Author: kannadanewsnow07

ಬೆಂಗಳೂರು: ಏರ್‌ಪೋರ್ಟ್‌ನಲ್ಲೇ ಪ್ರಜ್ವಲ್‌ ರೇವಣ್ಣ ಬಂಧನ ಮಾಡಲಾಗುವುದು ಅಂಥ ಗೃಹ ಸಚಿವ ಜಿ.ಪರಮೇಶ್ವರ್‌ ಅವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಎಲ್ಲಾ ರೀತಿಯಲ್ಲಿ ಕಾನೂನು ಪ್ರಕಾರ ನಡೆಸಲಾಗಿದೆ ಅಂಥ ತಿಳಿಸಿದ ಅವರು ಬಂಧನಕ್ಕೆ ಸಂಬಂಧಪಟ್ಟಂಥೆ ಹಲವು ಅಡ್ಡಿಗಳಿದ್ದು, ಅವುಗಳಿಗೆ ತಕ್ಕಂತೆ ನಾವು ನಡೆದುಕೊಳ್ಳಬೇಕಾಗಿದೆ ಅಂಥ ಹೇಳಿದರು. ಇನ್ನೂ ಪಾಸ್‌ಪೋರ್ಟ್‌ ರದ್ದು ಮಾಡುವುದಕ್ಕೆ ಸಂಬಂಧಪಟ್ಟಂಥೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸಚಿವರು ಕೂಡ ಸೂಕ್ತ ಕ್ರಮಕೈಗೊಳ್ಳಲಾಗುವುದು ಅಂಥ ಹೇಳಿದರು.

Read More

ಬೆಂಗಳೂರು: ಮಾನವ ಹಾಲನ್ನು ಸಂಸ್ಕರಿಸಲು/ಮಾರಾಟ ಮಾಡುವ ಮತ್ತು ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಆಹಾರ ಉದ್ದಿಮೆದಾರರಿಗೆ ಸೂಚಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ಉಲ್ಲಂಘನೆಯ ಪ್ರಕರಣಗಳು ಕಂಡು ಬಂದಲ್ಲಿ ಆಹಾರ ಉದ್ದಿಮೆದಾರರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ರನ್ವಯ ಕಾನೂನು ಕ್ರಮಜರುಗಿಸಲಾಗುತ್ತದೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಎಫ್‍ಎಸ್‍ಎಸ್‍ಎಐ ರವರು ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯೀಕರಣದ ಕುರಿತು ವಿವಿಧ ನೊಂದಾಯಿತ ಸಮಾಜಗಳಿಂದ ಪ್ರಾತಿನಿಧ್ಯಗಳನ್ನು ಸ್ವೀಕರಿಸಲಾದ ಹಿನ್ನೆಲೆಯಲ್ಲಿAdvisory : RCD-02005/1/2023-Regulatoty-FSSAI, E-8065, 30:24.05.2024 ಅನ್ನು ಹೊರಡಿಸಿದ್ದು, ಸದರಿ Advisory ಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು ನಿಯಮಗಳು 2011ರಡಿಯಲ್ಲಿ ಮಾನವ ಹಾಲನ್ನು ಸಂಸ್ಕರಿಸಲು/ಮಾರಾಟ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಮಾನವ ಹಾಲು ಮತ್ತು ಅದರ ಉತ್ಪನ್ನಗಳ ವಾಣಿಜ್ಯಕರಣಕ್ಕೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು…

