Author: kannadanewsnow09

ಶಿವಮೊಗ್ಗ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಸಾಗರದ ಮಹಾಗಣಪತಿ ದೇವಸ್ಥಾನ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಹಾಗಣಪತಿ ದೇವಸ್ಥಾನದ ಮುಖಮಂಟಪದ ಬಳಿಯ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ (EO) ಪ್ರಮೀಳಾ ಕುಮಾರಿ ತಿಳಿಸಿದ್ದಾರೆ. ​ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಗಣಪತಿ ರಥೋತ್ಸವದ ನಂತರ ನಡೆಯುವ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ನೇರವಾಗಿ ಪ್ರಸಾದ ಸ್ವೀಕರಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಣಪತಿ ದೇವಾಲಯದ ಎದುರಿನ ಮುಖಮಂಟಪ ಜಾಗದಲ್ಲಿ ಯಾವುದೇ ಮಳಿಗೆಗಳಿಗೆ ಅವಕಾಶ ನೀಡಬಾರದೆಂದು ಮೊದಲೇ ತೀರ್ಮಾನಿಸಲಾಗಿತ್ತು ಎಂದರು.. ​ಇಓ ಮಾತಿನ ಮುಖ್ಯಾಂಶಗಳು: ​ಅನಧಿಕೃತ ಮಳಿಗೆ ತೆರವು: ಸಮಿತಿಯ ನಿರ್ಧಾರದ ಹೊರತಾಗಿಯೂ ಕೆಲವು ಮೂರನೇ ವ್ಯಕ್ತಿಗಳು ಈ ಸ್ಥಳದಲ್ಲಿ ಅಂಗಡಿ ಹಾಕಲು ಅವಕಾಶ ನೀಡಿದ್ದರು. ಇದು ಗಮನಕ್ಕೆ ಬಂದ ತಕ್ಷಣ ಮಳಿಗೆದಾರರೊಂದಿಗೆ ಮಾತನಾಡಿ, ಅವರ ಸಹಕಾರದೊಂದಿಗೆ ಜಾಗವನ್ನು ತೆರವುಗೊಳಿಸಲಾಗಿದೆ. ​ಭಕ್ತರ ಹಿತವೇ ಮುಖ್ಯ: ಅನ್ನ ಸಂತರ್ಪಣೆಗೆ ಬರುವ ಸಾವಿರಾರು ಭಕ್ತರಿಗೆ ಯಾವುದೇ ಅಡಚಣೆಯಾಗಬಾರದು ಎಂಬ…

Read More

ಶಿವಮೊಗ್ಗ: ಜ್ಞಾನದ ದೇಗುಲವೆಂದು ಕರೆಯಲ್ಪಡುವ ಸಾಗರದ ಶೆಡ್ತೀಕೆರೆ ಶಾಲೆಯ ಆವರಣದಲ್ಲಿ ಮಗುವಿನ ಮೇಲೆ ಶಿಕ್ಷಕರಿಂದಲೇ ಸಮೂಹ ಹಲ್ಲೆ ನಡೆದಿದೆ ಎನ್ನಲಾದ ಘಟನೆ ಮತ್ತು ಅದರ ನಂತರದ ಬೆಳವಣಿಗೆಗಳು ಇಡೀ ಶಿಕ್ಷಣ ಇಲಾಖೆಯ ಕಾರ್ಯವೈಖರಿಯನ್ನು ಸಂಶಯದಿಂದ ನೋಡುವಂತೆ ಮಾಡಿದೆ. ಸಾಗರ ತಾಲ್ಲೂಕಿನ ಶೇಡ್ತಿಕೇರಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ ಎನ್ನಲಾದ ಈ ಘಟನೆ, ವ್ಯವಸ್ಥೆಯು ಹೇಗೆ ಸಂತ್ರಸ್ತ ಮಗುವನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಆ ಬಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಜಿ.ಟಿ ಸತ್ಯನಾರಾಯಣ ಅವರು ಸೋಷಿಯಲ್ ಮೀಡಿಯಾದಲ್ಲಿ ಎತ್ತಿರುವ ಪ್ರಶ್ನೆಗಳು ಮುಂದಿದೆ ಓದಿ.. ​ವ್ಯವಸ್ಥಿತ ಸಂಚಿನ ರೂಪವೇ ಈ ‘ಸಭಾ ನಡಾವಳಿ’? ​ಶಾಲೆಯಲ್ಲಿ ಮಗುವಿನ ಮೇಲೆ ಹಲ್ಲೆ ನಡೆದು, ಆ ಮಗು ದೈಹಿಕ ಮತ್ತು ಮಾನಸಿಕ ನೋವಿನಿಂದ ನರಳುತ್ತಿರುವಾಗ, ಆತನಿಗೆ ಮತ್ತು ಆತನ ಕುಟುಂಬಕ್ಕೆ ಧೈರ್ಯ ತುಂಬಬೇಕಾದ ಶಿಕ್ಷಣ ಇಲಾಖೆ ಮತ್ತು ಎಸ್‌ಡಿಎಂಸಿ (SDMC) ಪದಾಧಿಕಾರಿಗಳು ಮಾಡಿದ್ದೇನು? ಲಭ್ಯವಿರುವ ಸಭಾ ನಡಾವಳಿಗಳನ್ನು ಗಮನಿಸಿದರೆ, ಅಲ್ಲಿ ನಡೆದಿದ್ದು…

