Subscribe to Updates
Get the latest creative news from FooBar about art, design and business.
Author: kannadanewsnow09
ಇಂದಿನ ಕಾಲದಲ್ಲಿ ಸಿನಿಮಾ, ಸಾಮಾಜಿಕ ಜಾಲತಾಣಗಳು ಅಥವಾ ಗೆಳೆಯರ ಗುಂಪಿನಲ್ಲಿ ‘ಲೈಂಗಿಕತೆ’ಯ ಬಗ್ಗೆ ಕೇಳಿಬರುವ ಮಾತುಗಳು ನಿಮ್ಮನ್ನು ಗೊಂದಲಕ್ಕೀಡು ಮಾಡಿರಬಹುದು. ಎಲ್ಲರೂ ಆ ಹಾದಿಯಲ್ಲಿದ್ದಾರೆ ಎಂದು ನಿಮಗೆ ಅನಿಸಬಹುದು. ಆದರೆ ಸತ್ಯವೆಂದರೆ, ಅರ್ಧಕ್ಕಿಂತ ಹೆಚ್ಚು ಹದಿಹರೆಯದವರು ತಮಗೆ ಸರಿಯಾದ ವಯಸ್ಸು ಬರುವವರೆಗೆ ಕಾಯುವ ನಿರ್ಧಾರವನ್ನೇ ಮಾಡುತ್ತಾರೆ. ಲೈಂಗಿಕ ಜೀವನಕ್ಕೆ ಕಾಲಿಡುವ ಮೊದಲು ಅಥವಾ ಅಂತಹ ಆಲೋಚನೆಗಳು ಬಂದಾಗ, ನಿಮ್ಮನ್ನು ನೀವೇ ಕೇಳಿಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ. ೧. ನಿಮ್ಮ ಮನಸ್ಸನ್ನು ನೀವೇ ಪ್ರಶ್ನಿಸಿಕೊಳ್ಳಿ ಯಾರೋ ಒತ್ತಾಯ ಮಾಡಿದರೆಂದೋ ಅಥವಾ ಗೆಳೆಯರ ಮುಂದೆ ದೊಡ್ಡವನಾಗಿ ಕಾಣಬೇಕೆಂದೋ ಈ ನಿರ್ಧಾರ ತೆಗೆದುಕೊಳ್ಳಬೇಡಿ. ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ: ನಾನು ನಿಜವಾಗಿಯೂ ಇದಕ್ಕೆ ಸಿದ್ಧನಿದ್ದೇನಾ? ನನ್ನ ಮೇಲೆ ಯಾರಾದರೂ ಒತ್ತಡ ಹೇರುತ್ತಿದ್ದಾರೆಯೇ? ಸುರಕ್ಷಿತ ಲೈಂಗಿಕತೆಯ ಬಗ್ಗೆ ನನಗೆ ಪೂರ್ಣ ಮಾಹಿತಿಯಿದೆಯೇ? ಈ ದೈಹಿಕ ಸಂಬಂಧದ ನಂತರ ನಮ್ಮ ನಡುವಿನ ಸಂಬಂಧ ಏನಾಗಬಹುದು? ೨. ಲೈಂಗಿಕತೆ ಇಲ್ಲದೆಯೂ ಪ್ರೀತಿ ಸಾಧ್ಯವೇ? ಖಂಡಿತ ಸಾಧ್ಯ. ಒಂದು…
ಹದಿಹರೆಯದ ಹಂತವು ಕುತೂಹಲ ಮತ್ತು ದೈಹಿಕ ಬದಲಾವಣೆಗಳ ಸಂಗಮ. ಈ ಸಮಯದಲ್ಲಿ ಪ್ರೀತಿ, ಆಕರ್ಷಣೆ ಮತ್ತು ಲೈಂಗಿಕತೆಯ ಬಗ್ಗೆ ಅನೇಕ ಪ್ರಶ್ನೆಗಳು ಮೂಡುವುದು ಸಹಜ. ಗೆಳೆಯರ ಒತ್ತಡ ಅಥವಾ ಸಿನಿಮಾಗಳ ಪ್ರಭಾವದಿಂದಾಗಿ ಅನೇಕರು ಲೈಂಗಿಕ ಜೀವನಕ್ಕೆ ಕಾಲಿಡಲು ಆತುರಪಡುತ್ತಾರೆ. ಆದರೆ, ಲೈಂಗಿಕವಾಗಿ ಸಕ್ರಿಯರಾಗುವ ಮೊದಲು ‘ಕಾಯುವ ನಿರ್ಧಾರ’ (Deciding to Wait) ಮಾಡುವುದು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಬುದ್ಧಿವಂತಿಕೆಯ ನಡೆಯಾಗಿದೆ. ೧. ಕಾಯುವುದು ಎಂದರೆ ಕೇವಲ ‘ಇಲ್ಲ’ ಎನ್ನುವುದಲ್ಲ ಲೈಂಗಿಕತೆಯಿಂದ ದೂರವಿರುವುದು (Abstinence) ಎಂದರೆ ಅದು ಜೀವನದ ಸಂಭ್ರಮವನ್ನು ಕಳೆದುಕೊಳ್ಳುವುದು ಎಂದಲ್ಲ. ಬದಲಾಗಿ, ಅದು ನಿಮ್ಮ ಭಾವನೆಗಳು, ಗುರಿಗಳು ಮತ್ತು ಸಂಬಂಧದ ಗಾಢತೆಯನ್ನು ಅರ್ಥಮಾಡಿಕೊಳ್ಳಲು ನೀಡುವ ಸಮಯ. ಸರಿಯಾದ ಸಮಯ ಮತ್ತು ಸರಿಯಾದ ಸಂಗಾತಿ ಸಿಗುವವರೆಗೂ ಕಾಯುವುದು ನಿಮ್ಮ ಆತ್ಮಗೌರವವನ್ನು ಹೆಚ್ಚಿಸುತ್ತದೆ. ೨. ಕಾಯುವ ನಿರ್ಧಾರಕ್ಕೆ ಪ್ರಮುಖ ಕಾರಣಗಳು ಭಾವನಾತ್ಮಕ ಸಿದ್ಧತೆ: ಲೈಂಗಿಕ ಸಂಬಂಧವು ಕೇವಲ ದೈಹಿಕವಲ್ಲ, ಅದು ಬಲವಾದ ಭಾವನಾತ್ಮಕ ಜವಾಬ್ದಾರಿಯನ್ನು ಬಯಸುತ್ತದೆ. ಹದಿಹರೆಯದಲ್ಲಿ…
ಬೆಂಗಳೂರು: ಭಾರತದ ಸರ್ವತೋಮುಖ ಅಭಿವೃದ್ಧಿಯಲ್ಲಿ ‘ಜನಗಣತಿ’ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ದೇಶದ ಪ್ರತಿಯೊಬ್ಬ ನಾಗರಿಕನ ಅಂಕಿ-ಅಂಶಗಳು ಸರ್ಕಾರದ ಯೋಜನೆಗಳು ಕಟ್ಟಕಡೆಯ ವ್ಯಕ್ತಿಯನ್ನು ತಲುಪಲು ದಾರಿದೀಪವಾಗುತ್ತವೆ. ಇದೀಗ 2027ರ ಜನಗಣತಿಯು ಆಧುನಿಕ ಸ್ಪರ್ಶದೊಂದಿಗೆ ಸಜ್ಜಾಗಿದ್ದು, ಸಾರ್ವಜನಿಕರಿಗೆ ‘ಸ್ವಯಂ ಗಣತಿ’ (Self-Enumeration) ಮಾಡಿಕೊಳ್ಳಲು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಸ್ವಯಂ ಗಣತಿ: ನಿಮ್ಮ ಜವಾಬ್ದಾರಿ, ನಿಮ್ಮ ಹೆಮ್ಮೆ ಸಾರ್ವಜನಿಕರು ಆನ್ಲೈನ್ ಮೂಲಕ ತಮ್ಮ ಮಾಹಿತಿಯನ್ನು ತಾವೇ ಭರ್ತಿ ಮಾಡಲು ಏಪ್ರಿಲ್ 15ರ ವರೆಗೆ ಕಾಲಾವಕಾಶ ನೀಡಲಾಗಿದೆ. ಸರಳ ಹಂತಗಳಲ್ಲಿ ನಿಮ್ಮ ಕುಟುಂಬದ ವಿವರಗಳನ್ನು ಸಲ್ಲಿಸುವ ಮೂಲಕ ನೀವು ಒಬ್ಬ ಜವಾಬ್ದಾರಿಯುತ ನಾಗರಿಕರಾಗಿ ದೇಶದ ಅಭಿವೃದ್ಧಿಗೆ ಸಹಕರಿಸಬಹುದು. https://twitter.com/KarnatakaVarthe/status/2041091200443408465 ಮಾಹಿತಿ ಭರ್ತಿ ಮಾಡುವುದು ಹೇಗೆ? ವೆಬ್ಸೈಟ್ಗೆ ಭೇಟಿ ನೀಡಿ: ಅಧಿಕೃತ ಪೋರ್ಟಲ್ se.census.gov.in ಗೆ ಲಾಗಿನ್ ಆಗಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ಲಾಗಿನ್ ಪ್ರಕ್ರಿಯೆ: ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸ್ವೀಕರಿಸಿದ OTP ಬಳಸಿ ಲಾಗಿನ್ ಆಗಿ. ಸ್ಥಳದ ಗುರುತಿಸುವಿಕೆ:…
ಬಾಗಲಕೋಟೆ : ಯಡಿಯೂರಪ್ಪ ಅವರ ಭ್ರಷ್ಟಾಚಾರದ ಬಗ್ಗೆ ಬಿಜೆಪಿಯ ಯತ್ನಾಳ್ ಮತ್ತು ವಿಶ್ವನಾಥ್ ಅವರೇ ಬಹಿರಂಗವಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿಗಳು ತಿರುಗೇಟು ನೀಡಿದರು. ಸಿದ್ದರಾಮಯ್ಯ ಅವರು ವಿಶ್ವಾಸದ್ರೋಹಿ ಎಂದು ಯಡಿಯೂರಪ್ಪ ಮಾಡಿದ ಆರೋಪದ ಬಗ್ಗೆ ನವನಗರ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು. ನಾನು ಯಾರಿಗೆ ವಿಶ್ವಾಸದ್ರೋಹ ಮಾಡಿದ್ದೇನೆ ಎನ್ನುವುದನ್ನು ಉಲ್ಲೇಖಿಸಿ ಯಡಿಯೂರಪ್ಪ ಅವರು ಆರೋಪ ಮಾಡಬೇಕು. ಅರಳು ಮರಳು ಯಡಿಯೂರಪ್ಪ ಅವರು ಆಧಾರ ಸಹಿತವಾಗಿ ಮಾತನಾಡಬೇಕು ಎಂದರು. ತಮ್ಮ ಜಾತಿಯ ಅಭ್ಯರ್ಥಿ ಆದ ಕಾರಣ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನುವ ಯಡಿಯೂರಪ್ಪ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ದಾವಣಗೆರೆ ದಕ್ಷಿಣದಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಶಾಮನೂರು ಪರವಾಗಿ ಅಲ್ಲೇ ಠಿಕಾಣಿ ಹೂಡಿ ಪ್ರಚಾರ ಮಾಡಿದ್ದೇನೆ. ಅವರು ಯಾವ ಜಾತಿ ? ಎಂದು ಪ್ರಶ್ನಿಸಿದರು. ನಾವು ಜಾತಿ ಕಾರಣಕ್ಕೆ ಪ್ರಚಾರ ಮಾಡುವುದಿಲ್ಲ. ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡ್ತೀವಿ ಎಂದರು. ಮುಖ್ಯಮಂತ್ರಿ ಯಾರಾಗಿರಬೇಕು…
ಶಿವಮೊಗ್ಗ: ಯಾವುದೇ ಮುನ್ಸೂಚನೆ ಇಲ್ಲದೆ ಗ್ರಾಹಕರ ಒಡಿ (OD) ಖಾತೆಯಿಂದ ಹಣ ಕಡಿತಗೊಳಿಸಿ, ಅದನ್ನು ಹಿಂತಿರುಗಿಸದೆ ಸೇವಾನ್ಯೂನತೆ ಎಸಗಿದ ಹೊಸನಗರದ ಕೆನರಾ ಬ್ಯಾಂಕ್ ಶಾಖೆಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಭಾರೀ ದಂಡ ವಿಧಿಸಿದೆ. ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸುವಂತೆ ಮತ್ತು ಗ್ರಾಹಕನಿಗೆ ಪರಿಹಾರ ನೀಡುವಂತೆ ಆಯೋಗವು ಐತಿಹಾಸಿಕ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ಹೊಸನಗರ ತಾಲೂಕು ಎಂ. ಗುಡ್ಡೆಕೊಪ್ಪ ನಿವಾಸಿ ಧನಂಜಯ ಎಂ.ವಿ. ಅವರು ಹೊಸನಗರ ಕೆನರಾ ಬ್ಯಾಂಕ್ನಲ್ಲಿ 2.80 ಲಕ್ಷ ರೂ.ಗಳ ಒಡಿ ಸೌಲಭ್ಯ ಹೊಂದಿದ್ದರು. ಜೂನ್ 2024ರಲ್ಲಿ ಬ್ಯಾಂಕ್ ಯಾವುದೇ ಮುನ್ಸೂಚನೆ ನೀಡದೆ ಅವರ ಖಾತೆಯಿಂದ 3,89,544 ರೂ. ಹಣವನ್ನು ಕಡಿತಗೊಳಿಸಿತ್ತು. ಈ ಬಗ್ಗೆ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಿದಾಗ ಎರಡು ದಿನಗಳಲ್ಲಿ ಹಣ ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಹಣ ಬಾರದಿದ್ದಾಗ ಧನಂಜಯ ಅವರು ಲೀಗಲ್ ನೋಟೀಸ್ ನೀಡಿದ್ದರು. ಅದಕ್ಕೂ ಬ್ಯಾಂಕ್ ಸ್ಪಂದಿಸದ ಕಾರಣ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು. ಆಯೋಗದ ತೀರ್ಪು:…
