Author: kannadanewsnow07

ಬೆಂಗಳೂರು: ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದೆಹಲಿ ಪೊಲೀಸ್‍ನಲ್ಲಿ ಕಾನ್ಸ್‍ಟೇಬಲ್ ಕಾರ್ಯನಿರ್ವಾಹಕ ಪುರುಷ ಮತ್ತು ಮಹಿಳಾ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು 2025 ರ ಡಿಸೆಂಬರ್ ಮತ್ತು 2026 ರ ಜನವರಿಯಲ್ಲಿ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸುವವರು ಅಂಗೀಕೃತ ಮಂಡಳಿಯಿಂದ ಹಿರಿಯ ಸೆಕೆಂಡರಿ ಪಿಯುಸಿಯಲ್ಲಿ ಉತ್ತೀರ್ಣವಾಗಿರಬೇಕು. ದೆಹಲಿ ಪೊಲೀಸ್ ಸೇವೆಯಲ್ಲಿ ನಿವೃತ್ತ ಅಥವಾ ಮೃತರಾಗಿರುವ ದೆಹಲಿ ಪೊಲೀಸ್ ಸಿಬ್ಬಂದಿ/ ಮಲ್ಟಿ ಟಾಸ್ಕಿಂಗ್ ಸಿಬ್ಬಂದಿ ಮತ್ತು ಬ್ಯಾಂಡ್ಸ್‍ಮೆನ್, ಬಗ್ಲರ್‍ಗಳು, ಮೌಂಟೆಡ್ ಕಾನ್ಸ್‍ಟೇಬಲ್‍ಗಳು ಚಾಲಕರು, ಡಿಸ್ಪ್ಯಾಚ್ ರೈಡರ್‍ಗಳು ಮತ್ತಿತರ ಪುತ್ರರು / ಪುತ್ರಿಯರಿಗೆ ಮಾತ್ರ 11 ನೇ ತರಗತಿ ಉತ್ತೀರ್ಣರಾದವರಿಗೆ ಸಡಿಲಿಕೆ ನೀಡಲಾಗಿದೆ. ಪುರುಷ ಅಭ್ಯರ್ಥಿಗಳು ಎಲ್‍ಎಂವಿ ಬೈಕ್ ಮತ್ತು ಕಾರು ವಾಹನ ಚಾಲನಾ ಪರವಾನಗಿ ಹೊಂದಿರಬೇಕು. ಕಂಪ್ಯೂಟರ್‍ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ದೆಹಲಿ ಪೊಲೀಸರು ದೈಹಿಕ ಮತ್ತು ಮಾಪನ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಒಟ್ಟು ಹುದ್ದೆಗಳು 7565, ಪುರುಷ-5069 ಮತ್ತು…

Read More

ಬೆಂಗಳೂರು: ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ದೆಹಲಿ ಪೊಲೀಸ್‍ನಲ್ಲಿ ಹೆಡ್ ಕಾನ್ಸ್‍ಟೇಬಲ್ (ಅಸಿಸ್ಟೆಂಟ್ ವೈರ್‍ಲೆಸ್ ಆಫೀಸರ್) ಮತ್ತು ಟೆಲಿ ಪ್ರಿಂಟರ್ ಆಪರೇಟರ್ ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯು 2025 ರ ಡಿಸೆಂಬರ್ ಮತ್ತು 2026 ರ ಜನವರಿಯಲ್ಲಿ 100 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸುವವರು ಅಂಗೀಕೃತ ಮಂಡಳಿಯಿಂದ ಹಿರಿಯ ಸೆಕೆಂಡರಿ / ಪಿಯುಸಿಯಲ್ಲಿ ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಉತ್ತೀರ್ಣವಾಗಿರಬೇಕು. ಅಥವಾ ಮೆಕ್ಯಾನಿಕಲ್ ಕಮ್ ಆಪರೇಟರ್, ಎಲೆಕ್ಟ್ರಾನಿಕ್ ಕಮ್ಯುನಿಕೇಶನ್‍ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಹೊಂದಿರಬೇಕು. ಕಂಪ್ಯೂಟರ್‍ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಇಂಗ್ಲೀಷ್ ಬೆರಳಚ್ಚುವಿನಲ್ಲಿ 15 ನಿಮಿಷಗಳಲ್ಲಿ 1000 ಪದಗಳನ್ನು ಟೈಪ್ ಮಾಡಬೇಕು. ದೆಹಲಿ ಪೊಲೀಸರು ದೈಹಿಕ ಮತ್ತು ಮಾಪನ ಪರೀಕ್ಷೆ ಹಾಗೂ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಿದ್ದಾರೆ. ಒಟ್ಟು ಹುದ್ದೆಗಳು 552, ಪುರುಷ-370 ಮತ್ತು ಮಹಿಳೆಯರು-182 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅರ್ಜಿ ಶುಲ್ಕ 100 ರೂ ನಿಗಧಿಪಡಿಸಿದ್ದು, ಮಹಿಳಾ ಅಭ್ಯರ್ಥಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…