Read More

ಭಕ್ತರ ಮನದಲ್ಲಿ ರಾಘವೇಂದ್ರ ಸ್ವಾಮಿಗಳ ಜೀವನ ಚರಿತ್ರೆ ನಿಮಗೆ ಗೊತ್ತಾ….!! 431 ನೇ ವರ್ಷದ ರಾಯರ ವರ್ಧಂತಿ ಉತ್ಸವ ಪ್ರಯುಕ್ತ: ರಾಘವೇಂದ್ರ ತಮಿಳುನಾಡಿನ ಭುವನಿಗಿರಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಅದ್ವೈತಿ ಗಳಾದ ತಿಮ್ಮಣ್ಣ ಭಟ್ಟರು ಮತ್ತು ಗೋಪಿಕಾಂಬೆ.‌ ಶ್ರೀ ವೆಂಕಟೇಶ್ವರನ ಅನುಗ್ರಹದಿಂದ ಎರಡನೇ ಮಗುವಾದ ಕಾರಣ ‘ವೆಂಕಟನಾಥ’ ಎಂದು ಹೆಸರಿಟ್ಟರು. ಮಗು ಹುಟ್ಟಿದಾಗಲೇ ಮನೆಯಲ್ಲಿ ದೈವಾನುಗ್ರಹದ ಅನುಭವವಾಯಿತು. ಬಾಲ್ಯದಲ್ಲಿ ಅಪಾರ ಬುದ್ಧಿವಂತನಾಗಿದ್ದು, ತಂದೆಯಿಂದ ಆರಂಭವಾದ ಪ್ರಾಥಮಿಕ ಶಿಕ್ಷಣದಲ್ಲಿ ವೇದಪಾಠಗಳನ್ನು ಮರೆಯದಂತೆ ಅಭ್ಯಾಸ ಒಮ್ಮೆ ಕೇಳಿದ ಪಾಠವನ್ನು ತಪ್ಪದೇ ಹೇಳುತ್ತಿದ್ದ. ಆದರೆ ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡರು. ತಾಯಿ ಮತ್ತು ಅಣ್ಣನ ವಾತ್ಸಲ್ಯದಲ್ಲಿ ಬೆಳೆದರು. ಕುಟುಂಬದ ಹೊಣೆಗಾರಿಕೆ ಹೆಚ್ಚಾಯಿತು. ನಂತರ ತಮಿಳುನಾಡಿನ ಮಧುರೈ ನಲ್ಲಿದ್ದು ಅಕ್ಕ ಗೋಪಿಕಾಂಬ ಮನೆಗೆ ಬಂದರು. ಭಾವ ಲಕ್ಷ್ಮೀನರಸಿಂಹಾಚಾರ್ಯರ ಆಶ್ರಯದಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಿ ದರು.‌ ಸಂಗೀತ- ವ್ಯಾಕರಣ- ನ್ಯಾಯ- ಮೀಮಾಂಸ- ತರ್ಕಶಾಸ್ತ್ರ, ಸುಲಭವಾಗಿ ಕರಗತವಾಗಿತ್ತು. ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕುಂಭಕೋಣಂಗೆ ಬಂದರು. ಇಲ್ಲಿ ಯತಿವರ್ಯರಾದ…

