Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಿಂಧೂ ನೀರು ಒಪ್ಪಂದ ಅಮಾನತು ‘ಅನ್ಯಾಯ’, ‘ಯುದ್ಧದ ಕೃತ್ಯ’: ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಷರೀಫ್ ಎಚ್ಚರಿಕೆ

27/09/2025 6:54 AM

ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಯತ್ನ : ಅಪರಾಧಿಗಳಿಗೆ ತಲಾ 2 ವರ್ಷ ಜೈಲು, 24 ಸಾವಿರ ರೂ.ದಂಡ.!

27/09/2025 6:49 AM

ಅಕ್ಸೆಂಚರ್ ಉದ್ಯೋಗಿಗಳಿಗೆ ಬಿಗ್ ಶಾಕ್: 3 ತಿಂಗಳಲ್ಲಿ 11,000 ಕ್ಕೂ ಹೆಚ್ಚು ಉದ್ಯೋಗ ಕಡಿತ | Accenture Cuts Jobs

27/09/2025 6:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಯತ್ನ : ಅಪರಾಧಿಗಳಿಗೆ ತಲಾ 2 ವರ್ಷ ಜೈಲು, 24 ಸಾವಿರ ರೂ.ದಂಡ.!
KARNATAKA

ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಯತ್ನ : ಅಪರಾಧಿಗಳಿಗೆ ತಲಾ 2 ವರ್ಷ ಜೈಲು, 24 ಸಾವಿರ ರೂ.ದಂಡ.!

By kannadanewsnow5727/09/2025 6:49 AM

ಕೊಪ್ಪಳ : ಗಂಗಾವತಿ ನಗರದ ಶಾದಿಮಹಲ್‌ನಲ್ಲಿ ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳಿಗೆ ತಲಾ 2 ವರ್ಷಗಳ ಸೆರೆಮನೆ ವಾಸದ ಶಿಕ್ಷೆಯೊಂದಿಗೆ ರೂ.24,000/- ಗಳ ದಂಡವನ್ನು ವಿಧಿಸಿ ಗಂಗಾವತಿಯ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ನಾಗೇಶ ಪಾಟೀಲ ಅವರು ಸೆಪ್ಟೆಂಬರ್ 22 ರಂದು ತೀರ್ಪು ಪ್ರಕಟಿಸಿದ್ದಾರೆ.

ಗಂಗಾವತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2017 ರ ಏಪ್ರಿಲ್ 2 ರಂದು ಮುಂಜಾನೆ 11 ರಿಂದ 11.30 ಗಂಟೆಯ ಅವಧಿಯಲ್ಲಿ ಗಂಗಾವತಿಯ ಲಕ್ಷ್ಮೀ ಕ್ಯಾಂಪ್‌ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಅಪ್ರಾಪ್ತ ಬಾಲಕಿಗೆ 18 ವರ್ಷ ಪೂರ್ಣಗೊಂಡಿವೆ ಎಂದು ನೀಡಿದ ಖೊಟ್ಟಿ ವರ್ಗಾವಣೆ ಪ್ರಮಾಣ ಪತ್ರ ನೀಡಿ ಆರೋಪಿತರಾದ ಎ-1 ಮಕ್ಬಲ್ ಖಾದ್ರಿ ಹಾಗೂ ಎ-2 ಕುಸುಂಬಿ ಎಂಬುವವರು ತಮ್ಮ ಅಪ್ರಾಪ್ತ ಮಗಳಾದ ಆಶಾಳ ಮದುವೆಯನ್ನು ಎ-3 ಸೈಯದ್ ಖಾಜಾಪಾಷಾ ಎಂಬ ವ್ಯಕ್ತಿಯೊಂದಿಗೆ ಎ-4 ಸೈಯದ್ ಮೈನುದ್ದೀನ್ ಖಾದ್ರಿ ಮತ್ತು ಎ-5 ಖಾತುಬೀ ಅವರು ಗಂಗಾವತಿ ನಗರದ ಶಾದಿಮಹಲ್‌ನಲ್ಲಿ ಮದುವೆ ಮಾಡಲು ನಿಶ್ಚಯಿಸಿದ್ದರು. ಈ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 10, 11 ಮತ್ತು ಐಪಿಸಿ ಕಲಂ 465 ಹಾಗೂ ಐಪಿಸಿ ಕಲಂ 471 ರಡಿ ಪ್ರಕರಣ ದಾಖಲಾಗಿತ್ತು.

