Author: kannadanewsnow09

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ಮಿಲಿಟರಿ ಕಾರ್ಯಾಚರಣೆಯು ನಿರೀಕ್ಷೆಗಿಂತಲೂ ವೇಗವಾಗಿ ಗುರಿ ತಲುಪುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಫಾಕ್ಸ್ ನ್ಯೂಸ್ ಮತ್ತು ಸಿಎನ್‌ಬಿಸಿ ಸುದ್ದಿ ಸಂಸ್ಥೆಗಳಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಹತ್ವದ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಒಂದೇ ಏಟಿಗೆ 48 ನಾಯಕರ ಅಂತ್ಯ: ಇರಾನ್ ನಾಯಕತ್ವದ ಮೇಲೆ ಈ ಕಾರ್ಯಾಚರಣೆಯು ಭೀಕರ ಪ್ರಹಾರ ಮಾಡಿದೆ ಎಂದು ಹೇಳಿರುವ ಟ್ರಂಪ್, “ಒಂದೇ ಹೊಡೆತಕ್ಕೆ ಇರಾನ್‌ನ 48 ಪ್ರಮುಖ ನಾಯಕರು ಬಲಿಯಾಗಿದ್ದಾರೆ” ಎಂದು ಪ್ರತಿಪಾದಿಸಿದ್ದಾರೆ. ಇನ್ನು ಎಷ್ಟು ಗುರಿಗಳು ಬಾಕಿ ಇವೆ ಎಂಬುದು ವಾಷಿಂಗ್ಟನ್‌ಗೆ ತಿಳಿದಿದೆ ಎಂದು ಅವರು ಸುಳಿವು ನೀಡಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಡಜನ್ಗಟ್ಟಲೆ ಹಿರಿಯ ಕಮಾಂಡರ್‌ಗಳು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಪೆಂಟಗನ್ ಮತ್ತು ಇಸ್ರೇಲ್ ರಕ್ಷಣಾ ಪಡೆಗಳು (IDF) ಮೌಲ್ಯಮಾಪನ ಮಾಡುತ್ತಿರುವ ಬೆನ್ನಲ್ಲೇ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ. ನಿರೀಕ್ಷೆಗಿಂತ ವೇಗವಾಗಿ ಕಾರ್ಯಾಚರಣೆ:…