Read More

ಶಿವಮೊಗ್ಗ: ಶಿಕ್ಷಕರು ವಿದ್ಯಾರ್ಥಿಯೊಬ್ಬನ ಭವಿಷ್ಯ ರೂಪಿಸಬೇಕಿದ್ದವು. ಬೆಳೆಯುವ ಸಿರಿ ಮೊಳೆಯೊಡೆದು ಹೆಮ್ಮರವಾಗಿ ತಿದ್ದಿ ತೀಡಬೇಕಾದವರು. ಆ ಕೆಲಸ ಮಾಡದೇ ಹಾಗೆ ಮಾಡಿದ, ಹೀಗೆ ಮಾಡಿ ಎಂಬ ಸಬೂಬು ಹೇಳಿಕೊಂಡು ಇಡೀ ರಾಜ್ಯವೇ ತಲೆ ತಗ್ಗಿಸೋ ರೀತಿಯಲ್ಲಿ ಬಾಸುಂಡೆ ಬರುವಂತ, ರಕ್ತ ಬರುವಂತೆ, ಚರ್ಮ ಸುಲಿದು ಬರುವಂತೆ ಹೊಡೆದಂತ ಘಟನೆ ಸಾಗರದ ಶೆಡ್ತೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿತ್ತು. ಈ ಅಮಾನುಷ ಕೃತ್ಯ ಎಸಗಿದೆ ಓರ್ವ ಶಿಕ್ಷಕನ ವಿರುದ್ಧ ಇಲಾಖೆ ಅಮಾನತಿನಂತ ಕ್ರಮ ಜರುಗಿಸಿದೆ. ಆದರೇ ಇನ್ನೂ ಇಬ್ಬರು ಶಿಕ್ಷಕರ ಮೇಲೆ ಇದೇ ಆರೋಪ ಕೇಳಿ ಬಂದಿದೆ. ಆದರೇ ತಿದ್ದಿ ಬುದ್ದಿ ಹೇಳಿ ಬದಲಾಯಿಸಬೇಕಿದ್ದ ಶಿಕ್ಷಕರು ಮಾತ್ರ, ಈಗ ತಮ್ಮ ತಪ್ಪು ಮುಚ್ಚಿಡಲು ವಿದ್ಯಾರ್ಥಿಗೆ ಬ್ಯಾಡ್ ಕ್ಯಾರೆಕ್ಟರ್ ಪಟ್ಟ ಕಟ್ಟುತ್ತಾ ಸಾಗಿದ್ದಾರೆ. ಛೇ..! ಇವರೆಂಥಾ ಶಿಕ್ಷಕರು ಎಂಬುದು ಪೋಷಕರ ಕಿಡಿ ನುಡಿಯಾಗಿದೆ. ಶಿಕ್ಷಕರಾದವರು ಸಮ್ಯಮ, ತಾಳ್ಮೆ, ಕ್ಷಮಾ ಗುಣದ ಜೊತೆಗೆ ವಿದ್ಯಾರ್ಥಿಯೊಬ್ಬನ ಮನಸ್ಸನ್ನೇ ಪರಿವರ್ತಿಸುವ ಮನೋವಿಜ್ಞಾನ ಓದಿದ ಜ್ಞಾನಿಯಾದವರು. ಇಂತಹ ಜ್ಞಾನಿಯಾದ…

