Subscribe to Updates
Get the latest creative news from FooBar about art, design and business.
Author: kannadanewsnow07
ನವದೆಹಲಿ: ಲೋಕಸಭಾ ಚುನಾವಣೆಗೆ ಮುನ್ನ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ಪೂರ್ಣ ಉತ್ಸಾಹದಿಂದ ಎದುರಿಸಲು ಸಜ್ಜಾಗುತ್ತಿವೆ. ಈ ಮಧ್ಯೆ, ಸರ್ಕಾರಿ ಸ್ವಾಮ್ಯದ ಪೆಟ್ರೋಲ್ ಪಂಪ್ಗಳು ಮತ್ತು ಇಂಧನ ಚಿಲ್ಲರೆ ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳ ಅಸ್ತಿತ್ವದಲ್ಲಿರುವ ಹೋರ್ಡಿಂಗ್ಗಳು ಮತ್ತು ಬ್ಯಾನರ್ಗಳನ್ನು ಬದಲಿಸಿ ಬಿಜೆಪಿಯ ಚುನಾವಣಾ ಘೋಷಣೆ ‘ಮೋದಿ ಕಿ ಗ್ಯಾರಂಟಿ’ ಅನ್ನು ಪ್ರದರ್ಶಿಸುವ ಹೊಸ ಹೋರ್ಡಿಂಗ್ಗಳೊಂದಿಗೆ ಬದಲಾಯಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. https://kannadanewsnow.com/kannada/goons-in-namma-metro-karimani-owners-song-sings-a-ruckus/ https://kannadanewsnow.com/kannada/read-this-without-missing-out-before-drinking-hot-tea-coffee-in-a-paper-cup/ https://kannadanewsnow.com/kannada/centre-launches-chakshu-portal-to-report-spam-callers/ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಹೊಸ ಫ್ಲೆಕ್ಸ್ ಹೋರ್ಡಿಂಗ್ಗಳು ಬುಧವಾರದೊಳಗೆ ಜಾರಿಯಲ್ಲಿವೆಯೆ ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ಸರ್ಕಾರಿ ಸ್ವಾಮ್ಯದ ಇಂಧನ ಮಳಿಗೆಗಳ ವ್ಯವಸ್ಥಾಪಕರಿಗೆ “ಸಹಕರಿಸಲು” ಮತ್ತು ಹೋರ್ಡಿಂಗ್ ಮಾರಾಟಗಾರರು ತಮ್ಮ ಗೊತ್ತುಪಡಿಸಿದ ಮಳಿಗೆಗಳಲ್ಲಿ ವರದಿ ಮಾಡದಿದ್ದರೆ ಆಯಾ ಕ್ಷೇತ್ರ ಅಧಿಕಾರಿಗಳಿಗೆ ವರದಿ ಮಾಡಲು ಕೇಳಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪುಂಡರು ಹುಚ್ಚಾಟ ಮರೆದಿದ್ದು, ಮೆಟ್ರೋದಲ್ಲಿನ ನಿಯಮಗಳ ವಿರುದ್ದ ನಡೆದುಕೊಂಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. https://kannadanewsnow.com/kannada/centre-launches-chakshu-portal-to-report-spam-callers/ https://kannadanewsnow.com/kannada/read-this-without-missing-out-before-drinking-hot-tea-coffee-in-a-paper-cup/ ನಿನ್ನೆ ಮಧ್ಯರಾತ್ರಿ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಪುಂಡ ಯುವಕರ ಗುಂಪುವೊಂದು ಕರಿಮಣಿ ಮಾಲೀಕ ನೀನಲ್ಲ ಹಾಡನ್ನು ಹಾಡುವುದರ ಮೂಲಕ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ ಚಿನ್ನಸ್ವಾಮಿಯಕ್ರೀಡಾಂಗಣದಲ್ಲಿ ಮ್ಯಾಚ್ ಮುಗಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದ ಪುಂಡ ಹುಡುಗರ ಗುಂಪು ನಿಯಮ ಮೀರಿ ವರ್ತನೆ ಮಾಡಿದೆ ಎನ್ನಲಾಗಿದೆ. ಇದು ಮೆಟ್ರೋ ನಿಮಗಳಿಗೆ ವಿರುದ್ದವಾಗಿದ್ದು, ಸೂಕ್ತ ಕ್ರಮಕ್ಕಾಗಿ ಪೊಲೀಸರನ್ನು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ನಮ್ಮ ಮೆಟ್ರೋದಲ್ಲಿ ನಿಯಮ ಮೀರಿ ಉಲ್ಲಂಘನೆ ಮಾಡಿದ್ದ ಹಲವು ಮಂದಿಗೆ ವಾರ್ನ್ ಮಾಡಿ ದಂಡ ವಿಧಿಸಿ ಕಳುಹಿಸಿದ್ದನ್ನು ಸ್ಮರಿಸಬಹುದಾಗಿದೆ. https://twitter.com/DarshanBoss05/status/1764725715948183973
ಕೆಎನ್ಎನ್ಡಿಜಿಟಲ್ಡೆಸ್ಕ್: ಪ್ಲಾಸ್ಟಿಕ್ ಮನುಷ್ಯನ ಆರೋಗ್ಯಕ್ಕೆ ಹಾಗು ಪರಿಸರಕ್ಕೂ ಹಾನಿಯುಂಟ ಮಾಡುತ್ತದೆ ಎಂದು ಪ್ಲಾಸ್ಟಿಕ್ನ ಅನೇಕ ಕಡೆ ಬ್ಯಾನ್ ಮಾಡಲಾಗಿದೆ. ಇದಕ್ಕೆ ಪರ್ಯಾಯವಾಗಿ ಪೇಪರ್ ಬಂದಿದೆ. ಅಂದರೆ ಪೇಪರ್ ಕಪ್ಗಳು ಬಂದಿವೆ. ಈ ಪೇಪರ್ ಕಪ್ನಲ್ಲಿ ಟೀ ಕಾಫಿ ಸೇವನೆ ಎಷ್ಟು ಸೇಫ್? ಎಷ್ಟು ಅಪಾಯ ಅನ್ನೋದನ್ನ ತಿಳಿದುಕೊಳ್ಳೊಣ. ಹೌದು. ಸಂಶೋಧನೆಯೊಂದರ ಪ್ರಕಾರ ಪೇಪರ್ ಕಪ್ಗಳಲ್ಲಿ ಟೀ ಕಾಫಿಯಂತ ಬಿಸಿ ಪಾನೀಯಗಳ ಸೇವನೆ ಅಪಾಯಕಾರಿ ಎಂದು ಹೇಳಲಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಪೇಪರ್ ಕಪ್ನಲ್ಲಿ 100ಮಿಲಿ 75,000ದರದಲ್ಲಿ ಬಿಸಿ ಟೀ ಅಥವಾ ಕಾಫಿ ಸೇವಿಸಿದರೆ ಸೂಕ್ಷ್ಮಜೀವಿಯ ಹಾನಿಕಾರಕ ಪ್ಲಾಸ್ಟಿಕ್ ಕೋಶಗಳು ದೇಹಕ್ಕೆ ಪ್ರವೇಶವಾಗುತ್ತವೆ. 