Author: kannadanewsnow09

ಕೆಎನ್ಎನ್ ಸ್ಪೆಷಲ್ ಡೆಸ್ಕ್: ಮಲೆನಾಡಿನ ಸೊಬಸು ಸವಿಯೋದಕ್ಕೆ ಬಹುತೇಕರು ಇಷ್ಟ ಪಡುತ್ತಾರೆ. ಈ ಸೊಬಗಿನ ಸಿರಿಯಲ್ಲಿ ಹೊಸ ವರ್ಷ ಆಚರಣೆ ಇನ್ನೂ ಮನಮೋಹಕ. ಅಷ್ಟೇ ಅಚ್ಚಳಿಯದೇ ಉಳಿಯುವ ನೆನಪು ಕೂಡ. ಹೀಗೆ ಮಲೆನಾಡಲ್ಲಿ ಹೊಸ ವರ್ಷಾಚರಣೆ ಮಾಡುವ ಆಸೆ ಇದ್ದರೇ.. ನಿಮಗೆ ಅವಕಾಶವೊಂದಿದೆ. ಅದು ಎಲ್ಲಿ.? ಏನೆಲ್ಲಾ ಇರುತ್ತೆ ಎನ್ನುವ ಮಾಹಿತಿ ಮುಂದೆ ಓದಿ. ಸದ್ಗುರು ಗ್ರೂಪ್ಸ್ ವತಿಯಿಂದ ಸಂಗೀತ ಕಾರ್ಯಕ್ರಮ ಸದ್ಗುರು ಗ್ರೂಪ್ಸ್ ವತಿಯಿಂದ ಸಾಗರದಲ್ಲಿ ಮೊದಲ ಬಾರಿಗೆ ಅತಿದೊಡ್ಡ ಸಂಗೀತ ಕಾರ್ಯಕ್ರಮವನ್ನು ಹೊಸ ವರ್ಷಾಚರಣೆಗೆ ಆಯೋಜಿಸಲಾಗುತ್ತಿದೆ. ಪ್ರಸಿದ್ಧ ಸಿಂಗರ್ ಗಳ ಮ್ಯೂಸಿಕಲ್ ನೈಟ್ಸ್ ನಿಮ್ಮ ಹೊಸ ವರ್ಷಾಚರಣೆಗೆ ಮತ್ತಷ್ಟು ಮೆರುಗು ನೀಡಲಿದೆ. ಡಿಸೆಂಬರ್.31ರ ಸಂಜೆ 7 ಗಂಟೆಗೆ ಸಂಗೀತ, ಡಿಜೆ, ಸೆಲ್ಪಿ ಬೂತ್, ವೆಜ್ ಅಂಡ್ ನಾನ್ ವೆಜ್ ಪುಡ್, ಆಟಗಳ ಜೊತೆಗೆ ಹೊಸ ವರ್ಷ ಬರ ಮಾಡಿಕೊಳ್ಳೋರಿಗೆ ಸಖತ್ ಮುದಗೊಳಿಸು ಸದ್ಗುರು ಗ್ರೂಪ್ ಸಿದ್ಧಗೊಂಡಿದೆ. ಮಲೆನಾಡಿನಲ್ಲಿ ಏಲ್ಲಿ ಆಚರಣೆ ಗೊತ್ತಾ? ಶಿವಮೊಗ್ಗ ಜಿಲ್ಲೆಯ ಸಾಗರದ ತ್ಯಾಗರ್ತಿ ಕ್ರಾಸ್…

Read More

ಚಿಕ್ಕಬಳ್ಳಾಪುರ: ಎರಡು ಲಾರಿಗಳ ನಡುವೆ ಡಿಕ್ಕಿಯ ನಂತ್ರ ಉಂಟಾದಂತ ಬೆಂಕಿಯಿಂದಾಗಿ ಲಾರಿಗಳು ಸುಟ್ಟು ಕರಕಲಾಗಿರುವಂತ ಘಟನೆ ಚಿಕ್ಕಬಳ್ಳಾಪುರದ ಬಳಿಯಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಹುನೇಗಲ್ ಗ್ರಾಮದ ಬಳಿಯಲ್ಲಿನ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಸಿಎನ್ ಜಿ ಸಿಲಿಂಡರ್ ತುಂಬಿದ್ದಂತ ಲಾರಿಯೊಂದು ತಿರುವು ಪಡೆದುಕೊಳ್ಳುತ್ತಿದ್ದಾಗ ಹಿಂಬದಿಯಿಂದ ಕಲ್ಲು ತುಂಬಿದ್ದಂತ ಲಾರಿಯೊಂದು ಡಿಕ್ಕಿಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ಅಪಘಾತದ ನಂತ್ರ ಸಿಎನ್ ಜಿ ಸಿಲಿಂಡರ್ ತುಂಬಿದ್ದಂತ ಲಾರಿಗೆ ಬೆಂಕಿ ತಗುಲಿದೆ. ಈ ಬೆಂಕಿಯಿಂದಾಗಿ ಲಾರಿ ಸುಟ್ಟು ಕರಕಲಾಗಿದೆ. ಲಾರಿ ಚಾಲಕ ಬೆಂಕಿಯಲ್ಲಿ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾರಿಗೆ ಬೆಂಕಿ ತಲುಗಿದ ವಿಷಯ ತಿಳಿದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ನಂದಿಸಿದ್ದಾರೆ. ಗಾಯಾಳು ಲಾರಿ ಚಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. https://kannadanewsnow.com/kannada/hubballi-cylinder-blast-two-more-ayyappa-maladharis-die-due-to-lack-of-treatment/ https://kannadanewsnow.com/kannada/new-years-gift-for-central-government-employees-3-increase-in-da-in-january/

Read More

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಹೊಸ ವರ್ಷಕ್ಕೆ ದಿನಗಣನೆ ಶುರುವಾಗಿದ್ದು, ಭಾರತೀಯ ಪ್ರಯಾಣಿಕರಿಗೆ ವೀಸಾ-ಮುಕ್ತ ವಾಸ್ತವ್ಯ ಲಭ್ಯವಿದೆ. ಕೆಲವು ದೇಶಗಳು ಯಾವುದೇ ವೀಸಾ ಇಲ್ಲದೆ ಕೆಲವು ದಿನಗಳವರೆಗೆ ಪ್ರಯಾಣಿಸಬಹುದು. ಕಡಲತೀರಗಳು, ಸುಂದರ ದೃಶ್ಯಾವಳಿಗಳು, ಪರ್ವತಗಳು… ಹೀಗೆ ಹಲವು ಬಗೆಯ ಸೌಂದರ್ಯವನ್ನು ಇಲ್ಲಿ ಆನಂದಿಸಬಹುದು. ಹೊಸ ವರ್ಷವನ್ನು ಆನಂದಿಸಲು ಹೆಚ್ಚಿನ ಭಾರತೀಯರು ವೀಸಾ ಇಲ್ಲದೆ ಯಾವ ದೇಶಗಳಿಗೆ ಭೇಟಿ ನೀಡುತ್ತಾರೆ ಎಂಬುದನ್ನು ನೋಡೋಣ. ಥೈಲ್ಯಾಂಡ್ : ಕೇವಲ ಒಂದು ಸಣ್ಣ ವಿಮಾನದ ದೂರದಲ್ಲಿ ಥೈಲ್ಯಾಂಡ್ ತನ್ನ ಬೆರಗುಗೊಳಿಸುವ ಕಡಲತೀರಗಳು, ಉತ್ಸಾಹಭರಿತ ರಾತ್ರಿಜೀವನ ಮತ್ತು ರುಚಿಕರವಾದ ಬೀದಿ ಆಹಾರದೊಂದಿಗೆ ಪ್ರಯಾಣಿಕರ ಕನಸಾಗಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು 60 ದಿನಗಳವರೆಗೆ ವೀಸಾ-ಮುಕ್ತ ಪ್ರವೇಶವನ್ನು ಆನಂದಿಸಬಹುದು. ಭೂತಾನ್ : ಶಾಂತಿ ಮತ್ತು ಸಂತೋಷದ ನಾಡು, ಅಲ್ಲಿ ಪ್ರಕೃತಿಯು ಆಧ್ಯಾತ್ಮಿಕತೆಯನ್ನು ಸಂಧಿಸುತ್ತದೆ. ಪ್ರಶಾಂತವಾದ ಮಠಗಳು ಮತ್ತು ಉಸಿರುಕಟ್ಟುವ ಪರ್ವತ ವೀಕ್ಷಣೆಗಳೊಂದಿಗೆ, ಭಾರತೀಯ ನಾಗರಿಕರು 14 ದಿನಗಳವರೆಗೆ ವೀಸಾ-ಮುಕ್ತವಾಗಿ ಭೇಟಿ ನೀಡಬಹುದು-ಈ ಹೊಸ ವರ್ಷದಲ್ಲಿ ಶಾಂತಿಯನ್ನ ಬಯಸುವವರಿಗೆ ಸೂಕ್ತವಾಗಿದೆ. ನೇಪಾಳ :…

