Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಪುರಾಣಗಳ ಪ್ರಕಾರ, ದೇವ-ದಾನವರು ಸೇರಿ ಕ್ಷೀರಸಾಗರವನ್ನು ಮಥನ ಮಾಡುವಾಗ (ಸಮುದ್ರ ಮಂಥನ) ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ವಂತರಿ ದೇವರು ಉದ್ಭವಿಸಿದರು ಇವರು ಸಮುದ್ರದಿಂದ ಹೊರಬರುವಾಗ ತಮ್ಮ ಕೈಯಲ್ಲಿ ದೇವತೆಗಳಿಗೆ ಅಮರತ್ವವನ್ನು ನೀಡುವ ‘ಅಮೃತ ಕಲಶ’ವನ್ನು ಹಿಡಿದುಕೊಂಡು ಬಂದರು ಎಂಬುದು ಪ್ರತೀತಿ ಧನ್ವಂತರಿ ದೇವರನ್ನು ‘ಆಯುರ್ವೇದದ ಪಿತಾಮಹ’ ಅಥವಾ ಮೂಲಪುರುಷ ಎಂದು ಕರೆಯಲಾಗುತ್ತದೆ. ಉತ್ತಮ ಆರೋಗ್ಯ, ರೋಗ ನಿವಾರಣೆ ಮತ್ತು ದೀರ್ಘಾಯುಷ್ಯಕ್ಕಾಗಿ ಇವರನ್ನು ಪ್ರಾರ್ಥಿಸಲಾಗುತ್ತದೆ ರೋಗ ನಿವಾರಣಾ ಧನ್ವಂತರಿ ಮಂತ್ರ ಆರೋಗ್ಯ ವೃದ್ಧಿಗಾಗಿ ಮತ್ತು ಕಾಯಿಲೆಗಳಿಂದ ದೂರವಿರಲು ಈ ಕೆಳಗಿನ ಮಂತ್ರವನ್ನು ಪಠಿಸಬೇಕು ”ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶ ಹಸ್ತಾಯ ಸರ್ವಾಮಯ ವಿನಾಶನಾಯ ತ್ರೈಲೋಕ್ಯ ನಾಥಾಯ ಶ್ರೀ ಮಹಾವಿಷ್ಣವೇ ನಮಃ” ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ…
ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ ಶ್ರೀ ದತ್ತಮಾಲಾ ಮಂತ್ರ ಓಂ ನಮೋ ಭಗವತೇ ದತ್ತಾತ್ರೇಯಾಯ, ಸ್ಮರಣಮಾತ್ರ ಸಂತುಷ್ಟಾಯ, ಮಹಾಭಯನಿವಾರಣಾಯ, ಮಹಾಜ್ಞಾನಪ್ರದಾಯ, ಚಿದಾನಂದಾತ್ಮನೇ, ಬಾಲೋನ್ಮತ್ತಪಿಶಾಚವೇಷಾಯ, ಮಹಾಯೋಗಿನೇ ಅವಧೂತಾಯ, ಅನಸೂಯಾನಂದವರ್ಧನಾಯ ಅತ್ರಿಪುತ್ರಾಯ, ಸರ್ವಕಾಮಫಲಪ್ರದಾಯ, ಓಂ ಭವಬಂಧವಿಮೋಚನಾಯ, ಅಸಾಧ್ಯಸಾಧನಾಯ, ಸರ್ವವಿಭೂತಿದಾಯ, ಅಸಾಧ್ಯಾಕರ್ಷಣಾಯ, ಐಂ ವಾಕ್ಪ್ರದಾಯ, ಜಗತ್ರಯವಶೀಕರಣಾಯ, ಸೌಃ ಸರ್ವಮನಃಕ್ಷೋಭಣಾಯ, ಶ್ರೀಂ ಮಹಾಸಂಪತ್ಪ್ರದಾಯ, ಭೂಮಂಡಲಾಧಿಪತ್ಯಪ್ರದಾಯ, ಚಿರಂಜೀವಿನೇ, ವಷಟ್ ವಶೀಕುರು ವಶೀಕುರು, ವೌಷಟ್ ಆಕರ್ಷಯ ಆಕರ್ಷಯ, ಹುಂ ವಿದ್ವೇಷಯ ವಿದ್ವೇಷಯ, ಫಟ್ ಉಚ್ಚಾಟಯ ಉಚ್ಚಾಟಯ, ಠಃ ಸ್ತಂಭಯ ಸ್ತಂಭಯ, ಖೇಂ ಖೇಂ ಮಾರಯ ಮಾರಯ, ನಮಃ ಸಂಪನ್ನಯ ಸಂಪನ್ನಯ, swaha ಪೋಷಯ ಪೋಷಯ, ಪರಮಂತ್ರಪರಯಂತ್ರಪರತಂತ್ರಾಣಿ ಛಿಂಧಿ ಛಿಂಧಿ, ಗ್ರಹಾನ್ನಿವಾರಯ ನಿವಾರಯ, ವ್ಯಾಧೀನ್ ವಿನಾಶಯ ವಿನಾಶಯ, ದುಃಖಂ ಹರ ಹರ, ದಾರಿದ್ರ್ಯಂ ವಿದ್ರಾವಯ ವಿದ್ರಾವಯ, ದೇಹಂ ಪೋಷಯ ಪೋಷಯ, ಚಿತ್ತಂ ತೋಷಯ ತೋಷಯ, ಸರ್ವಮಂತ್ರಸ್ವರೂಪಾಯ, ಸರ್ವಯಂತ್ರಸ್ವರೂಪಾಯ, ಸರ್ವತಂತ್ರಸ್ವರೂಪಾಯ, ಸರ್ವಪಲ್ಲವಸ್ವರೂಪಾಯ, ಓಂ ನಮೋ ಮಹಾಸಿದ್ಧಾಯ ಸ್ವಾಹಾ || ಪ್ರಧಾನ ಗುರುಗಳು ಹಾಗೂ…
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಅಂಗಸಂಸ್ಥೆಯಾದ ಯೂಥ್ ಕಾಂಗ್ರೆಸ್ (ಯುವ ಕಾಂಗ್ರೆಸ್) ಈಗ ಸಂಪೂರ್ಣವಾಗಿ ಒಡೆದ ಮನೆಯಾಗಿದೆ. ಆಂತರಿಕ ಬೇಗುದಿ, ನಾಯಕರ ನಡುವಿನ ಪ್ರತಿಷ್ಠೆಯ ಜಗಳದಿಂದಾಗಿ ಸಂಘಟನೆ ಎರಡು ಬಣಗಳಾಗಿ ಹೋಳಾಗಿದ್ದು, “ಮನೆಯೊಂದು ಮೂರು ಬಾಗಿಲು” ಎಂಬಂತಾಗಿದೆ. ರಾಜ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ನಡುವಿನ ಬಣ ರಾಜಕೀಯ ಈಗ ಬೀದಿಗೆ ಬಂದಿದ್ದು, ಉಭಯ ನಾಯಕರ ಬೆಂಬಲಿಗರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಎರಡು ಬಣಗಳ ಪದಾಧಿಕಾರಿಗಳು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ. ಏಕಪಕ್ಷೀಯ ತೀರ್ಮಾನ: ಸಂಘರ್ಷಕ್ಕೆ ಮುಖ್ಯ ಕಾರಣ! ಯೂಥ್ ಕಾಂಗ್ರೆಸ್ನಲ್ಲಿ ಈ ಮಟ್ಟದ ಬಿರುಕು ಮೂಡಲು ಅಧ್ಯಕ್ಷ ಮಂಜುನಾಥ್ ಅವರ ಏಕಪಕ್ಷೀಯ ನಡೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಸಂಘಟನೆಯಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂಬ ನೆಪವೊಡ್ಡಿ ಉಪಾಧ್ಯಕ್ಷೆ ದೀಪಿಕಾ…
ಲೈಂಗಿಕ ಸಾಮರ್ಥ್ಯ ಮತ್ತು ದೀರ್ಘಕಾಲದ ದೈಹಿಕ ತೃಪ್ತಿಯು ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಆಧಾರಿತವಾಗಿರುತ್ತದೆ. ಇತ್ತೀಚಿನ ಒತ್ತಡದ ಜೀವನ, ತಪ್ಪು ಆಹಾರ ಪದ್ಧತಿಯಿಂದಾಗಿ ಅನೇಕರು ಹಾಸಿಗೆಯಲ್ಲಿ ಹೆಚ್ಚು ಸಮಯ ಸಕ್ರಿಯವಾಗಿರಲು (Last longer in bed) ಪರದಾಡುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಮಾತ್ರೆಗಳನ್ನು ಆಶ್ರಯಿಸುವ ಬದಲು, ನೈಸರ್ಗಿಕ ಆಹಾರಗಳ ಮೂಲಕವೇ ಲೈಂಗಿಕ ಶಕ್ತಿ ಮತ್ತು ಸ್ಟ್ಯಾಮಿನಾವನ್ನು ಹೆಚ್ಚಿಸಿಕೊಳ್ಳಬಹುದು. ಫಾರ್ಮ್ಈಸಿ (PharmEasy) ವರದಿಯ ಆಧಾರದ ಮೇಲೆ, ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಕೆಲವು ಅತ್ಯುತ್ತಮ ಆಹಾರಗಳ ಕಂಪ್ಲೀಟ್ ಗೈಡ್ ಇಲ್ಲಿದೆ: 1. ಕಲ್ಲಂಗಡಿ ಹಣ್ಣು (Watermelon): ನೈಸರ್ಗಿಕ ವಯಾಗ್ರ ಕಲ್ಲಂಗಡಿ ಹಣ್ಣನ್ನು ‘ನೈಸರ್ಗಿಕ ವಯಾಗ್ರ’ ಎಂದೇ ಕರೆಯಲಾಗುತ್ತದೆ. ಇದರಲ್ಲಿ ‘ಸಿಟ್ರುಲಿನ್’ (Citrulline) ಎಂಬ ಅಮಿನೋ ಆಮ್ಲ ಹೇರಳವಾಗಿದೆ. ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸಿ, ರಕ್ತನಾಳಗಳು ಸಡಿಲಗೊಳ್ಳುವಂತೆ ಮಾಡುತ್ತದೆ. ಇದರಿಂದ ಜನನಾಂಗಗಳ ಭಾಗಕ್ಕೆ ರಕ್ತಸಂಚಲನ ಸುಧಾರಿಸಿ, ದೀರ್ಘಕಾಲದ ಉದ್ರೇಕಕ್ಕೆ ಸಹಾಯ ಮಾಡುತ್ತದೆ.…
ದಿನವಿಡೀ ಕಚೇರಿ ಕೆಲಸ, ಪ್ರಯಾಣ ಎಂದು ಕಳೆದು ಮನೆಗೆ ಬಂದ ತಕ್ಷಣ ಬಹುತೇಕರು ಬಯಸುವುದು ಆರಾಮದಾಯಕ ಉಡುಪನ್ನು. ಭಾರತೀಯ ಮನೆಗಳಲ್ಲಿ ಪುರುಷರಿಗೆ ಲುಂಗಿ ಹಾಗೂ ಮಹಿಳೆಯರಿಗೆ ನೈಟಿ (Nighty) ಅತ್ಯಂತ ಆರಾಮದಾಯಕ ಮತ್ತು ನೆಚ್ಚಿನ ರಾತ್ರಿಯ ಉಡುಪುಗಳಾಗಿವೆ. ಆದರೆ, ಇವುಗಳ ಸ್ವಚ್ಛತೆಯ ವಿಷಯಕ್ಕೆ ಬಂದಾಗ ಮಾತ್ರ ನಾವೆಲ್ಲರೂ ಅಷ್ಟೇ ನಿರ್ಲಕ್ಷ್ಯ ವಹಿಸುತ್ತೇವೆ. ಹೊರಗೆ ಹೋಗುವಾಗ ಧರಿಸುವ ಬಟ್ಟೆಗಳನ್ನು ದಿನವೂ ಒಗೆಯುವ ನಾವು, ಮನೆಯಲ್ಲಿ ಧರಿಸುವ ನೈಟಿ ಅಥವಾ ಲುಂಗಿಗಳನ್ನು ಮಾತ್ರ ವಾರಗಟ್ಟಲೆ ತೊಳೆಯದೇ ಬಳಸುತ್ತೇವೆ. ಹಾಗಾದರೆ, ಆರೋಗ್ಯದ ದೃಷ್ಟಿಯಿಂದ ಇವುಗಳನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು? ಇಲ್ಲಿದೆ ತಜ್ಞರ ಮಾಹಿತಿ. ನೈಟಿ ಮತ್ತು ಲುಂಗಿಗಳನ್ನು ಎಷ್ಟು ದಿನಗಳಿಗೊಮ್ಮೆ ಒಗೆಯಬೇಕು? ಆರೋಗ್ಯ ತಜ್ಞರು ಮತ್ತು ಚರ್ಮರೋಗ ತಜ್ಞರ ಪ್ರಕಾರ, ರಾತ್ರಿ ಧರಿಸುವ ಉಡುಪುಗಳನ್ನು ಗರಿಷ್ಠ 3 ರಿಂದ 4 ಬಾರಿ ಧರಿಸಿದ ನಂತರ ಕಡ್ಡಾಯವಾಗಿ ಒಗೆಯಬೇಕು. ನೀವು ದಿನವೂ ಸ್ನಾನ ಮಾಡಿ, ಶುದ್ಧ ಮೈಯಿಂದ ಇವುಗಳನ್ನು ಧರಿಸುತ್ತಿದ್ದರೆ 3 ದಿನಗಳಿಗೊಮ್ಮೆ ತೊಳೆಯಬಹುದು. ಆದರೆ, ಈ…
ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಕೊರತೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಲಿಂಡರ್ಗಾಗಿ ಸಾರ್ವಜನಿಕರು ಹಾಗೂ ಮಹಿಳೆಯರು ಕಳೆದ ಎರಡು ಹಗಲು ಮತ್ತು ಎರಡು ರಾತ್ರಿಗಳಿಂದ ಗ್ಯಾಸ್ ಏಜೆನ್ಸಿ ಮುಂದೆ ಸಾಲುಗಟ್ಟಿ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ. ಕಳೆದ ನಾಲ್ಕು ದಿನಗಳಿಂದ ಗ್ರಾಮದಲ್ಲಿ ಗ್ಯಾಸ್ ಸರಬರಾಜು ಸಂಪೂರ್ಣ ವ್ಯತ್ಯಯಗೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಚಾಪೆ, ದಿಂಬು ಹಿಡಿದು ಫುಟ್ಪಾತ್ನಲ್ಲೇ ವಾಸ್ತವ್ಯ! ಗ್ಯಾಸ್ ಸಿಲಿಂಡರ್ ಪಡೆಯಲು ಗ್ರಾಮಸ್ಥರು ಪಡುತ್ತಿರುವ ಪಾಡು ನಿಜಕ್ಕೂ ಮರುಕ ಹುಟ್ಟಿಸುವಂತಿದೆ. ಸಿಲಿಂಡರ್ ಖಾಲಿಯಾಗಿ ಮನೆಯಲ್ಲಿ ಒಲೆ ಉರಿಯದ ಕಾರಣ, ಗ್ರಾಮಸ್ಥರು ಅನಿವಾರ್ಯವಾಗಿ ತಮ್ಮ ಮನೆಗಳಿಂದ ಚಾಪೆ, ದಿಂಬು, ಚಾದರ್ ಹಾಗೂ ಖಾಲಿ ಸಿಲಿಂಡರ್ಗಳನ್ನು ಹಿಡಿದುಕೊಂಡು ಗ್ಯಾಸ್ ಏಜೆನ್ಸಿ ಎದುರು ಜಮಾಯಿಸುತ್ತಿದ್ದಾರೆ. ಹಗಲಿಡೀ ಬಿಸಿಲಿನಲ್ಲಿ ಕಾಯುವ ಸಾರ್ವಜನಿಕರು, ರಾತ್ರಿಯಾಗುತ್ತಿದ್ದಂತೆ ಏಜೆನ್ಸಿ ಅಂಗಡಿಯ ಮುಂಭಾಗದ ಫುಟ್ಪಾತ್ ಹಾಗೂ ರಸ್ತೆ ಬದಿಯಲ್ಲೇ ಮಲಗಿ ರಾತ್ರಿ ಕಳೆಯುತ್ತಿದ್ದಾರೆ. “ಕಳೆದ ಹಲವು ದಿನಗಳಿಂದ ಗ್ರಾಮದಲ್ಲಿ ಗ್ಯಾಸ್ ಸಿಗುತ್ತಿಲ್ಲ. ತಡವಾಗಿ ಬಂದರೆ ಸಿಲಿಂಡರ್…
ಬೆಂಗಳೂರು : ಹವಾಮಾನ ಬದಲಾವಣೆ, ತ್ವರಿತ ನಗರೀಕರಣ ಹಾಗೂ ಅಂತರ್ಜಲ ಕುಸಿತದಂತಹ ಜಾಗತಿಕ ಸವಾಲುಗಳನ್ನು ತಂತ್ರಜ್ಞಾನದ ಮೂಲಕ ಸಮರ್ಥವಾಗಿ ಎದುರಿಸಲು ಬೆಂಗಳೂರು ಜಲಮಂಡಳಿ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಜಲ ನಿರ್ವಹಣೆ ಕುರಿತು ಚರ್ಚಿಸಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ನಗರದಲ್ಲಿ ಮೇ 27 ರಂದು ದೇಶದ ಮೊಟ್ಟಮೊದಲ ಹಾಗೂ ಅತಿದೊಡ್ಡ ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜಿಸಿದೆ. ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ಬೃಹತ್ ಶೃಂಗಸಭೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಭವಿಷ್ಯದ ಸ್ಮಾರ್ಟ್ ಜಲ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸುವ ಗುರಿ ಹೊಂದಿರುವ ಈ ಶೃಂಗಸಭೆಯಲ್ಲಿ ಜಾಗತಿಕ ಜಲ ತಜ್ಞರು, ಎಐ ಪರಿಣತರು ಮತ್ತು ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ ಎಐ ಆಧಾರಿತ ಜಲ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಜಾರಿ ನಿರ್ದೇಶನಾಲಯ (ED) ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಯೊಬ್ಬರನ್ನು ‘ಡಿಜಿಟಲ್ ಅರೆಸ್ಟ್’ ಮಾಡಿ ಬರೋಬ್ಬರಿ 24 ಕೋಟಿ ರೂಪಾಯಿ ದೋಚಿದ್ದ ಜಾಲವನ್ನು ಭೇದಿಸುವಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿದ್ದ ಈ ದಗಾಬಾಜರ ಜಾಲದ 6 ಮಂದಿ ಆರೋಪಿಗಳನ್ನು ಸದ್ಯ ಖೆಡ್ಡಾಕ್ಕೆ ಕೆಡವಲಾಗಿದ್ದು, ಇವರಿಂದ ಕೋಟ್ಯಂತರ ರೂಪಾಯಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಹೈಪ್ರೊಫೈಲ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮೊಹಾಂತಿ ಅವರು ಸುದ್ದಿಗಾರರಿಗೆ ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೇಶದ ಮೂಲೆ ಮೂಲೆಗಳಲ್ಲಿದ್ದ ಕಿಲಾಡಿಗಳ ಬಂಧನ ಬೆಂಗಳೂರು ಸಿಟಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಅನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ದೇಶದ ವಿವಿಧೆಡೆ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಹೀಗೆ ಗುರುತಿಸಲಾಗಿದೆ: ಎ. ಮಲ್ಲಿಕ್ (ಮುಂಬೈ) ಶಿವಗ್ಯಾನಂ (ತಮಿಳುನಾಡು) ಪಾಲಕ್ ಬೈ ಪಟೇಲ್ (ಗುಜರಾತ್) ಮೊಹಮ್ಮದ್ ಹಮೀದ್ (ಗುಜರಾತ್) ಓಂ ಪ್ರಕಾಶ್…
ಚೆನ್ನೈ : ತಮಿಳುನಾಡಿನ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತರಕ್ಷಣೆಯನ್ನು ಕಾಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸಹಕಾರ ಬ್ಯಾಂಕುಗಳ ಮೂಲಕ ₹50,000 ವರೆಗೆ ಬೆಳೆ ಸಾಲ ಪಡೆದಿರುವ ಅತಿ ಸಣ್ಣ ರೈತರ ಸಾಲವನ್ನು ಸಂಪೂರ್ಣವಾಗಿ (ಶೇ. 