Author: kannadanewsnow07

ಬೆಂಗಳೂರು : ರಾಜ್ಯ ಸರ್ಕಾರವು ಯುವನಿಧಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಮಾಹಿತಿಯನ್ನು ನೀಡಿದ್ದು, ಒಂದು ವೇಳೆ ಅವರು ಈ ಕೆಲಸವನ್ನು ಮಾಡದೇ ಹೋದರೆ ಹಣವನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಅಂತ ತಿಳಿಸಿದೆ. “ಯುವನಿಧಿ ಯೋಜನೆ ಅಡಿಯಲ್ಲಿ ಈಗಾಗಲೇ ಸೇವಾಸಿಂಧು ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡ ಪದವೀಧರರು/ ಸ್ನಾತಕೋತ್ತರ ಪದವೀಧರರು ಮತ್ತು ಡಿಪ್ಲೋಮಾದಾರರು ಅವರ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ 180 ದಿನಗಳನ್ನು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ 2024 ರಲ್ಲಿ ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಫೆಬ್ರವರಿ 2024 ರಲ್ಲಿ ಪ್ರಯೋಜನ ಪಡೆಯಲು ಅಭ್ಯರ್ಥಿಗಳು 29-02-2024 ರೊಳಗೆ ತಾನು ನಿರುದ್ಯೋಗಿ ಎಂದು ಕೆಳಗಿನ ಲಿಂಕ್ ಮೂಲಕ ಕಡ್ಡಾಯವಾಗಿ ಸ್ವಯಂ ಘೋಷಣೆ ಮಾಡಬೇಕು. https://kannadanewsnow.com/kannada/watch-video-uks-first-lady-akshata-murti-buys-a-book-on-the-street-video-goes-viral/ https://kannadanewsnow.com/kannada/gaganyaan-these-are-the-indigenous-astronauts-who-will-fly-from-india/ https://kannadanewsnow.com/kannada/rbi-approves-amazon-pay-payments-aggregator/ ಸೂಚನೆ : ಸೂಚಿತ ಸಮಯದೊಳಗೆ ಮಾಸಿಕ ಸ್ವಯಂ ಘೋಷಣೆ ಮಾಡದೇ ಹೋದಲ್ಲಿ ‘ಯುವನಿಧಿ’ ನೇರ ನಗದು ವರ್ಗಾವಣೆ ಸೌಲಭ್ಯದಿಂದ ಅನರ್ಹಗೊಳಿಸಲಾಗುವುದು ಅಂತ ತಿಳಿಸಿದೆ.

Read More

