Author: kannadanewsnow07

ಬೆಳಗಾವಿ: ಆರೋಗ್ಯ ಸೇವೆಯಿಂದ ವಂಚಿತರಾಗಿರುವ ಜನರಿಗೆ ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕ ಯೋಜನೆ ನೆರವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾಡಳಿತ ಬೆಳಗಾವಿ ಜಿಲ್ಲಾ ಪಂಚಾಯತ್ ಇವರ ವತಿಯಿಂದ ಸುವರ್ಣ ಸೌಧದ ಭವ್ಯ ಮೆಟ್ಟಟಿಲುಗಳ ಮೇಲೆ ಆಯೋಜಿಸಲಾಗಿದ್ದ ‘ಆರೋಗ್ಯ ಸೇತು ಸಂಚಾರಿ ಆರೋಗ್ಯ ಘಟಕ’ಗಳಿಗೆ ಚಾಲನೆ ನೀಡಿ ಮಾತನಾಡಿದರು. ಸಂಪರ್ಕ ರಹಿತ, ದುರ್ಗಮ ಮತ್ತು ಗುಡ್ಡಗಾಡು ಪ್ರದೇಶಗಳ ಜನರ ಮನೆಯ ಬಾಗಿಲಲ್ಲೆ ಆರೋಗ್ಯ ಸೇವೆ ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಹಿಂದೆ ಆ್ಯಂಬುಲೆನ್ಸ್ ಗಳ ಸೇವೆಗೆ 2.90 ಲಕ್ಷ ರೂ.ಗಳ ವೆಚ್ಚವಾಗುತ್ತಿತ್ತು. ಪ್ರಸ್ತುತ ಆರೋಗ್ಯ ಸೇತುವಿನ ಪ್ರತಿ ಘಟಕಕ್ಕೆ 1.60 ಲಕ್ಷ ರೂ. ವೆಚ್ಚವಾಗಲಿದ್ದು, ಪ್ರತಿ ಘಟಕದಲ್ಲಿ ವೈದ್ಯರು, ಶುಶ್ರೂಷಿಕಿಯರು, ತಂತ್ರಜ್ಞರ ಸೇವೆ ಇರಲಿದ್ದು, ರೋಗಿಗಳ ತಪಾಸಣೆ ಮತ್ತು ಚಿಕಿತ್ಸೆಗೆ ನೆರವಾಗಲಿದೆ ಎಂದರು. ಪ್ರತಿಯೊಬ್ಬರಿಗೂ ಗುಣಮಟ್ಟದ ಆರೋಗ್ಯ ಸೇವೆ ಸರ್ಕಾರದ ಗುರಿ ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಗುಣಮಟ್ಟದ ಆರೋಗ್ಯ…

Read More

ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ತಲೆ ಮರೆಸಿಕೊಂಡಿದ್ದು, ಸದ್ಯ ಸಿಐಡಿ ಅಧಿಕಾರಿಗಳು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದು, ವಿದೇಶಕ್ಕೆ ಪರಾರಿಯಾಗುವ ಶಂಕೆ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎನ್ನಲಾಗಿದೆ. ಬಿಕ್ಲು ಶಿವನ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದು, ಹೈಕೋರ್ಟ್ ಮತ್ತು ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಲು ಮುಂದಾಗದ ಹಿನ್ನಲೆಯಲ್ಲಿ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.ಜು.15 ರಂದು ನಡೆಯುವ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿ ಶಾಸಕ ಬೈರತಿ ಬಸವರಾಜ್ ಗುರುತಿಸಿಕೊಂಡಿದ್ದಾರೆ. ಇದಲ್ಲದೇ ಪ್ರಕರಣ ಸಂಬಂಧಪಟ್ಟಂತೆ ಈಗಾಗಲೇ 16 ಜನರ ಬಂಧನವಾಗಿದೆ. ಯಾವುದೇ ಕ್ಷಣದಲ್ಲಿ ಶಾಸಕರನ್ನು ಬಂಧಿಸುವ ಸಾಧ್ಯತೆ ಇದೆ. ಜು.15ರಂದು ಹಲಸೂರಿನಲ್ಲಿ ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿ ಕಿತ್ತಗನೂರಿನ ಸರ್ವೇ ನಂ.212ರ ಭೂಮಿಗೆ ಸಂಬಂಧಿಸಿದಂತೆ ರೌಡಿ ಬಿಕ್ಲು ಶಿವನನ್ನು ಕೊಲೆ ಮಾಡಲಾಗಿತ್ತು.