100 ರಷ್ಟು) ಮನ್ನಾ ಮಾಡುವುದಾಗಿ ಅವರು ಘೋಷಿಸಿದ್ದಾರೆ. ಇಂದು (25.05.2026) ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಅಧ್ಯಕ್ಷತೆಯಲ್ಲಿ ತಮಿಳುನಾಡು ಮುಖ್ಯ ಸಚಿವಾಲಯದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಈ ಸಭೆಯಲ್ಲಿ ಕೃಷಿ ಮತ್ತು ಉழவர் (ರೈತ) ಕಲ್ಯಾಣ ಸಚಿವ ಆರ್. ವಿನೋತ್, ಸಹಕಾರ ಸಚಿವ ವಿ. ಕಾಂತರಾಜ್, ಹಣಕಾಸು ಮತ್ತು ಯೋಜನೆ ಸಚಿವ ಎನ್. ಮರಿಯಾ ವಿಲ್ಸನ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. https://twitter.com/CMOTamilnadu/status/2058890821148233829 ಆರ್ಬಿಐ ಮಾರ್ಗಸೂಚಿ ಅನ್ವಯ ಕ್ರಮ ಭಾರತೀಯ ರಿಸರ್ವ್ ಬ್ಯಾಂಕ್ (RBI) ನವೆಂಬರ್ 28, 2025 ರಂದು ಹೊರಡಿಸಿದ ಸರ್ಕಾರಿ ಸಾಲ ಮನ್ನಾ ಯೋಜನೆಗಳ ಮಾದರಿ ಕಾರ್ಯಾಚರಣೆ…
ಚೆನ್ನೈ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ಭೂಮಿ ಪೂಜೆ (ಶಂಕುಸ್ಥಾಪನೆ) ನೆರವೇರಿಸಲು ಮುಂದಾಗಿರುವ ಬೆನ್ನಲ್ಲೇ, ತಮಿಳುನಾಡು ಸರ್ಕಾರ ತನ್ನ ಮುಂದಿನ ಕಾನೂನು ಕ್ರಮಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ಕಾವೇರಿ ನೀರು ನಿರ್ವಹಣಾ ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ತಮಿಳುನಾಡು ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ರಾಜ್ಯದ ಹಕ್ಕುಗಳನ್ನು ಎತ್ತಿಹಿಡಿಯಲು ಮತ್ತು ತಮಿಳುನಾಡು ರೈತರ ಹಿತರಕ್ಷಣೆಯನ್ನು ಕಾಪಾಡುವ ಉದ್ದೇಶದಿಂದ ಈ ಪ್ರಮುಖ ಸಭೆಯನ್ನು ಆಯೋಜಿಸಲಾಗಿತ್ತು. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಸೂಕ್ಷ್ಮ ಅಂಶಗಳನ್ನು ಪರಿಶೀಲಿಸಿದ ಮುಖ್ಯಮಂತ್ರಿ ವಿಜಯ್ ಅವರು, ಕರ್ನಾಟಕದ ನಡೆಗೆ ತಡೆ ಒಡ್ಡಲು ತಕ್ಷಣವೇ ಅಗತ್ಯವಿರುವ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮತ್ತು ಕಾನೂನು ತಜ್ಞರಿಗೆ ಸೂಚನೆ ನೀಡಿದ್ದಾರೆ. ವಿವಾದದ ಹಿನ್ನೆಲೆ ಮತ್ತು ಸುಪ್ರೀಂ ಕೋರ್ಟ್ ಆದೇಶ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು, ಕರ್ನಾಟಕ, ಕೇರಳ ಮತ್ತು…














