Subscribe to Updates
Get the latest creative news from FooBar about art, design and business.
Author: kannadanewsnow09
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಭಾಗದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ 110 ಕೆವಿ ವಿದ್ಯುತ್ ಗ್ರಿಡ್ ನಿರ್ಮಾಣ ಕಾಮಗಾರಿಗೆ ಪದೇ ಪದೇ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಸೋಮಶೇಖರ್ ಲಾವಿಗೆರೆ ನೇತೃತ್ವದಲ್ಲಿ ಮೂರು ಪಂಚಾಯತಿಗಳ ರೈತರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತ್ಯಾಗರ್ತಿಯಿಂದ ಗ್ರಿಡ್ ಬಳಿಯವರೆಗೆ ಬೈಕ್ ಜಾಥಾ ನಡೆಸಿದರು. ಸಾಗರ ಉಪವಿಭಾಗದ ಎಸಿ (AC) ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಈ ವೇಳೆ ಮಾತನಾಡಿದಂತ ಅವರು, ಸಾಗರ ತಾಲೂಕಿನ ತ್ಯಾಗರ್ತಿ ಸುತ್ತಮುತ್ತಲಿನ ಮೂರು ಪಂಚಾಯತಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಕೈಗೆತ್ತಿಕೊಂಡಿರುವ 110 ಕೆವಿ ಗ್ರಿಡ್ ಕಾಮಗಾರಿಗೆ ಸತತವಾಗಿ ಅಡ್ಡಿಪಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಕಾಮಗಾರಿಯು ಈ ಭಾಗದ ರೈತರ ಪಾಲಿಗೆ ಅತ್ಯಂತ ಅವಶ್ಯಕವಾಗಿದ್ದು, ಪದೇ ಪದೇ ಕಿಡಿಗೇಡಿಗಳು ವಿನಾಕಾರಣ ತೊಂದರೆ ನೀಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು. ಇತ್ತೀಚೆಗೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜೆಸಿಬಿ ಚಾಲಕರು ಹಾಗೂ ಗುತ್ತಿಗೆದಾರರ ಪರವಾಗಿ ಬಂದಿದ್ದ ಕಾರ್ಮಿಕರ…
ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರವು ಮಹತ್ವದ ಕೊಡುಗೆಯೊಂದನ್ನು ನೀಡಿದೆ. ನೇರ ನೇಮಕಾತಿಯಲ್ಲಿ ಭಾಗವಹಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಕಾಲ ಒಂದು ಬಾರಿಯ ವಿನಾಯಿತಿ (One-time measure) ನೀಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಪೊಲೀಸ್ ಮಹಾನಿರ್ದೇಶಕರು ಮತ್ತು ಐಜಿಪಿ ಅವರ ಕಚೇರಿಯಿಂದ ಅಧಿಕೃತ ಸುತ್ತೋಲೆ ಹೊರಬಿದ್ದಿದ್ದು, ಪ್ರಮುಖ ಅಂಶಗಳು ಈ ಕೆಳಗಿನಂತಿವೆ: ಮುಖ್ಯಾಂಶಗಳು: ಯಾರಿಗೆ ಅನ್ವಯ?: ಪೊಲೀಸ್ ಇಲಾಖೆಯ ನೇರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗಗಳ (All Categories) ಅಭ್ಯರ್ಥಿಗಳಿಗೆ ಈ ಸಡಿಲಿಕೆ ಅನ್ವಯವಾಗಲಿದೆ. ವಿನಾಯಿತಿ ಅವಧಿ: ಗರಿಷ್ಠ ವಯೋಮಿತಿಯಲ್ಲಿ ಒಟ್ಟು 05 ವರ್ಷಗಳ ಸಡಿಲಿಕೆ ನೀಡಲಾಗಿದೆ. ಅವಧಿಯ ಮಿತಿ: ಈ ಸವಲತ್ತು ದಿನಾಂಕ 31.12.2027 ರವರೆಗೆ ಹೊರಡಿಸಲಾಗುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯಿಸುತ್ತದೆ. ಹಿನ್ನೆಲೆ: ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 262 ಸೇನನಿ 2025, ದಿನಾಂಕ: 29.01.2026ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ. ಯುವಜನತೆಗೆ…
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮೊದಲ ಆವೃತ್ತಿಯ ಚಾಂಪಿಯನ್ಸ್ ರಾಜಸ್ಥಾನ ರಾಯಲ್ಸ್ (RR) ತಂಡ ಈಗ ಅಮೆರಿಕ ಮೂಲದ ಉದ್ಯಮಿಗಳ ಪಾಲಾಗಿದೆ. ಅಮೆರಿಕದ ಖ್ಯಾತ ತಂತ್ರಜ್ಞಾನ ಉದ್ಯಮಿ ಕಲ್ ಸೋಮಾನಿ (Kal Somani) ನೇತೃತ್ವದ ಒಕ್ಕೂಟವು ಈ ಫ್ರಾಂಚೈಸಿಯನ್ನು ಬರೋಬ್ಬರಿ 1.63 ಬಿಲಿಯನ್ ಡಾಲರ್ (ಸುಮಾರು ₹13,600 ಕೋಟಿ) ಮೊತ್ತಕ್ಕೆ ಖರೀದಿಸಿದೆ. ಸುದ್ದಿಯ ಮುಖ್ಯಾಂಶಗಳು: ದಾಖಲೆ ಬೆಲೆ: ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತಂಡವೊಂದು 1 ಬಿಲಿಯನ್ ಡಾಲರ್ಗಿಂತ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದ್ದು, ಇದು ಲೀಗ್ನ ಅತ್ಯಂತ ದುಬಾರಿ ವ್ಯವಹಾರ ಎಂದು ಗುರುತಿಸಿಕೊಂಡಿದೆ. ಜಾಗತಿಕ ದಿಗ್ಗಜರ ಬೆಂಬಲ: ಈ ಖರೀದಿಯಲ್ಲಿ ಕಲ್ ಸೋಮಾನಿ ಅವರಿಗೆ ವಿಶ್ವದ ಅತಿದೊಡ್ಡ ರಿಟೇಲ್ ಸಂಸ್ಥೆ ವಾಲ್ಮಾರ್ಟ್ (Walmart) ಕುಟುಂಬದ ರಾಬ್ ವಾಲ್ಟನ್ ಮತ್ತು ಜಾಗತಿಕ ವಾಹನ ಉದ್ಯಮದ ದೈತ್ಯ ಫೋರ್ಡ್ (Ford) ಕುಟುಂಬದ ಶೀಲಾ ಫೋರ್ಡ್ ಹ್ಯಾಂಪ್ ಸಾಥ್ ನೀಡಿದ್ದಾರೆ. ಯಾರು ಈ ಕಲ್ ಸೋಮಾನಿ?: ಸೋಮಾನಿ ಅವರು ಈ ಹಿಂದೆ…
ನವದೆಹಲಿ: ಭಾರತೀಯ ರೈಲ್ವೆಯು ರೈಲು ಟಿಕೆಟ್ ರದ್ದತಿ ಶುಲ್ಕ ಮತ್ತು ರೀಫಂಡ್ (ಹಣ ಮರುಪಾವತಿ) ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದೆ. ಈ ಹೊಸ ನಿಯಮಗಳು 2026ರ ಏಪ್ರಿಲ್ 1 ರಿಂದ ಏಪ್ರಿಲ್ 15ರ ಅವಧಿಯಲ್ಲಿ ಹಂತ ಹಂತವಾಗಿ ಜಾರಿಗೆ ಬರಲಿವೆ. ಹೊಸ ನಿಯಮಗಳ ಪ್ರಕಾರ ರದ್ದತಿ ಶುಲ್ಕದ ವಿವರಗಳು ಹೀಗಿವೆ: ಪ್ರಯಾಣಕ್ಕೆ 72 ಗಂಟೆಗಳಿಗಿಂತ ಮುಂಚಿತವಾಗಿ: ಟಿಕೆಟ್ ರದ್ದುಗೊಳಿಸಿದರೆ, ಪ್ರತಿ ಪ್ರಯಾಣಿಕರಿಗೆ ನಿಗದಿತ ಕನಿಷ್ಠ ರದ್ದತಿ ಶುಲ್ಕವನ್ನು ಕಡಿತಗೊಳಿಸಿ ಉಳಿದ ಹಣವನ್ನು ಮರುಪಾವತಿಸಲಾಗುತ್ತದೆ. 72 ಗಂಟೆಯಿಂದ 24 ಗಂಟೆಗಳ ಒಳಗೆ: ರೈಲು ಹೊರಡುವ 72 ಗಂಟೆಗಳಿಂದ 24 ಗಂಟೆಗಳ ಮೊದಲು ಟಿಕೆಟ್ ರದ್ದು ಮಾಡಿದರೆ, ಟಿಕೆಟ್ ದರದ ಶೇ. 25 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. 24 ಗಂಟೆಯಿಂದ 8 ಗಂಟೆಗಳ ಒಳಗೆ: ಪ್ರಯಾಣಕ್ಕೆ 24 ಗಂಟೆಗಳಿಂದ 8 ಗಂಟೆಗಳ ಮೊದಲು ರದ್ದುಗೊಳಿಸಿದರೆ, ಟಿಕೆಟ್ ದರದ ಶೇ. 50 ರಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. 8 ಗಂಟೆಗಿಂತ ಕಡಿಮೆ ಅವಧಿಯಲ್ಲಿ: ರೈಲು ಹೊರಡಲು 8…
ಶಿವಮೊಗ್ಗ : ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಇದಕ್ಕೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಕ್ಷಯರೋಗಿಗಳು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಡಿಹೆಚ್ಓ ಡಾ. ನಟರಾಜ.ಕೆ.ಎಸ್ ತಿಳಿಸಿದರು. ನಗರ ಆರೋಗ್ಯ ಕೇಂದ್ರ ತುಂಗಾನಗರ ವ್ಯಾಪ್ತಿಯ ನೇತಾಜಿ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಈ ವರ್ಷದ ಘೋಷಣೆಯಡಿ ಏರ್ಪಡಿಸಲಾಗಿದ್ದ “ಹೌದು, ಭಾರತದ ನೇತೃತ್ವದಲ್ಲಿ, ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು” ಎಂಬ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದುಶ್ಚಟಗಳಿಂದ ದೂರವಿದ್ದು, ಪೌಷ್ಟಿಕ ಆಹಾರ ತೆಗೆದುಕೊಳ್ಳುವುದರಿಂದ ಕ್ಷಯರೋಗ ಸೇರಿದಂತೆ ಯಾವುದೇ ರೋಗದಿಂದ ದೂರ ಉಳಿಯಬಹುದಾಗಿದೆ. ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು. ಕಳೆದ ವರ್ಷದಲ್ಲಿ ಭಾರತದಲ್ಲಿ 25 ಲಕ್ಷ ಟಿಬಿ ಪ್ರಕರಣಗಳು ವರದಿಯಾಗಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ 1806 ಪ್ರಕರಣ ವರದಿಯಾಗಿದೆ. ಇತ್ತೀಚಿನ ವರ್ಷದಲ್ಲಿ ಕ್ಷಯ ರೋಗ ಹರಡುವ ಪ್ರಮಾಣ ಶೇ.21 ಕಡಿಮೆ ಯಾಗಿದೆ. ಈ ಪ್ರಮಾಣವನ್ನು ಇನ್ನೂ ತಗ್ಗಿಸುವ ಅವಶ್ಯಕತೆ…
