Subscribe to Updates
Get the latest creative news from FooBar about art, design and business.
Author: ವಸಂತ ಬಿ ಈಶ್ವರಗೆರೆ
ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.
ಬೆಂಗಳೂರು: ರಾಷ್ಟ್ರ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸುತ್ತಿರುವ ಕಾರ್ಮಿಕ ವರ್ಗದ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಘೋಷಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕರ ದೀರ್ಘಕಾಲದ ಬೇಡಿಕೆಗೆ ಮನ್ನಣೆ ನೀಡಿದ್ದಾರೆ. ರಾಜ್ಯದ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇಕಡಾ 60 ರಷ್ಟು ಭಾರಿ ಹೆಚ್ಚಳ ಮಾಡಿ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಇ-ಕಾಮರ್ಸ್, ಕೊರಿಯರ್ ಸಂಸ್ಥೆಗಳು, ಖಾಸಗಿ ಶಾಲೆ-ಕಾಲೇಜುಗಳ ಬೋಧಕೇತರ ಸಿಬ್ಬಂದಿ, ಆಸ್ಪತ್ರೆ, ಹೋಟೆಲ್, ಆಹಾರ ಸಂಸ್ಕರಣೆ, ಪೆಟ್ರೋಲ್ ಬಂಕ್, ಧಾರ್ಮಿಕ ಸಂಸ್ಥೆಗಳು ಹಾಗೂ ಖಾಸಗಿ ಫೈನಾನ್ಸ್ ಸೇರಿದಂತೆ ಒಟ್ಟು 83ಕ್ಕೂ ಅಧಿಕ ಅನುಸೂಚಿತ ಉದ್ಯೋಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಕಾರ್ಮಿಕರಿಗೆ ನೇರ ಅನುಕೂಲವಾಗಲಿದೆ. ವೇತನ ನಿಗದಿಗೆ ಹೊಸ ವಲಯಗಳ ರಚನೆ ವೇತನ ನಿಗದಿ ಮತ್ತು ಪರಿಷ್ಕರಣೆಯನ್ನು ಸರಳಗೊಳಿಸಲು ಸರ್ಕಾರ ಈ ಹಿಂದೆ ಇದ್ದ 4 ವಲಯಗಳ ಪದ್ಧತಿಯನ್ನು ಕೈಬಿಟ್ಟು, ಹೊಸದಾಗಿ 3 ವಲಯಗಳನ್ನು ರಚಿಸಿದೆ. ವಲಯ-1: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಪ್ರದೇಶಗಳು. ವಲಯ-2: ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳು.…
ಮಂಡ್ಯ : ಯಾರೇ ಜನಪ್ರತಿನಿಧಿಗಳು, ದೊಡ್ಡ ವ್ಯಕ್ತಿಗಳು, ನಮ್ಮ ಸಂಬಂಧಿಕರೇ ಸರ್ಕಾರಿ ಜಮೀನು, ಗೋಮಾಳ, ಸ್ಮಶಾನ ಜಾಗಗಳನ್ನು ಒತ್ತುವರಿ ಮಾಡಿದ್ದರೇ ಯಾವುದೇ ಮುಲಾಜಿಲ್ಲದೆ ತೆರವು ಕಾರ್ಯಾಚರಣೆ ಮಾಡಬೇಕು ಇಲ್ಲದಿದ್ದರೆ ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ದ ತಲೆದಂಡವಾಗುವುದು ಶತಸಿದ್ಧ ಎಂದು ಶಾಸಕ ಕೆ.ಎಂ.