Author: kannadanewsnow09

ಶಿವಮೊಗ್ಗ: ಜೀವನವೆಂಬುದು ಎಲ್ಲರಿಗೂ ಹೂವಿನ ಹಾಸಿಗೆಯಲ್ಲ. ಕೆಲವರಿಗೆ ಅದು ಸುಡುವ ಕೆಂಡದ ಹಾದಿ. ಆ ಕೆಂಡದ ಮೇಲೆ ನಡೆದು, ಸವಾಲುಗಳನ್ನು ಎದುರಿಸಿ, ಸುಗಂಧ ಬೀರುವ ಹೂವಾಗಿ ಅರಳಿದವರು ವಿ. ಶಂಕರ್ (ಮಾಸ್ಟರ್ ಶಂಕರ್). ಸಾಗರದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ವಲಯದಲ್ಲಿ ಚಿರಪರಿಚಿತ ಹೆಸರಾಗಿರುವ ಇವರ ಜೀವನಗಾಥೆ “ಬೆಂಕಿಯಲ್ಲಿ ಅರಳಿದ ಹೂವಿನಂತೆ”. ಅತ್ಯಂತ ಬಡತನ ಮತ್ತು ಕಷ್ಟಗಳ ಕಾರ್ಮೋಡವನ್ನು ಸೀಳಿ ಇಂದು ಯಶಸ್ಸಿನ ಸೂರ್ಯನಾಗಿ ಕಂಗೊಳಿಸುತ್ತಿದ್ದಾರೆ. ಇಂದು ಸಾಗರದ ಮಾರಿಕಾಂಬಾ ದೇವಿಯ ಸಮಿತಿಯ ನೂತನ ಖಜಾಂಚಿಯಾಗಿ ವಿ.ಶಂಕರ್ ಅಧಿಕಾರದ ಗದ್ದುಗೆಗೆ ಏರಿದ್ದಾರೆ. ಅವರ ಜೀವನದ ಯಶೋಗಾದೆ ಮುಂದೆ ಓದಿ. ಮ ​ಸಾಧನೆಯ ಹಾದಿಗೆ ಪ್ರೇರಣೆಯಾದ ‘ಗುರು ಪರಂಪರೆ’ ​ಶಂಕರ್ ಅವರ ಇಂದಿನ ಯಶಸ್ಸಿನ ಹಿಂದೆ ದೊಡ್ಡ ಆದರ್ಶಗಳ ಶಕ್ತಿಯಿದೆ. ವ್ಯಕ್ತಿಯೊಬ್ಬನ ವ್ಯಕ್ತಿತ್ವ ರೂಪಿತವಾಗುವುದು ಅವನ ಸುತ್ತಲಿರುವ ಗುರುಹಿರಿಯರಿಂದ ಎಂಬುದಕ್ಕೆ ಇವರೇ ಸಾಕ್ಷಿ. ​ತನ್ನ ಬದುಕಿಗೆ ಭದ್ರ ಬುನಾದಿ ಹಾಕಿಕೊಟ್ಟ ತಂದೆ ವೆಂಕಟರಮಣ ಪುತ್ತೂ ಮೇಸ್ತ, ​ಸಂಗೀತದ ಸುಧೆ ಉಣಬಡಿಸಿದ ಗುರುಗಳಾದ ಅನೌನ್ಸರ್…