Read More

ನವದೆಹಲಿ : ಭಾರತದ ಔಷಧ ನಿಯಂತ್ರಕವು ನವೆಂಬರ್’ನಲ್ಲಿ ಕೇಂದ್ರ ಔಷಧ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿದ 41 ಔಷಧ ಮಾದರಿಗಳನ್ನ ‘ನಾಟ್ ಆಫ್ ಸ್ಟ್ಯಾಂಡರ್ಡ್ ಕ್ವಾಲಿಟಿ’ (NSQ) ಎಂದು ಕಂಡುಹಿಡಿದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ರಾಜ್ಯ ಔಷಧ ಪರೀಕ್ಷಾ ಪ್ರಯೋಗಾಲಯಗಳು 70 ಔಷಧ ಮಾದರಿಗಳನ್ನು ‘ಪ್ರಮಾಣಿತ ಗುಣಮಟ್ಟವಲ್ಲ’ (NSQ) ಎಂದು ಗುರುತಿಸಿವೆ. ಇದಲ್ಲದೆ, ಎರಡು ಔಷಧ ಮಾದರಿಗಳನ್ನ ನಕಲಿ ಔಷಧಿಗಳು ಎಂದು ಗುರುತಿಸಲಾಗಿದೆ. ಎರಡು ಮಾದರಿಗಳಲ್ಲಿ, ಒಂದು ಔಷಧಿ ಮಾದರಿಯನ್ನು ಬಿಹಾರ ಡ್ರಗ್ಸ್ ಕಂಟ್ರೋಲ್ ಅಥಾರಿಟಿ ಮತ್ತು ಮತ್ತೊಂದು ಮಾದರಿಯನ್ನು ಗಾಜಿಯಾಬಾದ್ನ CDSCO (ಉತ್ತರ ವಲಯ) ತೆಗೆದುಕೊಂಡಿದೆ. ಇತರ ಕಂಪನಿಗಳ ಒಡೆತನದ ಬ್ರಾಂಡ್ ಹೆಸರುಗಳನ್ನ ಬಳಸಿಕೊಂಡು ಅನಧಿಕೃತ ಮತ್ತು ಅಪರಿಚಿತ ತಯಾರಕರು ಮಾದರಿಗಳನ್ನ ತಯಾರಿಸಿದ್ದಾರೆ. ಈ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. “ಔಷಧ ಮಾದರಿಗಳನ್ನ NSQ ಎಂದು ಗುರುತಿಸುವುದು ಒಂದು ಅಥವಾ ಇತರ ನಿರ್ದಿಷ್ಟ ಗುಣಮಟ್ಟದ ನಿಯತಾಂಕಗಳಲ್ಲಿ ಔಷಧ ಮಾದರಿಯ ವೈಫಲ್ಯದ ಆಧಾರದ…

