Author: kannadanewsnow07

ರಾಯಚೂರು : ಕಂದಾಯ ಮತ್ತು ಸರ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಯನ್ನು ಶೀಘ್ರದಲ್ಲಿ ಭರ್ತಿ ಮಾಡಲಾಗುವುದು, ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು, ಎಲ್ಲವೂ ಅಂದುಕೊಂಡತೇ ಆದರೆ ಫೆಬ್ರವರಿಯಲ್ಲಿ ಅರ್ಜಿ ಕರೆಯಲಾಗುವುದು ಅಂತ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ. ಅವರು ನಗರದಲ್ಲಿ ಬುಧವಾರ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ಮಾತನಾಡುತ್ತ 357 ಸರ್ವೆಯರು ಹುದ್ದೆಗಳನೇಮಕಾತಿಗಳ ಹುದ್ದೆಗೆ ಈಗಾಗಲೇ ಅರ್ಜಿ ಕರೆಯಲಾಗಿದ್ದು, ಇನ್ನೂ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಈ ಹುದ್ದೆಗಳ ಭರ್ತಿಯನ್ನು ಮಾಡಲಾಗುವುದು ಅಂತ ಅವರು ತಿಳಿಸಿದರು. ಈಗಾಗಲೇ ಲೈಸೆನ್ಸ್‌ ಸರ್ವೆಯರು ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಅವರಿಗೆ ತರಬೇತಿ ನೀಡಲಾಗುವುದು, ಅವರನ್ನು ವರ್ಕ್‌ಲೋಡ್‌ ನೋಡಿಕೊಂಡು ಅವರಿಗೆ ಕಾರ್ಯವನ್ನು ನೀಡಲಾಗುವುದು ಅಂತ ಹೇಳಿದರು. ಇನ್ನೂ ಸಿಬ್ಬಂದಿ ಕೊರತೆಯಿಂದ ಕೆಲಸ ತಡವಾಗುತ್ತಿದ್ದರೇ, ಸರ್ಕಾರ ಕೂಡಲೇ ಅದಕ್ಕೆ ಬೇಕಾದ ನೇಮಕಾತಿಯನ್ನು ಮಾಡಿಕೊಳ್ಳಲಾಗುವುದು ಅಂತ ಹೇಳಿದರು.

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಎಲ್ಲರಿಗೂ ಒಂದು ಕ್ಯೂರಿಯಾಸಿಟಿ ಇರುತ್ತದೆ, ನನ್ನ ಮದುವೆ ಯಾವಾಗ ಆಗಬಹುದು? ಅಥವಾ ಈ ಮೊದಲೇ ಮದುವೆಯಾಗಿದ್ದರೆ ಈ ವರ್ಷದಲ್ಲೇ ಮದುವೆ ಯಾಕೆ ಆಯಿತು? ಹಾಗಾದರೆ ನನ್ನ ಡೇಟ್ ಆಫ್ ಬರ್ತ್ಗೂ ಮದುವೆಯಾದ ವರ್ಷಕ್ಕೂ ಸಂಬಂಧ ಇದೆಯಾ? ಇದನ್ನು ನ್ಯೂಮರಾಲಜಿಯಲ್ಲಿ ನಮ್ಮ ಡೇಟ್ ಆಫ್ ಬರ್ತ್ ತೆಗೆದುಕೊಂಡು ಅದರಲ್ಲಿ ಆರಿಜಿನ್ ನಂಬರ್ ಹಾಗೂ ಪರ್ಸನಲ್ ವರ್ಷವನ್ನು ಕಂಡುಹಿಡಿಯೋದರ ಮೂಲಕ ನಾವು ಇಂತಹ ವರ್ಷದಲ್ಲಿ ಮದುವೆಯಾಗುತ್ತದೆ ಎಂದು ಹೇಳಬಹುದು. ಹಾಗಾದರೆ ಯಾವ ರೀತಿ ಕಂಡುಹಿಡಿಯೋದು? ಇಲ್ಲಿ ಕೆಲವೊಂದು ಉದಾಹರಣೆಗಳ ಮೂಲಕ ನಾವು ಇಲ್ಲಿ ನೋಡೋಣ. ಒರಿಜಿನ್ ನಂಬರ್ನ್ನು ಕಂಡುಹಿಡಿಯುವಂಹದು ಹಾಗೂ ಪರ್ಸನಲ್ ವರ್ಷವನ್ನು ಕಂಡುಹಿಡಿಯುವಂತಹದ್ದು ಇಲ್ಲಿ ಒಂದು ಹುಟ್ಟಿದ ತಾರೀಖು ತೆಗೆದುಕೊಳ್ಳೋಣ 14-02-1992 ಈ ದಿನಾಂಕದಲ್ಲಿ ಒರಿಜಿನ್ ನಂಬರ್ನ್ನು ಕಂಡುಹಿಡಿಯಲು ಹುಟ್ಟಿದ ದಿನಾಂಕ 14 ಇದನ್ನು ನಾವು ಒಂದು ಅಂಕಿಗೆ ವರ್ಗಾಯಿಸಬೇಕು ಅಂದರೆ 1+4=5,…