Read More

ಶಿವಮೊಗ್ಗ: ಜಿಲ್ಲೆಯ ಸಾಗರದ ಪ್ರತಿಷ್ಠಿತ ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಇಂದು ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಹಿರಿಯರ ಸ್ಮರಣೆ ಸಾಗರದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಂಪರೆಯನ್ನು ಬೆಳೆಸಿದ ಮಹನೀಯರಾದ ಕುಲ್ಮೆ ಪಾಪಣ್ಣ, ಗಾಡಿ ಮರಿಯಪ್ಪ, ಬಿ.ಎಸ್. ಚಂದ್ರಶೇಖರ್, ಕೆ.ಎಂ. (ಕುರಿ) ನಿಂಗಪ್ಪ, ಭೋಜಪ್ಪ, ಯು.ಎಲ್. ಸುಭಾಷ್ ಚಂದ್ರ, ಸದಾಶಿವರಾವ್ ಬಾಪಾಟ್, ಎಸ್.ಎಸ್. ಕುಮಟಾ, ಕಮಲಾಕ್ಷ ಪಂಡಿತರು, ಜಿ.ಆರ್.ಜಿ. ನಗರ್, ಮನೋಭೂಮಿ ಶೆಟ್ಟಿ, ತುಳಜಪ್ಪಾ, ಅಹಮದ್ ಆಲಿ ಖಾನ್ ಹಾಗೂ ಓಮನ್ ಸಿಂಗ್ ಅವರ ಹೆಸರನ್ನು ಹಾಲಪ್ಪ ಅವರು ಸ್ಮರಿಸಿದರು. “ನಮ್ಮ ಈ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದು ಇಂದಿನ ಸಮಿತಿಯ ಜವಾಬ್ದಾರಿಯಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಒಗ್ಗಟ್ಟಿನ ಮಂತ್ರ “ಪಕ್ಷ ಮತ್ತು ರಾಜಕೀಯ ಸಿದ್ಧಾಂತಗಳನ್ನು ಬದಿಗಿಟ್ಟು, ಎಲ್ಲರೂ ಒಂದಾಗಿ ಶ್ರೀ ಮಾರಿಕಾಂಬಾ ತಾಯಿಯ ಸೇವೆ ಮಾಡಬೇಕು. ಹಿರಿಯರಂತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಾಗರದ ಸುಂದರ ಸಂಸ್ಕೃತಿಯನ್ನು ಎತ್ತಿಹಿಡಿಯಬೇಕು”…

Read More

ಶಿವಮೊಗ್ಗ : ಮಹಿಳೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲೀಕರಣವಾಗಬೇಕು. ಮಹಿಳೆಗೆ ಸಿಗಬೆಕಾದ ಸ್ಥಾನಮಾನ ಸೂಕ್ತವಾಗಿ ಸಿಗಬೇಕು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ವಿಯಾಗಿ ಮುನ್ನಡೆಯಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಹೇಳಿದರು. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೇಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೇಸ್ ವತಯಿಂದ ಹಮ್ಮಿಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದಂತ ಅವರು, ಮಹಿಳೆಯರು ಸ್ವಾಭಿಮಾನದ ಬದುಕು ನಡೆಸಲು ಬೇಕಾದ ವಾತಾವರಣ ಸಮಾಜ ನಿರ್ಮಾಣ ಮಾಡಿಕೊಟ್ಟಿದೆ. ಇನ್ನೂ ಹೆಚ್ಚು ಸಮಾಜದಿಂದ ನಿರೀಕ್ಷೆ ಮಾಡುವುದು ತಪ್ಪು. ಈಗಾಗಲೆ ಶೇ. 33 ಮೀಸಲಾತಿ ಮಹಿಳೆಯರಿಗೆ ನೀಡಿದ್ದರೂ ಅದರ ಪರಿಣಾಮಕಾರಿ ಅನುಷ್ಟಾನ ಶೀಘ್ರವಾಗಿ ಆಗಬೇಕು. ಮಹಿಳೆಯರಿಗೆ ಇನ್ನಷ್ಟು ಅವಕಾಶ ಗೌರವ ಸಿಗಬೇಕಾದರೆ ನಮ್ಮ ನಡೆನುಡಿ ಶುದ್ದವಾಗಿರಬೇಕು. ಸಮಾಜಮುಖಿ ಆಲೋಚನೆ ನಮ್ಮಿಂದ ಹೆಚ್ಚೆಚ್ಚು ಆಗಬೇಕು ಎಂದರು. ದೇವರು ಪ್ರತ್ಯಕ್ಷನಾಗಿ ವರ ಕೊಡುವುದಿಲ್ಲ. ನಮಗೆ ಅನೇಕ ಅವಕಾಶಗಳನ್ನು ವರದ ರೂಪದಲ್ಲಿ ದೇವರು ನೀಡುತ್ತಾನೆ. ನಾವು ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಪ್ರಗತಿ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕು. ಕಾಂಗ್ರೇಸ್…

