Author: kannadanewsnow09

ಕನ್ನಡದಲ್ಲಿ ಹನುಮಾನ್ ಚಾಲೀಸಾ ಪ್ರತಿಯೊಂದು ವಾಕ್ಯದ ಅರ್ಥ ಪೂರ್ಣ ಓದಿ ದುಷ್ಟಗ್ರಹಗಳು ತೊಲಗಿ ಸುಖಪ್ರಾಪ್ತಿ ಲಭಿಸುವದು – ಹನುಮಾನ್ ನಾಳೆ ಹನುಮಾನ್ ಜಯಂತಿ ಅರ್ಥ ಮಾಡಿಕೊಂಡು ಓದಿ ಹನುಮಂತನ ಅನುಗ್ರಹದಿಂದ ಶುಭವಾಗಲಿ ಶ್ರೀ ಹನುಮಾನ ಚಾಲೀಸಾವನ್ನು ಗೋಸ್ವಾಮಿ ತುಲಸಿದಾಸರು ರಚಿಸಿದ್ದಾರೆ. ಪ್ರತಿದಿನ ಸ್ನಾನವಾದ ನಂತರ ಸ್ವಚ್ಛ ಮನಸ್ಸಿನಿಂದ ಈ ಹನುಮಾನ ಚಾಲೀಸಾವನ್ನು ಪಠಿಸುವುದರಿಂದ‌ ನಿಮ್ಮೆಲ್ಲ ನೋವು ಸಂಕಟ ರೋಗಗಳು ದೂರಾಗುತ್ತವೆ. ಭೂತ ಪ್ರೇತ ಪಿಶಾಚಿಗಳು ನಿಮ್ಮತ್ರ ಸುಳಿಯುವುದಿಲ್ಲ. ಜೊತೆಗೆ ನಿಮ್ಮ ವಿರೋಧಿಗಳು ಶತ್ರುಗಳು ಸರ್ವನಾಶವಾಗುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಅರ್ಥ ಸಹಿತವಾಗಿ ಹನುಮಾನ ಚಾಲೀಸಾ ಇಂತಿದೆ ; “ಶ್ರೀ ಗುರು ಚರನ ಸರೋಜ ರಜ‌ ನಿಜ ಮನು ಮುಕುರ ಸುಧಾರಿ | ಬರನೂ ರಘುಬರ…

Read More

ಶಿವಮೊಗ್ಗ: ಜಿಲ್ಲೆಯ ಪತ್ರಕರ್ತರಾದ ಶರತ್‌ಕುಮಾರ್ ಎಸ್ ಮತ್ತು ಸಾಗರದ ಮಹೇಶ್ ಹೆಗಡೆ ಅವರುಗಳಿಗೆ ಪ್ರತಿಷ್ಠಿತ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ದ ( ಕೆಯುಡಬ್ಲ್ಯೂಜೆ ) 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸಂದಿದ್ದು, ಜಿಲ್ಲೆಯ ಪತ್ರಿಕೋದ್ಯಮಕ್ಕೆ ಇನ್ನಷ್ಟು ಮರೆಗು ತಂದಿದೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ವಿವಿಧ ವಿಭಾಗಗಳಲ್ಲಿ ಆಹ್ವಾನಿತ ವರದಿಗಳಲ್ಲಿ ಆಯ್ಕೆಗೊಂಡ ಅತ್ಯುತಮ ವರದಿಗಳಿಗಾಗಿ ಕೊಡಮಾಡುವ 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಆರ್ಥಿಕ ದುರ್ಬಲ ವರ್ಗದವರ ಕುರಿತ ಅತ್ಯುತ್ತಮ ವರದಿಗಾಗಿ ನೀಡುವ “ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿ” ಗೆ ಶಿವಮೊಗ್ಗದ ಉದಯವಾಣಿ ಪತ್ರಿಕೆ ಹಿರಿಯ ವರದಿಗಾರರಾದ *ಶರತ್ ಕುಮಾರ್ ಎಸ್ ಅವರು ಆಯ್ಕೆಯಾಗಿದ್ದಾರೆ. ಶರತ್‌ಕುಮಾರ್ ಎಸ್ ಉದಯವಾಣಿ ಪತ್ರಿಕೆಯಲ್ಲಿ ‘ಅರಣ್ಯ ಇಲಾಖೆಯಿಂದ ವಕ್ಫ್ ಬೋರ್ಡು ಮಾದರಿ ಕಾರ್ಯಾಚರಣೆ’ ಶೀರ್ಷಿಕೆಯಡಿ ತುಂಗಾ ಜಲಾಶಯ ಮುಳುಗಡೆ ಸಂತ್ರಸ್ತರ ಕುರಿತು ಬರೆದ ಸರಣಿ ವರದಿಗೆ ಈ ಪ್ರಶಸ್ತಿ ಸಂದಿದೆ. ಭದ್ರಾವತಿಯ ಸಿದ್ದಲಿಂಗಪ್ಪ ಮತ್ತು ಶ್ರೀಮತಿ ಗಿರಿಜಮ್ಮ ಅವರ ಪುತ್ರರಾದ ಶರತ್…