Read More

ಬೆಳಗಾವಿ : ಕುಂದಾಪುರ ತಾಲೂಕಿನ ಇಎಸ್‌ಐ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್‌ ಲಾಡ್‌ ಅವರು ಭರವಸೆ ನೀಡಿದರು. ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್‌ ಕುಮಾರ್‌ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಕುಂದಾಪುರ ತಾಲೂಕಿನ ಇಎಸಐ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಹುದ್ದೆಯನ್ನು ಮಂಜೂರು ಮಾಡಲಾಗಿತ್ತು ಆದರೆ 2015  ರಿಂದ ಒಬ್ಬರೇ ಒಬ್ಬರು ಖಾಯಂ ವೈದ್ಯರು ಇಲ್ಲ. ಬೇರೆ ಕಡೆಯಿಂದ ನಿಯೋಜನೆ ಮೇರೆಗೆ ವೈದ್ಯರು ಕರ್ತವ್ಯ ನಿರ್ವಹಿಸುತ್ತಾರೆ. ಇದರಿಂದ ಕಾರ್ಮಿಕರಿಗೆ ಸರಿಯಾದ ಚಿಕಿತ್ಸೆ ಸಿಗದೆ ತೊಂದರೆಯಾಗಿದೆ ಎಂದು ಕಿರಣ್‌ ಕುಮಾರ್‌ ಅವರು ಹೇಳಿದರು. ಕುಂದಾಪುರದ ಇಎಸ್‌ಐ ಆಸ್ಪತ್ರೆಯಲ್ಲಿ ನಿಯೋಜನೆ ಮೇಲೆ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಖಾಯಂ ವೈದ್ಯರು ಬೇಕು ಎಂಬ ಬೇಡಿಕೆ ಬಗ್ಗೆ ಪರಿಶೀಲನೆ ಮಾಡಲಾಗುವುದು. ಮೂರು ವಾರದಲ್ಲಿ ತಾತ್ಕಾಲಿಕ ವೈದ್ಯರ ನೇಮಕ ಮಾಡಲಾಗುವುದು ಎಂದು ಹೇಳಿದರು. ಆಸ್ಪತ್ರೆ ಹೆಸರು ಬಿಟ್ಟಿದ್ದರೆ ಕ್ರಮ: ಇಎಸ್‌ಐ ಫಲಾನುಭವಿಗಳಿಗೆ ಚಿಕಿತ್ಸೆ…

Read More

ಚಿಕ್ಕಮಗಳೂರು: ಹಾರ್ಟ್ ಅಟ್ಯಾಕ್​​ಗೆ 22ರ ಯುವತಿ ಬಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಹಾಸ್ಟೆಲ್ ನಲ್ಲಿದ್ದುಕೊಂಡು ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹಠಾತ್ ಕುಸಿದು ಬಿದ್ದು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದಿದೆ. ಚಿಕ್ಕಮಗಳೂರಿನ ಕಾಲೇಜು ಹಾಸ್ಟೆಲ್​ನಲ್ಲಿ ಓದುತ್ತಿದ್ದ 22 ವರ್ಷದ ವಿದ್ಯಾರ್ಥಿನಿ ದಿಶಾ ಹಾರ್ಟ್ ಅಟ್ಯಾಕ್​ಗೆ ಬಲಿಯಾಗಿರುವ ಯುವತಿಯಾಗಿದ್ದಾರೆ. ಅಂದ ಹಾಗೇ ಅವರು ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ದಿಶಾ ಅಂತಿಮ ವರ್ಷದ ಬಿಕಾಂ ನಲ್ಲಿ ವ್ಯಾಸಂಗ ಮಾಡುತ್ತಿದ್ದರು, ಪದವಿ ಮುಗಿಸಿ ಕೆಲಸಕ್ಕೆ ಸೇರುವ ಕನಸು ಕಂಡಿದ ದಿಶಾ ಹೀಗೆ ಸಾವನ್ನಪ್ಪಿರುವುದು ವಿಪರ್ಯಾಸವೆ ಸರಿ.ವಿದ್ಯಾರ್ಥಿನಿ ದಿಶಾ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾಗಿದ್ದು ಉನ್ನತ ವ್ಯಾಸಂಗಕ್ಕಾಗಿ ಅವರು ಶೃಂಗೇರಿ ಪಟ್ಟಣದ ಜೆಸಿಬಿಎಂ ಕಾಲೇಜಿನಲ್ಲಿ ಅಭ್ಯಸ ನಡೆಸುತ್ತಿದ್ದರು ಎನ್ನಲಾಗಿದೆ. ಹೃದಯಾಘಾತವೆಂದು ಶಂಕೆ ವ್ಯಕ್ತವಾಗಿದ್ದು ಫುಡ್ ಪಾಯ್ಸನ್ ಅಥಾವ ಇನ್ಯಾವುದು ಕಾರಣ ಎನ್ನುವುದರ ಬಗ್ಗೆ ಶೃಂಗೇರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Read More