Read More

ಬೀದರ್; ಬೀದರ್ ಏ.11&12ರಂದು ನಡೆಯಲಿರುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಪೂರ್ವಭಾವಿ ಸಿದ್ಧತಾ ಸಭೆ ಬೀದರ್ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಇದೇ ಸಂದರ್ಭದಲ್ಲಿ ಎಲ್ಲ ಉಪಸಮಿತಿಗಳ ಜೊತೆಗೆ ಸಮ್ಮೇಳನದ ಸಿದ್ಧತೆಯ ಬಗ್ಗೆ ಪರಿಶೀಲನೆ ನಡೆಸಲಾಯಿತು. ಬಸವನ ನಾಡಿನಲ್ಲಿ ಅರ್ಥಪೂರ್ಣ ಸಮ್ಮೇಳನ ನಡೆಸಲು ನಿರ್ಧರಿಸಿ, ಅದಕ್ಕೆ ಸಿದ್ದತೆ ಇನ್ನಷ್ಟು ಕ್ರೀಯಾಶೀಲಗೊಳಿಸಲು ತೀರ್ಮಾನಿಸಲಾಯಿತು. ಹಿರಿಯ ಪತ್ರಕರ್ತರಾದ ಶರಣಪ್ಪ ವಾಲಿ, ಮಾಜಿ ಅಧ್ಯಕ್ಷರುಗಳು ಸೇರಿದಂತೆ ಸಮ್ಮೇಳನ ಬಗ್ಗೆ ಹಲವು ಸಲಹೆ ನೀಡಿದರು. https://kannadanewsnow.com/kannada/new-leadership-for-sagar-marikamba-devi-trust-new-resolve-for-development-under-the-leadership-of-nagaraj-and-anand/ https://kannadanewsnow.com/kannada/professor-calls-muslim-student-a-terrorist-in-class-video-goes-viral-watch-video/

Read More

ಶಿವಮೊಗ್ಗ: ಮಲೆನಾಡಿನ ಆರಾಧ್ಯ ದೈವ, ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನದ ಪದಾಧಿಕಾರಿಗಳ ಚುನಾವಣೆ ಶನಿವಾರ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣಾ ಪ್ರಕ್ರಿಯೆಯಲ್ಲಿ ಅಂತಿಮವಾಗಿ ಅಧ್ಯಕ್ಷರಾಗಿ ಎಂ. ನಾಗರಾಜ್, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ.ಆನಂದ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ದೇವಸ್ಥಾನದ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ರಾಜಕೀಯ ಚದುರಂಗದಾಟ ಮತ್ತು ಒಕ್ಕೂಟದ ಜಯ 36 ಸದಸ್ಯ ಬಲದ ಈ ಪ್ರತಿಷ್ಟಾನದ ಅಧಿಕಾರ ಹಿಡಿಯಲು ತೆರೆಮರೆಯಲ್ಲಿ ದೊಡ್ಡ ಮಟ್ಟದ ಕಸರತ್ತು ನಡೆದಿತ್ತು. ಮಾರ್ಚ್ 8ರಂದು ನಡೆದ ಚುನಾವಣೆಯಲ್ಲಿ ಯಾವುದೇ ಒಂದು ಸಮಿತಿಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. ಹಿತರಕ್ಷಣಾ ಸಮಿತಿ: 14 ಸ್ಥಾನ ಹಿಂದಿನ ಸಮಿತಿ: 13 ಸ್ಥಾನ ವ್ಯವಸ್ಥಾಪನಾ ಸಮಿತಿ: 5 ಸ್ಥಾನ ಅಧಿಕಾರಕ್ಕಾಗಿ ನಡೆದ ಈ ಪೈಪೋಟಿಯಲ್ಲಿ ‘ಹಿತರಕ್ಷಣಾ ಸಮಿತಿ’ ಮತ್ತು ‘ವ್ಯವಸ್ಥಾಪನಾ ಸಮಿತಿ’ ಕೈಜೋಡಿಸಿ 26 ಸದಸ್ಯರ ಬಲದೊಂದಿಗೆ ಮೈತ್ರಿ ಮಾಡಿಕೊಂಡವು. ಬಹುಮತದ ಕೊರತೆಯಿಂದಾಗಿ ಹಿಂದಿನ ಸಮಿತಿಯು ಸ್ಪರ್ಧೆಯಿಂದ ಹಿಂದೆ ಸರಿಯಿತು. ಪರಿಣಾಮವಾಗಿ, ಎರಡೂ ಸಮಿತಿಗಳ ನಡುವಿನ…

