Author: kannadanewsnow07

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆ 2024 ಗಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಮಧ್ಯಾಹ್ನ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಶುಕ್ರವಾರ ಪತ್ರಿಕಾಗೋಷ್ಠಿಯ ಮೂಲಕ ಪಟ್ಟಿಯನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ, ಅಲ್ಲಿ ಅಭ್ಯರ್ಥಿಗಳ ವಿವರಗಳನ್ನು ಬಹಿರಂಗಪಡಿಸಲಾಗುವುದು. https://kannadanewsnow.com/kannada/union-government-rejects-proposal-to-set-up-new-authority-to-protect-trees/ ಆರಂಭಿಕ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಇರಲಿದೆ ಎಂದು ಪಕ್ಷದ ಹತ್ತಿರದ ಮೂಲಗಳು ಎಬಿಪಿ ಲೈವ್ ಗೆ ತಿಳಿಸಿವೆ. ಇದಲ್ಲದೆ, ಗೃಹ ಸಚಿವ ಅಮಿತ್ ಶಾ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ ಇದೇ ಎನ್ನಲಾಗಿದೆ.  ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. https://kannadanewsnow.com/kannada/largest-wildfire-in-texas-over-1-million-acres-of-forest-burned/ https://kannadanewsnow.com/kannada/pro-pakistan-sloganeering-7-people-questioned-action-to-be-taken-after-fsl-report-is-received-g-parameshwara/ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗುಜರಾತ್ನ ಭೂಪೇಂದ್ರ ಪಟೇಲ್, ಮಧ್ಯಪ್ರದೇಶದ ಮೋಹನ್ ಯಾದವ್, ಛತ್ತೀಸ್ಗಢದ ವಿಷ್ಣು ದೇವ್ ಸಾಯಿ,…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಬೂದುಗುಂಬಳಕಾಯಿಯಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾಗುವಂತಹ ಅನೇಕ ಖನಿಜಾಂಶಗಳು ಅಡಗಿವೆ. ಇದು ಶುಭ ಸಮಾರಂಭಕ್ಕೆ ಎಷ್ಟು ಮುಖ್ಯವೋ ಆರೋಗ್ಯ ವೃದ್ಧಿಗೂ ಅಷ್ಟೇ ಮುಖ್ಯವಾಗಿದೆ. ಬೂದುಗುಂಬಳಕಾಯಿಯ ಜ್ಯೂಸ್‌ ಸೇವನೆಯಿಂದಾಗುವ ಪ್ರಯೋಜನಗಳ ಬಗ್ಗೆ ಒಂದೊಂದಾಗಿ ತಿಳಿದುಕೊಳ್ಳೋಣ. ಬೂದುಗುಂಬಳಕಾಯಿಯ ಜ್ಯೂಸ್‌ ಮಾಡುವ ವಿಧಾನ: ಇದು ತುಂಬಾ ಸರಳವಾಗಿದೆ. ಒಂದು ಲೋಟ ಜ್ಯೂಸ್‌ ಪ್ರಮಾಣಕ್ಕೆ ಒಂದು ಜಾಮೂನ್‌ ಬಟ್ಟಲಷ್ಟು ಕತ್ತರಿಸಿದ ಬೂದುಗುಂಬಳಕಾಯಿಯನ್ನು ತೆಗೆದುಕೊಳ್ಳಿ. ಕತ್ತರಿಸಿದ ಬೂದುಗುಂಬಳಕಾಯಿ ಪೀಸ್‌ಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ಅದಕ್ಕೆ ಮುಕ್ಕಾಲು ಲೋಟ ನೀರು ಹಾಕಿ ಚೆನ್ನಾಗಿ ಮಿಕ್ಸಿ ಮಾಡಿಕೊಳ್ಳಿ. ಇದನ್ನು ಸೋಸಿಕೊಂಡು ಹಾಗೆಯೇ ಕುಡಿಯಬಹುದು. ಅಥವಾ ಚಿಟಿಕೆ ಸೈಂದ್ರಲವಣ ಕಲಿಸಿಕೊಂಡು ಕುಡಿಯಬಹುದು. ಇನ್ನೂ ಬೇಕಿದ್ದರೆ ಒಂದೆರಡು ಹನಿ ನಿಂಬೆ ರಸ ಸೇರಿಸಿಕೊಳ್ಳಬಹುದು. ಆದಷ್ಟು ತಾಜಾ ಇದ್ದಾಗಲೇ ಈ ಜ್ಯೂಸ್‌ ಅನ್ನು ಸೇವಿಸಿ. ಬೂದುಗುಂಬಳಕಾಯಿಯಲ್ಲಿ ಕೊಬ್ಬು ಪ್ರೋಟೀನ್‌, ವಿಟಮಿನ್‌ ಎ, ಬಿ1, ಬಿ2, ಕ್ಯಾಲ್ಸಿಯಂ, ಮೆಗ್ನೀಶಿಯಂ, ಪೊಟಾಶಿಯಂ, ಸೋಡಿಯಂ, ಫೈಬರ್‌, ಕಾರ್ಬೋಹೈಡ್ರೇಟ್‌, ಝಿಂಕ್‌ ಹೀಗೆ ಇನ್ನು ಅನೇಕ ಜೀವಸತ್ವಗಳು ಇದರಲ್ಲಿ ಇವೆ. ಕೇವಲ ಇದೊಂದರ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಅಡುಗೆ ಮನೆ ಕೆಲಸಕ್ಕೆ ಕೊನಯೇ ಇಲ್ಲ ಬಿಡಿ. ಇದೊಂತರ ನಿರಂತರವಾದ ಕೆಲಸ. ಒಂದು ಕೆಲಸ ಆಯ್ತು ಎನ್ನುವಾಗ ಮತ್ತೊಂದು ಕೆಲಸ ಬಂದೇ ಬಿಡುತ್ತದೆ. ಎಷ್ಟೇ ಕೆಲಸ ಮಾಡಿದರೂ ಮುಗಿಯುವುದೇ ಇಲ್ಲ ಎಂದು ಹೆಣ್ಣುಮಕ್ಕಳು ಹೇಳಿಕೊಂಡಿರುವುದನ್ನು ಅಲ್ಲಲ್ಲಿ ಕೇಳಿರುತ್ತೀರಿ. ಅಂತವರಿಗೆ ಕೆಲ ಉಪಯುಕ್ತ ಟಿಪ್ಸ್‌. ತಪ್ಪದೇ ಫಾಲೋ ಮಾಡಿ ಆಗ ನೋಡಿ ನಿಮ್ಮ ಅಡುಗೆ ಮನೆ ಕೆಲಸ ಮತ್ತಷ್ಟು ಸುಲಭ ಹಾಗು ಬೇಗನೆ ಆಗುತ್ತದೆ. ಹಾಲು ಕಾಯಿಸುವಾಗ ಕೆಲವೊಮ್ಮೆ ಎಷ್ಟೇ ಜಾಗರೂಕರರಾಗಿದ್ದೂ ಹಾಲು ಕ್ಷಣಾರ್ಧದಲ್ಲಿ ಉಕ್ಕಿ ಹೋಗುತ್ತದೆ. ಇದಕ್ಕೆ ಒಂದು ಬೆಸ್ಟ್‌ ಉಪಾಯವಿದೆ. ಹಾಲು ಕಾಯಿಸುವಾಗ ಅದರ ಮೇಲೆ ಒಂದು ಮರದ ಸೌಟು ಇಡಿ. ಆಗ ಹಾಲು ಉಕ್ಕಿ ಚೆಲ್ಲುವುದಿಲ್ಲ. ಈ ಟ್ರಿಕ್‌ ಮಹಿಳೆಯರಿಗೆ ತುಂಬಾ ಉಪಯುಕ್ತ. ಆಲುಗಡ್ಡೆ ಸಿಪ್ಪೆ ಸುಲಿಯಲು ಇನ್ನುಮುಂದೆ ಕಷ್ಟ ಪಡಬೇಕಿಲ್ಲ. ಆಲುಗಡ್ಡೆ ಬೇಯಿಸುವಾಗ ಒಂದರಲ್ಲಿ ಎರಡು ಭಾಗ ಮಾಡಿ ಕತ್ತರಿಸಿ ಬೇಯಿಸಲು ಇಡಿ. ಇನ್ನು ಆಲುಗಡ್ಡೆ ಬೆಂದ ನಂತರ ತಣ್ಣೀರಿಗೆ ಅದನ್ನು ವರ್ಗಾಯಿಸಿ ಹೀಗೆ ಮಾಡಿದರೆ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಮೊಸರು ಸೇವನೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದೇ ಮೊಸರಿನಲ್ಲಿ ಅನೇಕ ಬ್ಯೂಟಿ ಟಿಪ್ಸ್‌ ಹಾಗು ಬ್ಯೂಟಿ ಸೀಕ್ರೇಟ್‌ಗಳಿವೆ. ಸೌಂಧರ್ಯವರ್ಧಕವಾಗಿ ಮೊಸರಿನ ಬಳಕೆ ಅಜ್ಜಿ ಕಾಲದಿಂದಲೂ ಇದೆ. ಹೆಚ್ಚು ಮೊಸರು ಸೇವನೆ ಮಾಡಿದರೆ ಚರ್ಮ ಹೊಳಯುತ್ತದೆ. ಇದರಲ್ಲಿರುವ ಉತ್ತಮ ಪೋಷಕಾಂಶಗಳು ಚರ್ಮದ ಆರೋಗ್ಯ ಕಾಪಾಡಲು ತುಂಬಾ ಸಹಕಾರಿಯಾಗಿದೆ. ಮೊಸರಿನ ಸೇವನೆ ಜೊತೆ ಮೊಸರಿನ ಫೇಸ್‌ ಪ್ಯಾಕ್‌ ಬಳಕೆ ಹಾಗು ಅದರ ಉಪಯೋಗಗಳನ್ನು ಮುಂದೆ ತಿಳಿದುಕೊಳ್ಳೋಣ. ಮೊಸರಿನಲ್ಲಿ ಕ್ಯಾಲ್ಸಿಯಂ, ವಿಟಮಿನ್‌ ಬಿ, ಲ್ಯಾಕ್ಟಿಕ್‌ ಆಮ್ಲ ಹೇರಳವಾಗಿದೆ ಹಾಗಾಗಿ ಇದನ್ನು ಸೌಂದರ್ಯವರ್ಧಕಗಳಲ್ಲಿ ಬಳಸಲು ತಜ್ಞರು ಸಲಹೆ ನೀಡುತ್ತಾರೆ ಈ ಎಲ್ಲ ಅಂಶಗಳು ಚರ್ಮಕ್ಕೆ ಹೊಳಪನ್ನು ನೀಡುತ್ತದೆ, ಸುಕ್ಕು, ಟ್ಯಾನ್‌ ಸ್ಕಿನ್‌ ನಿವಾರಣೆ ಮಾಡುತ್ತದೆ. ಮೊಡವೆಗಳಿಗೆ ರಾಮಬಾಣ ಇದಾಗಿದೆ. ಬ್ಯೂಟಿ ಪಾರ್ಲರ್‌ಗಳಲ್ಲಿ ಮೊಸರನ್ನು ಮಾಯಿಶ್ಚರೈಸರ್‌ ಆಗಿ ಹಾಗು ಕ್ಲೈಂಜರ್‌ ಆಗಿ ಬಳಸುತ್ತಾರೆ. ಮೊಸರಿನಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕ ತುಂಬಾ ಪೂರಕವಾಗಿವೆ. ಇದರಲ್ಲಿರುವ ಸತು, ಕ್ಯಾಲ್ಸಿಯಂ, ಲ್ಯಾಕ್ಟಿಕ್‌ ಆಮ್ಲ, ವಿಟಮಿನ್‌ ಬಿ ಚರ್ಮಕ್ಕೆ ಯವ್ವನ ನೀಡುತ್ತದೆ. ಹಾಗಾಗಿ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕೊರೊನಾ ಕೇಸ್‌ ಜಾಸ್ತಿಯಾಗ್ತಾ ಇದೆ ನಿಜ. ಆದರೆ ಇದರ ನಡುವೆ ಹವಾಮಾನದ ಬದಲಾವಣೆಯಿಂಗಾಗಿ ಸಾಮಾನ್ಯವಾಗಿ ಎಲ್ಲಲ್ಲಿ ಕೆಲವರಿಗೆ ಶೀತ ಕೆಮ್ಮು ಹಾಗು ಲೈಟ್‌ ಆಗಿ ಜ್ವರ ಕಾಣಿಸಿಕೊಳ್ಳುತ್ತಿದೆ. ಹೀಗೆ ಆದರೆ ಸಾಕು ಎಲ್ಲರೂ ಭಯ ಬೀಳುತ್ತಾರೆ. ತಮಗೆ ಕೊರೊನಾ ಒಕ್ಕರಿಸಿತು ಎಂದು ಭಯ ಪಡುತ್ತಿದ್ದಾರೆ. ಆದರೆ ವೈದ್ಯರು ಹೇಳುವ ಪ್ರಕಾರ ಇದು ಸಾಮಾನ್ಯವಾಗಿ ಬಂದು ಹೋಗುವ ವೈರಲ್‌ ಫೀವರ್‌ ಎದು ಹೇಳುತ್ತಿದ್ದಾರೆ. ಹೀಗೆ ವೈರಲ್‌ ಫೀವರ್‌ ಬಂದರೆ ಈ ಕೆಳಗಿನ ಮನೆಮದ್ದನನ್ನು ಟ್ರೈ ಮಾಡಿ. ಇದರಿಂದ ನಿಮ್ಮ ಕಾಯಿಲೆ ವಾಸಿಯಾಗದೇ ಇದ್ದಾಗ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಿರಿ. ಶುಂಠಿ: ಶುಂಠಿ ಚಹಾ ಸೇವಿಸಿ. ಒಂದು ಲೋಟ ನೀರು ಕಾಯಿಸಿ ಅದಕ್ಕೆ ಒಂದು ಚೂರಷ್ಟು ಶುಂಠಿ ಹಾಕಿ ಮತ್ತಷ್ಟು ಕುದಿಸಿ. ಇದನ್ನು ಸೋಸಿಕೊಂಡು ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು ಮತ್ತು ಶೀತ ಬೇಗ ನಿವಾರಣೆಯಾಗುತ್ತದೆ. ಜೇನುತುಪ್ಪ: ಕೆಮ್ಮು ಹೆಚ್ಚಾಗಿದ್ದರೆ ನೀರಿಗೆ ತಿಳಸಿ ಪುದಿನಾ ಎಲೆ ಹಾಕಿ, ಬೇಕಿದ್ದರೆ ಇನ್ನು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಸಾಮಾನ್ಯವಾಗ ದಾಂಪತ್ಯ ಜೀವನ ಹೊಸದರಲ್ಲಿ ಇದ್ದ ಹಾಗೆ ಕಾಲ ಕಳೆದ ಹಾಗೆ ಇರುವುದಿಲ್ಲ. ಬರಬರುತ್ತಾ ದಾಂಪತ್ಯದಲ್ಲಿ ಕೆಲ ಬದಲಾವಣೆಗಳು ಆಗುತ್ತವೆ. ಹಾಗೆಯೇ ಲೈಂಗಿಕ ಆಸಕ್ತಿಯಲ್ಲೂ ಕೂಡ ಅಷ್ಟೇ, ಮೊದಲಿದ್ದ ಆಸಕ್ತಿ ದಿನಕಳೆದಂತೆ ಇರುವುದಿಲ್ಲ. ಆ ಕಾರಣಗಳು ಈ ಮುಂದಿನಂತೆ ಇರಬಹುದು. ಲೈಂಗಿಕ ಆಸಕ್ತಿ ಕಡಿಮೆಯಾಗಲು ಮನಸ್ಸಿನ ಅಸಮಧಾವನೂ ಒಂದು ಕಾರಣವಾಗಬಹುದು. ಇದರ ಹಿಂದೆ ಕೆಲ ಕಾರಣಗಳಿರಬಹುದು. ಮೊದಲು ಆ ವಿಷಯಗಳನ್ನು ತಿಳಿದುಕೊಳ್ಳಿ. ನಿಮ್ಮ ಸಂಗಾತಿ ಲೈಂಗಿಕವಾಗಿ ಆಸಕ್ತಿ ತೋರಿಸುತ್ತಿಲ್ಲ ಎಂತಾದರೆ ಅದಕ್ಕೆ ಕಾರಣ ಹುಡುಕಿ. ಒಬ್ಬರಿಗೊಬ್ಬರು ಕೂತು ಮಾತನಾಡಿ. ಎಲ್ಲರೂ ಒಂದೇ ರೀತಿಯಾಗಿ ಲೈಂಗಿಕ ಆಸಕ್ತಿ ಹೊಂದಿರುವುದಿಲ್ಲ. ಎಲ್ಲ ಸಮಯದಲ್ಲೂ ಒಂದೇ ಬಗೆಯ ಲೈಂಗಿಕ ಆಸಕ್ತಿ ಹೊಂದಿರಲು ತುಸು ಕಷ್ಟ. ಕೆಲಸದ ಒತ್ತಡ. ಇನ್ನಾವುದೋ ಕಾರಣವಾಗಿರಬಹುದು. ಹಾಗಾಗಿ ನಿಮ್ಮ ಸಂಗಾತಿಯೊಂದಿಗೆ ಇದರ ಬಗ್ಗೆ ಮುಕ್ತವಾಗಿ ಚರ್ಚಿಸಿ. ಒತ್ತಾಯಪೂರ್ವಕವಾದ ಲೈಂಗಿಕ ಸಂಪರ್ಕ ಒಳ್ಳೆಯದಲ್ಲ. ಕೆಲವೊಮ್ಮೆ ಮಹಿಳೆಯರಿಗೆ ಲೈಂಗಿಕತೆಯ ಮೇಲೆ ಆಸಕ್ತಿ ಕುಗ್ಗುತ್ತಾ ಹೋಗುತ್ತದೆ. ಕಾರಣ ಆಕೆ ಮನೆ ಮತ್ತು ಆಫೀಸ್‌ ಎರಡನ್ನೂ…

Read More

ಅದೆಷ್ಟೋ ಜನ ತಮ್ಮ ದಿನವನ್ನು ಮೊಬೈಲ್‌ ಆನ್‌ ಮಾಡುವ ಮೂಲಕವೇ ಶುರು ಮಾಡುತ್ತಾರೆ. ಬೆಳಗ್ಗೆ ಎಚ್ಚರವಾದ ತಕ್ಷಣ ಮೊಬೈಲ್‌ ಹುಡುಕಾಟ ಶುರು. ಆದರೆ ಇದು ಎಷ್ಟರಮಟ್ಟಿಗೆ ಸರಿ ತಪ್ಪು ಎಂದು ಮುಂದೆ ತಿಳಿಯೋಣ. ಮೊಬೈಲ್‌ ಒಂದು ಅದ್ಭುತ ಬಳಕೆ. ಅದೆಷ್ಟೋ ಕೆಲಸ, ವ್ಯವಹಾರಗಳು ಕೂತಲ್ಲಿಯೇ ಸುಲಭವಾಗಿ ಮಾಡಿಕೊಳ್ಳಬಹುದು. ಆದರೆ ಇದರ ಅತಿಯಾದ ಬಳಕೆ ಮತ್ತು ಇದರ ಮೇಲಿನ ಅತಿಯಾದ ಅವಲಂಬನೆ ನಿಮ್ಮ ದೇಹದ ಹಾಗು ಮಾನಸಿಕ ಆರೋಗ್ಯದ ಮೇಲೆ ಅತ್ಯಂತ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬೆಳಗ್ಗೆ ನಿದ್ರೆಯಿಂದ ಎದ್ದು ತಕ್ಷಣ ನಿಮ್ಮ ಮನಸ್ಸು ಮೆದುಳಿ ಸಂಪೂರ್ಣವಾಗಿ ವಿಶ್ರಾಂಗೊಂಡಿರುತ್ತದೆ. ಹಾಗು ನಿಮ್ಮ ಮೆದುಳಿಗೆ ಒಳ್ಳೆಯ ಕೆಲಸ ಅಥವಾ ಒಳ್ಳೆಯ ಆಲೋಚನೆಗಳನ್ನು ಕೊಡಿ. ಅದು ಬಿಟ್ಟು ಫೋನ್‌ ಹಿಡಿದರೆ ಫೋನ್‌ನಲ್ಲಿ ಬಂದ ಎಲ್ಲಾ ಆಲೋಚನೆಗಳು ನಿಮ್ಮ ಮೆದುಳಿಗೆ ಎದ್ದ ಕೂಡಲೇ ಒತ್ತಡವನ್ನುಂಟು ಮಾಡುತ್ತದೆ. ಇನ್ನು ಕೆಲವರು ಬೆಳಗ್ಗೆ ನ್ಯೂಸ್‌ಗಳನ್ನು ಮೊಬೈಲ್‌ನಲ್ಲಿಯೇ ಸ್ಕ್ರಾಲ್‌ ಮಾಡಿ ಓದಲು ಶುರು ಮಾಡುತ್ತಾರೆ. ಹೀಗೆ ಎದ್ದ ತಕ್ಷಣ ಮೊಬೈಲ್‌ ಸ್ಕ್ರಾಲ್‌…

Read More