ಉದಯ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಮದ್ದೂರು ತಾಲೂಕಿನ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ತಾಲೂಕಿನ ಹಲವಾರು ಗ್ರಾಮಗಳಲ್ಲಿ ಸುಮಾರು ವರ್ಷಗಳಿಂದ ಸರ್ಕಾರಿ ಜಮೀನುಗಳು ಒತ್ತುವರಿಯಾಗಿದ್ದು, ಇದನ್ನು ತೆರವು ಮಾಡುವ ಬಗ್ಗೆ ಪಿಡಿಓ ಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಂದಾಯ, ಸರ್ವೆ, ಹಾಗೂ ಪೋಲೀಸ್ ಇಲಾಖೆ ಸಹಯೋಗದೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಿ ತಮ್ಮ ಸುಪರ್ದಿಗೆ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು. ಯಾವುದೇ ಗ್ರಾಮಗಳಲ್ಲಿಯೂ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಹಾಗೂ ಅಗತ್ಯ ಮುನ್ನೆಚ್ಚೆರಿಕೆ ಕ್ರಮ ಕೈಗೊಳ್ಳಬೇಕು. ಆಶ್ರಯ ಯೋಜನೆಯಡಿ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಸುಮಾರು…
ಮಂಡ್ಯ : ಜಲಮೂಲಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಹೀಗಾಗಿ ಕ್ಷೇತ್ರದಲ್ಲಿ ವಿಶೇಷವಾಗಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು. ಮದ್ದೂರು ನಗರದ ಕೊಲ್ಲಿ ವೃತ್ತದ ಬಳಿ ಶಿಂಷಾ ನದಿಗೆ ಅಡ್ಡಲಾಗಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಅಂದಾಜು 4.50 ಕೋಟಿ ರೂ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ಸಕಲ ಜೀವಿಗಳಿಗೆ ನೀರು ಅತ್ಯವಶ್ಯಕವಾಗಿದ್ದು, ನಮ್ಮ ಹಿರಿಯರು ಉಳಿಸಿರುವ ಜಲ ಮೂಲಗಳನ್ನು ಸಂರಕ್ಷಿಸಿ ಭವಿಷ್ಯದ ಪೀಳಿಗೆಗೂ ಉಳಿಸಬೇಕಾಗಿದೆ. ಶಿಂಷಾ ಬಲ ದಂಡೆ ನಾಲಾ ವ್ಯಾಪ್ತಿಯ ಕೆರೆಗಳಿಗೆ ತಗ್ಗಹಳ್ಳಿ ಅಣೆಯಿಂದ ನೀರನ್ನು ಪೂರೈಸಲಾಗುತ್ತಿದೆ. ಆದರೆ, ನಾಲೆಗಳ ದುಸ್ಥಿತಿಯಿಂದಾಗಿ ಕೊನೆ ಭಾಗದ ಕೆ.ಹಾಗಲಹಳ್ಳಿ ಕೆರೆಗೆ ನೀರು ತುಂಬಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೆ.ಕೋಡಿಹಳ್ಳಿ ಏತ ನೀರಾವರಿ ಯೋಜನೆ ಬಳಿ ಚೆಕ್ ಡ್ಯಾಂ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಇದರಿಂದ ಸೋಮನಹಳ್ಳಿ, ರುದ್ರಾಕ್ಷಿಪುರ, ತೈಲೂರು ಕೆರೆಗಳು ಭರ್ತಿಯಾಗಿ ಬಳಿಕ ಆಲೂರು, ನೀಲಕಂನಹಳ್ಳಿ, ಕೆ.ಹಾಗಲಹಳ್ಳಿ ಕೆರೆಗಳು ಭರ್ತಿಯಾಗಲಿದ್ದು, ಇದರ…
