Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಭಾರಿ ಪ್ರಮಾಣದ ನಕಲಿ ಸಿಗರೇಟ್ಗಳನ್ನು ಸಾಗಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ನಕಲಿ ಸಿಗರೇಟ್ ಬಾಕ್ಸ್ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು, ಈ ಸಂಬಂಧ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರು ಯಾರು?: ಅಬ್ದುಲ್ ಬಷೀದ್ ಮತ್ತು ಆತನ ಮಗ ಮೊಹಮದ್ ಅಶೀಕ್ ಪ್ರಮುಖ ಆರೋಪಿಗಳಾಗಿದ್ದು, ಇವರೊಂದಿಗೆ ಮಹಮದ್ ಅನ್ಸರ್, ಮಹಮದ್ ಅನ್ಸಾರಿ ಮತ್ತು ಗುಲಾಮ್ ಹುಸೇನ್ ಖಾನ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ವಿವರ: ಆರೋಪಿಗಳು ವಿದೇಶಗಳಿಂದ ಐಟಿಸಿ (ITC) ಮತ್ತು ಎಸ್ಸೆ (Esse) ಕಂಪನಿಗಳ ಹೆಸರಿರುವ ನಕಲಿ ಸಿಗರೇಟ್ಗಳನ್ನು ಬೆಂಗಳೂರಿಗೆ ಅಕ್ರಮವಾಗಿ ತರುತ್ತಿದ್ದರು. ಇಲ್ಲಿ ಅವುಗಳನ್ನು ಅಸಲಿ ಕಂಪನಿಯ ಉತ್ಪನ್ನಗಳೆಂದು ಬಿಂಬಿಸಿ ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ನಕಲಿ ಉತ್ಪನ್ನಗಳ ಬಗ್ಗೆ ನಿಗಾ ವಹಿಸುವ ‘ಅನ್ವೇಷ್ ಐಪಿಆರ್’ (Anvesh IPR) ಸಂಸ್ಥೆಯು ನೀಡಿದ ಖಚಿತ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ವಿಮಾನ ನಿಲ್ದಾಣದಲ್ಲಿ ಈ ನಕಲಿ…
ದಳಪತಿ ವಿಜಯ್ 600 ಕೋಟಿ ಸಾಮ್ರಾಜ್ಯದ ಒಡೆಯ: ಹೀಗಿದೆ ಟಿವಿಕೆ ಮುಖ್ಯಸ್ಥ ಘೋಷಿಸಿದ ಆಸ್ತಿ ವಿವರ ಇಲ್ಲಿದೆ! Actor Vijay
ಚೆನ್ನೈ: ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಮತ್ತು ಈಗ ರಾಜಕೀಯ ನಾಯಕರಾಗಿ ಬದಲಾಗಿರುವ ‘ದಳಪತಿ’ ವಿಜಯ್, ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯ ಅಖಾಡಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯ ಮತ್ತು ಐಷಾರಾಮಿ ಜೀವನಶೈಲಿಯ ಕುರಿತು ಚರ್ಚೆಗಳು ಮುನ್ನೆಲೆಗೆ ಬಂದಿವೆ. ವರದಿಗಳ ಪ್ರಕಾರ, ವಿಜಯ್ ಸುಮಾರು 600 ಕೋಟಿ ರೂಪಾಯಿ ಮೌಲ್ಯದ ಬೃಹತ್ ಸಾಮ್ರಾಜ್ಯವನ್ನು ಹೊಂದಿದ್ದಾರೆ. ವಿಜಯ್ ಅವರ ಆಸ್ತಿಯ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ: 