Subscribe to Updates
Get the latest creative news from FooBar about art, design and business.
Author: kannadanewsnow07
ಬೆಂಗಳೂರು: ಬೆಂಗಳೂರು ನಗರದಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಈಗಾಗಲೇ ಹಲವಾರು ಕ್ರಮಗಳನ್ನು ವಹಿಸಲಾಗಿದ್ದು, ಈ ಕುರಿತು ಪಾರ್ಕಿಂಗ್ ಪಾಲಿಸಿಯನ್ನು ರೂಪಿಸಲಾಗುವುದು ಎಂದು ಗೃಹ ಸಚಿವರಾದ ಡಾ: ಜಿ.ಪರಮೇಶ್ವರ್ ರವರು ತಿಳಿಸಿದರು. ಮಂಗಳವಾರ ವಿಧಾನಸಭೆಯಲ್ಲಿ ಯಲಹಂಕ ಶಾಸಕರಾದ ವಿಶ್ವನಾಥ್ ಎಸ್.ಆರ್. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪಾರ್ಕಿಂಗ್ ವ್ಯವಸ್ಥೆಗೆ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರು ನಗರದಲ್ಲಿ ಒಟ್ಟು 1,194 ಪ್ರಮುಖ ರಸ್ತೆಗಳನ್ನು ನೋ ಪಾರ್ಕಿಂಗ್ ಸ್ಥಳಗಳೆಂದು ಗುರುತಿಸಲಾಗಿದೆ. ಪ್ರತಿನಿತ್ಯ 50 ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಠಾಣಾ ಸರಹದ್ದುಗಳನ್ನು ವಿವಿಧ ಸೆಕ್ಟರ್ಗಳೆಂದು ವಿಂಗಡಿಸಲಾಗಿದ್ದು, ಸಂಬಂಧಪಟ್ಟ ಸೆಕ್ಟರ್ ಅಧಿಕಾರಿಗಳು ಪಿ.ಎ(ಪಬ್ಲಿಕ್ ಅಡ್ರಸ್) ಸಿಸ್ಟಮ್ನಲ್ಲಿ ಸಂದೇಶವನ್ನು ನೀಡುವ ಮೂಲಕ ನೋ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡದಂತೆ ಕ್ರಮ ವಹಿಸಲಾಗಿರುತ್ತದೆ. ನೊ ಪಾರ್ಕಿಂಗ್ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡಿರುವ ವಾಹನಗಳ ನೊಂದಣಿ ಸಂಖ್ಯೆ ಸಮೇತ ಛಾಯಾಚಿತ್ರಗಳನ್ನು ಸಂಗ್ರಹಿಸಿ, ಸದರಿ ವಾಹನಗಳ ವಿರುದ್ಧ ಐ.ಎಂ.ವಿ ಕಾಯ್ದೆ 177 ರೀತ್ಯಾ ಪ್ರಕರಣಗಳನ್ನು ದಾಖಲಿಸಿ ವಾಹನ ಮಾಲೀಕರ ವಿಳಾಸಕ್ಕೆ ಕಲಂ 133 ಐ.ಎಂ.ವಿ…
ಬೆಂಗಳೂರು: ಬೆಂಗಳೂರು ನಗರದಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತು ಜುಲೈ 27ರಂದು ಶಾಸಕರ ಜೊತೆ ಚರ್ಚೆನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು. ಇಂದು ವಿಧಾನಸಭೆಯಲ್ಲಿ ಜಯನಗರ ಶಾಸಕರಾದ ರಾಮಮೂರ್ತಿ ಸಿ.ಕೆ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬೆಂಗಳೂರು ನಗರದÀ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 16,202 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 15,686 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಹಾಗೂ ಉಳಿದ ಗುಂಡಿಗಳನ್ನು ಮುಚ್ಚಲು ಈಗಾಗಲೇ ಹಲವು ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ತಿಳಿಸಿದರು..
