Author: kannadanewsnow09

ನವದೆಹಲಿ: ಪಾಕಿಸ್ತಾನ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಡ್ರೋನ್ ಮತ್ತು ಕ್ಷಿಪಣಿಗಳ ಮೂಲಕ ದಾಳಿಗೆ ಯತ್ನಿಸಿದೆ. ಆದರೇ ಪಾಕಿಸ್ತಾನದ ದಾಳಿಯನ್ನು ಭಾರತ ನಿಷ್ಕ್ರೀಯಗೊಳಿಸಿದೆ. ಪಾಕಿಸ್ತಾನ ನಡೆಸಿದಂತ ದಾಳಿಯಲ್ಲಿ 16 ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನದ ವಿರುದ್ಧ ಭಾರತದಲ್ಲಿ ಆಪರೇಷನ್ ಸಿಂಧೂರ್ ಚಾಪ್ಟರ್-2 ಆರಂಭಿಸೋ ಸುಳಿವನ್ನು  ಕೇಂದ್ರ ವಿದೇಶಾಂಗ ಸಚಿವಾಲಯ ತಿಳಿಸಿದೆ. https://twitter.com/ANI/status/1920454212854456423 ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ವಿಂಗ್ ಕಮಾಂಡರ್ ವ್ಯೋಮಿಕಾ, ವಿಕ್ರಮ್ ಮಿಸ್ತ್ರಿ ಅವರು, ಲಾಹೋರ್ ನಲ್ಲಿದ್ದ ಏರ್ ಡಿಫೆನ್ಸ್ ಸಿಸ್ಟಂ ನಾಶ ಮಾಡಿದ್ದೇವೆ. ಪಾಕಿಸ್ತಾನ ವಿರುದ್ಧ ಆಪರೇಷನ್ ಸಿಂಧೂರ್ ಚಾಪ್ಟರ್-2 ಮುಂದುವರೆದಿದೆ ಎಂದರು. ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸಿದೆ. ಪಹಲ್ಗಾಮ್ ಉಗ್ರರ ದಾಳಿ ಬಳಿಕ ಉದ್ವಿಗ್ನತೆ ಹೆಚ್ಚಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಪಹಲ್ಗಾಮ್ ಉಗ್ರರ ದಾಳಿಯೇ ಉದ್ವಿಗ್ನತೆಗೆ ಮೂಲ ಕಾರಣವಾಗಿದೆ ಎಂದರು. https://twitter.com/ANI/status/1920453469611205001 ಪಹಲ್ಗಾಮ್ ದಾಳಿಯ ಹೊಣೆಯನ್ನ ಟಿ ಆರ್ ಎಸ್ ಸಂಘಟನೆ ಹೊತ್ತುಕೊಂಡಿದೆ. ಪಾಕ್ ಸೇನೆ ಭಾರತೀಯ ಸೇನಾ ನೆಲೆ…

Read More

ನವದೆಹಲಿ: ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಪಾಡ್ಕಾಸ್ಟ್ಗಳು ಸೇರಿದಂತೆ ಪಾಕಿಸ್ತಾನ ಮೂಲದ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತದ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಸೂಚಿಸಲಾಗಿದೆ. ಈಗಾಗಲೇ ಪಾಕಿಸ್ತಾನ ತನ್ನ ದೇಶದಲ್ಲಿ ಭಾರತದ ಹಾಡುಗಳನ್ನು ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಈ ಬೆಳವಣಿಗೆಯ ಕೆಲ ದಿನಗಳ ನಂತ್ರ ಭಾರತವು, ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಪಾಡ್ಕಾಸ್ಟ್ಗಳು ಸೇರಿದಂತೆ ಪಾಕಿಸ್ತಾನ ಮೂಲದ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವಂತೆ ಭಾರತದ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಸೂಚಿಸಿದೆ. ಈ ಮೂಲಕರಾಷ್ಟ್ರೀಯ ಭದ್ರತೆಯ ಹಿತದೃಷ್ಟಿಯಿಂದ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಒಟಿಟಿ ಪ್ಲಾಟ್ಫಾರ್ಮ್ಗಳು, ಮಾಧ್ಯಮ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳು ಮತ್ತು ಮಧ್ಯವರ್ತಿಗಳಿಗೆ ವೆಬ್-ಸರಣಿಗಳು, ಚಲನಚಿತ್ರಗಳು, ಹಾಡುಗಳು, ಪಾಡ್ಕಾಸ್ಟ್ಗಳು ಮತ್ತು ಇತರ ಸ್ಟ್ರೀಮಿಂಗ್ ಮಾಧ್ಯಮ ವಿಷಯವನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. https://twitter.com/ANI/status/1920445225140387867 https://kannadanewsnow.com/kannada/india-attacks-lahore-air-defence-system-using-akash-missile-sources/ https://kannadanewsnow.com/kannada/breaking-major-surgery-to-the-administrative-machinery-by-the-state-government-transfer-of-9-kas-officers-kas-officer-transfer/

Read More

ನವದೆಹಲಿ: ಭಾರತ ಪಾಕಿಸ್ತಾನದ ವಿವಿಧ ಪ್ರದೇಶಗಳ ಮೇಲೆ ಡ್ರೋನ್, ಕ್ಷಿಪಣಿ ದಾಳಿ ನಡೆಸಿ ಧ್ವಂಸ ಮಾಡಿದೆ. ಅದರಲ್ಲೂ ಪ್ರಮುಖವಾಗಿ ಪಾಕಿಸ್ತಾನದ ಲಾಹೋರ್ ನಲ್ಲಿದ್ದಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಆಕಾಶ್ ಕ್ಷಿಪಣಿ ಬಳಸಿ ಧ್ವಂಸಗೊಳಿಸಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ. ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನ ಉಳಿದ ಪಂದ್ಯಗಳನ್ನು ಕರಾಚಿಗೆ ಸ್ಥಳಾಂತರಿಸಲಾಗುವುದು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಘೋಷಿಸಿದೆ. ಇದಕ್ಕೆ ಕಾರಣ ರಾವಲ್ಪಿಂಡಿ ಸ್ಟೇಡಿಯಂ ಮೇಲೆ ಡ್ರೋನ್ ದಾಳಿ ನಡೆಸಿ, ಧ್ವಂಸಗೊಳಿಸಿದ್ದಕ್ಕಾಗಿ ಆಗಿದೆ. ಲಾಹೋರ್ನಲ್ಲಿ ಇಂದು ನಿಗದಿಯಾಗಿದ್ದ ಎಲ್ಲಾ ಬೋರ್ಡ್ ಪರೀಕ್ಷೆಗಳನ್ನು ಬ್ರಿಟಿಷ್ ಕೌನ್ಸಿಲ್ ರದ್ದುಗೊಳಿಸಿದೆ. “ಅಭ್ಯರ್ಥಿಗಳ ಸುರಕ್ಷತೆಯನ್ನು ಪ್ರಾಥಮಿಕ ಕಾಳಜಿಯಾಗಿಟ್ಟುಕೊಂಡು ಪರೀಕ್ಷೆಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಕೌನ್ಸಿಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಪಾಕಿಸ್ತಾನ ಮತ್ತು ಭಾರತದ ನಡುವೆ ಹೆಚ್ಚುತ್ತಿರುವ ಮಿಲಿಟರಿ ಉದ್ವಿಗ್ನತೆಯ ಹೊರತಾಗಿಯೂ ಎಲ್ಲಾ ಪರೀಕ್ಷೆಗಳು ಯೋಜಿಸಿದಂತೆ ಮುಂದುವರಿಯುತ್ತವೆ ಎಂದು ನಿನ್ನೆಯಷ್ಟೇ ಬ್ರಿಟಿಶ್ ಕೌನ್ಸಿಲ್ ಪಾಕಿಸ್ತಾನ ಘೋಷಿಸಿತ್ತು. ಮತ್ತೊಂದೆಡೆ ಚಲನಚಿತ್ರಗಳು, ವೆಬ್ ಸರಣಿಗಳು, ಹಾಡುಗಳು ಮತ್ತು ಪಾಡ್ಕಾಸ್ಟ್ಗಳು…

Read More

ನವದೆಹಲಿ: ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ನಿಖರವಾಗಿ ಇದೇ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಊಹಿಸಲಾಗದು. ಆದರೇ ಭಾರತೀಯ ಸೇನೆಯ ಕಾರ್ಯಾಚರಣೆ ಮಾತ್ರ ಶ್ಲಾಘನೀಯ, ಪ್ರಶಂಸನೀಯ. ಉಗ್ರರ ನಾಶ ನಿಶ್ಚಿತ ಎಂಬುದಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ರಾಷ್ಟ್ರೀಯ ಗುಣಮಟ್ಟ ಸಮಾವೇಶದಲ್ಲಿ ಮಾತನಾಡಿದ ಸಿಂಗ್, ಕಾರ್ಯಾಚರಣೆಯನ್ನು ನಿಖರವಾಗಿ ಕಾರ್ಯಗತಗೊಳಿಸಿದ ನಿಖರತೆ ಊಹಿಸಲಾಗದು ಮತ್ತು ಪ್ರಶಂಸನೀಯವಾಗಿದೆ ಎಂದು ಹೇಳಿದರು. ಆಪರೇಷನ್ ಸಿಂಧೂರ್ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವರು ಹೇಳಿದರು. https://twitter.com/ANI/status/1920440430048448966 ಭಾರತವು ಯಾವಾಗಲೂ ಜವಾಬ್ದಾರಿಯುತ ರಾಷ್ಟ್ರದ ಪಾತ್ರವನ್ನು ವಹಿಸಿದೆ ಮತ್ತು ಮಾತುಕತೆಯ ಮೂಲಕ ಸಮಸ್ಯೆಗಳನ್ನು ಪರಿಹರಿಸುವ ಪರವಾಗಿದೆ ಎಂದು ಸಿಂಗ್ ಹೇಳಿದರು. ಯಾರಾದರೂ ತಾಳ್ಮೆಯನ್ನು ಪರೀಕ್ಷಿಸಲು ಪ್ರಯತ್ನಿಸಿದರೆ, ಅವರು ಕ್ರಮವನ್ನು ಎದುರಿಸಲು ಸಂಪೂರ್ಣವಾಗಿ ಸಿದ್ಧರಾಗಿರಬೇಕು ಎಂದು ಅವರು ಹೇಳಿದರು. https://twitter.com/ANI/status/1920431528120561948 ಆದರೆ ಇದರರ್ಥ ನಮ್ಮ ತಾಳ್ಮೆಯ ಅನ್ಯಾಯದ ಲಾಭವನ್ನು ಯಾರಾದರೂ ಪಡೆಯಬೇಕು ಎಂದಲ್ಲ. ಯಾರಾದರೂ ನಮ್ಮ ತಾಳ್ಮೆಯ ಲಾಭವನ್ನು ಪಡೆಯಲು…

Read More

ನವದೆಹಲಿ: ಟ್ರೇಡ್ ಮಾರ್ಕ್ ನೋಂದಣಿ ವಿಚಾರವಾಗಿ ದೇಶದ ಪ್ರತಿಷ್ಠಿತ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ ಪ್ರಮುಖ ಪ್ರಕಟಣೆಯೊಂದನ್ನು ಗುರುವಾರ ನೀಡಿದೆ. ಭಾರತೀಯರ ಶೌರ್ಯದ ಸಂಕೇತವಾಗಿ ರಾಷ್ಟ್ರೀಯ ಪ್ರಜ್ಞೆಯ ಭಾಗವಾಗಿ ಇರುವ “ಆಪರೇಷನ್ ಸಿಂಧೂರ್” ಅನ್ನು ಟ್ರೇಡ್‌ಮಾರ್ಕ್ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಕಂಪನಿ ತಿಳಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಘಟಕವಾದ ಜಿಯೋ ಸ್ಟುಡಿಯೋಸ್ ತನ್ನ ಟ್ರೇಡ್‌ಮಾರ್ಕ್ ಅರ್ಜಿಯನ್ನು ಹಿಂತೆಗೆದುಕೊಂಡಿದ್ದು, ಇದನ್ನು ಕಂಪನಿಯ ಕಿರಿಯ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರು ಅನುಮತಿಯಿಲ್ಲದೆ, ಅಜಾಗರೂಕತೆಯಿಂದ ಟ್ರೇಡ್ ಮಾರ್ಕ್ ಗೆ ಅರ್ಜಿ ಸಲ್ಲಿಸಿದ್ದರು. ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ನಡೆದ ಆಪರೇಷನ್ ಸಿಂಧೂರ್ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅದರ ಎಲ್ಲ ಪಾಲುದಾರರು ಬಹಳ ಹೆಮ್ಮೆಪಡುತ್ತಾರೆ. ಭಯೋತ್ಪಾದನೆಯ ಹೀನಕೃತ್ಯದ ವಿರುದ್ಧ ಭಾರತದ ರಾಜೀ ಆಗದ ಹೋರಾಟದಲ್ಲಿ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಹೆಮ್ಮೆಯ ಸಾಧನೆ ಆಪರೇಷನ್ ಸಿಂಧೂರ್ ಆಗಿದೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟದಲ್ಲಿ ರಿಲಯನ್ಸ್ ಸಮೂಹವು ನಮ್ಮ ಸರ್ಕಾರ ಮತ್ತು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಬೆಂಬಲ…

