Author: kannadanewsnow09

ನವದೆಹಲಿ: ವಿಚ್ಛೇದನ ಅಥವಾ ಡಿವೋರ್ಸ್ ಎಂಬ ಪದ ಕೇಳಿದ ತಕ್ಷಣ ನಮಗೆ ನೆನಪಾಗುವುದು ಮುರಿದುಬಿದ್ದ ಸಂಬಂಧಗಳು. ಆದರೆ ಈಗ ಚರ್ಚೆಯಲ್ಲಿರುವ ‘ಸ್ಲೀಪ್ ಡಿವೋರ್ಸ್’ (Sleep Divorce) ಅಥವಾ ‘ನಿದ್ರಾ ವಿಚ್ಛೇದನ’ ಸಂಬಂಧವನ್ನು ಮುರಿಯುವ ಬದಲಿಗೆ, ಅದನ್ನು ಮತ್ತಷ್ಟು ಗಟ್ಟಿಗೊಳಿಸುವ ಮತ್ತು ಆರೋಗ್ಯವನ್ನು ವೃದ್ಧಿಸುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. ಹೌದು, ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿಗಳು ಉತ್ತಮ ನಿದ್ರೆ ಮತ್ತು ಮಾನಸಿಕ ನೆಮ್ಮದಿಗಾಗಿ ರಾತ್ರಿ ವೇಳೆ ಪ್ರತ್ಯೇಕ ಹಾಸಿಗೆ ಅಥವಾ ಪ್ರತ್ಯೇಕ ಕೊಠಡಿಗಳಲ್ಲಿ ಮಲಗುವ ಈ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಏನಿದು ಸ್ಲೀಪ್ ಡಿವೋರ್ಸ್? ಹೆಸರು ಕೇಳಲು ಸ್ವಲ್ಪ ವಿಚಿತ್ರವೆನಿಸಿದರೂ, ಇದರ ಅರ್ಥ ಸರಳವಾಗಿದೆ. ದಂಪತಿಗಳು ಹಗಲಿಡೀ ಪ್ರೀತಿ ಮತ್ತು ಸಾಮರಸ್ಯದಿಂದಲೇ ಇರುತ್ತಾರೆ, ಆದರೆ ರಾತ್ರಿ ಮಲಗುವಾಗ ಮಾತ್ರ ತಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆಯಾಗಿ ಮಲಗುತ್ತಾರೆ. ಇದು ದಾಂಪತ್ಯದಲ್ಲಿನ ಬಿರುಕಿನ ಸಂಕೇತವಲ್ಲ, ಬದಲಿಗೆ ಉತ್ತಮ ನಿದ್ರೆಗಾಗಿ ಮಾಡಿಕೊಳ್ಳುವ ಒಂದು ವೈಜ್ಞಾನಿಕ ಹೊಂದಾಣಿಕೆಯಾಗಿದೆ. ಈ ಆಯ್ಕೆಗೆ ಕಾರಣಗಳೇನು? ದಂಪತಿಗಳು ಸ್ಲೀಪ್ ಡಿವೋರ್ಸ್ ಆಯ್ಕೆ…

Read More

ನವದೆಹಲಿ: ಅನೇಕ ಬಾರಿ ಮಕ್ಕಳು ಬೆಳೆದು ದೊಡ್ಡವರಾದರೂ, ತಮ್ಮ ಪೋಷಕರ ಭಾವನಾತ್ಮಕ ನಡವಳಿಕೆಯಿಂದಾಗಿ ಸಂಕಷ್ಟ ಅನುಭವಿಸುತ್ತಾರೆ. ಕೆಲವು ಪೋಷಕರು ವಯಸ್ಸಿನಲ್ಲಿ ಹಿರಿಯರಾದರೂ, ಭಾವನಾತ್ಮಕವಾಗಿ ಅಪಕ್ವವಾಗಿರುತ್ತಾರೆ (Emotionally Immature). ಇದು ಮಕ್ಕಳ ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರಬಹುದು. ಇಂತಹ ಪೋಷಕರನ್ನು ನಿಭಾಯಿಸಲು ಮನಶ್ಶಾಸ್ತ್ರಜ್ಞರು ಮೂರು ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳನ್ನು ಸೂಚಿಸಿದ್ದಾರೆ. ಭಾವನಾತ್ಮಕವಾಗಿ ಅಪಕ್ವ ಪೋಷಕರು ಅಂದರೆ, ಅವರು ತಮ್ಮ ಮಕ್ಕಳ ಭಾವನೆಗಳನ್ನು ಅರ್ಥೈಸಿಕೊಳ್ಳಲು ವಿಫಲರಾಗುತ್ತಾರೆ, ಸಣ್ಣ ವಿಷಯಕ್ಕೂ ಅತಿಯಾಗಿ ಪ್ರತಿಕ್ರಿಯಿಸುತ್ತಾರೆ ಅಥವಾ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. ಇವರನ್ನು ನಿಭಾಯಿಸಲು ಈ ಕೆಳಗಿನ ಕ್ರಮಗಳು ಸಹಕಾರಿ: 1. ಗಡಿಗಳನ್ನು ನಿಗದಿಪಡಿಸಿ (Set Healthy Boundaries) ಪೋಷಕರೊಂದಿಗೆ ಸಂವಹನ ನಡೆಸುವಾಗ ನಿಮ್ಮ ಮಿತಿ ಅಥವಾ ಗಡಿಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಬಹಳ ಮುಖ್ಯ. ಅವರು ನಿಮ್ಮ ವೈಯಕ್ತಿಕ ಜೀವನದಲ್ಲಿ ಅತಿಯಾಗಿ ಹಸ್ತಕ್ಷೇಪ ಮಾಡುತ್ತಿದ್ದರೆ ಅಥವಾ ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುತ್ತಿದ್ದರೆ, ಅದನ್ನು ಸಭ್ಯವಾಗಿಯೇ ನಿರಾಕರಿಸಲು ಕಲಿಯಿರಿ. “ನಾನು ಈ ವಿಷಯದ ಬಗ್ಗೆ ಈಗ ಚರ್ಚಿಸಲು ಇಷ್ಟಪಡುವುದಿಲ್ಲ”…