ರಾಜ್ಯದ ಮೆಕ್ಕೆಜೋಳ ಬೆಳೆಗಾರರಿಗೆ ಗುಡ್ ನ್ಯೂಸ್: ವಿಮೆ ತಿರಸ್ಕೃತಗೊಂಡ ರೈತರಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಧಿ ವಿಸ್ತರಣೆ
ಬೆಂಗಳೂರು: 2024ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ‘ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ’ಯಡಿ ಮೆಕ್ಕೆಜೋಳ ಬೆಳೆಗೆ ವಿಮೆ ಪಾವತಿಸಿ, ತಾಂತ್ರಿಕ ಕಾರಣಗಳಿಂದ ಪರಿಹಾರ ಪಡೆಯಲು ವಂಚಿತರಾದ ರೈತರಿಗೆ ಕೃಷಿ ಇಲಾಖೆ ಆಶಾದಾಯಕ ಸುದ್ದಿ ನೀಡಿದೆ. ವಿಮೆ ತಿರಸ್ಕೃತಗೊಂಡ ರೈತರು ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 25 ರವರೆಗೆ ಕಾಲಾವಕಾಶ ನೀಡಲಾಗಿದೆ. ಏನಿದು ಸಮಸ್ಯೆ? ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ತೆಗೆಯಲಾದ ಫೋಟೋಗಳು ಮತ್ತು ರೈತರು ವಿಮೆ ಮಾಡಿಸಿದ ಬೆಳೆಗಳ ವಿವರಗಳ ನಡುವೆ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ವಿಮಾ ಸಂಸ್ಥೆಯು ಕೆಲವು ಅರ್ಜಿಗಳನ್ನು ತಿರಸ್ಕರಿಸಿದೆ. ಇಂತಹ ರೈತರ ಮಾಹಿತಿಯನ್ನು ಒಳಗೊಂಡ ತಿರಸ್ಕೃತ ಪಟ್ಟಿಯನ್ನು ಈಗಾಗಲೇ ಆಯಾ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ರೈತರು ಮಾಡಬೇಕಾದ್ದೇನು? ಪಟ್ಟಿ ಪರಿಶೀಲನೆ: ಇದುವರೆಗೆ ವಿಮೆ ಪರಿಹಾರ ಬಾರದ ರೈತರು ತಕ್ಷಣವೇ ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ, ತಿರಸ್ಕೃತ ಪಟ್ಟಿಯಲ್ಲಿ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ದಾಖಲೆಗಳ ಸಲ್ಲಿಕೆ: ಹೆಸರು ಪಟ್ಟಿಯಲ್ಲಿದ್ದಲ್ಲಿ, ಈ ಕೆಳಗಿನ ದಾಖಲೆಗಳೊಂದಿಗೆ…
ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ ಅವರು ಹೊಸ ಸಮಿತಿಯ ಅಧ್ಯಕ್ಷರಾದಂತ ಪವಿತ್ರಾ ನಾಗರಾಜ್ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದೆ. ಇಂದು ಸಾಗರದ ಮಾರಿಕಾಂಬ ದೇವಸ್ಥಾನದಲ್ಲಿ ನೂತನ ಸಮಿತಿಗೆ ಅಧಿಕಾರ ಹಸ್ತಾಂತರದ ಕಾರ್ಯಕ್ರಮ ನಡೆಯಿತು. ಹಳೆಯ ಸಮಿತಿಯ ಅಧ್ಯಕ್ಷರಾದಂತ ಕೆ.