Read More

ಬಿಜಿಂಗ್: ಭಾರತದೊಂದಿಗಿನ ಉದ್ವಿಗ್ನತೆಯ ನಡುವೆ ಪಾಕಿಸ್ತಾನವು ಚೀನಾದ ಜೆಟ್‌ಗಳನ್ನು ಬಳಸಿದೆ ಎಂಬುದನ್ನು ಚೀನಾ ನಿರಾಕರಿಸಿದೆ. ಒಂದು ದೊಡ್ಡ ಬೆಳವಣಿಗೆಯೊಂದರಲ್ಲಿ, ಭಾರತವು ಪಾಕಿಸ್ತಾನ ಮತ್ತು ಪಿಒಕೆ ಮೇಲೆ ಕ್ಷಿಪಣಿಗಳ ದಾಳಿ ಮಾಡಿದ ನಂತರ ಪಾಕಿಸ್ತಾನವು ಚೀನಾದ ಜೆಟ್‌ಗಳನ್ನು ಬಳಸಿದೆಯೇ ಎಂದು ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯವು “ಈ ವಿಷಯದ ಬಗ್ಗೆ ತಿಳಿದಿಲ್ಲ” ಎಂದು ಹೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಬೀಜಿಂಗ್‌ನಲ್ಲಿ ತಮ್ಮ ದೈನಂದಿನ ಮಾಧ್ಯಮಗೋಷ್ಠಿಯಲ್ಲಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಅವರ ಹೇಳಿಕೆ ಹೊರಬಿದ್ದಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನವು ಸ್ಥಳೀಯವಾಗಿ ಜೋಡಿಸಲಾದ ಚೀನಾ ನಿರ್ಮಿತ ಜೆಎಫ್ -17 ಮತ್ತು ಜೆಎಫ್ -10 ಜೆಟ್‌ಗಳನ್ನು ಬಳಸುತ್ತಿದೆ ಎಂದು ಉಲ್ಲೇಖಿಸಿದ ನಂತರ, ಭಾರತ ಫ್ರಾನ್ಸ್‌ನಿಂದ ವಿಮಾನಗಳನ್ನು ಖರೀದಿಸಿ ಬಳಸಲು ಸಾಧ್ಯವಾದರೆ, ನಾವು ಚೀನಾ ಅಥವಾ ರಷ್ಯಾ ಅಥವಾ ಯುನೈಟೆಡ್ ಸ್ಟೇಟ್ಸ್, ಯುಕೆಯಿಂದ ವಿಮಾನಗಳನ್ನು ಖರೀದಿಸಿ ಬಳಸಬಹುದು ಎಂದು ಹೇಳಿದರು.…

