Subscribe to Updates
Get the latest creative news from FooBar about art, design and business.
Author: kannadanewsnow09
ಮಂಡ್ಯ: ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದನ್ನು ಎಸಗಲಾಗಿದೆ. ಆಸ್ತಿಗಾಗಿ ನಾಲ್ಕು ದಿನದಲ್ಲಿ ಹಸೆಮಣೆ ಏರಬೇಕಿದ್ದಂತ ತಮ್ಮನನ್ನೇ ಅಣ್ಣನೊಬ್ಬ 28 ಬಾರಿ ಇರಿದು ಕೊಂದಿರುವಂತ ಘಟನೆ ಮಂಡ್ಯದ ಮಾಯಪ್ಪನಹಳ್ಳಿಯಲ್ಲಿ ನಡೆದಿದೆ. ಮಂಡ್ಯ ತಾಲ್ಲೂಕಿನ ಮಾಯಪ್ಪನಹಳ್ಳಿಯಲ್ಲಿ ಆಸ್ತಿಗಾಗಿ ಅಣ್ಣ, ಅಣ್ಣನ ಮಕ್ಕಳು ಸೇರಿಕೊಂಡು ತಮ್ಮ ಯೋಗೇಶ್(35) ಎಂಬುವರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಇಂದು ಬೆಳಗ್ಗೆ ತಮ್ಮ ಯೋಗೇಶ್ ನನ್ನು ಅಣ್ಣ ಲಿಂಗರಾಜ, ಮಕ್ಕಳಾದಂತ ಭರತ್, ದರ್ಶನ್ ಸೇರಿ ಮನೆಯ ಕೊಟ್ಟಿಗೆಯಲ್ಲೇ ಹರಿತವಾದ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬುಧವಾರ ಮೃತ ಯೋಗೇಶ್ ಮದುವೆ ಫಿಕ್ಸ್ ಆಗಿತ್ತು. ಇಂದು ಅವರನ್ನು ಕೊಲೆ ಮಾಡಲಾಗಿದೆ. ಕೊಲೆಯ ಬಳಿಕ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಆಸ್ತಿಗಾಗಿ ಸಹೋದರರ ನಡುವೆ ಆಗಿದ್ದಾಂಗೆ ನಡೆಯುತ್ತಿದ್ದಂತ ಜಗಳ, ಈಗ ಕೊಲೆಯಲ್ಲಿ ಅಂತ್ಯಗೊಂಡಿದೆ. ವಿಷಯ ತಿಳಿದು ಸ್ಥಳಕ್ಕೆ ಕೆರಗೋಡು ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಕೊಲೆ ಮಾಡಿ ಪರಾರಿಯಾಗಿರುವಂತ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. https://kannadanewsnow.com/kannada/the-issue-of-the-cms-post-is-a-matter-between-me-the-cm-and-the-high-command-dcm-d-k-shivakumar/
ನವದೆಹಲಿ: “ಸಿಎಂ ಸ್ಥಾನದ ವಿಚಾರ ನನ್ನ, ಸಿಎಂ ಹಾಗೂ ಹೈಕಮಾಂಡ್ ನಡುವಣ ವಿಚಾರ. ಇದು ಸಾರ್ವಜನಿಕವಾಗಿ ಚರ್ಚೆ ಮಾಡುವ ವಿಷಯವಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶುಕ್ರವಾರ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಜೊತೆ ಸಿಎಂ ಸ್ಥಾನದ ಬಗ್ಗೆ ಚರ್ಚೆ ಮಾಡಲಾಯಿತೇ ಎಂದು ಕೇಳಿದಾಗ, ಈ ರೀತಿ ಉತ್ತರಿಸಿದರು. ಇಂದು ಅಸ್ಸಾಂ ಚುನಾವಣೆ ಸಂಬಂಧ ಹೈಕಮಾಂಡ್ ನಾಯಕರ ಜತೆ ಸಭೆ ಇದೆ, ಈ ಸಭೆಯ ಯೋಜನೆಗಳೇನು ಎಂದು