ಮಂಡ್ಯ: ಹೆಂಡತಿಯ ಮುಂದೆ ತಾನು ದೊಡ್ಡ ಶ್ರೀಮಂತ ಎಂದು ಬಿಲ್ಡಪ್ ಕೊಟ್ಟು ‘ಸ್ಟೇಟಸ್’ ಕಾಯ್ದುಕೊಳ್ಳಲು ಹೋಗಿ, ಕೊನೆಗೆ ಪೊಲೀಸರ ಅತಿಥಿಯಾದ ಖತರ್ನಾಕ್ ಕಳ್ಳನೊಬ್ಬನ ರೋಚಕ ಕಥೆಯಿದು! ಮಂಡ್ಯ ಜಿಲ್ಲೆಯ ಕಿರುಗಾವಲು ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ನಾಲ್ವರು ನಟೋರಿಯಸ್ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಗುರುಪ್ರಸಾದ್ ಅಲಿಯಾಸ್ ಗುರು (36), ರೋಹಿತ್ ಅಲಿಯಾಸ್ ಗೆದ್ವಾ (20), ನಂಜೇಗೌಡ ಅಲಿಯಾಸ್ ಕಾಶಿ (19) ಹಾಗೂ ಮಣಿಗೆರೆ ಗ್ರಾಮದ ಮಾದೇಶ ಅಲಿಯಾಸ್ ಮಾದ (20) ಬಂಧಿತ ಆರೋಪಿಗಳು. ಹೆಂಡತಿ ಎದುರು ಬಿಲ್ಡಪ್ಗಾಗಿ ಕಳ್ಳತನ! ಬಂಧಿತರ ಪೈಕಿ ಪ್ರಮುಖ ಆರೋಪಿಯಾದ ಗುರುಪ್ರಸಾದ್, ತನ್ನ ಹೆಂಡತಿಯ ಮುಂದೆ ತಾನು ಅತ್ಯಂತ ಶ್ರೀಮಂತ ಎನ್ನುವುದನ್ನು ತೋರಿಸಿಕೊಳ್ಳುವ ಹಪಾಹಪಿಗೆ ಬಿದ್ದು ಈ ದಾರಿಗೆ ಇಳಿದಿದ್ದ. ಸುಲಭವಾಗಿ ಹಣ ಸಂಪಾದಿಸಿ ಐಷಾರಾಮಿ ಜೀವನ ನಡೆಸಲು ಉಳಿದ ಯುವಕರೊಂದಿಗೆ ಗ್ಯಾಂಗ್ ಕಟ್ಟಿಕೊಂಡು ಸರಗಳ್ಳತನ ಮಾಡಲು ಶುರು ಮಾಡಿದ್ದ ಎನ್ನಲಾಗಿದೆ. ಒಂಟಿ ಮಹಿಳೆಯರೇ ಇವರ ಟಾರ್ಗೆಟ್: ಈ ಖತರ್ನಾಕ್…
ಬೆಂಗಳೂರು: ನಮ್ಮ ಮೆಟ್ರೋ ನೆರಳೆ ಮಾರ್ಗದ (Purple Line) ಐಟಿಪಿಎಲ್ ಮತ್ತು ಸತ್ಯಸಾಯಿ ಆಸ್ಪತ್ರೆ ಮೆಟ್ರೋ ನಿಲ್ದಾಣಗಳ ನಡುವೆ ರೈಲ್ವೆ ಹಳಿಗಳ ಮೇಲೆ ಮರದ ಕೊಂಬೆಯೊಂದು ಬಿದ್ದಿರುವ ಕಾರಣ, ವೈಟ್ಫೀಲ್ಡ್ನಿಂದ ಗರುಡಾಚಾರ್ ಪಾಳ್ಯದ ನಡುವಿನ ರೈಲು ಸಂಚಾರವನ್ನು ಇಂದು ಸಂಜೆ 06:00 ಗಂಟೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಗರುಡಾಚಾರ್ ಪಾಳ್ಯ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಬಿಎಂಆರ್ಸಿಎಲ್ (BMRCL) ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ಹಳಿಯ ಮೇಲಿರುವ ಮರದ ಕೊಂಬೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಇನ್ನೇನು ಕೆಲವೇ ಸಮಯದಲ್ಲಿ ಪರಿಸ್ಥಿತಿ ತಿಳಿಯಾಗಲಿದ್ದು, ಶೀಘ್ರದಲ್ಲೇ ಎಂದಿನಂತೆ ಪೂರ್ಣ ಪ್ರಮಾಣದ ರೈಲು ಸೇವೆಗಳು ಪುನಾರಂಭಗೊಳ್ಳಲಿವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಸಹಕರಿಸಲು ಕೋರಲಾಗಿದೆ.