ಬೆಂಗಳೂರು: ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮತ್ತೆ ದ್ವಿಚಕ್ರವಾಹನಗಳ ಕಾಟ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಪೇಸ್‌ಬುಕ್‌ನಲ್ಲಿ ರಾಜೇಂದ್ರ ಪ್ರಸಾದ್ ಎನ್ನುವವರು ತೀವ್ರ ಆಕ್ರೋಶವನ್ನು ಹೊರ ಹಾಕಿದ್ದು, ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವಂತೆ ತಿಳಿಸಿದ್ದಾರೆ. ಹಾಗಾದ್ರೇ ರಾಜೇಂದ್ರ ಪ್ರಸಾದ್‌ ಹೇಳಿರುವುದು ಏನು? ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಬೈಕುಗಳಿಗೆ ಪ್ರವೇಶವಿಲ್ಲ. ಹೆಚ್ಚು ವೇಗದಲ್ಲಿ ನಾಲ್ಕು ಚಕ್ರದ ವಾಹನಗಳು ಚಲಿಸುವುದರಿಂದ ಅಡ್ಡಾದಿಡ್ಡಿ ಬೈಕುಗಳು ಬಂದರೆ ಚಾಲಕರು ವಿಚಲಿತರಾಗಿ ಅಪಘಾತಗಳಾಗುವುದು ನಿಶ್ಚಿತ. ಈ ಹಿಂದೆಯೇ ಬಹಳ ಕಠಿಣವಾಗಿ ಬೈಕುಗಳ ಪ್ರವೇಶ ನಿಷೇಧ ಮಾಡಿ, ಹೆದ್ದಾರಿಯ ಪ್ರವೇಶಗಳಲ್ಲಿ ಕಾವಲು ಇರಿಸಲಾಗಿತ್ತು. ಆದ್ರೆ ಕೆಲವರು ಹುಚ್ಚು ಸಾಹಸ ಮಾಡುವ ಧಾವಂತದಲ್ಲಿ ಹೆದ್ದಾರಿಯ ಮಧ್ಯೆ ನುಗ್ಗುವುದು ನಿಂತಿಲ್ಲ. ಈ ಚಿತ್ರದಲ್ಲಿ ಕಾಣುತ್ತಿರುವ ಬೈಕು ಸವಾರ, ತನ್ನ ಬೈಕಿನ ನಂಬರ್ ಪ್ಲೇಟ್ ಕಾಣದಂತೆ ಮುಚ್ಚಿ ವಿಪರೀತ ವೇಗವಾಗಿ ಹೆದ್ದಾರಿಯಲ್ಲಿ ಚಲಿಸುತ್ತಿದ್ದಾನೆ. ಅನಧಿಕೃತ ಪ್ರವೇಶ, ನಿಯಮ ಮೀರಿದ ವೇಗ, ನಂಬರ್ ಪ್ಲೇಟ್ ಮುಚ್ಚಿಡುವುದು… ಹೀಗೆ ಸಾಲು ಸಾಲು ನಿಯಮಗಳ ಉಲ್ಲಂಘನೆ. ಚೂರು ಹೆಚ್ಚುಕಮ್ಮಿಯಾದರೆ ಇವನಿಂದಾಗಿ…