Read More

ನವದೆಹಲಿ: ಇಂದಿನ ಡಿಜಿಟಲ್ ಯುಗದ ಡೇಟಿಂಗ್ ಲೋಕದಲ್ಲಿ ಹೊಸ ಹೊಸ ಶಬ್ದಗಳು ಕೇಳಿಬರುತ್ತಿವೆ. ಈ ಹಿಂದೆ ‘ಘೋಸ್ಟಿಂಗ್’ (Ghosting) ಎಂಬ ಪದ ಸಾಕಷ್ಟು ಸದ್ದು ಮಾಡಿತ್ತು. ಆದರೆ ಈಗ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿರುವ ‘ಘೋಸ್ಟ್‌ಲೈಟಿಂಗ್’ (Ghostlighting) ಎಂಬ ಹೊಸ ಟ್ರೆಂಡ್ ಪ್ರೇಮಿಗಳ ನಡುವಿನ ಬಾಂಧವ್ಯಕ್ಕೆ ಕೊಳ್ಳಿ ಇಡುತ್ತಿದೆ. ಇದು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಏನಿದು ಘೋಸ್ಟ್‌ಲೈಟಿಂಗ್? ಸರಳವಾಗಿ ಹೇಳುವುದಾದರೆ, ಇದು ‘ಘೋಸ್ಟಿಂಗ್’ ಮತ್ತು ‘ಗ್ಯಾಸ್‌ಲೈಟಿಂಗ್’ (Gaslighting) ಎಂಬ ಎರಡು ಪ್ರವೃತ್ತಿಗಳ ಮಿಶ್ರಣವಾಗಿದೆ. ಘೋಸ್ಟಿಂಗ್: ಅಂದರೆ ಯಾವುದೇ ಮುನ್ಸೂಚನೆ ನೀಡದೆ ಸಂಗಾತಿಯು ಇದ್ದಕ್ಕಿದ್ದಂತೆ ಸಂಪರ್ಕ ಕಡಿತಗೊಳಿಸುವುದು. ಘೋಸ್ಟ್‌ಲೈಟಿಂಗ್: ಇಲ್ಲಿ ವ್ಯಕ್ತಿಯು ಮೊದಲು ಮಾತುಕತೆಯನ್ನು ಸಂಪೂರ್ಣವಾಗಿ ನಿಲ್ಲಿಸಿ ನಾಪತ್ತೆಯಾಗುತ್ತಾನೆ (Ghosting). ಆದರೆ, ಕೆಲವು ದಿನಗಳ ನಂತರ ಮತ್ತೆ ಪ್ರತ್ಯಕ್ಷನಾಗಿ, ತಾನು ಹಾಗೆ ಮಾಡಲೇ ಇಲ್ಲ ಎಂದು ವಾದಿಸುತ್ತಾನೆ ಅಥವಾ ಎದುರಿಗಿರುವ ವ್ಯಕ್ತಿಯೇ ಭ್ರಮೆಯಲ್ಲಿದ್ದಾರೆ ಎಂದು ನಂಬಿಸಲು ಪ್ರಯತ್ನಿಸುತ್ತಾನೆ (Gaslighting). ಇದು ಅಪಾಯಕಾರಿ…

Read More

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ, ಚಾಮರಾಜನಗರ ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಎಸ್ಪಿಯವರ ಫ್ಲೆಕ್ಸ್ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಚಾಮರಾಜನಗರದಲ್ಲೂ ಅಂತಹದ್ದೇ ಘಟನೆ ಮರುಕಳಿಸಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ‘ಕೆಎನ್‌ಎನ್’ (KNN) ಈ ಬಗ್ಗೆ ವರದಿ ಬಿತ್ತರಿಸಿದ ಫಲಶೃತಿಯಾಗಿ, ಇದೀಗ ವಿವಾದಾತ್ಮಕ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲಾಗಿದೆ. ವಿವಾದಕ್ಕೆ ಕಾರಣವಾಗಿದ್ದೇನು? ಚಾಮರಾಜನಗರ ವಿಶ್ವವಿದ್ಯಾನಿಲಯ ಮತ್ತು ಮೈಸೂರಿನ ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ ಇವರ ಸಂಯುಕ್ತಾಶ್ರಯದಲ್ಲಿ ‘ಕೈವಾರ ಸದ್ಗುರು ಯೋಗಿನಾರಾಯಣ ಯೋಗಿಗಳ ಪರಿಚಯ’ ಹಾಗೂ ‘ಯತೀಂದ್ರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಖಾಸಗಿ ಕಾರ್ಯಕ್ರಮದ ಪ್ರಚಾರಕ್ಕಾಗಿ ಆಯೋಜಕರು ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಭಾವಚಿತ್ರಗಳನ್ನು ಬಳಸಿಕೊಂಡು ನಗರದಾದ್ಯಂತ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದರು. ಅಧಿಕಾರಿಗಳ ಅನುಮತಿ ಪಡೆದೇ ಈ ಫ್ಲೆಕ್ಸ್ ಹಾಕಲಾಗಿದೆಯೇ ಎಂಬ ಸಂಶಯ ಒಂದೆಡೆಯಾದರೆ, ರಾಜಕಾರಣಿಗಳ ಮಾದರಿಯಲ್ಲಿ ಅಧಿಕಾರಿಗಳ ಫೋಟೋ ಪ್ರದರ್ಶನ ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಬಂದಿತ್ತು. ಎಚ್ಚೆತ್ತುಕೊಂಡ ನಗರಸಭೆ – ತೆರವು ಕಾರ್ಯಾಚರಣೆ ಈ ಕುರಿತು…