ಬೆಂಗಳೂರು: ಕರ್ನಾಟಕ ರಾಜ್ಯದಿಂದ ಹೊರದೇಶಗಳಲ್ಲಿ ಕೆಲಸವನ್ನರಸಿ ಹೊರಡಲು ನಿರ್ಧರಿಸುವ ಮುನ್ನ ಅನಿವಾಸಿ ಭಾರತೀಯ ಸಮಿತಿಗೆ ಮಾಹಿತಿ ನೀಡುವಂತೆ ಸಮಿತಿಯ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ ತಿಳಿಸಿದರು. ಇಂದು ಅನಿವಾಸಿ ಭಾರತೀಯ ಸಮಿತಿಯ ಕೊಠಡಿಯಲ್ಲಿ ಹಮ್ಮಿಕೊಂಡಿದ್ದ ಅನಧಿಕೃತ ಏಜೆನ್ಸಿಗಳ ಮೂಲಕ ಸೌದಿ ಅರೇಬಿಯಾದಲ್ಲಿ ಕೆಲಸಕ್ಕೆ ಸೇರಿ ವಂಚನೆಗೊಳಗಾದ ವ್ಯಕ್ತಿಯನ್ನು ರಕ್ಷಿಸಿರುವ ಬಗ್ಗೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಏಜೆಂಟ್ಗಳ ನೈಜತೆಯ ಬಗ್ಗೆ ಪರಿಶೀಲನೆ ಮಾಡದೆ ಅವರ ಮಾತಿಗೆ ಮರುಳಾಗಿ ಮೋಸ ಹೋಗದಿರಲು ಹಾಗೂ ಅಧಿಕೃತ ಎಜೆಂಟ್ಗಳ ಅಥವಾ ಸಂಬಂಧಿಸಿದ ಸರ್ಕಾರದ ಇಲಾಖೆಗಳ ಸಹಾಯವನ್ನು ಪಡೆಯುವಂತೆ ಸಾರ್ವಜನಿಕರಿಗೆ ತಿಳಿಸಿದ್ದಾರೆ. ರಾಮನಗರದ ನಿವಾಸಿಯಾಗಿರುವ ಮೊಹಮ್ಮದ್ ಅಶ್ಪಾಕ್ ಎಂಬ ವ್ಯಕ್ತಿಯನ್ನು ಸುಮಾರು ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನ ಶಿವಾಜಿನಗರದಲ್ಲಿರುವ ಮಹಮ್ಮದ್ ಪೀರ್ ಎಂಬ ಏಜೆಂಟ್ ಸೌದಿ ಅರೇಬಿಯಾದಲ್ಲಿರುವ ಅಮೇಜಾನ್ ಕಂಪೆನಿಯಲ್ಲಿ ಸಹಾಯಕ ಹುದ್ದೆಯ ಕೆಲಸ ಕೊಡಿಸುವುದಾಗಿ ನಂಬಿಸಿ ಸುಮಾರು ರೂ. 1 ಲಕ್ಷಗಳನ್ನು ಪಡೆದು ಕಳುಹಿಸಿರುತ್ತಾರೆ. ಮೊಹಮ್ಮದ್ ಅಶ್ಪಾಕ್ ಅವರು ಸೌದಿ ಅರೇಬಿಯಾಕ್ಕೆ…
ಬೆಂಗಳೂರು: ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಬ್ಯಾಂಕ್ಗಳ ಸಹಯೋಗದೊಂದಿಗೆ ಆರ್ಯ ವೈಶ್ಯ ಆಹಾರವಾಹಿನಿ-ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವವರು ಆನ್ಲೈನ್ kacdc.karanatak.gov.in ರ ಮೂಲಕ ಆಗಸ್ಟ್ 31ರೊಳಗೆ ಸಲ್ಲಿಸಬೇಕು. ಅರ್ಜಿ ಹಾಗೂ ಯೋಜನೆಗಳ ಸಂಪೂರ್ಣ ಮಾಹಿತಿಗಾಗಿ kacdc.karanatak.gov.in ನಲ್ಲಿ ತಿಳಿಯಬಹುದು ಅಥವಾ ಬೆಂಗಳೂರು ದಕ್ಷಿಣ ಜಿಲ್ಲಾ ಕಛೇರಿ ದೂರವಾಣಿ ಸಂಖ್ಯೆ: 080-23156006, ನಿಗಮದ ಸಹಾಯವಾಣಿ : 9448451111 ಸಂಪರ್ಕಿಸಬಹುದು ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಮನೆಯಲ್ಲಿ ಇರುವಂತಹ ಪುಡಿ ಉಪ್ಪು ಹಾಗೂ ಕಲ್ಲು ಉಪ್ಪು ಯಿಂದ ತಂತ್ರವನ್ನು ಪಾಲಿಸಿ ಇದರಿಂದ ಅದ್ಬುತವಾದ ಫಲಿತಾಂಶವನ್ನು ಪಡೆದುಕೊಳ್ಳಬಹುದು ಎಂದು ತಿಳಿಯೋಣ. ಅದಕ್ಕೂ ಮುನ್ನ ನೀವು ಕೂಡ ಲಕ್ಷ್ಮಿ ದೇವಿಯ ಭಕ್ತರಾಗಿದ್ದರೆ ಈಗಲೇ ಈ ಪೇಜ್ ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ. ನೀವು ಅದೃಷ್ಟವಂತರು ಮತ್ತು ಧವಂತರು ಆಗಬೇಕು ಎಂದರೆ ಈ ಒಂದು ತಂತ್ರ ಮಾಡಿದರೆ ನಿಮಗೆ ಲಾಭ ತಂದುಕೊಡುತ್ತವೆ. ಉಪ್ಪಿನಿಂದ ಹೇಗೆ ಪರಿಹಾರ ಕಂಡುಕೊಳ್ಳಬಹುದು ಎಂದು ನೋಡೋಣ ಮನೆಯಲ್ಲಿ ಆದಾಯ ಬಗ್ಗೆ ಲೆಕ್ಕ ಹಾಕುತ್ತಾ ಇರುತ್ತಾರೆ ಆದರೆ ಆ ಕೆಲಸ ನಿಂತು ಹೋಗುತ್ತದೆ. ಹಣ ಹಾಗೆ ಖರ್ಚು ಆಗುತ್ತ ಹೋಗುತ್ತದೆ. ಆ ಸಂಸ್ಥೆಗಳಿಂದ ಮುಕ್ತಿ ಹೊಂದಬೇಕು ಎಂದರೆ ಬೆಳಗ್ಗೆ ಎದ್ದು ಸ್ನಾನ ಮುಗಿಸಿ ಕಲ್ಲು ಉಪ್ಪನ್ನು ನಿಮ್ಮ ಬಲಗೈಲಿ ಇಟ್ಟುಕೊಂಡು ನಿಮ್ಮ ಇಷ್ಟ ದೇವರ ಮುಂದೆ ನಿಂತು…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ತಾಮ್ರದ ವಸ್ತುಗಳನ್ನು ನಮ್ಮ ದಿನನಿತ್ಯದ ಉಪಯೋಗಕ್ಕೆ ಬಳಸಿಕೊಂಡರೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇದೆ ಎಂದು ಹಿಂದಿನಿಂದಲೂ ಆಯುರ್ವೇದವು ಹೇಳಿದೆ. ಅದರಲ್ಲೂ ಹಿಂದೆ ಕೆಲವು ತಾಮ್ರದ ಕೈಬಳೆ ಹಾಕಿಕೊಂಡಿರುವುದನ್ನು ನಾವು ಕಾಣುತ್ತೇವೆ. ಆದರೆ ಇದು ಯಾಕೆ ಎನ್ನುವ ಪ್ರಶ್ನೆಯು ಬರದೇ ಇರದು. ತಾಮ್ರದ ಕೈಬಳೆ ಧರಿಸುವುದರಿಂದ ಹಲವಾರು ಲಾಭಗಳು ಇದೆ. ತಾಮ್ರದಲ್ಲಿ ಚಿಕಿತ್ಸಕ ಗುಣ ಇದೆ ಎನ್ನುವುದು ನಮಗೆ ಈಗಾಗಲೇ ತಿಳಿದಿರುವ ವಿಚಾರ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳು ಇವೆ. ಇದರಿಂದಾಗಿ ತಾಮ್ರವು ತುಂಬಾ ಪ್ರಬಲ ಲೋಹವೆಂದು ಪರಿಗಣಿಸಲಾಗಿದೆ. ದಿನನಿತ್ಯದ ಜೀವನದಲ್ಲಿ ಚಿಕಿತ್ಸೆ ಮತ್ತು ಆರೋಗ್ಯಕ್ಕೆ ತಾಮ್ರದ ಬಳಕೆ ಬಗ್ಗೆ ಆಧುನಿಕ ವೈದ್ಯಕೀಯ ವಿಜ್ಞಾನವು ದೃಢಪಡಿಸಿದೆ. ನಾವು ಸೇವಿಸುವಂತಹ ಆಹಾರದಿಂದ ನಮಗೆ ಹೆಚ್ಚಿನ ತಾಮ್ರದ ಅಂಶವು ಸಿಗುವುದು. ಹಸಿರೆಲೆ ತರಕಾರಿಗಳು, ಇಡೀ ಧಾನ್ಯಗಳು, ಬೀನ್ಸ್ ಮತ್ತು…
ಬೆಂಗಳೂರು: 2018ನೇ ಸಾಲಿನ ರೂ.1.00 ಲಕ್ಷ ಸಾಲ ಮನ್ನ ಯೋಜನೆಯಡಿ ರಾಮನಗರ ಜಿಲ್ಲೆ ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳ ಡಿ.ಸಿ.ಸಿ. ಬ್ಯಾಂಕಿಗೆ ಆಧ್ಯರ್ಪಿತಗೊಂಡ ಮತ್ತು ಸ್ವಂತ ಬಂಡವಾಳದಲ್ಲಿ ಸಾಲ ನಿಡುವ ಸಹಕಾರ ಸಂಘಗಳಲ್ಲಿ 86,305 ರೈತ ಸದಸ್ಯರಿಗೆ ರೂ 359.52 ಕೋಟಿ ರೂ ಗಳ ಸಾಲ ಮನ್ನ ಮಾಡಲು ಅರ್ಹತೆಯನ್ನು ಗುರುತಿಸಿ ಹಸಿರು ಪಟ್ಟಿ ತಯಾರಿಸಿದ್ದು, ಈ ಪೈಕಿ 2018 -19, 2019-20 ಮತ್ತು 2020-21ರಲ್ಲಿ 80,257 ರೈತರ ರೂ. 345.08 ಕೋಟಿಗಳ ಸಾಲ ಮನ್ನಾ ಅನುದಾನ ಬಿಡುಗಡೆ ಮಾಡಲಾಗಿದೆ. 6048 ರೈತರಿಗೆ ರೂ. 14.45 ಕೋಟಿಗಳ ಸಾಲ ಮನ್ನ ಬಿಡುಗಡೆ ಬಾಕಿ ಇದ್ದು ಈ ಬಗ್ಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯರಾದ ಎಸ್. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಂಗಳೂರು…
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿಗಳಾದ ಕೆ.ಟಿ.ನವೀನ್ ಕುಮಾರ್, ಅಮಿತ್ ದಿಗ್ವೇಕರ್ ಮತ್ತು ಎಚ್.ಎಲ್.ಸುರೇಶ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಬಂಗೇರ ಅವರ ಯೋಜನೆಗಳ ಬಗ್ಗೆ ತನಗೆ ತಿಳಿದಿತ್ತು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡುವಂತೆ ಪೊಲೀಸರು ಬಲವಂತಪಡಿಸಿದ್ದಾರೆ ಎಂದು ವಿಶೇಷ ವಿಚಾರಣಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಕೆ.ಟಿ.ನವೀನ್ ಕುಮಾರ್ ಅವರನ್ನು ಎ17, ಅಮಿತ್ ದಿಗ್ವೇಕರ್ ಎ5 ಮತ್ತು ಸುರೇಶ್ ಎಚ್.ಎಲ್ ಅವರನ್ನು ಎ7 ಎಂದು ಗುರುತಿಸಲಾಗಿದೆ. 2017ರ ಸೆಪ್ಟೆಂಬರ್ನಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಬೆಂಗಳೂರು: ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ವಾಯು ಸೇನೆ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಜುಲೈ 19 ರಂದು ಆಯೋಜಿಸಲಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಕೇಂದ್ರ ರಕ್ಷಣಾ ಸಚಿವಾಲಯದ ಜನರಲ್ ರೀ ಸೆಟ್ಲ್ಮಂಟ್ ನಿರ್ದೇಶನಾಯಲವು ಬೆಂಗಳೂರಿನಲ್ಲಿ ಉದ್ಯೋಗ ಮೇಳವನ್ನು ಜುಲೈ 19 ರಂದು ಹಮ್ಮಿಕೊಂಡಿದೆ. ಎಲ್ಲಾ ಇಎಸ್ಎಂಗಳಿಗೆ ನೋಂದಣಿ ಬೆಳಿಗ್ಗೆ 7 ರಿಂದ 10 ರವರೆಗೆ ಸ್ಥಳದಲ್ಲಿ ನಡೆಯಲಿದೆ. ನೋಂದಾಯಿಸಲು, ಇಎಸ್ಎಂ ತಮ್ಮ ಇಎಸ್ಎಂ ಗುರುತಿನ ಚೀಟಿ ಮತ್ತು ಅವರ ಇತ್ತೀಚಿನ ಸಿವಿ ಅಥವಾ ಬಯೋ-ಡೇಟಾದ ಐದು ಪ್ರತಿಗಳನ್ನು ಛಾಯಾಚಿತ್ರದೊಂದಿಗೆ ತರಬೇಕು. ಇಎಸ್ಎಂ ಉದ್ಯೋಗಾಕಾಂಕ್ಷಿಗಳು ಬಹು ಉದ್ಯೋಗಾವಕಾಶಗಳಿಗೆ ಪ್ರವೇಶವನ್ನು ಪಡೆಯುತ್ತಾರೆ ಮತ್ತು ತೊಂದರೆಯಿಲ್ಲದ ನೇಮಕಾತಿ ಪ್ರಕ್ರಿಯೆಯನ್ನು ಪಡೆಯುತ್ತಾರೆ. ಅನೇಕ ಕಾರ್ಪೊರೇಟ್ ಗಳು ಹಿರಿಯ ಮೇಲ್ವಿಚಾರಕರು, ಮಧ್ಯಮ ಮತ್ತು ಹಿರಿಯ ಮಟ್ಟದ ವ್ಯವಸ್ಥಾಪಕರಿಂದ ಹಿಡಿದು ಕಾರ್ಯತಂತ್ರದ ಯೋಜಕರು ಮತ್ತು ಯೋಜನಾ ನಿರ್ದೇಶಕರವರೆಗಿನ ಕಾರ್ಯಗಳಿಗಾಗಿ ಇಎಸ್ ಎಂ ಅನ್ನು ಪರೀಕ್ಷಿಸುವ, ಸಂದರ್ಶನ ಮಾಡುವ ಮತ್ತು ನೇಮಿಸಿಕೊಳ್ಳುವ ನಿರೀಕ್ಷೆಯಿದೆ. ಕಂಪನಿ, ಕಾರ್ಪೊರೇಟ್ ಗಳು ಮತ್ತು ಉದ್ಯೋಗದಾತರು ಆನ್ ಲೈನ್ ನಲ್ಲಿ…
ನವದೆಹಲಿ: ಡಿಜಿಟಲ್ ಯುಗದಲ್ಲಿ, ಅನೇಕ ಸಿಮ್ ಕಾರ್ಡ್ ಗಳನ್ನು ಹೊಂದುವುದು ಹೆಚ್ಚು ಸಾಮಾನ್ಯವಾಗಿದೆ. ಆದಾಗ್ಯೂ, ತಮ್ಮ ಹೆಸರಿನಲ್ಲಿ ಅನೇಕ ಸಿಮ್ ಕಾರ್ಡ್ಗಳನ್ನು ತೆಗೆದುಕೊಳ್ಳುವುದು ಗಮನಾರ್ಹ ಕಾನೂನು ಮತ್ತು ಆರ್ಥಿಕ ತೊಂದರೆಗಳಿಗೆ ಕಾರಣವಾಗಬಹುದು ಎಂದು ಅನೇಕ ಜನರಿಗೆ ತಿಳಿದಿಲ್ಲ. ದೂರಸಂಪರ್ಕ ಕಾಯ್ದೆ 2023 ರ ಪ್ರಕಾರ, ಒಬ್ಬ ವ್ಯಕ್ತಿಯು ಹೊಂದಬಹುದಾದ ಗರಿಷ್ಠ ಸಂಖ್ಯೆಯ ಸಿಮ್ ಕಾರ್ಡ್ಗಳನ್ನು ಕಟ್ಟುನಿಟ್ಟಾದ ನಿಯಮಗಳು ನಿಯಂತ್ರಿಸುತ್ತವೆ ಮತ್ತು ಈ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡ ಅಥವಾ ಜೈಲು ಶಿಕ್ಷೆಗೆ ಕಾರಣವಾಗಬಹುದು. ಸಿಮ್ ಕಾರ್ಡ್ ಗಳಲ್ಲಿ ಕಾನೂನು ಮಿತಿ ಏನು? ಒಬ್ಬ ವ್ಯಕ್ತಿಯು ಹೊಂದಬಹುದಾದ ಗರಿಷ್ಠ ಸಂಖ್ಯೆಯ ಸಿಮ್ ಕಾರ್ಡ್ ಗಳು ಪ್ರದೇಶವನ್ನು ಅವಲಂಬಿಸಿರುತ್ತದೆ. ರಾಷ್ಟ್ರವ್ಯಾಪಿ, ಮಿತಿಯನ್ನು ಪ್ರತಿ ವ್ಯಕ್ತಿಗೆ ಒಂಬತ್ತು ಸಿಮ್ ಕಾರ್ಡ್ ಗಳಿಗೆ ನಿಗದಿಪಡಿಸಲಾಗಿದೆ. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಮತ್ತು ಈಶಾನ್ಯ ಪರವಾನಗಿ ಸೇವಾ ಪ್ರದೇಶಗಳಲ್ಲಿ (ಎಲ್ಎಸ್ಎ) ಈ ಮಿತಿಯನ್ನು ಆರಕ್ಕೆ ಇಳಿಸಲಾಗಿದೆ. ಈ ನಿಯಂತ್ರಣವು ಮೋಸದ ಚಟುವಟಿಕೆಗಳನ್ನು ನಿಗ್ರಹಿಸುವ ಮತ್ತು ಟೆಲಿಕಾಂ ಸಂಪನ್ಮೂಲಗಳ…