ಕೇಳಿದಾಗ, “ನಮ್ಮ ಪಕ್ಷದ ಯೋಜನೆಗಳನ್ನು ಬಹಿರಂಗಪಡಿಸಲು ಹೇಗೆ ಸಾಧ್ಯ? ಇದನ್ನು ಪಕ್ಷದ ಮಟ್ಟದಲ್ಲಿ ಮಾತ್ರ ಚರ್ಚೆ ಮಾಡಲಾಗುವುದು. ಸಾರ್ವಜನಿಕವಾಗಿ ಅಲ್ಲ. ಏನಾದರೂ ಮಾಹಿತಿ ನೀಡುವುದಿದ್ದರೆ, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಇದ್ದಾರೆ, ಅವರು ನೀಡುತ್ತಾರೆ” ಎಂದರು. ಈ ಪ್ರವಾಸದಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, “ನಾನು ಪಕ್ಷದ ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ದೆಹಲಿಗೆ ಬಂದಿದ್ದೇನೆ, ನೋಡೋಣ” ಎಂದರು. ಕೇಂದ್ರ…
ಬೆಂಗಳೂರು: ನಗರದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ ಬಾಗ್ ಫ್ಲವರ್ ಶೋ ನಡೆಯುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 32,950 ಮಂದಿ ಲಾಲ್ ಬಾಗ್ ಫಲ ಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತಂತೆ ತೋಟಗಾರಿಕೆ ಇಲಾಖೆಯ ಅಪರ ನಿರ್ದಏಶಕ ಡಾ.ಎಂ ಜಗದೀಶ್ ಮಾಹಿತಿ ನೀಡಿದ್ದು, ಲಾಲ್ ಬಾಗ್ ನಲ್ಲಿ ಜರುಗುತ್ತಿರುವ ತೇಜಸ್ವಿ ವಿಸ್ಮಯ ವಿಷಯಾಧಾರಿತ ಫಲ ಪುಷ್ಪ ಪ್ರದರ್ಶನಕ್ಕೆ ದಿನಾಂಕ 15/01/2026 ರಂದು ಒಟ್ಟು ಆಗಮಿಸಿದ ವೀಕ್ಷರ ಸಂಖ್ಯೆ 32,950. ವಯಸ್ಕರು:24950. ಮಕ್ಕಳು :3750. ಶಾಲಾ ವಿದ್ಯಾರ್ಥಿಗಳು;4250. ಸಂಗ್ರಹವಾದ ಮೊತ್ತ:21,56,330 ಆಗಿದೆ ಎಂಬುದಾಗಿ ತಿಳಿಸಿದ್ದಾರೆ. ಲಾಲ್ ಬಾಗ್ ತೇಜಸ್ವಿ ವಿಸ್ಮಯ ಫಲಪುಷ್ಪ ಪ್ರದರ್ಶನದ ಅಂಗವಾಗಿ, ನಾಳೆ 16-01-2026 ಶುಕ್ರವಾರದಂದು ಸಂಜೆ 5.00 ಗಂಟೆಗೆ ನನ್ನ ತೇಜಸ್ವಿ ನಾಟಕದ ಪ್ರದರ್ಶನವಿರುತ್ತದೆ ಎಂಬುದಾಗಿ ಹೇಳಿದ್ದಾರೆ. ನಾಳೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ. https://kannadanewsnow.com/kannada/%e2%82%b94-71-lakh-crore-investment-in-11-months-minister-m-b-patil/ https://kannadanewsnow.com/kannada/union-minister-h-d-kumaraswamys-important-statement-on-entering-state-politics/