Read More

ಶಿವಮೊಗ್ಗ: ಸಾಮಾನ್ಯವಾಗಿ ಪೊಲೀಸ್ ಎಂದರೆ ಸಾಮಾನ್ಯ ಜನರಿಗೆ ಒಂದು ರೀತಿಯ ಭಯ, ಆತಂಕ. ಪೊಲೀಸರ ಬಳಿ ಹೋಗುವುದು ಎಂದರೆ ಏನೋ ದೊಡ್ಡ ಸಮಸ್ಯೆ ಎನ್ನುವ ಭಾವನೆ ಹಳ್ಳಿ ಜನರಲ್ಲಿ ಮನೆ ಮಾಡಿರುತ್ತದೆ. ಆದರೆ, ಈ ಕಲ್ಪನೆಯನ್ನು ಸುಳ್ಳು ಮಾಡಿ, ಪೊಲೀಸರೇ ಜನರ ಮನೆಬಾಗಿಲಿಗೆ ಬಂದು, ಅವರೊಂದಿಗೆ ಬೆರೆತು, ಅವರ ಸಮಸ್ಯೆಗಳನ್ನು ಆಲಿಸಿದ ಅಪರೂಪದ ಘಟನೆಗೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಾಕ್ಷಿಯಾಗಿದೆ. ಆ ಮೂಲಕ ಗ್ರಾಮ ವಾಸ್ತವ್ಯ ಮಾಡಿ, ಪಿಎಸ್ಐ ಪ್ರವೀಣ್ ಎಲ್ಲರಿಗೂ ಮಾದರಿಯಾಗುವಂತ ನಡೆಯನ್ನು ತೋರಿದ್ದಾರೆ. ಹೌದು.. ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಈ ‘ಗ್ರಾಮವಾಸ್ತವ್ಯ’ ಕಾರ್ಯಕ್ರಮವು ಕೇವಲ ಒಂದು ಸರ್ಕಾರಿ ಕಾರ್ಯಕ್ರಮವಾಗಿ ಉಳಿಯಲಿಲ್ಲ. ಪೊಲೀಸ್ ಮತ್ತು ಸಾರ್ವಜನಿಕರ ನಡುವಿನ ಅಂತರವನ್ನು ಕುಗ್ಗಿಸುವಲ್ಲಿ ಒಂದು ಮೈಲಿಗಲ್ಲಾಗಿ ಪರಿಣಮಿಸಿ, ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿ ಸಾಕ್ಷೀಕರಿಸಿತು. ಗ್ರಾಮವಾಸ್ತವ್ಯದ ಹಿನ್ನೆಲೆ ಮತ್ತು ಉದ್ದೇಶ ಗ್ರಾಮೀಣ ಭಾಗದಲ್ಲಿ ಇಂದಿಗೂ ಹಲವು ಕುಟುಂಬಗಳ ನಡುವೆ ಹಳೆಯ ವೈಷಮ್ಯಗಳಿರುತ್ತವೆ. ಗಡಿ ವಿವಾದ, ಸಣ್ಣಪುಟ್ಟ ಜಗಳಗಳು ಅಥವಾ ಗ್ರಾಮಗಳಲ್ಲಿ…

Read More

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಮಾಜಿ ಅಧ್ಯಕ್ಷ ಮಹಮೂದ್ ಅಹಮದಿನೆಜಾದ್ (69) ಅವರು ತಮ್ಮ ಅಂಗರಕ್ಷಕನೊಂದಿಗೆ ಹತರಾಗಿದ್ದಾರೆ ಎಂದು ಇರಾನ್‌ನ ‘ಐಎಲ್‌ಎನ್‌ಎ’ (ILNA) ಸುದ್ದಿ ಸಂಸ್ಥೆ ಭಾನುವಾರ ವರದಿ ಮಾಡಿದೆ. ಟೆಹ್ರಾನ್‌ನಲ್ಲಿರುವ ಅಹಮದಿನೆಜಾದ್ ಅವರ ನಿವಾಸದ ಮೇಲೆ ನಡೆದ ಈ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದರೂ, ಇರಾನ್ ಸರ್ಕಾರದಿಂದ ಈ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಬಾಕಿ ಇದೆ. ವಿವಾದಿತ ಮತ್ತು ಫೈರ್‌ಬ್ರ್ಯಾಂಡ್ ನಾಯಕ 005 ರಿಂದ 2013 ರವರೆಗೆ ಸತತ ಎಂಟು ವರ್ಷಗಳ ಕಾಲ ಇರಾನ್ ಅಧ್ಯಕ್ಷರಾಗಿದ್ದ ಅಹಮದಿನೆಜಾದ್, ಆರಂಭದಲ್ಲಿ ಅಲ್ಲಿನ ಶಿಯಾ ಧರ್ಮಗುರುಗಳು ಹಾಗೂ ಸಂಪ್ರದಾಯವಾದಿಗಳ ನೆಚ್ಚಿನ ನಾಯಕರಾಗಿದ್ದರು. ಇಸ್ರೇಲ್ ವಿರುದ್ಧದ ಅವರ ಕಟು ಟೀಕೆಗಳು ಮತ್ತು ಪ್ರಖರ ಭಾಷಣಗಳಿಂದಾಗಿ ಅವರು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದರು. ಅಹಮದಿನೆಜಾದ್ ಆಡಳಿತ ಮತ್ತು ಹಿನ್ನಡೆ: ಪರಮಾಣು ನೀತಿ: ಅವರ ಅಧಿಕಾರಾವಧಿಯಲ್ಲಿ ಅನುಸರಿಸಿದ ಕಟ್ಟುನಿಟ್ಟಾದ…