Read More

ಇಸ್ಲಮಾಬಾದ್: ಭಾರತದಿಂದ ಪಾಕಿಸ್ತಾನದ ವಿವಿಧ ಪ್ರದೇಶಗಳ ಮೇಲೆ ಡ್ರೋನ್ ದಾಳಿ ನಡೆಸಲಾಗುತ್ತಿದೆ. ಭಾರತದ ದಾಳಿಯಿಂದ ನಮ್ಮನ್ನು ರಕ್ಷಣೆ ಮಾಡಿ ಎಂಬುದಾಗಿ ಪಾಕಿಸ್ತಾನದ ಪಾರ್ಲಿಮೆಂಟಿನಲ್ಲೇ ಪ್ರಾಣಭಿಕ್ಷೆಯನ್ನು ಸಂಸದರೊಬ್ಬರು ಕಣ್ಣೀರಿಡುತ್ತ ಮಾತನಾಡಿದ್ದು ತಿಳಿದು ಬಂದಿದೆ. ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಮಾತನಾಡಿದಂತ ಪಾಕ್ ಸಂಸದ ತಹೀರ್ ಇಕ್ಬಾಲ್ ಭಾರತದ ದಾಳಿಯಿಂದ ಜನರು ಭಯ ಬಿದ್ದಿದ್ದಾರೆ.  ಭಾರತದ ದಾಳಿಯಿಂದ ನಮ್ಮನ್ನ ರಕ್ಷಣೆ ಮಾಡುವಂತೆ ಸಭಾಧ್ಯಕ್ಷರನ್ನು ಕಣ್ಣೀರಿಡುತ್ತಲೇ ಮನವಿ ಮಾಡಿದರು. ಭಾರತದ ದಾಳಿಗೆ ಪತರುಗುಟ್ಟಿದ ಪಾಕಿಸ್ತಾನ: ಪಾಕ್ ನಗರಗಳಿಗೆ ನುಗ್ಗಿ ಹೊಡೆದ ಭಾರತದ ಡ್ರೋನ್ ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ. ಪಾಕ್ ನಗರಗಳಿಗೆ ನುಗ್ಗಿ ಭಾರತದ ಡ್ರೋನ್ ಗಳು ರಾವಲ್ಪಿಂಡಿ ಸ್ಟೇಡಿಯಂ ಧ್ವಂಸಗೊಳಿಸಿದ್ದಾವೆ. ಭಾರತೀಯ ಸೇನೆಯಿಂದ ಪಾಕಿಸ್ತಾನದ ಆಂಟಿ ಡ್ರೋನ್ ಸಿಸ್ಟಮ್ ಫೇಲ್ ಮಾಡಿದ್ದರೇ, ಪಾಕಿಸ್ತಾನದ ಹಲವು ವಾಯು ರಕ್ಷಣಾ ರಾಡಾರ್ ವ್ಯವಸ್ಥೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಲಾಹೋರ್ ನಲ್ಲಿರುವಂತ ವಾಯು ರಕ್ಷಣಾ ವ್ಯವಸ್ಥೆಯನ್ನು…

Read More

ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನೆಯಿಂದ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಡ್ರೋನ್ ದಾಳಿ ನಡೆಸಲಾಗಿದೆ. ಪಾಕ್ ನಗರಗಳಿಗೆ ನುಗ್ಗಿ ಭಾರತದ ಡ್ರೋನ್ ಗಳು ರಾವಲ್ಪಿಂಡಿ ಸ್ಟೇಡಿಯಂ ಧ್ವಂಸಗೊಳಿಸಿದ್ದಾವೆ. ಭಾರತೀಯ ಸೇನೆಯಿಂದ ಪಾಕಿಸ್ತಾನದ ಆಂಟಿ ಡ್ರೋನ್ ಸಿಸ್ಟಮ್ ಫೇಲ್ ಮಾಡಿದ್ದರೇ, ಪಾಕಿಸ್ತಾನದ ಹಲವು ವಾಯು ರಕ್ಷಣಾ ರಾಡಾರ್ ವ್ಯವಸ್ಥೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಲಾಹೋರ್ ನಲ್ಲಿರುವಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಧ್ವಂಸಗೊಳಿಸಲಾಗಿದೆ. ಒಟ್ಟಾರೆಯಾಗಿ ಪಾಕಿಸ್ತಾನದ ನಗರಗಳಇಗೆ ನುಗ್ಗಿ ಭಾರತದ ಡ್ರೋನ್ ಗಳು ಡ್ಯಾಮೇಜ್ ಗೊಳಿಸಿದ್ದಾವೆ. ಭಾರತದ ದಾಳಿ ತಡೆಯೋಕೆ ಆಗದೇ ಪಾಕಿಸ್ತಾನ ವಿಲವಿಲ ಒದ್ದಾಡುವಂತೆ ಆಗಿದೆ. https://kannadanewsnow.com/kannada/breaking-major-surgery-to-the-administrative-machinery-by-the-state-government-transfer-of-9-kas-officers-kas-officer-transfer/ https://kannadanewsnow.com/kannada/pakistans-rawalpindi-stadium-destroyed-in-drone-strike-by-indian-army/

