Author: ಅವಿನಾಶ್‌ ಆರ್‌ ಭೀಮಸಂದ್ರ

ಅವಿನಾಶ್‌ ಆರ್‌ ಭೀಮಸಂದ್ರ ಪರಿಚಯ: ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 15 ವರ್ಷಗಳ ಅನುಭವ, ತನಿಖಾ ಪತ್ರಿಕೋದ್ಯಮ, ಅಪರಾಧ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ. ಊರು ಕಲ್ಪತರು ನಾಡು ತುಮಕೂರು ಜಿಲ್ಲೆಯ ಇವರು ಓದಿದ್ದು ಪದವಿಯಲ್ಲಿ ಪತ್ರಿಕೋದ್ಯಮ, ಐಚ್ಚಿಕ ಕನ್ನಡ, ಮನೋವಿಜ್ಞಾನ, ಪತ್ರಿಕೋದ್ಯಮದಲ್ಲಿ ಸ್ನಾತ್ತಕೋತ್ತರ ಪದವಿ. ಕಸ್ತೂರಿ ನ್ಯೂಸ್‌. ವಿಜಯವಾಣಿ, ಪ್ರಜಾಪ್ರಗತಿ, ಪ್ರಗತಿ ಟಿವಿಯಲ್ಲಿ ಕೆಲಸ ಮಾಡಿದ ಅನುಭವವಿದೆ. ಕನ್ನಡಿಗರ ಮನೆಮಾತಾಗಿರುವ ಕನ್ನಡ ನ್ಯೂಸ್‌ನೌ.ಕಾಂ ಡಿಜಿಟಲ್‌ ಮೀಡಿಯಾದ ಸಂಸ್ಥಾಪಕ ಸಂಪಾದಕರು ಕೂಡ ಹೌದು.

ಬೆಂಗಳೂರು :ಅತಿಥಿ ಉಪನ್ಯಾಸಕರಿಗೆ ಸೇವಾನುಭವದ ಆಧಾರದಲ್ಲಿ 5,000 ರೂ. ಗಳಿಂದ 8000 ರೂ. ಗಳಷ್ಟು ಗೌರವಧನ ಹೆಚ್ಚಳಕ್ಕೆ ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು ಮಾತ್ರವಲ್ಲದೆ ಇನ್ನಿತರ ಕೆಲವು ಸೌಲಭ್ಯಗಳನ್ನು ವಿಸ್ತರಿಸಿದ್ದಾರೆ. ಅವರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು‌ ಮಾಜಿ MLC ಪುಟ್ಟಣ್ಣ ನೇತೃತ್ವದ ಅತಿಥಿ ಉಪನ್ಯಾಸಕರ ನಿಯೋಗದ ಜತೆ ಅವರ ಬೇಡಿಕೆಗಳ ಕುರಿತು ಚರ್ಚಿಸಿದರು. ಅತಿಥಿ ಉಪನ್ಯಾಸಕರ ಬಗ್ಗೆ ನಮ್ಮ ಸರ್ಕಾರ ಮಾನವೀಯ ಕಾಳಜಿ ಹೊಂದಿದೆ. ಆದರೆ ಸೇವಾ ಭದ್ರತೆ ನೀಡಲು ಕಾನೂನು ತೊಡಕು ಇರುವುದರಿಂದ ಸಾಧ್ಯವಾಗುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿದ್ದಾಗಲೂ ಅತಿಥಿ ಉಪನ್ಯಾಸಕರ ಪರವಾಗಿ ತಾವು ದನಿ ಎತ್ತಿ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದನ್ನು ಸ್ಮರಿಸಿಕೊಂಡ ಮುಖ್ಯಮಂತ್ರಿಗಳು, ಇದೀಗ ಎರಡೇ ವರ್ಷದೊಳಗೆ ನಮ್ಮ ಸರ್ಕಾರ ಮತ್ತೆ ನಿಮ್ಮ ವೇತನ ಹೆಚ್ಚಳಕ್ಕೆ ಮುಂದಾಗಿದೆ. ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಗಣಿಸಿದೆ ಎಂದು ತಿಳಿಸಿದರು. ಐದು ವರ್ಷಕ್ಕಿಂತ ಕಡಿಮೆ ಸೇವಾನುಭವ ಹೊಂದಿದವರಿಗೆ 5 ಸಾವಿರ ರೂ., 5 ರಿಂದ 10 ವರ್ಷದ…