Read More

ಟೆಹ್ರಾನ್: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಭೀಕರ ಜಂಟಿ ಕಾರ್ಯಾಚರಣೆ ಆರಂಭಿಸಿದ್ದು, ಯುದ್ಧದ ತೀವ್ರತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕೇವಲ 12 ಗಂಟೆಗಳ ಅಂತರದಲ್ಲಿ ಸುಮಾರು 900ಕ್ಕೂ ಅಧಿಕ ಬಾರಿ ದಾಳಿ ನಡೆಸುವ ಮೂಲಕ ಇರಾನ್‌ನ ಸೇನಾ ನೆಲೆಗಳನ್ನು ಅಕ್ಷರಶಃ ಧ್ವಂಸಗೊಳಿಸಲಾಗಿದೆ. ವಾಯು ರಕ್ಷಣಾ ವ್ಯವಸ್ಥೆ ಉಡೀಸ್: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸಿದ ಈ ನಿರಂತರ ದಾಳಿಯಿಂದಾಗಿ ರಾಜಧಾನಿ ಟೆಹ್ರಾನ್ ಮೇಲಿದ್ದ ಇರಾನ್‌ನ ಸಮಗ್ರ ‘ವಾಯು ರಕ್ಷಣಾ ವ್ಯವಸ್ಥೆ’ (Air Defence Network) ಬಹುತೇಕ ನಿಷ್ಕ್ರಿಯಗೊಂಡಿದೆ. ರಕ್ಷಣಾ ಕವಚವೇ ನಾಶವಾಗಿರುವುದರಿಂದ, ರಾಜಧಾನಿಯಾದ್ಯಂತ ಇರುವ ಪ್ರಮುಖ ಸೇನಾ ನೆಲೆಗಳು ಹಾಗೂ ಉನ್ನತ ನಾಯಕರ ಅಡಗುತಾಣಗಳ ಮೇಲೆ ಸತತವಾಗಿ ದಾಳಿಗಳನ್ನು ಮುಂದುವರಿಸಲು ಅಮೆರಿಕ ಹಾಗೂ ಇಸ್ರೇಲ್ ಪಡೆಗಳಿಗೆ ದಾರಿ ಸುಗಮವಾಗಿದೆ. ದಾಳಿಯ ಮುಖ್ಯಾಂಶಗಳು: ಅಮೆರಿಕದ ಅಬ್ಬರ: ಕಾರ್ಯಾಚರಣೆ ಆರಂಭವಾದ ಮೊದಲ 12 ಗಂಟೆಗಳಲ್ಲಿಯೇ ಅಮೆರಿಕವು ಇರಾನ್ ಮೇಲೆ ಸುಮಾರು 900 ಬಾರಿ ದಾಳಿ ನಡೆಸಿದೆ. ಇಸ್ರೇಲ್ ಪ್ರಹಾರ: ಮತ್ತೊಂದೆಡೆ, ಇಸ್ರೇಲ್ ಪಡೆಗಳು…