Read More

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸರ್ಕಾರದ ನಿರ್ದೇಶನದಂತೆ ಉಚಿತ/ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಿತರಣೆ ಮಾಡುತ್ತಿದೆ. 2024-25 ನೇ ಸಾಲಿನ ವಿದ್ಯಾರ್ಥಿ ಪಾಸಿಗಾಗಿ ಮೇ 29 ರಿಂದ ಆನ್‍ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ಜೂನ್ 1 ರಿಂದ ವಿದ್ಯಾರ್ಥಿ ಪಾಸುಗಳನ್ನು ಬೆಂಗಳೂರು ಒನ್ ಕೇಂದ್ರಗಳ ಮೂಲಕ ವಿತರಣೆ ಮಾಡಲಾಗುವುದು. 2024-25ನೇ ಸಾಲಿನ ವಿದ್ಯಾರ್ಥಿ ರಿಯಾಯಿತಿ ಪಾಸಿನ ಆನ್‍ಲೈನ್ ಅರ್ಜಿಯು ಸೇವಾಸಿಂಧು ಪೆÇೀರ್ಟಲ್ https://sevasindhu.karnataka.gov.in ನಲ್ಲಿ ಲಭ್ಯವಿರುತ್ತದೆ. ವಿದ್ಯಾರ್ಥಿಗಳು ಬೆಂಗಳೂರು ಒನ್ ಕೇಂದ್ರಗಳ ಮೂಲಕ ವಿದ್ಯಾರ್ಥಿ ಪಾಸಿಗಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿ ಪಾಸುಗಳನ್ನು ಬೆಳಿಗ್ಗೆ 08 ಗಂಟೆಯಿಂದ ಸಂಜೆ 06.30 ಗಂಟೆಯವರೆಗೆ ವಾರದ ಎಲ್ಲಾ ದಿನಗಳಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕೆಂಪೇಗೌಡ ಬಸ್‍ನಿಲ್ದಾಣ, ಕೆಂಗೇರಿ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ ಸಿಟಿ ಘಟಕ -19, ಶಾಂತಿನಗರ ಟಿಟಿಎಂಸಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಆನೇಕಲ್ ಬಸ್ ನಿಲ್ದಾಣದಲ್ಲಿ ವಿತರಿಸಲಾಗುವುದು. ಶಕ್ತಿ…

Read More

ಬೆಂಗಳೂರು:ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಜೂನ್ 7 ರಿಂದ 14 ರವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಪರೀಕ್ಷೆ-2 ನಡೆಯಲಿದ್ದು, ಪರೀಕ್ಷೆಯು ಬೇರೆ ಬೇರೆ ಪರೀಕ್ಷಾ ಕೇಂದ್ರಗಳಲ್ಲಿ ಇರುವುದರಿಂದ ಸಂಸ್ಥೆಯು ವಿದ್ಯಾರ್ಥಿಗಳ ಹಿತವನ್ನು ಗಮನದಲ್ಲಿಟ್ಟುಕೊಂಡು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ದಿನಾಂಕ ಜೂನ್ 7 ರಿಂದ 14 ರವರೆಗೆ ಪರೀಕ್ಷೆಗಳು ನಡೆಯುವ ದಿನಾಂಕಗಳಂದು ಪರೀಕ್ಷೆಗೆ ಹಾಜರಾಗಲು ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಹೋಗುವಾಗ ಮತ್ತು ಹಿಂದಿರುಗುವಾಗ ಸಂಸ್ಥೆಯ ಸಾಮಾನ್ಯ ಸೇವೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆ-02 ರ ದಿನಾಂಕಗಳಂದು ಪರೀಕ್ಷಾ ಕೇಂದ್ರಗಳ ಮಾರ್ಗಗಳಲ್ಲಿ ಕಡ್ಡಾಯವಾಗಿ ಎಲ್ಲಾ ಮಾರ್ಗಗಳನ್ನು, ಸುತ್ತುವಳಿಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ಹೆಚ್ಚುವರಿ ಸುತ್ತುವಳಿಗಳ ಕಾರ್ಯಾಚರಣೆಯ ಅಗತ್ಯತೆ ಕಂಡುಬಂದಲ್ಲಿ ಕಾರ್ಯಾಚರಣೆ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು/ಪೆÇೀಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ವಿದ್ಯಾರ್ಥಿ ಸಮುದಾಯದ ಹಿತವನ್ನು ಗಮನದಲ್ಲಿಟ್ಟುಕೊಂಡು ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಪಾಸುಗಳನ್ನು ವಾಸಸ್ಥಳದಿಂದ ಶಾಲಾ/ಕಾಲೇಜಿಗೆ ಪ್ರಯಾಣಿಸಲು…

