುದು, ಪ್ರಶ್ನಮಾರ್ಗಾಚಾರ್ಯ ಪ್ರಶಸ್ತಿ , ಕೇರಳ ತಂತ್ರ ವಿದ್ಯಾಪೀಠದ…

Read More

ಮೈಸೂರು: ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸಂತ ಆಂಟನಿಯಸ್ ಬಾಸಿಲಿಕದ ವಾರ್ಷಿಕ ಹಬ್ಬದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನುಕೂಲವಾಗುವಂತೆ ಡೋರ್ನಹಳ್ಳಿ ರೈಲು ನಿಲ್ದಾಣದಲ್ಲಿ ಆಯ್ದ ರೈಲುಗಳ ತಾತ್ಕಾಲಿಕ ನಿಲುಗಡೆಗೆ ಅನುಮೋದನೆ ನೀಡಲಾಗಿದೆ. ಈ ತಾತ್ಕಾಲಿಕ ನಿಲ್ದಾಣಗಳು 11.06.2025 ರಿಂದ 14.06.2025 ರವರೆಗೆ ನಾಲ್ಕು ದಿನಗಳ ಕಾಲ ಇರುತ್ತವೆ. ರೈಲು ನಿಲ್ದಾಣಗಳ ವಿವರಗಳು ಈ ಕೆಳಗಿನಂತಿವೆ: ರೈಲು ಸಂಖ್ಯೆ. 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಬೆಳಿಗ್ಗೆ 10:43 / 10:44 ಗಂಟೆ. ರೈಲು ಸಂಖ್ಯೆ.16226 ಶಿವಮೊಗ್ಗ ಟೌನ್ – ಮೈಸೂರು ಎಕ್ಸ್‌ಪ್ರೆಸ್ ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಮಧ್ಯಾಹ್ನ 15:49 / 15:50 ಗಂಟೆ. ರೈಲು ಸಂಖ್ಯೆ. 16222 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್ ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಮಧ್ಯಾಹ್ನ 14:35 / 14:36 ಗಂಟೆ. ರೈಲು ಸಂಖ್ಯೆ. 16221 ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್ ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಮಧ್ಯಾಹ್ನ 14:20 / 14:21 ಗಂಟೆ. https://kannadanewsnow.com/kannada/soon-a-new-kilometer-based-toll-tax-policy-will-be-implemented-in-india/ https://kannadanewsnow.com/kannada/rt-pcr-test-made-mandatory-for-ministers-before-meeting-pm-modi-amid-covid-19-surge-report/

Read More

ನವದೆಹಲಿ: ಭಾರತ ಸರ್ಕಾರವು ಭಾರತದಲ್ಲಿ ಹೊಸ ಟೋಲ್ ನೀತಿಯನ್ನು ಪರಿಚಯಿಸಲು ಯೋಜಿಸುತ್ತಿದೆ. ಹೀಗಾಗಿ ಶೀಘ್ರದಲ್ಲೇ ಭಾರತದಲ್ಲಿ ಕಿಲೋಮೀಟರ್ ಆಧಾರಿತ ಹೊಸ ಟೋಲ್ ತೆರಿಗೆ ನೀತಿ ಜಾರಿಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಈ ನೀತಿಯಡಿಯಲ್ಲಿ, ಪ್ರತಿ ಟೋಲ್ ಬೂತ್‌ನಲ್ಲಿ ಫಾಸ್ಟ್‌ಟ್ಯಾಗ್‌ಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಅಲ್ಲದೇ ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ನೇರವಾಗಿ ಟೋಲ್‌ಗಳನ್ನು ಸಂಗ್ರಹಿಸಲಾಗುವುದು. ದೇಶಾದ್ಯಂತ ಎಕ್ಸ್‌ಪ್ರೆಸ್‌ವೇಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ಜನರಿಗೆ ಪರಿಹಾರವನ್ನು ಒದಗಿಸಲು ಈ ನೀತಿಯನ್ನು ವಿನ್ಯಾಸಗೊಳಿಸಲಾಗಿದೆ. ಟೋಲ್ ಬೂತ್‌ಗಳಲ್ಲಿ ಅಳವಡಿಸಲಾದ ಕ್ಯಾಮೆರಾಗಳು ವಾಹನಗಳ ನಂಬರ್ ಪ್ಲೇಟ್ ಅನ್ನು ಲಾಗ್ ಮಾಡುತ್ತವೆ ಮತ್ತು FASTag-ಲಿಂಕ್ ಮಾಡಲಾದ ಬ್ಯಾಂಕ್‌ಗಳಿಂದ ಟೋಲ್ ಅನ್ನು ಕಡಿತಗೊಳಿಸಲಾಗುತ್ತದೆ. ಪ್ರಯಾಣಿಸಿದ ಕಿಲೋಮೀಟರ್‌ಗಳ ಸಂಖ್ಯೆಗೆ ಅನುಗುಣವಾಗಿ ಟೋಲ್ ಅನ್ನು ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬಳಕೆದಾರರ ಬ್ಯಾಂಕ್ ಕಡಿಮೆ ಬ್ಯಾಲೆನ್ಸ್ ಹೊಂದಿದ್ದರೆ, ನಂತರ ದಂಡ ವಿಧಿಸಬಹುದು. ಅಲ್ಲದೆ, ಪ್ರಸ್ತುತ ನೀತಿಯ ಪ್ರಕಾರ, ಬಳಕೆದಾರರು ಕನಿಷ್ಠ 60 ಕಿಲೋಮೀಟರ್‌ಗಳಿಗೆ ಟೋಲ್ ಪಾವತಿಸಬೇಕಾಗುತ್ತದೆ. ಹೊಸ ನೀತಿಯು ಕಿಲೋಮೀಟರ್ ಆಧಾರಿತವಾಗಿರುವುದರಿಂದ,…