Read More

ಮಿನಾಬ್: ನಿನ್ನೆ ಇರಾನ್‌ನ ಮಿನಾಬ್‌ನಲ್ಲಿರುವ ಬಾಲಕಿಯರ ಶಾಲೆಯೊಂದರ ಮೇಲೆ ನಡೆದ ದಾಳಿಯಲ್ಲಿ ಬರೋಬ್ಬರಿ 153 ಮಂದಿ ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ನ್ಯಾಯಾಂಗ ವಿಭಾಗಕ್ಕೆ ಸಂಯೋಜಿತವಾಗಿರುವ ‘ಮಿಜಾನ್ ನ್ಯೂಸ್ ಏಜೆನ್ಸಿ’ (Mizan News Agency) ವರದಿ ಮಾಡಿದೆ. ಸೇನಾ ನೆಲೆಯ ಸಮೀಪವೇ ದಾಳಿ: ಈ ಶಾಲೆಯು ಇರಾನ್‌ನ ಪ್ರಬಲ ‘ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್’ (IRGC) ನೆಲೆಯಿಂದ ಕೇವಲ 600 ಮೀಟರ್ (1,968 ಅಡಿ) ದೂರದಲ್ಲಿದೆ. ಈ ಶಾಲೆಯನ್ನು ಗುರಿಯಾಗಿಸಿಕೊಂಡು “ಮೂರು ಕ್ಷಿಪಣಿ ದಾಳಿಗಳನ್ನು” ನಡೆಸಲಾಗಿದೆ ಎಂದು ಮತ್ತೊಬ್ಬ ಇರಾನ್ ಅಧಿಕಾರಿ ಈ ಹಿಂದೆ ಮಾಹಿತಿ ನೀಡಿದ್ದರು. ದಾಳಿಯ ಭೀಕರ ದೃಶ್ಯಗಳು: ದಾಳಿಯ ನಂತರದ ಕೆಲವು ವಿಡಿಯೋ ತುಣುಕುಗಳನ್ನು ಬಿಬಿಸಿ (BBC) ಪರಿಶೀಲಿಸಿ ಖಚಿತಪಡಿಸಿದೆ. ವಿಡಿಯೋಗಳಲ್ಲಿ ಶಾಲಾ ಕಟ್ಟಡದಿಂದ ದಟ್ಟ ಹೊಗೆ ಮೇಲೇಳುತ್ತಿರುವುದು, ಸುತ್ತಮುತ್ತ ಅಪಾರ ಜನಸಂದಣಿ ಸೇರಿರುವುದು ಮತ್ತು ಆತಂಕಗೊಂಡ ಜನರು ಭಯದಿಂದ ಕಿರುಚುತ್ತಿರುವ ದೃಶ್ಯಗಳು ಸೆರೆಯಾಗಿವೆ. ಸ್ವತಂತ್ರ ಪರಿಶೀಲನೆಗೆ ಅಡ್ಡಿ: ಮೃತಪಟ್ಟವರ ನಿಖರ ಸಂಖ್ಯೆಯ ಬಗ್ಗೆ ಸ್ವತಂತ್ರವಾಗಿ ಪರಿಶೀಲನೆ ನಡೆಸಲು…

