Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬೆಂಗಳೂರು: ಭಾರತದ ಯುವಜನರಿಗೆ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಪಿಎಂ-ಸೇತು’ ಯೋಜನೆಯಡಿ ಹೊಸ ಮೈಲಿಗಲ್ಲೊಂದು ನಿರ್ಮಾಣವಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ‘ಐಟಿಐ ಕ್ಲಸ್ಟರ್’ ಅನ್ನು ಉನ್ನತೀಕರಿಸಲು ಪ್ರಖ್ಯಾತ ಉಕ್ಕು ಕಂಪನಿ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ’ ಮಂಡಿಸಿದ್ದ ಸ್ಟ್ರಾಟೆಜಿಕ್ ಇನ್ವೆಸ್ಟ್‌ಮೆಂಟ್ ಪ್ಲ್ಯಾನ್ʼಗೆ ಕೇಂದ್ರದ ಸಮಿತಿ ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ ‘ಪಿಎಂ-ಸೇತು’ ಯೋಜನೆಯಡಿ ಅನುಮೋದನೆ ಪಡೆದ ದೇಶದ ಮೊಟ್ಟಮೊದಲ ಖಾಸಗಿ ಕೈಗಾರಿಕಾ ಸಂಸ್ಥೆಯಾಗಿ ‘ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್’ ಹೊರಹೊಮ್ಮಿದೆ. ಅಲ್ಲದೆ, ಖಾಸಗಿ ಕೈಗಾರಿಕೆಗಳ ಜೊತೆ ಒಪ್ಪಂದ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವಾಗಿ ಆಂಧ್ರಪ್ರದೇಶ ಇತಿಹಾಸ ಬರೆದಿದೆ. ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ತನ್ನ ಶೈಕ್ಷಣಿಕ ಪಾಲುದಾರ ಸಂಸ್ಥೆಯಾದ NAMTECH ಜೊತೆಗೂಡಿ ಈ ಐಟಿಐ ಕ್ಲಸ್ಟರ್ ಅನ್ನು ಅಭಿವೃದ್ಧಿಪಡಿಸಲಿದೆ. ರಾಷ್ಟ್ರೀಯ ಸಮಿತಿ ಸಭೆಯಲ್ಲಿ ಅನುಮೋದನೆ ನವದೆಹಲಿಯ ಕೌಶಲ್ ಭವನದಲ್ಲಿ ನಡೆದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ…

Read More

ಬೀದರ್: ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪರಿಣಾಮ ಒಂದು ಕಡೆ ಆಗುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂಗಳಿಗೆ ಅಪಮಾನ ಮಾಡುವ ಕೆಲಸ ನಡೆಯುತ್ತಿದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಮಾಧ್ಯಮಗಳ ಪ್ರಶ್ನೆಗೆ ಇಂದು ಉತ್ತರ ನೀಡಿದ ಅವರು, ಅಧಿಕಾರದ ಮದ ನೆತ್ತಿಗೇರಿದಾಗ ಹೀಗೆಲ್ಲ ಮಾಡಿಸುತ್ತದೆ ಎಂದು ಟೀಕಿಸಿದರು. ಆಳಂದದಲ್ಲಿ ಕೇಸುಗಳನ್ನು ಹಿಂಪಡೆದಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರ ಹೇಗೆ ನಡೆಯಲಿದೆ ಎಂದು ನಾನು ಹೇಳುವ ಅವಶ್ಯಕತೆ ಇಲ್ಲ. ತಮಗೆ ಗೊತ್ತಿರುವ ಹಾಗೆ ಕಳೆದ 3 ವರ್ಷಗಳಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಭ್ರಷ್ಟಾಚಾರ, ಅಲ್ಪಸಂಖ್ಯಾತರ ಓಲೈಕೆ ಬಿಟ್ಟರೆ ಬೇರೇನೂ ಕಳೆದ 3 ವರ್ಷಗಳಲ್ಲಿ ಆಗಿಲ್ಲ; ಇವರ ಗ್ಯಾರಂಟಿಗಳಿಂದ ಇವರ ಕೈಯನ್ನು ಕಟ್ಟಿ ಹಾಕಿಕೊಂಡಿದ್ದಾರೆ. ಅನುದಾನದ ಕೊರತೆಯಿಂದ ಡಿ.ಕೆ.ಶಿವಕುಮಾರ್ ಕೂಡ ಅಭಿವೃದ್ಧಿ…

