Author: kannadanewsnow07

ಬೆಂಗಳೂರು: ಶೀಘ್ರವೇ ಬಸ್‌ ಪ್ರಯಾಣ ದರ ಹೆಚ್ಚಳ ಮಾಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಸುಳಿವು ನೀಡಿದ್ದಾರೆ. ಅವರು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡುತ್ತ ಡೀಸೆಲ್ ದರ ಹೆಚ್ಚಳದಿಂದ ಹೆಚ್ಚು ಹೊರೆ ಆಗುತ್ತಿದೆ. ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ಮಾಡುತ್ತೇವೆ ಅಂತ ಹೇಳಿದರು. ಇದೇ ವೇಳೆ ಅವರು ಮಾತನಾಡಿ, ಶಕ್ತಿ ಗ್ಯಾರಂಟಿ (Shakti Scheme) ಯೋಜನೆಯ 1100 ಕೋಟಿ ರೂ. ಹಣವನ್ನು ಸಾರಿಗೆ ನಿಗಮಗಳಿಗೆ ಸರ್ಕಾರ ಬಾಕಿ ಉಳಿಸಿಕೊಂಡಿದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Read More

ಬೆಂಗಳೂರು: ವಿಧಾನ ಸಭಾ ಕ್ಷೇತ್ರದಿಂದ, ಶಿಕ್ಷಕರ ಕ್ಷೇತ್ರದಿಂದ ಹಾಗೂ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನೂತನವಾಗಿ ಚುನಾಯಿತರಾಗಿರುವ ಒಟ್ಟು 17 ಶಾಸಕರುಗಳು ಜೂನ್ 24 ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ನೂತನವಾಗಿ ಚುನಾಯಿತರಾದ ಶಾಸಕರುಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವಿಧಾನ ಪರಿಷತ್ ಸಚಿವಾಲಯದ ಪ್ರಕಟಣೆ ತಿಳಿಸಿದೆ.

Read More

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ನಮ್ಮ ಸನಾತನ ಧರ್ಮದಲ್ಲಿ ಲವಂಗವನ್ನು ಅತ್ಯಂತ ಪವಿತ್ರ. ಲವಂಗವನ್ನು ಆಹಾರದಲ್ಲಿನ ಸ್ವಾಧವನ್ನು ಹೆಚ್ಚಿಸಲು, ಆರೋಗ್ಯವನ್ನು ವೃದ್ಧಿಮಾಡಲು, ಜ್ಯೋತಿಷ್ಯದ ಉಪಯೋಗಗಳಲ್ಲಿ, ತಂತ್ರಕ್ರಿಯೆಗಳಲ್ಲಿ ಬಳಸುತ್ತಾರೆ. ಏಕೆಂದರೆ ಇದನ್ನು ಶಕ್ತಿಯ ವಾಹಕ ಎಂದು ತಿಳಿಯಲಾಗಿದೆ. ಅದೃಷ್ಟವನ್ನು ಬದಲಾಯಿಸಲು ಕನಸನ್ನು ನೆರವೇರಿಸಲು ಬಳಸುತ್ತಾರೆ. ಯಾವುದೇ ವೈಜ್ಞಾನಿಕವಾದ ಆಧಾರವಿಲ್ಲ.ಪ್ರಾಚೀನ ಕಾಲದಿಂದಲೂ ಉಪಾಯವನ್ನು ಮಾಡಿಕೊಂಡು ಬಂದಿದ್ದಾರೆ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559 ಮೊದಲನೇ ಉಪಾಯ ಮನೆಯಲ್ಲಿನ ಕೆಟ್ಟ ಶಕ್ತಿಗಳನ್ನು ಓಡಿಸುತ್ತದೆ. ಅದಕ್ಕೂ ಮೊದಲು ಮನೆ ಆಚೆ ಇರುವ ನಕಾರಾತ್ಮಕ ಶಕ್ತಿಯನ್ನು ಒಳಗೆ ಬಾರದ ಹಾಗೆ ನೋಡಿಕೊಳ್ಳಬೇಕು. ಇದಕ್ಕೆಲ್ಲ ಒಂದ್ ಪರಿಹಾರವೆಂದರೆ, ಮಂಗಳವಾರದ ರಾತ್ರಿ ಐದು ಲವಂಗ, ಮೂರು ಕರ್ಪೂರದ ತುಂಡನ್ನು,ಮೂರ ಏಲಕ್ಕಿಯನ್ನು ಹಾಕಿ ಸುಡಬೇಕು,ಯಾವಾಗ ಅದರಲ್ಲೂ ಅಗ್ನಿಯ ಹೊಗೆ ಆಡಲು ಶುರು ಆಗುತ್ತದೆಯೋ ಅದನ್ನು ಎಲ್ಲಾ…

Read More

ಬೆಂಗಳೂರು: ವಿದ್ಯಾವಂತರಲ್ಲೇ ಜಾತಿಪ್ರಜ್ಞೆ ಹೆಚ್ಚಾಗುತ್ತಿದೆ. ಡಾಕ್ಟರ್ ಓದಿದವರು ಇನ್ನೂ ಮೌಡ್ಯ ಬಿಟ್ಟಿಲ್ಲ. ಓದಿದವರೇ ಇನ್ನೂ ಹಣೆಬರಹದಲ್ಲಿ, ಕರ್ಮ ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಇಂಥಾ ಮೌಡ್ಯದಲ್ಲಿ ನಂಬಿಕೆ ಇಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ SSLC ಮತ್ತು PUC ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಉತ್ತೇಜಿಸಿ ಮಾತನಾಡಿದರು. ದಲಿತ ಸಂಘರ್ಷ ಸಮಿತಿ ರಾಜ್ಯದಲ್ಲಿ ನಡೆಸಿದ, “ನಮಗೆ ಸರಾಯಿ ಅಂಗಡಿ ಬೇಡ. ವಸತಿ ಶಾಲೆ ಬೇಕು” ಎನ್ನುವ ಹೋರಾಟದಿಂದ ಪ್ರೇರಿತನಾಗಿ ಮೊದಲ ಬಜೆಟ್ ಮಂಡಿಸುವ ವೇಳೆ ಗ್ರಾಮೀಣ ಭಾಗದಲ್ಲಿ ಮೊರಾರ್ಜಿ ಶಾಲೆಗಳನ್ನು ಆರಂಭಿಸಿದೆ. ಅವತ್ತಿನಿಂದ ನಿರಂತರವಾಗಿ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯುತ್ತಲೇ ಇದ್ದೇನೆ. ಸದ್ಯ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ 833 ವಸತಿ ಶಾಲೆಗಳಿವೆ. ಅಲ್ಪ ಸಂಖ್ಯಾತ ಇಲಾಖೆಯಡಿಯಲ್ಲಿರುವುದೂ ಸೇರಿ ಒಟ್ಟು 946 ವಸತಿ ಶಾಲೆಗಳಿವೆ ಎಂದು ವಿವರಿಸಿದರು. ಕೆಲವು ಹೋಬಳಿಯಲ್ಲಿ ಒಂದಕ್ಕಿಂತ ಹೆಚ್ಚು ವಸತಿ…

Read More

ಬೆಂಗಳೂರ್: ಪತಿ ಭೇಟಿಗಾಗಿ ಆಗಮಿಸಿದ ವಿಜಯ ಲಕ್ಷ್ಮಿ ದರ್ಶನ್ ಅನ್ನಪೂರ್ಣಶ್ವೇರಿ ನಗರ ಪೋಲಿಸ್‌ ಠಾಣೆಗೆ ಆಗಮಿಸಿದ್ದಾರೆ. ಕಳೆದ ಒಂದು ವಾರದಿಂದ ರೇಣುಕಸ್ವಾಮಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ದರ್ಶನ್‌ ಪೊಲೀಸ್‌ ಕಸ್ಟಡಿಯಲ್ಲಿದ್ದು, ಪೊಲೀಸರ ಕಸ್ಟಡಿ ನಾಳೆಗೆ ಅಂತ್ಯವಾಗಲಿದೆ. ಈ ನಡುವೆ ಯಾರು ಕೂಡ ದರ್ಶನ್‌ ಅವರನ್ನು ನೋಡಲು ಬರಲಿಲ್ಲ ಎನ್ನುವ ಮಾತು ಕೇಳಿ ಬರುತಿತ್ತು. ಇದರ ನಡುವೆ ಇಂದು ವಿಜಯ ಲಕ್ಷ್ಮಿ ದರ್ಶನ್ ಆಗಮಿಸಿದ್ದು, ಎಲ್ಲರ ಕೂತುಹಲವನ್ನು ಹೆಚ್ಚಿಸಿದೆ.