Read More

ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಪುರಾಣಗಳಲ್ಲಿ ಉಲ್ಲೇಖಿಸಲಾದ ಕೆಲವು ವಿಷಯಗಳು ತುಂಬಾ ಆಸಕ್ತಿದಾಯಕವಾಗಿವೆ. ಆದಾಗ್ಯೂ, ಆಧ್ಯಾತ್ಮಿಕವಾದಿಗಳು, ವಾಸ್ತುಶಿಲ್ಪ ತಜ್ಞರು ಮತ್ತು ಜ್ಯೋತಿಷಿಗಳು ಇಂದಿಗೂ ಕೆಲವರು ಆ ವಿಷಯಗಳನ್ನು ಅನುಸರಿಸುತ್ತಾರೆ ಎಂದು ಹೇಳುತ್ತಾರೆ. ಮಾನವ ಜೀವನಕ್ಕೆ ಸಂಬಂಧಿಸಿದ ಈ ವಿಷಯಗಳನ್ನು ಹಲವು ವಿಧಗಳಲ್ಲಿ ಅರ್ಥೈಸಲಾಗುತ್ತದೆ. ಅವು ಉಪಯುಕ್ತವೆಂದು ಹೇಳುತ್ತಾರೆ.. ಮತ್ತು ನೀವು ಇತರ ಕೆಲವು ವಿಷಯಗಳ ಬಗ್ಗೆ ತಿಳಿದಿದ್ದರೆ, ನೀವು ಜಾಗರೂಕರಾಗಿರಬಹುದು. ಆದರೆ ಅವುಗಳ ಬಗ್ಗೆ ಒಂದು ವಿಷಯವನ್ನು ಮುಖ್ಯವಾಗಿ ಹೇಳಬಹುದು. ಅಂದರೆ, ಮುಂದಿನ ಬೆರಳು ಹೆಬ್ಬೆರಳಿಗಿಂತ ದೊಡ್ಡದಾಗಿದ್ದರೆ ಏನಾಗುತ್ತದೆ ಎಂದು ಕೆಲವರಿಗೆ ತಿಳಿದಿದೆ. ಏಕೆಂದರೆ ಕೆಲವು ಚಲನಚಿತ್ರಗಳಲ್ಲಿ ತೋರಿಸಿರುವಂತೆ, ಹೆಬ್ಬೆರಳಿಗಿಂತ ದೊಡ್ಡದಾದ ಉಂಗುರದ ಬೆರಳನ್ನು ಹೊಂದಿರುವ ಜನರು ತಮ್ಮ ಹೆಂಡತಿಯರು ಅಥವಾ ಗಂಡಂದಿರ ಮೇಲೆ ಹೆಚ್ಚು ಪ್ರಾಬಲ್ಯ ಹೊಂದಿರುತ್ತಾರೆ. ಆದರೆ ಈ ರೀತಿಯ ಉಂಗುರದ ಬೆರಳನ್ನು ಹೊಂದಿರುವುದರ ಬಗ್ಗೆ ಮತ್ತೊಂದು ಆಸಕ್ತಿದಾಯಕ ವಿಷಯವಿದೆ. ಅದು ಏನು? ನಾವು ಕೆಲವು ದೇವರುಗಳ ಫೋಟೋಗಳನ್ನು ನೋಡಿದರೆ, ತಮ್ಮ ಹೆಬ್ಬೆರಳುಗಳಿಗಿಂತ ದೊಡ್ಡ ಬೆರಳುಗಳನ್ನು ಹೊಂದಿರುವ ದೇವರುಗಳು ಅಥವಾ ದೇವತೆಗಳನ್ನು ನಾವು…