Read More

ವಾಲ್‌ನಟ್ಸ್ ಅಥವಾ ಅಖ್ರೋಟ್ ಕೇವಲ ರುಚಿಕರವಾದ ಒಣಹಣ್ಣು ಮಾತ್ರವಲ್ಲ, ಇದು ನಮ್ಮ ಆರೋಗ್ಯಕ್ಕೆ ಅಮೂಲ್ಯವಾದ ಪೋಷಕಾಂಶಗಳ ಗಣಿಯಾಗಿದೆ. ಇದರಲ್ಲಿ ಒಮೆಗಾ-೩ ಕೊಬ್ಬಿನಾಮ್ಲಗಳು (Omega-3 fatty acids), ಉತ್ಕರ್ಷಣ ನಿರೋಧಕಗಳು (Antioxidants) ಮತ್ತು ನಾರಿನಂಶ (Fiber) ಹೇರಳವಾಗಿವೆ. ಆದರೆ, ಇದರ ಸಂಪೂರ್ಣ ಲಾಭವನ್ನು ಪಡೆಯಲು ಇದನ್ನು ಹೇಗೆ ಮತ್ತು ಯಾವಾಗ ಸೇವಿಸಬೇಕು ಎಂಬ ಸರಿಯಾದ ವಿಧಾನ ತಿಳಿಯುವುದು ಬಹಳ ಮುಖ್ಯ. ಈ ಕುರಿತು ವಿವರವಾದ ಲೇಖನ ಇಲ್ಲಿದೆ: ೧. ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಸೇವಿಸುವುದು (ಅತ್ಯುತ್ತಮ ವಿಧಾನ) ವಾಲ್‌ನಟ್ಸ್ ಸೇವಿಸಲು ಅತ್ಯಂತ ಸೂಕ್ತ ಮತ್ತು ವೈಜ್ಞಾನಿಕ ವಿಧಾನವೆಂದರೆ ಅವುಗಳನ್ನು ನೀರಿನಲ್ಲಿ ನೆನೆಸಿ ತಿನ್ನುವುದು. ರಾತ್ರಿ ೨ ರಿಂದ ೪ ವಾಲ್‌ನಟ್ಸ್ ತುಂಡುಗಳನ್ನು ಒಂದು ಕಪ್ ನೀರಿನಲ್ಲಿ ನೆನೆಸಿಟ್ಟು, ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ನೆನೆಸಿಡುವುದರಿಂದ ಆಗುವ ಪ್ರಯೋಜನಗಳು: ಸುಲಭ ಜೀರ್ಣಕ್ರಿಯೆ: ಹಸಿ ವಾಲ್‌ನಟ್ಸ್‌ನಲ್ಲಿ ‘ಫೈಟಿಕ್ ಆಸಿಡ್’ (Phytic acid) ಮತ್ತು ಟ್ಯಾನಿನ್ಸ್‌ಗಳಿರುತ್ತವೆ. ಇವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು. ನೆನೆಸುವುದರಿಂದ ಈ ಅಂಶಗಳು ಕಡಿಮೆಯಾಗಿ,…

Read More

ಬೆಂಗಳೂರು : ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎ ಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಜಮೀರ್ ಅಹಮದ್ ಖಾನ್ ಸ್ಪಷ್ಟ ಪಡಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ. ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ,ಇದನ್ನು ಯಾರೂ ನಂಬಬಾರದು ಎಂದು ತಿಳಿಸಿದ್ದಾರೆ.

Read More

ಶಿವಮೊಗ್ಗ: ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಾಗರ ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಲೂರು ಅವರಿಗೆ ಕಡ್ಡಾಯವಾಗಿ ಸಚಿವ ಸ್ಥಾನ ನೀಡಬೇಕೆಂದು ಸಾಗರದ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಕಾರ್ಯಕರ್ತ ನಾಗರಾಜ್ ಗುಡ್ಡೇಮನೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ​ಶಾಸಕರಿಗೆ ಸಚಿವ ಸ್ಥಾನ ಸಿಗಲೆಂದು ಹಾರೈಸಿ ಇಂದು ಅವರು ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಮ್ಮ ಶಾಸಕರು ಮೂರು ಬಾರಿ ಜನಪ್ರಿಯ ಶಾಸಕರಾಗಿ ಆಯ್ಕೆಯಾಗಿದ್ದು, ಸದಾ ಜನರೊಂದಿಗೆ ಇದ್ದು ಕೆಲಸ ಮಾಡಿದ್ದಾರೆ. ಈ ಹಿಂದಿನ ಸಚಿವ ಸಂಪುಟಗಳ ರಚನೆಯಲ್ಲಿ ಬೇರೆಯವರಿಗೆ ಸಚಿವರಾಗಲು ಅವರು ಸಹಕಾರ ನೀಡಿದ್ದಾರೆ. ಅದೇ ರೀತಿ ಈಗ ಶಿವಮೊಗ್ಗ ಜಿಲ್ಲೆಯಿಂದ ಗೆದ್ದಿರುವ ಇತರ ಶಾಸಕರು ಹಾಗೂ ಪಕ್ಷದ ಹಿರಿಯರು ಬೇಲೂರು ಅವರಿಗೆ ಸಚಿವ ಸ್ಥಾನ ನೀಡಲು ಬೆಂಬಲ ಸೂಚಿಸಬೇಕು” ಎಂದು ಮನವಿ ಮಾಡಿದರು. ​ಇದೇ ಸಂದರ್ಭದಲ್ಲಿ ಒಂದು ವೇಳೆ ನಮ್ಮ ಶಾಸಕರಿಗೆ ಸಚಿವ ಸ್ಥಾನ ನೀಡದಿದ್ದರೆ, ಮುಂಬರುವ ದಿನಗಳಲ್ಲಿ ಸಾಗರ…

Read More

ಶಿವಮೊಗ್ಗ: ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ಸಾಗರದ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ನಗರದ ರಸ್ತೆಗಳ ಅಭಿವೃದ್ಧಿಗಾಗಿ ಸರ್ಕಾರದಿಂದ 2 ಕೋಟಿ ರೂಪಾಯಿ ವಿಶೇಷ ಅನುದಾನ ತರುವುದಾಗಿ ಗೋಪಾಲಕೃಷ್ಣ ಬೇಳೂರು ಅವರು ಭರವಸೆ ನೀಡಿದ್ದರು. ಅದರಂತೆ ಅಂದಿನ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ 2 ಕೋಟಿ ರೂ. ಅನುದಾನ ನೀಡುವಂತೆ ಮನವಿ ಪತ್ರವನ್ನೂ ಸಲ್ಲಿಸಲಾಗಿತ್ತು ಎಂದು ಸಾಗರ ಟೌನ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬಾಬು ತಿಳಿಸಿದರು. ​ಇಂದು ಶಿವಮೊಗ್ಗದ ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, “ಸಾಮಾನ್ಯವಾಗಿ ರಸ್ತೆ ಅಥವಾ ಚರಂಡಿ ಕಾಮಗಾರಿಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಆದರೆ ಹಣ ಬಿಡುಗಡೆಯಾಗುವ ಮುನ್ನವೇ ಸಾರ್ವಜನಿಕ ಹಿತದೃಷ್ಟಿಯಿಂದ ಇಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಿ ಕೆಲಸವನ್ನು ಆರಂಭಿಸಲಾಗುತ್ತದೆ. ಅದೇ ರೀತಿ ಮಾರಿ ಜಾತ್ರೆಯ ಸಂದರ್ಭದಲ್ಲೂ ನಗರಸಭೆಯು 2 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ನಂಬಿಕೆಯ ಮೇಲೆ ನಡೆಸಿತ್ತು,” ಎಂದರು. ​ಬಿಜೆಪಿ ವಿರುದ್ಧ ಆಕ್ರೋಶ ​ಕಾಮಗಾರಿ ನಡೆದ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ, “2…