Read More

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್ಟಿ-ಇನ್) ಆಪಲ್ ಉತ್ಪನ್ನಗಳು, ವಿಂಡೋಸ್ ಉತ್ಪನ್ನಗಳು ಮತ್ತು ಸಾಫ್ಟ್ವೇರ್, ಗೂಗಲ್ ಕ್ರೋಮ್, ಮೊಜಿಲ್ಲಾ ಮತ್ತು ಹೆಚ್ಚು ಬಳಸುವ ಸಾಫ್ಟ್ವೇರ್ ಮತ್ತು ಸಾಧನಗಳಲ್ಲಿನ ನ್ಯೂನತೆಗಳನ್ನು ಕಾಲಕಾಲಕ್ಕೆ ನಿರಂತರವಾಗಿ ವರದಿ ಮಾಡುತ್ತದೆ. ಆದಾಗ್ಯೂ, ಇಂದು, ಸರ್ಕಾರಿ ಸಂಸ್ಥೆಯು ಗಂಭೀರ ಸಮಸ್ಯೆ ಮಾತ್ರವಲ್ಲ, ಅದನ್ನು ನಿರ್ಲಕ್ಷಿಸುವುದರಿಂದ ನಿಮಗೆ ನಷ್ಟವಾಗಬಹುದು. ವಾಸ್ತವವಾಗಿ, ಸೈಬರ್ ಭದ್ರತಾ ಸಂಸ್ಥೆ ಟಿಪಿ-ಲಿಂಕ್ ರೂಟರ್ನಲ್ಲಿ ಭದ್ರತಾ ದೋಷವನ್ನು ಕಂಡುಹಿಡಿದಿದೆ. ಸಿಇಆರ್ಟಿ-ಇನ್ ಪ್ರಕಾರ, ಈ ದುರ್ಬಲತೆಯು ವೈ-ಫೈಗೆ ಸಂಪರ್ಕ ಹೊಂದಿದ ಸಂಪರ್ಕಿತ ಸಾಧನಕ್ಕೆ ಹ್ಯಾಕರ್ಗಳಿಗೆ ಪ್ರವೇಶವನ್ನು ನೀಡುತ್ತದೆ ಎನ್ನಲಾಗಿದೆ. ಅತ್ಯಂತ ಜನಪ್ರಿಯ ವೈ-ಫೈ ರೂಟರ್ ಗಳು : ಟಿಪಿ-ಲಿಂಕ್ ಭಾರತದ ಅತ್ಯಂತ ಜನಪ್ರಿಯ ವೈ-ಫೈ ರೂಟರ್ ಗಳಲ್ಲಿ ಒಂದಾಗಿದೆ. ವೈ-ಫೈ ರೂಟರ್ ಎಂಬುದು ನಿಮ್ಮನ್ನು ಇಂಟರ್ನೆಟ್ ನೀಡುಗರಿಗೆ ಸಂಪರ್ಕಿಸುವ ಸಾಧನವಾಗಿದೆ ಮತ್ತು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ವೈರ್ ಲೆಸ್ ನೆಟ್ ವರ್ಕ್ ಅನ್ನು ನೀಡುತ್ತದೆ. ಇದು ಸ್ಮಾರ್ಟ್ಫೋನ್ಗಳು, ಲ್ಯಾಪ್ಟಾಪ್ಗಳು ಮತ್ತು ಟ್ಯಾಬ್ಲೆಟ್ಗಳಂತಹ ನಿಮ್ಮ ಸಾಧನಗಳನ್ನು ಕೇಬಲ್ಗಳನ್ನು…

Read More

ಬೆಂಗಳೂರು: ಬೆಂಗಳೂರು : ವಾಲ್ಮೀಕಿ ಅಭಿವೃದ್ದಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸಕ್ಕೆ ಇಂದು ಬೆಳಗ್ಗೆ ವಾಸಕ್ಕೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು, ಈ ನಡುವೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಟಿ ಸಮುದಾಯದ ಸಚಿವ ನಾಗೇಂದ್ರ ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈ ಬಿಡುವಂತೆ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್ ನಲ್ಲಿನ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಚಂದ್ರಶೇಖರ್ ಆತ್ಮಹತ್ಯೆಗೆ ಶರಣಾಗಿದ್ದರು. ಡೆತ್ ನೋಟ್ ನಲ್ಲಿ ಮೂವರು ಅಧಿಕಾರಿಗಳ ಹೆಸರು ಕೂಡ ಅವರು ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ವಾಲ್ಮೀಕಿ ನಿಗಮದ ವ್ಯವಸ್ಥಾಪಕ ನಿರ್ದೇಶಕ…