Read More

ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಕ-ಯುವತಿಯರಿಗೆ ಸಿಹಿಸುದ್ದಿ ಸಿಕ್ಕಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 56,432 ನೇರ ನೇಮಕಾತಿ ಹುದ್ದೆಗಳನ್ನು ಮುಂದಿನ 30 ದಿನಗಳಲ್ಲಿ ಭರ್ತಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ಆದೇಶಿಸಿದೆ. ಈ ಕುರಿತು ಶಾಸಕ ರವಿಕುಮಾರ್ ಗೌಡ (ಗಣಿಗ) ಅವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ. ವಯೋಮಿತಿಯಲ್ಲಿ ಭಾರಿ ಸಡಿಲಿಕೆ: ನೇಮಕಾತಿ ವಿಳಂಬದಿಂದ ತೊಂದರೆ ಅನುಭವಿಸುತ್ತಿರುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಸರ್ಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ. 31.12.2027ರವರೆಗೆ ಹೊರಡಿಸುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗುವಂತೆ, ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆ ನೀಡಲಾಗಿದೆ. ನೇಮಕಾತಿ ಪ್ರಕ್ರಿಯೆಗೆ ಚಾಲನೆ: ಮೀಸಲಾತಿ ಹೆಚ್ಚಳದ ವಿಚಾರವಾಗಿ ನ್ಯಾಯಾಲಯದಲ್ಲಿದ್ದ ಕಾನೂನು ತೊಡಕುಗಳಿಂದಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಆದರೆ ಈಗ ಸರ್ಕಾರವು ಹಳೆಯ 1995ರ ಆದೇಶದಂತೆ (ಶೇ. 50 ಮೀಸಲಾತಿ) ನೇಮಕಾತಿ ಮುಂದುವರಿಸಲು ನಿರ್ಧರಿಸಿದೆ. ಆದಾಗ್ಯೂ, ಭವಿಷ್ಯದಲ್ಲಿ ನ್ಯಾಯಾಲಯ ನೀಡುವ ಅಂತಿಮ ಆದೇಶಕ್ಕೆ…

Read More

ಬೊಗೋಟಾ: ಕೊಲಂಬಿಯಾದಲ್ಲಿ 110 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಮಿಲಿಟರಿ ಸಾರಿಗೆ ವಿಮಾನವೊಂದು ಟೇಕಾಫ್ ಆಗುವ ಸಮಯದಲ್ಲಿ ಪತನಗೊಂಡಿರುವ ಆಘಾತಕಾರಿ ಘಟನೆ ಸೋಮವಾರ (ಮಾರ್ಚ್ 23, 2026) ನಡೆದಿದೆ. ​ಘಟನೆಯ ವಿವರಗಳು: ​ವಿಮಾನ: ಲಾಕ್‌ಹೀಡ್ ಮಾರ್ಟಿನ್ ಹರ್ಕ್ಯುಲಸ್ C-130 (Lockheed Martin Hercules C-130). ​ಸ್ಥಳ: ಕೊಲಂಬಿಯಾದ ದಕ್ಷಿಣ ಭಾಗದ ಅಮೆಜಾನ್ ಪ್ರದೇಶದಲ್ಲಿರುವ ‘ಪೋರ್ಟೊ ಲೆಗುಯಿಜಾಮೊ’ (Puerto Leguizamo) ಬಳಿ ಈ ಅಪಘಾತ ಸಂಭವಿಸಿದೆ. ​ಪ್ರಯಾಣಿಕರು: ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ವಿಮಾನದಲ್ಲಿ ಸುಮಾರು 110 ಸೈನಿಕರಿದ್ದರು ಎಂದು ತಿಳಿದುಬಂದಿದೆ. ​ಕಾರಣ: ವಿಮಾನವು ರನ್‌ವೇಯಿಂದ ಮೇಲಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ತಪ್ಪಿ ಪತನಗೊಂಡಿದೆ ಎನ್ನಲಾಗಿದೆ. ​ಪ್ರಸ್ತುತ ಸ್ಥಿತಿ: ಕೊಲಂಬಿಯಾದ ರಕ್ಷಣಾ ಸಚಿವ ಪೆಡ್ರೊ ಸ್ಯಾಂಚೆಜ್ ಅವರು ಘಟನೆಯನ್ನು ಖಚಿತಪಡಿಸಿದ್ದು, ವಿಮಾನವು ಸೈನಿಕರ ವರ್ಗಾವಣೆ ಪ್ರಕ್ರಿಯೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಅಪಘಾತದಲ್ಲಿ ಸಂಭವಿಸಿದ ಸಾವು-ನೋವುಗಳ ನಿಖರ ಸಂಖ್ಯೆ ಮತ್ತು ತಾಂತ್ರಿಕ ಕಾರಣಗಳ ಬಗ್ಗೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು…