Read More

ನವದೆಹಲಿ : ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಬಾರಿ ಡಿಎ ಹೆಚ್ಚಳ ಘೋಷಿಸಲಿದ್ದು, ಮುಂದಿನ ಹೆಚ್ಚಳವನ್ನ ಯಾವಾಗ ಘೋಷಿಸುತ್ತದೆ ಎಂಬ ಚರ್ಚೆಗಳು ನಡೆದಿವೆ. ಡಿಎ ಹೆಚ್ಚಳವು ಜನವರಿಯಿಂದ ಜೂನ್’ವರೆಗೆ ಮತ್ತು ಜುಲೈನಿಂದ ಡಿಸೆಂಬರ್’ವರೆಗೆ ಜಾರಿಯಲ್ಲಿರುತ್ತದೆ. ಅಕ್ಟೋಬರ್’ನಲ್ಲಿ 3% ಹೆಚ್ಚಳದ ನಂತರ ಹೊಸ ವರ್ಷಕ್ಕೆ ಡಿಎ ಹೆಚ್ಚಳದ ಶೇಕಡಾವಾರು ಬಗ್ಗೆ ಊಹಾಪೋಹಗಳು ಪ್ರಾರಂಭವಾಗಿವೆ. ವರದಿಗಳ ಪ್ರಕಾರ ಎಐಸಿಪಿಐ ಸೂಚ್ಯಂಕವು ಅಕ್ಟೋಬರ್ ವೇಳೆಗೆ 144.5 ಕ್ಕೆ ತಲುಪಿದೆ, ಇದು 55.05% ಡಿಎ ಹೆಚ್ಚಳಕ್ಕೆ ಕಾರಣವಾಗಬಹುದು. ಡಿಸೆಂಬರ್ ವೇಳೆಗೆ ಸೂಚ್ಯಂಕವು 145.3 ಕ್ಕೆ ತಲುಪಿದರೆ, ಜನವರಿ 2025ರಲ್ಲಿ 56% ಡಿಎ ಹೆಚ್ಚಳ ಸಾಧ್ಯವಿದೆ. ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಶೇ.3ರಷ್ಟು ಡಿಎ ಹೆಚ್ಚಳದಿಂದ 18,000 ರೂ.ಗಳ ಮೂಲ ವೇತನ ಹೊಂದಿರುವ ಉದ್ಯೋಗಿಗಳಿಗೆ 540 ರೂ., 9,000 ರೂ.ಗಳ ಪಿಂಚಣಿದಾರರಿಗೆ 270 ರೂ. ಪ್ರಸ್ತುತ ಕನಿಷ್ಠ / ಗರಿಷ್ಠ ವೇತನ 18,000 / 250,000 ರೂ ಮತ್ತು ಪಿಂಚಣಿಗಳು 9,000 / 125,000…

Read More

ಹುಬ್ಬಳ್ಳಿ: ನಗರದಲ್ಲಿ ಡಿ.22ರಂದು ನಡೆದಿದ್ದಂತ ಸಿಲಿಂಡರ್ ಸ್ಪೋಟ ಘಟನೆಯಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಇವರಲ್ಲಿ ಈಗಾಗಲೇ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು. ಶುಕ್ರವಾರದಂದು ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಹುಬ್ಬಳ್ಳಿಯ ಸಾಯಿ ನಗರದ ಈಶ್ವರದೇವಸ್ಥಾನದಲ್ಲಿ ಅಡುಗೆ ಮಾಡುತ್ತಿದ್ದಂತ ಸಂದರ್ಭದಲ್ಲಿ ಡಿಸೆಂಬರ್.22ರಂದು ಸಿಲಿಂಡರ್ ಸ್ಪೋಟಗೊಂಡು 9 ಅಯ್ಯಪ್ಪ ಮಾಲಾಧಾರಿಗಳು ಗಾಯಗೊಂಡಿದ್ದರು. ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಇವರಲ್ಲಿ ಈಗಾಗಲೇ ಇಬ್ಬರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶುಕ್ರವಾರದಂದು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಅಯ್ಯಪ್ಪ ಮಾಲಾಧಾರಿ ರಾಜು ಅರ್ಲಾಪೂರ ಹಾಗೂ ಲಿಂಗರಾಜು ಬೀರನೂರು(19) ಎಂಬುವರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಮೃತರ ಸಂಖ್ಯೆ 4ಕ್ಕೆ ಏರಿಕೆಯಾದಂತೆ ಆಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಇನ್ನೂ ಐವರು ಗಾಯಾಳು ಮಾಲಾಧಾರಿಗಳಿಗೆ ಚಿಕಿತ್ಸೆ ಮುಂದುವರೆದಿದೆ. ಅಂದಹಾಗೇ ಈಗಾಗಲೇ ಮೃತ ಅಯ್ಯಪ್ಪ ಮಾಲಾಧಾರಿಗಳ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರವನ್ನು…

