Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Shocking: ವಿಯೆಟ್ನಾಂ ಆಹಾರ ಹಗರಣ: ಪಶು ಆಹಾರದ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಮಾರಾಟ | Vietnam Food Scam

29/06/2025 9:32 PM

F1 ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್-2025 ಗೆದ್ದ ಲ್ಯಾಂಡೊ ನಾರ್ರಿಸ್ | F1 Austrian Grand Prix 2025

29/06/2025 9:25 PM

ಕ್ಯಾಬಿನ್ ಒಳಗೆ ತಾಪಮಾನ ಹೆಚ್ಚಾಗಿದ್ದರಿಂದ ಏರ್ ಇಂಡಿಯಾ ವಿಮಾನ ಕೋಲ್ಕತ್ತದಲ್ಲಿ ಸೇಫ್ ಲ್ಯಾಂಡಿಂಗ್

29/06/2025 9:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದಲ್ಲಿ 18,32,787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
KARNATAKA

ರಾಜ್ಯದಲ್ಲಿ 18,32,787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

By kannadanewsnow0715/02/2024 7:37 AM

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ, 2023ರ ಆಗಸ್ಟ್ 18 ರಿಂದ- 2024ರ ಫೆಬ್ರವರಿ 12ರ ವರೆಗೆ 18,32,787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದ್ದಾರೆ.

ವಿಧಾನ ಪರಿಷತ್ತು ಕಾರ್ಯಕಲಾಪದ ವೇಳೆ ಶಾಸಕ ಮಧು ಜಿ. ಮಾದೇಗೌಡ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ನೋಂದಣಿ ಆಗಿರುವ ವಾಹನಗಳ ಸಂಖ್ಯೆ ಎಷ್ಟು ಹಾಗೂ ಇಲ್ಲಿಯವರೆಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಆಳವಡಿಸಿಕೊಂಡಿರುವ ವಾಹಗಳ ಸಂಖ್ಯೆ ಮತ್ತು ಇದರ ಶೇಕಡವಾರು ಪ್ರಮಾಣ ಎಷ್ಟು ಎಂದ ಪ್ರಶ್ನೆಗೆ ಉತ್ತರಿಸುವ ಸಂದರ್ಭದಲ್ಲಿ ಸಚಿವರು ತಿಳಿಸಿದರು.

ಕೇಂದ್ರ ಸರ್ಕಾರದ ಆದೇಶದಂತೆ, ಎಲ್ಲಾ ರಾಜ್ಯಗಳಲ್ಲಿಯೂ ಅತಿ ಸುರಕ್ಷತಾ ನೋಂದಣಿ ಫಲಕಗಳನ್ನು ಅಳವಡಿಸಲಾಗುತ್ತಿದ್ದು, ಅದೇ ರೀತಿಯಾಗಿ ರಾಜ್ಯದಲ್ಲಿಯೂ ಸಹ ಫಲಕಗಳನ್ನು ಅಳವಡಿಸಲು ಆದೇಶಿಸಲಾಗಿದ್ದು, ರಾಜ್ಯದಲ್ಲಿ ಏಪ್ರಿಲ್ 2019ಕ್ಕಿಂತ ಮೊದಲು ಅಂದಾಜು 2.45 ಕೋಟಿ ವಾಹನಗಳು ನೋಂದಣಿಯಾಗಿದ್ದು, ಸುಮಾರು 2 ಕೋಟಿ ವಾಹನಗಳು ಅಸ್ತಿತ್ವದಲ್ಲಿವೆ ಹಾಗೂ ಇಲ್ಲಿಯವರೆಗೆ ಶೇ.9.16% ಪ್ರಮಾಣದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ ಎಂದು ಹೇಳಿದರು.

ವಾಹನಗಳಿಗೆ ಹೆಚ್.ಎಸ್.ಅರ್.ಪಿ ಅಳವಡಿಸುವ ಸಂಬಂಧ ಪಾರದರ್ಶಕತೆ ಮತ್ತು ಹೆಚ್ಚುವರಿ ಶುಲ್ಕ ವಿಧಿಸುವುದನ್ನು ತಡೆಗಟ್ಟಲು ಒಇಎಮ್ ಗಳ ಅಧಿಕೃತ ಹೆಚ್.ಎಸ್.ಅರ್.ಪಿ ತಯಾರಕರು ಅಧಿಕೃತಗೊಳಿಸಿದ ಪೆÇೀರ್ಟಲ್ ಮೂಲಕ ವಾಹನದ ಮಾಲೀಕರು ಆನ್ ಲೈನ್ ನಲ್ಲಿ ಮಾತ್ರ ಶುಲ್ಕ ಪಾವತಿಸಿ, ಪ್ಲೇಟ್ ಅಳವಡಿಸಿಕೊಳ್ಳಲು ಅವರಿಗೆ ಅನುಕೂಲಕರವಾದ ಸ್ಥಳ ಮತ್ತು ದಿನಾಂಕವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಇ-ವಾಹನ್ ಪೆÇೀರ್ಟಲ್‍ನಲ್ಲಿ ಇರುವ ವಾಹನದ ವಿವರಗಳು ಹಾಗೂ ಹೆಚ್.ಎಸ್.ಆರ್.ಪಿ ತಯಾರಕರು ಅಧಿಕೃತಗೊಳಿಸಿದ ಆನ್‍ಲೈನ್ ಪೆÇೀರ್ಟಲ್‍ನಲ್ಲಿನ ವಾಹನದ ವಿವರಗಳೊಂದಿಗೆ ಪರಿಶೀಲನೆಯಾಗಿ ತಾಳೆಯಾದಲ್ಲಿ ಮಾತ್ರ ಹೆಚ್.ಎಸ್.ಆರ್.ಪಿ ಅಳವಡಿಸಲು ಅನುಮತಿ ದೊರೆಯುತ್ತದೆ. ಆರ್.ಸಿ ಮಾನ್ಯತೆ ಇಲ್ಲದ ವಾಹನಗಳಿಗೆ ಹೆಚ್.ಎಸ್.ಆರ್.ಪಿ ನೀಡಿ ಕಾನೂನುಬದ್ಧಗೊಳಿಸುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಹೇಳಿದರು.