1. ಐಷಾರಾಮಿ ಬಂಗಲೆಗಳು ವಿಜಯ್ ಅವರು ಚೆನ್ನೈನ ನೀಲಂಕರೈನಲ್ಲಿ ಅತ್ಯಂತ ಐಷಾರಾಮಿ ವಿಲ್ಲಾವನ್ನು ಹೊಂದಿದ್ದಾರೆ. ಅಮೆರಿಕದ ಪ್ರಸಿದ್ಧ ‘ಟಾಮ್ ಕ್ರೂಸ್’ ಅವರ ಮನೆಯಿಂದ ಸ್ಫೂರ್ತಿ ಪಡೆದು ಈ ಮನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಚೆನ್ನೈನ ತಿರುವನ್ಮಿಯೂರು ಸೇರಿದಂತೆ ಹಲವು ಕಡೆಗಳಲ್ಲಿ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಗಳನ್ನು ಅವರು ಹೊಂದಿದ್ದಾರೆ. 2. ಕಾರುಗಳ ಸಂಗ್ರಹ (Car Collection) ವಿಜಯ್ ಅವರಿಗೆ ಐಷಾರಾಮಿ ಕಾರುಗಳೆಂದರೆ ಪಂಚಪ್ರಾಣ. ಅವರ ಬಳಿ ಇರುವ ಕೆಲವು ಪ್ರಮುಖ ಕಾರುಗಳೆಂದರೆ:…
ಕಾರವಾರ: ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರ ಆಪ್ತ ಹಾಗೂ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ನಡೆದ ಭೀಕರ ಹತ್ಯೆ ಯತ್ನ ಪ್ರಕರಣ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮಾರ್ಚ್ 25ರಂದು ಅಂಕೋಲಾದಲ್ಲಿ ಹಾಡಹಗಲೇ ನಡೆದ ಈ ದಾಳಿಯ ಮತ್ತೊಂದು ಸಿಸಿಟಿವಿ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದೆ. ಘಟನೆಯ ವಿವರ: ಕಳೆದ ಬುಧವಾರ ಮಧ್ಯಾಹ್ನ ಗೋಪಾಲಕೃಷ್ಣ ನಾಯಕ್ ಅವರು ಅಂಕೋಲಾದಲ್ಲಿ ಇದ್ದಾಗ ದುಷ್ಕರ್ಮಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಆರೋಪಿಗಳು ಅತ್ಯಂತ ಕ್ರೂರವಾಗಿ ನಾಯಕ್ ಅವರ ತಲೆಗೆ ಚಾಕುವಿನಿಂದ ಹಲವು ಬಾರಿ ಚುಚ್ಚಿ ಕೊಲೆಗೆ ಯತ್ನಿಸಿರುವುದು ಸೆರೆಯಾಗಿದೆ. ಹಗಲು ಹೊತ್ತಿನಲ್ಲೇ ನಡೆದ ಈ ಕೃತ್ಯ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಏಳು ಆರೋಪಿಗಳ ಬಂಧನ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ, ದಾಳಿಯಲ್ಲಿ ಭಾಗಿಯಾಗಿದ್ದ ಗೋವಾ…
