Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

M.Sc ನರ್ಸಿಂಗ್ ಸೇರಿ ಹಲವು ಕೋರ್ಸುಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆ: ಇಚ್ಛೆ/ಆಯ್ಕೆ ಬದಲಿಸಲು ಅ.30 ಲಾಸ್ಟ್ ಡೇಟ್

29/10/2025 8:11 PM

‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ಮಾರ್ಗದಲ್ಲಿ ‘ರೈಲುಗಳ ಸಂಚಾರ’ ಪುನರಾರಂಭ

29/10/2025 7:54 PM

BREAKING: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

29/10/2025 7:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ಮಾರ್ಗದಲ್ಲಿ ‘ರೈಲುಗಳ ಸಂಚಾರ’ ಪುನರಾರಂಭ
KARNATAKA

‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ಮಾರ್ಗದಲ್ಲಿ ‘ರೈಲುಗಳ ಸಂಚಾರ’ ಪುನರಾರಂಭ

By kannadanewsnow0929/10/2025 7:54 PM

ಮೈಸೂರು: ಮೈಸೂರು ನ್ಯೂ ಗೂಡ್ಸ್ ಟರ್ಮಿನಲ್ ಮತ್ತು ನಾಗನಹಳ್ಳಿ ನಡುವೆ ರಸ್ತೆ ಕೆಳಸೇತುವೆ ಕಾಮಗಾರಿಗಾಗಿ ಲೈನ್ ಬ್ಲಾಕ್ ಲಭ್ಯವಿಲ್ಲದ ಕಾರಣ, ಈ ಹಿಂದೆ ಮರುನಿಗದಿಪಡಿಸಲಾದ, ನಿಯಂತ್ರಿಸಲಾದ ಹಾಗೂ ಭಾಗಶಃ ರದ್ದುಗೊಳಿಸಲಾದ ಕೆಳಗಿನ ರೈಲು ಸೇವೆಗಳು ಎಂದಿನಂತೆ ಅದೇ ಮಾರ್ಗ ಮತ್ತು ಸಮಯದಲ್ಲಿ ಪುನರಾರಂಭ ಆಗಲಿವೆ.

ರೈಲು ಸಂಖ್ಯೆ. 66579 ಕೆ.ಎಸ್.ಆರ್. ಬೆಂಗಳೂರು – ಅಶೋಕಪುರಂ ಮೆಮೂ ಮತ್ತು ರೈಲು ಸಂಖ್ಯೆ. 66554 ಅಶೋಕಪುರಂ – ಕೆ.ಎಸ್.ಆರ್. ಬೆಂಗಳೂರು ಮೆಮೂ, ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಈ ಹಿಂದೆ ಭಾಗಶಃ ರದ್ದುಗೊಳಿಸಲಾಗಿತ್ತು, ಈಗ ಅದೇ ಮಾರ್ಗದಲ್ಲಿ ಮತ್ತು ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.

ರೈಲು ಸಂಖ್ಯೆ. 16552 ಅಶೋಕಪುರಂ – ಎಂ.ಜಿ.ಆರ್. ಚೆನ್ನೈ ಸೆಂಟ್ರಲ್ ಎಕ್ಸಪ್ರೆಸ್, ಈ ಹಿಂದೆ ದಿನಾಂಕ 29, 31 ಅಕ್ಟೋಬರ್, 19, 21, 26, 28 ನವೆಂಬರ್ ಮತ್ತು 17, 19 ಡಿಸೆಂಬರ್ 2025 ರಂದು ಅಶೋಕಪುರಂನಿಂದ 40 ನಿಮಿಷಗಳ ಮರುನಿಗದಿಪಡಿಸಲಾಗಿತ್ತು, ಈಗ ಈ ರೈಲು ಅಶೋಕಪುರಂನಿಂದ 29 ಮತ್ತು 31 ಅಕ್ಟೋಬರ್ 2025 ರಂದು ಮಾತ್ರ 40 ನಿಮಿಷಗಳ ಮರುನಿಗದಿಯೊಂದಿಗೆ ಸಂಚರಿಸುತ್ತದೆ.

ರೈಲು ಸಂಖ್ಯೆ. 16586 ಮುರ್ಡೇಶ್ವರ – ಕೆ.ಎಸ್.ಆರ್. ಬೆಂಗಳೂರು ಎಕ್ಸಪ್ರೆಸ್ ಮತ್ತು ರೈಲು ಸಂಖ್ಯೆ. 06270 ಎಸ್.ಎಂ.ವಿ.ಟಿ. ಬೆಂಗಳೂರು – ಮೈಸೂರು ಪ್ಯಾಸೆಂಜರ್ ರೈಲು, ಈ ಹಿಂದೆ 28, 30 ಅಕ್ಟೋಬರ್, 18, 20, 25, 27 ನವೆಂಬರ್ ಮತ್ತು 16, 18 ಡಿಸೆಂಬರ್ 2025 ರಂದು ನಿಯಂತ್ರಿಸಲಾಗಿತ್ತು, ಇದೀಗ ಇವುಗಳು ಅದೇ ಮಾರ್ಗದಲ್ಲಿ ಮತ್ತು ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.