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನಮ್ಮೆಲ್ಲ ಭವಿಷ್ಯ ವಾಣಿ ಪ್ರೇಕ್ಷಕ ವರ್ಗಕ್ಕೆ ಸ್ವಾಗತ ಸುಸ್ವಾಗತ ಇವತ್ತು ನಾನು ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ ವಿಶೇಷವಾದಂತಹ ಒಂದು ಶಕ್ತಿಶಾಲಿಯಾದಂತಹ ಒಂದು ಪವಾಡ ಪ್ರಯೋಗವನ್ನು ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ ಹಾಗಿದ್ದರೆ ನೀವು ಇಷ್ಟ ಪಟ್ಟಿರುವ ಹುಡುಗಿ ಮದುವೆಯಾಗ ಬೇಕಾ ಹುಡುಗನನ್ನು ಮದುವೆಯಾಗಬೇಕ ಹಾಗಿದ್ದಲ್ಲಿ ನಾನು ಇಲ್ಲಿ ತೋರಿಸಿರುವ ಪ್ರಯೋಗವನ್ನು ನೀವು ಖಂಡಿತವಾಗಿಯೂ ಮಾಡಿದರೆ ಸಾಕು ನಿಮ್ಮ ಖಂಡಿತ ಬದಲಾವಣೆ ಜೀವನದಲ್ಲಿ ಆಗುತ್ತದೆ ಅಂತ ಹೇಳುತ್ತಾ ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಯಾವುದೇ ರೀತಿ ಅಡೆತಡೆ ಇಲ್ಲದೆ ಮತ್ತು ಮೊದಲಿಗೆ ನೀವು ಅರಿಶಿಣದ ಕೊಂಬು ತೆಗೆದುಕೊಂಡು ಅರಿಶಿಣದ ಕೊಂಬಿನ ಮೇಲೆ ಅವರ ಹೆಸರು ಇನ್ಸಿಲ್ ಬರೆಯಬೇಕಾಗುತ್ತದೆ ಅವರ ಹೆಸರು ರವಿಯಂತಾಗಿದ್ದರೆ ಆರ್ ಅಂತ ಬರೆಯಿರಿ ಸ್ತ್ರೀ ಹೆಸರು ಮಮತಾ ಅಂತ ಇದ್ದರೆ ಎಂಬಂತ ಬರೆದು…