ಬೀದರ್: ಬಸವಣ್ಣ ನಡೆದಾಡಿದ ನೆಲದಲ್ಲಿ ನಡೆಯುತ್ತಿರುವ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಅರ್ಥಪೂರ್ಣವಾಗಿದೆ ಆಚರಣೆ ಮಾಡುವ ಮೂಲಕ ಇತಿಹಾಸ ಪುಟದಲ್ಲಿ ದಾಖಲೆಯಾಗುವ ಸಮ್ಮೇಳನವನ್ನು ಮಾಡಲು ಸಂಘಟಿತ ಪ್ರಯತ್ನ ನಡೆಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂೃಜೆ)ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಕರೆ ನೀಡಿದರು. ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 40ನೇ ಪತ್ರಕರ್ತರ ರಾಜ್ಯ ಸಮ್ಮೇಳನದ ವಿವಿಧ ಸಮಿತಿಗಳ ಪೂರ್ವ ತಯಾರಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೀದರ್ ಪತ್ರಕರ್ತರ ಕೋರಿಕೆ ಮೇರೆಗೆ ಇಲ್ಲಿಗೆ ಸಮ್ಮೇಳನ ನೀಡಲಾಗಿದೆ. ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು, ವಿಧಾನ ಸಭೆ, ವಿಧಾನ ಪರಿಷತ್ ಸಭಾಪತಿಗಳನ್ನು ಹಾಗೂ ಹಿರಿಯ ಪತ್ರಕರ್ತರು ಸೇರಿದಂತೆ ರಾಜ್ಯ ಮಟ್ಟದ ಎಲ್ಲ ಪತ್ರಿಕೆಗಳ ಸಂಪಾದಕರನ್ನು ಸಮ್ಮೇಳನಕ್ಕೆ ಅಹ್ವಾನಿಸಲಾಗಿದೆ ಎಂದರು. ಎರಡು ದಿನದ ಸಮ್ಮೇಳನದಲ್ಲಿ ಉದ್ಘಾಟನೆ ಮತ್ತು ಸಮಾರೋಪ ಹೊರತುಪಡಿಸಿ, ಇನ್ನುಳಿದಂತೆ ಗೋಷ್ಠಿಗಳು, ಚಿಂತನ-ಮಂಥನ, ಸಂವಾದ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ನಾಡಿನಾದ್ಯಂತೆ ಈಗಾಗಲೇ…
ನವದೆಹಲಿ: ಸಾಲ ಪಡೆಯಲು ಉತ್ತಮ ಕ್ರೆಡಿಟ್ ಸ್ಕೋರ್ (CIBIL Score) ಇರಬೇಕೆಂದು ನಮಗೆಲ್ಲರಿಗೂ ತಿಳಿದಿದೆ. ಆದರೆ, ಅನೇಕ ಬಾರಿ ಸಿಬಿಲ್ ಸ್ಕೋರ್ 750 ಕ್ಕಿಂತ ಹೆಚ್ಚಿದ್ದರೂ ಬ್ಯಾಂಕ್ಗಳು ಸಾಲದ ಅರ್ಜಿಯನ್ನು ತಿರಸ್ಕರಿಸುತ್ತವೆ (Reject). ಇದರಿಂದ ಗ್ರಾಹಕರು ಗೊಂದಲಕ್ಕೊಳಗಾಗುವುದು ಸಹಜ. ಕೇವಲ ಸಿಬಿಲ್ ಸ್ಕೋರ್ ಮಾತ್ರವಲ್ಲದೆ, ಬ್ಯಾಂಕ್ಗಳು ಸಾಲ ನೀಡುವ ಮುನ್ನ ಇನ್ನೂ ಹಲವು ಪ್ರಮುಖ ಮಾನದಂಡಗಳನ್ನು ಪರಿಶೀಲಿಸುತ್ತವೆ. ನಿಮ್ಮ ಲೋನ್ ಅಪ್ಲಿಕೇಶನ್ ರಿಜೆಕ್ಟ್ ಆಗಲು ಈ ಕೆಳಗಿನ ಕಾರಣಗಳಿರಬಹುದು: 1. ಆದಾಯ ಮತ್ತು ಇಎಂಐ ಅನುಪಾತ (FOIR) ಬ್ಯಾಂಕ್ಗಳು ನಿಮ್ಮ ಮಾಸಿಕ ಆದಾಯ ಮತ್ತು ನೀವು ಈಗಾಗಲೇ ಕಟ್ಟುತ್ತಿರುವ ಇಎಂಐಗಳ ಅನುಪಾತವನ್ನು (Fixed Obligation to Income Ratio) ಲೆಕ್ಕ ಹಾಕುತ್ತವೆ. ನಿಯಮ: ನಿಮ್ಮ ಒಟ್ಟು ಆದಾಯದ 50% ಕ್ಕಿಂತ ಹೆಚ್ಚು ಹಣ ಇಎಂಐ ರೂಪದಲ್ಲಿ ಕಡಿತವಾಗುತ್ತಿದ್ದರೆ, ನಿಮ್ಮ ಮರುಪಾವತಿ ಸಾಮರ್ಥ್ಯ ಕಡಿಮೆ ಇದೆ ಎಂದು ಭಾವಿಸಿ ಹೊಸ ಸಾಲ ನೀಡಲು ಬ್ಯಾಂಕ್ಗಳು ಹಿಂದೇಟು ಹಾಕುತ್ತವೆ. 2. ಉದ್ಯೋಗದ ಸ್ಥಿರತೆ (Job…
ಮಂತ್ರಾಲಯಕ್ಕೆ ಹೋಗುವ ಯೋಜನೆಯಾಗಲಿ ಯೋಚನೆಯಾಗಲಿ ನನಗಿರಲಿಲ್ಲ.. ನಿಜ ಹೇಳಬೇಕೆಂದರೆ ಮುಂಚೆ ರಾಘವೇಂದ್ರ ಸ್ವಾಮಿಗಳ ಮೇಲೆ ಅಷ್ಟು ಭಕ್ತಿಯೂ ನನಗಿರಲಿಲ್ಲ.. ಕಾರಣ ನಿಜಕ್ಕೂ ನನಗೆ ಗೊತ್ತಿಲ್ಲ.. ಆದರೆ ಏನೋ ತಿಳಿಯದು ಅಷ್ಟು ಭಕ್ತಿ ಬರುತ್ತಿರಲಿಲ್ಲ.. ಕೆಲ ತಿಂಗಳ ಹಿಂದೆ ಉಡುಗೊರೆಯಾಗಿ ಕೊಟ್ಟ ರಾಘವೇಂದ್ರ ಸ್ವಾಮಿಗಳ ಮೂರ್ತಿಯೊಂದು ಮನೆಗೆ ಬಂತು.. ದೇವರ ಮನೆಯಲ್ಲಿ ಇಟ್ಟು ಪೂಜಿಸಲು ಶುರು ಮಾಡಿದೆ.. ಪೂಜೆ ಮಾಡುವ ಸಮಯದಲ್ಲಿ ಏನಾದರು ನನ್ನಿಂದ ತಪ್ಪಾಗಿದ್ದರೆ ಕ್ಷಮಿಸಪ್ಪ ತಂದೆ ಎಂದು ಭಕ್ತಿಯಿಂದ ಒಮ್ಮೆ ಕೇಳಿಕೊಂಡೆ ಅಷ್ಟೇ ನೋಡಿ.. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ…
ಬೆಂಗಳೂರು: ಸಾಗರಲ್ಲಿ ನಿರ್ಮಿಸಿರುವಂತ ನೂತನ ಮೀನು ಮಾರುಕಟ್ಟೆಯು ಕೊರತೆಯ ಆಗರವಾಗಿತ್ತು. ಹೀಗಾಗಿ ಉದ್ಘಾಟನೆ ಕೂಡ ಕಂಡಿರಲಿಲ್ಲ. ಈ ಮೀನು ಮಾರುಕಟ್ಟೆಯ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ರಾಜ್ಯ ಸರ್ಕಾರವು ಬರೊಬ್ಬರಿ 129.90 ಲಕ್ಷವನ್ನು ಬಿಡುಗಡೆಗೊಳಿಸಿದೆ. ಈ ಕುರಿತಂತೆ ರಾಜ್ಯ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, ಸಾಗರ ಮೀನು ಮಾರುಕಟ್ಟೆಯ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ರೂ.129.90 ಲಕ್ಷವನ್ನು ಪ್ರಸಕ್ತ ಸಾಲಿನ ಪೂರಕ ಅಂದಾಜು-2ರಲ್ಲಿ ಹೆಚ್ಚುವರಿಯಾಗಿ ಒದಗಿಸಲಾದ ರೂ.383 ಲಕ್ಷಗಳಿಂದ ಭರಿಸಲು ಹಾಗೂ ಅನುಷ್ಠಆನ ಸಂಸ್ಥೆಯಾದ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು ಅವರಿಗೆ ಬಿಡುಗಡೆ ಮಾಡಲು ಆರ್ಥಿಕ ಇಲಾಖೆಯು ಸಮಹಮತಿಸಿದೆ ಎಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಾಣ ಮಾಡಲಾಗಿತ್ತು. ಆದರೇ ಸುಸಜ್ಜಿತವಾಗಿ ನಿರ್ಮಾಣವಾಗಬೇಕಿದ್ದ ಮೀನು ಮಾರುಕಟ್ಟೆಯೇ ಅವೈಜ್ಞಾನಿಕತೆಯಿಂದ ಕೂಡಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಸರಿಯಾಗಿ ಗಾಳಿ ಬೆಳಕಿನ ವ್ಯವಸ್ಥೆಯಿಲ್ಲದ ರೀತಿಯಲ್ಲಿ ನಿರ್ಮಾಣವಾಗಿದೆ. ಬಳಕೆಗೂ ಸಾಧ್ಯವಾಗೋದಿಲ್ಲ ಎನ್ನುವುದು ಹಲವರ ಆರೋಪಗಳಾಗಿದ್ದವು. ಈ ಎಲ್ಲಾ ಕಾರಣದಿಂದಾಗಿ ನಿರ್ಮಾಣವಾದರೂ,…