ವಿಶೇಷ ರೈಲು ಸೇವೆಗಳ ಪುನರಾರಂಭ

ಕಡಿಮೆ ಪ್ರಯಾಣಿಕರ ದಟ್ಟಣೆಯ ಕಾರಣದಿಂದಾಗಿ ಈ ಹಿಂದೆ ರದ್ದುಗೊಳಿಸಲಾಗಿದ್ದ ಕೆಳಕಂಡ ವಿಶೇಷ ರೈಲು ಸೇವೆಗಳನ್ನು, ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು, ಪುನಃ ಆರಂಭಿಸಲು ನಿರ್ಧರಿಸಲಾಗಿದೆ. ಈ ರೈಲುಗಳು ತಮ್ಮ ಮೂಲ ವೇಳಾಪಟ್ಟಿಯ ಪ್ರಕಾರವೇ ಸಂಚರಿಸಲಿವೆ.

1. ರೈಲು ಸಂಖ್ಯೆ 06243 ಮೈಸೂರು-ಕರೈಕುಡಿ ವಿಶೇಷ ಎಕ್ಸಪ್ರೆಸ್ ರೈಲು ನವೆಂಬರ್ 8, 2025 ರಂದು ತನ್ನ ಸೇವೆಯನ್ನು ಪುನರಾರಂಭಿಸಲಿದೆ ಮತ್ತು ಮೂಲ ವೇಳಾಪಟ್ಟಿಯಂತೆ ಸಂಚರಿಸಲಿದೆ.

2. ರೈಲು ಸಂಖ್ಯೆ 06244 ಕರೈಕುಡಿ-ಮೈಸೂರು ವಿಶೇಷ ಎಕ್ಸಪ್ರೆಸ್ ರೈಲು ನವೆಂಬರ್ 9, 2025 ರಂದು ತನ್ನ ಸಂಚಾರವನ್ನು ಪುನಃ ಆರಂಭಿಸಲಿದೆ.

BREAKING: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!

Share. Facebook Twitter LinkedIn WhatsApp Email

Related Posts

M.Sc ನರ್ಸಿಂಗ್ ಸೇರಿ ಹಲವು ಕೋರ್ಸುಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆ: ಇಚ್ಛೆ/ಆಯ್ಕೆ ಬದಲಿಸಲು ಅ.30 ಲಾಸ್ಟ್ ಡೇಟ್

29/10/2025 8:11 PM1 Min Read

BREAKING: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

29/10/2025 7:38 PM2 Mins Read

‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶ: ರೈತ ಮುಖಂಡ ದಿನೇಶ್ ಶಿರವಾಳ

29/10/2025 7:33 PM2 Mins Read
Recent News

M.Sc ನರ್ಸಿಂಗ್ ಸೇರಿ ಹಲವು ಕೋರ್ಸುಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆ: ಇಚ್ಛೆ/ಆಯ್ಕೆ ಬದಲಿಸಲು ಅ.30 ಲಾಸ್ಟ್ ಡೇಟ್

29/10/2025 8:11 PM

‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ಮಾರ್ಗದಲ್ಲಿ ‘ರೈಲುಗಳ ಸಂಚಾರ’ ಪುನರಾರಂಭ

29/10/2025 7:54 PM

BREAKING: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

29/10/2025 7:38 PM

BREAKING : ‘Nvidia’ ಇತಿಹಾಸ ನಿರ್ಮಾಣ ; ‘5 ಟ್ರಿಲಿಯನ್’ ಮಾರುಕಟ್ಟೆ ಮೌಲ್ಯ ತಲುಪಿದ ಮೊದಲ ಕಂಪನಿ ಹೆಗ್ಗಳಿಕೆ

29/10/2025 7:33 PM
State News
KARNATAKA

M.Sc ನರ್ಸಿಂಗ್ ಸೇರಿ ಹಲವು ಕೋರ್ಸುಗಳಿಗೆ 2ನೇ ಸುತ್ತಿನ ಸೀಟು ಹಂಚಿಕೆ: ಇಚ್ಛೆ/ಆಯ್ಕೆ ಬದಲಿಸಲು ಅ.30 ಲಾಸ್ಟ್ ಡೇಟ್

By kannadanewsnow0929/10/2025 8:11 PM KARNATAKA 1 Min Read

ಬೆಂಗಳೂರು: ಎಂ.ಎಸ್ಸಿ. (ನರ್ಸಿಂಗ್). ಎಂಪಿಟಿ, ಎಂ.ಎಸ್ಸಿ. ಎ.ಎಚ್.ಎಸ್., ಪಿಬಿ ಬಿ.ಎಸ್ಸಿ. (ನರ್ಸಿಂಗ್). ಬಿ.ಎಸ್ಸಿ. ಎ.ಎಚ್.ಎಸ್. (ಲ್ಯಾಟರಲ್ ಎಂಟ್ರಿ) ಕೋರ್ಸುಗಳ ಪ್ರವೇಶಕ್ಕೆ…

‘ರೈಲ್ವೆ ಪ್ರಯಾಣಿಕ’ರ ಗಮನಕ್ಕೆ: ಈ ಮಾರ್ಗದಲ್ಲಿ ‘ರೈಲುಗಳ ಸಂಚಾರ’ ಪುನರಾರಂಭ

29/10/2025 7:54 PM

BREAKING: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(KUWJ) ರಾಜ್ಯಾಧ್ಯಕ್ಷರಾಗಿ ಶಿವಾನಂದ ತಗಡೂರು ಪುನರಾಯ್ಕೆ

29/10/2025 7:38 PM

‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶ: ರೈತ ಮುಖಂಡ ದಿನೇಶ್ ಶಿರವಾಳ

29/10/2025 7:33 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.