Read More

ಬೆಂಗಳೂರು: ನಟ ದರ್ಶನ್‌ ಸದ್ಯ ಕೊಲೆ ಆರೋಪದ ಮೇಲೆ ಪೋಲಿಸ್‌ ಕಸ್ಟಡಿಯಲ್ಲಿದ್ದು, ಠಾಣೆಯಲ್ಲಿ ಕಂಬಿಗಳ ಹಿಂದೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ದರ್ಶನ್‌ ತನ್ನ ಗೆಳತಿಯ ಮಾಜಿ ಗಂಡನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಸಂಜಯ್‌ ಮೇಲೆ ಪವಿತ್ರಗೌಡ ಇಲ್ಲ ಸಲ್ಲದ್ದನ್ನು ಹೇಳಿ ಹೊಡೆಸಿದ್ದಾಳೆ ಎನ್ನಲಾಗಿದೆ. ಈ ನಡುವೆ ಪವಿತ್ರಗೌಡ ಹಾಗೂ ದರ್ಶನ್‌ ಸಂಬಂಧದ ಬಗ್ಗೆ ಅನೇಕ ಅನುಮಾನಗಳು ಹುಟ್ಟು ಹಾಕಿದೆ. ಮಗಳನ್ನು ತನ್ನ ಜೊತೆಗೆ ಕಳುಹಿಸಿಕೊಡುವಂತೆ ಸಂಜಯ್‌ ಸಿಂಗ್‌ ಕೇಳುತ್ತಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪವಿತ್ರಗೌಡ ಈ ಬಗ್ಗೆ ದರ್ಶನ್‌ಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಇದರಿಂದ ಸಿಟ್ಟಾಗಿದ್ದ ದರ್ಶನ್‌ ಉಪಾಯದಿಂದ ಸಂಜಯ್‌ ಸಿಂಗ್‌ ಅನ್ನು ಕರೆಸಿಕೊಂಡು ಹಿಗ್ಗಾಮುಗ್ಗಾ ಜಾಡಿಸಿ ಇನ್ನೊಂದು ಸಾರಿ ಇಲ್ಲಿ ಕಾಣಿಸಿಕೊಳ್ಳಬೇಡ ಅಂತ ವಾರ್ನಿಂಗ್‌ ಮಾಡಿ ಕಳುಹಿಸಿಕೊಟ್ಟಿದ್ದ ದರ್ಶನ್ ಎನ್ನಲಾಗಿದೆ. ಇದಕ್ಕೆ ಪವಿತ್ರಗೌಡ ಸಾಥ್‌ ನೀಡಿದ್ದಳು ಎನ್ನಲಾಗಿದೆ. ಡೈವೋರ್ಸ್‌ ಬಳಿಕ ದರ್ಶನ್‌ ಜೊತೆಗೆ ಪವಿತ್ರಗೌಡ ಜೀವನ ನಡೆಸುತ್ತಿದ್ದಳು ಎನ್ನಲಾಗಿದೆ. ದರ್ಶನ್‌ ಜೊತೆಗೆ ಇರುವ ಸಲುವಾಗಿಯೇ ಪವಿತ್ರಗೌಡ ಡೈವೋರ್ಸ್‌…

Read More

ಬೆಂಗಳೂರು: ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ Digital Evaluation ಉದ್ಘಾಟನಾ ಕಾರ್ಯಕ್ರಮ ನೇರವೇರಿತು. ಈ ವೇಳೆ ಡಾ. ರೀಟಾ ಭಟ್ಟಾಚಾರ್ಜಿ ಡೀನ್, ಅಕಾಡೆಮಿಕ್ಸ್, ಬಿಎಂಎಸ್ಸಿಡಬ್ಲ್ಯೂ , ಡಾ.ಡಿ.ಇ.ವಸುಂಧರಾ, ಗಾಯತ್ರಿ ಎ ಪ್ರಾಂಶುಪಾಲರು, ಬಿಎಂಎಸ್ಸಿಡಬ್ಲ್ಯೂ, ಸುಮಂಗಲಾ, ವೆಂಕಟರಾಮನ್ ಉಮಾಕಾಂತ್, ಸೂರ್ಯ ನಾರಾಯಣನ್, ರಚನಾ, ಶಿಲ್ಪಾ ಎಸ್, ಹಾಜರಿದ್ದರು.  Meta-i technologies digital evaluation solutions ವತಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಭೋಧಕ ಮತ್ತು ಭೋಧಕತೇರ ಸಿಬ್ಬಂದಿ ಹಾಜರಿದ್ದು, ಕಾರ್ಯಕ್ರಮದ ಉದ್ದೇಶವನ್ನು ತಿಳಿದುಕೊಂಡರು.

