Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 23 ಡಿವೈಎಸ್ಪಿ ಹಾಗೂ 129 ಪೊಲೀಸ್ ಇನ್ಸ್ ಪೆಕ್ಟರ್ ವರ್ಗಾವಣೆ ಮಾಡಿ ಆದೇಶ ಮಾಡಿದೆ. ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ ಹೊರಡಿಸಿದ್ದು, ಕಲಬುರ್ಗಿಯ ಪಿಟಿಸಿ ನಾಗೇನಹಳ್ಳಿ ಡಿವೈಎಸ್ಪಿಯಾಗಿದ್ದಂತ ರಾಜಣ್ಣ ಡಿ.ಜಿ ಅವರನ್ನು ಬೀದರ್ ಉಪ ವಿಭಾಗದ ವರ್ಗಾವಣೆ ಆದೇಶ ರದ್ದುಪಡಿಸಿ, ಅಲ್ಲಿಯೇ ಮುಂದುವರೆಸಲಾಗಿದೆ. ಇನ್ನೂ ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ ಅವರನ್ನು ಗೋಕಾಕ್ ಉಪ ವಿಭಾಗದಿಂದ ಬೀದರ್ ಉಪ ವಿಭಾಗದ ಡಿವೈಎಸ್ಪಿಯಾಗಿ, ಗಿರೀಶ್ ಬಿ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಉತ್ತರ ಕನ್ನಡದ ಭಟ್ಕಳ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮಹೇಶ್.ಎಂ.ಕೆ ಅವರನ್ನು ಭಟ್ಕಳ ಉಪ ವಿಭಾಗದಿಂದ ಸಿಐಡಿಗೆ, ಯು.ಡಿ ಕೃಷ್ಣಕುಮಾರ್ ಎಂಬುವರನ್ನು ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್ಪಿಯಾಗಿ, ಪ್ರಭು ಡಿ.ಟಿ ಅವರನ್ನು ಉಡುಪಿ ಉಪ ವಿಭಾಗದಿಂದ, ಕಲಬುರ್ಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.…
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಮೇಜರ್ ಸರ್ಜರಿ ಮಾಡಲಾಗಿದೆ. ಬರೋಬ್ಬರಿ 23 ಡಿವೈಎಸ್ಪಿಯವರನ್ನು ವರ್ಗಾವಣೆ ಮಾಡಿ ಆದೇಶ ಮಾಡಿದೆ. ಇಂದು ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ ಹೊರಡಿಸಿದ್ದು, ಆಡಳಿತಾತ್ಮಕ ಹಿತದೃಷ್ಠಿಯಿಂದ ಕಲಬುರ್ಗಿಯ ಪಿಟಿಸಿ ನಾಗೇನಹಳ್ಳಿ ಡಿವೈಎಸ್ಪಿಯಾಗಿದ್ದಂತ ರಾಜಣ್ಣ ಡಿ.ಜಿ ಅವರನ್ನು ಬೀದರ್ ಉಪ ವಿಭಾಗದ ವರ್ಗಾವಣೆ ಆದೇಶ ರದ್ದುಪಡಿಸಿ, ಅಲ್ಲಿಯೇ ಮುಂದುವರೆಸಲಾಗಿದೆ. ಇನ್ನೂ ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ ಅವರನ್ನು ಗೋಕಾಕ್ ಉಪ ವಿಭಾಗದಿಂದ ಬೀದರ್ ಉಪ ವಿಭಾಗದ ಡಿವೈಎಸ್ಪಿಯಾಗಿ, ಗಿರೀಶ್ ಬಿ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಉತ್ತರ ಕನ್ನಡದ ಭಟ್ಕಳ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮಹೇಶ್.