Read More

ನವದೆಹಲಿ: ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆಸಲಾಗಿದೆ. ಇಂದು ಪಾಕಿಸ್ತಾನದ ವಿವಿಧೆಡೆ ಡ್ರೋನ್ ದಾಳಿ ನಡೆಸಲಾಗಿದ್ದು, ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂ ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನದ ಹಲವು ನಗರಗಳ ಮೇಲೆ ಡ್ರೋನ್ ದಾಳಿಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಹಾಗೂ ವಿದೇಶಿ ಕ್ರಿಕೆಟಿಗರು ರಾವಲ್ಪಿಂಡಿ ತೊರೆಯುವಂತೆ ಪಿಸಿಬಿ ಸೂಚನೆ ನೀಡಿದೆ. ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಸೇರಿದಂತೆ ಪಾಕಿಸ್ತಾನದ 12 ನಗರಗಳ ಮೇಲೆ ಡ್ರೋನ್ ದಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪಿಸಿಎಲ್ ಟೂರ್ನಿ ಆಡುತ್ತಿರುವ ಪಾಕಿಸ್ತಾನ ಹಾಗೂ ವಿದೇಶಿ ಕ್ರಿಕೆಟಿಗರು ರಾವಲ್ಪಿಂಡಿ ತೊರೆಯುವಂತೆ ಪಿಸಿಬಿ ಸೂಚನೆ ನೀಡಿದೆ. ರಾವಲ್ಪಿಂಡಿ ಸ್ಟೇಡಿಯಂ ಮೇಲೆ ಭಾರತ ನಡೆಸಿದಂತ ಡ್ರೋನ್ ದಾಳಿಯಲ್ಲಿ ಸಂಪೂರ್ಣ ಧ್ವಂಸಗೊಂಡಿರೋದಾಗಿ ಹೇಳಲಾಗುತ್ತಿದೆ.

Read More

ನವದೆಹಲಿ: ಭಾರತ-ಪಾಕ್ ಯುದ್ಧದ ಉದ್ವಿಗ್ನತೆ ಉಂಟಾಗಿದೆ. ಈ ಕಾರಣದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ 90 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ. 0800 ಗಂಟೆಯಿಂದ 1400 ಗಂಟೆಗಳ ನಡುವಿನ ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ (ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ) 90 ವಿಮಾನಗಳನ್ನು ರದ್ದುಪಡಿಸಲಾಗಿದೆ. 0800-1400 ಗಂಟೆಗಳ ನಡುವೆ ರದ್ದತಿ ಪಡಿಸಲಾಗಿದೆ. ವಿಮಾನ ರದ್ದತಿ ವಿವರ: – ದೇಶೀಯ ನಿರ್ಗಮನ-46 – ದೇಶೀಯ ಆಗಮನ-33 – ಅಂತರರಾಷ್ಟ್ರೀಯ ನಿರ್ಗಮನ-05 – ಅಂತರರಾಷ್ಟ್ರೀಯ ಆಗಮನ-06 https://kannadanewsnow.com/kannada/breaking-major-surgery-to-the-administrative-machinery-by-the-state-government-transfer-of-9-kas-officers-kas-officer-transfer/ https://kannadanewsnow.com/kannada/pakistan-attempts-to-attack-15-indian-cities-from-srinagar-to-chandigarh-foils-heres-the-list/

Read More