Read More

* ಅವಿನಾಶ್‌ ಆರ್‌ ಭೀಮಸಂದ್ರ ಬೆಂಗಳೂರು: ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ರಾಜ್ಯ ಸರ್ಕಾರ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡು ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಒಂದು ದಿನದ ಮುಟ್ಟಿನ ರಜೆಯನ್ನು ನೀಡುವುದುಕ್ಕೆ ಮುಂದಾಗಿದೆ.  ಅಂದ ಹಾಗೇ ರಾಜ್ಯದ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್​, ಬಹುರಾಷ್ಟ್ರೀಯ ಕಂಪನಿಗಳು (MNC), ಐಟಿ, ಖಾಸಗಿ ಕೈಗಾರಿಕಾ ವಲಯಗಳಲ್ಲಿ ಮುಟ್ಟಿನ ರಜೆ ಅನ್ವಯವಾಗಲಿದೆ ಅಂತ ತಿಳಿದು ಬಂದಿದೆ. ಸರ್ಕಾರಿ ಕಚೇರಿಗಳು, ವಿವಿಧ ಖಾಸಗಿ ವಲಯದ ಕೈಗಾರಿಕೆಗಳು, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿರುವ ಇತರ ಕಂಪನಿಗಳು ಸೇರಿದಂತೆ ರಾಜ್ಯದ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಎಲ್ಲಾ ಮಹಿಳೆಯರಿಗೆ ಒಂದು ದಿನದ ವೇತನ ಸಹಿತ ರಜೆ ಮಂಜೂರು ಮಾಡಲು 2025 ರ ಮುಟ್ಟಿನ ರಜೆ ನೀತಿಗೆ ಕಾರ್ಮಿಕ ಇಲಾಖೆ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಈಗಾಲೇ ಕೇರಳವು ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ಮಹಿಳಾ ಪ್ರಶಿಕ್ಷಣಾರ್ಥಿಗಳಿಗೆ ಎರಡು ದಿನಗಳ ಮುಟ್ಟಿನ ರಜೆಯನ್ನು ಪರಿಚಯಿಸಿದೆ. ಬಿಹಾರ ಮತ್ತು ಒಡಿಶಾದಲ್ಲಿ, 12…

Read More

* ಅವಿನಾಶ್‌ ಆರ್‌ ಭೀಮಸಂದ್ರ ನವದೆಹಲಿ: ಪ್ರತಿ ವರ್ಷ ಅಕ್ಟೋಬರ್ 9 ರಂದು ಆಚರಿಸಲಾಗುವ ವಿಶ್ವ ಅಂಚೆ ದಿನವು ಸಮಾಜದಲ್ಲಿ ಅಂಚೆ ಸೇವೆಗಳ ಅತ್ಯಗತ್ಯ ಪಾತ್ರವನ್ನು ಒತ್ತಿಹೇಳುತ್ತದೆ. 2025 ರ ಧ್ಯೇಯವಾಕ್ಯ “ಜನರಿಗೆ ಪೋಸ್ಟ್: ಸ್ಥಳೀಯ ಸೇವೆ. ಜಾಗತಿಕ ವ್ಯಾಪ್ತಿ”, ಅಂಚೆ ಸೇವೆಗಳು ಪತ್ರಗಳು ಮತ್ತು ಪಾರ್ಸೆಲ್‌ಗಳ ವಿತರಣೆಗಿಂತ ಹೆಚ್ಚಿನದನ್ನು ಒದಗಿಸುತ್ತವೆ ಎಂಬುದನ್ನು ಗಮನಿಸಬೇಕಾಗಿದೆ. ಅಂಚೆ ಇಲಾಖೆ ಜನಗೆಯ ಜೀವನ ಸುಧಾರಣೆಗೆ ಕೊಡುಗೆ ನೀಡುತ್ತಾದೆ ಮತ್ತು ಪರಿಸರ ಉಪಕ್ರಮಗಳನ್ನು ಬೆಂಬಲಿಸುತ್ತದೆ. ಈ ಉದ್ದೇಶಗಳನ್ನು ಮುನ್ನಡೆಸಲು ಇಂಡಿಯಾ ಪೋಸ್ಟ್ ತಂತ್ರಜ್ಞಾನ ಮತ್ತು ಸುಸ್ಥಿರತೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದೆ ಎನ್ನುವುದನ್ನು ಮನಗಾಣಬಹುದಾಗಿದೆ. ಭಾರತದ ಅಂಚೆ ಸೇವೆಯು 16 ನೇ ಶತಮಾನದಲ್ಲಿ ಶೇರ್ ಶಾ ಸೂರಿಯಂತಹ ಆಡಳಿತಗಾರರಿಂದ ಔಪಚಾರಿಕಗೊಳಿಸಲ್ಪಟ್ಟ ಪ್ರಾಚೀನ ಕುದುರೆ ಮತ್ತು ಕಾಲು ಆಧಾರಿತ ಸಂದೇಶವಾಹಕ ವ್ಯವಸ್ಥೆಗಳಿಂದ 18 ನೇ ಶತಮಾನದಲ್ಲಿ ರಾಬರ್ಟ್ ಕ್ಲೈವ್ ಮತ್ತು ವಾರೆನ್ ಹೇಸ್ಟಿಂಗ್ಸ್ ನೇತೃತ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಸ್ಥಾಪಿಸಿದ ಆಧುನಿಕ ವ್ಯವಸ್ಥೆಗೆ ವಿಕಸನಗೊಂಡಿತು. 1854 ರ ಅಂಚೆ…