Read More

ಬೆಂಗಳೂರು ಗ್ರಾಮಾಂತರ: ವಿದ್ಯಾದೇಗುಲವಾದ ಶಾಲೆಯಲ್ಲಿಯೇ ರಕ್ಷಕನಾಗಬೇಕಿದ್ದವನು ಭಕ್ಷಕನಾದ ಬೆಚ್ಚಿಬೀಳಿಸುವ ಘಟನೆಯೊಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಖಾಸಗಿ ವಸತಿ ಶಾಲೆಯೊಂದರ (Residential School) ಮಾಲೀಕನೇ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಜೈಲುಪಾಲಾಗಿದ್ದಾನೆ. ಗಂಡನ ಈ ಕೀಚಕ ಕೃತ್ಯಕ್ಕೆ ಸಾಥ್ ನೀಡಿ, ಅದನ್ನು ಮುಚ್ಚಿಹಾಕಲು ಯತ್ನಿಸಿದ ಆತನ ಪತ್ನಿಯನ್ನೂ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ವಸತಿ ಶಾಲೆಯ ಮಾಲೀಕ ಧನಂಜಯ್ ಹಾಗೂ ಆತನ ಪತ್ನಿ ಶೈಲಜಾ ಬಂಧಿತ ಆರೋಪಿಗಳು. ಪರೀಕ್ಷೆ ನೆಪದಲ್ಲಿ ಕೂಡಿಹಾಕಿ ಕಿರುಕುಳ: ಆರೋಪಿ ಧನಂಜಯ್ ಶಾಲೆಯ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದನು. ಗಂಡನ ಈ ನೀಚ ಕೃತ್ಯವನ್ನು ಮುಚ್ಚಿಹಾಕಲು ಪತ್ನಿ ಶೈಲಜಾ ಕೂಡ ಸಾಥ್ ನೀಡಿದ್ದಳು. ಪರೀಕ್ಷೆಯ ನೆಪವೊಡ್ಡಿ ಸತತ 15 ದಿನಗಳ ಕಾಲ ಮಕ್ಕಳನ್ನು ಪೋಷಕರನ್ನು ಭೇಟಿಯಾಗಲು ಬಿಡದೆ, ಫೋನ್‌ನಲ್ಲಿ ಮಾತನಾಡಲೂ ಅವಕಾಶ ನೀಡದೆ ವಸತಿ ಶಾಲೆಯಲ್ಲೇ ಕೂಡಿಹಾಕಲಾಗಿತ್ತು. ಅಲ್ಲದೆ, ದೌರ್ಜನ್ಯಕ್ಕೊಳಗಾದ ಬಾಲಕಿಗೆ ನಿತ್ಯವೂ ಪರಂಗಿ ಹಣ್ಣನ್ನು (ಪಪ್ಪಾಯಿ)…

Read More

ಬೆಂಗಳೂರು: ಬದಲಾದ ಜೀವನಶೈಲಿ, ಕೆಲಸದ ಒತ್ತಡ ಹಾಗೂ ತಡವಾದ ವಿವಾಹದಿಂದಾಗಿ ಇತ್ತೀಚಿನ ದಿನಗಳಲ್ಲಿ ‘ಬಂಜೆತನ’ (Infertility) ಎಂಬುದು ಅನೇಕ ದಂಪತಿಗಳನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಯಾಗಿದೆ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅದ್ಭುತ ಬೆಳವಣಿಗೆಗಳು ಬಂಜೆತನವನ್ನು ನಿವಾರಿಸಿ, ಮಕ್ಕಳಿಲ್ಲದ ದಂಪತಿಯ ಮಡಿಲಿಗೆ ಸಂತಾನ ಭಾಗ್ಯ ಕರುಣಿಸುವಲ್ಲಿ ಯಶಸ್ವಿಯಾಗುತ್ತಿವೆ. ಬಂಜೆತನಕ್ಕೆ ಕಾರಣಗಳೇನು? ಬಂಜೆತನಕ್ಕೆ ಕೇವಲ ಮಹಿಳೆಯರಷ್ಟೇ ಅಲ್ಲ, ಪುರುಷರ ಸಮಸ್ಯೆಗಳೂ ಕಾರಣವಾಗಿರಬಹುದು. ಮಾನಸಿಕ ಒತ್ತಡ, ಪೌಷ್ಟಿಕಾಂಶದ ಕೊರತೆ, ಬೊಜ್ಜು, ಹಾರ್ಮೋನ್ ವ್ಯತ್ಯಾಸ (ಉದಾ: PCOD/PCOS), ಮಧುಮೇಹ ಮತ್ತು ಧೂಮಪಾನ-ಮದ್ಯಪಾನದಂತಹ ದುಶ್ಚಟಗಳು ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಭರವಸೆ ಮೂಡಿಸಿರುವ ಆಧುನಿಕ ಚಿಕಿತ್ಸೆಗಳು: ಹಿಂದೆ ಬಂಜೆತನ ಎಂದರೆ ಅದೊಂದು ಶಾಪ ಹಾಗೂ ಪರಿಹರಿಸಲಾಗದ ಸಮಸ್ಯೆ ಎಂಬ ಮೌಢ್ಯವಿತ್ತು. ಆದರೆ ಇಂದು ಹಲವು ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು ಲಭ್ಯವಿವೆ: ಐವಿಎಫ್ (IVF): ಇನ್ ವಿಟ್ರೋ ಫರ್ಟಿಲೈಸೇಶನ್ ಅಥವಾ ಟೆಸ್ಟ್ ಟ್ಯೂಬ್ ಬೇಬಿ ವಿಧಾನವು ಲಕ್ಷಾಂತರ ದಂಪತಿಗೆ ವರದಾನವಾಗಿದೆ. ಐಯುಐ…

