Author: ವಸಂತ ಬಿ ಈಶ್ವರಗೆರೆ

ವಸಂತ ಬಿ ಈಶ್ವರಗೆರೆ (Vasantha B Eshwaragere) ಅವರು ಕರ್ನಾಟಕದ ಪತ್ರಕರ್ತರು ಮತ್ತು ಕವಿ. ಉದಯ ನ್ಯೂಸ್, ಟಿವಿ5 ಕನ್ನಡ ಸೇರಿದಂತೆ ವಿವಿಧ ಸುದ್ದಿ ಮಾಧ್ಯಮಗಳಲ್ಲಿ ಸುಮಾರು 15 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಪ್ರಸ್ತುತ ಅವರು Kannada News Now ಡಿಜಿಡಿಲ್‌ ಮಾಧ್ಯಮದಲ್ಲಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಾಜಾ ಸುದ್ದಿ, ಸಾಹಿತ್ಯ, ಸಾಮಾಜಿಕ ವರದಿಗಾರಿಕೆ, ನ್ಯಾಯಾಂಗ ಸಂಬಂಧಿತ ವರದಿ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸುದ್ದಿಗಳ ವರದಿಯಲ್ಲಿ ಸಕ್ರಿಯರಾಗಿದ್ದಾರೆ. ಗುಡವಿ ಪಕ್ಷಿಧಾಮದಂತಹ ಪ್ರವಾಸಿ ತಾಣಗಳ ಕುರಿತು ಲೇಖನಗಳನ್ನು ಬರೆದಿದ್ದಾರೆ.

ಬದಲಾಗುತ್ತಿರುವ ಇಂದಿನ ಆಧುನಿಕ ಜೀವನಶೈಲಿ, ತೀವ್ರತರವಾದ ಮಾನಸಿಕ ಒತ್ತಡ ಹಾಗೂ ಪರಸ್ಪರ ಸಂವಹನದ ಕೊರತೆಯಿಂದಾಗಿ ಅನೇಕ ದಂಪತಿಗಳ ಲೈಂಗಿಕ ಜೀವನ (Sex Life) ಹಳಿತಪ್ಪುತ್ತಿದೆ. ಲೈಂಗಿಕ ಆರೋಗ್ಯ ತಜ್ಞರ ಪ್ರಕಾರ, ಬಹುತೇಕ ಜನರು ತಮ್ಮ ಲೈಂಗಿಕ ಜೀವನದಲ್ಲಿ ಸಮಸ್ಯೆಗಳು ತೀವ್ರವಾಗಿ ಉಲ್ಬಣಗೊಂಡು, ದಾಂಪತ್ಯದಲ್ಲಿ ಬಿರುಕು ಮೂಡುವವರೆಗೂ ಅದರ ಆರಂಭಿಕ ಸಂಕೇತಗಳನ್ನು ಗುರುತಿಸುವುದೇ ಇಲ್ಲ ಅಥವಾ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾರೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರಲು ಮತ್ತು ಯಾವುದೇ ದೊಡ್ಡ ಸಮಸ್ಯೆ ಎದುರಾಗುವ ಮುನ್ನವೇ ಎಚ್ಚೆತ್ತುಕೊಳ್ಳಲು ಸಹಾಯ ಮಾಡುವ ಪ್ರಮುಖ ಸಂಕೇತಗಳು ಮತ್ತು ಅವುಗಳ ಪರಿಹಾರಗಳ ವಿವರ ಇಲ್ಲಿದೆ: 1. ನಿರಂತರವಾಗಿ ಕಡಿಮೆಯಾಗುವ ಕಾಮಾಸಕ್ತಿ (Low Libido) ಕೆಲವೊಮ್ಮೆ ದಣಿವು ಅಥವಾ ಕೆಲಸದ ಒತ್ತಡದಿಂದಾಗಿ ಲೈಂಗಿಕತೆಯಿಂದ ದೂರವಿರುವುದು ಸಾಮಾನ್ಯ. ಆದರೆ, ಯಾವುದೇ ದೈಹಿಕ ಕಾರಣಗಳಿಲ್ಲದೆ ನಿರಂತರವಾಗಿ ಸಂಗಾತಿಯ ಮೇಲಿನ ಆಕರ್ಷಣೆ ಅಥವಾ ಕಾಮಾಸಕ್ತಿ ಕಡಿಮೆಯಾಗುತ್ತಿದ್ದರೆ, ಅದು ದಾಂಪತ್ಯದಲ್ಲಿ ಏನೋ ಸರಿಯಿಲ್ಲ ಎಂಬುದರ ಮೊದಲ ಸಂಕೇತವಾಗಿದೆ. ಇದನ್ನು ಕೇವಲ “ದಣಿವು” ಎಂದು ನಿರ್ಲಕ್ಷಿಸದೆ, ಅದರ ಹಿಂದಿನ…

Read More

ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಕದನವು ಕೇವಲ ಆ ಎರಡು ದೇಶಗಳಿಗಷ್ಟೇ ಹಾನಿ ಮಾಡಿಲ್ಲ. ಬದಲಾಗಿ, ಜಗತ್ತಿನ ಹತ್ತು-ಹಲವು ರಾಷ್ಟ್ರಗಳ ಅಭಿವೃದ್ಧಿಯ ವೇಗಕ್ಕೆ ಗಂಭೀರ ಬ್ರೇಕ್ ಹಾಕಿದೆ. “ಈ ಕದನ ಹೀಗೇ ಮುಂದುವರಿದರೆ ಜಗತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ 50 ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಸಮುದಾಯಕ್ಕೆ ಮುನ್ನೆಚ್ಚರಿಕೆಯನ್ನೂ ನೀಡಿದ್ದರು. 2026ರ ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ದೇಶಗಳು ಜಂಟಿಯಾಗಿ ಇರಾನ್ ಮೇಲೆ ಅನಿರೀಕ್ಷಿತ ದಾಳಿ ನಡೆಸುವ ಮೂಲಕ ಈ ಯುದ್ಧ ಆರಂಭವಾಗಿತ್ತು. ವಿಶ್ವದ ಅತಿ ದೊಡ್ಡ ಆರ್ಥಿಕತೆ (ಅಮೆರಿಕ) ಮತ್ತು ಅತಿ ದೊಡ್ಡ ತೈಲ ಶಕ್ತಿ (ಇರಾನ್) ನಡುವೆ ನಡೆದ ಈ ಸುದೀರ್ಘ ಹೋರಾಟ ಕೊನೆಗೂ ಶಾಂತಿ ಒಪ್ಪಂದದೊಂದಿಗೆ ಮುಕ್ತಾಯಗೊಂಡಿದೆ. ಆದರೆ, ಈ ಮೂರೂವರೆ ತಿಂಗಳ ಅವಧಿಯಲ್ಲಿ ಸಂಭವಿಸಿದ ಹಾನಿ ಮಾತ್ರ ಕಲ್ಪನೆಗೂ ನಿಲುಕದಂತದ್ದಾಗಿದೆ. ಮೊದಲ 15 ದಿನಗಳಲ್ಲೇ ಮರಣಮೃದಂಗ ಯುದ್ಧ ಆರಂಭವಾದ ಮೊದಲ ಎರಡು ವಾರಗಳಲ್ಲಿಯೇ (2026ರ ಮಾರ್ಚ್…

Read More

ಶಿವಮೊಗ್ಗ: ಸಾಗರ ನಗರಸಭೆಯ ಮಹಿಳಾ ಪೌರಕಾರ್ಮಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದರೂ, ನಗರಸಭೆ ಪೌರಕಾರ್ಮಿಕರ ಮೇಸ್ತ್ರಿ ನಾಗರಾಜ ಸ್ವಾಮಿಯನ್ನು ಈವರೆಗೂ ಬಂಧಿಸದ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಸೋಮವಾರ ದಲಿತ ಸಂಘರ್ಷ ಸಮಿತಿಗಳ (DSS) ಒಕ್ಕೂಟದ ವತಿಯಿಂದ ನಗರಸಭೆ ಎದುರಿನ ಗಾಂಧಿ ಪ್ರತಿಮೆ ಸಮೀಪ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುತ್ತಿದ್ದಾನೆ ಕಾಮುಕ ಮೇಸ್ತ್ರಿ: ಎನ್. ಲಲಿತಮ್ಮ ಆಕ್ರೋಶ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷೆ ಎನ್.ಲಲಿತಮ್ಮ, ಸಾಗರ ನಗರಸಭೆಯಲ್ಲಿ ನಾಗರಾಜ್ ಮೇಸ್ತ್ರಿಯ ಉಪಟಳ ಮತ್ತು ಕಾಮುಕ ವರ್ತನೆಯಿಂದಾಗಿ ಮರ್ಯಾದಸ್ಥ ಹೆಣ್ಣುಮಕ್ಕಳು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯವಾಗದ ವಾತಾವರಣ ನಿರ್ಮಾಣವಾಗಿದೆ. ಈತ ಹಣ, ರಾಜಕೀಯ ಪ್ರಭಾವ ಮತ್ತು ದುರಹಂಕಾರದಿಂದ ಮೆರೆಯುತ್ತಾ ಸಾಗರದ ‘ಪ್ರಜ್ವಲ್ ರೇವಣ್ಣ’ನಂತೆ ವರ್ತಿಸುತ್ತಿದ್ದಾನೆ ಎಂದು ಗುಡುಗಿದರು. ಮಹಿಳಾ ಪೌರ ಕಾರ್ಮಿಕರೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ವಾರ ಕಳೆದರೂ, ತನ್ನ ಚಾಣಾಕ್ಷತನ ಬಳಸಿ…

Read More

ವಿಜಯಪುರ: ಬೈಕ್‌ಗೆ ಟಿಪ್ಪರ್ ವಾಹನವೊಂದು ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಅತ್ಯಂತ ಕ್ರೂರವಾಗಿ ಸಾವನ್ನಪ್ಪಿರುವ ದುರಂತ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನಲ್ಲಿ ನಡೆದಿದೆ. ಚಡಚಣ ತಾಲ್ಲೂಕಿನ ಮರೂರು ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಈ ಜವರಾಯನ ಅಟ್ಟಹಾಸ ನಡೆದಿದೆ. ಮೃತರ ವಿವರ: ಅಪಘಾತದಲ್ಲಿ ಗೋರನಾಳ ಗ್ರಾಮದ ನಿವಾಸಿಗಳಾದ ಧರ್ಮಣ್ಣಾ ಹೊಸಮನಿ (41) ಮತ್ತು ಬೀರಪ್ಪ ಪೂಜಾರಿ (25) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಸ್ಥಳದಲ್ಲೇ ಹಾರಿಹೋಯಿತು ಪ್ರಾಣ ಪಕ್ಷಿ: ಧರ್ಮಣ್ಣಾ ಮತ್ತು ಬೀರಪ್ಪ ಇಬ್ಬರೂ ಬೈಕ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 52ರ ಮೂಲಕ ಚಡಚಣ ತಾಲ್ಲೂಕಿನ ಮರಗೂರು ಮಾರ್ಗವಾಗಿ ಸಂಚರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ವೇಗವಾಗಿ ಬಂದ ಟಿಪ್ಪರ್ ಇವರ ಬೈಕ್‌ಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸವಾರರು ಹೆದ್ದಾರಿಗೆ ಬಿದ್ದು ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು…

Read More

ಮಂಡ್ಯ: ಜಿಲ್ಲೆಯ ಮಾರದೇವನಹಳ್ಳಿಯಲ್ಲಿರುವ ಉಚಿತ ಗುರುಕುಲ ಶ್ರೀ ಸತ್ಯ ಸಾಯಿ ಶಾರದಾನಿಕೇತನಂ ವಿದ್ಯಾಸಂಸ್ಥೆಯ 12ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಹೊಸ ದಾಖಲೆ ಬರೆದಿದ್ದಾರೆ. 6ನೇ ತರಗತಿಯಿಂದ 12ನೇ ತರಗತಿಯವರೆಗೆ ಉಚಿತ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಹೆಸರು ಮಾಡಿರುವ ಈ ಸತ್ಯ ಸಾಯಿ ವಿದ್ಯಾಸಂಸ್ಥೆಯು, ಏಪ್ರಿಲ್ ತಿಂಗಳಲ್ಲಿ ನಡೆದ 12ನೇ ತರಗತಿಯ (ಸೀನಿಯರ್ ಸೆಕೆಂಡರಿ) ವಿದ್ಯಾರ್ಥಿಗಳ ಅಂತಿಮ ಪರೀಕ್ಷೆ ಪ್ರಕಟವಾಗಿದೆ. ಗುರುಕುಲದ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ 55 ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆಗೆ( NIOS ಪಠ್ಯಕ್ರಮ) ಹಾಜರಾಗಿದ್ದು, ಎಲ್ಲಾ 55 ವಿದ್ಯಾರ್ಥಿಗಳು ಸಹ ಡಿಸ್ಟಿಂಕ್ಷನ್ (75% ಮೇಲೆ) ನಲ್ಲಿ ತೇರ್ಗಡೆಯಾಗಿದ್ದಾರೆ. ಮೂವರು ವಿದ್ಯಾರ್ಥಿಗಳು ಶೇಕಡಾ ನೂರರಷ್ಟು ಅಂಕ ಗಳಿಸಿದ್ದಾರೆ. ಡಾಟಾ ಎಂಟ್ರಿ ಮತ್ತು ಆಪರೇಷನ್ (DEO) ವಿದ್ಯಾರ್ಥಿಗಳಾದ ಸುನಿಲ್ ಹೆಗ್ಗರಡ್ಡಿ, ಕಿರಣ್ ಎಂ ಪಿ ಹಾಗೂ ಗಿರೀಶ್ ಕೆ ಅವರು ಶೇಕಡಾ ನೂರು ಅಂಕ ಗಳಿಸಿದ್ದಾರೆ. ಈ ಕುರಿತು ಮಾತನಾಡಿದ ಗುರುಕುಲಾಧ್ಯಕ್ಷ ಗೌರವ್ ಎಂ,…

Read More

ನವದೆಹಲಿ: ಭಾರತದ ಸಮಕಾಲೀನ ರಾಷ್ಟ್ರೀಯ ಗುರುತಿನೊಂದಿಗೆ ಸೇನಾ ಸಂಪ್ರದಾಯಗಳನ್ನು ಹೊಂದಾಣಿಕೆಗೊಳಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಅತ್ಯಂತ ಮಹತ್ವದ ಮತ್ತು ಆಡಳಿತಾತ್ಮಕ ಹೆಜ್ಜೆಯೊಂದನ್ನು ಇಟ್ಟಿದೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಹಲವು ಅಧಿಕೃತ ಉಡುಪು ನಿಯಮಾವಳಿಗಳು, ಸಮಾರಂಭದ ಆಚರಣೆಗಳು ಹಾಗೂ ವಸಾಹತುಶಾಹಿ ಕಾಲದ ಸಂಕೇತಗಳನ್ನು ಸಂಪೂರ್ಣವಾಗಿ ತೆಗೆದುಹಾಕುವ ವ್ಯಾಪಕ ಬದಲಾವಣೆಗಳನ್ನು ಸೇನೆ ಘೋಷಿಸಿದೆ. ಹೊಸದಾಗಿ ಜಾರಿಗೆ ತರಲಾದ ‘Army Uniforms-2026’ ಮಾರ್ಗಸೂಚಿಗಳ ಭಾಗವಾಗಿ ಈ ಸುಧಾರಣೆಗಳನ್ನು ತರಲಾಗಿದ್ದು, ಕಳೆದ ಸುಮಾರು 8 ವರ್ಷಗಳಲ್ಲಿ ಸೇನೆಯ ಉಡುಪು ನಿಯಮಾವಳಿಯಲ್ಲಿ ನಡೆದ ಮೊದಲ ಪ್ರಮುಖ ಪರಿಷ್ಕರಣೆ ಇದಾಗಿದೆ. ಹೊಸ ‘Army Uniforms–2026’ ನಿಯಮಾವಳಿಯ ಪ್ರಮುಖ ಅಂಶಗಳು: ಸಮಾರಂಭಿಕ ಕತ್ತಿಗಳ ಬಳಕೆಗೆ ಮಿತಿ: ಅತ್ಯಂತ ಗಮನಾರ್ಹ ಬದಲಾವಣೆಗಳಲ್ಲಿ ಒಂದಾಗಿ, ಸೇನಾ ಪೆರೇಡ್‌ಗಳ ವೇಳೆ ಪರಿಶೀಲನಾ ಅಧಿಕಾರಿಗಳು (Reviewing Officers) ಸಮಾರಂಭಿಕ ಕತ್ತಿಗಳನ್ನು (Ceremonial Swords) ಹೊತ್ತುಕೊಂಡು ಸಾಗುವ ಶತಮಾನಗಳ ಹಳೆಯ ಪದ್ಧತಿಯನ್ನು ನಿಲ್ಲಿಸಲು ನಿರ್ಧರಿಸಲಾಗಿದೆ. ಇನ್ಮುಂದೆ ಈ ಕತ್ತಿಗಳ ಬಳಕೆ ಕೇವಲ ಪೆರೇಡ್ ಕಮಾಂಡರ್‌ಗಳು, ಕಂಟಿಂಜೆಂಟ್…

Read More

ವಾಷಿಂಗ್ಟನ್/ಟೆಹ್ರಾನ್: ಕಳೆದ ಕೆಲವು ಸಮಯದಿಂದ ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕ ಮೂಡಿಸಿದ್ದ ಇರಾನ್ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಹಾಗೂ ಮಿಲಿಟರಿ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ಉಭಯ ದೇಶಗಳ ನಡುವೆ ಐತಿಹಾಸಿಕ ಶಾಂತಿ ಒಪ್ಪಂದ ಏರ್ಪಟ್ಟಿದ್ದು, ಇದರ ಬೆನ್ನಲ್ಲೇ ಜಾಗತಿಕ ತೈಲ ಸಾರಿಗೆಯ ಪ್ರಮುಖ ಹೆಬ್ಬಾಗಿಲಾಗಿರುವ ‘ಹೊರ್ಮುಝ್ ಜಲಸಂದಿ’ಯನ್ನು (Strait of Hormuz) ಮುಕ್ತ ವ್ಯಾಪಾರ ಮತ್ತು ಹಡಗುಗಳ ಸಂಚಾರಕ್ಕಾಗಿ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಯನ್ನು ದೂರ ಮಾಡಿರುವ ಈ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ. ಶಾಂತಿ ಒಪ್ಪಂದದ ಹಿನ್ನೆಲೆ: ದೀರ್ಘಾವಧಿಯ ರಾಜತಾಂತ್ರಿಕ ಮಾತುಕತೆಗಳು ಹಾಗೂ ಅಂತರರಾಷ್ಟ್ರೀಯ ಸಮುದಾಯದ ಸಂಧಾನದ ಪ್ರಯತ್ನಗಳ ಫಲವಾಗಿ ಈ ಮಹತ್ವದ ಒಪ್ಪಂದ ಸಾಧ್ಯವಾಗಿದೆ. ತೈಲ ಬೆಲೆ ಏರಿಕೆ, ಆರ್ಥಿಕ ದಿಗ್ಬಂಧನಗಳು ಮತ್ತು ಪ್ರಾದೇಶಿಕ ಭದ್ರತೆಯ ಮೇಲಿನ ಒತ್ತಡದಿಂದಾಗಿ ಉಭಯ ದೇಶಗಳು ಸಂಘರ್ಷದ ಹಾದಿ ಬಿಟ್ಟು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿವೆ. ಪರಸ್ಪರರ ಸಾರ್ವಭೌಮತ್ವವನ್ನು ಗೌರವಿಸುವುದು ಮತ್ತು ಪ್ರಾದೇಶಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು…

Read More

ಶಿವಮೊಗ್ಗ: ನೂರಾರು ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಉಳ್ಳೂರಿನ ಪ್ರತಿಷ್ಠಿತ ಸರ್ಕಾರಿ ಪ್ರೌಢಶಾಲೆಯಲ್ಲಿ ಭೀಕರ ವಿಧ್ವಂಸಕ ಕೃತ್ಯವೊಂದು ಬೆಳಕಿಗೆ ಬಂದಿದೆ. ಶಾಲೆಯ ಬೇಸಿಗೆ ರಜೆಯ ಅವಧಿಯನ್ನು ಬಳಸಿಕೊಂಡಿರುವ ಅಪರಿಚಿತ ಕಿಡಿಗೇಡಿಗಳು, ಶಾಲೆಯ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಶೌಚಾಲಯಕ್ಕೆ ನುಗ್ಗಿ ಅಲ್ಲಿನ ಪರಿಕರಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದಾರೆ. ಸುಮಾರು ಎರಡು ಲಕ್ಷ ರೂಪಾಯಿಗೂ ಅಧಿಕ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದ್ದು, ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಘಟನೆಯ ವಿವರ: ಬೇಸಿಗೆ ರಜೆಯ ನಂತರ ಇತ್ತೀಚೆಗಷ್ಟೇ ಶಾಲೆಗಳು ಪುನರಾರಂಭಗೊಂಡಿದ್ದವು. ಸಮವಸ್ತ್ರ ವಿತರಣೆಯ ಹಿನ್ನೆಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಶಾಲೆಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಹೆಣ್ಣು ಮಕ್ಕಳು ಶೌಚಾಲಯದ ಬಳಿ ಹೋಗಲು ಹಿಂಜರಿಯುತ್ತಿದ್ದನ್ನು ಗಮನಿಸಿದ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರಿಗೆ ವಿಷಯ ತಿಳಿಸಿದ್ದಾರೆ. ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶೌಚಾಲಯದ ಒಳಗಿನ ಭೀಕರ ದೃಶ್ಯ ಕಂಡುಬಂದಿದೆ.…