Read More

ಬೆಂಗಳೂರು: ಮಾರಣಾಂತಿಕ ರಕ್ತದ ಕ್ಯಾನ್ಸರ್‌ಗೆ ತುತ್ತಾಗಿದ್ದ 3 ವರ್ಷದ ಪುಟ್ಟ ಬಾಲಕಿಗೆ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್‌ ಆಸ್ಪತ್ರೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದು, ಮಗುವು ಅಪಾಯದಿಂದ ಪಾರಾಗಿದೆ. ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿ ಮತ್ತು ಹೆಮಟೊ-ಆಂಕೊಲಾಜಿಯ ಪ್ರಧಾನ ನಿರ್ದೇಶಕಿ ಡಾ. ನಿತಿ ರೈಜಾದಾ, 3 ವರ್ಷದರಿಯಾ ಎಂಬ ಹೆಣ್ಣು ಮಗು ಪ್ರಿ-ಬಿ ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ (ALL) ಅಪಾಯಕಾರಿ ಕ್ಯಾನ್ಸರ್‌ಗೆ ತುತ್ತಾಗಿತ್ತು. ಎಂದಿನಂತೆಯೇ ಆಟವಾಡುತ್ತಿದ್ದ ಮಗುವಿನ ದೇಹದಲ್ಲಿ ಕ್ಯಾನ್ಸರ್‌ನ ಗುಣಲಕ್ಷಣ ಕಂಡು ಬಂದಿದೆ. ನಿರಂತರ ಜ್ವರ, ಮುಖ ಊದುವುದು, ಊಟ ಸೇರದೇ ಇರುವುದು, ಮೂತ್ರ ಉತ್ಪಾದನೆಯಾಗದೇ ಇರುವುದು ಸೇರಿದಂತೆ ಅನೇಕ ಲಕ್ಷಣದಿಂದ ಬಳಲುತ್ತಿತ್ತು. ಪ್ರಾರಂಭದಲ್ಲಿ ಸಣ್ಣ ಸಮಸ್ಯೆಯಂತೆ ಕಂಡರೂ, ನಂತರದಲ್ಲಿ ಮಗು ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಕಾರಣ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಿಸಿದರು. ಇಲ್ಲಿ ಮಗುವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿದ ಬಳಿಕ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಇರುವುದು ಪತ್ತೆ ಹಚ್ಚಿದರು. ಈ ಮಧ್ಯೆ ಮಗುವಿನ ಬಿಳಿರಕ್ತ ಕಣಗಳ ಕುಸಿತ ಹಾಗೂ…

Read More

ದೇವಾಲಯದಲ್ಲಿ ಮನೆಯಲ್ಲಿರುವಂತೆ ಮರದಿಂದಲ್ಲದೆ ಹೊಸಿಲನ್ನು ಕಲ್ಲಿನಿಂದ ನಿರ್ಮಿಸುತ್ತಾರೆ. ಕಲ್ಲು ಪರ್ವತಕ್ಕೆ ಸೇರಿದುದಾಗಿದೆ. ಭದ್ರನೆಂಬ ಋಷಿಯು ಭದ್ರವೆಂಬ ಪರ್ವತವಾಗಿಯೂ, ಹಿಮವಂತ ನೆಂಬ ಭಕ್ತನು ಹಿಮಾಲಯವಾಗಿಯೂ, ನಾರಾಯಣನೆಂಬ ಭಕ್ತನು ನಾರಾಯಣಾದ್ರಿಯಾಗಿಯೂ ಅವತರಿಸಿದರೆಂದು ಪುರಾಣಗಳು ಹೇಳುತ್ತಿವೆ. ದೇವರು ಆ ಭಕ್ತರಿಗಾಗಿ ಆ ಬೆಟ್ಟಗಳ ಮೇಲೆಯೇ ನೆಲೆಸಿದ್ದಾನೆ. ಆದುದರಿಂದ ಆ ಬೆಟ್ಟದ ಕಲ್ಲಿನಿಂದ ಬಂದ ಕಲ್ಲನ್ನೇ ಹೊಸಿಲಾಗಿ ಮಾರ್ಪಡಿಸಿ ಇಡುತ್ತಾರೆ. ಪ್ರತಿದಿನವೂ ದೇವರನ್ನು ದರ್ಶನ ಮಾಡುವ ಆ ಹೊಸಿಲಿನ ಪುಣ್ಯಕ್ಕೆ ನಮಸ್ಕರಿಸುತ್ತಾ ಹಾಗೆಯೇ ಅಂತಹ ಮಹಾಭಕ್ತನನ್ನು ದಾಟುತ್ತಿರುವುದಕ್ಕೆ ಕ್ಷಮಿಸೆಂದು ಬೇಡಿಕೊಳ್ಳುವುದೇ ಹೊಸಿಲಿಗೆ ನಮಸ್ಕರಿಸುವುದರಲ್ಲಿನ ಅಂತರಾರ್ಥವಾಗಿದೆ. https://youtu.be/5NzsEehoEi4 ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ…

Read More