ಬೆಂಗಳೂರು: 2025ರ ಫೆಬ್ರವರಿಯಲ್ಲಿ ನಡೆಸಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 10.27 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯ ಖಾತ್ರಿ ಸಿಕ್ಕಿತ್ತು. ಈ ಪೈಕಿ ಡಿಸೆಂಬರ್ ಕೊನೆಯ ಹೊತ್ತಿಗೆ 4.71 ಲಕ್ಷ ಕೋಟಿ ರೂ. ನೈಜ ಹೂಡಿಕೆ ಆಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಗುರುವಾರ ತಿಳಿಸಿದ್ದಾರೆ. ಜ.19ರಿಂದ 23ರವರೆಗೆ ದಾವೋಸ್ ನಲ್ಲಿ ನಡೆಯಲಿರುವ ವಿಶ್ವ ಮಟ್ಟದ ಆರ್ಥಿಕ ಶೃಂಗಸಭೆಗೆ ತೆರಳಲು ಸಿದ್ಧವಾಗುತ್ತಿರುವುದಕ್ಕೆ ಪೂರ್ವಭಾವಿಯಾಗಿ ಸಚಿವರು ಕಳೆದ ಒಂದು ವರ್ಷದಲ್ಲಿ ರಾಜ್ಯದ ಕೈಗಾರಿಕಾ ಕ್ಷೇತ್ರದ ವಿವಿಧ ವಲಯಗಳಲ್ಲಿ ಆಗಿರುವ ಹೂಡಿಕೆ, ಅರ್ಜಿ ಸಲ್ಲಿಕೆ ಮುಂತಾದ ಪ್ರಗತಿಯ ಅಂಕಿಅಂಶಗಳನ್ನು ನೀಡಿದ್ದಾರೆ. ಈ ಬಗ್ಗೆ ವಿವರ ಮಾಹಿತಿ ನೀಡಿರುವ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಮಾಡಿಕೊಂಡಿರುವ ಹೂಡಿಕೆ ಒಡಂಬಡಿಕೆಗಳಲ್ಲಿ ಶೇಕಡ 46ರಷ್ಟು ನೈಜ ಹೂಡಿಕೆಯಾಗಿ ಸಾಕಾರಗೊಂಡಿವೆ. ಈ ಪೈಕಿ ತಯಾರಿಕಾ ವಲಯಕ್ಕೆ ₹5.66 ಲಕ್ಷ ಕೋಟಿ, ಹೂಡಿಕೆ ಖಾತ್ರಿಯಲ್ಲಿ ₹3.22 ಲಕ್ಷ ಕೋಟಿ ನೈಜ ಬಂಡವಾಳವಾಗಿ ಈಗಾಗಲೇ ಬಂದಿದೆ.…
ಚಿತ್ರದುರ್ಗ: ಬೈಕ್ ವೀಲ್ಹಿಂಗ್ ನಿಷೇಧವಿದ್ದರೂ, ಆ ನಿಯಮ ಮೀರಿ ವೀಲ್ಹಿಂಗ್ ಮಾಡಿದ್ದಂತ ವ್ಯಕ್ತಿಯನ್ನು ಹಿರಿಯೂರು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬೈಪಾಸ್ ನಲ್ಲಿ ಇರುವಂತ ಹೊಸ ಫ್ಲೈ ಓವರ್ ರಸ್ತೆಯ ಸರ್ವೀಸ್ ರೋಡಿನಲ್ಲಿ ಪಲ್ಸರ್ ಬೈಕ್ ನಲ್ಲಿ ವೀಲ್ಹಿಂಗ್ ಮಾಡುತ್ತಿರೋದು ಹಿರಿಯೂರು ನಗರ ಠಾಣೆಯ ಪೊಲೀಸರ ಗಮನಕ್ಕೆ ಬಂದಿದೆ. ಈ ವಿಷಯ ಗಮನಕ್ಕೆ ಬಂದ ಕೂಡಲೇ ಅಲರ್ಟ್ ಆದಂತ ಹಿರಿಯೂರು ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ಸಿರಾಜ್, ಹೆಡ್ ಕಾನ್ಸ್ ಸ್ಟೇಬಲ್ ರಮೇಶ್ ಹಾಗೂ ಕಾನ್ಸ್ ಸ್ಟೇಬಲ್ ರಾಘವೇಂದ್ರ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಆಟೋ ಚಾಲಕನಾಗಿದ್ದ ಹಿರಿಯೂರು ನಗರದ ಕೌಶಿಕ್ ಎಂಬುದಾಗಿ ಗುರುತಿಸಲಾಗಿದೆ. ಈತ ರಾಷ್ಟ್ರೀಯ ಹೆದ್ದಾರಿ 48ರಿಂದ ಹುಲುಗಲಕುಂಟೆ ಕಡೆಗೆ ತಲೆಗೆ ಹೆಲ್ಮೆಟ್ ಧರಿಸದೇ ಅಜಾಗರೂಕತೆಯಿಂದ ವೀಲ್ಹಿಂಗ್ ಮಾಡುತ್ತಿದ್ದನು. ಬಂಧಿತ ಆರೋಪಿ ಕೌಶಿಕ್ ವಿರುದ್ಧ ಹಿರಿಯೂರು ನಗರ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ಕಾಯ್ದೆಯ…