Read More

ಕಲಬುರ್ಗಿ: ಅತ್ತೆ ಸೊಸೆಯರು ತಾಯಿ ಮಗಳಿದ್ದಂತೆ ಇರಬೇಕು. ಹಾಗೆ ಇದ್ದಾಗ ಮಾತ್ರ ಸಂಸಾರ ಚೆಂದವಾಗಿರುತ್ತದೆ ಅಂತ ಹಿರಿಯರು ಬುದ್ಧಿ ಹೇಳುತ್ತಾರೆ. ಆದರೇ ಇಲ್ಲೊಬ್ಬ ಸೊಸೆ ಮಾತ್ರ ನಮ್ಮ ಅತ್ತೆ ಬೇಗ ಸಾಯಬೇಕು ಅಂತ ದೇವಿಗೆ ನೋಟಿನಲ್ಲಿ ಹರಕೆ ಬರೆದು, ತೀರಿಸುವಂತೆ ಕೋರಿರೋದು ವೈರಲ್ ಆಗಿದೆ. ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿರುವಂತ ಭಾಗ್ಯವಂತಿ ದೇವಿ ತುಂಬಾನೇ ಪ್ರಸಿದ್ಧ ದೇವಸ್ಥಾನ. ಈ ದೇವಾಲಯಕ್ಕೆ ಹಲವೆಡೆಯಿಂದ ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುವಂತೆ ಭಾಗ್ಯವಂತಿ ದೇವಿಯನ್ನು ಕೋರೋದು ರೂಢಿ. ಈ ದೇವಸ್ಥಾನಕ್ಕೆ ಬಂದಿರುವಂತ ಸೊಸೆಯೊಬ್ಬರು 20 ರೂಪಾಯಿಯ ನೋಟಿನ ಮೇಲೆ ತಾಯಿ ನಮ್ಮ ಅತ್ತೆ ಬೇಗ ಸಾಯಲಿ ತಾಯಿ ಅಂತ ಹರಕೆ ಬರೆದು ಹಾಕಿರೋದು ದೇವಸ್ಥಾನದ ಹುಂಡಿಯನ್ನು ತೆರೆದು ಕಾಣಿಕೆ ಏಣಿಸುವಂತ ಸಂದರ್ಭದಲ್ಲಿ ಪತ್ತೆಯಾಗಿದೆ. 20 ರೂಪಾಯಿ ನೋಟಿನ ಮೇಲೆ ಅತ್ತೆಯ ಬಗ್ಗೆ ಸೊಸೆ ಬರೆದಿರುವಂತ ಬರಹ ಕಂಡಂತ ದೇವಸ್ಥಾನದವರು ಅಚ್ಚರಿ ಪಟ್ಟಿದ್ದಾರೆ. ಈಗ ಈ ಪೋಟೋ ಎಲ್ಲೆಡೆ ವೈರಲ್ ಆಗಿದೆ. ಹೀಗೆ…

Read More

ನವದೆಹಲಿ: ನಮ್ಮನ್ನು ಅಗಲಿದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಅಂತಿಮ ನಮನ ಸಲ್ಲಿಸಿದರು. ಸಂಸತ್ ಅಧಿವೇಶನ ಮುಗಿದ ನಂತರ ತಮ್ಮ ಲೋಕಸಭೆ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಸಚಿವರು; ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಶುಕ್ರವಾರ ಬೆಳ ಬೆಳಗ್ಗೆಯೇ ನವದೆಹಲಿಗೆ ವಾಪಸ್ಸಾದರು. ವಿಮಾನ ನಿಲ್ದಾಣದಿಂದ ನೇರವಾಗಿ ಮನಮೋಹನ್ ಸಿಂಗ್ ಅವರ ನಿವಾಸಕ್ಕೆ ಆಗಮಿಸಿದ ಸಚಿವರು; ಅಗಲಿದ ಮಾಜಿ ಪ್ರಧಾನಿಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು ಹಾಗೂ ದೇಶಕ್ಕೆ ಅವರು ನೀಡಿರುವ ಕೊಡುಗೆಯನ್ನು ಸ್ಮರಿಸಿದರು. ದೇಶದ ಅಭಿವೃದ್ಧಿಗೆ ಮನಮೋಹನ್ ಸಿಂಗ್ ಅವರು ಮಹಾನ್ ಕೊಡುಗೆ ನೀಡಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದ ದೇಶವನ್ನು ಆರ್ಥಿಕ ಅಪಾಯದಿಂದ ಪಾರು ಮಾಡಿದ್ದರು. ಆರ್ಥಿಕ ಸಚಿವರಾಗಿ, ಪ್ರಧಾನಿಯಾಗಿ ಹಾಗೂ ಹಣಕಾಸು ತಜ್ಞರಾಗಿ ಅವರು ದೇಶಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಕೇಂದ್ರ ಸಚಿವರು ಸ್ಮರಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ಮನಮೋಹನ್ ಸಿಂಗ್ ಅವರ ಕುಟುಂಬ ಸದಸ್ಯರಿಗೆ…