100ಮಿಲಿ 80 ರಿಂದ 90 ಡಿಗ್ರಿ ಸೆಂಟಿಗ್ರೇಡ್ಗೆ ಬಿಸಿ ಮಾಡಿದರೆ 25,000 ಮೈಕ್ರಾನ್ ಪ್ಲಾಸ್ಟಿಕ್ ಕಣಗಳು ನಮ್ಮ ದೇಹದ ಇಳಗೆ ಹೋಗುತ್ತವೆ. ಅಂದರೆ ಕ್ರೋಮಿಯಂ, ಹಾಗು ಕ್ಯಾಡ್ಮಿಯಂನಂತಹ ಹಾನಿಕಾರಕ ಲೋಹಗಳು ದೇವನ್ನು ಪ್ರವೇಶಿಸುತ್ತವೆ ಎಂದು ಅರ್ಥ. ಪೇಪರ್ ಕಪ್ಗಳನ್ನು ತಯಾರಿಸುವಾಗ ಹಗುರವಾದ ಹಾಗು…
ಕೆಎನ್ಎನ್ಡಿಜಿಟಲ್ಡೆಸ್ಕ್: ಬ್ರಕೊಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಗೆ ಬರ್ತಾ ಇರುವ ತರಕಾರಿ. ಇದರ ಸೇವನೆಯಿಂದ ದೇಹಕ್ಕೆ ಏನಲ್ಲಾ ಲಾಭಗಳಿವೆ ಎಂದು ಒಂದೊಂದಾಗಿ ತಿಳಿದುಕೊಳ್ಳೋಣ. ಸಲಾಡ್ ರೂಪದಲ್ಲಿ ಹೆಚ್ಚು ಸೇವಿಸುವ ಈ ಹಸಿರು ತರಕಾರಿಯಲ್ಲಿ ವಿಟಮಿನ್ ಸಿ ಹೇರಳ ಪ್ರಮಾಣದಲ್ಲಿ ಇದೆ. ಇನ್ನು ನೀವು ದಿನವೂ ಸಲ್ಪ ಪ್ರಮಾಣದಲ್ಲಿ ತಿಂದರೂ ಸಾಕು ದೇಹಕ್ಕೆ ರೋಗ ನಿರೋಧಕ ಶಕ್ತಿ ಒದಗುತ್ತದೆ. ಅಷ್ಟೇ ಅಲ್ಲದೇ ಇದರಲ್ಲಿ ಝಿಂಕ್, ವಿಟಮಿನ್ ಬಿ ಮತ್ತು ಕೆ, ಪ್ರೋಟೀನ್, ತಾಮ್ರ, ಕ್ಯಾಲ್ಸಿಯಂ, ಫೈಬರ್, ಪೊಟ್ಯಾಶಿಯಮ್, ಪೋಷಕಾಂಶಗಳಿವೆ. ಆಹಾರ ತಜ್ಞರ ಪ್ರಕಾರ ಈ ಹಸಿರು ತರಕಾರಿಯನ್ನು ಸಲಾಡ್ನಿಂದ ಹಿಡಿದು ಸೂಪ್ ವರೆಗೂ ಅಥವಾ ನಿಮ್ಮ ನಿತ್ಯದ ಅಡುಗೆಯಲ್ಲಿ ಬಳಸಬಹುದು. ಇದರಿಂದ ದೇಹಕ್ಕೆ ತುಂಬಾ ಪ್ರಯೋಜನಗಳಿವೆ. ಬ್ರಕೊಲಿ ಕ್ಯಾಲ್ಸಿಯಂ ಹೊಂದಿರುವ ಡೈರಿಯೇತರ ಅಪರೂಪದ ತರಕಾರಿಯಾಗಿದೆ. ಇದರಲ್ಲಿ ಸಲ್ಫೋರಾಫೇಲ್ ಸಮೃದ್ಧವಾಗಿದ್ದು ಕ್ಯಾನ್ಸರ್ಗೆ ಸಂಬಂಧಿಸಿದ ದೇಹದಲ್ಲಿ ಉರಿಯೂತವನ್ನು ತಡೆಗಟ್ಟುತ್ತದೆ. ಕ್ಯಾನ್ಸರ್ ಕೋಶಗಳನ್ನು ಬೆಳವಣಿಗೆಯಾಗದಂತೆ ನೋಡಿಕೊಳ್ಳುವ ಇದು ಕ್ಯಾನ್ಸರ್ ಗಡ್ಡೆಗಳನ್ನು ಕರಗಿಸುವ ಶಕ್ತಿ ಇದಕ್ಕಿದೆ. ಅಧಿಕ ರಕ್ತದೊತ್ತಡದಿಂದ…