Read More

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ನಡೆದ ಎರಡು ಬೈಕ್‌ಗಳ ನಡುವಿನ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಂಜಿನಿಯರ್ ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಘಟನೆಯ ವಿವರ: ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಸಮೀಪ ಈ ಅಪಘಾತ ಸಂಭವಿಸಿದೆ. ಮೃತ ಇಂಜಿನಿಯರ್ ಅವರನ್ನು ಹರೀಶ್ (26) ಎಂದು ಗುರುತಿಸಲಾಗಿದ್ದು, ಇವರು ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಹರೀಶ್ ಅವರು ತಮ್ಮ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಮತ್ತೊಂದು ಬೈಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಹರೀಶ್ ಅವರ ತಲೆಗೆ ಗಂಭೀರ ಪೆಟ್ಟಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಪೊಲೀಸ್ ತನಿಖೆ: ಅಪಘಾತದಲ್ಲಿ ಮತ್ತೊಂದು ಬೈಕ್ ಸವಾರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. https://kannadanewsnow.com/kannada/epfo-to-clear-rs-10181-crore-unclaimed-balance-via-new-auto-settlement-feature-for-inactive-accounts/ https://kannadanewsnow.com/kannada/epfo-to-clear-rs-10181-crore-unclaimed-balance-via-new-auto-settlement-feature-for-inactive-accounts/

Read More

ಶಿವಮೊಗ್ಗ: ಶಿಕ್ಷಕ ಎಂದರೆ ವಿದ್ಯಾರ್ಥಿಯ ಪಾಲಿಗೆ ಕತ್ತಲೆಯಲ್ಲಿ ದಾರಿದೀಪವಾಗಬೇಕಾದವನು. ಬೆಳೆಯುವ ಸಿರಿಯನ್ನು ತಿದ್ದಿ ತೀಡಿ ಹೆಮ್ಮರವನ್ನಾಗಿಸಬೇಕಾದ ಗುರುಗಳು ಇಂದು ಅಕ್ಷರಶಃ ರಾಕ್ಷಸರಂತೆ ವರ್ತಿಸುತ್ತಿರುವುದು ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ. ಸಾಗರ ತಾಲೂಕಿನ ಶೆಡ್ತೀಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯ ಬಾಲಕ ಸುಶ್ರುತನ ಮೇಲೆ ನಡೆದ ಅಮಾನಾನುಷ ಹಲ್ಲೆ ಹಾಗೂ ಅದರ ಬೆನ್ನಲ್ಲೇ ಶಿಕ್ಷಕರು ನಡೆಸುತ್ತಿರುವ ‘ಚಾರಿತ್ರ್ಯ ವಧೆ’ಯ ರಾಜಕೀಯ ಈಗ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ. ರಕ್ತ ಒಸರುವಂತೆ ಹಲ್ಲೆ: ಇದೇನಾ ನೀವು ಕಲಿತ ಮನೋವಿಜ್ಞಾನ? ಕಳೆದ ಮಾರ್ಚ್ 12ರಂದು ಕ್ಷುಲ್ಲಕ ಕಾರಣಗಳಿಗಾಗಿ ಮುಖ್ಯ ಶಿಕ್ಷಕ ಸೇರಿದಂತೆ ಮೂವರು ಶಿಕ್ಷಕರು ಸೇರಿ ಬಾಲಕ ಸುಶ್ರುತನನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ವಿದ್ಯಾರ್ಥಿಯ ಚರ್ಮ ಸುಲಿದು ಬರುವಂತೆ, ರಕ್ತ ಹೊರಬರುವಂತೆ, ಕೈಕಾಲುಗಳಲ್ಲಿ ಬಾಸುಂಡೆ ಮೂಡುವಂತೆ ಹೊಡೆದ ಆ ದೃಶ್ಯಗಳನ್ನು ಕಂಡರೆ ಎಂತಹ ಕಟುಕನಿಗೂ ಕಣ್ಣೀರು ಬರುತ್ತದೆ. ಶಿಕ್ಷಕರಾಗಲು ಸೈಕಾಲಜಿ (ಮನೋವಿಜ್ಞಾನ) ಓದಿರುವ ಇವರಿಗೆ, ಒಬ್ಬ 7ನೇ ತರಗತಿಯ ಬಾಲಕನಿಗೆ ತಿಳಿ ಹೇಳಿ ಬದಲಾಯಿಸುವ ತಾಳ್ಮೆ…