ಕುಟುಂಬದಲ್ಲಿ ಅನಿರೀಕ್ಷಿತವಾಗಿ ಪತಿ ನಿಧನರಾದಾಗ, ಆತನ ಪತ್ನಿ (ಸೊಸೆ) ಎದುರಿಸುವ ದೊಡ್ಡ ಸವಾಲುಗಳಲ್ಲಿ ಆರ್ಥಿಕ ಭದ್ರತೆ ಮತ್ತು ಆಸ್ತಿಯ ಹಕ್ಕು ಕೂಡ ಒಂದು. ಭಾರತೀಯ ಕಾನೂನಿನ ಪ್ರಕಾರ, ಪತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಪತ್ನಿಗೆ ಹಕ್ಕಿರುವುದು ಎಲ್ಲರಿಗೂ ತಿಳಿದಿದೆ. ಆದರೆ, ಪತಿಯ ತಂದೆ-ತಾಯಿಯ (ಅತ್ತೆ-ಮಾವಂದಿರ) ಆಸ್ತಿಯಲ್ಲಿ ಸೊಸೆಗೆ ಹಕ್ಕಿದೆಯೇ? ಈ ಬಗ್ಗೆ ಇರುವ ಗೊಂದಲಗಳನ್ನು ಪರಿಹರಿಸಲು ಹಿಂದೂ ಉತ್ತರಾಧಿಕಾರ ಕಾಯ್ದೆಯಡಿ ಇರುವ ಪ್ರಮುಖ ನಿಯಮಗಳು ಇಲ್ಲಿವೆ: 1. ಅತ್ತೆ-ಮಾವನ ‘ಸ್ವಯಾರ್ಜಿತ’ ಆಸ್ತಿಯಲ್ಲಿ ಸೊಸೆಯ ಹಕ್ಕು ಒಂದು ವೇಳೆ ಅತ್ತೆ ಅಥವಾ ಮಾವ ತಮ್ಮ ಸ್ವಂತ ದುಡಿಮೆಯಿಂದ ಆಸ್ತಿ ಮಾಡಿದ್ದರೆ (Self-acquired property), ಅದರ ಮೇಲೆ ಅವರಿಗೆ ಸಂಪೂರ್ಣ ಅಧಿಕಾರವಿರುತ್ತದೆ. ಕಾನೂನು: ಈ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ನೀಡಬಹುದು. ಪತಿಯ ಮರಣದ ನಂತರವೂ ಸೊಸೆಯು ಈ ಆಸ್ತಿಯಲ್ಲಿ ತನಗೆ ಪಾಲಿದೆ ಎಂದು ಕಾನೂನುಬದ್ಧವಾಗಿ ಹಕ್ಕು ಸಾಧಿಸಲು ಬರುವುದಿಲ್ಲ. ವಿನಾಯಿತಿ: ಅತ್ತೆ ಅಥವಾ ಮಾವ ಯಾವುದೇ ವಿಲ್ (Will) ಮಾಡದೆ ಮೃತಪಟ್ಟರೆ ಮಾತ್ರ, ಅವರ…
ಮಂಡ್ಯ : ಕ್ಷೇತ್ರದಲ್ಲಿ ಒಂದು ವರ್ಷದೊಳಗೆ ಶಾಶ್ವತವಾಗಿ ವಿದ್ಯುತ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು. ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ, ರಾಜೇಗೌಡನದೊಡ್ಡಿ ಗ್ರಾಮಗಳಲ್ಲಿ ಸೋಮವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು. ಇನ್ನೊಂದು ವರ್ಷದಲ್ಲಿ ತಾಲೂಕಿನ ಕೆ.ಹೊನ್ನಲಗೆರೆ, ಕೆ.