Read More

ಶಿವಮೊಗ್ಗ: ಮೆಸ್ಕಾಂನ ಸೊರಬ ಕಾರ್ಯ ಮತ್ತು ಪಾಲನೆ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ 110/11 ಕೆವಿ ಉಳವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಕಾರಣದಿಂದಾಗಿ, ದಿನಾಂಕ 01.04.2026ರ ಬುಧವಾರ ಅಂದರೆ ನಾಳೆ ಈ ಕೇಂದ್ರದಿಂದ ವಿದ್ಯುತ್ ಪಡೆಯುವ ವಿವಿಧ ಫೀಡರ್‌ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ. ​ವಿದ್ಯುತ್ ಸ್ಥಗಿತದ ಸಮಯ: ​ಬೆಳಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ. ​ನಾಳೆ ಉಳವಿ ಸೇರಿ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ​ಉಳವಿ ವಿದ್ಯುತ್ ಉಪ ಕೇಂದ್ರದಿಂದ ಸರಬರಾಜಾಗುವ ಎಫ್-1 ಬರಗಿ, ಎಫ್-2 ಕಾನಳ್ಳಿ, ಎಫ್-3 ಉಳವಿ, ಎಫ್-4 ಹೊಸಬಾಳೆ ಹಾಗೂ ಎಫ್-5 ದೂಗೂರು 11 ಕೆವಿ ಫೀಡರ್‌ಗಳ ವ್ಯಾಪ್ತಿಯ ಈ ಕೆಳಗಿನ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ: ​ದೂಗೂರು, ಭದ್ರಾಪುರ, ಬರಗಿ. ​ಹೊಳೆಕೊಪ್ಪ, ಅಮಚಿ, ಹೊಡಬಟ್ಟೆ, ಹೊರಬೈಲು. ​ಬಿ.ದೊಡ್ಡರಿ, ದಳವಾಯಿ ಹೊಸಕೊಪ್ಪ, ಕೆರೆಕೊಪ್ಪ. ​ಬನದಕೊಪ್ಪ, ನಿಸ್ರಾಣಿ, ತಲಕಾಲಕೊಪ್ಪ. ​ಕ್ಯಾಸನೂರು, ಕೈಸೋಡಿ, ಮೈಸಾವಿ ಮತ್ತು…