Read More

ದಾವಣಗೆರೆ : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ದುಬೈನಲ್ಲಿ ಸಿಲುಕಿರುವ 50 ಭಾರತೀಯ ಪ್ರವಾಸಿಗರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಪ್ರವಾಸಿಗರ ತಂಡವು 23-02-2026 ರಂದು ಬೆಂಗಳೂರಿನಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರವಾಸಕ್ಕೆ ತೆರಳಿದ್ದರು. ಒಟ್ಟು 50 ಮಂದಿ ಪ್ರವಾಸಿಗರಲ್ಲಿ 15 ಮಂದಿ ಜಗಳೂರು ತಾಲ್ಲೂಕಿನವರಾಗಿದ್ದು, ಉಳಿದ 35 ಮಂದಿ ನೆರೆಯ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳವರಾಗಿದ್ದಾರೆ. ಇವರ ವಾಪಸಿ ವಿಮಾನವು 28-02-2026 ರಂದು ರಾತ್ರಿ 9:30ಕ್ಕೆ ನಿಗದಿಯಾಗಿದ್ದರೂ, ಅಂತಿಮ ಕ್ಷಣದಲ್ಲಿ ವಿಮಾನ ರದ್ದುಗೊಂಡಿರುವುದರಿಂದ ಪ್ರವಾಸಿಗರು ದುಬೈನಲ್ಲಿ ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಉಂಟಾದ ಯುದ್ಧ ಪರಿಸ್ಥಿತಿ ಕಾರಣದಿಂದ ವಿಮಾನ ಸೇವೆಗಳು ವ್ಯತ್ಯಯಗೊಂಡಿರುವುದು ತಿಳಿದುಬಂದಿದೆ. ಪ್ರವಾಸಿಗರ ಸುರಕ್ಷತೆ ಹಾಗೂ ಶೀಘ್ರ ವಾಪಸಿಗಾಗಿ ಭಾರತ ಸರ್ಕಾರ ತುರ್ತು ಹಸ್ತಕ್ಷೇಪ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಹಾಗೂ ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿ…

