Author: kannadanewsnow07

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮನೆಯ ಮೂಲೆ ಮೂಲೆಗಳಲ್ಲಿ ಜೇಡ ಬಲೆಯನ್ನು ಕಟ್ಟಿದರೆ ಮನೆಯ ಅಂದವೇ ಹಾಳಾಗುತ್ತದೆ. ಮನೆ ನೆಲವನ್ನು ಶುಚಿಯಾಗಿಟ್ಟುಕೊಂಡು ಛಾವಣಿ ಮೇಲೆ ಜೇಡ ಬಲೆ ಇದ್ದರೆ ಮನೆಗೆ ಒಳ್ಳೆಯದಲ್ಲ. ಮನೆಯ ಛಾವಣಿ ಕೂಡ ಶುಚಿಯಾಗಿರಬೇಕು. ಛಾವಣಿಯಲ್ಲಿ ಜೇಡ ಹಾಕಿದ ಬಲೆಯನ್ನು ಶುಚುಗೊಳಿಸಿ ಅವುಗಳನ್ನು ಹೋಗಲಾಡಿಸಲು ತುಂಬಾ ಶ್ರಮ ಪಡಬೇಕಾಗುತ್ತದೆ. ಹೀಗಾಗಿ ಜೇಡಗಳನ್ನು ಓಡಿಸಲು ಏನು ಮಾಡಬೇಕು? ಇವುಗಳನ್ನು ಓಡಿಸಲು ಏನು ಮನೆಮದ್ದುಗಳಿವೆ ಎಂದು ತಿಳಿದುಕೊಳ್ಳೋಣ. ಪುದಿನಾ ಎಣ್ಣೆಯನ್ನು ಅಷ್ಟೇ ಸಮಪ್ರಮಾಣದ ನೀರಿಗೆ ಬೆರಸಿ ಚಿಕ್ಕ ಸ್ಪ್ರೇ ಬಾಟಲ್‌ನಲ್ಲಿ ಹಾಕಿಕೊಂಡು, ಬಲೆ ಇದ್ದ ಜಾಗಕ್ಕೆ ಸ್ಪ್ರೇ ಮಾಡಿದರೆ ಜೇಡಗಳು ಮತ್ತೇ ಆ ಜಾಗದ ಹತ್ತಿರ ಸುಳಿಯುವುದಿಲ್ಲ. ಜೇಡಗಳಿಗೆ ಘಾಟಿ ವಾಸನೆ ಆಗಿಬರುವುದಿಲ್ಲ. ಸಿಟ್ರಿಕ್‌ ಹಣ್ಣುಗಳಲ್ಲಿ ತುಂಬಾ ಘಾಟಿನ ವಾಸನೆ ಇರುತ್ತದೆ. ಹಾಗಾಗಿ ಸಿಟ್ರಿಕ್‌ ಇರುವ ನಿಂಬೆ ಹಣ್ಣು, ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಜೇಡ ಇರುವ ಜಾಗಕ್ಕೆ ಉಜ್ಜಿದರೆ ಜೇಡಗಳು ಅಲ್ಲಿಂದ ಮಾಯವಾಗುತ್ತವೆ. ಗೊಂಡಂಬಿ ವಾಸನೆ ಜೇಡಗಳಿಗೆ ಒಗ್ಗುವುದಿಲ್ಲವಂತೆ, ಹಾಗಾಗಿ ಗೋಡಂಬಿ ಬೀಜಗಳನ್ನು ಮನೆಯ ಅಲ್ಲಲ್ಲಿ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ನಿಂಬೆ ಹಣ್ಣು ಅನೇಕ ಪೌಷ್ಟಿಕಾಂಶಗಳನ್ನು ಹೊಂದಿದೆ. ಇದನ್ನು ನಿತ್ಯವೂ ಅಡುಗೆಗೆ ಉಪಯೋಗಿಸಿದರೆ ಅನೇಕ ಆರೋಗ್ಯ ಸಮಸ್ಯೆಗಳಿಂದ ದೂರವಿರಬಹುದು. ನಿಂಬೆ ಹಣ್ಣಿನ ಸೇವನೆ ಅನೇಕ ರೋಗಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಸಿಟ್ರಿಕ್‌ ಅಂಶ ಹೇರಳವಾಗಿರುವ ನಿಂಬೆ ಹಣ್ಣಿನಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೇ ಚರ್ಮದ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು. ಅದು ಹೇಗೆ ಅಂತಿರಾ..? ಇಂದಿನ ನೈರ್ಮಲ್ಯ ವಾತಾವರಣದಲ್ಲಿ ಮುಖದ ಚರ್ಮದ ಆರೋಗ್ಯ ಮತ್ತು ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಹೀಗೆ ಮುಖದ ಸೌಂದರ್ಯ ಕಾಪಾಡಿಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಕ್ರೀಮ್‌, ಕಾಸ್ಮೆಟಿಕ್ಸ್‌ಗೆ ಮೊರೆ ಹೋಗುವ ಜನ ಅನೇಕರಿದ್ದಾರೆ. ಆದರೆ ಇವು ನಮಗೆ ಶಾಶ್ವತ ಪರಿಹಾರ ನೀಡೋದಿಲ್ಲ. ಅಡುಗೆ ಮನೆಯಲ್ಲಿ ಸಿಗುವ ಕೆಲ ನೈಸರ್ಗಿಕ ಪದಾರ್ಥಗಳು ಮುಖದ ಕಾಂತಿ ಹೆಚ್ಚಿಸಿ ಮುಖದ ಸೌಂದರ್ಯವನ್ನು ನೈಸರ್ಗಿಕವಾಗಿ ರಕ್ಷಣೆ ಮಾಡುತ್ತವೆ ಅದರಲ್ಲಿ ನಿಂಬೆ ಹಣ್ಣು ಹೆಚ್ಚಿನ ಪಾತ್ರ ನಿರ್ವಹಿಸುತ್ತದೆ. ನಿಂಬೆ ಹಣ್ಣಿನ ರಸ ಚರ್ಮಕ್ಕೆ ನೈಸರ್ಗಿಕವಾಗಿ ಬ್ಲೀಚಿಂಗ್‌ ರೂಪದಲ್ಲಿ ಕೆಲಸ ಮಾಡುತ್ತದೆ. ಕಾಲು ಭಾಗ ನಿಂಬೆ ಹಣ್ಣಿನ ರಸಕ್ಕೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪಲಾವ್‌ ಎಲೆ ಅಂದ ತಕ್ಷಣ ನಮಗೆ ನೆನಪಿಗೆ ಬರೋದು ರುಚಿರುಚಿಯಾದ ಘಮಘಮವಾದ ಪಲಾವ್‌. ಪಲಾವ್‌ ಎಲೆ ಇಲ್ಲದೇ ಪಲಾವ್‌ಗೆ ರುಚಿನೇ ಇರುವುದಿಲ್ಲ. ಅಡುಗೆಗೆ ಉಪಯೋಗಿಸುವ ಈ ಪಲಾವ್‌ ಎಲೆಯಿಂದ ನಮ್ಮ ಆರೋಗ್ಯಕ್ಕೆ ಏನೆಲ್ಲಾ ಲಾಭ ಇದೆ ಅಂತ ಗೊತ್ತಾದ್ರೆ ನೀವೇ ಆಶ್ಚರ್ಯ ಪಡ್ತೀರಾ. ಬನ್ನಿ ಪಲಾವ್‌ ಎಲೆಯ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ. ಪಲಾವ್‌ ಎಲೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಅದ್ಭುತವಾದ ಶಕ್ತಿ ಅದೆಷ್ಟೋ ರೋಗಗಳಿಗೆ ಮದ್ದಿನ ರೂಪದಲ್ಲಿ ಕೆಲಸ ಮಾಡುತ್ತದೆ. ಈ ಪಲಾವ್‌ ಎಲೆಗಳಿಂದ ಅನೇಕ ಆರ್ಯವೇದ ಔಷಧಿಗಳನ್ನು ತಯಾರಿಸುತ್ತಾರೆ. ಹೀಗೆ ಔಷಧಿ ತಯಾರಿಸುವ ಎಲೆಯನ್ನೇ ನೇರವಾಗಿ ಊಟದಲ್ಲಿ ಸೇವಿಸಿದರೆ ಊಟದ ರುಚಿ ಕೂಡ ಹೆಚ್ಚುತ್ತದೆ ಹಾಗು ಆರೋಗ್ಯಕ್ಕೂ ಉತ್ತಮ. ಅರ್ಧ ತಲೆನೋವು ಅನೇಕರನ್ನು ಭಾದಿಸುತ್ತದೆ. ಇದನ್ನು ಮೈಗ್ರೇನ್‌ ಎಂದು ಸಹ ಕರೆಯುತ್ತಾರೆ. ಈ ಸಮಸ್ಯೆ ಇದ್ದವರು ವಾಂತಿ, ಪಿತ್ತದಂತಹ ಇನ್ನು ಕೆಲ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದಾಗಿ ನರಗಳ ಮೇಲೆ ಒತ್ತಡ ಬೀಳುತ್ತದೆ. ಈ ರೋಗ…

Read More

ಬೆಂಗಳೂರು: ವನ್ಯಜೀವಿಗಳ ಹಾವಳಿಗೆ ಸರ್ಕಾರವು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರು ತಿಳಿಸಿದ್ದಾರೆ. ವನ್ಯಜೀವಿಗಳು ಮಾನವನ ಜೀವ, ಆಸ್ತಿ ಪಾಸ್ತಿ ಮತ್ತು ಜಾನುವಾರಕ್ಕೆ ಅಪಾಯದ ಕಾರಣವಾದಾಗ ಮಾನವ-ವನ್ಯಜೀವಿ ಸಂಘರ್ಷ ಒದಗಿಸುತ್ತದೆ. ಸಂಘರ್ಷಕ್ಕೆ ಕಾರಣವೆಂದರೆ, ಆವಾಸಸ್ಥಾನ ನಾಶ. ಹೆಚ್ಚುತ್ತಿರುವ ಅಭಿವೃದ್ಧಿಯ ಚಟುವಟಿಕೆಗಳು ಅರಣ್ಯನಾಶಕ್ಕೆ ಕಾರಣವಾಗಿದ್ದು ವನ್ಯಜೀವಿ ಅವಾಸಸ್ಥಾನದ ನಷ್ಟಕ್ಕೆ ಕಾರಣವಾಗುತ್ತದೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಹೆಚ್ಚಿದ ಜಾನುವಾರುಗಳ ಸಂಖ್ಯೆಯು ಅತಿಯಾದ ಮೇಯುವಿಕೆಗೆ ಕಾರಣವಾಗಿದೆ. ಅರಣ್ಯ ಪ್ರದೇಶಗಳು ಅಕ್ರಮಣಕಾರಿ ಪ್ರಭೇದಗಳ/ಕಳೆಗಳ ಪ್ರಸರಣದೊಂದಿಗೆ ಹೆಣಗಾಡುತ್ತಿವೆ. ಇವು ಕಾಡು ಪ್ರಾಣಿಗಳಿಗೆ ರುಚಿಕರವಲ್ಲ. ಅಲ್ಲದೆ ಸಸ್ಯಹಾರಿ ಪ್ರಾಣಿಗಳಿಗೆ ರುಚಿಕರವಾದ ಸ್ಥಳೀಯ ಮರ ಮತ್ತು ಹುಲ್ಲು ಪ್ರಭೇದಗಳಿಗೆ ಹಾನಿಮಾಡುತ್ತವೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಮಾನವ ವಸಾಹತುಗಳು ಮತ್ತು ಕೃಷಿಯ ವಿಸ್ತರಣೆಯಿಂದಾಗಿ ವನ್ಯಜೀವಿಗಳೊಂದಿಗೆ ಹೆಚ್ಚಿನ ಮುಖಾಮುಖಿಗಳಿವೆ. ಅರಣ್ಯದಂಚಿನ ಪ್ರದೇಶಗಳಲ್ಲಿ ಭೂ ಬಳಕೆಯ ರೀತಿ ಬದಲಾಗಿದೆ. ಹೊಸ ಬೆಳೆಗಳ ಕೃಷಿಯು ವನ್ಯಜೀವಿಗಳನ್ನು ಕೃಷಿ ಪ್ರದೇಶಗಳಿಗೆ ಆಕರ್ಷಿಸುತ್ತಿದೆ. ವನ್ಯಜೀವಿ ಕಾರಿಡಾರ್‍ಗಳನ್ನು ಕೃಷಿ ಮತ್ತು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪಾತ್ರೆಗಳು ಶುಚಿತ್ವ ತುಂಬಾ ಇಂಪಾರ್ಟೆಂಟ್‌. ಪಾತ್ರೆಗಳು ಸ್ವಚ್ಛವಾಗಿಲ್ಲದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರೋದು ಪಕ್ಕಾ. ಸಹಜವಾಗಿ ನಾವು ಮಾಡುವ ಮಸಾಲಾಭರಿತ ಅಡುಗೆ ಪದಾರ್ಥಗಳು ಪಾತ್ರೆಗಳಿಗೆ ಹೆಚ್ಚು ಜಿಡ್ಡಿನಾಂಶ ಅಂಟಿಕೊಂಡುಬಿಡುತ್ತದೆ. ಈ ಕಠಿಣವಾದ ಕಲೆ ಹಾಗು ಜಿಡ್ಡಿನಾಂಶ ತೆಗೆಯಲು ಕಷ್ಟ ಪಡಲೇಬೇಕು.ಇನ್ನು ಪಾತ್ರೆ ತೊಳೆಯಲು ಮಾರುಕಟ್ಟೆಯಲ್ಲಿ ಅನೇಕ ಬಗೆಯ ಸೋಪ್‌, ಲಿಕ್ವಿಡ್‌ಗಳಿವೆ. ಆವುಗಳನ್ನು ಬಳಸುವ ಜೊತೆಗೆ ನಾವು ಹೇಳುವ ಟಿಪ್ಸ್‌ ಫಾಲೋ ಮಾಡಿ ನೋಡಿ. ಪಾತ್ರೆ ತೊಳೆಯಲೂ ಸುಲಭವಾಗುತ್ತದೆ. ಸಮಯ ಉಳಿತಾಯ ಹಾಗು ಪಾತ್ರೆಗಳು ಹೊಳೆಯುತ್ತವೆ. ತೊಳೆಯುವ ಮುನ್ನ ಪಾತ್ರೆಗಳಲ್ಲಿ ನೀರು ಹಾಕಿ ಅದ್ದಿಡಿ. ಪಾತ್ರೆ ತೊಳೆಯುವ ಮುನ್ನ ಐದು ಹತ್ತು ನಿಮಿಷ ನೀರು ಹಾಕಿ ನೆನಸಿಡಿ. ಹೀಗೆ ಮಾಡಿದರೆ ಪಾತ್ರೆ ತಿಕ್ಕುವಾಗ ಬೇಗ ಕರೆ ಬಿಟ್ಟುಕೊಳ್ಳುತ್ತದೆ. ತುಪ್ಪ ಅಥವಾ ಎಣ್ಣೆ ಜಿಡ್ಡಿರುವ ಪಾತ್ರೆಗಳನ್ನು ಬಿಸಿ ನೀರು ಹಾಕಿ ಅದ್ದಿಡಿ. ಜಿಡ್ಡಿನ ಪಾತ್ರೆಗಳಲ್ಲದೇ ಇನ್ನುಳಿದ ಪಾತ್ರೆಗಳನ್ನು ಚೆನ್ನಾಗಿ ಉಜ್ಜಿ ಸ್ಕ್ರಬ್‌ನಿಂದ ಪ್ರತೀ ಪಾತ್ರೆಯನ್ನೂ ಸರಿಯಾಗಿ ಉಜ್ಜಿ. ಸ್ಕ್ರಬ್‌ ಮಾಡಿದ ಬಳಿಕ ನೀರಿನಿಂದ…

Read More

ನವದೆಹಲಿ: ಅನೇಕ ವಾಹನಗಳಿಗೆ ಒಂದೇ ಫಾಸ್ಟ್ಟ್ಯಾಗ್ ಬಳಸುವುದನ್ನು ತಡೆಯಲು ಎನ್ಎಚ್ಎಐ ಇತ್ತೀಚೆಗೆ ‘ಒಂದು ವಾಹನ, ಒಂದು ಫಾಸ್ಟ್ಯಾಗ್’ ನೀತಿಯನ್ನು ಪರಿಚಯಿಸಿದೆ. ಸಂಚಾರ ದಟ್ಟಣೆಯನ್ನು ನಿವಾರಿಸುವುದು ಮತ್ತು ರಾಷ್ಟ್ರವ್ಯಾಪಿ ಟೋಲ್ ಸಂಗ್ರಹವನ್ನು ಸುಗಮಗೊಳಿಸುವುದು ಇದರ ಉದ್ದೇಶವಾಗಿದೆ. ಪರಿಣಾಮವಾಗಿ, ಫೆಬ್ರವರಿ 29 ರೊಳಗೆ ನೀವು ನೋ ಯುವರ್ ಕಸ್ಟಮರ್ (ಕೆವೈಸಿ) ಪ್ರಕ್ರಿಯೆಯನ್ನು ಪೂರ್ಣಗೊಳಿಸದಿದ್ದರೆ, ನಿಮ್ಮ ಫಾಸ್ಟ್ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಬಹುದು.  