Read More

ನವದೆಹಲಿ: ದೇಶದ ಸುರಕ್ಷತೆ ಮತ್ತು ದತ್ತಾಂಶ ಸೋರಿಕೆಯನ್ನು ತಡೆಯಲು ಕೇಂದ್ರ ಸರ್ಕಾರವು ಸಿಸಿಟಿವಿ ಕ್ಯಾಮೆರಾಗಳ ಬಳಕೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ಮುಂದೆ ಚೀನಾ ಮೂಲದ ಪ್ರಮುಖ ಕಂಪನಿಗಳಾದ ಹಿಕ್ವಿಷನ್ (Hikvision) ಮತ್ತು ದಹುವಾ (Dahua) ಸೇರಿದಂತೆ ಹಲವು ವಿದೇಶಿ ಬ್ರ್ಯಾಂಡ್‌ಗಳ ಸಿಸಿಟಿವಿ ಕ್ಯಾಮೆರಾಗಳನ್ನು ಸರ್ಕಾರಿ ಕಚೇರಿಗಳು ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ. ಹೊಸ ನಿಯಮ (STQC) ಏನು ಹೇಳುತ್ತದೆ? ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಹೊಸದಾಗಿ STQC (Standardisation Testing and Quality Certification) ನಿಯಮಗಳನ್ನು ರೂಪಿಸಿದೆ. ಭದ್ರತಾ ಪರೀಕ್ಷೆ ಕಡ್ಡಾಯ: ಇನ್ಮುಂದೆ ಭಾರತದಲ್ಲಿ ಮಾರಾಟವಾಗುವ ಅಥವಾ ಅಳವಡಿಸಲಾಗುವ ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾವು ಕಟ್ಟುನಿಟ್ಟಾದ ಭದ್ರತಾ ಪರೀಕ್ಷೆಗೆ ಒಳಪಡಬೇಕು. ದತ್ತಾಂಶ ಸೋರಿಕೆಗೆ ತಡೆ: ಸಿಸಿಟಿವಿ ಕ್ಯಾಮೆರಾಗಳ ಮೂಲಕ ಚಿತ್ರೀಕರಿಸಲಾದ ದತ್ತಾಂಶಗಳು ವಿದೇಶಿ ಸರ್ವರ್‌ಗಳಿಗೆ ರವಾನೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಚೀನಾ ಕಂಪನಿಗಳ ಮೇಲೆ ನಿಗಾ: ಹಿಕ್ವಿಷನ್ ಮತ್ತು ದಹುವಾದಂತಹ ಕಂಪನಿಗಳು…

Read More

ಉಡುಪಿ: ಹನಿಮೂನ್ ಹೊಸ್ತಿಲಲ್ಲೇ ಹೊಸದಾಗಿ ವಿವಾಹವಾಗಿದ್ದ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಉಡುಪಿಯಲ್ಲಿ ನಡೆದಿದೆ. ಮದುವೆಯಾದ ಕೇವಲ ಒಂದು ತಿಂಗಳಲ್ಲಿ ದಂಪತಿಗಳ ನಡುವೆ ಉಂಟಾದ ವಿರಸವೇ ಈ ಸಾವಿಗೆ ಕಾರಣ ಎನ್ನಲಾಗಿದ್ದು, ಇದೀಗ ಉದ್ಯಮಿಯ ಸಾವಿನ ಸುತ್ತ ಹತ್ತಾರು ಅನುಮಾನಗಳು ಸೃಷ್ಟಿಯಾಗಿವೆ. ಘಟನೆಯ ವಿವರ: ಮೃತ ಉದ್ಯಮಿಯು ಸುಮಾರು ಒಂದು ತಿಂಗಳ ಹಿಂದಷ್ಟೇ ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿದ್ದ ಯುವತಿಯನ್ನು ಮದುವೆಯಾಗಿದ್ದರು. ದಾಂಪತ್ಯ ಜೀವನದ ಆರಂಭಿಕ ದಿನಗಳಲ್ಲೇ ಇಬ್ಬರ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ. ವಿವಾಹವಾದ ಕೆಲವೇ ದಿನಗಳಲ್ಲಿ ಉದ್ಯಮಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಕ್ಕೆ ಬಂದಿರುವುದು ಕುಟುಂಬದವರಲ್ಲಿ ತೀವ್ರ ಆಘಾತ ಮೂಡಿಸಿದೆ. ಪತ್ನಿ ವಿರುದ್ಧ ದೂರು: ಉದ್ಯಮಿಯ ಸಾವಿನ ಹಿನ್ನೆಲೆಯಲ್ಲಿ ಅವರ ಕುಟುಂಬದವರು ಪತ್ನಿಯ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿಯ ಕಿರುಕುಳ ಅಥವಾ ಅವರ ನಡುವಿನ ಸಂಘರ್ಷವೇ ಈ ಆತ್ಮಹತ್ಯೆಗೆ ಪ್ರೇರಣೆಯಾಗಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ. ತನಿಖೆ: ಕಾರ್ಕಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,…