ಬೆಂಗಳೂರು: ರಾಜ್ಯಾದ್ಯಂತ ನೂತನ 150 ನಾಡ ಕಛೇರಿಗಳ ನಿರ್ಮಾಣಕ್ಕೆ ಅಂಕಿತವನ್ನು ಸರ್ಕಾರ ಹಾಕಿದೆ. ಆ ಮೂಲಕ ಆಡಳಿತ ಯಂತ್ರವನ್ನು ಚುರುಕುಗೊಳಿಸುವಂತ ಕೆಲಸ ಮಾಡಿದೆ. ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಾದ್ಯಂತ 771 ಹೋಬಳಿ ಮಟ್ಟದ ನಾಡ ಕಛೇರಿಗಳು ಕಾರ್ಯನಿರ್ವಹಿಸುತ್ತಿವೆ. ಸಾರ್ವಜನಿಕರು 54 ಸೇವೆಗಳನ್ನು ಪಡೆಯಲು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ನಾಡ ಕಛೇರಿಗಳಿಗೆ ಭೇಟಿ ನೀಡುತ್ತಾರೆ. ಅನೇಕ ಪ್ರಮಾಣ ಪತ್ರಗಳು, ದಾಖಲೆಗಳು ಮಾತ್ರವಲ್ಲದೆ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿಯೂ ಭೇಟಿ ನೀಡುತ್ತಿರುತ್ತಾರೆ. ಇದಲ್ಲದೆ, ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು (ಆರ್ಐ) ಗ್ರಾಮ ಆಡಳಿತ ಅಧಿಕಾರಿಗಳ (ವಿಎ) ಬಳಿಯೂ ಕೆಲಸಕ್ಕಾಗಿ ಪ್ರತಿದಿನ ಸಾರ್ವಜನಿಕರು ಭೇಟಿ ನೀಡುತ್ತಾರೆ. ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಕೊಂಡಿಯಾಗಿ ನಾಡಕಛೇರಿಗಳು ಕಾರ್ಯನಿರ್ವಹಿಸುತ್ತಿವೆ ಎಂದಿದ್ದಾರೆ. ಇಂತಹ ಜನ ಸಂಪರ್ಕವಿರುವ ಕಛೇರಿಗಳಿಗೆ ಅನೇಕ ಕಡೆಗಳಲ್ಲಿ ಸ್ವಂತ ಕಟ್ಟಡಗಳಿಗಲ್ಲ. ಮತ್ತಷ್ಟು ಕಡೆ ಅಧಿಕಾರಿಗಳು ಹಳೇ ಕಟ್ಟಡಗಳಲ್ಲಿ ಅಥವಾ ಶಿಥಿಲಾವಸ್ಥೆಯ ಕಟ್ಟಡಗಳಲ್ಲಿ ಕುಳಿತು ಕಾರ್ಯನಿರ್ವಹಿಸುವಂತಹ ಸ್ಥಿತಿ ಇದೆ. ಸಾರ್ವಜನಿಕರ ಅನಾನುಕೂಲದ…
