Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೆಂಪು ಮೆಣಸಿನಕಾಯಿ ಬಾಯಿಗಿಟ್ಟರೆ ಖಾರ ರುಚಿಕೊಟ್ಟರೆ ಇದರ ಸೇವನೆ ದೇಹದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಂಪು ಮೆಣಸಿನಕಾಯಿಯಲ್ಲಿ ಆಂಟಿಮೈಕ್ರೊಬಿಯಲ್‌ ಅಂಶವಿದ್ದು ಆರೋಗ್ಯದ ಮೇಲೆ ಹೇಗೆ ಉತ್ತಮ ಪ್ರಯೋಜನೆ ಬೀರುತ್ತದೆ ಎಂದು ತಿಳಿದುಕೊಳ್ಳೋಣ. ಕೆಂಪು ಮೆಣಸಿನಕಾಯಿಯಲ್ಲಿ ಅನೇಕ ಪೋಷಕಾಂಶಗಳಿವೆ. ಇದರಲ್ಲಿ ವಿಟಮಿನ್‌ ಎ,ಬಿ, ಸಿ ಹೇರಳವಾಗಿದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇನ್ನು ಸಂಶೋಧನೆಯೊಂದರ ಪ್ರಕಾರ ಕ್ಯಾಪ್ಸೈಸಿನ್‌ ದೇಹದ ಕೋಶಗಳನ್ನು ರಕ್ಷಿಸಲು ಉತ್ಕೃಷ್ಟ ನಿರೋಧಕವಾಗಿ ಕೆಲಸ ಮಾಡುತ್ತದೆ. ನಿರಂತರವಾಗಿ ಕೆಂಪು ಮೆಣಸಿನಕಾಯಿ ಸೇವಿಸಿದರೆ ವ್ಯಕ್ತಿಯ ಆಯಸ್ಸು ವೃದ್ಧಿಯಾಗುತ್ತದೆ. ಹೀಗಂತ ಸಂಶೋಧನೆಯೊಂದು ಸಾಬೀತು ಮಾಡಿದೆ. ಇದರಲ್ಲಿ ಆಯಸ್ಸು ಹೆಚ್ಚಿಸುವ ಗುಣ ಇರುತ್ತದೆಯಂತೆ. ಮೆಣಸಿನಕಾಯಿಯು ಸ್ಥೂಲಕಾಯ ಕಡಿಮೆ ಮಾಡುತ್ತದೆ. ವಯೋಸಹಜ ರೋಗಗಳಿಂದ ರಕ್ಷಿಸುತ್ತದೆ ಹಾಗು ಸಾವನ್ನು ಮುಂದೂಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೆಂಪು ಮೆಣಸಿನಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸಿದರೆ ಚಯಾಪಚಯಕ್ರಿಯೆ ವೇಗಗೊಳಿಸುತ್ತದೆ, ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ. ಇದರ ಸೇವನೆ ದೇಹವನ್ನು ಬೆಚ್ಚಗೆ ಇರಿಸುತ್ತದೆ, ಹಾಗಾಗಿ ಪಹಾಡಿ ಜನ ಹೆಚ್ಚು ಕೆಂಪು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ವಯಸ್ಸು 40 ದಾಟಿತೆಂದರೆ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸಾವಾಲಾಗಿರುತ್ತದೆ. ಹೀಗಿರುವಾಗ ಪುರುಷರಾಗಲಿ, ಮಹಿಳೆಯಾಗಲಿ 40 ವರ್ಷ ದಾಟಿದವರು ಈ ಕೆಳಗೆ ತಿಳಿಸಿರುವ ಆಹಾರಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಸಂಸ್ಕರಿತ ಪಾನೀಯಗಳು: ಸಾಮಾನ್ಯವಾಗಿ ಕಾರ್ಬೋನೇಟೆಡ್‌ ಪಾನೀಯಗಳ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲೂ 40 ದಾಟಿದವರು ಇದರ ಸೇವನೆ ನಿಲ್ಲಿಸಿಬಿಡಬೇಕು. ಏಕೆಂದರೆ ಇದರಲ್ಲಿ ಕೆಫೀನ್‌, ಫ್ರಕ್ಟೋಸ್‌, ಇದರಲ್ಲಿ ಸಂಸ್ಕರಿತ ಸಕ್ಕರೆ ಇರುತ್ತದೆ. ಇದರಿಂದ ಸಕ್ಕರೆಯು ಇನ್ಸುಲಿನ್‌ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ನು ಕೆಫೀನ್‌ ಗೌಟ್‌ ಅನ್ನು ಪ್ರಚೋದಿಸುವ ಸಂಭವ ಹೆಚ್ಚಿರುತ್ತದೆ. ಇವೆಲ್ಲಾ ಹೃದಯಾಘಾತದ ಅಪಾಯವನ್ನು ಉಂಟು ಮಾಡಬಹುದು. ರೆಡ್‌ಮೀಟ್‌: 40 ದಾಟಿದವರು ರೆಡ್‌ಮೀಟ್‌ ಸೇವನೆಯನ್ನು ಕಡಿಮೆ ಮಾಡಿಕೊಳ್ಳಬೇಕು. ರೆಡ್‌ಮೀಟ್‌ ಅಂದರೆ ಕೆಂಪು ಮಾಂಸದಲ್ಲಿ ಹೇರಳ ಪ್ರಮಾಣದಲ್ಲಿ ಕೊಲೆಸ್ಟ್ರಾಲ್‌, ಹೃದಯ ರಕ್ತನಾಳದ ಕಾಯಿಲೆಗಳು ಮಧುಮೇಹದಂತಹ ಅಪಾಯಕಾರಿ ಕಾಯಿಲೆಗಳನ್ನು ತಂದೊಡ್ಡುವ ಸಂಭವ ಇರುತ್ತದೆ. ಇನ್ನು ಹೆಚ್ಚು ತಾಪಮಾನದಲ್ಲಿ ಬೇಯಿಸಿದ ಮಾಂಸವನ್ನು ಸೇವಿಸಿದರೆ ಪ್ರಾಸ್ಟೇಟ್‌ ಕ್ಯಾನ್ಸರ್‌ ಅಪಾಯವನ್ನು ತರಬಹುದು. ಹಾಗಾಗಿ ಆರೋಗ್ಯದ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನಿ ಪ್ಲಾಂಟ್‌ ಇತ್ತೀಚಿನ ದಿನಮಾನಗಳಲ್ಲಿ ತುಂಬಾ ಫೇಮಸ್‌ ಆಗ್ತಾ ಇದೆ. ಸಾಮಾನ್ಯವಾಗಿ ಎಲ್ಲರೂ ಮನಿ ಪ್ಲಾಂಟ್‌ಅನ್ನು ಮನೆಯೊಳಗೆ ಇರಿಸಿಕೊಳ್ಳುತ್ತಿದ್ದಾರೆ. ಇದನ್ನು ಮನೆಯಲ್ಲಿ ಹೇಗೆ, ಯಾವ ದಿಕ್ಕಿನಲ್ಲಿ ಇಡಬೇಕು, ಇದನ್ನು ಮನೆಯಲ್ಲಿ ಇಟ್ಟರೆ ಆಗುವ ಪ್ರಯೋಜನಗಳೇನು ಎಂದು ತಿಳಿಸಿಕೊಡುತ್ತೇವೆ. ಮನಿ ಪ್ಲಾಂಟ್‌ ಹೆಸರೇ ಸೂಚಿಸುವಂತೆ ಇದನ್ನು ಮನೆಯಲ್ಲಿ ಇರಿಸಿದರೆ ಧನಲಕ್ಷ್ಮೀ ಒಲಿದು ಬರುತ್ತಾಳೆ ಎಂಬ ನಂಬಿಕೆ ಇದೆ. ವ್ಯಾಪಾರ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮನಿ ಪ್ಲಾಂಟ್‌ಗೆ ಹೆಚ್ಚು ನೀರು, ಗಾಳಿ, ಬೆಳಕು ಅವಶ್ಯಕೆ ಇಲ್ಲ. ವರ್ಷವಿಡೀ ಹಸಿರಾಗಿರುವ ಬಾಡದ ಒಂದು ಸಸಿ ಇದು. ಇದನ್ನು ಮನೆಯಲ್ಲಿಟ್ಟು ಬಾಡದಂತೆ ನೋಡಿಕೊಳ್ಳಬೇಕು. ಈ ಸಸಿ ಬಾಡಿದರೆ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ ಎಂದು ಸಹ ಹೇಳಲಾಗುತ್ತದೆ. ಆದ್ದರಿಂದ ಇದನ್ನು ಮನೆಯಲ್ಲಿರಿಸಿದವರು ಬಾಡಲು ಬಿಡಬಾರದಂತೆ. ಹೀಗಂತ ವಾಸ್ತು ಹೇಳುತ್ತದೆ. ಇನ್ನು ಮನಿ ಪ್ಲಾಂಟ್‌ ಬಗ್ಗೆ ಹೆಚ್ಚು ಹೇಳುವುದಾದರೆ ಇದು ಮನೆಯಲ್ಲಿ ಆಮ್ಲಜನಕ ಪ್ರಮಾಣವನ್ನು ಅಧಿಕ ಮಾಡುತ್ತದೆ. ಮನೆಯವರ ಆರೋಗ್ಯ ಕಾಪಾಡುವಲ್ಲೂ ಸಹ ಈ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅನೇಕ ಜನರಿಗೆ ಜೀರ್ಣಕ್ರಿಯೆಯ ಸಮಸ್ಯೆ ಕಾಡುತ್ತಿರುತ್ತದೆ. ಇದಕ್ಕೆ ಕಾರಣಗಳು ಅನೇಕ. ಕಾರಣದ ಬದಲಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಹೀಗೆ ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಪರಿಹಾರಕ್ಕೆ ಇನ್ನಿಲ್ಲದ ಕಸರತ್ತು ಮಾಡುತ್ತಿರುತ್ತಾರೆ. ಎಷ್ಟೋ ಜನ ತಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗಲು ಇಂಗ್ಲೀಷ್‌ ಮೆಡಿಸಿನ್‌ ಅಥವಾ ಆರ್ಯುವೇದ ಔಷಧಿಗಳಿಗೂ ಮೊರೆ ಹೋಗುತ್ತಾರೆ. ಜೀರ್ಣಕ್ರಿಯೆ ಸಮಸ್ಯೆಗೆ ಯಾವುದೇ ಔಷಧಿ ಇಲ್ಲದೇ ನಾವು ಹೇಳುವ ಈ ಸುಲಭವಾದ ಕೆಲಸ ಮಾಡಿದರೆ ಸಾಕು, ತಿಂದ ಆಹಾರ ಸುಲಭವಾಗಿ ನೈಸರ್ಗಿಕವಾಗಿ ಜೀರ್ಣವಾಗುತ್ತದೆ. ನಾವು ಹೇಳುವ ಈ ಪದ್ಧತಿ ನಮ್ಮ ಪೂರ್ವಜರೂ ಸಹ ಮಾಡಿಕೊಂಡು ಬಂದಿದ್ದಾರೆ. ನೀವು ತಿಂದ ಆಹಾರ ಸುಲಭವಾಗಿ ಜೀರ್ಣವಾಗಬೇಕೆಂದರೆ ಊಟದ ನಂತರ ವಿಶೇಷವಾಗಿ ಮಧ್ಯಾಹ್ನದ ಊಟದ ನಂತರ ಕಡ್ಡಾಯವಾಗಿ ಒಂದು ಲೋಟ ಮಜ್ಜಿಗೆ ಸೇವಿಸಿ. ಗಟ್ಟಿ ಮಜ್ಜಿಗೆ ಬೇಡ. ಆದಷ್ಟು ನೀರು ಮಜ್ಜಿಗೆ ಸೇವಿಸಿ, ಮಜ್ಜಿಗೆಯು ಪ್ರೋಬಯಾಟಿಕ್‌ ಹೊಂದಿದ್ದು, ಆಮ್ಲೀಯತೆಯನ್ನು ನಿರ್ಮೂಲನ ಮಾಡುವ ಗುಣ ಹೊಂದಿರುತ್ತದೆ. ಊಟದ ಜೊತೆಗಿಂತ ಊಟವಾದ ನಂತರ ತಿಳಿ ಮಜ್ಜಿಗೆ ಸೇವನೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಈಗಿನ ಪಾಲಕರ ಒಂದೇ ರೋದನೆ ಎಂದರೆ ಸರಿಯಾಗಿ ಊಟ ಮಾಡುವುದಿಲ್ಲ. ಸರಿಯಾಗಿ ಮನೆಯಲ್ಲಿ ಮಾಡಿದ ಅಡುಗೆ ಊಟ ಮಾಡದೇ ಜಂಗ್‌ಫುಡ್‌, ಬಿಸ್ಕೆಟ್‌, ಚಾಕಲೇಟ್‌, ಕೇಕ್‌ಗಳನ್ನೇ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ. ಇಂತಹ ಜಂಗ್‌ಫುಡ್‌ಗಳನ್ನು ತಿಂದರೆ ಮಕ್ಕಳ ಆರೋಗ್ಯ ಸಮತೋಲನದಲ್ಲಿ ಇರುವುದಿಲ್ಲ. ಹೇಗಿದ್ದರೂ ಚಿಕ್ಕ ಮಕ್ಕಳು ಸಿಹಿ ಪದಾರ್ಥಗಳನ್ನು, ಸಿಹಿ ತಿಂಡಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಹಾಗಾಗಿ ಅವರಿಗೆ ಪಾಯಸವೊಂದನ್ನು ಮಾಡಿ ತಿನಿಸಿ ಈ ಪಾಯಸ ಮಕ್ಕಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದರಿಂದ ಮಕ್ಕಳ ದೇಹದ ತೂಕ ಸಹ ಹೆಚ್ಚಾಗುತ್ತದೆ. ಹೀಗೆ ಮಕ್ಕಳ ಆರೋಗ್ಯ ಕಾಪಾಡುವ ಪಾಯಸ ಯಾವುದೆಂದರೆ ಅದು ಬಾರ್ಲಿ ಪಾಯಸ. ಬಾರ್ಲಿ ಸಿರಿಧಾನ್ಯಗಳಲ್ಲಿ ಒಂದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬನ್ನಿ ಬಾರ್ಲಿ ಪಾಯಸ ಮಾಡುವ ವಿಧಾನ ತಿಳಿದುಕೊಳ್ಳೋಣ ಬಾರ್ಲಿ ಪಾಯಸ ಮಾಡುವ ವಿಧಾನ ಒಂದು ಕಪ್‌ ಬಾರ್ಲಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಹುರಿದ ಬಾರ್ಲಿಗೆ ನೀರು ಸೇರಿಸಿ ಕುದಿ ಬರುವವರೆಗೂ ಚೆನ್ನಾಗಿ ಬೇಯಿಸಿಕೊಳ್ಳಿ. ನೀರಿನೊಂದಿಗೆ ಬಾರ್ಲಿ ಚೆನ್ನಾಗಿ ಬೆಂದ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ವಯಸ್ಕರಲ್ಲಿ ಮಂಡಿ ನೋವು ಸರ್ವೇ ಸಾಮಾನ್ಯ. ವಯಸ್ಸು ನಲವತ್ತು ದಾಟಿತೆಂದರೆ ಸಾಕು ಮಂಡಿ ನೋವು ಶುರು. ಅದರಲ್ಲೂ ವಯಸ್ಸಾದ ಮಹಿಳೆಯರಿಗೆ ಮಂಡಿ ನೋವು ಹೆಚ್ಚಾಗಿ ಭಾದಿಸುತ್ತದೆ. ಈ ಮಂಡಿ ನೋವಿಗೆ ಕೆಲ ಸುಲಭವಾದ ಮನೆ ಮದ್ದುಗಳನ್ನು ನಾವಿಂದು ತಿಳಿಸಿಕೊಡುತ್ತೇವೆ. ಅರಿಶಿನ ಕೊಂಬನ್ನು ನೀರಿನೊಂದಿಗೆ ತೇಯ್ದು ಮಂಡಿಯ ನೋವಿರುವ ಜಾಗಕ್ಕೆ ಹಚ್ಚಿಕೊಂಡು ನಿಧಾನವಾಗಿ ಮಸಾಜ್‌ ಮಾಡಿಕೊಳ್ಳಿ. ಸುಮಾರು ಇಪ್ಪತ್ತು ನಿಮಿಷ ಬಿಟ್ಟು ಬೆಚ್ಚಗಿನ ನೀರನಿಂದ ತೊಳೆಯಿರಿ. ಹೀಗೆ ದಿನ್ನಕ್ಕೆ ಕನಿಷ್ಟ ಪಕ್ಷ ಎರಡು ಬಾರಿ ಮಾಡಿ. ಆಲಿವ್‌ ಆಯಿಲ್‌ ಅಥವಾ ಕೊಬ್ಬರಿ ಎಣ್ಣೆಯನ್ನು ಸ್ವಲ್ಪ ಬೆಚ್ಚಗೆ ಮಾಡಿ ನೋವಿರುವ ಜಾಗಕ್ಕೆ ಹಚ್ಚಿ ವೃತ್ತಾಕಾರವಾಗಿ ಮಸಾಜ್‌ ಮಾಡಿಕೊಳ್ಳಿ. ಎಣ್ಣೆ ಮಸಾಜ್‌ ಯಾವುದೇ ರೀತಿಯ ಕೀಳು ನೋವಿಗೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಡುಗೆಗೆ ಬಳಸುವ ಓಂಕಾಳನ್ನು ನೀರಿನೊಂದಿಗೆ ಅರೆದುಕೊಳ್ಳಿ. ಪೇಸ್ಟ್‌ ರೂಪದಲ್ಲಿ ಅರೆದುಕೊಂಡು ನೋವಿದ್ದ ಜಾಗಕ್ಕೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಹಾಗೆಯೇ ಬಿಡಿ, ನೋವು ಕ್ರಮೇಣ ಕಡಿಮೆಯಾಗುತ್ತದೆ. ತೆಂಗಿನ ಎಣ್ಣೆಗೆ ಸ್ವಲ್ಪ ಕರ್ಪೂರ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಜಗಳ ಆಡದೇ ಇರಲು ಸಾಧ್ಯವೇ ಇಲ್ಲ. ಮನೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಜಗಳ ಆಗುತ್ತಲೇ ಇರುತ್ತವೆ. ಹೀಗೆ ಮನೆಯಲ್ಲಿ ಗಂಡ ಮಾಡುವ ಸಣ್ಣಪುಟ್ಟ ತಪ್ಪುಗಳಿಗೆ ಹೆಂಡತಿಗೆ ಸಹಿಸಲು ಆಗುವುದಿಲ್ಲ. ಹೆಂಡತಿ ಪದೇ ಪದೇ ಕೋಪಗೊಳ್ಳಲು ಆ ಕಾರಣಗಳೇನು ಎಂದು ನೀವೆ ತೀಳಿದುಕೊಳ್ಳಿ. ಮನೆಯಲ್ಲಿ ಪತ್ನಿಯ ಮಾತಿಗೆ ಪತಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಇದ್ದಾಗ ಪತ್ನಿಗೆ ಸಹಜವಾಗಿ ಕೋಪ ಬಂದೇ ಬರುತ್ತದೆ. ಪತ್ನಿ ಮಾತನಾಡುತ್ತಿದ್ದಾಗ ಪತಿರಾಯ ಮೊಬೈಲ್‌ನಲ್ಲಿಯೇ ಮುಳಿಗಿದರೆ ಪತ್ನಿಗೆ ಕೋಪ ಬರೋದು ಸಹಜ. ಆಕೆ ಹೇಳುವ ಮಾತಿಗೆ ಉತ್ತರ ನೀಡಿ. ಬೇಕು ಬೇಡಗಳನ್ನು ತಿಳಿಸಿ, ಸಾಧ್ಯವಾದಷ್ಟು ಆಕೆಯ ಮಾತಿಗೆ ಗಮನಕೊಡಿ, ಪ್ರತಿಕ್ರಿಯೆ ನೀಡಿ. ಮನೆಯನ್ನು ಶುಚಿತ್ವ ಇಟ್ಟುಕೊಳ್ಳದ್ದಿದ್ದರೆ ಹೆಂಡತಿ ಕೋಪಗೊಳ್ಳುತ್ತಾಳೆ. ಪುರುಷರು ತಾವು ತೊಟ್ಟ ಬಟ್ಟೆಗಳನ್ನು ಎಲ್ಲಂದರಲ್ಲಿ ಬೀಸಾಡುವುದು, ಉಟ್ಟ ಬಟ್ಟೆಯಲ್ಲಿ ತೊಳೆಯಲು ಹಾಕದೇ ಇರುವುದು. ಹೀಗೆ ಮನೆಯಲ್ಲಾ ಬಟ್ಟೆ ಬೀಸಾಡಿದರೆ ಆಕೆಯ ಕೋಪ ನೆತ್ತಿಗೇರುತ್ತದೆ. ಮನೆ ಶುಚಿತ್ವ ಕಾಪಾಡುವ ಹೊಣೆ ನಿಮ್ಮದೂ…

Read More

ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಲ್ಕತ್ತಾ ಹೈಕೋರ್ಟ್ಗೆ ದೂರು ನೀಡಿದ ನಂತರ ಅಮಾನತು ಮಾಡಲಾಗಿದೆ. ಈ ಹೆಸರುಗಳು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತವೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಲ್ಕತ್ತಾ ಹೈಕೋರ್ಟ್ಗೆ ದೂರು ನೀಡಿದ ನಂತರ ಅಮಾನತು ಮಾಡಲಾಗಿದೆ. ಫೆಬ್ರವರಿ 12 ರಂದು ಸೆಪಾಹಿಜಾಲಾ ಮೃಗಾಲಯದಿಂದ ಉತ್ತರ ಬಂಗಾಳದ ಸಿಲಿಗುರಿಯಲ್ಲಿರುವ ಉತ್ತರ ಬಂಗಾಳ ವನ್ಯಜೀವಿ ಉದ್ಯಾನವನಕ್ಕೆ ಈ ಪ್ರಾಣಿಗಳು ಬಂದವು. ತ್ರಿಪುರಾದ ಸೆಪಾಹಿಜಾಲಾ ಮೃಗಾಲಯವು ಈ ಪ್ರಾಣಿಗಳಿಗೆ ಹೆಸರಿಸಿದೆ ಮತ್ತು ಪ್ರಾಣಿ ವಿನಿಮಯ ಕಾರ್ಯಕ್ರಮದ ಭಾಗವಾಗಿ ಅವುಗಳನ್ನು ಸಿಲಿಗುರಿಗೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಬಂಗಾಳ ವನ್ಯಜೀವಿ ಉದ್ಯಾನವನದ ಅಧಿಕಾರಿಗಳು ಪ್ರಾಣಿಗಳಿಗೆ ಮರುನಾಮಕರಣ ಮಾಡಲು