ಎಂ.ಕೆ ಅವರನ್ನು ಭಟ್ಕಳ ಉಪ ವಿಭಾಗದಿಂದ ಸಿಐಡಿಗೆ, ಯು.ಡಿ ಕೃಷ್ಣಕುಮಾರ್ ಎಂಬುವರನ್ನು ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್ಪಿಯಾಗಿ, ಪ್ರಭು ಡಿ.ಟಿ ಅವರನ್ನು ಉಡುಪಿ ಉಪ ವಿಭಾಗದಿಂದ, ಕಲಬುರ್ಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಹೀಗಿದೆ 23 ಡಿವೈಎಸ್ಪಿ…
ಮುರುಗರ ಪೂಜೆಯನ್ನು ಯಾರು ಬೇಕಾದರೂ, ಯಾವಾಗ ಬೇಕಾದರೂ, ಯಾವ ದಿನ ಬೇಕಾದರೂ ಮಾಡಬಹುದು. ಆದರೆ ಈ ಮುರುಗನ ಆರಾಧನೆಯ ವಿಶೇಷ ದಿನವನ್ನು ಕೃತಿಕೈ ಎಂದು ಕರೆಯಲಾಗುತ್ತದೆ. ಅಂದರೆ ಕಾರ್ತಿಕ ನಕ್ಷತ್ರವು ಮುರುಗನಿಗೆ ಮಂಗಳಕರವಾದ ನಕ್ಷತ್ರ ಎಂದು ಹೇಳಲಾಗುತ್ತದೆ. ಆದರೆ ಈ ನಕ್ಷತ್ರದ ಹೊರತಾಗಿ ಮತ್ತೊಂದು ನಕ್ಷತ್ರವನ್ನು ಮುರುಗ ಪೂಜೆಗೆ ಮಂಗಳಕರ ದಿನವೆಂದು ಹೇಳಲಾಗುತ್ತದೆ. ಆ ನಕ್ಷತ್ರ ಯಾವುದು ಗೊತ್ತಾ? ಈ ಪೋಸ್ಟ್ ಮೂಲಕ, ನಾವು ಮುರುಗ ದೇವಸ್ಥಾನಕ್ಕೆ ಹೋಗಿ ಆ ನಿರ್ದಿಷ್ಟ ನಕ್ಷತ್ರದಲ್ಲಿ ಪೂಜೆ ಮಾಡುವ ಬಗ್ಗೆ ಕೆಲವು ಆಧ್ಯಾತ್ಮಿಕ ಸಲಹೆಗಳನ್ನು ತಿಳಿಯಲಿದ್ದೇವೆ. ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಪೀಠ ನಂ 1ಕೇರಳ ಕೊಳ್ಳೇಗಾಲದ ಮಹಾ ಮಾಂತ್ರಿಕ ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564 ಮುರುಗರ ಆರಾಧನೆಯ ಪುಣ್ಯ: ವಿಶಾಖ ನಕ್ಷತ್ರದಂದು ಮುರುಗರನ್ನು ಪೂಜಿಸುವುದು ಅತ್ಯಂತ ಶ್ರೇಯಸ್ಕರ. ವಿಶಾಖ ನಕ್ಷತ್ರದಂದು ನಿಮ್ಮ ಮನೆಯ ಸಮೀಪದಲ್ಲಿರುವ ಮುರುಗ ದೇವಸ್ಥಾನಕ್ಕೆ ಹೋಗಿ. ಮುರುಗನಿಗೆ ಕಲ್ಲನ್ನು ಅರ್ಪಿಸಿ, ಹೂವುಗಳನ್ನು ಖರೀದಿಸಿ ಮತ್ತು ಹೆಸರಿನಿಂದ ಪ್ರಾರ್ಥಿಸಿ. ಆಲಿ ಹೂವುಗಳನ್ನು ಖರೀದಿಸಿ ನಿಮ್ಮ…
ನವದೆಹಲಿ: “ವಂದೇ ಮಾತರಂಗೆ ಬುನಾದಿ ಹಾಕಿದ ಪಕ್ಷ ನಮ್ಮದು. ಈ ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ನಮ್ಮದು. ಈ ದೇಶದ ಸೇವೆ ಮಾಡಿದ ಪಕ್ಷ ನಮ್ಮದು. ಈಗ ಬಿಜೆಪಿ, ಬೇರೆಯವರು ನಮ್ಮನ್ನು ಅನುಸರಿಸುತ್ತಿದ್ದಾರೆ. ಅದೇ ಸಂತೋಷ ನಮಗೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು. ರಾಷ್ಟ್ರಗೀತೆಗೆ ನೀಡುವ ಗೌರವವನ್ನು ವಂದೇ ಮಾತರಂಗೂ ನೀಡಬೇಕು ಹಾಗೂ ಇದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇಳಿದಾಗ, “ನಮ್ಮ ಕಾರ್ಯಕ್ರಮಗಳನ್ನು ಪ್ರಾರಂಭ ಮಾಡುವಾಗ ಪ್ರತಿಹಂತದಲ್ಲೂ ವಂದೇ ಮಾತರಂ ಗೀತೆ ಹಾಡುತ್ತೇವೆ. ನಾವು ವಂದೇ ಮಾತರಂ ಗೀತೆಗೆ ಗೌರವ ನೀಡುತ್ತೇವೆ. ಅದನ್ನು ಅನುಸರಿಸುತ್ತೇವೆ” ಎಂದು ಹೇಳಿದರು. “ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕುವೆಂಪು ವಿರಚಿತ ಜಯ ಭಾರತ ಜನನಿಯ ತನುಜಾತೆ ಹಾಡನ್ನು ರಾಜ್ಯಗೀತೆಯಾಗಿ ಕಡ್ಡಾಯ ಮಾಡಿದ್ದೇವೆ. ಅದರಲ್ಲಿ ಸರ್ವಜನಾಂಗದ ಶಾಂತಿಯ ತೋಟ ಎಂದು ಇದೆಯಲ್ಲ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ. ಏನೇನು ಹೇಳಬೇಕು, ಯಾವ ಧರ್ಮ…
ಶಿವಮೊಗ್ಗ: ರಾಜ್ಯ ಸರ್ಕಾರದ ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆ ಯವರು ಪರಿಸರ ಮೂಲಭೂತವಾದಿ ತರ ವರ್ತನೆ ತೋರುತ್ತಾ ಇರುವುದೇ ಈ ಹೊತ್ತಿನ ಮಲೆನಾಡಿನ ಹಲವು ಬಿಕ್ಕಟ್ಟಿಗೆ ಕಾರಣ ಅನ್ನಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಮುಖಂಡ, ಸಾಗರದ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಆಕ್ರೋಶವನ್ನು ಹೊರ ಹಾಕಿದ್ದಾರೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ಮಲೆನಾಡಿನ ಮುಳುಗಡೆ ರೈತರು ಈ ಪೋಸ್ಟ್ ಜತೆ ಇರುವ ರಾಜ್ಯದ ಕಾಡಿನ ಮಂತ್ರಿಗಳ ಈ ಟಿಪ್ಪಣಿ ಸರಿ ಮಾಡಿ ಓದಿಕೊಳ್ಳಿ. ರಾಜ್ಯ ಸರ್ಕಾರದ ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆ ಯವರು ಪರಿಸರ ಮೂಲಭೂತವಾದಿ ತರ ವರ್ತನೆ ತೋರುತ್ತಾ ಇರುವುದೇ ಈ ಹೊತ್ತಿನ ಮಲೆನಾಡಿನ ಹಲವು ಬಿಕ್ಕಟ್ಟಿಗೆ ಕಾರಣ ಅನ್ನಿಸುತ್ತಿದೆ ಅಂದಿದ್ದಾರೆ. ಈ ಟಿಪ್ಪಣಿ ಓದಿ ಒಂದು ಪತ್ರಿಕಾವರದಿ ಮತ್ತು ವೃಕ್ಷ ಲಕ್ಷ ಅಂದೋಲನ ಎನ್ನುವ ಅನಂತ ಹೆಗಡೆ ಆಶೀಸರ ನೇತೃತ್ವದ ಸಂಸ್ಥೆ ನೀಡಿದ ಮನವಿಯನ್ನು ಪರಿಗಣಿಸಿ ನಮ್ಮ ಕಾಡಿನ ಮಂತ್ರಿ ಹಿಂದೆ ಮುಂದೆ ನೋಡದೆ ಶರಾವತಿ ಮುಳುಗಡೆಯಾಗಿ…
