Subscribe to Updates
Get the latest creative news from FooBar about art, design and business.
Author: kannadanewsnow09
ಬೆಂಗಳೂರು: ಕರ್ನಾಟಕದ ಸಾರಿಗೆ ಇಲಾಖೆಗೆ ಪ್ರಶಸ್ತಿಯ ಗರಿಮೆ ಮುಡಿಗೇರಿದೆ. ಪ್ರತಿಷ್ಠಿತ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025 ಪ್ರಶಸ್ತಿ ಲಭಿಸಿದೆ. ದಿನಾಂಕ: 16-12-2025 ರಂದು ನವದೆಹಲಿಯಲ್ಲಿ ಮೋಟಾರಿಂಗ್ ವರ್ಲ್ಡ್ ಗ್ರೀನ್ ಮೊಬಿಲಿಟಿ ಅವಾರ್ಡ್ಸ್-2025 ನ್ನು ಮೋಟಾರಿಂಗ್ ವರ್ಲ್ಡ್ ಮ್ಯಾಗಜಿನ್ ಆಫ್ ಡೆಲ್ಲಿ ಪ್ರೆಸ್ ಗ್ರೂಪ್ ರವರು ಆಯೋಜಿಸಿದ್ದು, ಸದರಿ ಪ್ರಶಸ್ತಿ ಸಮಾರಂಭದ ಮುಖ್ಯ ಅತಿಥಿಯಾಗಿ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯ, ನವದೆಹಲಿರವರು ಹಾಗೂ ಹಲವಾರು ಗಣ್ಯವ್ಯಕ್ತಿಗಳು ಭಾಗವಹಿಸಿಸಲಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಹವಾಮಾನ ನೀತಿ ತಜ್ಞ ಪ್ರಶಸ್ತಿಗಳನ್ನು ಆಯ್ಕೆ ಮಾಡಿದ್ದು, ಪ್ರಶಸ್ತಿ ಸಮಾರಂಭದಲ್ಲಿ ಕರ್ನಾಟಕ ರಾಜ್ಯವು ಒಟ್ಟು ನಾಲ್ಕು (4) ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ. ಪ್ರಶಸ್ತಿಗಳ ವಿವರವು ಕೆಳಕಂಡಂತಿದೆ:- 1) BEST STATE FOR TWO WHEELER EV ADOPTION (SILVER) ಕರ್ನಾಟಕ ರಾಜ್ಯವು ದ್ವಿಚಕ್ರ ವಿದ್ಯುತ್ ಚಾಲಿತ ವಾಹನಗಳ ನೋಂದಣಿ ಹಾಗೂ ವಿದ್ಯುತ್ತೀಕರಣದಲ್ಲಿ ಮೇಲುಗೈ ಸಾಧಿಸಿದ ಕಾರಣ. ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಗೆ…
ಬೆಂಗಳೂರು: ಬಾಣಸವಾಡಿ ಮತ್ತು ಎಸ್.ಎಂ.ವಿ.ಟಿ. ಬೆಂಗಳೂರು ನಿಲ್ದಾಣದಲ್ಲಿ ಕಾಮಗಾರಿಯ ನಿಮಿತ್ತ ರೈಲು ಸೇವೆಯಲ್ಲಿ ಈ ಕೆಳಗಿನ ಬದಲಾವಣೆಗಳು ಜಾರಿಗೆ ಬರಲಿವೆ: ರೈಲುಗಳ ರದ್ದತಿ: * ರೈಲು ಸಂಖ್ಯೆ 06527 ಬಂಗಾರಪೇಟೆ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮೆಮು ಸೇವೆಯನ್ನು ದಿನಾಂಕ 03.01.2026 ಮತ್ತು ದಿನಾಂಕ 04.01.2026 ರಂದು ರದ್ದುಗೊಳಿಸಲಾಗುತ್ತದೆ. * ರೈಲು ಸಂಖ್ಯೆ 06528 ಎಸ್.ಎಂ.ವಿ.