Read More

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ್ ಲಲ್ಲಾ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಶ್ರೀ ರಾಮ್ ಜ್ಯೋತಿಯನ್ನು ಬೆಳಗಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೇರಳ ಪ್ರವಾಸದ ಎರಡನೇ ದಿನವಾದ ಬುಧವಾರ ಎಲ್ಲಾ ಭಾರತೀಯರಿಗೆ ಮನವಿ ಮಾಡಿದ್ದಾರೆ. ಜೀವನವನ್ನು ಪ್ರತಿಷ್ಠಾಪಿಸುವ ಮೊದಲು ನಾನು ವಿಶೇಷ ಆಚರಣೆಗಳನ್ನು ಮಾಡುತ್ತಿದ್ದೇನೆ ಎಂದು ಪಿಎಂ ಮೋದಿ ಹೇಳಿದರು ‘ಶಕ್ತಿ ಕೇಂದ್ರಗಳ’ ಸುಮಾರು 6,000 ಉಸ್ತುವಾರಿಗಳ ಪಕ್ಷದ ಸಭೆಯನ್ನುದ್ದೇಶಿಸಿ ಪ್ರಧಾನಿ ಮಾತನಾಡಿದರು. ಇದೇ ವೇಳ ಅವರು ರಾಮನ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ನಾನು ವಿಶೇಷ ಪೂಜೆ ಸಲ್ಲಿಸುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು. ಕೊಚ್ಚಿಯ ಮರೀನ್ ಡ್ರೈವ್ನಲ್ಲಿ ಎರಡರಿಂದ ಮೂರು ಬೂತ್ ಮಟ್ಟದ ಪ್ರದೇಶಗಳನ್ನು ಹೊಂದಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) ತ್ವರಿತ ಬೆಳವಣಿಗೆಯ ಸಾಬೀತಾದ ದಾಖಲೆ ಮತ್ತು ಭವಿಷ್ಯದ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿರುವ ಭಾರತದ ಏಕೈಕ ಪಕ್ಷವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇದೇ ವೇಳೆ ಅವರು ಮಾತನಾಡಿ, “ಜನವರಿ 22…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನ ದ ಉನ್ನತೀಕರಣದ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಅಂದ ಹಾಗೇ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ‘ಪೊಲೀಸ್ ಮಿತ್ರ ಚಾಟ್ ಬಾಟ್’ ಎಂಬ ಸೇವೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದು ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಶೀಘ್ರ ಮತ್ತು ಸ್ಪಷ್ಟವಾಗಿ ಉತ್ತರವನ್ನು ನೀಡುತ್ತದೆ. ಈ ಡಿಜಿಟಲ್ ಸಂಪರ್ಕ ಸಂವಹನವನ್ನು ರಾಜ್ಯ ಪೊಲೀಸ್ ಅಧಿಕೃತ ಜಾಲತಾಣ KSP ಮೊಬೈಲ್ ಅಪ್ಲಿಕೇಶನ್ ನಲ್ಲಿ ಸಂಯೋಜಿಸಲಾಗಿದ್ದು, ನಾಗರಿಕರು ಸದ್ಬಳಕೆ ಮಾಡಿಕೊಳ್ಳಬಹುದು. ಜನರ ಸಮಸ್ಯೆಗಳಿಗೆ ಉತ್ತರವಾಗಿ ‘ಪೊಲೀಸ್ ಮಿತ್ರ ಚಾಟ್ ಬಾಟ್’ ಲಭ್ಯವಿದೆ.

Read More

ನವದೆಹಲಿ: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಪ್ರಧಾನಿ ಈ ಹಿಂದೆ ಜನವರಿ 22 ರಂದು ಅಯೋಧ್ಯೆಗೆ ಭೇಟಿ ನೀಡಲು ನಿರ್ಧರಿಸಲಾಗಿತ್ತು, ಆದರೆ ಮಂಜಿನಿಂದಾಗಿ ವಿಮಾನ ವಿಳಂಬವಾದ ಕಾರಣ, ಅವರು ಜನವರಿ 21 ರಂದು ಅಯೋಧ್ಯೆಗೆ ಬರಬಹುದು ಎನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕೇರಳ ಪ್ರವಾಸದಲ್ಲಿದ್ದಾರೆ. ಅವರು ಈ ವಾರದ ಕೊನೆಯಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಸಾಧ್ಯತೆಯಿದೆ. ಈ ದಿನಗಳಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶವನ್ನು ದಟ್ಟವಾದ ಮಂಜು ಆವರಿಸಿದೆ. ಈ ಕಾರಣದಿಂದಾಗಿ, ವಿಮಾನಗಳು ಹಾರಾಟದಲ್ಲಿ ವಿಳಂಬವಾಗುತ್ತವೆ. ಜನವರಿ 22 ರಂದು, ಪ್ರತಿಕೂಲ ಹವಾಮಾನದಿಂದಾಗಿ, ಅವರ ವಿಮಾನ ಅಯೋಧ್ಯೆಯನ್ನು ತಡವಾಗಿ ತಲುಪ ಬಹುದು, ಈ ಹಿನ್ನಲೆಯಲ್ಲಿ ಅಂತಹ ಪರಿಸ್ಥಿತಿಯನ್ನು ತಪ್ಪಿಸಲು, ಅವರು ಒಂದು ದಿನ ಮುಂಚಿತವಾಗಿ ಅಯೋಧ್ಯೆಯನ್ನು ತಲುಪಬಹುದು ಎನ್ನಲಾಗಿದೆ. ಮಧ್ಯಾಹ್ನ 12:15 ರಿಂದ 12:45 ರವರೆಗೆ ಪ್ರತಿಷ್ಠಾಪನೆ ನಡೆಯಲಿದೆ. ಪ್ರಧಾನಿ…