ಉತ್ತರ ಕನ್ನಡ: ತಾಯಿಯ ಜೊತೆಗೆ ಜಗಳವಾಡುತ್ತಿದ್ದ ಮಲತಂದೆಗೆ ಮಗನಿಂದಲೇ ಮಚ್ಚಿನೇಟು ನೀಡಲಾಗಿದೆ. ಮಗನಿಂದ ನೇಟಿನಿಂದಾಗಿ ಮಲತಂದೆ ಮಾರಣಾಂತಿಕವಾಗಿ ಗಾಯಗೊಂಡಿರುವಂತ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ತಟ್ಟಿಹಳ್ಳಿಯಲ್ಲಿ ತಾಯಿಯ ಜೊತೆಗೆ ಜಗಳ ಆಡುತ್ತಿದ್ದಂತ ಮಲತಂದೆಯ ಮೇಲೆ ಮಗನೊಬ್ಬ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಮಲತಂದೆ ಶಿವಾನಂದ ರಾಮಣ್ಣ(48) ಮೇಲೆ ಮಚ್ಚಿನಿಂದ ಹಲ್ಲೆ ಮಾಡಲಾಗಿದೆ. ಹಲ್ಲೆ ನಡೆಸಿದಂತ ಮಲಮಗ ಶಿವರಾಜ ಪರಸಪ್ಪ ಗುಡಿಯಾಳ(27) ಪರಾರಿಯಾಗಿದ್ದಾನೆ. ನಾಗಮ್ಮ ಕಲಕಟ್ಟಿಯನ್ನು 3ನೇ ವಿವಾಹವಾಗಿದ್ದ ಲಾರಿ ಚಾಲಕ ಶಿವಾನಂದ. ಒಂದೂವರೆ ವರ್ಷದ ಹಿಂದೆ ಹಾನಗಲ್ ಮೂಲದ ನಾಗಮ್ಮ ಜೊತೆಗೆ ವಿವಾಹವಾಗಿದ್ದರು. ಪತ್ನಿ ಮೇಲೆ ಸಂಶಯದಿಂದ ಪ್ರತಿದಿನ ಗಲಾಟೆಯನ್ನು ಪತಿ ಶಿವಾನಂದ ಮಾಡುತ್ತಿದ್ದರು. ತಾಯಿಯ ಜೊತೆಗೆ ಗಲಾಟೆ ಮಾಡುತ್ತಿದ್ದ ಮಲತಂದೆ ಮೇಲೆ ಮಗ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವಂತ ಶಿವಾನಂದನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಡಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/almost-every-heart-attack-is-caused-by-these-factors-study/ https://kannadanewsnow.com/kannada/union-minister-h-d-kumaraswamys-important-statement-on-entering-state-politics/
ಪ್ರಮುಖ ಅಂತರರಾಷ್ಟ್ರೀಯ ಅಧ್ಯಯನವೊಂದು 99% ಹೃದಯಾಘಾತ, ಪಾರ್ಶ್ವವಾಯು ಮತ್ತು ಗಂಭೀರ ಹೃದಯ ಸಂಬಂಧಿ ಘಟನೆಗಳು ಕೇವಲ ನಾಲ್ಕು ಸಾಮಾನ್ಯ ಆರೋಗ್ಯ ಅಪಾಯಕಾರಿ ಅಂಶಗಳಿಗೆ ಸಂಬಂಧಿಸಿವೆ ಎಂದು ಬಹಿರಂಗಪಡಿಸಿದೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಹೆಚ್ಚಿದ ರಕ್ತದ ಸಕ್ಕರೆ ಮತ್ತು ತಂಬಾಕು ಬಳಕೆ ಕಾರಣವಂತೆ. ಈ ಸಂಶೋಧನೆಯು ಯುನೈಟೆಡ್ ಸ್ಟೇಟ್ಸ್ ಮತ್ತು ದಕ್ಷಿಣ ಕೊರಿಯಾದ 9 ಮಿಲಿಯನ್ಗಿಂತಲೂ ಹೆಚ್ಚು ವಯಸ್ಕರ ಡೇಟಾವನ್ನು ಆಧರಿಸಿದೆ, ಇದು ಈ ರೀತಿಯ ಅತಿದೊಡ್ಡ ಅಧ್ಯಯನಗಳಲ್ಲಿ ಒಂದಾಗಿದೆ. 