Read More

ಅವಿನಾಶ್‌ ಆರ್‌ ಭೀಮಸಂದ್ರ ಜೊತೆಗೆ ವಸಂತ್‌ ಬಿ ಈಶ್ವರಗೆರೆ ಬೆಂಗಳೂರು: ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಆದೇಶವಾಗಿರುವ ಹಿನ್ನೆಲೆಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಮತ್ತು ಇತರೆ ಸಮುದಾಯಗಳಿಗೆ ಜಾತಿ ಪುಮಾಣ ಪತ್ರಗಳನ್ನು ನೀಡುವ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಈ ಕೆಳಕಂಡತೆ ಉಲ್ಲೇಖ ಮಾಡಲಾಗಿದೆ. ಉಲ್ಲೇಖ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿನ 101 ಜಾತಿಗಳನ್ನು ಒಳ ಮೀಸಲಾತಿಗಾಗಿ ಸಂವಿಧಾನದ ಅನುಚ್ಛೇಧ 15 ಮತ್ತು ಅನುಚ್ಛೇಧ 16 ರನ್ವಯ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಪವರ್ಗ- ಎ ರಲ್ಲಿ 16 ಜಾತಿಗಳು ಪವರ್ಗ-ಬಿ ರಲ್ಲಿ 19 ಜಾತಿಗಳು ಮತ್ತು ಪ್ರವರ್ಗ-ಸಿ ರಲ್ಲಿ 63 ಜಾತಿಗಳನ್ನು ಸೇರಿಸಿ, ಮೂರು ಪವರ್ಗಗಳಾಗಿ ವರ್ಗೀಕರಿಸಿ, ಆದೇಶ ಹೊರಡಿಸಲಾಗಿದೆ. ಮುಂದುವರೆದು, ಆದಿ, ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಸಮುದಾಯಗಳನ್ನು ಪವರ್ಗ- ಎ ಮತ್ತು ಪವರ್ಗ ಬಿ ನಲ್ಲಿ ಮೀಸಲಾತಿ ಸೌಲಭ್ಯವನ್ನು ಪಡೆಯಬಹುದೆಂದು…

