Subscribe to Updates
Get the latest creative news from FooBar about art, design and business.
Author: kannadanewsnow07
ಕಲಬುರಗಿ: ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನವಾಗಿದೆ. ದೆಹಲಿಯಿಂದ ವಿಶೇಶ ವಿಮಾನದಲ್ಲಿ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸರ್ಕಾರದ ಪರವಾಗಿ ಸಚಿವ ಪಾಟೀಲ್ ಸ್ವಾಗತ ಮಾಡಿದರು. ಪಿಎಂ ಆವಾಸ್ ಯೋಜನೆಯಡಿ ಬಡವರಿಗೆ ಮನೆಗಳ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸೊಲ್ಲಾಪುರಕ್ಕೆ ತೆರಳಲಿರುವ ಅವರು ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದು ಮುಂದಿನ ಪ್ರಯಾಣ ಕೈಗೊಳ್ಳಲಿದ್ದಾರೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸೊಲ್ಲಾಪುರದಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಿಲುಗಡೆ ನೀಡಲಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕಲಬುರಗಿ ವಿಮಾನ ನಿಲ್ದಾಣದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ. ಜನವರಿ 19 ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಕಾರಣ ಕಲಬುರಗಿ ವಿಮಾನ ನಿಲ್ದಾಣದ ಸುತ್ತಮುತ್ತ 10 ಕಿಮೀ ವ್ಯಾಪ್ತಿಯಲ್ಲಿ ಡ್ರೋಣ್ ಕ್ಯಾಮರಾ ಹಾರಾಟ ನಿಷೇಧಿಸಲಾಗಿದೆ. CRPC ಸೆಕ್ಷನ್ 144 ಅಡಿಯಲ್ಲಿ ಡ್ರೋನ್ ಕ್ಯಾಮರಾ ಹಾರಾಟ…
ನವದೆಹಲಿ: ರಾಮ ಮಂದಿರದ ಉದ್ಘಾಟನಾ ದಿನಗಳನ್ನು ಎಣಿಸುತ್ತಿದ್ದಂತೆ, ಜನರಲ್ಲಿ ಉತ್ಸಾಹವು ಉತ್ತುಂಗದಲ್ಲಿದೆ. ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಶ್ರೀ ರಾಮನನ್ನು ಸ್ವಾಗತಿಸಲು ಇಡೀ ದೇಶವು ಜನವರಿ 22 ರ ದಿನಾಂಕಕ್ಕಾಗಿ ಕಾಯುತ್ತಿದೆ. ಈ ನಡುವೆ ಖ್ಯಾತ ಗಾಯತಕ ಸೋನು ನಿಗಮ್ ಶ್ರೀ ರಾಮ್ ಲಲ್ಲಾ ಭಕ್ತಿಗೀತೆ ಬಿಡುಗಡೆ ಮಾಡಿದ್ದಾರೆ. . “ಶ್ರೀ ರಾಮ್ ಲಲ್ಲಾ” ಭಕ್ತಿಗೀತೆಯನ್ನು ದೂರದರ್ಶನ ನ್ಯಾಷನಲ್ ನ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಜನವರಿ 18 ರಂದು ಬಿಡುಗಡೆಯಾದ ಭಜನಾ ಹಾಡಿನಲ್ಲಿ ಸೋನು ನಿಗಮ್ ತಮ್ಮ ಭಕ್ತಿಯನ್ನು ಹರಡುತ್ತಿದ್ದಾರೆ. ಭಕ್ತಿಗೀತೆಯು ಖಂಡಿತವಾಗಿಯೂ ನಿಮ್ಮನ್ನು ಭಕ್ತಿಯ ಅಲೆಗಳಲ್ಲಿ ತೊಡಗುವಂತೆ ಮಾಡುತ್ತದೆ. https://youtu.be/3UP8YX-RVvs