Read More

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಡಿಸೆಂಬರ್ 15, 2025 ರಿಂದ ಜಾರಿಗೆ ಬರುವಂತೆ ತನ್ನ ನಿಶ್ಚಿತ ಠೇವಣಿ ಬಡ್ಡಿ ದರಗಳನ್ನು ಪರಿಷ್ಕರಿಸಿದೆ, 2-3 ವರ್ಷಗಳ FD ಮತ್ತು ಅಮೃತ್ ವೃಷ್ಟಿ ಯೋಜನೆ ಸೇರಿದಂತೆ ಆಯ್ದ ಅವಧಿಗಳ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿದೆ. ಕಳೆದ ವರ್ಷದಲ್ಲಿ ಆರ್‌ಬಿಐ ರೆಪೊ ದರ ಕಡಿತದ ನಂತರ ಎಫ್‌ಡಿ ದರಗಳಲ್ಲಿ ವ್ಯಾಪಕ ಕುಸಿತದ ಮಧ್ಯೆ ಈ ಕ್ರಮ ಜಾರಿಗೆ ಬಂದಿದೆ.  ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪುನರಾವರ್ತಿತ ರೆಪೋ ದರ ಕಡಿತದ ಕಾರಣದಿಂದಾಗಿ ಬ್ಯಾಂಕುಗಳಾದ್ಯಂತ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳು ಕಳೆದ ವರ್ಷದಿಂದ ಕಡಿಮೆಯಾಗುತ್ತದೆ ಬಂದಿದೆ. ಈ ವಿಶಾಲವಾದ ಪ್ರವೃತ್ತಿಗೆ ಅನುಗುಣವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ನಿಶ್ಚಿತ ಠೇವಣಿ ಬಡ್ಡಿ ದರಗಳನ್ನು ಆಯ್ದ ಅವಧಿಗಳಿಗೆ ಪರಿಷ್ಕರಿಸಿದೆ, ಹೊಸ ದರಗಳು ಡಿಸೆಂಬರ್ 15, 2025 ರಿಂದ ಜಾರಿಗೆ ಬರಲಿವೆ. SBI ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ದೇಶದ ಅತಿದೊಡ್ಡ ಸಾರ್ವಜನಿಕ…

Read More

ಕನ್ನಡನಾಡುಡಿಜಿಟಲ್‌ಡೆಸ್ಕ್‌: ಚಲಿಕಾಲದಲ್ಲಿ ಬಹಳ ಮಂದಿ ಪ್ರೋಟೀನ್‌ಗಾಗಿ ಮೊಟ್ಟೆಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಆದ್ದರಿಂದ ಬಹಳ ಮಂದಿ ಏಕಕಾಲದಲ್ಲಿ ದೊಡ್ಡ ಒಟ್ಟುಗಳಲ್ಲಿ ಮೊಟ್ಟೆಗಳನ್ನು  ಶೇಖರಿಸುತ್ತಾರೆ. ಆದಾಗ್ಯೂ, ಎಕ್ಸ್‌ಪೈರಿ ಡೇಟ್ ಕೂಡ ಇರುತ್ತದೆ, ಅವುಗಳನ್ನು ಸರಿಯಾಗಿ ಶೇಖರಿಸದಿದ್ದರೆ ಅವು ಕೆಡುತ್ತದೆ ಮತ್ತು ಅಂತಹವುಗಳನ್ನು ಅವಧಿ ಮುಗಿದ ಮೊಟ್ಟೆಗಳು ತಿನ್ನುವುದರಿಂದ ತೀವ್ರವಾದ ಆಹಾರ ಪಾಯಿಜನ್ ಅನಾರೋಗ್ಯಕ್ಕೆ ಒಳಗಾಗುವ ಅವಕಾಶವಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಸರಿಯಾಗಿ ಸಂಗ್ರಹಿಸಿದಾಗ ಮೊಟ್ಟೆಗಳು ಈ ದಿನಾಂಕದ ನಂತರ ವಾರಗಳವರೆಗೆ ಇರುತ್ತವೆ ಆದರೆ ಅವು ಅತ್ಯುತ್ತಮವಾಗಿ ಇರುವುದಿಲ್ಲ. ಮೊಟ್ಟೆಗಳು ಏಕೆ ಕೆಡುತ್ತವೆ: ಸಾಲ್ಮೊನೆಲ್ಲಾ ಕಾಣಿಸಿಕೊಳ್ಳಲು ಮುಖ್ಯ ಕಾರಣ. ಇದು ಆಹಾರ ಪಾಯಿಜನಿಂಗ್‌ಗೆ ಕಾರಣವಾಗುವ ಅತ್ಯಂತ ಅಪಾಯಕಾರಿ ಘಟನೆಗಳಲ್ಲಿ ಒಂದು. ನಾವು ಮೊಟ್ಟೆಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿದರೆ, ಅದರ ಆಂತರಿಕ ರಚನೆ ಬದಲಾಗುತ್ತದೆ. ಒಳಗಿನ ಗಾಳಿ ಚೀಲವು ದಿನದಿಂದ ದಿನಕ್ಕೆ ದೊಡ್ಡದಾಗುತ್ತದೆ. ಇದರಿಂದ ಹಳದಿ ಭಾಗ ಗಟ್ಟಿಯಾಗುತ್ತದೆ ಮತ್ತು ಬಿಳಿ ಭಾಗ ನೀರಿನಂತಾಗುತ್ತದೆ. ಇವೆಲ್ಲವೂ ಮೊಟ್ಟೆ ತನ್ನ ತಾಜಾತನವನ್ನು ಕಳೆದುಕೊಳ್ಳುತ್ತಿದೆ ಎಂಬುದರ ಸಂಕೇತಗಳಾಗಿವೆ. ಮೊಟ್ಟೆಗಳನ್ನು ಎಷ್ಟು ದಿನ…