2025 ರಲ್ಲಿ ಪ್ರಕಟವಾದ ಈ ಸಂಶೋಧನೆಗಳು, NDTV ಪ್ರಕಾರ, ಹೃದಯ ಸಂಬಂಧಿ ಅಪಾಯವನ್ನು ಕಡಿಮೆ ಮಾಡುವಲ್ಲಿ ಆರಂಭಿಕ ತಡೆಗಟ್ಟುವಿಕೆ ಮತ್ತು ಜೀವನಶೈಲಿ ನಿರ್ವಹಣೆಯ ಪ್ರಮುಖ ಪಾತ್ರವನ್ನು ಒತ್ತಿಹೇಳುತ್ತವೆ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಿರಿಯ ಮಹಿಳೆಯರಲ್ಲಿಯೂ ಸಹ, ಸಾಮಾನ್ಯವಾಗಿ ಕಡಿಮೆ ಅಪಾಯದಲ್ಲಿ ಪರಿಗಣಿಸಲಾದ ಗುಂಪು, ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಪ್ರಮುಖ ಹೃದಯ ಸಂಬಂಧಿ ಘಟನೆಗಳಲ್ಲಿ 95% ಕ್ಕಿಂತ ಹೆಚ್ಚು ಈ ನಾಲ್ಕು ಅಂಶಗಳಲ್ಲಿ ಕನಿಷ್ಠ ಒಂದಕ್ಕೆ ಸಂಬಂಧಿಸಿವೆ. ಅಧಿಕ…
ರಾಯಚೂರು: ಕನಕ ಗುರುಪೀಠದ ಲಿಂಗೈಕ್ಯ ಸಿದ್ಧರಾಮನಂದ ಸ್ವಾಮೀಜಿಯವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ರಾಯಚೂರಿನ ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ಸಿದ್ಧರಾಮನಂದಸ್ವಾಮಿಯವರು ಇಂದು ನಿಧನರಾಗಿದ್ದರು. ಅವರ ಪಾರ್ಥೀವ ಶರೀರವನ್ನು ಮಠದ ಆವರಣದಲ್ಲೇ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಅಪಾರ ಭಕ್ತರನ್ನು ಹೊಂದಿದ್ದಂತ ಸಿದ್ದರಾಮನಂದ ಸ್ವಾಮೀಜಿಯವರ ಅಂತಿಮ ದರ್ಶನದ ಬಳಿಕ ಪೊಲೀಸ್ ಪಡೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ, ಗೌರವ ವಂದನೆ ಸಲ್ಲಿಸಿತು. ಸರ್ಕಾರದ ಪರವಾಗಿ ಸಚಿವ ಬೈರತಿ ಸುರೇಶ್, ಎನ್ ಎಸ್ ಬೋಸರಾಜು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. https://kannadanewsnow.com/kannada/%e0%b2%86%e0%b2%a8%e0%b3%8d-%e0%b2%b2%e0%b3%88%e0%b2%a8%e0%b3%8d-%e0%b2%b5%e0%b2%82%e0%b2%9a%e0%b2%95%e0%b2%b0%e0%b3%81-%e0%b2%a8%e0%b2%bf%e0%b2%ae%e0%b3%8d%e0%b2%ae-%e0%b2%a8%e0%b2%82%e0%b2%ac/ https://kannadanewsnow.com/kannada/which-is-healthier-black-or-green-tea/
ಮೊಬೈಲ್ ಬಳಕೆದಾರರಿಗೆ ಸ್ಪ್ಯಾಮ್ ಕರೆಗಳು ದಿನನಿತ್ಯದ ತಲೆನೋವಾಗಿ ಮಾರ್ಪಟ್ಟಿವೆ. ಅಪರಿಚಿತ ಸಂಖ್ಯೆಗಳು ನಿದ್ರೆಗೆ ಭಂಗ ತರುತ್ತವೆ, ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡುತ್ತವೆ ಮತ್ತು ಆಗಾಗ್ಗೆ ಹಣ ಅಥವಾ ವೈಯಕ್ತಿಕ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತವೆ. ಹಾಗಾದ್ರೇ ಆನ್ ಲೈನ್ ವಂಚಕರು ನಿಮ್ಮ ಮೊಬೈಲ್ ನಂಬರ್ ಪಡೆಯೋದು ಹೇಗೆ ಅಂತ ಮುಂದೆ ಓದಿ. ಒಂದು ಕಾಲದಲ್ಲಿ ಸರಳವಾದ ಮಾರ್ಕೆಟಿಂಗ್ ಕರೆಗಳು ಈಗ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಮಾರ್ಟ್ ಸ್ಕ್ಯಾಮ್ಗಳಾಗಿ ಮಾರ್ಪಟ್ಟಿವೆ. ಅನೇಕ ಜನರು ಅಸಹಾಯಕರಾಗುತ್ತಾರೆ, ಆದರೆ ಸತ್ಯ ಸರಳವಾಗಿದೆ. ಸರಿಯಾದ ಸೆಟ್ಟಿಂಗ್ಗಳನ್ನು ಬಳಸುವ ಮೂಲಕ, ಅಪರಿಚಿತ ಕರೆಗಳನ್ನು ತಪ್ಪಿಸುವ ಮೂಲಕ ಮತ್ತು ವೈಯಕ್ತಿಕ ಡೇಟಾವನ್ನು ರಕ್ಷಿಸುವ ಮೂಲಕ, ನೀವು ಸ್ಪ್ಯಾಮ್ ಕರೆಗಳನ್ನು ಕಡಿಮೆ ಮಾಡಬಹುದು. ಈ ಹಂತಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಫೋನ್ನ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತು ಮನಸ್ಸಿನ ಶಾಂತಿಯನ್ನು ಮತ್ತೆ ಆನಂದಿಸಲು ಸಹಾಯವಾಗುತ್ತದೆ. ಅಜ್ಞಾತ ಸಂಖ್ಯೆಗಳಿಗೆ ಉತ್ತರಿಸಬೇಡಿ ಅಜ್ಞಾತ ಕರೆಗಳಿಗೆ ಉತ್ತರಿಸುವುದು ಅಥವಾ ತಿರಸ್ಕರಿಸುವುದು ನಿಮ್ಮ ಫೋನ್ ಸಂಖ್ಯೆ ಸಕ್ರಿಯವಾಗಿದೆ ಎಂದು ಸ್ಪ್ಯಾಮ್…
ಚಹಾವು ವಿಶ್ವದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಇದು ಆರೋಗ್ಯ ಪ್ರಯೋಜನಗಳಿಂದ ಕೂಡಿದೆ. ಹೆಚ್ಚಿನ ಜನರು ಬೆಳಿಗ್ಗೆ ತಾಜಾತನವನ್ನು ಅನುಭವಿಸಲು, ಕರುಳಿನ ಚಲನೆಗೆ ಸಹಾಯ ಮಾಡಲು ಮತ್ತು ಶಕ್ತಿಯನ್ನು ಪಡೆಯಲು ಚಹಾ ಕುಡಿಯುತ್ತಾರೆ. ಸಾಮಾನ್ಯ ಹಾಲಿನ ಚಹಾದ ಜೊತೆಗೆ, ಕಪ್ಪು ಮತ್ತು ಹಸಿರು ಚಹಾಗಳು ಸಹ ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಹೇಳುತ್ತಾರೆ, ಏಕೆಂದರೆ ಅವು ಉತ್ಕರ್ಷಣ ನಿರೋಧಕಗಳಿಂದ ಸಮಾನವಾಗಿ ತುಂಬಿರುತ್ತವೆ ಮತ್ತು ಕೆಫೀನ್ ವರ್ಧಕವನ್ನು ನೀಡುತ್ತವೆ. ಆದಾಗ್ಯೂ, ಯಾವುದು ಆರೋಗ್ಯಕರ ಎಂಬ ಪ್ರಶ್ನೆ ಯಾವಾಗಲೂ ಇರುತ್ತದೆ. ತಜ್ಞರ ಪ್ರಕಾರ, ಎರಡರ ನಡುವಿನ ಪ್ರಮುಖ ವ್ಯತ್ಯಾಸಗಳು ಅವುಗಳನ್ನು ಹೇಗೆ ಸಂಸ್ಕರಿಸಲಾಗುತ್ತದೆ ಮತ್ತು ಅವುಗಳ ಸ್ವಲ್ಪ ವಿಭಿನ್ನವಾದ ಕೆಫೀನ್ ಮತ್ತು ಉತ್ಕರ್ಷಣ ನಿರೋಧಕ ಮಟ್ಟಗಳಿಗೆ ಸಂಬಂಧಿಸಿವೆ, ಇದು ನಿಮ್ಮನ್ನು ಒಂದಕ್ಕಿಂತ ಒಂದು ಆದ್ಯತೆ ನೀಡುವಂತೆ ಮಾಡುತ್ತದೆ. ಇವೆರಡೂ ಹೇಗೆ ಹೋಲುತ್ತವೆ? ಕಪ್ಪು ಮತ್ತು ಹಸಿರು ಚಹಾ ಎರಡೂ ಫ್ಲೇವನಾಯ್ಡ್ಗಳಿಂದ ತುಂಬಿವೆ – ಕೆಲವು ರೀತಿಯ ಉತ್ಕರ್ಷಣ ನಿರೋಧಕಗಳು ಉರಿಯೂತದ ಗುಣಲಕ್ಷಣಗಳನ್ನು ಹೊಂದಿವೆ…