ಈ ಬೆಳವಣಿಗೆಯು ನಿಮ್ಮ ಫಾಸ್ಟ್ಟ್ಯಾಗ್ನ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಮತ್ತು ಗಡುವಿನ ಮೊದಲು ಅದನ್ನು ಹೇಗೆ ನವೀಕರಿಸುವುದು ಎಂಬ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಬಹುದು. ಈ ಲೇಖನವು ಉತ್ತರಗಳನ್ನು ಒದಗಿಸುವ ಮತ್ತು ಪ್ರಕ್ರಿಯೆಯ ಮೂಲಕ ನಿಮಗೆ ಮಾರ್ಗದರ್ಶನ ನೀಡುವ ಗುರಿಯನ್ನು ಹೊಂದಿದೆ. ಎನ್ಎಚ್ಎಐ ಅಧಿಕೃತ ವೆಬ್ಸೈಟ್ ಮೂಲಕ ಫಾಸ್ಟ್ಟ್ಯಾಗ್ ಕೆವೈಸಿಯನ್ನು ನವೀಕರಿಸಲಾಗುತ್ತಿದೆ https://fastag.ihmcl.com ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗ್ ಇನ್ ಮಾಡಿ. ಡ್ಯಾಶ್ಬೋರ್ಡ್ ಮೆನುಗೆ ನ್ಯಾವಿಗೇಟ್ ಮಾಡಿ ಮತ್ತು ‘ಮೈ ಪ್ರೊಫೈಲ್’ ಆಯ್ಕೆಯನ್ನು ಕ್ಲಿಕ್ ಮಾಡಿ. ‘ಮೈ ಪ್ರೊಫೈಲ್’…

Read More

ಬೆಂಗಳೂರು: ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್‍ಬಾಗ್, ಬೆಂಗಳೂರು ಇಲ್ಲಿ ಮೇ 02, 2024 ರಿಂದ ಫೆಬ್ರವರಿ 28.2025 ರ ವರೆಗೆ ನಡೆಯುವ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿಗೆ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ವಾಸವಾಗಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.1,750/- ಗಳ ಮಾಸಿಕ ಶಿಷ್ಯ ವೇತನ (ಮಾಜಿ ಸೈನಿಕರನ್ನು ಹೊರತುಪಡಿಸಿ) ವನ್ನು ನೀಡಲಾಗುವುದು. ಕನ್ನಡ ವಿಷಯಗಳೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ. ಇತರರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 30 ವರ್ಷ ವಯೋಮಿತಿ ಇರಬೇಕು. ಈ ತರಬೇತಿಯು ರೈತರ ಮಕ್ಕಳಿಗಾಗಿ ಇರುವುದರಿಂದ ಅಭ್ಯರ್ಥಿಯ ತಂದೆ ಅಥವಾ ಪೆÇೀಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅಡುಗೆಗೆ ಬಳಸುವ ಹಿಟ್ಟುಗಳಲ್ಲಿ ಕಲಬೆರಕೆ ವಿಷಯ ಆಗಾಗ ಚರ್ಚೆಯಾಗುತ್ತಾ ಇರುತ್ತದೆ. ಹೀಗೆ ಈ ಹಿಟ್ಟುಗಳಲ್ಲಿ ಏನು ಕಲಬೆರಕೆ ಮಾಡುತ್ತಾರೆ. ಅದರಿಂದಾಗುವ ದುಷ್ಪರಿಣಾಮ ಹಾಗು ಅದನ್ನು ಕಂಡು ಹಿಡಿಯೋದು ಹೇಗೆ ಎಂಬುದರ ಬಗ್ಗೆ ನಾವಿಂದು ತಿಳಿದುಕೊಳ್ಳೋಣ. ಹಿಟ್ಟಿನಲ್ಲಿ ಮಿಶ್ರಣ ಮಾಡಿದ ಪದಾರ್ಥಗಳನ್ನು ಬೇರ್ಪಡಿಸಲು ಕಷ್ಟ ಹಾಗಾಗಿ ಕಲಬೆರಕೆ ಇಲ್ಲದೆ ಇರುವ ಹಿಟ್ಟನ್ನು ಕೊಂಡು ತಂದರೆ ಯಾವುದೇ ತಾಪತ್ರಯ ಇರುವುದಿಲ್ಲ. ಅಂದಹಾಗೆ ಅಕ್ಕಿ ಮತ್ತು ಮೈದಾ ಹಿಟ್ಟುಗಳಲ್ಲಿ ಕಲಬೆರಕೆ ಮಾಡುವ ವಸ್ತು ಎಂದರೆ ಅದು ಬೋರಿಕ್‌ ಆಮ್ಲ. ಬೋರಿಕ್‌ ಆಮ್ಲ ಎಂದರೇನು? ನೀರಿನಲ್ಲಿ ಸುಲಭವಾಗಿ ಕರಗುವಂತಹ ನೈಸರ್ಗಿಕವಾಗ ಬಿಳಿ ಬಣ್ಣದ ಸಂಯುಕ್ತ. ಇದರಲ್ಲಿ ಆಮ್ಲಜನಕ, ಬೋರಾನ್‌ ಹಾಗು ಹೈಡ್ರೋಜನ್‌ ಇರುತ್ತದೆ. ಇದು ಶಿಲೀಂದ್ರ ನಾಶಕ ಮತ್ತು ಆಂಟಿ ಮೈಕ್ರೋಬಿಯಲ್‌ ಗುಣಲಕ್ಷಣಗಳನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಹೋಮಿಯೋಪತಿ ಚಿಕಿತ್ಸೆ ಮಾಡುವಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇಂತದ ಪದಾರ್ಥವನ್ನು ಅಹಾರದಲ್ಲಿ ಬೆರಸುವ ಮೂಲಕ ಕಲಬೆರಕೆ ಆಹಾರವನ್ನಾಗಿ ಮಾಡಿ ಅದರ ಗುಣಮಟ್ಟವನ್ನೂ ಹಾಳು ಮಾಡುತ್ತಾರೆ. ಬೋರಿಕ್‌ ಆಮ್ಲದ ಅಡ್ಡ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸೆಳ್ಳೆಗಳ ಕಾಟ ಅಷ್ಟಿಷ್ಟಲ್ಲ. ಸಂಜೆ ಆಯಿತೆಂದರೆ ಅದೆಲ್ಲಿಂದ ಬರುತ್ತವೆಯೋ ಮನೆಯೊಳಗೆ ನುಗ್ಗಿ ಮನೆಮಂದಿಗೆಲ್ಲ ಹಿಂಸೆ ನೀಡಲಾರಂಭಿಸುತ್ತವೆ. ಇವುಗಳಿಂದ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಕೂಡ ಹೆಚ್ಚು. ಕೆಲವೊಮ್ಮೆ ಇವು ಮಾರಣಾಂತಿಕ ಕೂಡ ಹೌದು. ಇವುಗಳನ್ನು ನಿಯಂತ್ರಿಸಲು ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್‌ ಕ್ವಾಯಿಲ್‌ಗಳನ್ನು ಬಳಸಲಾಗುತ್ತದೆ. ಇದರಿಂದ ಸೊಳ್ಳೆಗಳು ನಿಯಂತ್ರಣಕ್ಕೇನೋ ಬರುತ್ತವೆ. ಆದರೆ ಈ ಕೆಮಿಕಲ್‌ ಹೊಗೆ ಅಥವಾ ವಾಸನೆ ಮನುಷ್ಯನ ಶ್ವಾಶಕೋಶಕ್ಕೆ ತುಂಬಾ ಡೇಂಜರ್‌. ಇದು ಮನುಷ್ಯನ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಯಾವುದೇ ಕೆಮಿಕಲ್‌ ಇಲ್ಲದೆ ನೈಸರ್ಗಿಕವಾಗಿ ಸೊಳ್ಳೆಗಳು ಮನೆಯೊಳಗೆ ಬರದಂತೆ ಕೆಲ ಉಪಾಯಗಳಿವೆ. ತಿಳಿದುಕೊಳ್ಳಿ. ನಾವಿಂದು ಹೇಳುವ ಮನೆಮದ್ದು ಸೊಳ್ಳೆಗಳನ್ನು ನಿಯಂತ್ರಿಸಬಹುದು ಮತ್ತು ಇದರ ಹೊಗೆ ದೇಹಕ್ಕೆ ಯಾವುದೇ ತೊಂದರೆ ನೀಡದೇ ನಿಮ್ಮ ಉಸಿರಾಟಕ್ಕೂ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ಸೊಳ್ಳೆಗಳ ಕಾಟದಿಂದ ಮುಕ್ತಿಹೊಂದಲು ಬೇಕಾಗುವ ಸಾಮಗ್ರಿಗಳು ಕರ್ಪೂರ, ಬೆಳ್ಳುಳ್ಳಿ, ತುಪ್ಪ, ಅಥವಾ ಕೊಬ್ಬರಿ ಎಣ್ಣೆ ಹಾಗು ಒಂದು ಮಣ್ಣಿನ ಬಟ್ಟಲು. ಮೊದಲು ಒಂದು ಅರೆಯುವ…

Read More

ಬೆಂಗಳೂರು: ರಾಜ್ಯಸಭೆ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್​ನ ಅಜಯ್ ಮಾಕೇನ್ -47, ನಾಸೀರ್ ಹುಸೇನ್ – 47, ಜಿ.ಸಿ. ಚಂದ್ರಶೇಖರ – 45 ಮತಗಳೊಂದಿಗೆ ಗೆಲುವು ಸಾಧಿಸಿದರೆ, ಬಿಜೆಪಿಯ ನಾರಾಯಣಸಾ ಭಾಂಡಗೆ 47 ಮತಗಳನ್ನ ಪಡೆದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಇನ್ನು ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ ಅವರಿಗೆ 36 ಮತಗಳು ಬಿದ್ದಿವೆ. ಇನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ 9 ಮತಗಳಿಂದ ಸೋಲನುಭವಿಸಿದ್ದಾರೆ. ಉತ್ತರ ಪ್ರದೇಶದ 10, ಮಹಾರಾಷ್ಟ್ರ 6, ಬಿಹಾರ 6, ಪಶ್ಚಿಮ ಬಂಗಾಳ 5, ಮಧ್ಯ ಪ್ರದೇಶ 5, ಗುಜರಾತ್ 4, ಆಂಧ್ರ ಪ್ರದೇಶ 3, ತೆಲಂಗಾಣ 3, ರಾಜಸ್ಥಾನ 3, ಕರ್ನಾಟಕ 4, ಉತ್ತರಾಖಂಡ 1, ಛತ್ತೀಸ್‌ಗಢ 1, ಒಡಿಶಾ 3, ಹರ್ಯಾಣ 1 ಹಾಗೂ ಹಿಮಾಚಲ ಪ್ರದೇಶದಲ್ಲಿ 1 ಸ್ಥಾನಕ್ಕೆ ಚುನಾವಣೆ ನಡೆದಿದೆ. ಈ ನಡುವೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾಂಗ್ರೆಸ್ ಪರವಾಗಿ ಅಡ್ಡ ಮತದಾನ…

Read More