ನಿಗದಿತ ದಿನಾಂಕದೊಳಗೆ ಹೆಚ್.ಎಸ್.ಆರ್.ಪಿ ಅಳವಡಿಸದಿದ್ದಲ್ಲಿ, ಮೊದಲನೇ ಅಪರಾಧಕ್ಕೆ ರೂ. 500 ಹಾಗೂ ಎರಡನೇ ಮತ್ತು ನಂತರದ ಅಪರಾಧಗಳಿಗೆ ರೂ 1000 ದಂತೆ ಹಾಗೂ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶದಂತೆ ದಂಡವನ್ನು ವಿಧಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ತಿಳಿಸಿದರು.

32 787 vehicles in the state have been fitted with HSRP number plates: Transport Minister Ramalinga Reddy 787 ವಾಹನಗಳಿಗೆ ಹೆಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ As many as 18 ರಾಜ್ಯದಲ್ಲಿ 18
Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 9 ಜಿಂಕೆ, 1 ಕಾಡು ಹಂದಿ ಬೇಟೆಯಾಡಿದ್ದ ಓರ್ವ ಅರೆಸ್ಟ್

29/06/2025 8:39 PM2 Mins Read

ಬೆಂಗಳೂರಲ್ಲಿ ‘ಇ-ಖಾತಾ’ ಅರ್ಜಿ ಸಲ್ಲಿಕೆಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 677 ವಿತರಣೆ

29/06/2025 7:38 PM1 Min Read

ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೇ? ಏಳು ಲಂವಗದಿಂದ ಈ ರಹಸ್ಯ ಪರಿಹಾರ ಮಾಡಿ, ನಿವಾರಣೆ ಖಂಡಿತ

29/06/2025 7:32 PM2 Mins Read
Recent News

Shocking: ವಿಯೆಟ್ನಾಂ ಆಹಾರ ಹಗರಣ: ಪಶು ಆಹಾರದ ಎಣ್ಣೆಯನ್ನು ಅಡುಗೆ ಎಣ್ಣೆಯಾಗಿ ಮಾರಾಟ | Vietnam Food Scam

29/06/2025 9:32 PM

F1 ಆಸ್ಟ್ರಿಯನ್ ಗ್ರ್ಯಾಂಡ್ ಪ್ರಿಕ್ಸ್-2025 ಗೆದ್ದ ಲ್ಯಾಂಡೊ ನಾರ್ರಿಸ್ | F1 Austrian Grand Prix 2025

29/06/2025 9:25 PM

ಕ್ಯಾಬಿನ್ ಒಳಗೆ ತಾಪಮಾನ ಹೆಚ್ಚಾಗಿದ್ದರಿಂದ ಏರ್ ಇಂಡಿಯಾ ವಿಮಾನ ಕೋಲ್ಕತ್ತದಲ್ಲಿ ಸೇಫ್ ಲ್ಯಾಂಡಿಂಗ್

29/06/2025 9:14 PM

ಬೆಂಗಳೂರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 9 ಜಿಂಕೆ, 1 ಕಾಡು ಹಂದಿ ಬೇಟೆಯಾಡಿದ್ದ ಓರ್ವ ಅರೆಸ್ಟ್

29/06/2025 8:39 PM
State News
KARNATAKA

ಬೆಂಗಳೂರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ: 9 ಜಿಂಕೆ, 1 ಕಾಡು ಹಂದಿ ಬೇಟೆಯಾಡಿದ್ದ ಓರ್ವ ಅರೆಸ್ಟ್

By kannadanewsnow0929/06/2025 8:39 PM KARNATAKA 2 Mins Read

ಬೆಂಗಳೂರು : ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸೂಚನೆಯ ಮೇರೆಗೆ ಬೆಂಗಳೂರು ನಗರ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ…

ಬೆಂಗಳೂರಲ್ಲಿ ‘ಇ-ಖಾತಾ’ ಅರ್ಜಿ ಸಲ್ಲಿಕೆಗೆ ಭರ್ಜರಿ ರೆಸ್ಪಾನ್ಸ್: ಇಂದು ಒಂದೇ ದಿನ 677 ವಿತರಣೆ

29/06/2025 7:38 PM

ನಿಮ್ಮ ಮನೆಯಲ್ಲಿ ಹಣದ ಸಮಸ್ಯೆಯೇ? ಏಳು ಲಂವಗದಿಂದ ಈ ರಹಸ್ಯ ಪರಿಹಾರ ಮಾಡಿ, ನಿವಾರಣೆ ಖಂಡಿತ

29/06/2025 7:32 PM

ಪ್ರಧಾನಿ ಮೋದಿ ಕಲಬುರ್ಗಿ ರೊಟ್ಟಿ ಯಶಸ್ಸನ್ನು ಪ್ರಸ್ತಾಪದ ಹಿಂದ ರಾಜ್ಯ ಸರ್ಕಾರದ ಶ್ರಮವಿದೆ: ಸಚಿವ ಪ್ರಿಯಾಂಕ್ ಖರ್ಗೆ

29/06/2025 7:29 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.