Subscribe to Updates
Get the latest creative news from FooBar about art, design and business.
Author: kannadanewsnow07
ಬೆಂಗಳೂರು: ಕೊಲೆ ಪ್ರಕರಣದ ಆರೋಪದ ಮೇಲೆ ಸದ್ಯ ಬೆಂಗಳೂರಿನ ಕೇಂದ್ರ ಕಾರಗೃಹದಲ್ಲಿರುವ ನಟ ದರ್ಶನ್ ಅಂಡ್ ಗ್ಯಾಂಗ್ಗೆ ಸದ್ಯ ಮತ್ತೆ ಜೈಲಿನಲ್ಲೇ ಕಾಲ ಕಳೆಯ ಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಇಂದು ದರ್ಶನ್ ಅಂಡ್ ಗ್ಯಾಂಗ್ ಕಸ್ಟಡಿ ಅವಧಿ ಅಂತ್ಯವಾಗಿತ್ತು, ಈ ಹಿನ್ನಲೆಯಲ್ಲಿ ಇಂದು ಮತ್ತೆ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಪರೇನ್ಸ್ ಮೂಲಕ ಆರೋಪಿಗಳನ್ನು ಹಾಜರು ಪಡಿಸಲಾಗಿತ್ತು. ಈ ವೇಳೆ ಆರೋಪಿಗಳನ್ನು ಮತ್ತೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶವನ್ನು ಹೊರಡಿಸಿದರು. ಇಂದು ದರ್ಶನ್ ಹಾಗೂ ಅವರ ಗ್ಯಾಂಗ್ನ 14 ದಿನಗಳ ನ್ಯಾಯಾಂಗ ಬಂಧನದ ಅವಧಿ ಮುಗಿದಿತ್ತು. ಈ ನಡುವೆ ಪ್ರಕರಣದ ತನಿಖೆ ಶುರುವಾಗಿ ತಿಂಗಳು ಕಳೆದಿದೆ. ಪೊಲೀಸರು ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಲು ಮುಂದಾಗಿದ್ದಾರೆ
ನವದೆಹಲಿ: ಮೀಸಲಾತಿಗಾಗಿ ಹಿಂಸಾತ್ಮಕ ಪ್ರತಿಭಟನೆಗಳಿಂದಾಗಿ ಬಾಂಗ್ಲಾದೇಶದಲ್ಲಿ ಪರಿಸ್ಥಿತಿ ಅನಿಯಂತ್ರಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ರಾಯಭಾರ ಕಚೇರಿ ಕೂಡ ಜಾಗರೂಕವಾಗಿದೆ. ಬಾಂಗ್ಲಾದೇಶದಲ್ಲಿ ವಾಸಿಸುವ ತನ್ನ ನಾಗರಿಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ಭಾರತವು ವಿಶೇಷ ಸಲಹೆಗಳನ್ನು ನೀಡಿದೆ ಮತ್ತು ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆಗಳನ್ನು ನೀಡಿದೆ. ಬಾಂಗ್ಲಾದೇಶದಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣವನ್ನು ತಪ್ಪಿಸಿ ಮತ್ತು ಮನೆಯೊಳಗೆ ಇರುವಂತೆ ಭಾರತವು ಬಾಂಗ್ಲಾದೇಶದಲ್ಲಿರುವ ಭಾರತೀಯ ವಲಸಿಗರು ಮತ್ತು ವಿದ್ಯಾರ್ಥಿಗಳನ್ನು ಕೇಳಿದೆ. ಯಾವುದೇ ತುರ್ತು ಸಂದರ್ಭದಲ್ಲಿ, ಅಲ್ಲಿನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ. ಭಾರತದ ಹೈಕಮಿಷನ್ ತನ್ನ ನಾಗರಿಕರಿಗೆ ದಿನದ 24 ಗಂಟೆಗಳ ಕಾಲ ಸೇವೆ ಸಲ್ಲಿಸಲು ಸಿದ್ಧವಾಗಿದೆ ಅಂತ ತಿಳಿಸಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಬಾಂಗ್ಲಾದೇಶದಲ್ಲಿರುವ ತನ್ನ ನಾಗರಿಕರು ಮತ್ತು ವಿದ್ಯಾರ್ಥಿಗಳು ಢಾಕಾದಲ್ಲಿರುವ 880-1937400591 ಅಥವಾ ವಾಟ್ಸಾಪ್ಗೆ ಕರೆ ಮಾಡುವ ಮೂಲಕ ಅವರನ್ನು ಸಂಪರ್ಕಿಸಬಹುದು ಎಂದು ಭಾರತ ಹೇಳಿದೆ. ಇದಲ್ಲದೆ, ನೀವು ಚಿತ್ತಗಾಂಗ್ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿಗೆ 880-1814654797 ಮತ್ತು 880-1814654799 ಗೆ ಕರೆ…
ಬೆಂಗಳೂರು: ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಬಿ.ವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು ಬೆಳಗ್ಗೆ ವಾಲ್ಮಿಕಿ ನಿಗಮದ ಹಗರಣಕ್ಕೆ ಸಂಬಂಧಪಟ್ಟಂತೆ ಫ್ರಿಡ್ಮಂ ಪಾರ್ಕ್ನಲ್ಲಿ ಬಿಜೆಪಿ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಬಳಿಕ ವಿಜಯೇಂದ್ರ ಸೇರಿದಂತೆ ಹಲವು ಮಂದಿ ಬಿಜೆಪಿ ನಾಯಕರುಗಳು ವಿಧಾನಸಭೆಗೆ ಮುತ್ತಿಗೆ ಹಾಕಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಪೋಲಿಸರು ಹಲವು ಮಂದಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳದಲ್ಲಿ ಹಲವು ಗಲಾಟೆ ಸನ್ನಿವೇಶ ಕೂಡ ಬಂದಿತ್ತು. ಸ್ಥಳದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಫೋಲಿಸರು ಹರಸಾಹಸ ಪಡುತ್ತಿದ್ದಾರೆ.
ನವದೆಹಲಿ: ಜುಲೈ 10 ರಿಂದ ಗುಜರಾತ್ನಲ್ಲಿ ಚಂಡಿಪುರ ವೈರಸ್ ಎಂಬ ಶಂಕಿತ ವೈರಲ್ ಸೋಂಕಿನಿಂದ ಹದಿನೈದು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಈವರೆಗೆ 29 ಪ್ರಕರಣಗಳು ವರದಿಯಾಗಿವೆ. ರಾಜ್ಯ ಆರೋಗ್ಯ ಸಚಿವ ರುಷಿಕೇಶ್ ಪಟೇಲ್ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ದೃಢಪಡಿಸಿದ್ದಾರೆ. ಈ ನಡುವೆ ಬುಧವಾರದವರೆಗೆ, 15 ಸಾವುಗಳು ವರದಿಯಾಗಿವೆ, ಅದರಲ್ಲಿ ಒಂದು ಚಂಡಿಪುರ ವೈರಸ್ನಿಂದ ದೃಢಪಟ್ಟಿದೆ, ಇತರರು ಶಂಕಿತರಾಗಿದ್ದಾರೆ ಆದರೆ ರೋಗಲಕ್ಷಣಗಳು ಎಲ್ಲಾ ಸಂದರ್ಭಗಳಲ್ಲಿ ಒಂದೇ ಆಗಿರುತ್ತವೆ, ಆದ್ದರಿಂದ ಎಲ್ಲಾ ಪ್ರಕರಣಗಳು ಒಂದೇ ಆಗಿರುತ್ತವೆ ಎಂದು ಭಾವಿಸಲಾಗಿದೆ” ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಂಕಿತ ಪ್ರಕರಣಗಳ ಸಂಖ್ಯೆ ಕ್ರಮೇಣ ಹೆಚ್ಚಾಗಿದೆ, ಆಸ್ಪತ್ರೆ ಈಗ ಅರಾವಳಿಯ ಮೂವರು, ಮಹಿಸಾಗರದ ಒಬ್ಬರು ಮತ್ತು ಖೇಡಾದ ಒಬ್ಬ ರೋಗಿಗೆ ಚಿಕಿತ್ಸೆ ನೀಡುತ್ತಿದೆ. ಹೆಚ್ಚುವರಿಯಾಗಿ, ರಾಜಸ್ಥಾನದ ಇಬ್ಬರು ರೋಗಿಗಳು ಮತ್ತು ಮಧ್ಯಪ್ರದೇಶದ ಒಬ್ಬರು ಇದ್ದಾರೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಮೊದಲ ನಾಲ್ಕು ಶಂಕಿತ ಚಂಡಿಪುರ ಪ್ರಕರಣಗಳು ಸಬರ್ಕಾಂತ ಜಿಲ್ಲೆಯ ಹಿಮತ್ನಗರದ ಸಿವಿಲ್ ಆಸ್ಪತ್ರೆಯಲ್ಲಿ ವರದಿಯಾಗಿವೆ.…