Read More

ಗಾಜಾ: ಉತ್ತರ ಗಾಜಾದಲ್ಲಿ ಕಳೆದ 3 ತಿಂಗಳಲ್ಲಿ ನಡೆದ ಯುದ್ಧದಿಂದ ಸುಮಾರು 8,000 ಹಮಾಸ್ ಬಂದೂಕುಧಾರಿಗಳು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಸೇನೆ ಮಾಹಿತಿ ನೀಡಿದೆ. ನೆರೆಯ ಲೆಬನಾನ್ ಮತ್ತು ಮಧ್ಯಪ್ರಾಚ್ಯದ ಇತರ ದೇಶಗಳಿಗೆ ಇಸ್ರೇಲ್-ಹಮಾಸ್ ಯುದ್ಧದ ಸೋರಿಕೆಯನ್ನು ತಡೆಯುವ ಪ್ರಯತ್ನದಲ್ಲಿ US ಮತ್ತು ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕರು ಈ ಪ್ರದೇಶಕ್ಕೆ ಪ್ರತ್ಯೇಕ ಭೇಟಿಗಳನ್ನು ನೀಡಿದ್ದರಿಂದ ಈ ಬೆಳವಣಿಗೆಯು ಸಂಭವಿಸಿದೆ. ಕದನ ವಿರಾಮಕ್ಕಾಗಿ ಅಂತರರಾಷ್ಟ್ರೀಯ ಒತ್ತಡ ಮತ್ತು ಗಾಜಾಕ್ಕೆ ಮಾನವೀಯ ನೆರವನ್ನು ತಳ್ಳುವ ಮಧ್ಯೆ, ಇಸ್ರೇಲ್ ರಕ್ಷಣಾ ಪಡೆಗಳ (IDF) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಅವರು ಗಾಜಾದ ಮಧ್ಯ ಮತ್ತು ದಕ್ಷಿಣ ಭಾಗಗಳಲ್ಲಿ ಹಮಾಸ್‌ನ ಜಾಲವನ್ನು ಕೆಡವಲು ಇದೇ ರೀತಿಯ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ಹೇಳಿದರು. https://kannadanewsnow.com/kannada/4-4-magnitude-quake-jolts-japans-noto-region/ https://kannadanewsnow.com/kannada/aditya-l1-went-as-per-plan-focus-now-on-gaganyaan-isro-chief-somanath-after-solar-mission-success-2/ https://kannadanewsnow.com/kannada/4-4-magnitude-quake-jolts-japans-noto-region/ https://kannadanewsnow.com/kannada/aditya-l1-went-as-per-plan-focus-now-on-gaganyaan-isro-chief-somanath-after-solar-mission-success-2/

Read More

ಟೋಕಿಯೊ: ಜಪಾನ್‌ನ ನೋಟೊ ಪೆನಿನ್ಸುಲಾದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ತಿಳಿಸಿದೆ. ಜಪಾನ್‌ನ ನೋಟೊ ಪೆನಿನ್ಸುಲಾದಲ್ಲಿ ಶನಿವಾರ ರಾತ್ರಿ 11:20ಕ್ಕೆ ಭೂಮೇಲ್ಮೈಯಿಂದ 10 ಕಿಮೀ ಆಳದಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹವಾಮಾನ ಸಂಸ್ಥೆ ಮಾಹಿತಿ ನೀಡಿದೆ. ಭೂಕಂಪದಿಂದಾಗಿ ಇಲ್ಲಿ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿಲ್ಲ. https://kannadanewsnow.com/kannada/aditya-l1-went-as-per-plan-focus-now-on-gaganyaan-isro-chief-somanath-after-solar-mission-success/