ಟಿ. ಬೆಂಗಳೂರು – ಬಂಗಾರಪೇಟೆ ಮೆಮು ಸೇವೆಯನ್ನು ದಿನಾಂಕ 04.01.2026 ಮತ್ತು ದಿನಾಂಕ 05.01.2026 ರಂದು ರದ್ದುಗೊಳಿಸಲಾಗುತ್ತದೆ * ರೈಲು ಸಂಖ್ಯೆ 66576 ತುಮಕೂರು – ಬಾಣಸವಾಡಿ ಮೆಮು ಸೇವೆಯನ್ನು ದಿನಾಂಕ 02.01.2026 ಮತ್ತು ದಿನಾಂಕ 03.01.2026 ರಂದು ರದ್ದುಗೊಳಿಸಲಾಗುತ್ತದೆ * ರೈಲು ಸಂಖ್ಯೆ 66575 ಬಾಣಸವಾಡಿ – ತುಮಕೂರು ಮೆಮು ಸೇವೆಯನ್ನು ದಿನಾಂಕ 03.01.2026 ಮತ್ತು ದಿನಾಂಕ 05.01.2026 ರಂದು ರದ್ದುಗೊಳಿಸಲಾಗುತ್ತದೆ * ರೈಲು ಸಂಖ್ಯೆ 66563 ಯಶವಂತಪುರ – ಹೊಸೂರು ಮೆಮು, ರೈಲು ಸಂಖ್ಯೆ 66564 ಹೊಸೂರು- ಯಶವಂತಪುರ ಮೆಮು,…
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿ ನಾಳೆ ತುರ್ತು ವಿದ್ಯುತ್ ನಿರ್ವಹಣಾ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ಬೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಹೊನ್ನಾಳಿಯ ಬೆಸ್ಕಾಂ ಎಇಇ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೊನ್ನಾಳಿಯಲ್ಲಿರುವ 66 ಕೆ.ವಿ. ಶಕ್ತಿ ಪರಿವರ್ತಕ, 66 ಕೆವಿ ಸಿಟಿ 66ಕೆ.ವಿ. ಬ್ರೇಕರ್, 11 ಕೆ.ವಿ. ಬ್ರೇಕರ್ಗಳ ಮತ್ತು ಇನ್ನಿತರ ಉಪಕರಣಗಳ ತೈ-ಮಾಸಿಕ ನಿರ್ವಹಣೆ ಕೆಲಸಗಳಿಗೆ, ಹಾಟ್ ಸ್ಪಾಟ್ ಗಳನ್ನು ಸರಿಪಡಿಸಲು ಮತ್ತು ಕೇಂದ್ರದ ಡಿಸಿ ಗೌಂಡಿಂಗ್ ಅನ್ನು ಸರಿಪಡಿಸಲು ದಿನಾಂಕ: 30/12/2025 ರಂದು – ಬೆಳಿಗ್ಗೆ 10:30 ರಿಂದ ಸಂಜೆ 05:30 ರವರೆಗೆ 220 ೦ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ ಹೊನ್ನಾಳಿಯಲ್ಲಿನ ಎಲ್ಲಾ ಮಾರ್ಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬುದಾಗಿ ತಿಳಿಸಿದೆ. ಸದರಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ಕೈ-ಮಾಸಿಕ ನಿರ್ವಹಣೆಗಾಗಿ ಮಾರ್ಗಮುಕ್ತತೆ ಪಡೆಯಲು ಬೆ.ವಿ. ಕಂಪನಿ ಅವರಿಂದ ಅನುಮೋದನೆ…