ಬೆಂಗಳೂರು : BPL Card ನಿರೀಕ್ಷೆಯಲ್ಲಿದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಸಚಿವ ಕೆ.ಹೆಚ್ ಮುನಿಯಪ್ಪ ನೀಡಿದ್ದಾರೆ. 1.73 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ಆದಷ್ಟು ಶೀಘ್ರ ವಿತರಿಸಿ, ಪಡಿತರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ವಿಧಾನಪರಿಷತ್ ಕಲಾಪದಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ ಕಲಾಪದಲ್ಲಿ ಸದಸ್ಯರೊಬ್ಬರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದಂತ ಅವರು, ಹಿಂದಿನ ಸರ್ಕಾರ ಚುನಾವಣೆಗೆ ಮೊದಲು 2.95 ಲಕ್ಷ ಕಾರ್ಡ್ ಗಳನ್ನು ವಿತರಿಸುವುದು ಬಾಕಿ ಇತ್ತು. ಇವುಗಳನ್ನು ಪರಿಶೀಲಿಸಿ ಸುಮಾರು 2 ಲಕ್ಷ 65 ಸಾವಿರ ಕಾರ್ಡ್ ಗಳನ್ನು ಅರ್ಹತೆಯನ್ನು ಪಡೆದಿದ್ದಾವೆ. ಬಿಪಿಎಲ್ ಒಳಗಡೆ ಬರುತ್ತಾವೆ. 56,930 ಕಾರ್ಡ್ ಬಿಪಿಎಲ್ ಕಾರ್ಡ್ ಕೆಳಗಡೆ ಬರುವುದಿಲ್ಲ. 2 ಲಕ್ಷದ 36 ಸಾವಿರ 152 ಕಾರ್ಡ್ ನಲ್ಲಿ 62 ಸಾವಿರ ಕಾರ್ಡ್ ಗಳನ್ನು ಈಗಾಗಲೇ ಪಟ್ಟಿಗೆ ತಂದು ಪಡಿತರ ಹೆಸರಿನ ಪಟ್ಟಿಯಲ್ಲಿ ದವಸ ಧಾನ್ಯಗಳನ್ನು ಕೊಡುವ ವ್ಯವಸ್ಥೆಯಾಗಿದೆ.
ಕೆಎನ್ಎನ್ಡಿಜಿಟಲ್ಡೆಸ್ಕ್: ಜುಲೈ 13 ರಂದು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಹತ್ಯೆ ಪ್ರಯತ್ನವು ಯುಎಸ್ ರಾಜಕೀಯದಲ್ಲಿ ಮತ್ತು ಪ್ರಪಂಚದಾದ್ಯಂತ ಆಘಾತಗಳನ್ನು ಉಂಟುಮಾಡಿದೆ. ಈ ಮಧ್ಯೆ, ಪೆನ್ಸಿಲ್ವೇನಿಯಾದ ಬಟ್ಲರ್ ರ್ಯಾಲಿಯಲ್ಲಿ ಟ್ರಂಪ್ ವೇದಿಕೆಯಲ್ಲಿದ್ದ ಕ್ಷಣವನ್ನು ಉಗಾಂಡಾದ ಮಕ್ಕಳ ಗುಂಪು ಮರುಸೃಷ್ಟಿಸಿರುವ ವಿಡಿಯೋವೊಂದು ವೈರಲ್ ಆಗಿದೆ. , 20 ವರ್ಷದ ಬಂದೂಕುಧಾರಿ ಥಾಮಸ್ ಮ್ಯಾಥ್ಯೂ ಕ್ರೂಕ್ಸ್ ಅವರ ಮೇಲೆ ಗುಂಡು ಹಾರಿಸಿ ಕಿವಿಗೆ ಗಾಯಗೊಳಿಸಿದ್ದ. ಅಧ್ಯಕ್ಷರಿಂದ ಹಿಡಿದು ಪ್ರೇಕ್ಷಕರು ಮತ್ತು ಸೀಕ್ರೆಟ್ ಸರ್ವಿಸ್ ಏಜೆಂಟರವರೆಗೆ ಮಕ್ಕಳು ಪ್ರತಿಯೊಂದು ಪಾತ್ರವನ್ನು ನಿರ್ವಹಿಸುವ ವೀಡಿಯೊದಲ್ಲಿ, ಚಿತ್ರೀಕರಣದ ಮೂಲ ಆಡಿಯೋವನ್ನು ಬಳಸಲಾಗುತ್ತದೆ, ಇದನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡಲಾಗಿದೆ ಕೂಡ. https://twitter.com/kunley_drukpa/status/1813587084869021745