Read More

ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ನಡೆದ ಪ್ರಮುಖ ನಿರ್ಧಾರಗಳ ಹೈಲೆಟ್ಸ್‌ ಪಾಯಿಂಟ್ಸ್‌ ಇಲ್ಲಿದೆ. 1) ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023ಕ್ಕೆ ಘಟನೋತ್ತರ ಅನುಮೋದನೆ. 2) ಬಿಬಿಎಂಪಿ ವ್ಯಾಪ್ತಿಯಲ್ಲಿ ರೂ.800 ಕೋಟಿ ಅನುದಾನದಲ್ಲಿ 43 ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೊಳ್ಳುವ ಕ್ರಿಯಾಯೋಜನೆಗೆ ಅನುಮೋದನೆ. 3) 6 ಜಿಲ್ಲೆಗಳಲ್ಲಿ 6 ಬಹುಉತ್ಪನ್ನ ಶೀಥಲ ಗೃಹಗಳನ್ನು ರೂ.65.97 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಆಡಳಿತಾತ್ಮಕ ಅನುಮೋದನೆ. 4) ASCAD ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ರೂ.31 ಕೋಟಿಗಳ ವೆಚ್ಚದಲ್ಲಿ ವಿತರಿಸುವ ಕಾರ್ಯಕ್ರಮಕ್ಕೆ ನಿರ್ಧಾರ. 5) 16ನೇ ಹಣಕಾಸು ಆಯೋಗಕ್ಕೆ ಜ್ಞಾಪನಾ ಪತ್ರವನ್ನು ತಯಾರಿಸಲು ಮೂವರು ಸದಸ್ಯರನ್ನು ಒಳಗೊಂಡ ತಾಂತ್ರಿಕ ಕೋಶ ರಚನೆಗೆ ನಿರ್ಧಾರ. 6) ಹುಲಿಯುಗುರು, ಆನೆ ದಂತ, ಜಿಂಕೆ ಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡ ಯಾವುದೇ…

Read More

ಸುದ್ದಿ ಕೃಪೆ: ಪ್ರಜಾಕಹಳೆ, ಕನ್ನಡ ದಿನ ಪತ್ರಿಕೆ, ತುಮಕೂರು. ಸಂಪಾದಕರು : ರಘು ಎ.ಎನ್‌ ತುಮಕೂರು: ಮದುವೆಯಾಗದ ಯುವತಿ ಗರ್ಭಿಣಿ ಯಾಗಿರುವ ವಿಚಾರ ಮುಚ್ಚಿಟ್ಟು ಸಮಾಜಕ್ಕೆ ಹೆದರಿ ಸ್ವಯಂ ಹೆರಿಗೆ ಮಾಡಿಕೊಂಡು ಹಸುಗೂಸನ್ನು ಬಯ ಲಲ್ಲಿ ಎಸೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ತುಮಕೂರು ತಾಲ್ಲೂಕಿನ ಗೌರೀಪುರ ಗ್ರಾಮದ 25 ವರ್ಷದ ಯುವತಿ, ಅರೇಗುಜ್ಜನಹಳ್ಳಿಯ ಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದಳು ಎನ್ನಲಾಗಿದ್ದು, ಆಕೆ ಗರ್ಭೀಣಿಯಾಗಿರುವ ವಿಚಾರ ಪ್ರಾಥಮಿಕ ಆ ರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ ಕಾರ್ಯಕರ್ತೆ ಸೇರಿದಂತೆ ಮನೆಯಲ್ಲಿದ್ದವರಿಗೂ ಗೊತ್ತಿಲ್ಲ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಪೋಷಕರು ಇಲ್ಲದ ಯುವತಿ ಅರೇಗುಜ್ಜನಹಳ್ಳಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದು, ಯಾ ವಾಗಲೂ ದೊಗಲೆ ಬಟ್ಟೆ ಧರಿಸುವ ಮೂಲಕ ಹೊಟ್ಟೆ ಬಂದಿರುವುದನ್ನು ಕಾಣಿಸದಂತೆ ಮರೆ ಮಾಚುತ್ತಿದ್ದಳು ಎನ್ನಲಾಗಿದ್ದು, ಮಂಗಳವಾರ ರಾತ್ರಿ 10 ಗಂಟೆ ಮನೆ ಯಿಂದ ಹೊರಗೆ ಬಂದು ಸ್ವಯಂ ಹೆರಿಗೆ ಮಾಡಿ ಕೊಂಡು ನಂತರ ಮಗುವನ್ನು ಎಸೆದು ಮನೆಗೆ ತೆರಳಿ ಸ್ನಾನ ಮಾಡಿಕೊಂಡಿದ್ದಾಳೆ.…