Read More

ಯಾವುದೇ ಕೆಲಸವಾಗಲೀ ಅದಕ್ಕೆ ಆರಂಭ, ಅಂತ್ಯ ಇರುತ್ತದೆ. ಹಿರಿಯರು ಒಂದು ಮಾತು ಹೇಳುತ್ತಿದ್ದರು. ಅದೇನೆಂದರೆ ಗುರುವಾರ ಈ ಕೆಲಸ ಮಾಡಬೇಡಿ. ಈ ಕೆಲಸ ಆದರೆ ಮಾಡಬಹುದೆಂದು..! ಯಾಕೆಂದರೆ ಕೆಲವೊಂದು ನಮ್ಮ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಇದೆ. ಇದರಿಂದ ಆರ್ಥಿಕ ಸಂಕಷ್ಟ ಉಂಟಾಗಬಹುದು. ಬ್ರಹ್ಮಸ್ಪತಿಗೆ ಇಷ್ಟವಾಗದ ಕೆಲಸವನ್ನು ಗುರುವಾರ ಮಾಡಬಾರದು. ಸುಖ ಪರಿವಾರ, ಶಿಕ್ಷಣ ,  ಜ್ಞಾನ ಹಾಗೂ ಹಣದ ಮೇಲೆ ಇದು ಪರಿಣಾಮ ಬೀರಬಹುದು. ಮೊದಲೇ ಆರ್ಥಿಕ ಸಮಸ್ಯೆ ಎದುರಿಸುತ್ತಿರುವವರು ಗುರುವಾರ ಅಪ್ಪಿ ತಪ್ಪಿಯೂ ಈ ಕೆಲಸ ಮಾಡಲೇಬೇಡಿ. ಪೋಷಕರು, ಗುರು, ಶಿಕ್ಷಕರು ಬ್ರಹ್ಮಸ್ಪತಿಯ ಪ್ರತಿರೂಪ. ಹೀಗಾಗಿ ಇವರನ್ನ ಅವಮಾನ ಮಾಡಬೇಡಿ. ಕಿಚಡಿಯನ್ನ ಮನೆಯಲ್ಲಿ ತಯಾರಿಸಬೇಡಿ. ಹಾಗೆಯೇ ಗುರುವಾರ ಕಿಚಡಿಯನ್ನ ತಿನ್ನಬೇಡಿ. ಗುರುವಾರ ಉಗುರು ಕತ್ತರಿಸಬೇಡಿ. ಗುರುವಾರದಂದು ಮಹಿಳೆಯರು ತಲೆಗೆ ಸ್ನಾನ ಮಾಡಬಾರದು. ಯಾಕೆಂದರೆ ಗುರುವಾರ ಸ್ನಾನ ಮಾಡಿದರೇ ಆಸ್ತಿ ಹಾಗೂ ಸಮೃದ್ದಿಯಲ್ಲಿ ನಷ್ಟವುಂಟಾಗುತ್ತದೆ. ಗುರುವಾರ ಬಟ್ಟೆ ಹೊಗೆಯಬಾರದೆಂದು ಶಾಸ್ತ್ರವೊಂದರಲ್ಲಿ ಹೇಳಲಾಗಿದೆ. ಸೂರ್ಯ ಉದಯವಾಗುವ ಮೊದಲೇ ಎದ್ದು ಸ್ನಾನ…

Read More

ಹೊಸ ಅಧ್ಯಯನದ ಪ್ರಕಾರ, ಪ್ರಾಚೀನ ಈಜಿಪ್ಟಿನವರು ವೈದ್ಯಕೀಯ ಕ್ಷೇತ್ರದಲ್ಲಿ ನುರಿತವರಾಗಿದ್ದರು, ಅಂದರೆ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲು ಪ್ರಯತ್ನಿಸಿದರು ಎನ್ನಲಾಗಿದೆ. ಇದು 4,000 ವರ್ಷಗಳಷ್ಟು ಹಳೆಯದಾದ ತಲೆಬುರುಡೆಗಳ ಜೋಡಿಯ ವಿಶ್ಲೇಷಣೆಯನ್ನು ಆಧರಿಸಿದೆ ಮತ್ತು ಫ್ರಾಂಟಿಯರ್ಸ್ ಇನ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಜರ್ಮನಿಯ ಟ್ಯೂಬಿಂಗನ್, ಇಂಗ್ಲೆಂಡ್ನ ಕೇಂಬ್ರಿಡ್ಜ್, ಬಾರ್ಸಿಲೋನಾ ಮತ್ತು ಸ್ಪೇನ್ನ ಸ್ಯಾಂಟಿಯಾಗೊ ಡಿ ಕಾಂಪೋಸ್ಟೆಲಾ ವಿಶ್ವವಿದ್ಯಾಲಯಗಳ ಸಂಶೋಧಕರ ಸಂಯೋಜಿತ ಪ್ರಯತ್ನವಾಗಿದೆ. ಸಾವಿರಾರು ವರ್ಷಗಳ ಹಿಂದೆ ರೋಗಿಗಳಲ್ಲಿ ಮೆದುಳಿನ ಗೆಡ್ಡೆ ಹೊರತೆಗೆಯುವಿಕೆಯ ಪುರಾವೆಗಳನ್ನು ಅವರು ಕಂಡುಕೊಂಡರು, ಇದು ಸಮಯಕ್ಕಿಂತ ಬಹಳ ಮುಂದಿತ್ತು ಎನ್ನಲಾಗಿದೆ. “ಈ ಹಿಂದೆ ಕ್ಯಾನ್ಸರ್ನ ಪಾತ್ರ, ಪ್ರಾಚೀನ ಕಾಲದಲ್ಲಿ ಈ ರೋಗವು ಎಷ್ಟು ಪ್ರಚಲಿತದಲ್ಲಿತ್ತು ಮತ್ತು ಪ್ರಾಚೀನ ಸಮಾಜಗಳು ಈ ರೋಗಶಾಸ್ತ್ರದೊಂದಿಗೆ ಹೇಗೆ ಸಂವಹನ ನಡೆಸಿದವು ಎಂಬುದರ ಬಗ್ಗೆ ತಿಳಿಯಲು ನಾವು ಬಯಸಿದ್ದೇವೆ” ಎಂದು ಟ್ಯೂಬಿಂಗನ್ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಪ್ರಬಂಧದ ಮೊದಲ ಲೇಖಕ ಟಟಿಯಾನಾ ಟೊಂಡಿನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಹೇಳುವ ಪ್ರಕಾರ ಪರೀಕ್ಷಿಸಿದ ತಲೆಬುರುಡೆಗಳು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಡಕ್ವರ್ತ್…