Read More

ಬಾಗಲಕೋಟೆ: ಏಪ್ರಿಲ್ 9ರಂದು ನಡೆಯಲಿರುವ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರು ಇಂದು ತಮ್ಮ ಅಧಿಕೃತ ಆಸ್ತಿ ವಿವರಗಳನ್ನು ಅಫಿಡವಿಟ್ ಮೂಲಕ ಘೋಷಿಸಿಕೊಂಡಿದ್ದಾರೆ. ಮಾಜಿ ಸಚಿವ ಹೆಚ್.ವೈ. ಮೇಟಿ ಅವರ ಪುತ್ರರಾಗಿರುವ ಉಮೇಶ್ ಮೇಟಿ ಅವರು ಕೋಟ್ಯಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ. ಉಮೇಶ್ ಮೇಟಿ ಅವರ ಆಸ್ತಿ ವಿವರ: ಸ್ಥಿರಾಸ್ತಿ: ಉಮೇಶ್ ಮೇಟಿ ಅವರ ಹೆಸರಿನಲ್ಲಿರುವ ಮನೆ, ನಿವೇಶನ ಮತ್ತು ಜಮೀನಿನ ಒಟ್ಟು ಮೌಲ್ಯ 5.30 ಕೋಟಿ ರೂಪಾಯಿ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ. ಚರಾಸ್ತಿ: 200 ಗ್ರಾಂ ಚಿನ್ನಾಭರಣ ಸೇರಿದಂತೆ ಇವರ ಚರಾಸ್ತಿಯ ಒಟ್ಟು ಮೌಲ್ಯ 85.03 ಲಕ್ಷ ರೂಪಾಯಿಗಳಾಗಿವೆ. ನಗದು ಮತ್ತು ವಾಹನ: ಉಮೇಶ್ ಮೇಟಿ ಅವರ ಬಳಿ 21.49 ಲಕ್ಷ ರೂಪಾಯಿ ನಗದು ಹಣವಿದೆ. ಇನ್ನು ವಾಹನಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಕಂಪನಿಯ ಮೂರು ಕಾರುಗಳು ಮತ್ತು ಒಂದು ದ್ವಿಚಕ್ರ ವಾಹನ ಇರುವುದಾಗಿ ಘೋಷಿಸಿದ್ದಾರೆ. ಸಾಲ:…

Read More

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇನ್ನು ಮುಂದೆ ವಿದ್ಯುನ್ಮಾನ ಮತಯಂತ್ರಗಳ (EVM) ಬದಲಿಗೆ ಹಳೆಯ ಮಾದರಿಯ ಮತಪತ್ರಗಳನ್ನು (Ballot Paper) ಬಳಸಲು ಅವಕಾಶ ನೀಡುವ ‘ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ವಿಧೇಯಕ’ವು ವಿಧಾನಸಭೆಯಲ್ಲಿ ತೀವ್ರ ಗದ್ದಲದ ನಡುವೆ ಅಂಗೀಕಾರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಮಂಡಿಸಿದ ಈ ವಿಧೇಯಕವು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ವಾಕ್ಸಮರಕ್ಕೆ ಕಾರಣವಾಯಿತು. ಮಸೂದೆಯನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಸೂದೆಯ ಪ್ರತಿಯನ್ನು ಹರಿದು ಹಾಕಿ ಸದನದಿಂದ ಹೊರನಡೆದರು. ಸರ್ಕಾರದ ವಾದ: ಇವಿಎಂ ಮೇಲೆ ನಂಬಿಕೆ ಕುಂದುತ್ತಿದೆ ಮಸೂದೆಯ ಪರವಾಗಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇವಿಎಂ ಪ್ರಕ್ರಿಯೆಯ ಬಗ್ಗೆ ದೇಶಾದ್ಯಂತ ಅನುಮಾನಗಳು ವ್ಯಕ್ತವಾಗುತ್ತಿವೆ ಎಂದು ಸಮರ್ಥಿಸಿಕೊಂಡರು. ಮತದಾನದ ವ್ಯತ್ಯಾಸ: ಮಹಾರಾಷ್ಟ್ರ ಚುನಾವಣೆಯಲ್ಲಿ ಸಂಜೆ 5 ಗಂಟೆಗೆ ಶೇ. 58.22 ರಷ್ಟಿದ್ದ ಮತದಾನ ರಾತ್ರಿ ವೇಳೆಗೆ ಶೇ. 68.02 ಕ್ಕೆ ಏರಿಕೆಯಾಗಿದೆ. ಕೇವಲ 5 ಗಂಟೆಗಳಲ್ಲಿ 50 ಲಕ್ಷ ಮತಗಳು…

Read More