Read More

ನವದೆಹಲಿ: 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳ ಬಳಕೆಗೆ ಯಾವುದೇ ನಿರ್ಬಂಧಗಳಿಲ್ಲ. ಅನೇಕ ವ್ಯಾಪಾರಿಗಳು 50 ಪೈಸೆಯ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ ಆಧೂ, ಈ ಯಾವುದೇ ನಾಣ್ಯಗಳನ್ನು ನೋಟು ರದ್ದುಗೊಳಿಸಲಾಗಿಲ್ಲ ಎಂದು ಆರ್‌ಬಿಐ ದೃಢಪಡಿಸಿದೆ. ವಹಿವಾಟಿನ ಕಾರಣಗಳಿಗಾಗಿ ಇನ್ನೂ ಯಾವ ನಾಣ್ಯಗಳನ್ನು ಬಳಸಬಹುದು ಎಂಬುದರ ಕುರಿತು ತಪ್ಪು ಮಾಹಿತಿಯ ಕುರಿತು ಜಾಗೃತಿ ಮೂಡಿಸಲು ವೀಡಿಯೊಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ (RBI) ನಾಣ್ಯಗಳು, ವಿಶೇಷವಾಗಿ 50 ಪೈಸೆಗಳು ಮಾನ್ಯವಾಗಿಯೇ ಉಳಿದಿವೆಯೇ ಎಂಬ ಬಗ್ಗೆ ಗಾಳಿ ಸುದ್ದಿಯನ್ನು ತೆರವುಗೊಳಿಸಿದೆ. ಬಿಡುಗಡೆಯಾದ ನಾಣ್ಯಗಳು ಇನ್ನೂ ಚಲಾವಣೆಯಾಗುತ್ತಿವೆ ಎಂದು ಸಂದೇಶದಲ್ಲಿ ಉಲ್ಲೇಖಿಸಲಾಗಿದೆ. 50 ಪೈಸೆ, 1, 2, 5, 10 ಮತ್ತು 20 ರೂಪಾಯಿಗಳ ನಾಣ್ಯಗಳ ಬಳಕೆಗೆ ಯಾವುದೇ ನಿರ್ಬಂಧಗಳಿಲ್ಲ. ಅನೇಕ ವ್ಯಾಪಾರಿಗಳು 50 ಪೈಸೆಯ ನಾಣ್ಯವನ್ನು ಸ್ವೀಕರಿಸಲು ನಿರಾಕರಿಸಿದರೆ, ಈ ಯಾವುದೇ ನಾಣ್ಯಗಳನ್ನು ರದ್ದುಗೊಳಿಸಲಾಗಿಲ್ಲ ಎಂದು ಆರ್‌ಬಿಐ ದೃಢಪಡಿಸಿದೆ. ಆರ್‌ಬಿಐ ಸಾರ್ವಜನಿಕರಿಗೆ ಯಾವುದೇ ಹಿಂಜರಿಕೆಯಿಲ್ಲದೆ ನಾಣ್ಯಗಳನ್ನು ಬಳಸಲು ಸಲಹೆ…