Read More

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಹೊಸ ವರ್ಷಾಚರಣೆಗೆ ಸಿದ್ದರಾಗಿದ್ದಾರೆ. ಇವರ ಅನುಕೂಲಕ್ಕಾಗಿ ಬಿ ಎರ್ ಆರ್ ಸಿ ಎಲ್ ಡಿಸೆಂಬರ್.31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಜನತೆ ಹೊಸ ವರ್ಷಾಚರಣೆಗೆ ಸಿದ್ದರಾಗಿದ್ದಾರೆ. ಇವರ ಅನುಕೂಲಕ್ಕಾಗಿ ಬಿ ಎರ್ ಆರ್ ಸಿ ಎಲ್ ಡಿಸೆಂಬರ್.31ರಂದು ತಡರಾತ್ರಿ 2.40ರವರೆಗೆ ನಮ್ಮ ಮೆಟ್ರೋ ರೈಲು ಸಂಚಾರವನ್ನು ವಿಸ್ತರಿಸಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ನಮ್ಮ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಜನವರಿ.1ರ ಮುಂಜಾನೆ 2.40ರವರೆಗೆ ವಿಸ್ತರಿಸಲಾಗಿದೆ. ಎಲ್ಲಾ ಟರ್ಮಿನಲ್ ಗಳಿಂದ ಮಧ್ಯರಾತ್ರಿ 2 ಗಂಟೆಗೆ ಹಾಗೂ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ 2.40ಕ್ಕೆ ಕೊನೆಯ ರೈಲು ಸಂಚರಿಸಲಿದೆ ಅಂತ ತಿಳಿಸಿದೆ. ಡಿಸೆಂಬರ್.31ರಂದು ರಾತ್ರಿ 11 ಗಂಟೆಯಿಂದ ಪ್ರತಿ 10 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚರಿಸಲಿದ್ದಾವೆ. ಹೊಸ ವರ್ಷಾಚರಣೆಗಾಗಿ ಎಂ.ಜಿ ರಸ್ತೆಗೆ…

Read More

ಬೆಂಗಳೂರು: ಬಿಜೆಪಿ ಶಾಸಕ ಹೆಚ್ಐವಿ ಪೀಡಿತರ ಬಳಸಿ ವಿರೋಧಿಗಳಿಗೆ ಏಡ್ಸ್ ಹರಡಲು ಯತ್ನಿಸಿದ್ದು ನಿಜ. ನಿರಂತರ ಅತ್ಯಾಚಾರ, ಅಪಾಯಕಾರಿ ರೋಗ ಹರಡುವಿಕೆ ಸೆಕ್ಷನ್ ಅಡಿ ಕೇಸ್ ದಾಖಲಿಸಿರುವಂತ ಎಸ್ಐಟಿ, ಜನಪ್ರತಿನಿಧಿಗಳ ನ್ಯಾಯಾಲಕ್ಕೆ ಚಾರ್ಜ್ ಶೀಟ್ ಕೂಡ ಸಲ್ಲಿಸಿದೆ. ಹೀಗಾಗಿ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾದಂತೆ ಆಗಿದೆ. ಈ ಸಂಬಂಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುವಂತ ಎಸ್ಐಟಿ ಅಧಿಕಾರಿಗಳು, ಅದರಲ್ಲಿ ಐಪಿಸಿ 270ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಇನ್ನೂ ಐಪಿಸಿ 354ಎ ಲೈಂಕಿಕ ಕಿರುಕುಳ, 354ಸಿ ಅನುಮತಿ ಇಲ್ಲದೇ ಮಹಿಳೆಯ ಅಶ್ಲೀಲ ದೃಶ್ಯಾವಳಿ ಚಿತ್ರೀಕರಣ, 376(2) ಎನ್ ನಿರಂತರ ಅತ್ಯಾಚಾರ, 308 ಸಂತ್ರಸ್ತೆಯ ಕೊಲ್ಲುವ ಉದ್ದೇಶ, 120ಬಿ ಅಪರಾಧಿಕ ಸಂಚು, 504 ಉದ್ದೇಶ ಪೂರ್ವಕ ಅವಮಾನ, 506 ಜೀವ ಬೆದರಿಕೆ, 270 ಅಪಾಯಕಾರಿ ರೋಗ ಹರಡುವಿಕೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಸೇರಿದಂತೆ ಇತರೆ ಕಾಯ್ದೆಗಳ ಅಡಿಯಲ್ಲಿ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ಅಂದಹಾಗೇ ಸೆಪ್ಟೆಂಬರ್ ನಲ್ಲಿ ಬಿಜೆಪಿ…

Read More