ಕೆಎನ್ಎನ್ಡಿಜಿಟಲ್ಡೆಸ್ಕ್: ಮೆಟ್ಟಿಲು ಹತ್ತಿ ಇಳಿಯುವುದು ಒಂದು ವ್ಯಾಯಾಮ. ಹಾಗಾಗಿ ಮಾಲ್ಗಳಲ್ಲಿ, ಅಪಾರ್ಟ್ಮೆಂಟ್ಗಳಲ್ಲಿ, ಮೆಟ್ರೋ ಸ್ಟೇಷನ್ಗಳಲ್ಲಿ ಇನ್ನುಳಿದ ಪಬ್ಲಿಕ್ ಜಾಗಗಳಲ್ಲಿ ಆದಷ್ಟು ಮೆಟ್ಟುಗಳನ್ನೇ ಬಳಸಿ ಇದರಿಂದ ನಿಮ್ಮ ದೇಹಕ್ಕೆ ಉತ್ತಮ ವ್ಯಾಯಾಮವಾಗುತ್ತದೆ. ಇನ್ನುಳಿದ ವ್ಯಾಯಾಮ ಮಾಡಲು ಬೇಜಾರಾದಾಗ ನೀವು ಮೆಟ್ಟುಗಳನ್ನು ಹತ್ತಿ ಇಳಿದು ವ್ಯಾಯಾಮ ಮಾಡಬಹುದು. ನೆನಪಿರಲಿ ಮೆಟ್ಟಿಲು ವ್ಯಾಯಾಮಕ್ಕೂ ಕೆಲ ಸೂಕ್ಷ್ಮ ನಿಯಮಗಳಿವೆ. ಅವುಗಳನ್ನು ತಿಳಿದುಕೊಳ್ಳಿ. ಹಾಗು ನಿಮ್ಮ ವಯಸ್ಸಿಗೆ ತಕ್ಕ ಹಾಗೆ ಈ ವ್ಯಾಯಾಮ ಮಾಡಿ. ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ಇಳಿದರೆ ಹೃದಯಕ್ಕೆ ಅಪಾಯ ಉಂಟಾಗಬಹುದು. ನಿಯಮಿತವಾಗಿ ಈ ವ್ಯಾಯಾಮ ಮಾಡಿದರೆ ದೇಹ ಸದೃಢವಾಗಿರುತ್ತದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದರಿಂದ ತೂಕ ಬೇಗನೆ ಇಳಿಯುತ್ತದೆ. ಸ್ನಾಯುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ. ಹಾಗು ಇದರಿಂದ ದೈಹಿಕ ಆರೋಗ್ಯವಲ್ಲದೇ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ಸಮತಟ್ಟಾದ ನೆಲದ ಮೇಲೆ ವ್ಯಾಯಾಮ ಮಾಡುವುದಕ್ಕಿಂತ ಹೀಗೆ ಮೆಟ್ಟಿಲು ವ್ಯಾಯಾಮ ಮಾಡಿದರೆ ಸ್ನಾಯುಗಳಿಗೆ ಹೆಚ್ಚು ಶಕ್ತಿ ದೊರೆಯುತ್ತದೆ. ವಾಕಿಂಗ್ ಜಾಗಿಂಗ್ ಮಾಡುವುದಕ್ಕಿಂತ ಹೆಚ್ಚು ಇಲ್ಲಿ ಸ್ನಾಯುಗಳು…
ನವದೆಹಲಿ: ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಕಡ್ಡಾಯ ‘ಎರಡು ಮಕ್ಕಳ ಮಾನದಂಡ’ ಅರ್ಹತಾ ಮಾನದಂಡದ ಸಿಂಧುತ್ವವನ್ನು ಎತ್ತಿಹಿಡಿದ 21 ವರ್ಷಗಳ ನಂತರ, ಸುಪ್ರೀಂ ಕೋರ್ಟ್ ಈಗ ಸಾರ್ವಜನಿಕ ಉದ್ಯೋಗಕ್ಕೆ ಒಂದೇ ರೀತಿಯ ಮಾನದಂಡಕ್ಕೆ ಅನುಮೋದನೆ ನೀಡಿದೆ, ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳನ್ನು ಪಡೆಯುವುದನ್ನು ನಿಷೇಧಿಸಿದೆ. ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಡಯಾಪಂಕರ್ ದತ್ತಾ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು 2017 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದ ಮತ್ತು 2018 ರ ಮೇ 25 ರಂದು ರಾಜಸ್ಥಾನ ಪೊಲೀಸ್ನಲ್ಲಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಮಾಜಿ ಸೈನಿಕ ರಾಮ್ ಲಾಲ್ ಜಾಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು. ರಾಜಸ್ಥಾನ ಪೊಲೀಸ್ ಅಧೀನ ಸೇವಾ ನಿಯಮಗಳು, 1989 ರ ನಿಯಮ 24 (4) ರ ಪ್ರಕಾರ ಅವರ ಉಮೇದುವಾರಿಕೆಯನ್ನು ತಿರಸ್ಕರಿಸಲಾಯಿತು, ಇದು ರಾಜಸ್ಥಾನ ವಿವಿಧ ಸೇವೆ (ತಿದ್ದುಪಡಿ) ನಿಯಮಗಳು, 2001 ರ ಅಡಿಯಲ್ಲಿ ನಿಗದಿಪಡಿಸಿದ ಮಾನದಂಡವನ್ನು ಅನುಸರಿಸುತ್ತದೆ, ಇದು “ಜೂನ್ 1, 2002 ರಂದು ಅಥವಾ…
ಕೆಎನ್ಎನ್ಡಿಜಿಟಲ್ಡೆಸ್ಕ್: ಈಗ ಯಾರಿಗೆ ಕೇಳಿದರೂ ಶೀತ, ಕೆಮ್ಮು, ಜ್ವರ, ತಲೆ ನೋವು ಅಂತ ಹೇಳ್ತಾರೆ. ಕೆಲವೊಮ್ಮೆ ಜ್ವರ ಕಡಿಮೆಯಾದರೂ ಶೀತ ಹಾಗು ತಲೆಭಾರ ಮಾತ್ರ ಕಡಿಮೆಯಾಗುವುದಿಲ್ಲ. ಇದಕ್ಕೆ ಮಾತ್ರೆಗಳ ಬದಲಾಗಿ ಈ ಕೆಳಗಿನ ಮನೆಮದ್ದು ಟ್ರೈ ಮಾಡಿ ನೋಡಿ. ಶೀತಕ್ಕೆ ಗಿಡ ಮೂಲಿಕೆಗಳ ಚಹಾ ಸೇವನೆ ಅತ್ಯುತ್ತಮ. ಅಂದರೆ ಲೆಮನ್ ಟೀ, ಗ್ರೀನ್ ಟೀ ಸೇವಿಸಿ. ಶುಂಠಿ ಟೀ ಸಹ ಶೀತಕ್ಕೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಶುಂಠಿ ಟೀ ಕಫವನ್ನು ಕರಗಿಸಿ ಹೊರ ಹಾಕುತ್ತದೆ ಹಾಗು ಗಂಟಲಿನ ಇನ್ಫೆಕ್ಷನ್ ಕಡಿಮೆ ಮಾಡುತ್ತದೆ. ಅರಿಶಿನ ಹಾಲು ಶೀತಕ್ಕೆ ತುಂಬಾ ಪರಿಣಾಮಕಾರಿಯಾದ ಮನೆಮದ್ದು. ನಿಮಗೆ ವಿಪರೀತ ಶೀತ ಹಾಗು ತಲೆ ನೋವಿದ್ದರೆ ದಿನಕ್ಕೆ ಎರಡು ಬಾರಿ ಅರಿಶಿನ ಹಾಲು ಸೇವಿಸಿ ಮೂರನೇ ದಿನಕ್ಕೆ ನೀವು ಸಂಪೂರ್ಣವಾಗಿ ಆರಾಮಾಗುತ್ತೀರಿ. ಕಾಳು ಮೆಣಸು ಸೇವನೆ ದೇಹದಲ್ಲಿ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ದೇಹಕ್ಕೆ ಬಂದಿರುವ ಎಂತಹ ಸೋಂಕನ್ನು ಇದು ಹೋಗಲಾಡಿಸುತ್ತದೆ. ಶೀತವಾದಾಗ ಇದರ ಸೇವನೆ ದೇಹಕ್ಕೆ ಹೆಚ್ಚು ಊಷ್ಣ…