Read More

ಟೆಲ್ ಅವಿವ್ / ದುಬೈ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ದಟ್ಟವಾಗಿದ್ದು, ಇರಾನ್ ನಡೆಸಿದ ಭೀಕರ ಕ್ಷಿಪಣಿ ದಾಳಿಗೆ ಇಸ್ರೇಲ್ ತತ್ತರಿಸಿದೆ. ಇರಾನ್ ಏಕಾಏಕಿ ಬೆಂಕಿ ಮಳೆಗರೆದ ಪರಿಣಾಮ ಇಸ್ರೇಲ್‌ನಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ, ಯುಎಇಯ ಪ್ರಮುಖ ನಗರಗಳಾದ ದುಬೈ ಮತ್ತು ಅಬುಧಾಬಿಯಲ್ಲಿಯೂ ಹೊಸದಾಗಿ ಸರಣಿ ಸ್ಫೋಟದ ಸದ್ದು ಕೇಳಿಬಂದಿದ್ದು, ಇಡೀ ಮಧ್ಯಪ್ರಾಚ್ಯದಲ್ಲಿ (Middle East) ತೀವ್ರ ಆತಂಕ ಸೃಷ್ಟಿಸಿದೆ. ಇಸ್ರೇಲ್‌ನಲ್ಲಿ ಹೈ ಅಲರ್ಟ್: ವರದಿಗಳ ಪ್ರಕಾರ, ಇರಾನ್ ಸೇನೆಯು ಇಸ್ರೇಲ್‌ನ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಏಕಕಾಲದಲ್ಲಿ ಭಾರೀ ಪ್ರಮಾಣದ ಕ್ಷಿಪಣಿಗಳು ಹಾಗೂ ಡ್ರೋನ್‌ಗಳನ್ನು ಉಡಾವಣೆ ಮಾಡಿದೆ. ಈ ಅನಿರೀಕ್ಷಿತ ದಾಳಿಯಲ್ಲಿ ಇಸ್ರೇಲ್‌ನ ಹಲವು ಕಟ್ಟಡಗಳು ಹಾನಿಗೀಡಾಗಿದ್ದು, ಎಂಟು ಜನ ಪ್ರಾಣ ಕಳೆದುಕೊಂಡಿದ್ದಾರೆ. ಹಲವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿಯ ತೀವ್ರತೆ ಹೆಚ್ಚಿರುವ ಕಾರಣ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ದಾಳಿಯ ಬೆನ್ನಲ್ಲೇ ಇಸ್ರೇಲ್ ಸರ್ಕಾರವು ದೇಶಾದ್ಯಂತ ‘ಹೈ ಅಲರ್ಟ್’ ಘೋಷಿಸಿದ್ದು, ಜನರಿಗೆ ಸುರಕ್ಷಿತ ಬಂಕರ್‌ಗಳಿಗೆ…

Read More

ಧನುಸ್ಸು ರಾಶಿಯವರಿಗೆ ಈ ಒಂದು ತಾಂತ್ರಿಕ ಅನುಷ್ಠಾನ ಮಾಡಿ ನೋಡಿ ಅದೃಷ್ಟದ ಬದಲಾವಣೆಯಾಗುತ್ತದೆ.. ಮೂಲ ನಕ್ಷತ್ರದವರಿಗೆ ಯೆ,ಯೊ,ಬ,ಬಿ ಇವರಿಗೆ ನೀಮ್ಮಗೆ ಎಷ್ಟೇ ಸಮಸ್ಯೆಗಳು ಇದರು ಬಗ್ಗೆ ಆರಿಯುತ್ತದೆ. ಇದು ಹರಿ ವಾಕ್ ಸತ್ಯ ನೀವು ತಾಮ್ರದ ರ್ಸಪಗಳನು ತೆಗೆದುಕೊಂಡು ಪ್ರತಿ ಮಂಗಳವಾರ ಒಂದು ಶುಕ್ರವಾರ ಒಂದು ಹೀಗೆ 5 ಮಂಗಳವಾರ 5 ಶುಕ್ರವಾರ ಒಂದು ಕೆಂಪು ವಸ್ತ್ರದಲ್ಲಿ ಪೂಜೆ ಮಾಡಿ ಗಂಟು ಕಟ್ಟಿ ಇಡಿ5 ಮಂಗಳವಾರ 5 ಶುಕ್ರವಾರವಾದ ಮೇಲೆ ಯಾವುದಾದರೂ ಪುಣೆಯ ಕ್ಷೇತ್ರ ಶಿವನ ದೇವಾಲಯವೆ ಆಗಬೇಕು ಅಲ್ಲಿ ಹುಂಡಿಗೆ ಹಾಕಿ ಇಲ್ಲವೆಂದರೆ ಎಲ್ಲಾದರೂ ಹೋಮ ಮಾಡುತ್ತಿದರೆ ಹೋಮಕ್ಕೆ ಹಾಕಿ ಮನೆಗೆ ಬಂದು ಬಿಡಿ ನಂತರ ನೋಡಿ ಬದಲಾವಣೆ ನಂತರ ನನಗೆ ತಿಳಿಸಿ. ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು…

Read More