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಏಕಾದಶಿ ದಿನದಂದು ಉಪವಾಸ ಮಾಡಿ ವಿಷ್ಣು ವನ್ನು ಆರಾಧಿಸಿದರೆ ಏಳೇಳು ಜನ್ಮಗಳ ಪಾಪ ಕಳೆದು, ಪಿತೃ ದೋಷ ನಿವಾರಣೆ ಆಗಿ ಮೋಕ್ಷ ಸಂಪಾದಿಸುವ ಪುಣ್ಯ ದಿನವೇ ವೈಕುಂಠ ಏಕಾದಶಿ. ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪ್ರವೇಶಿಸುವ ಮೊದಲು ಪ್ರತಿ ವರ್ಷ ಬರುವ ಈ ಏಕಾದಶಿಯನ್ನು “ವೈಕುಂಠ ಏಕಾದಶಿ” ಎಂದು ಕರೆಯಲಾ ಗುತ್ತದೆ ತಾಯಿ. ಇದು ಭಗವಾನ್ ಮಹಾವಿಷ್ಣು ನಿದ್ರೆಯಿಂದ ಎಚ್ಚರಾಗಿ ಮುಕ್ಕೋಟಿ ದೇವತೆಗಳೊಂದಿಗೆ ಗರುಡ ವಾಹನನಾಗಿ ಭೂಲೋಕಕ್ಕೆ ಬಂದು ಭಕ್ತರಿಗೆ ದರ್ಶನ ಕೊಡುವ ಪುಣ್ಯ ದಿನ. ಆದ್ದರಿಂದ ಏಕಾದಶಿಯನ್ನು ‘ಮುಕ್ಕೋಟಿ ಏಕಾದಶಿ’ ಎಂದು ಕರೆಯುತ್ತಾರೆ. ಈ ಶುಭದಿನ ಸ್ವರ್ಗದ ಬಾಗಿಲು ತೆಗೆದಿರುತ್ತದೆ ಎಂಬ ನಂಬಿಕೆ ಇದೆ. ವಿಶೇಷವಾಗಿ ಈ ‘ಏಕಾದಶಿ’ ಯಂದು ವಿಷ್ಣುಗೆ ಸಂಬಂಧಪಟ್ಟ ದೇವಾಲಯಗಳಲ್ಲಿ ಉತ್ತರ ದ್ವಾರಕ್ಕೆ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ಮಾಡುತ್ತಾರೆ. ಈ ಮೂಲಕ ಭಕ್ತರಿಗೆ ಉತ್ತರ ದ್ವಾರದ ಮೂಲಕ ಭಗವಂತನ ದರ್ಶನ ಕಲ್ಪಿಸಿರುತ್ತಾರೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ…
ಮಂಡ್ಯ: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸೋ ಕೃತ್ಯ ಎನ್ನುವಂತೆ ಬಟ್ಟೆ ತೊಳೆಯೋದಕ್ಕೆ ತೆರಳಿದ್ದಂತ ಮಹಿಳೆಯನ್ನು ಕೊಲೆ ಮಾಡಿರುವಂತ ಘಟನೆ ನಡೆದಿದೆ. ಈ ಕೃತ್ಯದ ಹಿಂದೆ ಚಿನ್ನಕ್ಕಾಗಿ ಮಹಿಳೆ ಕೊಲೆ ಮಾಡಿರುವಂತ ಶಂಕೆ ವ್ಯಕ್ತವಾಗಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪಾಲಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪಾಲಹಳ್ಳಿಯ ಮಮತಾ (35) ಮೃತ ಮಹಿಳೆಯಾಗಿದ್ದಾರೆ. ಬಟ್ಟೆ ತೊಳೆಯಲು ವರುಣಾ ನಾಲೆಗೆ ಮಮತಾ ತೆರಳಿದ್ದರು. ಪಾಲಹಳ್ಳಿ ಬಳಿಯ ಕ್ಯೂಟ್ ರೆಸಾರ್ಟ್ ಬಳಿಯ ವರುಣ ನಾಲೆಗೆ ಮಮತಾ ಹೋಗಿದ್ದರು. ಇಂತಹ ಮಮತಾ ಕಾಲುವೆಯಲ್ಲಿ ಕೊಲೆಯಾಗಿ ಮೃತಪಟ್ಟಿರುವ ರೀತಿಯಲ್ಲಿ ಶವ ಪತ್ತೆಯಾಗಿದೆ. ಶವದ ಮೈಯಲ್ಲಿದ್ದ ಚಿನ್ನದ ಸರ, ತಾಳಿಸರ, ಕಿವಿಯಲ್ಲಿದ್ದ ಓಲೆ ಬಲವಂತವಾಗಿ ಕಿತ್ತುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಟ್ಟೆ ತೊಳೆಯಲು ಹೋದವರು ಬರುವುದು ತಡವಾದ್ದರಿಂದ ಪತಿಯಿಂದ ಹುಡುಕಾಟದ ವೇಳೆಯಲ್ಲಿ ಮಮತಾ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಯಾರೋ ದುಷ್ಕರ್ಮಿಗಳು ಚಿನ್ನಕ್ಕಾಗಿ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ, ತನಿಖೆ ಕೈಗೊಂಡಿದ್ದಾರೆ. ಶ್ರೀರಂಗಪಟ್ಟಣ ಪೊಲೀಸ್…