Read More

ದಾವಣಗೆರೆ: ಬಿಜೆಪಿ ನಾಯಕ ಬಿ.ಜಿ. ಅಜಯ್ ಕುಮಾರ್ ಅವರು ಹಾಕಿದ್ದ ಸವಾಲನ್ನು ಸ್ವೀಕರಿಸಿ ದಾವಣಗೆರೆಗೆ ಆಗಮಿಸಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಭಾರಿ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಕಚೇರಿ ಮುಂಭಾಗದಲ್ಲಿ ಕೇಸರಿ ಪಡೆಯ ಕಾರ್ಯಕರ್ತರು ಶಾಸಕರಿಗೆ ಚಪ್ಪಲಿ ಹಾಗೂ ಪೊರಕೆ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಘಟನೆಯ ಹಿನ್ನೆಲೆ: ಇತ್ತೀಚೆಗೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಅವರ ನಾಮಪತ್ರ ಸಲ್ಲಿಕೆ ವೇಳೆ ಪ್ರದೀಪ್ ಈಶ್ವರ್ ಅವರು ಬಿಜೆಪಿ ನಾಯಕರ ವಿರುದ್ಧ ತೊಡೆ ತಟ್ಟಿ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಜೆಪಿ ನಾಯಕ ಅಜಯ್ ಕುಮಾರ್, “ತಾಕತ್ತಿದ್ದರೆ ದಾವಣಗೆರೆಗೆ ಬನ್ನಿ” ಎಂದು ಪ್ರತಿ ಸವಾಲು ಎಸೆದಿದ್ದರು. ಈ ಸವಾಲನ್ನು ಸ್ವೀಕರಿಸಿದ ಶಾಸಕರು ಇಂದು ದಾವಣಗೆರೆಗೆ ಆಗಮಿಸಿದ್ದರು. ನಡೆದಿದ್ದೇನು? ಪ್ರದೀಪ್ ಈಶ್ವರ್ ಅವರು ಪಿ.ಬಿ. ರಸ್ತೆಯ ಮೂಲಕ ಕೆ.ಬಿ. ಬಡಾವಣೆಯ ಬಿಜೆಪಿ ಕಚೇರಿ ಹತ್ತಿರ ಹಾದು ರಾಯರ ಮಠಕ್ಕೆ ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಅವರನ್ನು ಮುತ್ತಿಗೆ ಹಾಕಿದರು. ಬಿಜೆಪಿ ನಾಯಕ ಬಿ.ಜಿ. ಅಜಯ್ ಕುಮಾರ್…