Read More

ನವದೆಹಲಿ: ಭಗವಾನ್ ರಾಮನ ನಗರ ಅಯೋಧ್ಯೆ ಮತ್ತೊಮ್ಮೆ ದೇವಾಲಯದಿಂದಾಗಿ ಸುದ್ದಿಯಲ್ಲಿದೆ. ಆದರೆ, ಈ ಮೊದಲು ಅಯೋಧ್ಯೆಗೆ ‘ಅಯೋಧ್ಯೆ’ ಎಂದು ಹೆಸರಿಸಲಾಗಿರಲಿಲ್ಲ ಎಂದು ನಿಮಗೆ ತಿಳಿದಿದೆಯೇ? ಮೊದಲು ಅಯೋಧ್ಯೆಯ ಹೆಸರೇನು ಎಂದು ನಿಮಗೆ ತಿಳಿದಿದೆಯೇ? ಹಾಗಾದ್ರೇ ಈಗ ನಾವು ನಿಮಗೆ ಇಂಟರ್‌ಸ್ಟಿಂಗ್‌ ಮಾಹಿತಿಯನ್ನು ನಿಮಗೆ ತಿಳಿಸುತ್ತಿದ್ದೀವೆ.   ಅಯೋಧ್ಯೆಯು ಪವಿತ್ರ ಸರಯೂ ನದಿಯ ದಡದಲ್ಲಿರುವ ಒಂದು ನಗರವಾಗಿದೆ. ಸಾಕೇತ್ ಎಂದೂ ಕರೆಯಲ್ಪಡುವ ಅಯೋಧ್ಯೆ ಭಾರತದ ಪ್ರಾಚೀನ ನಗರವಾಗಿದ್ದು, ಭಗವಾನ್ ಶ್ರೀ ರಾಮನ ಜನ್ಮಸ್ಥಳವಾಗಿದೆ ಮತ್ತು ರಾಮಾಯಣ ಮಹಾಕಾವ್ಯದ ನೆಲೆಯಾಗಿದೆ. ಅಯೋಧ್ಯೆಯು ಪ್ರಾಚೀನ ಕೋಸಲ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇದು ಸರಾಸರಿ 93 ಮೀಟರ್ (305 ಅಡಿ) ಎತ್ತರದಲ್ಲಿದೆ. ಭಗವಾನ್ ಶ್ರೀ ರಾಮನ ಜನ್ಮಸ್ಥಳ ಎಂಬ ನಂಬಿಕೆಯಿಂದಾಗಿ, ಅಯೋಧ್ಯೆಯನ್ನು (ಅವಧ್ಪುರಿ) ಹಿಂದೂಗಳಿಗೆ ಏಳು ಪ್ರಮುಖ ಯಾತ್ರಾ ಸ್ಥಳಗಳಲ್ಲಿ (ಮೋಕ್ಷದಾಯಿನಿ ಸಪ್ತ ಪುರಿ) ಮೊದಲನೆಯದು ಎಂದು ಪರಿಗಣಿಸಲಾಗಿದೆ. ಅಯೋಧ್ಯೆಯನ್ನು ಅನೇಕ ಹಳೆಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಮತ್ತು ಹಳೆಯ ದಾಖಲೆಗಳು ಮತ್ತು ಅನೇಕ ಧಾರ್ಮಿಕ ಪುಸ್ತಕಗಳಲ್ಲಿ ವಿಭಿನ್ನ ಹೆಸರುಗಳನ್ನು ಉಲ್ಲೇಖಿಸಲಾಗಿದೆ.…