Read More

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ರಾಜಕಾರಣಿಗಳ ನಡುವಿನ ಫ್ಲೆಕ್ಸ್ ವಾರ್ ಹೊಸದೇನಲ್ಲ. ಆದರೆ, ಈಗ ಮಂಡ್ಯದ ಬೀದಿಗಳಲ್ಲಿ ಜನಪ್ರತಿನಿಧಿಗಳಿಗಿಂತಲೂ ಹೆಚ್ಚಾಗಿ ಐಪಿಎಸ್ ಅಧಿಕಾರಿಯೊಬ್ಬರ ಭಾವಚಿತ್ರವಿರುವ ಫ್ಲೆಕ್ಸ್ ಫೋಟೋಗಳು ರಾರಾಜಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭರಾಣಿ ಅವರ ಈ ‘ಫ್ಲೆಕ್ಸ್ ಪ್ರೀತಿ’ ಈಗ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದೆ. ನಗರದ ತುಂಬೆಲ್ಲ ಎಸ್ಪಿಯವರದ್ದೇ ಪಟ! ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಂಡ್ಯ ನಗರದ ಪ್ರಮುಖ ವೃತ್ತಗಳು, ಹೆದ್ದಾರಿ ಬದಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಎಸ್ಪಿಯವರಿಗೆ ಹಬ್ಬದ ಶುಭಾಶಯ ಕೋರಿ ಬೃಹತ್ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ವಿಶೇಷವೆಂದರೆ, ಈ ಫ್ಲೆಕ್ಸ್‌ಗಳಲ್ಲಿ ಕೇವಲ ಎಸ್ಪಿಯವರ ಫೋಟೋ ಮಾತ್ರವಲ್ಲದೆ, ಮಂಜುನಾಥ್ ಗೌಡ, ಶಿವಾನಂದ್ ಮತ್ತು ಪಾಪಣ್ಣ ಎಂಬುವವರ ಭಾವಚಿತ್ರಗಳೂ ಕಾಣಿಸಿಕೊಂಡಿವೆ. ಈ ಹಿಂದೆ ಶೋಭರಾಣಿ ಅವರು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲು ಬಂದಾಗಲೂ ಸಹ ಇದೇ ರೀತಿ ನಗರದಾದ್ಯಂತ ಫ್ಲೆಕ್ಸ್ ಹಾಕಿ ಸ್ವಾಗತ ಕೋರಲಾಗಿತ್ತು. ಅಧಿಕಾರಿಗಳಿಗೆ…

Read More

ನವದೆಹಲಿ/ದುಬೈ: ವಿಶ್ವದ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ನಾಡಿಯಂತಿರುವ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಇರಾನ್ ಸೇನೆಯು ಅಘೋಷಿತವಾಗಿ ಬಂದ್ ಮಾಡಿರುವುದನ್ನು ಖಂಡಿಸಿ, ವಿಶ್ವದ 20ಕ್ಕೂ ಹೆಚ್ಚು ಪ್ರಭಾವಿ ದೇಶಗಳು ಒಗ್ಗೂಡಿವೆ. ಈ ಮಹತ್ವದ ಜಲಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಲು ತಾವೂ ಸಿದ್ಧವಿರುವುದಾಗಿ ಈ ರಾಷ್ಟ್ರಗಳು ಘೋಷಿಸಿವೆ. ಜಂಟಿ ಹೇಳಿಕೆಯ ಮುಖ್ಯಾಂಶಗಳು: ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮತ್ತು ಬಹ್ರೇನ್ ಸೇರಿದಂತೆ ಒಟ್ಟು 22 ದೇಶಗಳು ಜಂಟಿ ಪ್ರಕಟಣೆ ಹೊರಡಿಸಿವೆ. ಇರಾನ್‌ನ ಇತ್ತೀಚಿನ ಕ್ರಮಗಳನ್ನು ಅತ್ಯಂತ ಕಠಿಣ ಪದಗಳಲ್ಲಿ ಖಂಡಿಸಿರುವ ಈ ಒಕ್ಕೂಟ, ಪರ್ಷಿಯನ್ ಕೊಲ್ಲಿಯಲ್ಲಿನ ಅಸ್ಥಿರತೆಗೆ ಇರಾನ್ ನೇರ ಹೊಣೆ ಎಂದು ದೂರಿದೆ. ಖಂಡನೆಯ ಪ್ರಮುಖ ಅಂಶಗಳು: ಹಡಗುಗಳ ಮೇಲೆ ದಾಳಿ: ಪರ್ಷಿಯನ್ ಕೊಲ್ಲಿಯಲ್ಲಿ ಶಸ್ತ್ರರಹಿತ ವಾಣಿಜ್ಯ ಹಡಗುಗಳ ಮೇಲೆ ಇರಾನ್ ನಡೆಸುತ್ತಿರುವ ದಾಳಿಗಳನ್ನು ಈ ರಾಷ್ಟ್ರಗಳು ತೀವ್ರವಾಗಿ ಖಂಡಿಸಿವೆ. ಮೂಲಸೌಕರ್ಯಕ್ಕೆ ಧಕ್ಕೆ: ತೈಲ ಮತ್ತು ಅನಿಲ ಘಟಕಗಳು ಸೇರಿದಂತೆ…

Read More

ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಸಾಗರವು ಅನಾದಿಕಾಲದಿಂದಲೂ ಸರ್ವ ಜನಾಂಗದ ಶಾಂತಿಯ ತೋಟ. ಇಲ್ಲಿನ ಪ್ರತಿ ಹಬ್ಬಗಳೂ ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಮನುಷ್ಯತ್ವದ ಬೆಸುಗೆಯಾಗಿ ಬದಲಾಗುತ್ತವೆ. ಇದಕ್ಕೆ ಸಾಕ್ಷಿಯೆಂಬಂತೆ, ಇಂದು ಶನಿವಾರ ಸಾಗರದಲ್ಲಿ ಆಚರಿಸಲಾದ ರಂಜಾನ್ ಹಬ್ಬದ ಸಂಭ್ರಮವು ವಿಶಿಷ್ಟ ಕಳೆಯನ್ನು ಪಡೆದುಕೊಂಡಿತ್ತು. ಸಾಗರ ನಗರಸಭೆ ಮಾಜಿ ಸದಸ್ಯ ಜಾಕಿರ್ ನಿವಾಸಕ್ಕೆ, ಶಾಸಕ ಗೋಪಾಲಕೃಷ್ಣ ಬೇಳೂರು ಭೇಟಿ ನೀಡಿ ಸೌಹಾರ್ದತೆಯ ಕಂಪನ್ನು ಬೆಸೆದರು. ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಸಾಗರ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು, ಸಾಗರದ ಮಾಜಿ ನಗರಸಭಾ ಸದಸ್ಯ ಹಾಗೂ ಅಲ್ಪಸಂಖ್ಯಾತರ ಯುವ ಮುಖಂಡ ಸೈಯದ್ ಜಾಕಿರ್ ಅವರ ನಿವಾಸಕ್ಕೆ ಭೇಟಿ ನೀಡಿ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಭ್ರಾತೃತ್ವದ ಸಿಹಿ ಸವಿದ ಕ್ಷಣ: ಜಾಕಿರ್ ಅವರ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಹಬ್ಬದ ಕೂಟದಲ್ಲಿ ಪಾಲ್ಗೊಂಡ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಅಲ್ಲಿನ ಆತಿಥ್ಯವನ್ನು ಸ್ವೀಕರಿಸಿ ಸಿಹಿಯನ್ನು ಸವಿದರು.…

Read More

ಚಾಮರಾಜನಗರ: ಮಂಡ್ಯ ಜಿಲ್ಲೆಯಲ್ಲಿ ಹಬ್ಬಕ್ಕೆ ಶುಭ ಕೋರುವ ಪ್ಲೆಕ್ಸ್ ಗಳಲ್ಲಿ ಮಂಡ್ಯ ಎಸ್ಪಿ ಶೋಭರಾಣಿ ಮಿಂಚಿದ ಕಾರಣದಿಂದಾಗಿ ವ್ಯಾಪಕ ಚರ್ಚೆಯಾದ ಬಳಿಕ ತೆರೆವು ಕಾರ್ಯ ನಡೆಯಿತು..ಇದೀಗ ಚಾಮರಾಜನಗರದಲ್ಲೂ ಖಾಸಗಿ ಕಾರ್ಯಕ್ರಮ ಆಯೋಜಕರೂ ಕೂಡ ಅಧಿಕಾರಿಗಳ ಪೊಟೊ ಬಳಸಿಕೊಂಡು ಪ್ಲೆಕ್ಸ್ ಹಾಕಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚಾಮರಾಜನಗರ ವಿಶ್ವ ವಿದ್ಯಾನಿಲಯ ಮತ್ತು ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ,ಮೈಸೂರು ಇವರ ಸಂಯುಕ್ತಾಶ್ರಯದಲ್ಲಿ ಕೈವಾರ ಸದ್ಗುರು ಯೋಗಿನಾರಾಯೇಣ ಯೋಗಿಗಳ ಪರಿಚಯ ಮತ್ತು ಅತ್ಯಮೋಧ ಕುರಿತು ವಿಚಾರ ಸಂಕಿರಣದ ಹಾಗೂ “ಯತೀಂದ್ರ ಶ್ರೀ” ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಇದ್ದು ಈ ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳ ಪ್ರಚಾರಕ್ಕೆ ಅಧಿಕಾರಿಗಳ ಪೊಟೊ ಬಳಸಿಕೊಂಡಿಸಿರೊದು ನೋಡಿದರೆ ಅನುಮತಿ ಪಡೆದೆ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಒಟ್ಟಾರೆ ಮಂಡ್ಯ ಇದೀಗ ಚಾಮರಾಜನಗರ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಹರಡೊ ಸಾದ್ಯತೆಗಳೂ ಇದ್ದು ಇತ್ತ ಡಿಸಿಎಮ್ ಅಧಿಕೃತ ಪ್ಲೆಕ್ಸ್ ಬಗ್ಗೆ ಕಿಡಿ ಕಾರಿದ್ದು ಅದಿಕೃತ ಪ್ಲೆಕ್ಸ್ ಅನಧಿಕೃತ ಪ್ಲೆಕ್ಸೊ ಎಂಬುದು ನಗರಸಬಾ…