ನವದೆಹಲಿ/ಬೆಂಗಳೂರು : ರಾಜ್ಯದ ಮೊಟ್ಟಮೊದಲ ‘ಸ್ಪ್ರಿಂಗ್ ಸೆನ್ಸಸ್’ (ಚಿಲುಮೆಗಳ ಗಣತಿ) ಕಾರ್ಯಾಚರಣೆಯನ್ನು ನಿಗದಿತ ಕಾಲಮಿತಿಯೊಳಗೆ ಯಶಸ್ವಿಯಾಗಿ ಪೂರ್ಣಗೊಳಿಸಿದ ಕರ್ನಾಟಕದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯನ್ನು ಕೇಂದ್ರ ಜಲಶಕ್ತಿ ಸಚಿವಾಲಯವು (𝗠𝗶𝗻𝗶𝘀𝘁𝗿𝘆 𝗼𝗳 𝗝𝗮𝗹 𝗦𝗵𝗮𝗸𝘁𝗶) ಶ್ಲಾಘಿಸಿದೆ. ಈ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರ ನೀಡಿದ ಪ್ರಶಂಸನಾ ಪತ್ರವನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಾದ ಬಿ.ಕೆ. ಪವಿತ್ರ (𝗦𝗿𝗶 𝗕.𝗞. 𝗣𝗮𝘃𝗶𝘁𝗵𝗿𝗮) ಅವರು ನಿನ್ನೆ ಅಧಿಕೃತವಾಗಿ ಸ್ವೀಕರಿಸಿದರು. ಕೇಂದ್ರ ಜಲಶಕ್ತಿ ಸಚಿವಾಲಯದ ತಾಂತ್ರಿಕ ಮಾರ್ಗದರ್ಶನದಲ್ಲಿ ನೀರಾವರಿ ಗಣತಿ ಯೋಜನೆಯಡಿ (𝗜𝗿𝗿𝗶𝗴𝗮𝘁𝗶𝗼𝗻 𝗖𝗲𝗻𝘀𝘂𝘀 𝗦𝗰𝗵𝗲𝗺𝗲) ಈ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಅಂತರ್ಜಲ ನಿರ್ದೇಶನಾಲಯವು (𝗗𝗶𝗿𝗲𝗰𝘁𝗼𝗿𝗮𝘁𝗲 𝗼𝗳 𝗚𝗿𝗼𝘂𝗻𝗱𝘄𝗮𝘁𝗲𝗿) ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಿದೆ. ಕರ್ನಾಟಕದ ಜೀವನಾಡಿ ಜಲಮೂಲಗಳ ಕುರಿತಾದ ದತ್ತಾಂಶ ಆಧಾರಿತ ಒಳನೋಟಗಳು (𝗗𝗮𝘁𝗮-𝗗𝗿𝗶𝘃𝗲𝗻 𝗜𝗻𝘀𝗶𝗴𝗵𝘁𝘀) ಅಂತಿಮಗೊಂಡ ಡಿಜಿಟಲ್ ಗಣತಿ ವರದಿಯ ಪ್ರಮುಖ ಅಂಶಗಳನ್ನು ವಿವರಿಸಿದ ಬಿ.ಕೆ. ಪವಿತ್ರ ಅವರು, “ಮಳೆಗಾಲದ ಭೌಗೋಳಿಕ ಸವಾಲುಗಳ ನಡುವೆಯೂ, ನಮ್ಮ ಇಲಾಖೆಯ ಸಿಬ್ಬಂದಿ…
ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ವಿರುದ್ಧ ಈಗ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ. ಘಟನೆಯ ವಿವರ: ಕಳೆದ ಮಾರ್ಚ್.12, 2026ರಂದು ಶಾಲೆಯ ವಿದ್ಯಾರ್ಥಿ ಸುಶ್ರುತ್ ಎಂಬುವವರ ಮೇಲೆ ಶಿಕ್ಷಕ ಪ್ರಮೋದ್ ಸಣ್ಣಕ್ಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಹಲ್ಲೆಯ ತೀವ್ರತೆಗೆ ವಿದ್ಯಾರ್ಥಿಗೆ ತೀವ್ರ ಗಾಯವಾಗಿ ರಕ್ತ ಬಂದಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಿಕೊಂಡಿತ್ತು. ಕಾನೂನು ಕ್ರಮ: ಆಯೋಗದ ಸೂಚನೆಯ ಮೇರೆಗೆ ಸಾಗರ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಸದಾನಂದಸ್ವಾಮಿ ಅವರು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಶಿಕ್ಷಕನ ವಿರುದ್ಧ ಈ ಕೆಳಗಿನ ಕಾಯ್ದೆಗಳಡಿ ಎಫ್ಐಆರ್ ದಾಖಲಿಸಲಾಗಿದೆ: ಭಾರತೀಯ ನ್ಯಾಯ ಸಂಹಿತೆ (BNS): ಸೆಕ್ಷನ್ 118 ಜುವೆನೈಲ್ ಜಸ್ಟೀಸ್ ಕಾಯ್ದೆ 2015 (JJ…
ನವದೆಹಲಿ: ಮಂಗಳವಾರ ಬೆಳಗ್ಗೆ ಭಾರಿ ಆತಂಕ ಸೃಷ್ಟಿಯಾಗಿದ್ದು, ದೆಹಲಿ ವಿಧಾನಸಭೆ ಮತ್ತು ಹತ್ತಿರದ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಅಲ್ಲದೇ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಇತರೆ ಗಣ್ಯರಿಗೂ ಬಾಂಬ್ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ದೆಹಲಿ ಪೊಲೀಸರು ಹೈ ಅಲರ್ಟ್ ಘೋಷಿಸಿದ್ದಾರೆ. ಸುದ್ದಿಯ ಪ್ರಮುಖ ಅಂಶಗಳು: ಬೆದರಿಕೆ ಬಂದ ರೀತಿ: ದೆಹಲಿ ವಿಧಾನಸಭೆಯ ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಅಧಿಕೃತ ಇಮೇಲ್ ವಿಳಾಸಕ್ಕೆ ಮಂಗಳವಾರ ಬೆಳಗಿನ ಜಾವ ಎರಡು ಬೆದರಿಕೆ ಸಂದೇಶಗಳು ಬಂದಿವೆ. ಗುರಿಗಳು: ವಿಧಾನಸಭೆ ಕಟ್ಟಡ ಮತ್ತು ವಿಧಾನಸಭಾ ಮೆಟ್ರೋ ನಿಲ್ದಾಣವನ್ನು ಸ್ಫೋಟಿಸುವುದಾಗಿ ಇಮೇಲ್ನಲ್ಲಿ ಎಚ್ಚರಿಸಲಾಗಿದೆ. ನಾಯಕರ ಹೆಸರು ಉಲ್ಲೇಖ: ಈ ಬೆದರಿಕೆ ಇಮೇಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್. ಜೈಶಂಕರ್, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಮತ್ತು ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಸೇರಿದಂತೆ ಹಲವು…
ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಹಾಗಣಪತಿ ದೇವಸ್ಥಾನ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾಗಣಪತಿ ದೇವಸ್ಥಾನದ ಮುಖಮಂಟಪದ ಬಳಿಯ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ (EO) ಪ್ರಮೀಳಾ ಕುಮಾರಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಗಣಪತಿ ರಥೋತ್ಸವದ ನಂತರ ನಡೆಯುವ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನೇರವಾಗಿ ಪ್ರಸಾದ ಸ್ವೀಕರಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಣಪತಿ ದೇವಾಲಯದ ಎದುರಿನ ಮುಖಮಂಟಪ ಜಾಗದಲ್ಲಿ ಯಾವುದೇ ಮಳಿಗೆಗಳಿಗೆ ಅವಕಾಶ ನೀಡಬಾರದೆಂದು ಮೊದಲೇ ತೀರ್ಮಾನಿಸಲಾಗಿತ್ತು ಎಂದರು.. ಇಓ ಮಾತಿನ ಮುಖ್ಯಾಂಶಗಳು: ಅನಧಿಕೃತ ಮಳಿಗೆ ತೆರವು: ಸಮಿತಿಯ ನಿರ್ಧಾರದ ಹೊರತಾಗಿಯೂ ಕೆಲವು ಮೂರನೇ ವ್ಯಕ್ತಿಗಳು ಈ ಸ್ಥಳದಲ್ಲಿ ಅಂಗಡಿ ಹಾಕಲು ಅವಕಾಶ ನೀಡಿದ್ದರು. ಇದು ಗಮನಕ್ಕೆ ಬಂದ ತಕ್ಷಣ ಮಳಿಗೆದಾರರೊಂದಿಗೆ ಮಾತನಾಡಿ, ಅವರ ಸಹಕಾರದೊಂದಿಗೆ ಜಾಗವನ್ನು ತೆರವುಗೊಳಿಸಲಾಗಿದೆ. ಭಕ್ತರ ಹಿತವೇ ಮುಖ್ಯ: ಅನ್ನ ಸಂತರ್ಪಣೆಗೆ ಬರುವ ಸಾವಿರಾರು ಭಕ್ತರಿಗೆ ಯಾವುದೇ ಅಡಚಣೆಯಾಗಬಾರದು ಎಂಬ…
ಶಿವಮೊಗ್ಗ: ಜ್ಞಾನದ ದೇಗುಲವೆಂದು ಕರೆಯಲ್ಪಡುವ ಸಾಗರದ ಶೆಡ್ತೀಕೆರೆ ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಶಿಕ್ಷಕರಿಂದಲೇ ಸಮೂಹ ಹಲ್ಲೆ ನಡೆದಿದೆ ಎನ್ನಲಾದ ಘಟನೆ ಮತ್ತು ಅದರ ನಂತರದ ಬೆಳವಣಿಗೆಗಳು ಇಡೀ ಶಿಕ್ಷಣ ಇಲಾಖೆಯ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಸಾಗರ ತಾಲ್ಲೂಕಿನ ಶೇಡ್ತಿಕೇರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಈ ಘಟನೆ, ವ್ಯವಸ್ಥೆಯು ಹೇಗೆ ಸಂತ್ರಸ್ತ ಮಗುವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಆ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಜಿ.ಟಿ ಸತ್ಯನಾರಾಯಣ ಅವರು ಸೋಷಿಯಲ್ ಮೀಡಿಯಾದಲ್ಲಿ ಎತ್ತಿರುವ ಪ್ರಶ್ನೆಗಳು ಮುಂದಿದೆ ಓದಿ.. ವ್ಯವಸ್ಥಿತ ಸಂಚಿನ ರೂಪವೇ ಈ ‘ಸಭಾ ನಡಾವಳಿ’? ಶಾಲೆಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆದು, ಆ ಮಗು ದೈಹಿಕ ಮತ್ತು ಮಾನಸಿಕ ನೋವಿನಿಂದ ನರಳುತ್ತಿರುವಾಗ, ಆತನಿಗೆ ಮತ್ತು ಆತನ ಕುಟುಂಬಕ್ಕೆ ಧೈರ್ಯ ತುಂಬಬೇಕಾದ ಶಿಕ್ಷಣ ಇಲಾಖೆ ಮತ್ತು ಎಸ್ಡಿಎಂಸಿ (SDMC) ಪದಾಧಿಕಾರಿಗಳು ಮಾಡಿದ್ದೇನು? ಲಭ್ಯವಿರುವ ಸಭಾ ನಡಾವಳಿಗಳನ್ನು ಗಮನಿಸಿದರೆ, ಅಲ್ಲಿ ನಡೆದಿದ್ದು…