ಬೆಂಗಳೂರು: ಬೆಂಗಳೂರಿನ ಜಿ.ಟಿ ಮಾಲ್ 7 ದಿನ ಬಂದ್ ಬಂದ್ ಮಾಡಲಾಗುವುದು ಅಂಥ ಸಚಿವ ಬೈರತಿ ಸುರೇಶ್ ಅವರು ಇಂದು ಸದನದಲ್ಲಿ ಮಾಹಿತ ನೀಡಿದರು. ಅವರು ಇಂದು ಸದನದಲ್ಲಿ ಮಾಹಿತಿ ನೀಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಸದನದಲ್ಲಿ ಎಲ್ಲಾ ಶಾಸಕರು ಮಾಲ್ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಇದಲ್ಲದೇ ಸ್ಪೀಕರ್ ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಮಾಲ್ ನೌಕರರರ ವಿರುದ್ದ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಈ ನಡುವೆ ಭೈರತಿ ಸುರೇಶ್ ಅವರು ಈ ಬಗ್ಗೆ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು, ಇದಲ್ಲದೇ ಘಟನೆ ಸಂಬಂಧ ಈಗಾಗಲೇ ಬಿಬಿಎಂಪಿ ಆಯಕ್ತರ ಬಳಿ ಚರ್ಚಿಸಲಾಗಿದೆ ಅಂತ ತಿಳಿಸಿದರು.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಭಿಮಾನಿಗಳು ಕರ್ನಾಟಕ ಸರ್ಕಾರದ ವಿವಾದಾತ್ಮಕ ಮೀಸಲಾತಿ ಮಸೂದೆಯನ್ನು ಪ್ರಶ್ನಿಸುತ್ತಿದ್ದಾರೆ. ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗದಲ್ಲಿ ಶೇಕಡಾ 100 ರಷ್ಟು ಮೀಸಲಾತಿ ನೀಡಲಾಗುವುದು ಎಂದು ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಆದಾಗ್ಯೂ, ವಿವಾದದ ನಂತರ, ಸರ್ಕಾರವು ಖಾಸಗಿ ಕಂಪನಿಗಳಲ್ಲಿ ಮೀಸಲಾತಿ ಮಸೂದೆಯನ್ನು ಸದ್ಯ ತಡೆ ಹಿಡಿದ್ದು, ಸದ್ಯಕ್ಕೆ ಮಸೂದೆ ಬಗ್ಗೆ ಚರ್ಚೆ ಮಾಡಬೇಕು ಅಂತ ತಿಳಿಸಿದೆ. ಮತ್ತೊಂದೆಡೆ, ಈ ಮಸೂದೆಯ ಬಗ್ಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಯ ಬೆಂಬಲಿಗರಲ್ಲಿ ಕೋಲಾಹಲವಿತ್ತು. ಈ ಹೊಸ ಕಾನೂನು ವ್ಯಾಪಾರ ಸಮುದಾಯಕ್ಕೆ ಉತ್ತಮವಾಗಿಲ್ಲ. ಈ ಮಸೂದೆಯು ತಮ್ಮ ನೆಚ್ಚಿನ ತಂಡದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದು ಆರ್ಸಿಬಿ ಅಭಿಮಾನಿಗಳಿಗೆ ದೊಡ್ಡ ಪ್ರಶ್ನೆಯಾಗಿದೆ. https://twitter.com/_paingankar_/status/1813616501779505327