Read More

ಹಾಸನ: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಾದ್ಯಂತ ಶನಿವಾರ ಸಂಜೆ ಗುಡುಗು ಸಹಿತ ಭಾರೀ ಮಳೆಯಾಗಿದ್ದು, ಸಿಡಿಲು ಬಡಿದ ಪರಿಣಾಮ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಘಟನೆಯ ವಿವರ: ತಾಲೂಕಿನ ಹಾನುಬಾಳು ಹೋಬಳಿಯ ದೇವಲದಕೆರೆ ಗ್ರಾಮದ ಸಮೀಪ ಈ ಅವಘಡ ಸಂಭವಿಸಿದೆ. ಗಾಯಗೊಂಡ ಮಹಿಳೆಯರು ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದಿದೆ ಎನ್ನಲಾಗಿದೆ. ಸಿಡಿಲಿನ ತೀವ್ರತೆಗೆ ಮಹಿಳೆಯರು ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಆಸ್ಪತ್ರೆಗೆ ದಾಖಲು: ಗಾಯಗೊಂಡವರನ್ನು ತಕ್ಷಣವೇ ಸಕಲೇಶಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಮಳೆ ಹಾನಿ: ಕೇವಲ ಸಿಡಿಲಷ್ಟೇ ಅಲ್ಲದೆ, ಅಬ್ಬರದ ಗಾಳಿ ಮಳೆಗೆ ಸಕಲೇಶಪುರ ಪಟ್ಟಣ ಮತ್ತು ಗ್ರಾಮೀಣ ಭಾಗದಲ್ಲಿ ಹಲವೆಡೆ ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ಹಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಲೆನಾಡು…

Read More

ಬೆಂಗಳೂರು: ಕ್ರಿಕೆಟ್ ಲೋಕದ ‘ಕಿಂಗ್’ ಎಂದೇ ಖ್ಯಾತರಾಗಿರುವ ವಿರಾಟ್ ಕೊಹ್ಲಿ, ಐಪಿಎಲ್ 2026ರ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಂತೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದೊಂದಿಗೆ ಕೊಹ್ಲಿ, ಒಂದೇ ಫ್ರಾಂಚೈಸಿ ಪರ ಅತಿ ಹೆಚ್ಚು ಕಾಲ ಆಡಿದ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 19ನೇ ಸೀಸನ್: ನಿಷ್ಠೆಯ ಸಂಕೇತ ‘ಕಿಂಗ್’ ಕೊಹ್ಲಿ 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದ ಇಂದಿನವರೆಗೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇಂದು ಅವರು ತಮ್ಮ 19ನೇ ಐಪಿಎಲ್ ಸೀಸನ್‌ ಅನ್ನು ಅಧಿಕೃತವಾಗಿ ಆರಂಭಿಸಿದ್ದಾರೆ. ದಾಖಲೆಯ ವಿಶೇಷತೆ: ಜಗತ್ತಿನ ಯಾವುದೇ ಟಿ20 ಲೀಗ್‌ನಲ್ಲಿ ಒಬ್ಬ ಆಟಗಾರ ಸತತವಾಗಿ 19 ವರ್ಷಗಳ ಕಾಲ ಒಂದೇ ತಂಡದ ಪರ ಆಡಿರುವುದು ಇದೇ ಮೊದಲು. ನಿಷ್ಠೆ (Loyalty): ಐಪಿಎಲ್ ಇತಿಹಾಸದಲ್ಲಿ ಹರಾಜಿನ ಪ್ರಕ್ರಿಯೆಗಳ ನಡುವೆಯೂ ಎಂದೂ ತಂಡವನ್ನು ಬದಲಿಸದ ಏಕೈಕ ದಿಗ್ಗಜ ಆಟಗಾರ ಎಂಬ…