ಬೆಳ್ಳೂರು, ಕೂಳಗೆರೆ ಹಾಗೂ ತಾಲೂಕಿನಾದ್ಯಂತ ತಲೆದೋರಿರುವ ವಿದ್ಯುತ್, ನೀರಾವರಿ ಸಮಸ್ಯೆಗೆ ಶಾಶ್ವತವಾಗಿ ಮುಕ್ತಿ ನೀಡಲಾಗುವುದು ಎಂದರು. ಈಗಾಗಲೇ ಕೂಳಗೆರೆ ಗ್ರಾಮದಲ್ಲಿ 66 ಕೆವಿ ಸಬ್ ಸ್ಟೇಷನ್ ಹಾಗೂ ಸೋಮನಹಳ್ಳಿ ಬಳಿ 220 ಕೆವಿ ಸಬ್ ಸ್ಟೇಷನ್ ನಿರ್ಮಾಣ ಮಾಡುತ್ತಿದ್ದು, ಇದರ ಜತೆಗೆ ಬನ್ನಹಳ್ಳಿ ಏತ ನೀರಾವರಿ ಯೋಜನೆಯೂ ಅಂತಿಮ ಹಂತಕ್ಕೆ ತಲುಪಿದ್ದು, ಎರಡು ಮೂರು ತಿಂಗಳಲ್ಲಿ ಚಾಲನೆ ನೀಡಲಾಗುವುದು ಇದರಿಂದ 18 ಕೆರೆಗಳಿಗೆ ನೀರು ತುಂಬಿಸುವ ಮೂಲಕ ಅಂತರ್ಜಲ ವೃದ್ಧಿಗೆ, ಕುಡಿಯುವ ನೀರು ಹಾಗೂ ಕೃಷಿಗೂ ನೀರಿನ ಸಮಸ್ಯೆ ಉಂಟಾಗುವುದಿಲ್ಲ ಎಂದರು. ಬೇಸಿಗೆಯಲ್ಲಿ ವಿದ್ಯುತ್, ಕುಡಿಯುವ ನೀರು ಸಮಸ್ಯೆಯಾಗದಂತೆ ಈಗಾಗಲೇ ತಾಲೂಕು…
ಬೆಂಗಳೂರು: ಮೈಸೂರು ರಸ್ತೆಯ ಜವಳಿ ವಿನ್ಯಾಸ ಮುದ್ರಣ ಕಾರ್ಖಾನೆಯಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭಾರಿ ಕೈಗಾರಿಕಾ ಅಗ್ನಿ ಅವಘಡದಲ್ಲಿ ತೀವ್ರ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಗೆ ತಲುಪಿದ್ದ ಐವರು ಕಾರ್ಮಿಕರಿಗೆ ಸ್ಪರ್ಶ್ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ನೀಡುವ ಮೂಲಕ ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಹಿರಿಯ ಸಮಾಲೋಚಕರಾದ ಡಾ.ಗುಣಶೇಖರ್ ವುಪ್ಪಲಪತಿ, ಬೆಂಕಿ ಅವಘಡದಿಂದ ಮುಖ, ಕೈಗಳು ಮತ್ತು ಬೆನ್ನಿನ ಮೇಲೆ ಸುಟ್ಟಗಾಯಗಳಾಗಿದ್ದವು. ಒಬ್ಬ ಗಾಯಾಳು ಉಸಿರಾಟದ ಕೊಳವೆಯಲ್ಲಿ (ಶ್ವಾಸನಾಳ) ಹೊಗೆ ತುಂಬಿ ಬದುಕುವುದೇ ಕಷ್ಟ ಎಂಬ ಪರಿಸ್ಥಿತಿ ಇತ್ತು. ಗಾಯಾಳುಗಳು ಸ್ಪರ್ಶ್ ಆಸ್ಪತ್ರೆಗೆ ವರ್ಗಾವಣೆಯಾಗುತ್ತಿದ್ದಂತೆ ಸಾಮೂಹಿಕ ಅಪಘಾತ ಮತ್ತು ಸುಟ್ಟ ಗಾಯಗಳ ನಿರ್ವಹಣೆಯ ತಂಡವು ತಕ್ಷಣ ಸಕ್ರಿಯಗೊಂಡು ಕಾರ್ಯಪ್ರವೃತ್ತವಾಯಿತು. ವಿಶೇಷವಾಗಿ ಮೀಸಲಾದ ICU ಹಾಸಿಗೆಗಳನ್ನು ಸಜ್ಜುಗೊಳಿಸಿತು ಮತ್ತು ಕೆಲವೇ ನಿಮಿಷಗಳಲ್ಲಿ ಬಹುಶಿಸ್ತೀಯ ತಜ್ಞರ ತುರ್ತು ತಂಡವನ್ನು ಒಟ್ಟುಗೂಡಿಸಿತು.ಇದು ತೀವ್ರವಾದ ಸುಟ್ಟಗಾಯಗಳನ್ನು ನಿರ್ವಹಿಸಲು ನಿರ್ಣಾಯಕವಾಯಿತು. ಗಾಯದ ತೀವ್ರತೆ ಮತ್ತು ಮುಂದಿನ ಹಂತಗಳ ಕುರಿತು ಕುಟುಂಬಗಳಿಗೆ ಮಾಹಿತಿ ನೀಡುವುದರೊಂದಿಗೆ ಗಾಯಾಳುಗಳನ್ನು…