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಮತ್ತು ಪತ್ನಿ ಸುಧಾ ಮೂರ್ತಿ ಇತ್ತೀಚೆಗೆ ಬೆಂಗಳೂರಿನ ರಾಘವೇಂದ್ರ ಮಠಕ್ಕೆ ತಮ್ಮ ಮಗಳು ಮತ್ತು ಯುಕೆ ಪ್ರಥಮ ಮಹಿಳೆ ಅಕ್ಷತಾ ಮೂರ್ತಿ ಮತ್ತು ಪುತ್ರಿಯರಾದ ಅನೌಷ್ಕಾ ಮತ್ತು ಕೃಷ್ಣ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.  https://kannadanewsnow.com/kannada/gaganyaan-these-are-the-indigenous-astronauts-who-will-fly-from-india/ ಈ ನಡುವೆ ಕುಟುಂಬವು ಮಠದಲ್ಲಿ ಪುಸ್ತಕಗಳನ್ನು ಪರಿಶೀಲಿಸುವ ವೀಡಿಯೊ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ವಾರ ಅಕ್ಷತಾ ಮೂರ್ತಿ ಮತ್ತು ಮಕ್ಕಳು ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಜೀವನಚರಿತ್ರೆ ಪುಸ್ತಕ ಬಿಡುಗಡೆಗಾಗಿ ಬೆಂಗಳೂರಿನಲ್ಲಿದ್ದಾಗ ಇದನ್ನು ರೆಕಾರ್ಡ್ ಮಾಡಲಾಗಿದೆ ಎನ್ನಲಾಗಿದೆ. ಕುಟುಂಬವು ಸಾಮಾನ್ಯರಂತೆ ಬಟ್ಟೆಗಳನ್ನು ಧರಿಸಿ ಮಠದಲ್ಲಿ ಸಮಯ ಕಳೆಯುತ್ತಿರುವುದು ಕಂಡುಬಂದಿದೆ. “ಯುಕೆ ಪ್ರಧಾನಿ ರಿಷಿ ಸುನಕ್ ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಕಾಣಿಸಿಕೊಂಡರು. ಯಾವುದೇ ಭದ್ರತೆಯಿಲ್ಲದೆ ಅವರ ಸರಳತೆ ಕಾಣಬಹುದಾಗಿದೆ ” ಎಂದು ಎಕ್ಸ್ ಬಳಕೆದಾರ ಎಂ.ಆರ್.ಗುರು ಪ್ರಸಾದ್ ವೀಡಿಯೊವನ್ನು ಹಂಚಿಕೊಳ್ಳುವಾಗ ಬರೆದಿದ್ದಾರೆ. https://kannadanewsnow.com/kannada/life-style-do-you-know-what-we-benefit-from-eating-dry-figs-heres-the-information/…

Read More

ಕೊಚ್ಚಿ: : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಮಹತ್ವಾಕಾಂಕ್ಷೆಯ ಗಗನಯಾನಕ್ಕೆ ಸಕಲ ರೀತಿಯಲ್ಲಿ ಸಿದ್ಧವಾಗುತ್ತಿದೆ. ಈಗ ಗಗನಯಾತ್ರಿಗಳ ಹೆಸರುಗಳು ಈಗ ಬಹಿರಂಗವಾಗಿದೆ.  ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ಕ್ಕೆ ನಾಲ್ವರು ಪೈಲಟ್ಗಳ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪ್ರಕಟಿಸಿದ್ದಾರೆ. ಕೇರಳದ ತಿರುವನಂತಪುರಂನ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (ವಿಎಸ್ಎಸ್ಸಿ) ಗ್ರೂಪ್ ಕ್ಯಾಪ್ಟನ್ ಪಿ ಬಾಲಕೃಷ್ಣನ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್ ಮತ್ತು ವಿಂಗ್ ಕಮಾಂಡರ್ ಎಸ್ ಶುಕ್ಲಾ ಅವರು ಪೈಲಟ್ಗಳಾಗಿದ್ದಾರೆ. https://kannadanewsnow.com/kannada/rbi-approves-amazon-pay-payments-aggregator/ https://kannadanewsnow.com/kannada/expand-branches-in-rural-areas-dcm-for-banks-dk-shivakumar/ https://kannadanewsnow.com/kannada/a-man-who-swallowed-39-coins-and-37-magnets-for-body-building/ ಪ್ರಶಾಂತ್ ಬಾಲಕೃಷ್ಣನ್ ನಾಯರ್, (ಗ್ರೂಪ್ ಕ್ಯಾಪ್ಟನ್) ಅಂಗದ್ ಪ್ರತಾಪ್, ಅಜಿತ್ ಕೃಷ್ಣನ್ ಮತ್ತು ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ಭಾರತದ ಮೊದಲ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಗಗನಯಾತ್ರಿಗಳಾಗಿ ಆಯ್ಕೆಯಾಗಿದ್ದಾರೆ. ಅವರೆಲ್ಲರೂ ಭಾರತೀಯ ವಾಯುಪಡೆಯಲ್ಲಿ (ಐಎಎಫ್) ವಿಂಗ್ ಕಮಾಂಡರ್ಗಳು ಅಥವಾ ಗ್ರೂಪ್ ಕ್ಯಾಪ್ಟನ್ಗಳು ಮತ್ತು ಟೆಸ್ಟ್ ಪೈಲಟ್ಗಳಾಗಿ ಕೆಲಸ ಮಾಡಿದ ವ್ಯಾಪಕ ಅನುಭವವನ್ನು ಹೊಂದಿದ್ದಾರೆ, ಅಂದರೆ ಏನಾದರೂ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅಂಜೂರ ಒಂದು ಹಣ್ಣು. ಇದನ್ನು ಒಣಗಿಸಿದರೆ ಒಣ ಅಂಜೂರ ಡ್ರೈ ಫ್ರೂಟ್ಸ್‌ ಕೆಟಗರಿಗೆ ಸೇರುತ್ತದೆ. ಹಣ್ಣಿನಷ್ಟೇ ಒಣ ಅಂಜೂರ ಸೇವನೆ ದೇಹಕ್ಕೆ ತುಂಬಾ ಒಳ್ಳೆಯದು. ಒಣ ಅಂಜೂರದಲ್ಲಿ ಕೊಬ್ಬು, ನಾರಿನಾಂಶ, ಕ್ಯಾಲಿಸಿಯಂ, ಪ್ರೋಟೀನ್‌, ಕಬ್ಬಿಣಾಂಶ ಹೀಗೆ ದೇಹದ ಆರೋಗ್ಯ ಕಾಪಾಡಲು ಬೇಕಾದ ಅನೇಕ ಅಂಶಗಳು ಒದಗಿಸುತ್ತದೆ. ಉಪವಾಸ ಅಥವಾ ಡಯಟ್‌ ಮಾಡುವವರಿಗೆ ಒಣ ಅಂಜೂರ ದೇಹಕ್ಕೆ ಶಕ್ತಿ ನೀಡುತ್ತದೆ. ಒಣ ಅಂಜೂರ ದೇಹದ ತೂಕ ನಿಯಂತ್ರಣ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ಇಳಿಸುವವರು ದಿನವೂ ಒಂದರೆಡು ಒಣ ಅಂಜೂರ ಸೇವಿಸಿ ನೋಡಿ. ಒಳ್ಳೆಯ ರಿಸಲ್ಟ್‌ ನಿಮಗೆ ಸಿಗುತ್ತದೆ. ಇದರಲ್ಲಿ ಹೆಚ್ಚು ನಾರಿನಾಂಶ ಮತ್ತು ಪ್ರೋಟೀನ್‌ ಇದ್ದು, ಹಸಿವನ್ನು ಕಂಟ್ರೋಲ್‌ ಮಾಡಿ ಹೆಚ್ಚಿನ ಆಹಾರ ಸೇವನೆ ಮಾಡದಂತೆ ತಡೆಯುತ್ತದೆ. ಜೀರ್ಣಕ್ರಿಯೆ ಸಮಸ್ಯೆ ಇದ್ದವರು ಒಣ ಅಂಜೂರನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಗ್ಗೆ ಅದರ ನೀರಿನೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗುತ್ತದೆ. ಇದರ ಸೇವನೆಯಿಂದ ಮಲಬದ್ಧತೆಯನ್ನೂ ಸಹ ಹೋಗಲಾಡಿಸಬಹುದು. ಒಣ ಅಂಜೂರನ್ನು ಹಾಲಿನೊಂದಿಗೆ…

Read More

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ ನ ಹಣಕಾಸು ತಂತ್ರಜ್ಞಾನ ವಿಭಾಗವಾದ ಅಮೆಜಾನ್ ಪೇ ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ನಿಂದ ಹೆಚ್ಚು ಬೇಡಿಕೆಯ ಪಾವತಿ ಅಗ್ರಿಗೇಟರ್ (ಪಿಎ) ಪರವಾನಗಿಯನ್ನು ಪಡೆದುಕೊಂಡಿದೆ.   https://kannadanewsnow.com/kannada/a-man-who-swallowed-39-coins-and-37-magnets-for-body-building/ https://kannadanewsnow.com/kannada/cm-siddaramaiah-thanks-st-somashekar-for-cross-voting-in-favour-of-congress/ ಫೆಬ್ರವರಿ 20 ರಂದು, ನಿಯಂತ್ರಕವು ಪಾವತಿ ಅಪ್ಲಿಕೇಶನ್ ಅನ್ನು ಪಾವತಿ ಅಗ್ರಿಗೇಟರ್ ಆಗಿ ಕಾರ್ಯನಿರ್ವಹಿಸಲು ಅನುಮೋದಿಸಿತು, ಇದು ತನ್ನ ಪ್ಲಾಟ್ಫಾರ್ಮ್ ಮೂಲಕ ಇ-ಕಾಮರ್ಸ್ ವಹಿವಾಟುಗಳನ್ನು ಸುಲಭಗೊಳಿಸಲು ಅನುವು ಮಾಡಿಕೊಟ್ಟಿತು. “ಜೀವನವನ್ನು ಸರಳೀಕರಿಸಲು ಮತ್ತು ವ್ಯಾಪಾರಿಗಳು ಮತ್ತು ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ನಾವು ಬದ್ಧರಾಗಿದ್ದೇವೆ. ಇದು (ಪರವಾನಗಿ) ನಮ್ಮ ವಿತರಣಾ ಚಾನೆಲ್ಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಭಾರತದಾದ್ಯಂತದ ನಮ್ಮ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸುರಕ್ಷಿತ, ಅನುಕೂಲಕರ ಮತ್ತು ಪ್ರತಿಫಲದಾಯಕ ಡಿಜಿಟಲ್ ಪಾವತಿ ಅನುಭವಗಳನ್ನು ಒದಗಿಸುವ ನವೀನ ಪರಿಹಾರಗಳನ್ನು ತಲುಪಿಸಲು ನಮಗೆ ಅನುವು ಮಾಡಿಕೊಡುತ್ತದೆ” ಎಂದು ಅಮೆಜಾನ್ ಪೇ ವಕ್ತಾರರು ಹೇಳಿದ್ದಾರೆ. ಕಂಪನಿಯು ಈಗಾಗಲೇ ಪ್ರಿಪೇಯ್ಡ್ ಪಾವತಿ ಸಾಧನಗಳು (ಪಿಪಿಐ) ಪರವಾನಗಿಯನ್ನು ಹೊಂದಿದ್ದು, ಅಮೆಜಾನ್ ಪೇ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ತುಂಬೆ ಹೂವು ಶಿವನಿಗೆ ಪ್ರಿಯವಾದದ್ದು. ಶಿವನ ಪೂಜೆಗೆ ಈ ಹೂವು ತುಂಬಾ ಶ್ರೇಷ್ಠ ಎಂಬ ನಂಬಿಕೆ ಇದೆ. ಇದೇ ಹೂವಿನಲ್ಲಿ ಅನೇಕ ಔಷಧಿ ಗುಣ ಸಮೃಧ್ಧವಾಗಿದೆ. ಅಂದಹಾಗೆ ಈ ಸಸಿ ಅಲ್ಲಲ್ಲಿ ಬೇಲಿಗಳಲ್ಲಿ ತನ್ನಂತಾನೆ ಬೆಳೆಯುತ್ತದೆ. ಹೀಗೆ ಬೇಲಿಗಳಲ್ಲಿ, ಹೊಲದ ಬದಿಗಳಲ್ಲಿ ಬೆಳೆಯುವ ಈ ತುಂಬೆ ಹೂವಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಬಗೆಹರಿಸಬಹುದು. ತುಂಬೆ ಹೂವಿನಲ್ಲಿರುವ ಅದ್ಭುತ್ವಾದ ಶಕ್ತಿಯನ್ನು ತಿಳಿದುಕೊಳ್ಳೋಣ. ಕಾಮಾಲೆ ರೋಗಕ್ಕೆ ತುಂಬೆ ಹೂವು ರಾಮಬಾಣವಾಗಿದೆ. ಕಾಮಾಲೆ ರೋಗ ಮನುಷ್ಯನನ್ನು ತುಂಬಾ ಬಾದಿಸುತ್ತದೆ. ಕೆಲವರು ಈ ರೋಗಕ್ಕೆ ಕೆಲವೊಬ್ಬರು ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ಲಿವರ್‌ ಹಾಗು ಯಕೃತ್‌ಗೆ ಏನಾದರು ಸಮಸ್ಯೆಯಾದಾಗ ಅಥವಾ ಇವೆರಡೂ ಸರಿಯಾಗಿ ಕೆಲಸ ಮಾಡದೇ ಇದ್ದಾಗ ಕಾಮಾಲೆ ರೋಗಲಕ್ಷಣಗಳು ಕಾಣಸಿಕೊಳ್ಳುತ್ತವೆ. ಲಿವರ್‌ಗೆ ಸಂಬಂಧಿಸಿದ ಎಲ್ಲ ಸಮ್ಯೆಗಳಿಗೆ ತುಂಬೆಗಿಡದ ಎಲೆಗಳು ಚಿಕಿತ್ಸೆಯಾಗುತ್ತವೆ. ಲಿವರ್‌ ಸಂಬಂಧಿಸಿದ ಹಾಗು ಕಾಮಾಲೆ ರೋಗಕ್ಕೆ ಈ ಗಿಡದ ಎಲೆಗಳನ್ನು ಹೇಗೆ ಬಳಸಬೇಕೆಂದರೆ, ತುಂಬೆ ಗಿಡದ ಎಲೆಗಳನ್ನು ಕಿತ್ತು ಚೆನ್ನಾಗಿ ತೊಳೆದು ಅವುಗಳನ್ನು ಮೆಣಸಿನ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌; ಎಲ್ಲರ ದಾಂಪತ್ಯ ಜೀವನದ ಕಥೆಯೇ ಅಷ್ಟು. ದಾಂಪತ್ಯದಲ್ಲಿ ಜಗಳ ಇಲ್ಲ ಎಂದರೆ ಅದು ನಂಬಲಾಗದು. ಪ್ರತಿಯೊಬ್ಬರ ದಾಂಪತ್ಯದಲ್ಲಿ ಜಗಳ ಇದ್ದೇ ಇರುತ್ತದೆ. ಕೆಲ ಸಣ್ಣಪುಟ್ಟ ವಿಷಯಕ್ಕೆ ಆರಂಭವಾದ ಜಗಳಗಳು ಮುಂದೆ ಬೇರೆ ಸ್ವರೂಪವನ್ನೇ ಪಡೆದುಕೊಳ್ಳುತ್ತವೆ. ಭಾರತೀಯ ಮಾನಸಿಕ ತಜ್ಞರ ಪ್ರಕಾರ ಸಾಮಾನ್ಯವಾಗಿ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲರ ದಾಂಪತ್ಯದಲ್ಲಿ ಜಗಳ ಆಗೋಕೆ ಕೆಲ ಸಾಮಾನ್ಯ ಕಾರಣಗಳಿವೆ. ಇವೇ ಕೆಲವು ಕಾರಣಗಳು ಎಲ್ಲರ ದಾಂಪತ್ಯದಲ್ಲಿ ಜಗಳವಾಗಲು ಕಾರಣವಾಗುತ್ತವೆ ಅಂತೆ. ಆದಷ್ಟು ಆ ಸಂಗತಿಗಳನ್ನು ಅವೈಡ್‌ ಮಾಡಿದರೆ ಗಂಡ ಹೆಂಡತಿ ನಡುವೆ ಜಗಳ ಆಗುವ ಸಂಭವ ತೀರಾ ಕಡಿಯಾಗಿಬಿಡುತ್ತದೆ. ಹಣ: ಹಣವೊಂದೇ ಜೀವನಕ್ಕೆ ಮುಖ್ಯ ಅಂದುಕೊಂಡ ಕುಟುಂಬದಲ್ಲಿ ಜಗಳ ಕಾಮನ್‌. ಹಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೆ ಅಲ್ಲಿ ಭಿನ್ನಾಭಿಪ್ರಾಯ ಪ್ರಾರಂಭವಾಗುತ್ತದೆ. ಹಣದ ವಿಷಯವಾಗಿ ಗಂಡ ಹೆಂಡತಿ ನಡುವೆ ತುಂಬಾ ಪಾರದರ್ಷಕತೆ ಇರಬೇಕು. ಖರ್ಚಿನ ಲೆಕ್ಕವನ್ನು ಒಬ್ಬರಿಗೊಬ್ಬರು ಒಪ್ಪಿಸಿಕೊಳ್ಳಿ. ಆಗ ಹಣದ ವಿಷಯವಾಗಿ ಜಗಳ ಆಗೋದಿಲ್ಲ. ಸ್ನೇಹಿತರೊಂದಿಗೆ ಹೆಚ್ಚು ಕಾಲ ಕಳೆಯೋದು: ಗಂಡಸರು ಹೆಚ್ಚು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯ ಅಡುಗೆ ಮನೆ ಮೇಲೆ ನಮ್ಮ ಆರೋಗ್ಯ ಇರುತ್ತದೆ. ಕಿಚನ್‌ ಎಷ್ಟು ಶ್ವಚ್ಛವಾಗಿರುತ್ತದೆಯೋ ನಮ್ಮ ಆರೋಗ್ಯ ಕೂಡ ಅಷ್ಟೇ ಸ್ವಚ್ಛವಾಗಿರುತ್ತದೆ. ಇನ್ನು ಹೊರಗಡೆ ದುಡಿಯಲು ಹೋಗುವ ಹೆಂಗಸರು ತುಂಬಾ ಸಮಯ ಕಿಚನ್‌ನಲ್ಲಿ ಕಳೆಯೋಕೆ ಆಗೋದಿಲ್ಲ. ಇಂತವರಿಗೆ ಕಿಚನ್‌ ಅನ್ನು