Read More

ಬೆಂಗಳೂರು: ಜಮೀರ್ ಅಹ್ಮದ್ ಅವರು ದಾವಣಗೆರೆಯಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡಬೇಕು. ಇಲ್ಲವಾದರೆ ರಾಜೀನಾಮೆ ಕೊಡುವ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಕಾಂಗ್ರೆಸ್ ಸೊಪ್ಪು ಹಾಕಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದ್ದಾರೆ. ಇಂದು ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಪ್ರಶ್ನೆಗೆ ಉತ್ತರ ನೀಡಿದರು. ಸುರ್ಜೇವಾಲಾ ಅವರು ಬೇಕಿದ್ರೆ ನೀವು ರಾಜೀನಾಮೆ ಕೊಟ್ಟು ಹೋಗಿ ಎಂದಿದ್ದಾರೆ. ಹಿಂದೆ ಕಾಂಗ್ರೆಸ್ಸಿನಲ್ಲಿ ಮಂಡ್ಯ ಹೊರತುಪಡಿಸಿ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡುತ್ತಿದ್ದರು. ಈಗ ಎಲ್ಲ ಕಡೆಯಲ್ಲಿ ಅವರಿಗೆ ಕಾಂಗ್ರೆಸ್ ಕೊಕ್ ಕೊಡುತ್ತ ಬಂದಿದೆ ಎಂದು ವಿಶ್ಲೇಷಿಸಿದರು. ದಾವಣಗೆರೆಯಲ್ಲಿ ಯಾವಾಗಲೂ ಮುಸ್ಲಿಮರಿಗೆ ಕೊಡುತ್ತಿದ್ದರು. ಹೆಚ್ಚು ಜನಸಂಖ್ಯೆಯೂ ಅವರದ್ದಿದೆ. ಮುಸಲ್ಮಾನರು ನಮ್ಮ ಗುಲಾಮರು; ಅವರಿಗೆ ಟಿಕೆಟ್ ಕೊಡದಿದ್ದರೂ ಬಿಜೆಪಿಯನ್ನು ತೋರಿಸಿದರೆ ಸಾಕು, ಬಾಲ ಮುದುರಿಕೊಂಡು ಬಂದು ನಮಗೆ ಮತ ಕೊಡುತ್ತಾರೆಂಬ ಪ್ರವೃತ್ತಿಯನ್ನು ಕಾಂಗ್ರೆಸ್ ಬೆಳೆಸಿಕೊಂಡಿದೆ ಎಂದು ಟೀಕಿಸಿದರು. ಮುಸಲ್ಮಾನರಲ್ಲೂ ಕೆಲವು ಮುಖಂಡರಿದ್ದಾರೆ. ಅವರು ಕೊನೆಯವರೆಗೆ ಕೇಳಿ ನೋಡುತ್ತಾರೆ. ಆಗಲಿಲ್ಲ…

Read More

ಶಿವಮೊಗ್ಗ: ಜಿಲ್ಲೆಯ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವಸ್ಥಾನದ ಜಾತ್ರಾ ಮಹೋತ್ಸವದ ಸಂಭ್ರಮ ಆರಂಭವಾಗಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರಿಗೆ ಶನಿವಾರ ಅಧಿಕೃತವಾಗಿ ಆಹ್ವಾನ ನೀಡಲಾಯಿತು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಸಾಗರದ ಉಪವಿಭಾಗಾಧಿಕಾರಿ (AC) ವೀರೇಶ್ ಕುಮಾರ್, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಟಿ.ವಿ. ಪಾಂಡುರಂಗ ಹಾಗೂ ಸಮಿತಿಯ ಸದಸ್ಯ ಐವಿ ಹೆಗಡೆ ಅವರು ಶಾಸಕರನ್ನು ಭೇಟಿ ಮಾಡಿ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ಈ ಸಂದರ್ಭದಲ್ಲಿ ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ (EO) ಪ್ರಮೀಳಾ ಕುಮಾರಿ, ಉಪ ತಹಶೀಲ್ದಾರ್ ತೋಯಜಾಕ್ಷಿ ಉಪಸ್ಥಿತರಿದ್ದರು. ಸಾಗರದ ಈ ಗಣಪತಿ ಜಾತ್ರೆಯು ಅತ್ಯಂತ ಪುರಾತನ ಹಾಗೂ ಜನಪ್ರಿಯವಾಗಿದ್ದು, ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜಾತ್ರೆಯ ಯಶಸ್ವಿ ನಿರ್ವಹಣೆ ಮತ್ತು ಅಗತ್ಯ ಸಿದ್ಧತೆಗಳ ಕುರಿತು ಕೂಡ ಇದೇ ವೇಳೆ ಚರ್ಚಿಸಲಾಯಿತು ಎಂದು ತಿಳಿದುಬಂದಿದೆ. ಮಾರ್ಚ್ 22ಕ್ಕೆ ಮಹಾರಥೋತ್ಸವದ…

Read More