ಬೆಂಗಳೂರು: ಮೌಢ್ಯ ಮತ್ತು ಮೂಢನಂಬಿಕೆಗಳನ್ನು ತಡೆಯುವ ಕಾನೂನು ಇದ್ದರೂ ಅದನ್ನು ಪರಿಣಾಮಕಾರಿ ಅನುಷ್ಠಾನ ಮಾಡಲು ರಾಜಕೀಯ ಇಚ್ಛಾಶಕ್ತಿ ಅಗತ್ಯವಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯೂಡಬ್ಲ್ಯೂಜೆ) ಹಮ್ಮಿಕೊಂಡ ’ಮೌಢ್ಯ-ಮೂಢನಂಬಿಕೆ ಮತ್ತು ಮಾಧ್ಯಮ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ವಿಚಾರಧಾರೆಗಳ ಅಧ್ಯಯನ ಮೂಲಕ ವೈಚಾರಿಕತೆ ಬೆಳೆಸಿಕೊಂಡವರ ಮೇಲೆ ಯಾರೂ ಸವಾರಿ ಮಾಡಲು ಸಾಧ್ಯವಿಲ್ಲ ಎಂದರು. ಸರ್ಕಾರ ಯಾವುದೇ ಕಾನೂನು ರೂಪಿಸಿದರೂ, ಅದನ್ನು ಅನುಷ್ಠನಕ್ಕೆ ತರುವುದು ಕಾರ್ಯಾಂಗ. ಮೂಢನಂಬಿಕೆಗಳನ್ನು ತಡೆಯಲು ಹೊಸ ಕಾನೂನು ರೂಪಿಸುವ ಅಗತ್ಯವಿಲ್ಲ. ಇದು ಮುಖ್ಯಮಂತ್ರಿಯೊಬ್ಬರಿಂದ ಆಗವಂತದ್ದಲ್ಲ. ಶಾಸಕರು, ಸಚಿವರು ಸೇರಿದಂತೆ ಎಲ್ಲರೂ ಇಚ್ಛಾಶಕ್ತಿಯಿಂದ ಕೈಜೋಡಿಸಿದರೆ, ಎಲ್ಲವೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯವಾಗುತ್ತದೆ. ಆದರೆ, ಅಂಥಹ ವಾತಾವರಣ ಇನ್ನೂ ನಮ್ಮಲ್ಲಿ ನಿರ್ಮಾಣವಾಗಿಲ್ಲ ಎಂದರು. ಅಂಬೇಡ್ಕರ್, ಬುದ್ಧ, ಬಸವಣ ಅವರ ವಿಚಾರಧಾರೆಗಳು ನಮಗೆ ಬೆಳಕಾಗಬೇಕು. ಆ ಆದರ್ಶದ ಬೆಳಕಿನಲ್ಲಿ ಉತ್ತಮ ಸಮಾಜ ನಿರ್ಮಾಣ ಕಟ್ಟುವುದು ನಮ್ಮ ಕನಸಾಗಬೇಕು. ಈ ನಿಟ್ಟಿನಲ್ಲಿ ಮಾಧ್ಯಮವೂ ಸಕ್ರಿಯವಾಗಿ…
ಕೆಎನ್ಎನ್ಡಿಜಿಟಲ್ಡೆಸ್ಕ್: ಸಮತೋಲನ ಆರೋಗ್ಯಕ್ಕೆ ದೇಹಕ್ಕೆ ಕಬ್ಬಿನಾಂಶ ತುಂಬಾ ಮುಖ್ಯ. ಆದರೆ ಕೆಲ ಕಾರಣಗಳಿಂದ ದೇಹದಲ್ಲಿ ಕಬ್ಬಿನಾಂಶ ಕೊರತೆ ಉಂಟಾಗಿಬಿಡುತ್ತದೆ. ಅಂತ ಸಂದರ್ಭದಲ್ಲಿ ಈ ಕೆಳಗಿನ ಆಹಾರಗಳನ್ನು ಸೇವನೆ ಹೆಚ್ಚು ಮಾಡಬೇಕು. ಇನ್ನು ದೇಹಕ್ಕೆ ಕಬ್ಬಿನಾಂಶ ಕೊರತೆ ಉಂಟಾದರೆ ಅನಿಮಿಯಾ, ರಕ್ತಹೀನತೆ ಇಂತ ಆರೋಗ್ಯ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಇವುಗಳಿಂದ ಪಾರಾಗಲು ಈ ಆಹಾರಗಳನ್ನು ಸೇವಿಸಲು ಮರೆಯಬೇಡಿ. ಅವಲಕ್ಕಿ: ದೇಹಕ್ಕೆ ಕಬ್ಬಿನಾಂಶ ಒದಗಿಸುವಲ್ಲಿ ಅವಲಕ್ಕಿ ತುಂಬಾ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ಅತ್ಯಂತ ಹೇರಳ ಪ್ರಮಾಣದ ಕಬ್ಬಿನಾಂಶ ಇದೆ. ಅವಲಕ್ಕಿಯನ್ನು