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ ಮೊದಲ ದಿನದಿಂದ ಹಲವಾರು ಹೊಸ ನಿಯಮಗಳು ಜಾರಿಗೆ ಬರಲಿವೆ, ಜಿಎಸ್ಟಿ ನಿಯಮಗಳಲ್ಲಿ ಬದಲಾವಣೆಗಳು: ಮಾರ್ಚ್ 1 ರಿಂದ, 5 ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ಹೊಂದಿರುವ ವ್ಯವಹಾರಗಳು ಎಲ್ಲಾ ಬಿ 2 ಬಿ ವಹಿವಾಟುಗಳಿಗೆ ಇ-ಇನ್ವಾಯ್ಸ್ ವಿವರಗಳನ್ನು ಸೇರಿಸದೆ ಇ-ವೇ ಬಿಲ್ ರಚಿಸಲು ಸಾಧ್ಯವಾಗುವುದಿಲ್ಲ. ಸರಕು ಮತ್ತು ಸೇವಾ ತೆರಿಗೆ ಆಡಳಿತದ ಅಡಿಯಲ್ಲಿ, ₹ 50,000 ಕ್ಕಿಂತ ಹೆಚ್ಚಿನ ಮೌಲ್ಯದ ಸರಕುಗಳ ಅಂತರ-ರಾಜ್ಯ ಸಾಗಣೆಗೆ ಇ-ವೇ ಬಿಲ್ ಗಳು ಬೇಕಾಗುತ್ತವೆ. ಮಾರ್ಚ್ ತಿಂಗಳಲ್ಲಿ 12 ದಿನಗಳ ಕಾಲ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇವುಗಳಲ್ಲಿ ಶನಿವಾರ ಮತ್ತು ಭಾನುವಾರದ ಸಾಪ್ತಾಹಿಕ ರಜೆಗಳು ಸೇರಿವೆ. ಆರ್ಬಿಐ ಕ್ಯಾಲೆಂಡರ್ ಪ್ರಕಾರ, ಮಾರ್ಚ್ 11 ಮತ್ತು 25 ರಂದು ಬ್ಯಾಂಕುಗಳು ಮುಚ್ಚಲ್ಪಡುತ್ತವೆ – ಎರಡನೇ ಮತ್ತು ನಾಲ್ಕನೇ ಶನಿವಾರ. ಇದಲ್ಲದೆ, ಮಾರ್ಚ್ 5, 12, 19 ಮತ್ತು 26 ಭಾನುವಾರಗಳು ಸೇರಿದೆ. ಫಾಸ್ಟ್ಟ್ಯಾಗ್ಗಳನ್ನು…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಕಿವಿ ನೋವು ಒಮ್ಮೆಯಾದರೂ ನಿಮಗೆ ಬಂದು ಹೋಗಿರುತ್ತದೆ. ಸಾಮಾನ್ಯವಾಗಿ ಈ ನೋವು ಹೆಚ್ಚು ರಾತ್ರಿಹೊತ್ತು ಕಾಟ ಕೊಡುತ್ತದೆ. ಕಿವಿ ಸ್ವಚ್ಛವಾಗಿ ಇಟ್ಟುಕೊಳ್ಳದೇ ಇದ್ದಾಗ, ಕಿವಿಯಲ್ಲಿ ನೀರು ತುಂಬಿಕೊಂಡಾಗ, ಅಥವಾ ಹೊರಗಿನ ಧೂಳು. ಹೊಗೆ ಸೇರಿಕೊಂಡು ಕಿವಿಯಲ್ಲಿ ಬ್ಯಾಕ್ಟೀರಿಯ ಉಂಟಾಗಿ ಅಥವಾ ಕೆಲವೊಮ್ಮೆ ಫಂಗಸ್‌ ಉಂಟಾಗಿ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿಗೆ ಸೊಂಕು ಉಂಟಾಗಿ ನಿಮಗೆ ಹೆಚ್ಚು ನೋವು ಕೊಟ್ಟಾಗೆ ಈ ಕೆಳಗಿನ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ. ನಾವು ಹೇಳುವ ಮನೆಮದ್ದನ್ನು ಟ್ರೈ ಮಾಡಿದ ಮೇಲೆಯೂ ನಿಮಗೆ ಇನ್ನೂ ಹೆಚ್ಚು ಕಿವಿ ನೋವು ಇದ್ದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ. ಸಾಸಿವೆ ಎಣ್ಣೆ: ಕೆವೊಮ್ಮೆ ಸಾಸಿವೆ ಎಣ್ಣೆ ಅಷ್ಟಾಗಿ ಲಭ್ಯ ಇರುವುದಿಲ್ಲ. ಒಂದು ವೇಳೆ ಸಾಸಿವೆ ಎಣ್ಣೆ ನಿಮ್ಮಗೆ ಲಭ್ಯವಿದ್ದರೆ, ನಿಮಗೆ ಕಿವಿ ನೋವು ಕಾಣಿಸಿಕೊಂಡಾಗ ಈ ಸಾಸಿವೆ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ಎರಡು ಹನಿ ನೋವಿದ್ದ ಕಿವಿ ಹೊಳ್ಳಕ್ಕೆ ಹಾಕಿದರೆ ಕಿವಿ ನೋವು…

Read More

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2023- 2024 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1 ಇಂದಿನಿಂದ ಆರಂಭವಾಗಲಿದೆ.  ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಖಜಾನೆಗಳಿಂದ ಪ್ರಶ್ನೆಪತ್ರಿಕೆ ಸ್ವೀಕರಿಸಿ, ಅವುಗಳನ್ನು ಪರೀಕ್ಷಾ ಕೇಂದ್ರಗಳಿಗೆ ವಿತರಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಕ್ಕೂ ಮುಖ್ಯ ಅಧೀಕ್ಷಕ ನೇಮಿಸಲಾಗುವುದು. ಕೇಂದ್ರದ ಕೊಠಡಿ ಮೇಲ್ವಿಚಾರಕ ಸಿಬ್ಬಂದಿ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಮೊಬೈಲ್ ಸೇರಿ ವಿದ್ಯನ್ಮಾನ ಉಪಕರ ಕಡ್ಡಾಯ ನಿಷೇಧಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿ ಗುರುತಿನ ಚೀಟಿ ಕಡ್ಡಾಯವಾಗಿ ಧರಿಸಬೇಕು. ವಿದ್ಯಾರ್ಥಿಗಳಿಗೆ ‘ಪ್ರವೇಶ ಪತ್ರ’ ತೋರಿಸಿ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಮಾಡಿದ್ದು, ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸುವಂತೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇದಲ್ಲದೇ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗದಲ್ಲಿ ಪೊಲೀಸರ ನಿಯೋಜನೆ, ಪರೀಕ್ಷಾ ಕೇಂದ್ರದಲ್ಲಿ ಶ್ರುಶೂಷಕರು ಹಾಗೂ ಪೊಲೀಸರ ನಿಯೋಜನೆ, ಬ್ಯಾಗ್ ಇಟ್ಟುಕೊಳ್ಳಲು ಪ್ರತ್ಯೇಕ ಕೊಠಡಿ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸುವುದು, ಮತ್ತಿತರ ಅಗತ್ಯ…

Read More