ಚಿಕ್ಕಮಗಳೂರು: ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ ನೀಡ್ತಿದ್ದಾರೆ. ಕಡೂರು ಶಾಸಕ ಆನಂದ್ ಪಿಎ ಮಂಜುನಾಥ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ತಾಲ್ಲೂಕು ಕಚೇರಿ ಸಾಂಖ್ಯಿಕ ನಿರೀಕ್ಷಕ ಇಕ್ಬಾಲ್ ಆರೋಪ ಮಾಡಿದ್ದಾರೆ. ಆ ಕೆಲಸ ಮಾಡದೇ ಇದ್ದ ಕಾರಣ ಇದೀಗ ಸ್ಥಳ ತೋರಿಸದೇ ತನ್ನನ್ನು ವರ್ಗಾವಣೆ ಮಾಡಲಾಗಿದೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಕಚೇರಿ ನಿರೀಕ್ಷಕ ಇಕ್ಬಾಲ್ ಈ ಆರೋಪ ಮಾಡಿದ್ದಾರೆ. ಕಡೂರು ಶಾಸಕ ಆನಂದ್ ಶಿಫಾರಸ್ಸಿನ ಮೇರೆಗೆ ನನ್ನನ್ನು ವರ್ಗಾವಣೆ ಮಾಡಲಾಗಿದೆ. ಶಾಸಕರ ಪಿಎ ತುಂಬಾ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ಪಿಎ ಮಂಜುನಾಥ್ ಪ್ರತಿ ತಿಂಗಳು ರೂ.25,000 ನೀಡುವಂತೆ ಒತ್ತಾಯಿಸುತ್ತಿದ್ದಾರೆ. ನಾನು ಮುಸ್ಲೀಂ ಸಮುದಾಯದವನು ಎನ್ನುವ ಕಾರಣಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ. ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ ನೀಡುತ್ತಾರೆ. ಅವರು ಹೇಳಿದಂತೆ ಕೇಳದಿದ್ದಕ್ಕೆ ಸ್ಥಳ ನಿಯೋಜಿಸದೇ ವರ್ಗಾವಣೆ ಮಾಡಲಾಗಿದೆ. ವರ್ಗಾವಣೆ ಮಾಡಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವೆ. ಟ್ರಾನ್ಸ್ ಫರ್ ಟಪಾಲ್ ಪುಸ್ತಕದ ಮೇಲೆ ಉಲ್ಲೇಖಿಸಿದ್ದ…
ಮಂಡ್ಯ :- ಸರ್ಕಾರಿ ಶಾಲಾ – ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳೇ ಇಂದು ದೇಶ – ವಿದೇಶಗಳಲ್ಲಿ ಉನ್ನತ ಸಾಧನೆ ಮಾಡಿದ್ದಾರೆ ಶಾಸಕ ಕೆ.ಎಂ.ಉದಯ್ ತಿಳಿಸಿದರು. ಮದ್ದೂರು ತಾಲೂಕಿನ ಅರುವನಹಳ್ಳಿ ಗ್ರಾಮದಲ್ಲಿ ಶತಮಾನದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಶಾಲೆಯ 2 ನೂತನ ಕಟ್ಟಡಗಳನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವ್ಯಕ್ತಿಗಳು, ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಸಾಧನೆ ಮಾಡಿದ್ದಾರೆ. ಸರ್ಕಾರಿ ಶಾಲೆ ಎಂಬ ಕೀಳಿರಿಮೆ ಬಿಡಬೇಕು. ಮಕ್ಕಳಿಗೆ ವಿದ್ಯಾರ್ಜನೆ ಎಷ್ಟು ಮುಖ್ಯವೋ ಸಂಸ್ಕಾರವೂ ಅಷ್ಟೇ ಮುಖ್ಯ. ಕಲಿತಂತೆಲ್ಲ ವಿದ್ಯಾರ್ಥಿಗಳು ಸಮಾಜಮುಖಿ ಚಿಂತನೆಯಲ್ಲಿ ತೊಡಗಬೇಕು. ಗುರು, ಹಿರಿಯರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು. ಗ್ರಾಮದಲ್ಲಿ ಶತಮಾನದ ಶಾಲೆ ಎಂಬ ಹೆಗ್ಗಳಿಕೆಗೆ ಪತ್ರವಾಗಿದ್ದ ಶಾಲೆಯ ಕಟ್ಟಡ ಶಿಥಿಲವಾಗಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ 2 ಶಾಲಾ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲೆ…
ಮಂಡ್ಯ : ನಿರೀಕ್ಷೆಗೂ ಮೀರಿ ಕ್ಷೇತ್ರದ ಅಭಿವೃದ್ಧಿ ಕೆಲಸ ಮಾಡೋದು, ಜನರ ಕಷ್ಟ ಸುಖಗಳಿಗೆ ಸ್ಪಂದಿಸೋದು, ಬಡವರಿಗೆ ಸಹಾಯ ಮಾಡೋದು ಇವೆಲ್ಲ ಸರ್ವಾಧಿಕಾರಿ ಧೋರಣೆಯೇ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ವಿರುದ್ಧ ಶಾಸಕ ಕೆ.ಎಂ.ಉದಯ್ ತಿರುಗೇಟು ನೀಡಿದರು. ಮದ್ದೂರು ತಾಲೂಕಿನ ಅಗರಲಿಂಗನದೊಡ್ಡಿ, ಡಿ.ಹೊಸೂರು, ಹಳ್ಳಿಕೆರೆ, ಅಂಕೇಗೌಡನದೊಡ್ಡಿ ಹಾಗೂ ಕೆಂಪೇಗೌಡನದೊಡ್ಡಿ ಗ್ರಾಮಗಳಲ್ಲಿ ಅಂದಾಜು 1 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕೆ.ಬೆಳ್ಳೂರು ಗ್ರಾಮದ ಶಾಲಾ ಕಟ್ಟಡ ನಿರ್ಮಾಣಕ್ಕೆ ತಡೆ ಮಾಡುವಂತೆ ನಾನು ಯಾವ ಅಧಿಕಾರಿಗೂ ಧಮ್ಕಿ ಹಾಕಿಲ್ಲ. ಪೂಜೆ ಎಲ್ಲಾ ಮುಗಿದ ಮೇಲೆ ನನಗೆ ಗೊತ್ತಾಯಿತು. ನಾನು ಯಾವುದೇ ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿಲ್ಲ. ನಿರೀಕ್ಷೆಗೂ ಮೀರಿ ಜಾಸ್ತಿ ಕೆಲಸ ಮಾಡೋದು, ಜನರ ಜೊತೆ ಸದಾ ಕಾಲ ಕಷ್ಟ ಸುಖಗಳಿಗೆ ಸ್ಪಂದಿಸೋದು, ಬಡವರಿಗೆ ಸಹಾಯ ಮಾಡೋದು, ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿಸೋದು, ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳದೆ ಇರೋದು ಇವೆಲ್ಲ ಸರ್ವಾಧಿಕಾರಿ ಧೋರಣೆಯೇ ಎಂದು ಪ್ರಶ್ನಿಸಿದರು.…
ನವದೆಹಲಿ: ಕೆಲವು ದಿನಗಳ ಹಿಂದೆ, ಗೂಗಲ್ನ ಪೋಷಕ ಕಂಪನಿ ಆಲ್ಫಾಬೆಟ್, 2025 ರಲ್ಲಿ ಇದುವರೆಗಿನ ಅತ್ಯಧಿಕ ಆದಾಯ $400 ಬಿಲಿಯನ್ ಎಂದು ವರದಿ ಮಾಡಿದೆ. ಈಗ, ಕಂಪನಿಯ ವ್ಯವಹಾರ ಘಟಕವು ಕಂಪನಿಯ ಭವಿಷ್ಯದ AI ಯೋಜನೆಗಳನ್ನು ಸ್ವೀಕರಿಸಲು ಸಿದ್ಧರಿಲ್ಲದ ಉದ್ಯೋಗಿಗಳಿಗೆ, ಬೇರ್ಪಡಿಕೆ ಪ್ಯಾಕೇಜ್ನೊಂದಿಗೆ ಸ್ವಯಂಪ್ರೇರಿತ ನಿರ್ಗಮನವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡುತ್ತಿದೆ. ಬಿಸಿನೆಸ್ ಇನ್ಸೈಡರ್ ಪ್ರಕಾರ, ಗೂಗಲ್ನ ಮುಖ್ಯ ವ್ಯವಹಾರ ಅಧಿಕಾರಿ ಫಿಲಿಪ್ ಷಿಂಡ್ಲರ್, ಜಾಗತಿಕ ವ್ಯಾಪಾರ ಸಂಸ್ಥೆ (GBO) ಘಟಕದೊಳಗಿನ ಕೆಲವು ಉದ್ಯೋಗಿಗಳು ಈ ಸ್ವಯಂಪ್ರೇರಿತ ನಿರ್ಗಮನವನ್ನು ಆಯ್ಕೆ ಮಾಡಬಹುದು ಎಂದು ಆಂತರಿಕ ಜ್ಞಾಪಕ ಪತ್ರದಲ್ಲಿ ತಿಳಿಸಿದ್ದಾರೆ. ಗೂಗಲ್ನ GBO ಘಟಕವು ಜಾಹೀರಾತು ಉತ್ಪನ್ನಗಳು ಮತ್ತು ಸೇವೆಗಳು ಮತ್ತು ಜಾಗತಿಕ ಆದಾಯದ ಬೆಳವಣಿಗೆ ಸೇರಿದಂತೆ ವಿವಿಧ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತದೆ. ವರದಿಯ ಪ್ರಕಾರ, ಕಂಪನಿಯು 2026 ರಲ್ಲಿ “ಬಲವಾದ ಸ್ಥಾನದಲ್ಲಿ” ಪ್ರಾರಂಭವಾಯಿತು ಎಂದು ಫಿಲಿಪ್ ಷಿಂಡ್ಲರ್ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, AI ಭೂದೃಶ್ಯವು ಸದಾ ವಿಕಸನಗೊಳ್ಳುತ್ತಿದೆ ಎಂದು ಷಿಂಡ್ಲರ್ ಸುಳಿವು ನೀಡಿದರು. ಅವರು ಹೇಳಿದರು,…
ದಕ್ಷಿಣ ಕನ್ನಡ: ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆಯುಂಟಾಗಿದೆ. ಈ ವೇಳೆ ಇಬ್ಬರು ಸಹಪಾಠಿಗಳಿಗೆ ಪೆನ್, ಚಾಕುವಿನಿಂದ ವಿದ್ಯಾರ್ಥಿ ಇರಿದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಚೂರಿಯಿಂದ ಇರಿದು ಅಪ್ರಾಪ್ತನ ಮೇಲೆ ಹೇಮಂತ್ ಎಂಬಾತ ಹಲ್ಲೆಗೈದಿದ್ದಾನೆ. ಜಗಳ ಬಿಡಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಯ ಮೇಲೂ ಹಲ್ಲೆ ಮಾಡಲಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗಲಾಟೆ ವಿಚಾರ ತಿಳಿದು ಆರೋಗ್ಯ ಕೇಂದ್ರದ ಬಳಿ ಜನರು ಸೇರಿದ್ದಾರೆ. ಜನರನ್ನು ಚದುರಿಸಲು ಆಸ್ಪತ್ರೆಯ ಬಳಿಯಲ್ಲಿ ವಿಟ್ಲ ಪೊಲೀಸರು ಲಾಠಿ ಬೀಸಿದ್ದಾರೆ. ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂಟ್ವಾಳ ಡಿವೈಎಸ್ಪಿ ಭೇಟಿ ನೀಡಿದ್ದಾರೆ. ಹಲ್ಲೆಗೈದಿದ್ದ ವಿದ್ಯಾರ್ಥಿ ಹೇಮಂತ್ ನನ್ನು ವಶಕ್ಕೆ ಪೊಲೀಸರು ಪಡೆದಿದ್ದಾರೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. https://kannadanewsnow.com/kannada/sslc-student-commits-suicide-by-writing-death-note-due-to-exam-fear/