ಬೆಂಗಳೂರು: ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವು ಸ್ವಾವಲಂಬನೆ ಸಾಧಿಸುವತ್ತ ಹೆಜ್ಜೆ ಇಟ್ಟಿದ್ದು, ಶೂನ್ಯ ಅಡಚಣೆಯೊಂದಿಗೆ ಗ್ರಾಹಕರಿಗೆ ವಿದ್ಯುತ್ ಪೂರೈಸುವ ಮೂಲಕ ಉತ್ಪಾದನೆ ಮತ್ತು ಸರಬರಾಜಿನಲ್ಲಿ ಸಮನ್ವಯ ಸಾಧಿಸಬೇಕು ಎಂದು ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಅವರು ಇಂಧನ ಇಲಾಖೆ ಇಂಜಿನಿಯರುಗಳಿಗೆ ಕರೆ ನೀಡಿದ್ದಾರೆ. ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಇಂಜಿನಿಯರುಗಳ ಸಂಘದ ವತಿಯಿಂದ ಸೋಮವಾರ ಸರ್ ಎಂ.ವಿ. ಸಭಾಂಗಣದಲ್ಲಿ ಆಯೋಜಿಸಿದ್ದ ಸಂಘದ ಸುವರ್ಣ ಮಹೋತ್ಸವ ಸಂಸ್ಮರಣಾ ಉಪನ್ಯಾಸ, 2026ರ ತಾಂತ್ರಿಕ ದಿನಚರಿ ಬಿಡುಗಡೆ ಹಾಗೂ ನಿವೃತ್ತ ಇಂಜಿನಿಯರುಗಳ ಸಂಘದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. “ಕೋವಿಡ್ ಬಳಿಕ ವಿದ್ಯುತ್ ಬೇಡಿಕೆ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾದಾಗ ಅಗತ್ಯ ವಿದ್ಯುತ್ ಪೂರೈಸಲು ನಮ್ಮಲ್ಲಿ ಯೋಜನೆಗಳಿರಲಿಲ್ಲ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಸಭೆ ನಡೆಸಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಅದರ ಪರಿಣಾಮ ರಾಜ್ಯದಲ್ಲಿ ವಿದ್ಯುತ್…
ನವದೆಹಲಿ: ಮೇ ತಿಂಗಳಲ್ಲಿ ನಡೆದ ಆಪರೇಷನ್ ಸಿಂಧೂರ್ ನಂತರ, ಭಾರತದ ನಿಖರ ದಾಳಿಗಳು ಪ್ರಮುಖ ಮಿಲಿಟರಿ ನೆಲೆಯ ಮೇಲೆ ಬೀರಿದ ಪರಿಣಾಮವನ್ನು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಬಹಿರಂಗವಾಗಿ ಪಾಕಿಸ್ತಾನ ಮತ್ತೊಮ್ಮೆ ಒಪ್ಪಿಕೊಂಡಿದೆ. ಪಾಕಿಸ್ತಾನದ ವಿದೇಶಾಂಗ ಸಚಿವ ಮತ್ತು ಉಪ ಪ್ರಧಾನಿ ಇಶಾಕ್ ದಾರ್ ಅವರು ಶನಿವಾರ ವರ್ಷಾಂತ್ಯದ ಪತ್ರಿಕಾಗೋಷ್ಠಿಯಲ್ಲಿ, ಭಾರತವು ರಾವಲ್ಪಿಂಡಿಯ ಚಕ್ಲಾಲಾ ಪ್ರದೇಶದಲ್ಲಿರುವ ನೂರ್ ಖಾನ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿದೆ ಎಂದು ದೃಢಪಡಿಸಿದರು. ದಾಳಿಯು ಸೇನಾ ನೆಲೆಗೆ ಮತ್ತು ಅಲ್ಲಿ ನೆಲೆಸಿದ್ದ ಗಾಯಗೊಂಡ ಸಿಬ್ಬಂದಿಗೆ ಹಾನಿಯನ್ನುಂಟುಮಾಡಿದೆ ಎಂದು ದಾರ್ ಒಪ್ಪಿಕೊಂಡರು. ವರದಿಗಾರರನ್ನುದ್ದೇಶಿಸಿ ಮಾತನಾಡಿದ ದಾರ್, ಭಾರತವು ಅಲ್ಪಾವಧಿಯಲ್ಲಿಯೇ ಪಾಕಿಸ್ತಾನದ ಭೂಪ್ರದೇಶದ ಮೇಲೆ ಅನೇಕ ಡ್ರೋನ್ ಆಕ್ರಮಣಗಳನ್ನು ನಡೆಸಿದೆ ಎಂದು ಹೇಳಿದರು, ಇದು ಕಾರ್ಯಾಚರಣೆಯ ಪ್ರಮಾಣವನ್ನು ಒತ್ತಿಹೇಳುತ್ತದೆ. ಅವರು (ಭಾರತ) ಪಾಕಿಸ್ತಾನದ ಕಡೆಗೆ ಡ್ರೋನ್ಗಳನ್ನು ಕಳುಹಿಸಿದ್ದಾರೆ. 36 ಗಂಟೆಗಳಲ್ಲಿ, ಕನಿಷ್ಠ 80 ಡ್ರೋನ್ಗಳನ್ನು ಕಳುಹಿಸಲಾಗಿದೆ… ನಾವು 80 ಡ್ರೋನ್ಗಳಲ್ಲಿ 79 ಡ್ರೋನ್ಗಳನ್ನು ತಡೆಹಿಡಿಯಲು ಸಾಧ್ಯವಾಯಿತು, ಮತ್ತು ಕೇವಲ ಒಂದು ಡ್ರೋನ್ ಮಾತ್ರ ಮಿಲಿಟರಿ…
ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕರ್ನಾಟಕ IG ಮತ್ತು ಡಿಜಿಪಿ ಖಡಕ್ ಆದೇಶವನ್ನು ಮಾಡಿದ್ದಾರೆ. ಈ ಕುರಿತಂತೆ ಸುತ್ತೋಲೆ ಹೊರಡಿಸಿದ್ದು, ಹೊಸ ವರ್ಷದ ಸಂಭ್ರಮಾಚರಣೆಯು ಮದ್ಯಪಾನದ ಪರಿಣಾಮವಾಗಿ ಜನಸಮೂಹದ ಮನಸ್ಥಿತಿಯು ತೀವ್ರಗೊಳ್ಳುವ ಸಾಧ್ಯತೆ ಇರುತ್ತದೆ. ಮದ್ಯಪಾನವು ಜನರ ವಿವೇಕಶಕ್ತಿಯನ್ನು ದುರ್ಬಲಗೊಳಿಸುತ್ತದೆ ಹಾಗೂ ಸಂಕೋಚತಾ/ಹಿಂಜರಿಕಾ ಮನೋಭಾವವನ್ನು ಮೀರುವಂತೆ ಮಾಡುತ್ತದೆ. ಕೌಂಟ್ಡೌನ್ಗಳು ಮತ್ತು ಸಂಭ್ರಮದ ಕ್ಷಣಗಳಿಂದ ಉಂಟಾಗುವ ಉಲ್ಲಾಸವು ಜನಸಮೂಹದಲ್ಲಿ ಸಾಮೂಹಿಕ ಪ್ರೇರೇಪಣೆಯನ್ನು ಸೃಷ್ಟಿಸಿ, ದಟ್ಟ ಗುಂಪಿನೊಳಗಿರುವ ಕಾರಣ ಯಾವ ನಡೆಗೂ ಅಪಾಯವಿಲ್ಲವೆಂಬ ತಪ್ಪು ಕಲ್ಪನೆಯನ್ನು ಉಂಟುಮಾಡುತ್ತದೆ ಎಂದಿದ್ದಾರೆ. ವೇದಿಕೆಗಳಲ್ಲಿ ಜನಸ್ತೋಮದ ಹರಿವು ಅಥವಾ ಪಟಾಕಿ ಸಿಡಿಸುವಂತಹ ಪ್ರದರ್ಶನಗಳು ಮುಂತಾದ ಹಲವು ಕಾರಣಗಳಿಂದಾಗಿ ಅಪ್ರಜ್ಞಾತ್ಮಕ ವರ್ತನೆಗಳು ಕಂಡುಬರುತ್ತವೆ. ಜನಸಮೂಹದ ಹರಿವನ್ನು ಒಮ್ಮೆಲೇ ಪ್ರೇರೇಪಿಸಿ ಅಪಾಯಕರ ಅಲೆಗಳಂತೆ ರೂಪುಗೊಳ್ಳಬಹುದಾದಂತಹ ಸಂಗೀತದ ತೀವ್ರತೆಯ ಘಟನಾವಳಿಗಳನ್ನು ಪೊಲೀಸ್ ಅಧಿಕಾರಿಗಳು ಗಮನಿಸಬೇಕಿದೆ. ಪಟಾಕಿ ಸಿಡಿಯುವಲ್ಲಿ ವಿಳಂಬವಾದರೆ ನಿರಾಶೆ ಉಂಟಾಗಿ, ಜನಸಮೂಹದ ಸಂಭ್ರಮವು ತಕ್ಷಣವೇ ಅಸಹನೆ ಮತ್ತು ಕೋಪಕ್ಕೆ ತಿರುಗುವ…