ಬೇಗ ಕ್ಲೀನ್‌ ಆಗಬೇಕೆಂದರೆ ಕೆಲ ಟಿಪ್ಸ್‌ ಇವೆ ನೋಡಿ, ಒಲೆಯ ಮೇಲಿಟ್ಟ ಹಾಲು ಉಕ್ಕಿದರೆ ಕೂಡಲೇ ಶ್ವಚ್ಛಗೊಳಿಸಿಬಿಡಿ. ಅದನ್ನು ಹಾಗೆ ಬಿಟ್ಟರೆ ಸ್ಟವ್‌ ಹಾಗು ನೆಲಕ್ಕೆ ಹಾಲಿನ ಜಿಡ್ಡು ಅಂಟಿಕೊಂಡುಬಿಡುತ್ತದೆ. ಈ ಜಿಡ್ಡನ್ನು ತೆಗೆಯಲು ಆಮೇಲೆ ಹರ ಸಾಹಸ ಪಡಬೇಕಾದೀತು. ಹಾಗಾಗಿ ಬೇಸರ ಮಾಡಿಕೊಳ್ಳದೇ ಕೂಡಲೇ ಉಕ್ಕಿದ ಹಾಲನ್ನು ಒರೆಸಿಬಿಡಿ. ತಂದ ತರಕಾರಿಗಳನ್ನು ಸ್ವಚ್ಛವಾಗಿ ತೊಳಿದೇ ಫ್ರಿಡ್ಜ್‌ನಲ್ಲಿಡಿ. ಬೆಳಗ್ಗೆ ಆಫೀಸ್‌ಗೆ ಹೋಗುವಾಗ ಗಡಿಬಿಡಿಯಲ್ಲಿ ಅಡುಗೆ ಮಾಡುವಾಗ ಸಮಯದ ಉಳಿತಾಯವಾಗುತ್ತದೆ. ಅಂದಹಾಗೆ ಫ್ರಿಡ್ಜ್‌ನಲ್ಲಿಟ್ಟ ಹಣ್ಣು ತರಕಾರಿಯನ್ನು ಅದರಿಂದ ಹೊರತೆಗೆದು 20ನಿಮಿಷದ ನಂತರ ಉಪಯೋಗಿಸಬೇಕು. ಹಸಿ ಕಸದ ಡಬ್ಬವನ್ನು ಅಡುಗೆ ಮನೆಯಲ್ಲಿಯೇ ಇರಿಸಿಕೊಳ್ಳಿ. ಹಸಿ ಕಸ ಎಸೆಯಲು ಪದೇ ಪದೇ ಓಡಾಡುವ ಸಂಭವ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಾಮಾನ್ಯವಾಗಿ ಕಪ್ಪು ಬೆಳ್ಳುಳ್ಳಿ ಬಗ್ಗೆ ಜನರಿಗೆ ಅಷ್ಟಾಗಿ ಪರಿಚಯವಿಲ್ಲ. ಇದು ಅದೆಷ್ಟೋ ಆರೋಗ್ಯದ ಸಮಸ್ಯೆಗಳನ್ನು ಸುಧಾರುತ್ತದೆ ಎಂದು ಹೇಳಾಗುತ್ತದೆ. ಆಹಾರ ತಜ್ಞರ ಪ್ರಕಾರ ಕಪ್ಪು ಬೆಳ್ಳುಳ್ಳಿ ಔಷಧಿ ರೂಪದ ಆಹಾರ. ಕಪ್ಪು ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗು ಅಡುಗೆಗೆ ರುಚಿ ಕೂಡ ಹೆಚ್ಚಿಸುತ್ತದೆ ಆದರೆ ಅದೆಷ್ಟೋ ಜನರಿಗೆ ಇದರ ವಾಸನೆ ಆಗಿಬರುವುದಿಲ್ಲ. ಹೀಗಾಗಿ ಕಪ್ಪು ಬೆಳ್ಳುಳ್ಳಿ ಸೇವನೆಯನ್ನು ಬಿಟ್ಟು ಅದೆಷ್ಟೋ ಪೋಷಕಾಂಶಗಳಿಂದ ವಂಚಿತರಾಗುತ್ತಾರೆ ಎಂದು ಆಹಾರ ತಜ್ಞರು ಅಭಿಪ್ರಾಯ ಪಡುತ್ತಾರೆ. ಇನ್ನು ಕಪ್ಪು ಬೆಳ್ಳುಳ್ಳಿ ಹೇಗೆ ತಯಾರಿಸುತ್ತಾರೆ ಎಂದರೆ, ಬಿಳಿ ಬೆಳ್ಳುಳ್ಳಿಯನ್ನು ಹುದುಗಿಸುವ ಮೂಲಕ ಕಪ್ಪು ಬೆಳ್ಳುಳ್ಳಿಯನ್ನು ಮಾಡುತ್ತಾರೆ. ಬಿಳಿ ಬೆಳ್ಳುಳ್ಳಿಯಲ್ಲಿರುವ ಎಲ್ಲಾ ಅಂಶಗಳು ಕಪ್ಪು ಬೆಳ್ಳುಳ್ಳಿಯಲ್ಲಿದ್ದು, ಹುದುಗುವಿಕೆಯಿಂದಾಗಿ ಕಪ್ಪು ಬೆಳ್ಳುಳ್ಳಿಯಲ್ಲಿ ಉತ್ಕರ್ಷಣ ನಿರೋಧಕಗಳು ಉಂಟಾಗುತ್ತವೆ. ಹಾಗಾಗಿ ಕಪ್ಪು ಬೆಳ್ಳುಳ್ಳಿ, ಬಿಳಿ ಬೆಳ್ಳುಳ್ಳಿಗಿಂತ ಭಿನ್ನವಾಗುತ್ತದೆ. ಈ ಕಪ್ಪು ಬೆಳ್ಳುಳ್ಳಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಣ್ಣಪುಟ್ಟ ಕಾಯಿಲೆಯಿಂದ ಹಿಡಿದ ಕ್ಯಾನ್ಸರ್‌ನಂತಹ ಭಯಾನಕ ರೋಗಗಳನ್ನೂ ತೆಡಯಬಹುದು ಎಂದು ಹೇಳಲಾಗುತ್ತದೆ. ಯಕೃತ್‌ ಸಮಸ್ಯೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮದುವೆಯಾಗಿ ಮೂರು ವರ್ಷವಾದರೂ ಮಕ್ಕಳಾಗಿಲ್ಲವೆಂದರೆ ನೆಂಟರು ಸ್ನೇಹಿತರು ಕೇಳುವ ಪ್ರಶ್ನೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸಿಸುತ್ತವೆ. ಮಗುವನ್ನು ಪಡೆಯಲು ದಂಪತಿಗಳು ಎಷ್ಟೇ ಪ್ರಯತ್ನ ಮಾಡಿದರೂ ಅವರಿಗೆ ಸಂತಾನ ಭಾಗ್ಯ ಕೂಡಿ ಬಂದಿರುವುದಿಲ್ಲ. ಇಂತಹ ಸಮಸ್ಯೆ ಎದುರಿಸುತ್ತಿರುವವರಿಗೆ ಇಲ್ಲಿ ಕೆಲವೊಂದು ಸಲಹೆ ಸೂಚನೆಗಳನ್ನು ನೀಡಲಾಗಿದೆ. ಓದಿಕೊಳ್ಳಿ. ಹಾಗು ನಿಮ್ಮಾಕೆಗೆ ಗರ್ಭಧರಿಸಲು ಇನ್ನೂ ಕಷ್ಟ ಆಗುತ್ತಿದೆ ಎಂದೆ ಒಳ್ಳೆಯ ವೈದ್ಯರ ಹತ್ತಿರ ಇನ್ನೂ ಹೆಚ್ಚಿನ ಸೂಕ್ತವಾದ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಿ. ಮಕ್ಕಳನ್ನು ಪಡೆಯಲು ಹೆಣ್ಣು ಗಂಡಿನ ಇಬ್ಬರ ಆರೋಗ್ಯವೂ ತುಂಬಾ ಮುಖ್ಯವಾಗಿರುತ್ತದೆ. ಅದರಲ್ಲೂ ಗಂಡಿನ ವೀರ್ಯಾಣುಗಳ ಸಂಖ್ಯೆ ತುಂಬಾ ಮುಖ್ಯವಾಗುತ್ತದೆ. ಹೀಗೆ ಮಕ್ಕಳನ್ನು ಪಡೆಯಲು ನಿತ್ಯವೂ ಮಿಲನ ಮಹೋತ್ಸವ ಮಾಡುವುದು ಎಷ್ಟು ಸೂಕ್ತ. ಅಥವಾ ಆರೋಗ್ಯವಂತ ವೀರ್ಯಾಣುಗಳನ್ನು ಪಡೆಯಲು ಎಷ್ಟು ದಿನಕ್ಕೊಮ್ಮೆ ಮಿಲಕ್ರಿಯೆಯಲ್ಲಿ ತೊಡಗಬೇಕು ಎಂಬ ಬಗ್ಗೆ ತಿಳಿದುಕೊಳ್ಳೋಣ. ವಿಜ್ಞಾನ ಮತ್ತು ವೈದ್ಯರು ಸಲಹೆ ನೀಡುವ ಪ್ರಕಾರ ನಿತ್ಯವೂ ಮಿಲನ ಮಹೋತ್ಸವ ಮಾಡಿದರೆ ಆರೋಗ್ಯವಂತ ವೀರ್ಯಾಣುಗಳನ್ನು ಉತ್ಪತ್ತಿಯಾಗುವುದಿಲ್ಲ. ಒಂದು ಬಾರಿ ಮಾಡಿದ ಮೇಲೆ…

Read More