ಆಗಿನ ತನಿಖಾಧಿಕಾರಿಯಾಗಿದ್ದ ಗುಲಾಮ್ ಅಹ್ಮದ್ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗಳ ಮೇಲಿನ ಆರೋಪಗಳು ಸಾಕ್ಷ್ಯಾಧಾರಗಳಿಂದ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗಳೆಂದು ನಿರ್ಣಯಿಸಿ ಅಪರಾಧಿಗಳಿಗೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 10 ಅಪರಾಧಕ್ಕೆ 2 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ಹಾಗೂ ತಲಾ ರೂ.10 ಸಾವಿರಗಳ ಜುಲ್ಮಾನೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ ಕಲಂ 11 ಅಪರಾಧಕ್ಕೆ 2 ವರ್ಷಗಳ ಸೆರೆಮನೆ ವಾಸದ ಶಿಕ್ಷೆ ಹಾಗೂ ತಲಾ ರೂ.10 ಸಾವಿರಗಳ ಜುಲ್ಮಾನೆ, ಭಾರತೀಯ ದಂಡ ಸಂಹಿತೆ ಕಲಂ 465 ಅಪರಾಧಕ್ಕೆ 6 ತಿಂಗಳು ಸೆರೆವಾಸ ಹಾಗೂ ರೂ.2,000/- ಗಳ ಜುಲ್ಮಾನೆ ಮತ್ತು ಭಾರತೀಯ ದಂಡ ಸಂಹಿತೆ ಕಲಂ 471 ಅಪರಾಧಕ್ಕೆ 6 ತಿಂಗಳು ಸೆರೆವಾಸ ಮತ್ತು ರೂ.2,000/- ಗಳ ದಂಡವನ್ನು ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ನಿರಂಜನ ಸ್ವಾಮಿ ದೇವಯ್ಯ ಸ್ವಾಮಿ ಹಿರೇಮಠ ಅವರು ವಾದ ಮಂಡಿಸಿದ್ದರು. ಗಂಗಾವತಿ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಎಚ್.ಸಿ. ಶುಭಾಷ, ಪಿಸಿ-294 ಯಮನೂರಪ್ಪ, ಪಿಸಿ-97 ಭೀಮಣ್ಣ, ಪಿಸಿ-601 ಯಲ್ಲರೆಡ್ಡಿ ಅವರು ವಿಚಾರಣೆ ಸಂದರ್ಭ ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಸಾಕ್ಷಿಗಳನ್ನು ಹಾಜರು ಪಡಿಸಿ, ಸಹಕರಿಸಿದ್ದಾರೆ ಎಂದು ಗಂಗಾವತಿಯ ಸಹಾಯಕ ಸರ್ಕಾರಿ ಅಭಿಯೋಜಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

000 fine for the culprits! Attempt to marry a minor girl using false documents: 2 years in prison and Rs. 24
Share. Facebook Twitter LinkedIn WhatsApp Email

Related Posts

ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ `ಸರ್ಕಾರಿ ನೌಕರರಿಗೆ’ ಬಡ್ತಿಯಲ್ಲಿ ಮೀಸಲಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

27/09/2025 6:38 AM1 Min Read

ಹೊಸ `BPL’ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ : ಮುಂದಿನ ತಿಂಗಳಿನಿಂದ ಅರ್ಜಿ ಸಲ್ಲಿಕೆ, ವಿತರಣೆ ಆರಂಭ.!

27/09/2025 6:27 AM1 Min Read

ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಕೈಗೊಳ್ಳುವ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಿ ಸರ್ಕಾರ ಆದೇಶ

27/09/2025 6:12 AM2 Mins Read
Recent News

ಸಿಂಧೂ ನೀರು ಒಪ್ಪಂದ ಅಮಾನತು ‘ಅನ್ಯಾಯ’, ‘ಯುದ್ಧದ ಕೃತ್ಯ’: ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಷರೀಫ್ ಎಚ್ಚರಿಕೆ

27/09/2025 6:54 AM

ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಯತ್ನ : ಅಪರಾಧಿಗಳಿಗೆ ತಲಾ 2 ವರ್ಷ ಜೈಲು, 24 ಸಾವಿರ ರೂ.ದಂಡ.!

27/09/2025 6:49 AM

ಅಕ್ಸೆಂಚರ್ ಉದ್ಯೋಗಿಗಳಿಗೆ ಬಿಗ್ ಶಾಕ್: 3 ತಿಂಗಳಲ್ಲಿ 11,000 ಕ್ಕೂ ಹೆಚ್ಚು ಉದ್ಯೋಗ ಕಡಿತ | Accenture Cuts Jobs

27/09/2025 6:41 AM

ತಿರುಪತಿ ‘ಕಲಬೆರಕೆ ತುಪ್ಪ’ ಪ್ರಕರಣ: CBI ನಿರ್ದೇಶಕರನ್ನು ದೋಷಾರೋಪಣೆ ಮಾಡಿದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ

27/09/2025 6:40 AM
State News
KARNATAKA

ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹಕ್ಕೆ ಯತ್ನ : ಅಪರಾಧಿಗಳಿಗೆ ತಲಾ 2 ವರ್ಷ ಜೈಲು, 24 ಸಾವಿರ ರೂ.ದಂಡ.!

By kannadanewsnow5727/09/2025 6:49 AM KARNATAKA 2 Mins Read

ಕೊಪ್ಪಳ : ಗಂಗಾವತಿ ನಗರದ ಶಾದಿಮಹಲ್‌ನಲ್ಲಿ ಸುಳ್ಳು ದಾಖಲೆಗಳ ಮೂಲಕ ಅಪ್ರಾಪ್ತ ಬಾಲಕಿಯ ವಿವಾಹ ಮಾಡಲು ಪ್ರಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳ…

ಎದ್ದು ಕಾಣುವ ಅಂಗವೈಕಲ್ಯವನ್ನುಳ್ಳ `ಸರ್ಕಾರಿ ನೌಕರರಿಗೆ’ ಬಡ್ತಿಯಲ್ಲಿ ಮೀಸಲಾತಿ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

27/09/2025 6:38 AM

ಹೊಸ `BPL’ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್ : ಮುಂದಿನ ತಿಂಗಳಿನಿಂದ ಅರ್ಜಿ ಸಲ್ಲಿಕೆ, ವಿತರಣೆ ಆರಂಭ.!

27/09/2025 6:27 AM

ರಾಜ್ಯದಲ್ಲಿ ಜಾತಿಗಣತಿ ಸಮೀಕ್ಷೆ ಕೈಗೊಳ್ಳುವ ಶಿಕ್ಷಕರಿಗೆ ಗೌರವಧನ ಬಿಡುಗಡೆ ಮಾಡಿ ಸರ್ಕಾರ ಆದೇಶ

27/09/2025 6:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.