ಪುರಾಣಗಳ ಪ್ರಕಾರ, ದೇವ-ದಾನವರು ಸೇರಿ ಕ್ಷೀರಸಾಗರವನ್ನು ಮಥನ ಮಾಡುವಾಗ (ಸಮುದ್ರ ಮಂಥನ) ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿಯಂದು ಧನ್ವಂತರಿ ದೇವರು ಉದ್ಭವಿಸಿದರು ಇವರು ಸಮುದ್ರದಿಂದ ಹೊರಬರುವಾಗ ತಮ್ಮ ಕೈಯಲ್ಲಿ ದೇವತೆಗಳಿಗೆ ಅಮರತ್ವವನ್ನು ನೀಡುವ ‘ಅಮೃತ ಕಲಶ’ವನ್ನು ಹಿಡಿದುಕೊಂಡು ಬಂದರು ಎಂಬುದು ಪ್ರತೀತಿ ಧನ್ವಂತರಿ ದೇವರನ್ನು ‘ಆಯುರ್ವೇದದ ಪಿತಾಮಹ’ ಅಥವಾ ಮೂಲಪುರುಷ ಎಂದು ಕರೆಯಲಾಗುತ್ತದೆ. ಉತ್ತಮ ಆರೋಗ್ಯ, ರೋಗ ನಿವಾರಣೆ ಮತ್ತು ದೀರ್ಘಾಯುಷ್ಯಕ್ಕಾಗಿ ಇವರನ್ನು ಪ್ರಾರ್ಥಿಸಲಾಗುತ್ತದೆ ರೋಗ ನಿವಾರಣಾ ಧನ್ವಂತರಿ ಮಂತ್ರ ಆರೋಗ್ಯ ವೃದ್ಧಿಗಾಗಿ ಮತ್ತು ಕಾಯಿಲೆಗಳಿಂದ ದೂರವಿರಲು ಈ ಕೆಳಗಿನ ಮಂತ್ರವನ್ನು ಪಠಿಸಬೇಕು ”ಓಂ ನಮೋ ಭಗವತೇ ವಾಸುದೇವಾಯ ಧನ್ವಂತರಯೇ ಅಮೃತಕಲಶ ಹಸ್ತಾಯ ಸರ್ವಾಮಯ ವಿನಾಶನಾಯ ತ್ರೈಲೋಕ್ಯ ನಾಥಾಯ ಶ್ರೀ ಮಹಾವಿಷ್ಣವೇ ನಮಃ” ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ…
ಕಷ್ಟಗಳು, ದಾರಿದ್ರ್ಯ ಮತ್ತು ಭಯವನ್ನು ನಿವಾರಿಸುವ ದತ್ತಮಾಲಾ ಮಂತ್ರದ ಶಕ್ತಿ ನಿಮಗೊತ್ತೇ? ಇಲ್ಲಿದೆ ಪಠಿಸಿ ಶ್ರೀ ದತ್ತಮಾಲಾ ಮಂತ್ರ ಓಂ ನಮೋ ಭಗವತೇ ದತ್ತಾತ್ರೇಯಾಯ, ಸ್ಮರಣಮಾತ್ರ ಸಂತುಷ್ಟಾಯ, ಮಹಾಭಯನಿವಾರಣಾಯ, ಮಹಾಜ್ಞಾನಪ್ರದಾಯ, ಚಿದಾನಂದಾತ್ಮನೇ, ಬಾಲೋನ್ಮತ್ತಪಿಶಾಚವೇಷಾಯ, ಮಹಾಯೋಗಿನೇ ಅವಧೂತಾಯ, ಅನಸೂಯಾನಂದವರ್ಧನಾಯ ಅತ್ರಿಪುತ್ರಾಯ, ಸರ್ವಕಾಮಫಲಪ್ರದಾಯ, ಓಂ ಭವಬಂಧವಿಮೋಚನಾಯ, ಅಸಾಧ್ಯಸಾಧನಾಯ, ಸರ್ವವಿಭೂತಿದಾಯ, ಅಸಾಧ್ಯಾಕರ್ಷಣಾಯ, ಐಂ ವಾಕ್ಪ್ರದಾಯ, ಜಗತ್ರಯವಶೀಕರಣಾಯ, ಸೌಃ ಸರ್ವಮನಃಕ್ಷೋಭಣಾಯ, ಶ್ರೀಂ ಮಹಾಸಂಪತ್ಪ್ರದಾಯ, ಭೂಮಂಡಲಾಧಿಪತ್ಯಪ್ರದಾಯ, ಚಿರಂಜೀವಿನೇ, ವಷಟ್ ವಶೀಕುರು ವಶೀಕುರು, ವೌಷಟ್ ಆಕರ್ಷಯ ಆಕರ್ಷಯ, ಹುಂ ವಿದ್ವೇಷಯ ವಿದ್ವೇಷಯ, ಫಟ್ ಉಚ್ಚಾಟಯ ಉಚ್ಚಾಟಯ, ಠಃ ಸ್ತಂಭಯ ಸ್ತಂಭಯ, ಖೇಂ ಖೇಂ ಮಾರಯ ಮಾರಯ, ನಮಃ ಸಂಪನ್ನಯ ಸಂಪನ್ನಯ, swaha ಪೋಷಯ ಪೋಷಯ, ಪರಮಂತ್ರಪರಯಂತ್ರಪರತಂತ್ರಾಣಿ ಛಿಂಧಿ ಛಿಂಧಿ, ಗ್ರಹಾನ್ನಿವಾರಯ ನಿವಾರಯ, ವ್ಯಾಧೀನ್ ವಿನಾಶಯ ವಿನಾಶಯ, ದುಃಖಂ ಹರ ಹರ, ದಾರಿದ್ರ್ಯಂ ವಿದ್ರಾವಯ ವಿದ್ರಾವಯ, ದೇಹಂ ಪೋಷಯ ಪೋಷಯ, ಚಿತ್ತಂ ತೋಷಯ ತೋಷಯ, ಸರ್ವಮಂತ್ರಸ್ವರೂಪಾಯ, ಸರ್ವಯಂತ್ರಸ್ವರೂಪಾಯ, ಸರ್ವತಂತ್ರಸ್ವರೂಪಾಯ, ಸರ್ವಪಲ್ಲವಸ್ವರೂಪಾಯ, ಓಂ ನಮೋ ಮಹಾಸಿದ್ಧಾಯ ಸ್ವಾಹಾ || ಪ್ರಧಾನ ಗುರುಗಳು ಹಾಗೂ…
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ಅಂಗಸಂಸ್ಥೆಯಾದ ಯೂಥ್ ಕಾಂಗ್ರೆಸ್ (ಯುವ ಕಾಂಗ್ರೆಸ್) ಈಗ ಸಂಪೂರ್ಣವಾಗಿ ಒಡೆದ ಮನೆಯಾಗಿದೆ. ಆಂತರಿಕ ಬೇಗುದಿ, ನಾಯಕರ ನಡುವಿನ ಪ್ರತಿಷ್ಠೆಯ ಜಗಳದಿಂದಾಗಿ ಸಂಘಟನೆ ಎರಡು ಬಣಗಳಾಗಿ ಹೋಳಾಗಿದ್ದು, “ಮನೆಯೊಂದು ಮೂರು ಬಾಗಿಲು” ಎಂಬಂತಾಗಿದೆ. ರಾಜ್ಯ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ನಡುವಿನ ಬಣ ರಾಜಕೀಯ ಈಗ ಬೀದಿಗೆ ಬಂದಿದ್ದು, ಉಭಯ ನಾಯಕರ ಬೆಂಬಲಿಗರ ನಡುವಿನ ಕಿತ್ತಾಟ ತಾರಕಕ್ಕೇರಿದೆ. ಇತ್ತೀಚೆಗೆ ನಡೆದ ಸಭೆಯೊಂದರಲ್ಲಿ ಎರಡು ಬಣಗಳ ಪದಾಧಿಕಾರಿಗಳು ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ನಾಂದಿ ಹಾಡಿದೆ. ಏಕಪಕ್ಷೀಯ ತೀರ್ಮಾನ: ಸಂಘರ್ಷಕ್ಕೆ ಮುಖ್ಯ ಕಾರಣ! ಯೂಥ್ ಕಾಂಗ್ರೆಸ್ನಲ್ಲಿ ಈ ಮಟ್ಟದ ಬಿರುಕು ಮೂಡಲು ಅಧ್ಯಕ್ಷ ಮಂಜುನಾಥ್ ಅವರ ಏಕಪಕ್ಷೀಯ ನಡೆಗಳೇ ಕಾರಣ ಎಂದು ಹೇಳಲಾಗುತ್ತಿದೆ. ಸಂಘಟನೆಯಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂಬ ನೆಪವೊಡ್ಡಿ ಉಪಾಧ್ಯಕ್ಷೆ ದೀಪಿಕಾ…