Read More

ಬೆಂಗಳೂರು: ಸೂರ್ಯ ಮುಳುಗುತ್ತಿದ್ದಂತೆ, ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯು ಸದ್ದಿಲ್ಲದೆ ಕೊನೆಗೊಳ್ಳಲಿದೆ, ಏಪ್ರಿಲ್ 1 ರಂದು, ವಿಬಿ ಗ್ರಾಮ್ ಜಿ ಯೋಜನೆಯು ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಇಷ್ಟರಲ್ಲಾಗಲೇ ವಿಬಿ ಗ್ರಾಮ್ ಜಿ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ, ಗ್ರಾಮಗಳಿಗೆ ತಲುಪಿಸಲು ಬೇಕಾದ ಅಗತ್ಯ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕಿತ್ತು, ಆದರೆ ಇನ್ನೂ ಯಾವುದೇ ನಿಯಮಗಳು ರೂಪುಗೊಂಡಿಲ್ಲ, ನಿಧಿ ಹಂಚಿಕೆಯ ಬಗ್ಗೆ ಸ್ಪಷ್ಟತೆ ಇಲ್ಲ, ಗ್ರಾಮ ಪಂಚಾಯತ್‌ಗಳನ್ನು ವರ್ಗೀಕರಿಸಲು ಯಾವುದೇ ಅಂತಿಮ ನಿಯತಾಂಕಗಳು ತಯಾರಾಗಿಲ್ಲ, ಸಾಮಾಜಿಕ ಲೆಕ್ಕಪರಿಶೋಧನೆಯಂತಹ ಪ್ರಮುಖ ಪ್ರಕ್ರಿಯೆಗಳು ಸಹ ವ್ಯಾಖ್ಯಾನಿಸಲ್ಪಟ್ಟಿಲ್ಲ ಎಂದು ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಕಿಡಿ ಕಾರಿದ್ದಾರೆ. ಅತ್ಯಂತ ಕೆಟ್ಟ ಸಮಯದಲ್ಲಿ ಗ್ರಾಮೀಣ ಉದ್ಯೋಗದ ಬಗೆಗಿನ ಈ ನಿರ್ವಾತವು ತಲೆದೋರಿದೆ, ಈ ಬೇಸಿಗೆಯ ಸಮಯವು ಗ್ರಾಮೀಣ ಜನರಿಗೆ ಉದ್ಯೋಗದ ಗರಿಷ್ಠ ಬೇಡಿಕೆಯ ತಿಂಗಳುಗಳಾಗಿವೆ, ಉದ್ಯೋಗ ಖಾತರಿಗೆ ಹೆಚ್ಚಿನ…

Read More

ಶಿವಮೊಗ್ಗ: ಬಿಜೆಪಿಯವರು ನಡೆಸುತ್ತಿರುವ ಕರೂರು ಪಾದಯಾತ್ರೆಯು ಕೇವಲ ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವೇ ಹೊರತು, ಇದರಲ್ಲಿ ಜನಸಾಮಾನ್ಯರ ಹಿತಾಸಕ್ತಿ ಇಲ್ಲ ಎಂದು ಕರೂರು ಹೋಬಳಿ ಕಾಂಗ್ರೆಸ್ ಘಟಕದ ಮುಖಂಡ ಹಾಗೂ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಕರೂರು ಟೀಕಿಸಿದೆ. ಈ ಕುರಿತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತುಮರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಬಿಜೆಪಿಯಿಂದ ಹಮ್ಮಿಕೊಂಡಿರುವಂತ ಕರೂರು ಪಾದಯಾತ್ರೆ ವಿರುದ್ಧ ವಾಗ್ಧಾಳಿ ನಡೆಸಿದರು. ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು: ರಾಜಕೀಯ ಪ್ರೇರಿತ ಪಾದಯಾತ್ರೆ: ಮುಂಬರುವ ಗ್ರಾಮ ಪಂಚಾಯಿತಿ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಿಜೆಪಿ ಈ ಪಾದಯಾತ್ರೆಯನ್ನು ಸಂಘಟಿಸಿದೆ. ಇದು ಜನರ ಸಮಸ್ಯೆಗಳಿಗಾಗಿ ಮಾಡುತ್ತಿರುವ ಹೋರಾಟವಲ್ಲ ಎಂದು ಆರೋಪಿಸಿದ್ದಾರೆ. ವೈದ್ಯಾಧಿಕಾರಿಗಳ ರಾಜೀನಾಮೆ ವಿಚಾರ: ತುಮರಿ ಆಸ್ಪತ್ರೆಯಲ್ಲಿದ್ದ ಮಹಿಳಾ ವೈದ್ಯಾಧಿಕಾರಿ ರಾಜೀನಾಮೆ ನೀಡಲು ಸ್ಥಳೀಯ ಬಿಜೆಪಿ ಮುಖಂಡರ ಗುಂಡಾವರ್ತನೆಯೇ ಕಾರಣ. ವೈದ್ಯರ ಮೇಲೆ ಒತ್ತಡ ಹಾಕಿ, ಭಯದ ವಾತಾವರಣ ನಿರ್ಮಿಸಿದ್ದರಿಂದ ಅವರು ಕೆಲಸ ಬಿಟ್ಟಿದ್ದಾರೆ ಎಂದು ದೂರಿದೆ.. ಆರೋಗ್ಯ ಸೇವೆಯಲ್ಲಿ…