ಬೆಂಗಳೂರು: ಕನ್ನಡ ಪರ ಹೋರಾಟಗಾರರ ಮೇಲೆ ಇರುವಂತ ಕೇಸ್ ಗಳನ್ನು ವಾಪಾಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಘೋಷಣೆ ಮಾಡಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವಂತ ಜನರಾಜ್ಯೋತ್ಸವ-2025 ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದಂತ ಅವರು, ಕನ್ನಡ ಪರ ಹೋರಾಟಗಾರರ ವಿರುದ್ಧದ ಕೇಸ್ ವಾಪಾಸ್ ಪಡೆಯಲಾಗುತ್ತದೆ. ಕೇಸ್ ವಾಪಾಸ್ ಪಡೆಯುವ ಕುರಿತಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಜೊತೆಗೆ ಚರ್ಚಿಸುತ್ತೇನೆ ಎಂದರು. https://kannadanewsnow.com/kannada/accused-arrested-for-sexually-harassing-a-young-woman-at-a-mall-in-bengaluru/ https://kannadanewsnow.com/kannada/newborn-baby-found-behind-college-in-bengaluru/
ನವದೆಹಲಿ: ಈ ತಿಂಗಳ ಆರಂಭದಲ್ಲಿ ಬಹ್ರೇನ್ನಲ್ಲಿ ನಡೆದ ಖಾಸಗಿ ಪಂದ್ಯಾವಳಿಯಲ್ಲಿ ಭಾರತೀಯ ಜೆರ್ಸಿ ಧರಿಸಿ ಭಾರತ ಸಂಬಂಧಿತ ತಂಡವನ್ನು ಪ್ರತಿನಿಧಿಸುತ್ತಿದ್ದ ಅಂತಾರಾಷ್ಟ್ರೀಯ ಆಟಗಾರ ಉಬೈದುಲ್ಲಾ ರಜಪೂತ್ ಅವರ ಮೇಲೆ ಪಾಕಿಸ್ತಾನ ಕಬಡ್ಡಿ ಫೆಡರೇಶನ್ (ಪಿಕೆಎಫ್) ಅನಿರ್ದಿಷ್ಟಾವಧಿ ನಿಷೇಧ ಹೇರಿದೆ. ಶನಿವಾರ ನಡೆದ ಫೆಡರೇಶನ್ನ ತುರ್ತು ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಪಿಕೆಎಫ್ ಅಥವಾ ಸಂಬಂಧಿತ ಅಧಿಕಾರಿಗಳಿಂದ ಕಡ್ಡಾಯ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್ಒಸಿ) ಪಡೆಯದೆ ರಜಪೂತ್ ವಿದೇಶ ಪ್ರವಾಸ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಬೈದುಲ್ಲಾ ರಜಪೂತ್ ಅನುಮತಿ ಇಲ್ಲದೆ ಭಾಗವಹಿಸಿದ್ದಲ್ಲದೆ, ಭಾರತಕ್ಕೆ ಸಂಬಂಧಿಸಿದ ತಂಡಕ್ಕಾಗಿ ಆಡಿದ್ದಾರೆ, ಅದರ ಜೆರ್ಸಿಯನ್ನು ಧರಿಸಿದ್ದಾರೆ ಮತ್ತು ಪಂದ್ಯದ ಗೆಲುವಿನ ನಂತರ ಭಾರತದ ಧ್ವಜವನ್ನು ತಮ್ಮ ಹೆಗಲ ಮೇಲೆ ಸುತ್ತಿಕೊಂಡಿದ್ದಾರೆ ಎಂದು ಪಿಕೆಎಫ್ ಕಾರ್ಯದರ್ಶಿ ರಾಣಾ ಸರ್ವರ್ ದೃಢಪಡಿಸಿದ್ದಾರೆ. ಸಮಿತಿಯ ಮುಂದೆ ಶಿಸ್ತು ಕ್ರಮವನ್ನು ಪ್ರಶ್ನಿಸುವ ಹಕ್ಕು ರಜಪೂತ್ಗೆ ಇದೆ ಎಂದು ಸರ್ವರ್ ಹೇಳಿದರು. ಜಿಸಿಸಿ ಕಪ್ನಲ್ಲಿ ಉಬೈದುಲ್ಲಾ ರಜಪೂತ್ ಭಾರತೀಯ…