ಲೈಂಗಿಕ ಸಾಮರ್ಥ್ಯ ಮತ್ತು ದೀರ್ಘಕಾಲದ ದೈಹಿಕ ತೃಪ್ತಿಯು ವ್ಯಕ್ತಿಯ ಒಟ್ಟಾರೆ ಆರೋಗ್ಯ ಮತ್ತು ಜೀವನಶೈಲಿಯ ಮೇಲೆ ಆಧಾರಿತವಾಗಿರುತ್ತದೆ. ಇತ್ತೀಚಿನ ಒತ್ತಡದ ಜೀವನ, ತಪ್ಪು ಆಹಾರ ಪದ್ಧತಿಯಿಂದಾಗಿ ಅನೇಕರು ಹಾಸಿಗೆಯಲ್ಲಿ ಹೆಚ್ಚು ಸಮಯ ಸಕ್ರಿಯವಾಗಿರಲು (Last longer in bed) ಪರದಾಡುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಮಾತ್ರೆಗಳನ್ನು ಆಶ್ರಯಿಸುವ ಬದಲು, ನೈಸರ್ಗಿಕ ಆಹಾರಗಳ ಮೂಲಕವೇ ಲೈಂಗಿಕ ಶಕ್ತಿ ಮತ್ತು ಸ್ಟ್ಯಾಮಿನಾವನ್ನು ಹೆಚ್ಚಿಸಿಕೊಳ್ಳಬಹುದು. ಫಾರ್ಮ್ಈಸಿ (PharmEasy) ವರದಿಯ ಆಧಾರದ ಮೇಲೆ, ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಸಾಮರ್ಥ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುವ ಕೆಲವು ಅತ್ಯುತ್ತಮ ಆಹಾರಗಳ ಕಂಪ್ಲೀಟ್ ಗೈಡ್ ಇಲ್ಲಿದೆ: 1. ಕಲ್ಲಂಗಡಿ ಹಣ್ಣು (Watermelon): ನೈಸರ್ಗಿಕ ವಯಾಗ್ರ ಕಲ್ಲಂಗಡಿ ಹಣ್ಣನ್ನು ‘ನೈಸರ್ಗಿಕ ವಯಾಗ್ರ’ ಎಂದೇ ಕರೆಯಲಾಗುತ್ತದೆ. ಇದರಲ್ಲಿ ‘ಸಿಟ್ರುಲಿನ್’ (Citrulline) ಎಂಬ ಅಮಿನೋ ಆಮ್ಲ ಹೇರಳವಾಗಿದೆ. ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪಾದನೆಯನ್ನು ಹೆಚ್ಚಿಸಿ, ರಕ್ತನಾಳಗಳು ಸಡಿಲಗೊಳ್ಳುವಂತೆ ಮಾಡುತ್ತದೆ. ಇದರಿಂದ ಜನನಾಂಗಗಳ ಭಾಗಕ್ಕೆ ರಕ್ತಸಂಚಲನ ಸುಧಾರಿಸಿ, ದೀರ್ಘಕಾಲದ ಉದ್ರೇಕಕ್ಕೆ ಸಹಾಯ ಮಾಡುತ್ತದೆ.…