Read More

ನಮ್ಮ ಹಿರಿಯರು ನಮಗಾಗಿ ಬಿಟ್ಟುಹೋದ ಆಸ್ತಿ ಅಥವಾ ಹೂಡಿಕೆಗಳು ನಮಗೆ ಆರ್ಥಿಕ ಭದ್ರತೆಯನ್ನು ನೀಡುತ್ತವೆ. ಆದರೆ, ಇಂತಹ ಪಿತ್ರಾರ್ಜಿತ ಆಸ್ತಿ (Inherited Property) ಅಥವಾ ಹೂಡಿಕೆಗಳು ಕೈ ಸೇರಿದಾಗ ಅವುಗಳ ಮೇಲೆ ಭಾರತದ ಆದಾಯ ತೆರಿಗೆ ಕಾಯ್ದೆ ಹೇಗೆ ಅನ್ವಯಿಸುತ್ತದೆ ಎಂಬುದು ಅನೇಕರಲ್ಲಿರುವ ಗೊಂದಲ. 2026ರ ಹೊಸ ತೆರಿಗೆ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಈ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ. 1. ಆಸ್ತಿ ವರ್ಗಾವಣೆಯ ಸಮಯದಲ್ಲಿ ತೆರಿಗೆ ಇದೆಯೇ? ಭಾರತದಲ್ಲಿ ಪ್ರಸ್ತುತ ‘ಉತ್ತರಾಧಿಕಾರ ತೆರಿಗೆ’ (Inheritance Tax) ಅಥವಾ ‘ಎಸ್ಟೇಟ್ ಡ್ಯೂಟಿ’ ಅಸ್ತಿತ್ವದಲ್ಲಿಲ್ಲ. 1985ರಲ್ಲಿಯೇ ಇದನ್ನು ರದ್ದುಪಡಿಸಲಾಗಿದೆ. ಆದ್ದರಿಂದ, ವಿಲ್ (Will) ಮೂಲಕ ಅಥವಾ ಉತ್ತರಾಧಿಕಾರ ಕಾನೂನಿನ ಅಡಿಯಲ್ಲಿ ನೀವು ಆಸ್ತಿ, ಚಿನ್ನ ಅಥವಾ ಷೇರುಗಳನ್ನು ಪಡೆದಾಗ, ಆ ಸಮಯದಲ್ಲಿ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಇದನ್ನು ಆದಾಯ ಎಂದು ಪರಿಗಣಿಸಲಾಗುವುದಿಲ್ಲ. 2. ಪಿತ್ರಾರ್ಜಿತ ಆಸ್ತಿಯಿಂದ ಬರುವ ಆದಾಯದ ಮೇಲೆ ತೆರಿಗೆ ಆಸ್ತಿಯನ್ನು ಪಡೆದಾಗ ತೆರಿಗೆ ಇಲ್ಲದಿದ್ದರೂ, ಆ ಆಸ್ತಿಯಿಂದ ನೀವು ಗಳಿಸುವ…