Read More

ಬೆಂಗಳೂರು : ಸೆಕ್ಸ್ ವಿಡಿಯೋ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಅವರು ಮೇ 31ರಂದು ವಿಶೇಷ ತನಿಖಾ ತಂಡದ (ಎಸ್ಐಟಿ) ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿ ಸೋಮವಾರ ವಿಡಿಯೋ ಬಿಡುಗಡೆ ಮಾಡಿದ್ದಾರೆ.  2.57 ನಿಮಿಷಗಳ ವಿಡಿಯೋದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದರು ಮತ್ತು ಇದು ರಾಜಕೀಯ ಪಿತೂರಿಯ ಭಾಗ ಎಂದು ಕರೆದರು. “ನನ್ನನ್ನು ಯಾರೂ ತಪ್ಪಾಗಿ ಪರಿಗಣಿಸಬಾರದು. ಮೇ 31ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುತ್ತಿದ್ದೇನೆ. ನನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಎಸ್ಐಟಿಗೆ ಸಂಪೂರ್ಣವಾಗಿ ಸಹಕರಿಸುವ ಮೂಲಕ ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಉತ್ತರಿಸಲು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ. “ನನಗೆ ನ್ಯಾಯಾಲಯಗಳ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ಅಲ್ಲಿ ನನ್ನ ವಿರುದ್ಧದ ಸುಳ್ಳು ಪ್ರಕರಣಗಳ ವಿರುದ್ಧ ಹೋರಾಡುತ್ತೇನೆ. ನಾನು ಈ ಸುಳ್ಳು ಪ್ರಕರಣಗಳಿಂದ ನ್ಯಾಯಾಲಯದ ಮೂಲಕವೇ ಹೊರಬರುತ್ತೇನೆ” ಎಂದು ಅವರು ಹೇಳಿದರು.”ನನಗೆ ನ್ಯಾಯಾಲಯಗಳ ಮೇಲೆ ಸಂಪೂರ್ಣ ನಂಬಿಕೆ ಇದೆ…

Read More

ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ನಿಂದ ಪರಿಹಾರ ಸಿಗುವಂತೆ ಕಾಣುತ್ತಿಲ್ಲ. ಅವರು ಈಗ ಜೂನ್ ೨ ರಂದು ನ್ಯಾಯಾಲಯಕ್ಕೆ ಶರಣಾಗಬೇಕಾಗುತ್ತದೆ. ಮಧ್ಯಂತರ ಜಾಮೀನನ್ನು 7 ದಿನಗಳವರೆಗೆ ವಿಸ್ತರಿಸುವಂತೆ ಸಿಎಂ ಕೇಜ್ರಿವಾಲ್ ಮನವಿ ಮಾಡಿದ್ದರು. ಆದರೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ ಅವರ ಅರ್ಜಿಯನ್ನು ಸ್ವೀಕರಿಸಲಿಲ್ಲ.  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅವಧಿಯನ್ನು 7 ದಿನಗಳ ಕಾಲ ವಿಸ್ತರಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸಿಎಂಗೆ ಸ್ವಾತಂತ್ರ್ಯ ನೀಡಿದೆ ಎಂದು ರಿಜಿಸ್ಟ್ರಿ ಹೇಳುತ್ತದೆ. ಇದರರ್ಥ ಕೇಜ್ರಿವಾಲ್ ಜೂನ್ 2 ರೊಳಗೆ ಶರಣಾಗಬೇಕಾಗುತ್ತದೆ.

Read More