ಯೋಚಿಸುತ್ತಿದ್ದರು. https://kannadanewsnow.com/kannada/we-will-transform-india-into-a-global-export-hub-pm-modi-at-bharattex-2024-event/ https://kannadanewsnow.com/kannada/japans-slim-moon-lander-alive-again-after-2-week-lunar-night-scientists-surprise/

Read More

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ದೆಹಲಿಯ ಭಾರತ್ ಮಂಟಪದಲ್ಲಿ ಜಾಗತಿಕ ಜವಳಿ ಕಾರ್ಯಕ್ರಮವಾದ ಭಾರತ್ ಟೆಕ್ಸ್ 2024 ಅನ್ನು ಉದ್ಘಾಟಿಸುವ ಮೂಲಕ ಭಾರತವನ್ನು ಜಾಗತಿಕ ರಫ್ತು ಕೇಂದ್ರವಾಗಿ ಪರಿವರ್ತಿಸುವ ಪ್ರತಿಜ್ಞೆಯನ್ನು ಮಾಡಿದರು.    https://kannadanewsnow.com/kannada/rbi-instructs-ncpi-to-consider-third-party-providers-request-paytm-stock-rises-5/ https://kannadanewsnow.com/kannada/rs-25-crore-donations-gold-silver-cheques-cash-drafts-for-ram-temple-in-ayodhya-received-in-a-month/ “ನಾವು ಭಾರತವನ್ನು ‘ಜಾಗತಿಕ ರಫ್ತು ಕೇಂದ್ರ’ವಾಗಿ ಪರಿವರ್ತಿಸುತ್ತೇವೆ ಎಂಬ ದೃಢವಾದ ನಂಬಿಕೆ ನಮಗಿದೆ. ಕಳೆದ ದಶಕದಲ್ಲಿ, ನಾವು ವೋಕಲ್ ಫಾರ್ ಲೋಕಲ್ ಗೆ ಮತ್ತೊಂದು ಹೊಸ ಆಯಾಮವನ್ನು ಸೇರಿಸಿದ್ದೇವೆ. ಇಂದು, ವೋಕಲ್ ಫಾರ್ ಲೋಕಲ್ ಮತ್ತು ಲೋಕಲ್ ಟು ಗ್ಲೋಬಲ್ ನ ಸಾರ್ವಜನಿಕ ಆಂದೋಲನಗಳು ಇಡೀ ದೇಶದಲ್ಲಿ ನಡೆಯುತ್ತಿವೆ” ಎಂದು ಪ್ರಧಾನಿ ಮೋದಿ ಜವಳಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. https://kannadanewsnow.com/kannada/bigg-news-23-year-old-indian-aide-dies-in-russia-war/ https://kannadanewsnow.com/kannada/ngt-sends-notice-to-state-on-forest-encroachment/ “ಮುಂದಿನ 25 ವರ್ಷಗಳಲ್ಲಿ ಭಾರತವನ್ನು ‘ವಿಕ್ಷಿತ ರಾಷ್ಟ್ರ’ವನ್ನಾಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ. ವಿಕ್ಷಿತ್ ಭಾರತದ ನಾಲ್ಕು ಪ್ರಮುಖ ಆಧಾರ ಸ್ತಂಭಗಳೆಂದರೆ ಬಡವರು, ಯುವಕರು, ರೈತರು ಮತ್ತು ಮಹಿಳೆಯರು. ಮತ್ತು ಗಮನಾರ್ಹವಾಗಿ, ಭಾರತದ ಜವಳಿ ವಲಯವು ಈ ಎಲ್ಲ ಸ್ತಂಭಗಳೊಂದಿಗೆ…