Read More

ಬೆಂಗಳೂರು: ಅಪರಿಚಿತ ವ್ಯಕ್ತಿಗೆ ಟಿಕೆಟ್ ಮಾಡಿಸಿ ಬಸ್ ಹತ್ತಿಸಿದ ಯುವಕ ಸ್ಟೋರಿ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಇನ್‌ಸ್ಟಾಗ್ರಂನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಈಗ ಎಲ್ಲರ ಮೆಚ್ಚುಗೆ ಪಾತವಾಗಿದೆ. ನವೀದ್ ಸ್ಟೋರಿ(naveedstory) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವೃದ್ದನೊಬ್ಬ ಯುವಕನ ಬಳಿ ಸಹಾಯ ಕೇಳಿದ್ದಾನೆ. ಈ ವೇಳೆ ವೃದ್ದ ನನಗೆ ಹಣ ಬೇಡ ಟಿಕೇಟ್‌ ಮಾಡಿ ಊರಿಗೆ ಕಳುಹಿಸು ಅಂತ ಬೇಡಿಕೆ ಕೊಳ್ಳುವದುನ್ನು ಕಾಣಬಹುದಾಗಿದೆ. ಶಿರಸಿ ಕಡೆಗೆ ನನ್ನ ಹತ್ತಿ ಕಳುಹಿಸು ಅಂತ ವೃದ್ದ ಬೇಡಿಕೊಂಂಡಿದ್ದಾನೆ ಕೂಡಲೇ ಯುವಕ ಆ ವೃದ್ದನನ್ನು ತನ್ನ ಗಾಡಿಗೆ ಹತ್ತಿಸಿಕೊಂಡು ರೆದು ಕೊಂಡು ಹೋಗಿ ಹೊಟ್ಟೆ ತುಂಬಾ ತಿನ್ನಿಸಿ ಟಿಕೆಟ್ ಮಾಡಿಸಿ ಬಸ್ ಹತ್ತಿಸುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಕಾಣಬಹುದಾಗಿದೆ. ವಿಡಿಯೋ ಕೃಪೆ: ನವೀದ್ ಸ್ಟೋರಿ (naveedstory) ಇನ್‌ಸ್ಟಾಗ್ರಂ

Read More

ಬೆಂಗಳೂರು: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯು 2025-26ನೇ ಸಾಲಿನಲ್ಲಿ ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನ ಯೋಜನೆಯಡಿ ಶಿಷ್ಯವೇತನ ಪಡೆಯಲು ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯಗಳಲ್ಲಿ ಕರ್ನಾಟಕದಲ್ಲಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯ / ಸಂಸ್ಥೆ/ ಕಾಲೇಜುಗಳಲ್ಲಿ ಈಗಾಗಲೇ ಪಿಹೆಚ್.ಡಿ. ಪದವಿಗೆ ನೋಂದಾಯಿತರಾಗಿರುವ ಅರ್ಹ ಸಂಶೋಧನಾ ವಿದ್ಯಾರ್ಥಿಗಳಿಂದ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಡಿಸೆಂಬರ್ 20 ರವರೆಗೆ ವಿಸ್ತರಿಸಲಾಗಿದೆ. ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (ಡಿ.ಎಸ್.ಟಿ.) “ವಿಜ್ಞಾನ ಮತ್ತು ಇಂಜಿನಿಯರಿಂಗ್‍ನಲ್ಲಿ ಪಿಹೆಚ್.ಡಿ. ಸಂಶೋಧನೆಗೆ ಕರ್ನಾಟಕ ಡಿ.ಎಸ್.ಟಿ.-ಪಿಹೆಚ್.ಡಿ. ಶಿಷ್ಯವೇತನ ಎಂಬ ಕಾರ್ಯಕ್ರಮವನ್ನು ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಅನುμÁ್ಠನಗೊಳಿಸುತ್ತಿದೆ. ಆನ್‍ಲೈನ್ ಮೂಲಕ ಅರ್ಜಿಗಳನ್ನು 2025ರ ಡಿಸೆಂಬರ್ 20, ಸಂಜೆ 5.30 ಗಂಟೆ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಸಲ್ಲಿಸಲು ಜಾಲತಾಣ ಲಿಂಕ್ http://ksteps.karnataka.gov.in ಮೂಲಕ ಭೇಟಿ ನೀಡಬಹುದಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…

Read More