Read More

ಶಿವಮೊಗ್ಗ: ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಸಾಗರ ನಗರಸಭೆಯ ಮಾಜಿ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ ಅವರು ಪಕ್ಷದ ಹೈಕಮಾಂಡ್ ಹಾಗೂ ಸರ್ಕಾರವನ್ನು ಒತ್ತಾಯಿಸಿದ್ದಾರೆ. ​ಇಂದು ಸಾಗರದ ಇತಿಹಾಸ ಪ್ರಸಿದ್ಧ ಮಹಾಗಣಪತಿ ದೇವಸ್ಥಾನದಲ್ಲಿ ಪಕ್ಷದ ಪ್ರಮುಖರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುಖಂಡರೆಲ್ಲರೂ ಒಟ್ಟಾಗಿ ಸೇರಿ, ಗೋಪಾಲಕೃಷ್ಣ ಬೇಳೂರು ಅವರಿಗೆ ಸಚಿವ ಸ್ಥಾನ ಸಿಗಲೆಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ​ಬಡವರ ಬಂಧು ಬೇಳೂರು ​ಗೋಪಾಲಕೃಷ್ಣ ಬೇಳೂರು ಅವರು ಕೇವಲ ಒಂದು ತಾಲೂಕಿಗೆ ಸೀಮಿತವಾಗದೆ, ಜಿಲ್ಲೆಯ ಯಾವುದೇ ಭಾಗದ ಬಡವರು ಕಷ್ಟ ಎಂದು ಮನೆಗೆ ಬಂದರೆ ಅವರ ಸುಖ-ದುಃಖಗಳನ್ನು ವಿಚಾರಿಸಿ, ತಮಗೆ ಸಾಧ್ಯವಿರುವ ಸಹಾಯ ಮಾಡುವಂತಹ ಉದಾತ್ತ ಗುಣ ಹೊಂದಿದ್ದಾರೆ. ಅವರು ನಿಜವಾದ ‘ಬಡವರ ಬಂಧು’ ಎಂದು ಗಣಪತಿ ಮಂಡಗಳಲೆ ಬಣ್ಣಿಸಿದರು. ​ಬೆಂಗಳೂರಿನಿಂದ ಅವರು ಸಾಗರದ ಮನೆಗೆ ಬಂದಾಗ, ಮುಂಜಾನೆ 7 ಗಂಟೆಯಿಂದಲೇ ಸಾವಿರಾರು…