Read More

ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಗಂಭೀರ ಆರೋಪ ಬೆಂಗಳೂರು: ರಾಮಮಂದಿರ ಉದ್ಘಾಟನೆ ದಿನ ರಾಜ್ಯಾದ್ಯಂತ ವಿದ್ಯುತ್ ಸ್ಥಗಿತ ಮಾಡಲಿದೆ ಅಂಥ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಗಂಭೀರ ಆರೋಪವನ್ನು ಮಾಡಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ ಪ್ರಭು ಶ್ರೀರಾಮ ಮಂದಿರದ ಉದ್ಘಾಟನೆ ಜನವರಿ 22 ರಂದು ಅದ್ಧೂರಿಯಾಗಿ ಆಗುತ್ತಿದೆ. ಇಡೀ ದೇಶವೇ ಸಂಭ್ರಮದಲ್ಲಿರುವಾಗ, ಕರ್ನಾಟಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸಂಭ್ರಮವನ್ನು ಕೆಡಿಸಲು ಹೆಣಿಯುತ್ತಿರುವ ಕುತಂತ್ರಗಳು: ▪️ಅಯೋಧ್ಯಗೆ ಹೋಗುವವರಿಗೆ ಗೋಧ್ರಾ ಬೆದರಿಕೆ ▪️ಶುಭ ಘಳಿಗೆ ವೇಳೆ ಸುಳ್ಳು ಸುದ್ಧಿ ಹಬ್ಬಿಸುವುದು ▪️ರಾಮ ಭಕ್ತರು ಸಂಭ್ರಮಿಸದಂತೆ 144 ಸೆಕ್ಷನ್‌ ಜಾರಿ ▪️ರಾಜ್ಯಾದ್ಯಂತ 22 ರಂದು ವಿದ್ಯುತ್‌ ಸ್ಥಗಿತ ▪️ಮನೆ ಮನೆಯ ಟಿವಿ ಕೇಬಲ್‌ ಸಂಪರ್ಕ ತಪ್ಪಿಸುವುದು ರಾಮ ಬಂಟ ಹನುಮನ ನಾಡಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ದುರಾಡಳಿತಕ್ಕೆ, ಕುತಂತ್ರಕ್ಕೆ, ರಾಜ್ಯದ ಜನರು ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠಕಲಿಸಲಿರುವುದು ಅಷ್ಟೇ ಸತ್ಯ! ಅಂಥ…

Read More

ಬೆಂಗಳೂರು: ದಶಕಗಳ ಕಾಲ ಜಾತ್ಯತೀತತೆ ಕಿರೀಟ ಹೊತ್ತಿದ್ದ ಗೌಡರು ಇಳಿ ವಯಸ್ಸಿನಲ್ಲಿ ಕೋಮುವಾದ ಕಿರೀಟ ಧರಿಸಿರುವುದು ಸಂಘ ದೋಷದ ಫಲ ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅವರು ಈ ಬಗ್ಗೆ ಟ್ವಿಟ್‌ ಮಾಡಿದ್ದು, ಅದರಲ್ಲಿ ಅವರ ರಾಜಕೀಯ ಭಿನ್ನಾಭಿಪ್ರಾಯ ಏನೇ ಇರಲಿ, ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡಬೇಕು, ಶಾಪ ಕೊಡಬಾರದು. ದಶಕಗಳ ಕಾಲ ಜಾತ್ಯತೀತತೆಯ ಕಿರೀಟ ಧರಿಸಿಕೊಂಡು ಬಂದಿದ್ದ ಗೌಡರು ಇಳಿಗಾಲದಲ್ಲಿ ಅದನ್ನು ಕೆಳಗೆಸೆದು ಕೋಮುವಾದಿ ಕಿರೀಟವನ್ನು ಧರಿಸಿಕೊಳ್ಳಬೇಕಾಗಿ ಬಂದಿರುವುದರಿಂದ ನೊಂದು ಹತಾಶೆಯಿಂದ ಇಂತಹ ಹೇಳಿಕೆ ನೀಡಿರಬಹುದೆಂದು ಭಾವಿಸಿದ್ದೇನೆ. ತಾವು ಹೇಳಿದ್ದು ತಪ್ಪು ಎಂದು ಅವರಿಗೆ ಪ್ರಾಮಾಣಿಕವಾಗಿ ಅನುಸರಿಸಿದರೆ ತಮ್ಮ ಹೇಳಿಕೆಯನ್ನು ಹಿಂದಕ್ಕೆ ಪಡೆಯಬಹುದು . ನನ್ನ ಮತ್ತು ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಅಂತ್ಯವಾಗಲಿದೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು ಯಾವ ರಾಜಕೀಯ ಪಕ್ಷ ಕೂಡಾ ಮತ್ತೊಂದು ರಾಜಕೀಯ ಪಕ್ಷದ ಅಂತ್ಯವನ್ನು ಬಯಸಬಾರದು. “ದೇಶವನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆ” ಎಂಬ ಸೊಕ್ಕಿನ ಮಾತುಗಳನ್ನು ಆಡುತ್ತಿರುವ ಬಿಜೆಪಿಯ…