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಯುಜಿಸಿ ನೆಟ್ ಡಿಸೆಂಬರ್ 2023 ರ ಫಲಿತಾಂಶವನ್ನು ಜನವರಿ 19 ರಂದು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಯುಜಿಸಿ ನೆಟ್ ಸ್ಕೋರ್ ಕಾರ್ಡ್ 2023 ಅನ್ನು ಅಧಿಕೃತ ವೆಬ್ಸೈಟ್ಗಳಿಂದ ugcnet.nta.ac.in ಅಥವಾ nta.ac.in ನಲ್ಲಿ ಪರಿಶೀಲಿಸಬಹುದು ಮತ್ತು ಡೌನ್ಲೋಡ್ ಮಾಡಬಹುದು. ಇದಲ್ಲದೆ, ಅಭ್ಯರ್ಥಿಗಳು ಯುಜಿಸಿ ನೆಟ್ ಡಿಸೆಂಬರ್ ಫಲಿತಾಂಶವನ್ನು ನೇರವಾಗಿ ಈ ಕೆಳಗಿನ ಲಿಂಕ್ ಮೂಲಕ ಪರಿಶೀಲಿಸಬಹುದು. ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸುವ ಮೂಲಕ ನೀವು ಫಲಿತಾಂಶವನ್ನು ಸಹ ನೋಡಬಹುದು. ಯುಜಿಸಿ-ನೆಟ್ ಡಿಸೆಂಬರ್ 2023 ಪರೀಕ್ಷೆಯನ್ನು 2023 ರ ಡಿಸೆಂಬರ್ 6 ರಿಂದ 19 ರವರೆಗೆ ದೇಶಾದ್ಯಂತ 292 ನಗರಗಳಲ್ಲಿ 83 ವಿಷಯಗಳಲ್ಲಿ ನಡೆಸಲಾಯಿತು. ಒಟ್ಟು 9 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಯುಜಿಸಿ ನೆಟ್ ಡಿಸೆಂಬರ್ 2023 ಫಲಿತಾಂಶ ಡೌನ್ಲೋಡ್ ಮಾಡುವುದು ಹೇಗೆ? ಹಂತ 1: ಅಧಿಕೃತ ವೆಬ್ಸೈಟ್ಗೆ ಹೋಗಿ ugcnet.nta.ac.in ಹಂತ 2: ಮುಖಪುಟದಲ್ಲಿ, ಸಾರ್ವಜನಿಕ ಸೂಚನೆಗಳ ವಿಭಾಗದ ಅಡಿಯಲ್ಲಿ ಯುಜಿಸಿ ನೆಟ್…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಈ ದೇವಾಲಯದಲ್ಲಿ ಇರುವ ಆತ್ಮಲಿಂಗವನ್ನು ಸ್ಪರ್ಶಿಸಿದರೆ ನಿಮ್ಮ ಎಲ್ಲಾ ಪಾಪಗಳಿಂದಲೂ ಮುಕ್ತಿ ಹೊಂದಬಹುದು ಹಾಗಾದರೆ ಆ ದೇವಾಲಯ ಹಾಗೂ ಅದರ ಮಹತ್ವದ ಬಗ್ಗೆ ತಿಳಿಯೋಣ: ಮಹಾನ್ ಶಕ್ತಿಯನ್ನು ಹೊಂದಿರುವ ಶಿವನಿಗೆ ಸಂಬಂಧಿಸಿದ ಅನೇಕ ದಂತ ಕಥೆಗಳು ಇವೆ ಅಂತಹ ವಿಶೇಷ ಕಥೆ ಪುರಾಣಗಳಿಂದ ಸ್ಥಾಪಿಸಲಾದ ದೇವಾಲಯವೇ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ ದಕ್ಷಿಣದ ಕಾಶಿ ಎಂದು ಕರೆಯುವ ಗೋಕರ್ಣ ದೇವತೆಗಳು ವಾಸವಾಗಿರುವ ಪವಿತ್ರ ಭೂಮಿ ಇಲ್ಲಿ ಶಿವನಿಗೆ ಸಂಬಂಧಿಸಿದ ಮಹಾದೇವಲಯ ಇರುವುದನ್ನು ಕಾಣಬಹುದು ಈ ದೇವಾಲಯಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ ಈ ದೇವಾಲಯಕ್ಕೆ ಸಂಬಂಧಿಸಿದ ಅನೇಕ ಕಥೆಗಳು ಇವೆ ರಾವಣನು ದುಷ್ಟತೆಯನ್ನು ಹೊಂದಿದ್ದರು ಶಿವನ ಭಕ್ತನಾಗಿದ್ದ ತಾಯಿಯ ಆಸೆಯನ್ನು ಈಡೇರಿಸುವ ಸಲುವಾಗಿ ಶಿವನ ತಪಸ್ಸನ್ನು ಮಾಡುತ್ತಾನೆ ಶಿವನ ಕೃಪೆಯನ್ನು ಪಡೆದ ರಾವಣನು ಶಿವನಿಂದ ಆತ್ಮಲಿಂಗವನ್ನು ಪಡೆದುಕೊಂಡ ಖುಷಿಯಿಂದ ಮನೆಗೆ ಸಾಗುವಾಗ ಸಂಧ್ಯಾ ಕಾಲವಾಗಿತ್ತು…
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಸೂರ್ಯನಾರಾಯಣ ದೇವರು ತಮ್ಮ ಸ್ಥಾನವನ್ನು ಬದಲಾವಣೆ ಮಾಡುತ್ತಿದ್ದಾರೆ ಇಷ್ಟು ದಿನ ಧನು ರಾಶಿಯಲ್ಲಿ ಮಾಸವನ್ನು ಕಳೆದು ಈಗ ಮಕರ ರಾಶಿಯನ್ನು 14ನೇ ತಾರೀಕು ರಾತ್ರಿ 8 ಗಂಟೆ 40 ನಿಮಿಷಕ್ಕೆ ಪ್ರವೇಶಿಸುತ್ತಿದ್ದಾರೆ ಸೂರ್ಯನು 5ನೆ ಮನೆಯ ಅಧಿಪತಿಯಾಗಿದ್ದು ಈಗ ಹತ್ತನೇ ಮನೆಯನ್ನು ಪ್ರವೇಶಿಸುತ್ತಿದ್ದರೆ ಅಂದರೆ ಸಿಂಹ ರಾಶಿಯ ಅಧಿಪತಿ ಸೂರ್ಯ ಆದ್ರೆ ಸೂರ್ಯ ತನ್ನ ಶತ್ರುವಾದ ಮಕರ ರಾಶಿ ಮಕರ ರಾಶಿ ಅಧಿಪತಿ ಶನಿ ದೇವರು ಶನಿ ದೇವರ ಮನೆಗೆ ಅವರು ಪ್ರವೇಶಿಸುತ್ತಿದ್ದಾರೆ ಸೂರ್ಯದೇವರು ಮಕರ ರಾಶಿಯನ್ನು ಪ್ರವೇಶಿಸಿದ ಮೇಲೆ ಕೆಲವು ರಾಶಿಗಳಲ್ಲಿ ಬದಲಾವಣೆಯಾಗುತ್ತದೆ ಕೆಲವರಿಗೆ ಅಪಾರವಾದ ನೋವು ತೊಂದರೆಗಳನ್ನು ಕೊಟ್ಟರೆ ಇನ್ನು ಕೆಲವರಿಗೆ ಎಷ್ಟು ದಿನದ ಕನಸುಗಳು ನನಸಾಗುವ ಸಮಯ ಕೂಡಿ ಬರಲಿದೆ ಕೆಲವರಿಗೆ ಕಳೆದುಕೊಳ್ಳುವ ಸಂದರ್ಭ ಬಂದರೆ ಇನ್ನೂ ಕೆಲವರಿಗೆ ಗಳಿಸುವ ಸಂದರ್ಭ ಬರಲಿದೆ ಗ್ರಹಗಳ ಸ್ಥಾನ ಪಲ್ಲಟದಿಂದ…
ಬೆಂಗಳೂರು: ರ್ಕಾರಿ ಆದರ್ಶ ವಿದ್ಯಾಲಯ (ಆರ್.ಎಂ.ಎಸ್.ಎ) ಶಾಲೆಗೆ 2024-25ನೇ ಸಾಲಿನ 6ನೇ ತರಗತಿ ದಾಖಲಾತಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈಗ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಪ್ರವೇಶ ಪರೀಕ್ಷೆಗೆ ಅರ್ಜಿಯನ್ನು ಅಂತರ ಜಾಲದಲ್ಲಿ (ಆನ್ಲೈನ್) WWW.schooleducation.kar.nic.in ಅಥವಾ WWW.vidyavahini.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಫೆಬ್ರವರಿ 06 ಕೊನೆಯ ದಿನ ಆಗಿರುತ್ತದೆ. ಈ ವರ್ಷ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸುವುದಿಲ್ಲ. ಆದ್ದರಿಂದ ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ. ಅರ್ಜಿ ತುಂಬುವಾಗ ವಿದ್ಯಾರ್ಥಿಗಳು ತಮ್ಮ ಪೆÇೀಷಕರು ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೊಬೈಲ್ ಮೂಲಕ ಮೆಸೇಜ್ ಹೋಗುತ್ತದೆ. ಆದ್ದರಿಂದ ಸೈಬರ್ ಸೆಂಟರ್ ಅವರ ಮೊಬೈಲ್ ನಂಬರ್ ಹಾಕಬಾರದು. ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಪಾಲಕರು ತಮ್ಮ ಮಕ್ಕಳ ಶಾಲೆಯ ಎಸ್.ಟಿ.ಎಸ್ ನಲ್ಲಿ ದಾಖಲಾತಿ ಮಾಹಿತಿಯನ್ನು ಪರಿಶೀಲಿಸಿ…
ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು ಹೀಗಿದೆ. ಪ್ರಮುಖ ನಿರ್ಣಯಗಳು ●ಗೃಹ ಜ್ಯೋತಿ ಯೋಜನೆಯ ಅನುಷ್ಠಾನ ಕುರಿತು ದಿನಾಂಕ 5.6.2023 ರಂದು ಹೊರಡಿಸಿರುವ ಸರ್ಕಾರಿ ಆದೇಶವನ್ನು ಮಾರ್ಪಡಿಸಿ ಮಾಸಿಕ 48 ಯೂನಿಟ್ ಗಳಿಗಿಂತ ಕಡಿಮೆ ಬಳಸುವ LT 2 ಗ್ರಾಹಕರಿಗೆ ಹೆಚ್ವರಿ 10 % ಬದಲಿಗೆ ಹೆಚ್ಚುವರಿ 10 ಯೂನಿಟ್ ಅರ್ಹತಾ ಯೂನಿಟ್ ಗಳನ್ನು ಒದಗಿಸಲು ಸಚಿವ ಸಂಪುಟ ನಿರ್ಧರಿಸಿದೆ. ●ಜಗಜ್ಯೋತಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕರನ್ನಾಗಿ ಘೋಷಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ●ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ಷೇರು ಬಂಡವಾಳವನ್ನು ರೂ.600 ಕೋಟಿ ರೂ.ಗಳಿಂದ 1200 ಕೋಟಿ ರೂ.ಗಳಿಗೆ ಹೆಚ್ಚಿಸಲು ಸಚಿವ ಸಂಪುಟ ಅನುಮೋದಿಸಿದೆ. ●ಉಡುಪಿ ನ್ಯಾಯಾಲಯದ ಆವರಣದಲ್ಲಿ ವಕೀಲರ ಭವನ ಮತ್ತು ಎ.ಡಿ.ಆರ್ ಸಂಕೀರ್ಣ ವನ್ನೊಳಗೊಂಡ ಅನೆಕ್ಸ್ ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿ ( ಪ್ರಥಮ ಹಂತ) ರೂ.15.14 ಕೋಟಿಗಳ ಅಂದಾಜುಪಟ್ಟಿಗೆ ನ್ಯಾಯಾಲಯ ಕಟ್ಟಡಗಳ ನಿರ್ಮಾಣಕ್ಕೆ ಸಚಿವ ಸಂಪುಟದ ಒಪ್ಪಿಗೆ ●ವಿಜಯನಗರ…
ಬೆಂಗಳೂರು: ಗೃಹ ಜ್ಯೋತಿ ಯೋಜನೆಯಡಿ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಶೇ.10ರ ಬದಲು ಹೆಚ್ಚುವರಿಯಾಗಿ 10 ಯೂನಿಟ್ ಉಚಿತವಾಗಿ ನೀಡಲು ಸರ್ಕಾರ ತೀರ್ಮಾನಿಸಿದೆ. ಗೃಹ ಜ್ಯೋತಿ ಯೋಜನೆಯಡಿಯಲ್ಲಿ 48 ಯೂನಿಟ್ಗಳಿಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಹೆಚ್ಚುವರಿ ಶೇ.10ರ ಬದಲಿಗೆ ಹೆಚ್ಚುವರಿ 10 ಯೂನಿಟ್ಗಳನ್ನು ಒದಗಿಸಲು ಸರ್ಕಾರ ನಿರ್ಧಾರ ಮಾಡಿದೆ. ಕಡಿಮೆ ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ. . ವರ್ಷದ ವಿದ್ಯುತ್ ಬಳಕೆಯ ಸರಾಸರಿ ಲೆಕ್ಕದಲ್ಲಿ ಕಡಿಮೆ ವಿದ್ಯುತ್ ಯೂನಿಟ್ ಬಳಕೆ ಮಾಡುವವರು ಹೆಚ್ಚುವರಿಯಾಗಿ ಉಚಿತವಾಗಿ 10 ಯೂನಿಟ್ ವಿದ್ಯುತ್ ಪಡೆದುಕೊಳ್ಳಲಿದ್ದಾರೆ ಅಂತ ಅವರು ಇದೇ ವೇಳೆ ತಿಳಿಸಿದರು. ಉದಾಹರಣೆಗೆ ಸರಾಸರಿ 30 ಯೂನಿಟ್ ಬಳಸುವವರು ಇನ್ನು 40 ಯೂನಿಟ್ಗಳವರೆಗೆ ಉಚಿತವಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ.ಬೆಸ್ಕಾಂನಲ್ಲಿ 69.73 ಲಕ್ಷ ಕುಟುಂಬಗಳು 48 ಯೂನಿಟ್ಗಿಂತ ಕಡಿಮೆ ಬಳಕೆ ಮಾಡುತ್ತಿದ್ದು, 10 ಯೂನಿಟ್ಗಳ ಹೆಚ್ಚುವರಿ ಹೆಚ್ಚಳದಿಂದ ರೂ.33…