Read More

ಶಿವಮೊಗ್ಗ: ಮಳೆಗಾಲದಲ್ಲಿ ಸಂಭವಿಸಬಹುದಾದ ಯಾವುದೇ ರೀತಿಯ ಅವಘಡಗಳನ್ನು ಎದುರಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸನ್ನದ್ಧರಾಗಿರಬೇಕು. ಈ ತುರ್ತು ಪರಿಸ್ಥಿತಿಯಲ್ಲಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆ ಹಾಕದೆ ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದು ಸಾಗರ  ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕರೆಯಲಾಗಿದ್ದ ತಾಲ್ಲೂಕು ಮಟ್ಟದ ಅಧಿಕಾರಿಗಳ ಜಂಟಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮನೆ ಬಿದ್ದರೆ ಚೌಕಾಸಿ ಮಾಡದೆ ಪರಿಹಾರ ನೀಡಿ ಮಳೆ ಗಾಳಿಗೆ ಮನೆ ಕುಸಿದು ಬಿದ್ದರೆ ತಕ್ಷಣವೇ ತಹಶೀಲ್ದಾರ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಸೂಚಿಸಿದ ಶಾಸಕರು, “ಮನೆ ಕಳೆದುಕೊಂಡ ಬಡವರ ವಿಷಯದಲ್ಲಿ ಯಾವುದೇ ರೀತಿಯ ಚೌಕಾಸಿ ಮಾಡದೆ, ಅವರಿಗೆ ನಿಯಮಾನುಸಾರ ಸಿಗಬೇಕಾದ ಗರಿಷ್ಠ ಪರಿಹಾರವನ್ನು ತಲುಪಿಸಲು ಅಧಿಕಾರಿಗಳು ಮಾನವೀಯತೆಯಿಂದ ಸಹಕರಿಸಬೇಕು” ಎಂದರು.…

Read More

ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ಗ್ಯಾಂಗ್‌ನಿಂದ ನಡೆದಿದೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯ ವಿಚಾರಣೆಯು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ಇಂದು (ಸೋಮವಾರ) ತೀವ್ರ ಕುತೂಹಲದ ನಡುವೆ ಮುಂದುವರಿದಿದೆ. ವಿಚಾರಣೆ ವೇಳೆ ನ್ಯಾಯಾಲಯವು ಪ್ರಮುಖ ಆದೇಶವೊಂದನ್ನು ಹೊರಡಿಸಿದ್ದು, ಪ್ರಕರಣದ ತ್ವರಿತಗತಿಯ ವಿಚಾರಣೆಗೆ ಗ್ರೀನ್ ಸಿಗ್ನಲ್ ನೀಡಿದೆ. 13ನೇ ಸಾಕ್ಷಿಯ ಹೇಳಿಕೆ ದಾಖಲು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ನ್ಯಾಯಾಲಯವು 13ನೇ ಸಾಕ್ಷಿಯ ಮಹತ್ವದ ಹೇಳಿಕೆಯನ್ನು ದಾಖಲಿಸಿಕೊಂಡಿತು. ಈ ಸಂದರ್ಭದಲ್ಲಿ ಸಾಕ್ಷಿದಾರರ ಪಾಟೀಸವಾಲನ್ನು (Cross-examination) ಮುಂದೂಡಬೇಕೆಂದು ಆರೋಪಿಗಳ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು. ಆದರೆ, ಈ ಮನವಿಯನ್ನು ಕಡಾಖಂಡಿತವಾಗಿ ತಿರಸ್ಕರಿಸಿದ 59ನೇ ಸಿಸಿಹೆಚ್ ಕೋರ್ಟ್, ವಿಚಾರಣೆಯನ್ನು ಮುಂದೂಡಲು ನಿರಾಕರಿಸಿತು. ಪ್ರತಿದಿನ ಸಾಕ್ಷ್ಯ ವಿಚಾರಣೆಗೆ ಪ್ರಾಸಿಕ್ಯೂಷನ್ ಮನವಿ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಇನ್ಮುಂದೆ ಪ್ರತಿದಿನವೂ ಸಾಕ್ಷ್ಯ ವಿಚಾರಣೆ ನಡೆಸಬೇಕು ಎಂದು ಸರ್ಕಾರದ ಪರ ವಿಶೇಷ ಅಭಿಯೋಜಕರಾದ (SPP) ಪ್ರಸನ್ನ ಕುಮಾರ್ ಅವರು ನ್ಯಾಯಾಲಯಕ್ಕೆ ಬಲವಾದ ಮನವಿ ಸಲ್ಲಿಸಿದರು. ಕೊಲೆ ಪ್ರಕರಣದ…

Read More