Read More

ಶಿವಮೊಗ್ಗ: ಗುಣಮಟ್ಟದ ಉತ್ಪಾದನೆ ಹಾಗೂ ಗ್ರಾಮೀಣ ಸಮುದಾಯದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಿರುವ ಶಿವಮೊಗ್ಗ ಜಿಲ್ಲೆ ಸಾಗರದ ಪ್ರಸಿದ್ಧ ಎಸ್‌ಆರ್‌ಎಸ್ (SRS) ಅಕ್ಕಿ ಮತ್ತು ಹಿಟ್ಟಿನ ಗಿರಣಿಯ ಮಾಲೀಕರಾದ ಕೆ.ಜಿ. ಮಹೇಶಮೂರ್ತಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದ ಅತ್ಯುನ್ನತ ಗೌರವ ಲಭಿಸಿದೆ. ಅಮೆರಿಕದ ಪ್ರಸಿದ್ಧ ‘ಗ್ಲೋಬಲ್ ರಿಸರ್ಚ್ ಅಂಡ್ ಫೌಂಡೇಶನ್’ (USA) ವತಿಯಿಂದ ನೀಡಲಾಗುವ ಜಾಗತಿಕ ಮಟ್ಟದ “ನ್ಯಾಷನಲ್ ಪ್ರೆಸ್ಟೀಜ್ ಅವಾರ್ಡ್ 2026” ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ​ಉದ್ಯಮ ರಂಗದಲ್ಲಿ ಗುಣಮಟ್ಟದ ರಕ್ಷಣೆ, ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿಗೆ ಅವರು ನೀಡಿರುವ ಅದ್ವಿತೀಯ ಕೊಡುಗೆಯನ್ನು ಪರಿಗಣಿಸಿ ಯುಎಸ್ಎ ಮತ್ತು ಭಾರತದ ಈ ಜಂಟಿ ಜಾಗತಿಕ ಗೌರವವನ್ನು ಅವರಿಗೆ ಪ್ರಕಟಿಸಲಾಗಿದೆ. ​ಐದು ದಶಕಗಳ ಶ್ರೇಷ್ಠತೆಯ ಪಯಣ ​1975 ರಲ್ಲಿ ಸ್ಥಾಪನೆಯಾದ ಎಸ್‌ಆರ್‌ಎಸ್ ಅಕ್ಕಿ ಗಿರಣಿಯು ಸುಮಾರು ಐದು ದಶಕಗಳಿಂದ ಶುದ್ಧತೆ ಮತ್ತು ನಂಬಿಕೆಗೆ ಮತ್ತೊಂದು ಹೆಸರಾಗಿದೆ. ಕೆ.ಜಿ. ಮಹೇಶಮೂರ್ತಿ ಅವರು ಜಪಾನ್, ಚೀನಾ, ಯುರೋಪ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹಲವು ವಿದೇಶಗಳಿಗೆ ಭೇಟಿ ನೀಡಿ, ಅಲ್ಲಿನ…

Read More

ಬೆಳಗ್ಗೆ ಎದ್ದ ತಕ್ಷಣ ಫೋನ್ ಅಲಾರಾಂ ಬಂದ್ ಮಾಡುವುದರಿಂದ ಹಿಡಿದು, ನೋಟಿಫಿಕೇಶನ್ ನೋಡುವುದು, ಮನೆಯ ವೈ-ಫೈಗೆ (Wi-Fi) ಕನೆಕ್ಟ್ ಮಾಡುವುದು ಮತ್ತು ಮೊಬೈಲ್ ನೆಟ್‌ವರ್ಕ್ ಬಳಸಿ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುವವರೆಗೆ — ವೈರ್‌ಲೆಸ್ ತಂತ್ರಜ್ಞಾನವು ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಇತ್ತೀಚಿನ 2026ರ ಸಂಶೋಧನೆಗಳು ವೈರ್‌ಲೆಸ್ ಮತ್ತು ನಾನ್-ಅಯೋನೈಸಿಂಗ್ ಇಎಂಎಫ್ (Non-ionizing EMF – ವಿದ್ಯುತ್ಕಾಂತೀಯ ಕ್ಷೇತ್ರ) ವಿಕಿರಣಗಳ ಬಗ್ಗೆ ಕೆಲವು ಕಳವಳಕಾರಿ ಸಂಗತಿಗಳನ್ನು ಹೊರಹಾಕಿವೆ. ​ನಾವು ಪ್ರತಿದಿನ ಬಳಸುವ ಈ ತಂತ್ರಜ್ಞಾನದ ಹಿಂದಿರುವ ವೈಜ್ಞಾನಿಕ ಸತ್ಯಗಳು ಮತ್ತು ಅವುಗಳಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ಎಂಬುದರ ವಿವರ ಇಲ್ಲಿದೆ. ​ಇತ್ತೀಚಿನ ಸಂಶೋಧನೆಗಳು ಹೇಳುವುದೇನು? ​ವೈರ್‌ಲೆಸ್ ವಿಕಿರಣಗಳ ಪ್ರಭಾವದ ಕುರಿತಾದ ವಿಜ್ಞಾನವು ನಾವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಸಂಕೀರ್ಣವಾಗಿದೆ. ಇತ್ತೀಚಿನ ಪ್ರಮುಖ ಅಧ್ಯಯನಗಳು ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿವೆ: ​ಆಟಿಸಂ ಮತ್ತು ತಳಿವಿಜ್ಞಾನದ ಮೇಲೆ ಪ್ರಭಾವ: ಯೇಲ್ (Yale) ವಿಶ್ವವಿದ್ಯಾಲಯದ ಅಧ್ಯಯನವೊಂದರ ಪ್ರಕಾರ, ಬ್ಲೂಟೂತ್ ಮಟ್ಟದ ವೈರ್‌ಲೆಸ್ ವಿಕಿರಣಗಳು ಸಹ…