ಬೆಂಗಳೂರು: ದೇವನಹಳ್ಳಿಯಲ್ಲಿ ನಿಮಾರ್ಣ ಆಗಿರುವ ಬೋಯಿಂಗ್ ವಿಮಾನ ಕಂಪನಿಯ ಜಾಗತಿಕ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕೇಂದ್ರವನ್ನು ಶುಕ್ರವಾರ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ನಡುವೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಐಪಿಗಳ ಸಂಚಾರದ ಹಿನ್ನೆಲೆಯಲ್ಲಿ ದಿನಾಂಕ 19-01-2024 ರಂದು ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಈ ಕೆಳಗಿನ ರಸ್ತೆಗಳಲ್ಲಿ ಕೆಲವು ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಈ ಕೆಳಗಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಗೊಲ್ಲಹಳ್ಳಿ ಗೇಟ್ ನಿಂದ ಹುಣಚೂರು (ಕೆಐಎಡಿಬಿ ಕೈಗಾರಿಕಾ ಪ್ರದೇಶ) ಏರ್ಲೈನ್ಸ್ ಧಾಬಾ (ಎನ್ಎಚ್-648) ಬೂದಿಗೆರೆಗೆ ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಿಂದ ವಿಮಾನ ನಿಲ್ದಾಣ ರಸ್ತೆ ವಿಮಾನ ನಿಲ್ದಾಣಕ್ಕೆ ಚಿಕ್ಕಜಾಲ ಕೋಟೆ ಮುಖ್ಯರಸ್ತೆ ಬಾಗಲೂರಿನಿಂದ ವಿಮಾನ ನಿಲ್ದಾಣಕ್ಕೆ ಸೂಚಿಸಿದ ಮಾರ್ಗಗಳು 1. ವೈಟ್ಫೀಲ್ಡ್ ಕೆ.ಆರ್.ಪುರಂನಿಂದ ಬಾಗಲೂರು ಕೈಗಾರಿಕಾ ಪ್ರದೇಶದ ಮೂಲಕ ವಿಮಾನ ನಿಲ್ದಾಣದ ಕಡೆಗೆ ಚಲಿಸುವ ವಾಹನಗಳು ಗೊಲ್ಲಹಳ್ಳಿ ಗೇಟ್ – ಬಲ ತಿರುವು – ಬೆಟ್ಟಕೋಟೆ – ಏರ್ಲೈನ್ಸ್ ಡಾಬಾ – ಎಡ ತಿರುವು…
ನವದೆಹಲಿ: ಗುಜರಾತ್ನ ವಡೋದರಾದಲ್ಲಿ ಸಂಭವಿಸಿದ ದೋಣಿ ದುರಂತ ಘಟನೆಯಲ್ಲಿ ಜೀವಹಾನಿ ಬಗ್ಗೆ ತಿಳಿದು ದುಃಖಿತನಾಗಿದ್ದೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಪಿಕ್ನಿಕ್ ಗೆ ತೆರಳಿದ್ದ 27 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ದೋಣಿ ಮುಳುಗಿ 14 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ 16 ಜನರು ಸಾವನ್ನಪ್ಪಿದ ಘಟನೆ ಗುಜರಾತ್ ನ ವಡೋದರಾ ನಗರದ ಹೊರವಲಯದಲ್ಲಿ ಗುರುವಾರ ನಡೆದಿದೆ. “ವಡೋದರಾದ ಹರ್ನಿ ಸರೋವರದಲ್ಲಿ ದೋಣಿ ಮಗುಚಿ ಜೀವಹಾನಿಯಾಗಿರುವುದು ದುಃಖ ತಂದಿದೆ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬಗಳೊಂದಿಗೆ ನನ್ನ ಆಲೋಚನೆಗಳಿವೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ. ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ. ಮೃತರ ಕುಟುಂಬಗಳಿಗೆ PMNRFನಿಂದ ತಲಾ 2 ಲಕ್ಷ ರೂ. ಗಾಯಗೊಂಡವರಿಗೆ 50,000 ರೂ.ಗಳನ್ನು ನೀಡಲಾಗುವುದು” ಎಂದು ಅವರು ಟ್ವಿಟರರ್ನಲ್ಲಿ ಮಾಹಿತಿ ನೀಡಿದ್ದಾರೆ. https://twitter.com/PMOIndia/status/1747982826409255387