Read More

ಬೆಂಗಳೂರು : “ಶಾಸಕರಿಗೆ ಐಪಿಎಲ್ ಪಂದ್ಯಗಳ 3 ಟಿಕೆಟ್ ಹಾಗೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಟಿಕೆಟ್ ಉಚಿತವಾಗಿ ನೀಡಲು ಒಪ್ಪಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2 ಹೆಚ್ಚುವರಿ ಟಿಕೆಟ್ ಅನ್ನು ಖರೀದಿಸಲು ಅವಕಾಶ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಹಿತಿ ನೀಡಿದರು. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ಕೆಎಸ್ ಸಿಎ ಪದಾಧಿಕಾರಿಗಳು, ಆರ್ ಸಿಬಿ ಹಾಗೂ ಡಿಎನ್ಎ ಸಂಸ್ಥೆಯ ಪ್ರತಿನಿಧಿಗಳ ಜತೆಗಿನ ಸಭೆ ಬಗ್ಗೆ ಕೇಳಿದಾಗ, “ಶಾಸಕರಿಗೆ ಕ್ರಿಕೆಟ್ ಪಂದ್ಯಗಳ ಟಿಕೆಟ್ ವಿತರಣೆ ಕುರಿತು ಇಂದು ನಾನು ಕೆಎಸ್ ಸಿಎ ಅಧ್ಯಕ್ಷರು ಪದಾಧಿಕಾರಿಗಳು, ಡಿಎನ್ಎ ಸಂಸ್ಥೆ ಹಾಗೂ ಆರ್ ಸಿಬಿ ವ್ಯವಸ್ಥಾಪಕರೊಂದಿಗೆ ಚರ್ಚೆ ಮಾಡಿದೆ. ಕಳೆದ ವಾರ ಮೊದಲ ಪಂದ್ಯದ ಟಿಕೆಟ್ ಮಾರಾಟವಾಗಿದ್ದ ಹಿನ್ನೆಲೆಯಲ್ಲಿ 2 ಟಿಕೆಟ್ ನೀಡಲು ಒಪ್ಪಿದ್ದರು. ಇಂದು ಮತ್ತೆ ಸಭೆ ಮಾಡಿದ್ದೇವೆ. ಕ್ರಿಕೆಟ್ ಸಂಸ್ಥೆಯವರು ಅನೇಕ ಒಪ್ಪಂದಗಳನ್ನು ಮಾಡಿಕೊಂಡಿರುತ್ತಾರೆ. ಹೀಗಾಗಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರೊಂದಿಗೆ ಈ ವಿಚಾರ ಇಲ್ಲಿಗೆ…

Read More

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭಾರಿ ಪ್ರಮಾಣದ ನಕಲಿ ಸಿಗರೇಟ್‌ಗಳನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್‌ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಯಾರು?: ಅಬ್ದುಲ್ ಬಷೀದ್ ಮತ್ತು ಆತನ ಮಗ ಮೊಹಮದ್ ಅಶೀಕ್ ಪ್ರಮುಖ ಆರೋಪಿಗಳಾಗಿದ್ದು, ಇವರೊಂದಿಗೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ ಮತ್ತು ಗುಲಾಮ್ ಹುಸೇನ್ ಖಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಆರೋಪಿಗಳು ವಿದೇಶಗಳಿಂದ ಐಟಿಸಿ (ITC) ಮತ್ತು ಎಸ್ಸೆ (Esse) ಕಂಪನಿಗಳ ಹೆಸರಿರುವ ನಕಲಿ ಸಿಗರೇಟ್‌ಗಳನ್ನು ಬೆಂಗಳೂರಿಗೆ ಅಕ್ರಮವಾಗಿ ತರುತ್ತಿದ್ದರು. ಇಲ್ಲಿ ಅವುಗಳನ್ನು ಅಸಲಿ ಕಂಪನಿಯ ಉತ್ಪನ್ನಗಳೆಂದು ಬಿಂಬಿಸಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ನಕಲಿ ಉತ್ಪನ್ನಗಳ ಬಗ್ಗೆ ನಿಗಾ ವಹಿಸುವ ‘ಅನ್ವೇಷ್ ಐಪಿಆರ್’ (Anvesh IPR) ಸಂಸ್ಥೆಯು ನೀಡಿದ ಖಚಿತ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಮಾನ ನಿಲ್ದಾಣದಲ್ಲಿ ಈ ನಕಲಿ…

Read More