Read More

ಜುಂಟಾ ಪಡೆಗಳೊಂದಿಗೆ ವಾರಗಳ ತೀವ್ರ ಹೋರಾಟದ ನಂತರ ಮ್ಯಾನ್ಮಾರ್ ಬಂಡುಕೋರ ಮೈತ್ರಿ ಗುಂಪು ಚೀನಾದೊಂದಿಗಿನ ದೇಶದ ಬಾಷ್ಪಶೀಲ ಉತ್ತರದ ಗಡಿಯುದ್ದಕ್ಕೂ ಪ್ರಮುಖ ಪಟ್ಟಣದ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಶುಕ್ರವಾರ ತಡವಾಗಿ ಹೇಳಿಕೆಯಲ್ಲಿ ತಿಳಿಸಿದೆ. “ಮೂರು ಬ್ರದರ್‌ಹುಡ್ ಅಲೈಯನ್ಸ್” ಗುಂಪು ತಿಳಿದಿರುವಂತೆ, ಅಲ್ಲಿ ನೆಲೆಗೊಂಡಿರುವ ಮಿಲಿಟರಿಯ ಪ್ರಾದೇಶಿಕ ಪ್ರಧಾನ ಕಛೇರಿಯು ಶರಣಾದ ನಂತರ ಲೌಕೈ ಪಟ್ಟಣವನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು. ಲೌಕೈ ಪತನವು ಅಕ್ಟೋಬರ್‌ನಲ್ಲಿ ಪ್ರಾರಂಭವಾದ ಬಂಡಾಯ ಗುಂಪುಗಳ ಮೈತ್ರಿಯಿಂದ ವ್ಯಾಪಕವಾದ ಆಕ್ರಮಣದಲ್ಲಿ ಇತ್ತೀಚಿನ ವಿಜಯವಾಗಿದೆ ಮತ್ತು 2021 ರ ದಂಗೆಯಲ್ಲಿ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರಕ್ಕೆ ಅತ್ಯಂತ ಮಹತ್ವದ ಬೆದರಿಕೆಯಾಗಿದೆ. “ಎಲ್ಲಾ ಕೊಕಾಂಗ್ (ಲೌಕ್ಕೈ) ಪ್ರದೇಶವು ಮ್ಯಾನ್ಮಾರ್ ಮಿಲಿಟರಿ ಕೌನ್ಸಿಲ್ ಇಲ್ಲದ ಭೂಮಿಯಾಗಿ ಮಾರ್ಪಟ್ಟಿದೆ” ಎಂದು ಹೇಳಿಕೆ ತಿಳಿಸಿದೆ. ಈ ಮೈತ್ರಿಯು ಮ್ಯಾನ್ಮಾರ್ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ ಆರ್ಮಿ (ಎಂಎನ್‌ಡಿಎಎ), ತಾಂಗ್ ನ್ಯಾಶನಲ್ ಲಿಬರೇಶನ್ ಆರ್ಮಿ (ಟಿಎನ್‌ಎಲ್‌ಎ) ಮತ್ತು ಅರಾಕನ್ ಆರ್ಮಿ (ಎಎ) ವ್ಯಾಪಕ ಹೋರಾಟದ ಅನುಭವದೊಂದಿಗೆ ಮೂರು…