Read More

ಸಾಮಾನ್ಯವಾಗಿ ಅಸುರಕ್ಷಿತ ಲೈಂಗಿಕ ಕ್ರಿಯೆಯ ಬಗ್ಗೆ ಮಾತನಾಡುವಾಗ ಕೇವಲ ಇಂಟರ್‌ಕೋರ್ಸ್ (Penetrative sex) ಬಗ್ಗೆ ಮಾತ್ರ ಹೆಚ್ಚು ಚರ್ಚೆಯಾಗುತ್ತದೆ. ಆದರೆ ‘ಓರಲ್ ಸೆಕ್ಸ್’ (Oral Sex – ಮೌಖಿಕ ಲೈಂಗಿಕ ಕ್ರಿಯೆ) ಸಂಪೂರ್ಣವಾಗಿ ಸುರಕ್ಷಿತ ಮತ್ತು ಇದರಿಂದ ಯಾವುದೇ ಆರೋಗ್ಯ ಸಮಸ್ಯೆಗಳು ಅಥವಾ ಲೈಂಗಿಕ ಸಾಂಕ್ರಾಮಿಕ ರೋಗಗಳು (STIs) ಹರಡುವುದಿಲ್ಲ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ​ಆದರೆ, ಈ ಕುರಿತು ಬೆಂಗಳೂರಿನ ಆಸ್ಟರ್ ವೈಟ್‌ಫೀಲ್ಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸಲಹೆಗಾರರಾದ ಡಾ. ದೀಪ್ತಿ ಅಶ್ವಿನ್ ಅವರು ಕೆಲವು ಪ್ರಮುಖ ವೈದ್ಯಕೀಯ ಸತ್ಯಗಳನ್ನು ಹಂಚಿಕೊಂಡಿದ್ದಾರೆ. ಓರಲ್ ಸೆಕ್ಸ್‌ನಿಂದ ಹರಡುವ ರೋಗಗಳು ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಅವರು ನೀಡಿರುವ ಮಾಹಿತಿ ಇಲ್ಲಿದೆ. ​ರೋಗ ಹರಡುವಿಕೆಯ ಸಾಧ್ಯತೆ: ತಪ್ಪು ಕಲ್ಪನೆ ಬೇಡ ​ಡಾ. ದೀಪ್ತಿ ಅವರ ಪ್ರಕಾರ, ಇಂಟರ್‌ಕೋರ್ಸ್‌ಗೆ ಹೋಲಿಸಿದರೆ ಓರಲ್ ಸೆಕ್ಸ್‌ನಲ್ಲಿ ಲೈಂಗಿಕ ಸಾಂಕ್ರಾಮಿಕ ರೋಗಗಳು (STIs) ಹರಡುವ ಸಾಧ್ಯತೆ ಕಡಿಮೆ ಇರುವುದು ನಿಜ. ಆದರೆ, ಇದರ ಅಪಾಯ ‘ಶೂನ್ಯ’…

Read More