ಬೆಂಗಳೂರು: ಮಾಲ್ ಮುಚ್ಚಲು ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಲಾಗುವುದು ಅಂತ ಇಂದು ಸದನದಲ್ಲಿ ಸಚಿವ ಭೈರತಿ ಸುರೇಶ್ ಅವರು ಹೇಳಿದರು. ಇಂದು ಸದನದಲ್ಲಿ ಮಾತನಾಡಿದ ಅವರು ಕಾನೂನಿನಲ್ಲಿ ಅವಕಾಶ ಇದೇ ಎನ್ನಲಾಗಿದೆ. ಈ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಮಾತನಾಡಲಾಗಿದ್ದು, ಸದ್ಯ ಜಿಟಿ ಮಾಲ್ ಅನ್ನು ಏಳು ದಿನಗಳ ಕಾಲ ಮುಚ್ಚಲಾಗಿದೆ ಅಂಥ ಸದನದಲ್ಲಿ ಮಾಹಿತಿ ನೀಡಿದರು. ಇನ್ನೂ ಸದನದಲ್ಲಿ ಸ್ಪೀಕರ್ ಅವರು ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ. ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಇನ್ನೂ ಸದನದಲ್ಲಿ ಬಹುತೇಕ ಶಾಸಕರು ಜಿ.ಟಿ ಮಾಲ್ ಅನ್ನು ಮುಚ್ಚಬೇಕು ಅಂಥ ಆಗ್ರಹಿಸಿದರು. ಈ ನಡುವೆ ರೈತನನ್ನು ಅವಮಾನಿಸಿದ ಆರೋಪದಡಿ ಬೆಂಗಳೂರಿನ ಜಿ.ಟಿ.ಮಾಲ್ ಮಾಲೀಕರು ಮತ್ತು ಭದ್ರತಾ ಸಿಬ್ಬಂದಿಯ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.’ಮಾಲ್ನ ಸೆಕ್ಯುರಿಟಿ ಗಾರ್ಡ್ಗಳಿಗೆ ಸರಿಯಾಗಿ ಮಾರ್ಗದರ್ಶನ ನೀಡದೆ ರೈತನಿಗೆ ಅವಮಾನವಾಗುವಂತೆ ನಡೆದುಕೊಳ್ಳಲಾಗಿದೆ’ ಎಂದು ಆರೋಪಿಸಿ ಧರ್ಮರಾಜ್ ದೂರು ನೀಡಿದ್ದಾರೆ. ಇದರನ್ವಯ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಪೊಲೀಸರು…
ಕೆಎನ್ಎನ್ಡಿಜಿಟಲ್ಡೆಸ್ಕ್: ಕಾಗೆ ಕಿರುಚುತ್ತಿದೆ ಅಂಥ ಹೇಳಿ ಅದನ್ನು ಹಿಡಿದುಕೊಂಡು ಮಾಂಸದ ಅಂಗಡಿ ಮಾಲೀಕ ಅದನ್ನು ಬಂಧಿಸಿರುವ ಘಟನೆ ಆಂಧ್ರಪ್ರದೇಶದ ಕೋನಸೀಮಾ ಜಿಲ್ಲೆಯ ತತಿಪಾಕಾ ಮಾರುಕಟ್ಟೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಕಾಗೆ ಕಿರುಚುತ್ತಿದೆ ಅಂಥ ಹೇಳಿ ಕೋಳಿ ಅಂಗಡಿ ಮಾಲೀಕರು ಅದನ್ನು ಹಗ್ಗದಿಂದ ಕಟ್ಟಿದ್ದಾರೆ. ಈ ನಡುವೆ ಇದರ ಬೆನ್ನಲೇ ನೂರಾರು ಕಾಗೆಗಳು ಸ್ಥಳಕ್ಕೆ ತಲುಪಿ ಕೂಗಲು ಪ್ರಾರಂಭಿಸಿದವು. ಎಲ್ಲಾ ಕಾಗೆಗಳು ಕಿರುಚಿದ್ದರಿಂದ ಉಳಿದ ಅಂಗಡಿಯವರಿಗೆ ಶಬ್ದವನ್ನು ಸಹಿಸಲು ಸಾಧ್ಯವಾಗಲಿಲ್ಲ. ಕೋಳಿ ಕೇಂದ್ರದ ಮಾಲೀಕರು ಕಾಗೆಯನ್ನು ಬಿಟ್ಟಿದ್ದಾನೆ ಎನ್ನಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದಾಗ್ಯೂ, ವೀಡಿಯೊವನ್ನು ನೋಡಿದ ನೆಟ್ಟಿಗರು ಏಕತೆಯೇ ದೊಡ್ಡ ಶಕ್ತಿ ಎಂದು ಕಾಮೆಂಟ್ ಮಾಡಿದ್ದಾರೆ. https://x.com/TeluguScribe/status/1813550188834787751