Read More

ಬೆಂಗಳೂರು: https://cetonline.karnataka.gov.in/kea/ ಇಡಿ/ಕೆಇಎ/ಆಡಳಿತ/ಸಿ.ಆರ್.04/2025 (ಆರ್‌ಪಿಸಿ) ಸಂಖ್ಯೆ: ಇಡಿ/ಕೆಇಎ/ಆಡಳಿತ/ಸಿ.ಆರ್.05/2025 (ಕಲ್ಯಾಣ ಕರ್ನಾಟಕ) ಅಧಿಸೂಚನೆ ಪ್ರಕಾರ ಈ ಕೆಳಕಂಡ ಸರ್ಕಾರಿ ಇಲಾಖೆ / ನಿಗಮ / ಸಂಸ್ಥೆಗಳಲ್ಲಿ ಉಳಿಕೆ ಮೂಲ ವೃಂದದಲ್ಲಿರುವ ಹಾಗೂ ಕಲ್ಯಾಣ ಕರ್ನಾಟಕ ವೃಂದದಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳ ನೇಮಕಾತಿಗೆ ಅರ್ಹತೆ ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಬೇಕು. ಆನ್‌ಲೈನ್ ಅರ್ಜಿ ಸಲ್ಲಿಸಲು ದಿನಾಂಕ 09-10-2025 ರಿಂದ 01-11-2025 ರ ವರೆಗೆ ಅವಕಾಶ ನೀಡಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಸೂಚನೆಗಳು, ಅಗತ್ಯ ಅರ್ಹತೆ ವಿವರ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನ, ಶುಲ್ಕ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯಗಳು, ಪ್ರವರ್ಗವಾರು ಮತ್ತು ಹುದ್ದೆವಾರು ಹುದ್ದೆಯ ವಿವರಗಳು ಮತ್ತು ನೇಮಕಾತಿ ಪ್ರಕ್ರಿಯೆಯ ವಿವರವಾದ ಸೂಚನೆಗಳಿಗಾಗಿ ಪ್ರಾಧಿಕಾರದ…

Read More

ಬೆಂಗಳೂರು: ಸಹಕಾರ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಯಶಸ್ವಿನಿ ಯೋಜನೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ABARK ಯೋಜನೆಲ್ಲಿ ಅನೇಕ ಕುಟುಂಬಗಳು ಎರಡು ಯೋಜನೆಗಳಲ್ಲಿಯೂ ಫಲಾನುಭವಿಗಳಿದ್ದಾರೆ ಎಂದು ತಿಳಿಸಲಾಗಿದೆ. ಎರಡೂ ಯೋಜನೆಗಳು ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರೂ.ಗಳವರೆಗೆ ಆರೋಗ್ಯ ರಕ್ಷಣೆಯನ್ನು (Health Coverage) ಒದಗಿಸುತ್ತವೆ ಎಂದು ತಿಳಿಸಲಾಗಿದೆ. ಯಶಸ್ವಿನಿ ಫಲಾನುಭವಿಗಳ ಆಧಾರ್ ಸೀಡೆಡ್ ಡೇಟಾವನ್ನು ಸಹಕಾರ ಇಲಾಖೆಯಿಂದ ಸಂಗ್ರಹಿಸಲಾಗಿದೆ ಮತ್ತು ಅದನ್ನು ABArK ಫಲಾನುಭವಿಗಳ ಡೇಟಾಬೇಸ್‌ನೊಂದಿಗೆ ತಾಳೆ ಮಾಡಲಾಗಿದೆ (de-duplicate) ಎಂದು ವರದಿಸಲಾಗಿದೆ. 2024-25ನೇ ಆರ್ಥಿಕ ವರ್ಷದಲ್ಲಿ ಯಶಸ್ವಿನಿ ಯೋಜನೆಯ 3,07,192 ಫಲಾನುಭವಿಗಳು ABArK ಯೋಜನೆಯಲ್ಲಿ ರೂ. 130,22,65,020/-ಮೊತ್ತದ ಚಿಕಿತ್ಸೆಯನ್ನು ಪಡೆದಿರುತ್ತಾರೆಂದು ವರದಿಸಲಾಗಿದೆ. ಆದರೆ, ABARK ಯೋಜನೆಯ ಮಾರ್ಗಸೂಚಿಯಲ್ಲಿ ಫಲಾನುಭವಿಗಳು ಬೇರೆ ಯಾವುದೇ ಸರ್ಕಾರಿ ನೆರವಿನ ಯೋಜನೆಯಲ್ಲಿ ನೋಂದಾಯಿಸಬಾರದು ಎಂದು ನಿರ್ದಿಷ್ಟಪಡಿಸಲಾಗಿರುತ್ತದೆ. ಆದುದರಿಂದ, ಯಶಸ್ವಿನಿ ಯೋಜನೆಯು ಸರ್ಕಾರಿ ನೆರವಿನ ಯೋಜನೆಯಾಗಿರುವುದರಿಂದ, ಯಶಸ್ವಿನಿ ಯೋಜನೆಯಲ್ಲಿ ನೋಂದಾಯಿಸಲ್ಪಟ್ಟ ಫಲಾನುಭವಿಗಳು AbArK ಯೋಜನೆಯಡಿಯಲ್ಲಿ ಫಲಾನುಭವಿಗಳಾಗಲು ಅರ್ಹರಾಗಿರುವುದಿಲ್ಲ. ಈ ಎರಡು…