Read More

ಬೆಂಗಳೂರೂ: : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ, 2024-25ನೇ ಸಾಲಿನ ಮಾರ್ಚ್ / ಏಪ್ರಿಲ್ 2024ರ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮಾರ್ಚ್ / ಏಪ್ರಿಲ್ 2024ರಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ 25-03-2024 ರಿಂದ 06-04-2024 ರವರೆಗೆ ನಡೆಸಲು ತೀರ್ಮಾನಿಸಿದೆ. ದ್ವಿತೀಯ ಪಿಯುಸಿ(PUC) ಹಾಗೂ ಎಸ್​ಎಸ್​ಎಲ್​ಸಿ (SSLC) ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. 2023-24 ನೇ ಸಾಲಿನ ವಾರ್ಷಿಕ ಪರೀಕ್ಷೆ -1ರ ಅಂತಿಮ ವೇಳಾಪಟ್ಟಿ ಪ್ರಕಟ ಮಾಡಿದೆ. ಈ ಕುರಿತು ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸದರಿ ವೇಳಾಪಟ್ಟಿಯನ್ನು ಎಲ್ಲ ಸರ್ಕಾರಿ/ ಅನುದಾನಿತ/ ಅನುದಾನರಹಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಸೂಚನಾ ಫಲಕದಲ್ಲಿ ಕಡ್ಡಾಯವಾಗಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಖುದ್ದಾಗಿ ಗಮನಿಸಲು ಸೂಚಿಸಿದೆ. ಪ್ರಥಮ ಭಾಷೆಗೆ 100 ಗರಿಷ್ಠ ಅಂಕಗಳು , ಉಳಿದ ವಿಷಯಗಳಿಗೆ ಪ್ರತಿ ವಿಷಯಕ್ಕೆ 80 ಅಂಕಗಳಂತೆ ಪರೀಕ್ಷೆ ನಿಗದಿಪಡಿಸಲಾಗಿದೆ. ಪ್ರಥಮ ಭಾಷೆ ಮತ್ತು ಐಚ್ಛಿಕ ವಿಷಯಗಳ ಪರೀಕ್ಷೆ ಬರೆಯಲು 3…

Read More

ನವದೆಹಲಿ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ದೇವಾಲಯದಲ್ಲಿ ನಿರ್ಣಾಯಕ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ ಮತ್ತು ಜನವರಿ 21 ರವರೆಗೆ ಮುಂದುವರಿಯಲಿದೆ. ಜನವರಿ 22 ರಂದು ರಾಮ ಮಂದಿರದ ಭವ್ಯ ಉದ್ಘಾಟನೆ ನಡೆಯಲಿದೆ. ಏತನ್ಮಧ್ಯೆ, ರಾಮ್ ಲಲ್ಲಾ ಅವರ ಪ್ರಾತಿನಿಧಿಕ ವಿಗ್ರಹವನ್ನು ಇಂದು ಬೆಳಿಗ್ಗೆ ಅಯೋಧ್ಯೆಯ ರಾಮ್ ದೇವಾಲಯ ಸಂಕೀರ್ಣಕ್ಕೆ ಕರೆದೊಯ್ಯಲಾಯಿತು. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಮಹತ್ವದ ಸಂದರ್ಭದಲ್ಲಿ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ಸೆಲೆಬ್ರಿಟಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ವ್ಯಕ್ತಿಗಳ ಉಪಸ್ಥಿತಿಯನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ (ರಾಮ್ ಮಂದಿರ ಟ್ರಸ್ಟ್) ನಿರೀಕ್ಷಿಸುತ್ತಿದೆ. ಇದಲ್ಲದೆ, ವಿವಿಧ ದೇಶಗಳಿಂದ ಸುಮಾರು 100 ಪ್ರತಿನಿಧಿಗಳು ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ದೇವಾಲಯದ ಟ್ರಸ್ಟ್ ಸೋಮವಾರ ಪ್ರಕಟಿಸಿದ ಪ್ರಕಟಣೆಯ ಪ್ರಕಾರ, ‘ಭಗವಾನ್ ಶ್ರೀ ರಾಮ್ಲಾಲಾ ಸರ್ಕಾರ್ನ ಗರ್ಭಗುಡಿಯಲ್ಲಿ’ ಎಲ್ಲಾ ಚಿನ್ನದ ಬಾಗಿಲುಗಳ ಸ್ಥಾಪನೆ ಪೂರ್ಣಗೊಂಡಿದೆ. ವಿಶೇಷವೆಂದರೆ, ಮೈಸೂರು ಮೂಲದ ಶಿಲ್ಪಿ…

Read More

ಬೆಂಗಳೂರು: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ಅವರಿಗೆ ಹೃದಯಾಘಾತವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಅವರು ಬುಧವಾರ ಸಂಜೆ ಮನೆಯಲ್ಲಿ ವ್ಯಾಯಾಮ ಮಾಡುತ್ತಿದ್ದ ವೇಳೆ ಲಘು ಹೃದಯಾಘಾತವಾಗಿದೆ ಎನ್ನಲಾಗಿದ್ದು, ಕೂಡಲೇ ಅವರನ್ನು ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಅಂತ ತಿಳಿದು ಬಂದಿದೆ. ದ್ಯ ತಜ್ಞ ವೈದ್ಯರಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ ಎಂದು ತಿಳಿದುಬಂದಿದೆ.

Read More