Read More

ಕಲಬುರಗಿ: ವರದಕ್ಷಿಣೆ ಎಂಬ ಮಹಾಮಾರಿಗೆ ಮತ್ತೊಂದು ಬಲಿ ಬಿದ್ದಿದ್ದು, ಹೆಚ್ಚಿನ ಹಣಕ್ಕಾಗಿ ಪೀಡಿಸುತ್ತಿದ್ದ ಪತಿ ಹಾಗೂ ಆತನ ಕುಟುಂಬಸ್ಥರು ವಿವಾಹಿತೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ವಿವರ: ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಭಾಗ್ಯಶ್ರೀ (ಹೆಸರು ಬದಲಿಸಲಾಗಿದೆ) ಎಂದು ಗುರುತಿಸಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಮತ್ತು ಆತನ ಮನೆಯವರು ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು ಎನ್ನಲಾಗಿದೆ. ಕೊಲೆಗೆ ಕಾರಣ: ವರದಿಗಳ ಪ್ರಕಾರ, ಪೋಷಕರಿಂದ ಹಣ ಮತ್ತು ಚಿನ್ನಾಭರಣ ತರುವಂತೆ ಭಾಗ್ಯಶ್ರೀಗೆ ಪದೇ ಪದೇ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಪೋಷಕರು ಶಕ್ತಿ ಮೀರಿ ನೀಡಿದ್ದರೂ ಸಹ, ಆರೋಪಿಗಳ ದಾಹ ತೀರಿರಲಿಲ್ಲ. ಇದೇ ವಿಷಯವಾಗಿ ನಡೆದ ಜಗಳ ವಿಕೋಪಕ್ಕೆ ಹೋಗಿ, ಆರೋಪಿಗಳು ಭಾಗ್ಯಶ್ರೀಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ಕ್ರಮ: ಮಗಳ…

Read More

ನವದೆಹಲಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಆಡಳಿತಾತ್ಮಕ ಸುಧಾರಣೆ ಮತ್ತು ತಂತ್ರಜ್ಞಾನ ಆಧಾರಿತ ಪಾರದರ್ಶಕ ನೇಮಕಾತಿ ಪ್ರಕ್ರಿಯೆಗಾಗಿ ಪ್ರತಿಷ್ಠಿತ ‘ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ-2026’ (SKOCH National Award-2026) ಅನ್ನು ಮುಡಿಗೇರಿಸಿಕೊಂಡಿದೆ. ಶನಿವಾರ (ಮಾರ್ಚ್ 28) ದೆಹಲಿಯ ಇಂಡಿಯಾ ಹ್ಯಾಬಿಟೇಟ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಕಾರಣವಾದ ಪ್ರಮುಖ ಅಂಶಗಳು: ನಿಗಮವು ಜಾರಿಗೆ ತಂದಿರುವ “ಪಾರದರ್ಶಕ ನೇಮಕಾತಿ ಮತ್ತು ಪರಿಣಾಮಕಾರಿ ತರಬೇತಿ ಕಾರ್ಯಕ್ರಮ” ಈ ಪ್ರಶಸ್ತಿಗೆ ಆಯ್ಕೆಯಾಗಲು ಪ್ರಮುಖ ಕಾರಣವಾಗಿದೆ. ನೇಮಕಾತಿ ಪ್ರಕ್ರಿಯೆಯಲ್ಲಿ ಮಾನವ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ತಪ್ಪಿಸಿ, ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದ್ದನ್ನು ಸ್ಕಾಚ್ ಸಂಸ್ಥೆ ಶ್ಲಾಘಿಸಿದೆ. ತಂತ್ರಜ್ಞಾನ ಆಧಾರಿತ ವ್ಯವಸ್ಥೆ: ಅರ್ಜಿ ಸಲ್ಲಿಕೆಯಿಂದ ಹಿಡಿದು ಘಟಕಗಳ ನಿಯೋಜನೆಯವರೆಗೆ ಸಂಪೂರ್ಣ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಪಾರದರ್ಶಕ ಪರೀಕ್ಷೆಗಳು: ಸ್ವಯಂಚಾಲಿತ ಚಾಲನಾ ಪರೀಕ್ಷೆ, ಆನ್‌ಲೈನ್ ಪರೀಕ್ಷೆಗಳು, ದಾಖಲೆಗಳ ಡಿಜಿಟಲ್ ಪರಿಶೀಲನೆ, ವೆಬ್ ಕ್ಯಾಸ್ಟಿಂಗ್ ಮತ್ತು ಅಟೋ ಜನರೇಟೆಡ್ ಅಂಕಪಟ್ಟಿ ನೀಡುವ ಮೂಲಕ ಪಾರದರ್ಶಕತೆ…

Read More