Read More

ಬೆಂಗಳೂರು: ನಾಳೆ ಪರಪ್ಪನ ಅಗ್ರಹಾರಕ್ಕೆ ದರ್ಶನ್‌ ಅಂಡ್‌ ಗ್ಯಾಂಗ್‌ ಶಿಫ್ಟ್‌ ಮಾಡಲಾಗುವುದು ಎನ್ನಲಾಗಿದೆ.  ನಾಳೆ ದರ್ಶನ್‌ ಅಂಡ್‌ ಗ್ಯಾಂಗ್‌ ಪೊಲೀಸ್‌ ಕಸ್ಟಡಿ ಅವಧಿ ಮುಗಿಯಲಿದ್ದು, ಈ ನಿಟ್ಟಿನಲ್ಲಿ ಅವರನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿದ್ದು, ನಾಳೆ ಮತ್ತೆ ಪೊಲೀಸರು ತಮ್ಮ ವಶಕ್ಕೆ ಕೇಳುವ ಸಾಧ್ಯತೆ ಕಡಿಮೆ ಇದ್ದು, ನಾಳೆ ದರ್ಶನ್‌ ಅಂಡ್‌ ಗ್ಯಾಂಗ್‌ ಪರಪ್ಪನ ಅಗ್ರಹಾರಕ್ಕೆ ಸ್ಥಳತಾಂತರ ಮಾಡುವ ಸಾಧ್ಯತೆಯನ್ನು ಕೂಡ ತಳ್ಳಿ  ಹಾಕುವಂತಿಲ್ಲ. ಒಂದು ವೇಳೆ ನಾಳೆ ಪರಪ್ಪನ ಅಗ್ರಹಾರಕ್ಕೆ ಹೋದರೆ ದರ್ಶನ್ ಎರಡನೇ ಬಾರಿಗೆ ಅಲ್ಲಿ ತಮ್ಮ ದಿನಗಳನ್ನು ಕಳೆಯಲಿದ್ದಾರೆ.  ಈ ನಡುವೆ ರೇಣುಕಸ್ವಾಮಿ ಹತ್ಯೆ ವೇಳೆ ನಟ ದರ್ಶನ್‌ ಧರಿಸಿದ್ದ ಬಟ್ಟೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಕೃತ್ಯ ನಡೆದ ಬಳಿಕ ಬಟ್ಟೆಯನ್ನು ಒಗೆದು ಒಣಗಿ ಹಾಕಲಾಗಿತ್ತು ಎನ್ನಲಾಗಿದೆ. ಆರ್‌ ಆರ್ ನಗರದಲ್ಲಿರುವ ದರ್ಶನ್‌ ಮನೆಯಿಂದ ಈ ಬಟ್ಟೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಸದ್ಯ ಬಟ್ಟೆಗಳನ್ನು ವಧಿ ವಿಜ್ಞಾನ ವಿಭಾಗಕ್ಕೆ ಹೆಚ್ಚಿನ ತನಿಖೆಗಾಗಿ ಕಳುಹಿಕೊಟ್ಟಿದ್ದು, ಬಟ್ಟೆ ಮೇಲೆ…