Read More

ನವದೆಹಲಿ: ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ರಷ್ಯಾ ಸೇನೆಯಲ್ಲಿ ‘ಸಹಾಯಕ’ ಆಗಿ ಕೆಲಸ ಮಾಡುತ್ತಿದ್ದ ಗುಜರಾತ್ ಮೂಲದ 23 ವರ್ಷದ ಭಾರತೀಯ ವ್ಯಕ್ತಿ ರಷ್ಯಾದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.  ಸೂರತ್ ನ ಹಮಿಲ್ ಮಂಗುಕಿಯಾ ಅವರ ಕುಟುಂಬಕ್ಕೆ ಎರಡು ದಿನಗಳ ಹಿಂದೆ ಅವರ ಸಾವಿನ ಬಗ್ಗೆ ಮಾಹಿತಿ ಸಿಕ್ಕಿತು ಎನ್ನಲಾಗಿದೆ. ಆನ್ಲೈನ್ ಜಾಹೀರಾತಿನ ಮೂಲಕ ರಷ್ಯಾದಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ ಮಂಗುಕಿಯಾ ಚೆನ್ನೈನಿಂದ ಮಾಸ್ಕೋ ತಲುಪಿದ್ದರು. ನಂತರ ಅವರನ್ನು ರಷ್ಯಾದ ಸೈನ್ಯದಲ್ಲಿ ಸಹಾಯಕರಾಗಿ ನೇಮಿಸಲಾಯಿತು. ಅವರ ಸಾವಿನ ಬಗ್ಗೆ ಹೆಚ್ಚಿನ ವಿವರಗಳು ಅಸ್ಪಷ್ಟವಾಗಿವೆ. https://kannadanewsnow.com/kannada/rs-25-crore-donations-gold-silver-cheques-cash-drafts-for-ram-temple-in-ayodhya-received-in-a-month/ https://kannadanewsnow.com/kannada/ngt-sends-notice-to-state-on-forest-encroachment/ https://kannadanewsnow.com/kannada/life-style-do-you-know-the-benefits-of-consuming-fenugreek-leaves/ https://kannadanewsnow.com/kannada/boss-is-always-right-ct-ravi-hits-back-at-bsys-statement-that-a-conspiracy-is-being-hatched-against-shobha/ ಮಾಧ್ಯಮ ವರದಿಗಳ ಪ್ರಕಾರ, ಹಲವಾರು ಭಾರತೀಯರು ರಷ್ಯಾದ ಮಿಲಿಟರಿಯಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಉಕ್ರೇನ್ ನೊಂದಿಗಿನ ರಷ್ಯಾದ ಗಡಿಯುದ್ದಕ್ಕೂ ಕೆಲವು ಪ್ರದೇಶಗಳಲ್ಲಿ ರಷ್ಯಾದ ಸೈನಿಕರೊಂದಿಗೆ ಹೋರಾಡಲು ಸಹ ಅವರನ್ನು ಒತ್ತಾಯಿಸಲಾಯಿತು ಎನ್ನಲಾಗಿದೆ. ಏತನ್ಮಧ್ಯೆ, ಭಾರತದ ಬೇಡಿಕೆಯ ಮೇರೆಗೆ ರಷ್ಯಾ ಸೇನೆಗೆ ಸಹಾಯಕ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಹಲವಾರು ಭಾರತೀಯರನ್ನು…

Read More