ಎನ್ ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ್ ಜೊತೆಗೂಡಿ ನೂತನ ಸಮಿತಿಯ ಅಧ್ಯಕ್ಷ ಪವಿತ್ರಾ ನಾಗರಾಜ್, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್ ಅವರಿಗೆ ಸಮಿತಿಯ ಲೆಕ್ಕದ ಪುಸ್ತಕಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ನೂತನ ಸಮಿತಿಯ ಅಧ್ಯಕ್ಷರಿಗೆ ಮಾಜಿ ಪ್ರಧಾನ ಕಾರ್ಯದರ್ಶಿ ಗಿರಿಧರ ಭಟ್ ಅವರು ಲೆಕ್ಕ ಪತ್ರ, ಮಾರಿಕಾಂಬೆಗೆ ಬಂದಂತ ಬಂಗಾರ, ಬೆಳ್ಳಿಯ ವಸ್ತುಗಳು ಸೇರಿದಂತೆ ಹಣಕಾಸಿನ ಮಾಹಿತಿಯನ್ನು ಸಭೆಯಲ್ಲಿಯೇ ಸಮಿತಿಯ ಎಲ್ಲರ ಮುಂದೆ ಮಾಹಿತಿ ನೀಡಿದರು. ಜೊತೆಗೆ ಮಾರಿಕಾಂಬ ದೇವಿಯ ಲೆಕ್ಕ ಪತ್ರವನ್ನು ಆಡಿಟ್ ಮಾಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಮೇ, ಜೂನ್ ಒಳಗಾಗಿ ಮಾರಿಕಾಂಬ…
BIG NEWS: ರಾಜ್ಯದಲ್ಲಿ PUCವರೆಗೆ ಗಂಡು ಮಕ್ಕಳಿಗೆ ಉಚಿತ ಪ್ರಯಾಣದ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ: KSRTC ಸ್ಪಷ್ಟನೆ
ಬೆಂಗಳೂರು: ಪಿಯುಸಿವರೆಗಿನ ಗಂಡು ಮಕ್ಕಳಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಸ್ಪಷ್ಟನೆಯ ವಿವರ ಇಲ್ಲಿದೆ: ಇತ್ತೀಚೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು, ಶಾಲಾ-ಕಾಲೇಜಿಗೆ ಹೋಗುವ ಪಿಯುಸಿವರೆಗಿನ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡುವಂತೆ ರಸ್ತೆ ಸಾರಿಗೆ ನಿಗಮಗಳಿಗೆ ಶಿಫಾರಸ್ಸು ಮಾಡಿದೆ ಎಂಬುದು ನಿಜ. ಆದರೆ, ಈ ಶಿಫಾರಸ್ಸಿನ ಕುರಿತು ಸರ್ಕಾರವಾಗಲಿ ಅಥವಾ ಸಾರಿಗೆ ನಿಗಮಗಳಾಗಲಿ ಇದುವರೆಗೆ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಮುಖ್ಯ ಅಂಶಗಳು: ಕೇವಲ ಶಿಫಾರಸ್ಸು: ಮಕ್ಕಳ ಹಕ್ಕುಗಳ ಆಯೋಗವು ಸಾರಿಗೆ ನಿಗಮಗಳಿಗೆ ಪತ್ರ ಬರೆದು ಸಲಹೆ ನೀಡಿದೆಯೇ ಹೊರತು, ಅದು ಜಾರಿಯಾಗಿಲ್ಲ. ನಿರ್ಧಾರವಾಗಿಲ್ಲ: ಕರ್ನಾಟಕ ರಸ್ತೆ ಸಾರಿಗೆ ನಿಗಮಗಳು (KSRTC/BMTC/NWKRTC/KKRTC) ಈ ಬಗ್ಗೆ ಯಾವುದೇ ಅಧಿಕೃತ ಆದೇಶ ಹೊರಡಿಸಿಲ್ಲ. ಗೊಂದಲ ಬೇಡ: ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಇಂತಹ ಅನಧಿಕೃತ ಸುದ್ದಿಗಳ…
ದಾವಣಗೆರೆ: ನಾವು ಮಾಡಿದ ಜನಪರ ಕೆಲಸಗಳ, ಅಭಿವೃದ್ದಿ ಕೆಲಸಗಳ ಆಧಾರದಲ್ಲಿ ಮತ ಕೇಳುತ್ತಿದ್ದೇವೆ. ಆದರೆ, ನನಗೆ ಬೈದು ಮತ ಕೇಳುವ ದಾರಿದ್ರ್ಯ ಬಿಜೆಪಿಗೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ಎರಡೂ ಕ್ಷೇತ್ರದಲ್ಲೂ ಗೆದ್ದು ತೋರಿಸ್ತೀವಿ ಎಂದು ಭರವಸೆ ವ್ಯಕ್ತಪಡಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಭಾರೀ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಆರು ಬಾರಿ ಶಾದಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಇದೇ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ಕ್ಷೇತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳು ಸರಾಗವಾಗಿ ಮುಂದುವರೆಯಲು ಸಮರ್ಥ್ ಶಾಮನೂರು ಅವರನ್ನು ಸಮರ್ಥವಾಗಿ ಗೆಲ್ಲಿಸಿ ಮುನ್ನಡೆಸಿ ಎಂದು ಮನವಿ ಮಾಡಿದರು. ಒಂಬತ್ತು ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಅಭಿವೃದ್ಧಿ ಮಾಡಲಿಲ್ಲ. ಹೀಗಾಗಿ ತಾವು ಮಾಡಿದ ಕೆಲಸಗಳ ಆಧಾರದಲ್ಲಿ ಮತ ಕೇಳಲು ಸಾಧ್ಯವಾಗದೆ ನನಗೆ ಬಯ್ಯುತ್ತಾ ಮತ ಕೇಳುತ್ತಿದ್ದಾರೆ. ನಾನು ದುರ್ಬಲರ, ಬಡವರ ಪರವಾಗಿ ಕಾರ್ಯಕ್ರಮ…
ಬೆಂಗಳೂರು: ರಾಜ್ಯ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು (Sales Tax) ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಕರ್ನಾಟಕದಲ್ಲಿ ಇಂಧನ ದರಗಳು ಗಣನೀಯವಾಗಿ ಏರಿಕೆಯಾಗಿವೆ. ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿದ್ದು, ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದರ ಏರಿಕೆಯ ವಿವರ: ಸರ್ಕಾರದ ಇತ್ತೀಚಿನ ಅಧಿಸೂಚನೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಈ ಕೆಳಗಿನಂತೆ ಬದಲಾವಣೆಯಾಗಿದೆ: ಪೆಟ್ರೋಲ್: ಪ್ರತಿ ಲೀಟರ್ಗೆ ಸರಿಸುಮಾರು ₹3.00 ಹೆಚ್ಚಳವಾಗಿದೆ. ಡೀಸೆಲ್: ಪ್ರತಿ ಲೀಟರ್ಗೆ ಸರಿಸುಮಾರು ₹3.02 ರಷ್ಟು ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದಿನ ದರಗಳು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪರಿಷ್ಕೃತ ದರಗಳು ಈ ಕೆಳಗಿನಂತಿವೆ: ಪೆಟ್ರೋಲ್: ₹102.84 (ಹಳೆಯ ದರ ₹99.84) ಡೀಸೆಲ್: ₹88.95 (ಹಳೆಯ ದರ ₹85.93) ಏರಿಕೆ ಯಾಕೆ? ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ಕ್ರೋಢೀಕರಿಸುವ ಉದ್ದೇಶದಿಂದ ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 25.92 ರಿಂದ ಶೇ. 29.84 ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಶೇ.…