Read More

ನವದೆಹಲಿ: ಈ ವರ್ಷದ ಜೂನ್ನಲ್ಲಿ ಭಾರತವು ಸಾಮಾನ್ಯಕ್ಕಿಂತ ಕಡಿಮೆ ಮಾನ್ಸೂನ್ ಮಳೆಗೆ ಸಾಕ್ಷಿಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದೇಶದಲ್ಲಿ ಮಾನ್ಸೂನ್ ಆಗಮನದ ಬಗ್ಗೆ ನವೀಕರಣದಲ್ಲಿ, ಭಾರತ ಹವಾಮಾನ ಇಲಾಖೆ, “ಒಟ್ಟಾರೆಯಾಗಿ ದೇಶದಲ್ಲಿ ಜೂನ್ ಸರಾಸರಿ ಮಳೆಯು ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ, ಅಂದರೆ ದೀರ್ಘಾವಧಿಯ ಸರಾಸರಿಯ (ಎಲ್ಪಿಎ) ಶೇಕಡಾ 92 ಕ್ಕಿಂತ ಕಡಿಮೆ” ಎಂದು ಹೇಳಿದೆ. ಕಳೆದ ಕೆಲವು ತಿಂಗಳುಗಳಿಂದ ಭಾರತದ ಕೆಲವು ಭಾಗಗಳು ತೀವ್ರವಾದ ಶಾಖದ ಅಲೆಯಿಂದ ತತ್ತರಿಸುತ್ತಿವೆ. ಮೇ 30 ರಂದು ಕೇರಳದಲ್ಲಿ ನೈಋತ್ಯ ಮಾನ್ಸೂನ್ ಪ್ರಾರಂಭವಾದಾಗಿನಿಂದ ದೇಶದಲ್ಲಿ ಶೇಕಡಾ 20 ರಷ್ಟು ಕಡಿಮೆ ಮಳೆಯಾಗಿದೆ, ಜೂನ್ 12 ಮತ್ತು 18 ರ ನಡುವೆ ಮಳೆ ಆಧಾರಿತ ವ್ಯವಸ್ಥೆಯು ಗಮನಾರ್ಹ ಪ್ರಗತಿ ಸಾಧಿಸಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದಾಗ್ಯೂ, ಮುಂದಿನ ಮೂರರಿಂದ ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್ಗಢ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ವಾಯುವ್ಯ ಬಂಗಾಳ ಕೊಲ್ಲಿ, ಬಿಹಾರ ಮತ್ತು ಜಾರ್ಖಂಡ್ನ ಕೆಲವು ಭಾಗಗಳಲ್ಲಿ ಮಾನ್ಸೂನ್ ಮತ್ತಷ್ಟು ಮುಂದುವರಿಯಲು…

Read More

ಬೆಂಗಳೂರು: : ಕೊಲೆಯಾದ ರೇಣುಕಾಸ್ವಾಮಿಯವರ ಕುಟುಂಬಕ್ಕೆ ಧೈರ್ಯ ತುಂಬುವ ಕಾರ್ಯವನ್ನು ರಾಜ್ಯ ಸರಕಾರ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅವರು ಸರ್ಕಾರಕ್ಕೆ ಮನವಿ ಮಾಡಿದ್ದು, ಈ ನಡುವೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಕೂಡ ಈ ಬಗ್ಗೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಇವೆಲ್ಲದರ ನಡುವೆ ಒಂದು ವೇಳೆ ಸರ್ಕಾರಿ ಉದ್ಯೋಗ ನೀಡಿದರೆ ಅದು ಪ್ರಜಾಪ್ರಭುತ್ವಕ್ಕೆ ಮಾಡುವ ಅಮಮಾನ ಅಂಥ ಹಲವು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಮಾಜದಲ್ಲಿ ಹಲವು ಮಂದಿ ಕೊಲೆಯಾಗಿದ್ದಾರೆ. ಅದರಲ್ಲೂ ದಲಿತ, ಹಿಂದುಳಿದ ಅನೇಕ ಮಂದಿ ರೇಣುಕಸ್ವಾಮಿಗಿಂತ ಭೀಕರವಾಗಿ ಕೊಲೆಯಾಗಿ ಅವರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ, ಇಂತಹ ಸನ್ನಿವೇಶದಲ್ಲಿ ರೇಣುಸ್ವಾಮಿ ಹೆಂಡತಿಗೆ ಸರ್ಕಾರಿ ಉದ್ಯೋಗ ನೀಡುವುದು ಅನ್ಯಾಯಾವಾಗುತ್ತದೆ. ಇದಲ್ಲದೇ ಈಗಾಗಲೇ ಕೊಲೆಯಾಗಿ ಸಾವನ್ನಪ್ಪಿರುವ ದಲಿತರು ಸೇರಿದಂಥೆ ಅನೇಕರಿಗೆ ಇನ್ನೂ ಕೂಡ ನ್ಯಾಯ ಅನ್ನೋದು ಮರಿಚೀಕೆಯಾಗಿದೆ. ಮೊದಲು ಅವರಿಗೆ ಸರ್ಕಾರಿ ಕೆಲಸ ನೀಡಬೇಕೇ ಹೊರತು, ರೇಣುಕಸ್ವಾಮಿಗೆ ಅಲ್ಲ ಅಂಥ ಅನೇಕ ಮಂದಿ ವಾದ ಮಾಡುತ್ತಿದ್ದಾರೆ. ಸದ್ಯ ಸರ್ಕಾರಿ ಕೆಲಸ ನೀಡದೇ…

Read More