ನೆನಸಿಟ್ಟು ಒಗ್ಗರಣೆ ಹಾಕಿ ತಿನ್ನಬಹುದು ಅಥವಾ ಮೊಸರು ಅವಲಕ್ಕಿ ಸಹ ಮಾಡಿ ತಿನ್ನಬಹುದು. ಹೀಗೆ ನೆನಸಿಟ್ಟ ಅವಲಕ್ಕಿ ಸೇವನೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿನಾಂಶ ನೀಡುತ್ತದೆ. ಅವಲಕ್ಕಿ ಜೊತೆ ನಿಂಬೆ ರಸ ಸೇವಿಸಿದರೆ ಇನ್ನೂ ಉತ್ತಮ. ಗೋಡಂಬಿ: ರಕ್ತ ಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ಗೋಡಂಬಿಯನ್ನು ತಪ್ಪದೇ ತಿನ್ನಿ. ಆಗಾಗ ಸಿಹಿ ಪದಾರ್ಥಗಳನ್ನು ಮಾಡಿದಾಗ ಗೋಡಂಬಿ ಬೀಜಗಳನ್ನು ಸೇರಿಸಿ ತಿನ್ನಿ .ದೇಹಕ್ಕೆ ಕಬ್ಬಿನಾಂಶ ಒದಗಿದಂತಾಗುತ್ತದೆ.…
ಬೆಂಗಳೂರು: ವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಕಾಯಿದೆ, 2023 ಅನ್ನು 4ನೇ ಮಾರ್ಚ್ 2024ರಿಂದ ಅನುಷ್ಠಾನಗೊಳಿಸಲಾಗಿದೆ ಎಂದು ಕಾನೂನು, ನ್ಯಾಯ, ಮಾನವ ಹಕ್ಕುಗಳು, ಶಾಸನ ರಚನೆ, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್ ಅವರು ತಿಳಿಸಿದರು. ಇಂದು ವಿಧಾನಸೌಧದ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಕಾಯ್ದೆ ಜಾರಿಯಿಂದಾಗಿ ರಾಜ್ಯದಲ್ಲಿ ಬಡವರು, ಸಣ್ಣ, ಅತಿ ಸಣ್ಣ ರೈತರು ಮತ್ತು ದುರ್ಬಲ ವರ್ಗದವರು ಆರ್ಥಿಕವಾಗಿ ಹಿಂದುಳಿದ ವರ್ಗದವರು ನ್ಯಾಯಾಲಯಗಳಲ್ಲಿ ದೀರ್ಘ ಕಾಲದವರೆಗೆ ಪ್ರಕರಣಗಳನ್ನು ನಿರ್ವಹಿಸಲು ಅಸಾಧ್ಯವಾದ ಪರಿಸ್ಥಿತಿಯನ್ನು ನಿಭಾಯಿಸಲು ಆದ್ಯತೆಯ ಮೇಲೆ ಸೂಕ್ತವಾದ ವ್ಯವಸ್ಥೆ ರೂಪಿಸಲಾಗಿದೆ ಎಂದು ಅವರು ವಿವರಿಸಿದರು. ಯಾವುದೇ ಸಿವಿಲ್ ವ್ಯಾಜ್ಯದಲ್ಲಿ ಬಡವರು ಅಥವಾ ಆರ್ಥಿಕವಾಗಿ ದುರ್ಬಲರು ಮತ್ತು ಸಣ್ಣ, ಅತಿಸಣ್ಣ ರೈತರು 6 ತಿಂಗಳಿಗಿಂತ ಹೆಚ್ಚು ನ್ಯಾಯದಾನಕ್ಕಾಗಿ ಕಾಯಬೇಕಾಗಿಲ್ಲ ಎಂದು ತಿಳಿಸಿದರು. ಕಾಯಿದೆಯು ದಿನಾಂಕ 19-07-2023 ರಂದು ವಿಧಾನಸಭೆಯಲ್ಲಿ ಮತ್ತು ದಿನಾಂಕ 20-07-2023 ರಂದು ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಲಾಗಿತ್ತು. ರಾಷ್ಟ್ರಪತಿಯವರ ಅಂಕಿತ ಈ ವಿಧೇಯಕಕ್ಕೆ…