Read More

ಉತ್ತರ ಕನ್ನಡ : ಮದ್ಯಪಾನಪ್ರಿಯರರ ಜೊತೆಗೆ ಹಾಸ್ಟೆಲ್‌ ವಿದ್ಯಾರ್ಥಿಗಳು ಕೀಟಲೆ ಮಾಡಿ ಕೊಂಡ ನಂತರ ಇಬ್ಬರ ನಡುವೆ ಹೊಡೆದಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೆಟ್ರಿಕ್‌ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯದಲ್ಲಿ ನಡೆದಿದೆ. ಮದ್ಯಪ್ರಿಯರನ್ನು ಹಾಸ್ಟೆಲ್‌ ಹುಡುಗುರು ಕಿಚಾಯಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಇದನ್ನೇ ನೆಪಾಗಿಇಟ್ಟುಕೊಂಡು ದಂಡುಕಟ್ಟಿಕೊಂಡು ಮದ್ಯಪ್ರಿಯರು ಹಾಸ್ಟೆಲ್‌ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಹಾಸ್ಟೆಲ್‌ ನಲ್ಲಿರುವ ವಸ್ತುಗಳನ್ನು ಚೆಲ್ಲಪಿಲ್ಲಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ನಡುವೆ ಘಟನೆಯಲ್ಲಿ ಹಾಸ್ಟೆಲ್‌ ವಿದ್ಯಾರ್ಥಿಯೊಬ್ಬನಿಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ನಿಲಯ ಪಾಲಕ ನಾಗೇಂದ್ರ ಅವರು ದೂರು ನೀಡಿರುವ ಹಿನ್ನಲೆಯಲ್ಲಿ ಮದ್ಯಪ್ರಿಯರಾದ ರಾಘವೇಂದ್ರ ಹಾಗೂ ನಂದನ್‌ ಎಂಬುವರನ್ನು ಶಹರ ಪೊಲೀಸರು ಬಂಧಿಸಿದ್ದಾರೆ ಅಂತ ತಿಳಿದು ಬಂದಿದೆ. ಇದಲ್ಲದೇ ಹಾಸ್ಟೆಲ್‌ ತುಂಬಾ ರಕ್ತ ಕಂಡು ಹರಡಿದ್ದು, ಘಟನೆಯ ಭಿಭಸ್ಸವನ್ನು ತೋರಿಸುತ್ತಿದೆ.

Read More

ನವದೆಹಲಿ: ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಸೇವೆಗಳಿಗೆ ಯುಪಿಐ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸುವ ಬ್ಯಾಂಕಿಂಗ್ ನಿಯಂತ್ರಕರ ನಿರ್ಧಾರವನ್ನು ಜನವರಿ 10 ರೊಳಗೆ ಅನುಸರಿಸುವಂತೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಸದಸ್ಯರಿಗೆ ನಿರ್ದೇಶನ ನೀಡಿದೆ ಎಂದು ಖಾಸಗಿ ಮಾಧ್ಯಮ ವರದಿ ಮಾಡಿದೆ. ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ನಿರ್ದಿಷ್ಟ ವ್ಯಾಪಾರಿ ವರ್ಗಗಳಿಗೆ ವಹಿವಾಟು ಮಿತಿಗಳನ್ನು ಹೆಚ್ಚಿಸಲು NPCI ಬ್ಯಾಂಕುಗಳು, ಪಾವತಿ ಸೇವಾ ಪೂರೈಕೆದಾರರು (PSPs)ಮತ್ತು UPI ಅಪ್ಲಿಕೇಶನ್ಗಳಿಗೆ ಸೂಚನೆ ನೀಡಿದೆ. NPCI ಹೊರಡಿಸಿದ ಅಧಿಸೂಚನೆಯ ಪ್ರಕಾರ, ಯುಪಿಐ ಬಳಕೆದಾರರು 2024ರ ಜನವರಿ 10ರಿಂದ 5 ಲಕ್ಷ ರೂ. ವರೆಗೆ ಯುಪಿಐ ಪಾವತಿ ಮಾಡಬಹುದು. ಇದಕ್ಕಾಗಿ, NPCI ಎಲ್ಲಾ ಬ್ಯಾಂಕ್‌ಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು API ಅಪ್ಲಿಕೇಶನ್‌ಗಳಿಗೆ ಈ ಸೇವೆಯನ್ನು ಒದಗಿಸಲು ಆದೇಶಿಸಿದೆ. 2023 ರಲ್ಲಿ ಯುಪಿಐ ವಹಿವಾಟಿನ ಒಟ್ಟು ಮೌಲ್ಯವು ಸರಿಸುಮಾರು 182 ಲಕ್ಷ ಕೋಟಿ ರೂ.ಗಳಷ್ಟಿದ್ದು, 2022 ರಲ್ಲಿ 126 ಲಕ್ಷ ಕೋಟಿ ರೂ.ಗೆ ಹೋಲಿಸಿದರೆ ಶೇಕಡಾ…

Read More