Read More

ನವದೆಹಲಿ: 2025 ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸುಸುಮು ಕಿಟಗಾವಾ, ರಿಚರ್ಡ್ ರಾಬ್ಸನ್ ಮತ್ತು ಒಮರ್ ಎಂ. ಯಾಗಿ ಅವರಿಗೆ “ಲೋಹ-ಸಾವಯವ ಚೌಕಟ್ಟುಗಳ ಅಭಿವೃದ್ಧಿಗಾಗಿ” ನೀಡಲಾಗಿದೆ. ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನೀಡುತ್ತದೆ. ಸ್ವೀಡಿಷ್ ರಸಾಯನಶಾಸ್ತ್ರಜ್ಞ ಮತ್ತು ಉದ್ಯಮಿ ಆಲ್ಫ್ರೆಡ್ ನೊಬೆಲ್ ನೊಬೆಲ್ ಪ್ರಶಸ್ತಿಯನ್ನು ರಚಿಸಿದರು ಮತ್ತು ಅವರ ಆಸ್ತಿಯ ಬಹುಭಾಗವನ್ನು “ಹಿಂದಿನ ವರ್ಷದಲ್ಲಿ ಮಾನವಕುಲಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿದವರಿಗೆ ಬಹುಮಾನಗಳನ್ನು” ನೀಡಲು ಬಳಸಬೇಕೆಂದು ತಮ್ಮ ಉಯಿಲಿನಲ್ಲಿ ಸೂಚಿಸಿದರು. https://twitter.com/NobelPrize/status/1975860703857680729

Read More

ಬೆಂಗಳೂರು; ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ದಸರಾ ರಜೆ ಅವಧಿ ವಿಸ್ತರಿಸಿ ಆದೇಶವನ್ನು ಹೊರಡಿಸಿದೆ. ಆದೇಶದಲ್ಲಿ ಈ ಕೆಳಕಂಡತೆ ಉಲ್ಲೇಖ ಮಾಡಲಾಗಿದೆ. ಸುತ್ತೋಲೆ ದಿನಾಂಕ:08.10.2025 ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ, ಸಮೀಕ್ಷೆಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವಸತಿ ಶಾಲೆಗಳ ದಸರಾ ರಜೆ ಅವಧಿಯನ್ನು ವಿಸ್ತರಿಸುವ ಕುರಿತು. ಉಲ್ಲೇಖ: ಆಯಕ್ತರು, ಶಾಲಾ ಶಿಕ್ಷಣ ಇಲಾಖೆ, ನೃಪತುಂಗ ರಸ್ತೆ, ಬೆಂಗಳೂರು-01 ರವರ ಜ್ಞಾಪನ ಸಂಖ್ಯೆ: ಸಿ4(9).ವಾಕ್ರಿಯೋ/ಅನುಷ್ಠಾನ/01/2024-25, DO: 07.10.2025 ಉಲ್ಲೇಖದಂತೆ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಶಾಲಾ ಶಿಕ್ಷಣ ಇಲಾಖೆಯ ಜ್ಞಾಪನ ಪತ್ರದಲ್ಲಿ ಈ ಕೆಳಕಂಡಂತೆ ಸೂಚಿಸಲಾಗಿದೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರೀಕರ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಪಠ್ಯ ಕ್ರಮ ಅನುಸರಿಸುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ…

Read More