Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

06/06/2025 9:43 PM

ಮಹಿಳೆಯರೇ ಗಮನಿಸಿ ; ತಲೆ ಸ್ನಾನ ಮಾಡಿದ ತಕ್ಷಣ ಇವುಗಳನ್ನ ತಿನ್ನಬೇಡಿ.! ತಿಂದ್ರೆ ನಿಮ್ಗೆ ತೊಂದ್ರೆ

06/06/2025 9:27 PM

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಆಯುರ್ವೇದ ವೈದ್ಯ’ರು ‘ನಕಲಿ ವೈದ್ಯ’ರೇ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಸಂಪೂರ್ಣ ಉತ್ತರ | Ayush Doctor
KARNATAKA

‘ಆಯುರ್ವೇದ ವೈದ್ಯ’ರು ‘ನಕಲಿ ವೈದ್ಯ’ರೇ? ಇಲ್ಲಿದೆ ನಿಮ್ಮ ಪ್ರಶ್ನೆಗೆ ಸಂಪೂರ್ಣ ಉತ್ತರ | Ayush Doctor

By kannadanewsnow0920/08/2024 8:20 PM

 ಆಯುರ್ವೇದ ವೈದ್ಯರು ನಕಲಿ ವೈದ್ಯರೇ? ನಿಜವಾಗಿಯೂ ಅಲ್ಲ, ಇತ್ತೀಚಿನ ಕೆಲವು ದಿನಗಳಿಂದ ಆಯುಷ್ ವೈದ್ಯರು ನಕಲಿ ವೈದ್ಯರು ಎಂಬಂತೆ ಬಿಂಬಿಸಲಾಗುತ್ತಿದೆ, ಇದರಿಂದ ಜನಸಾಮಾನ್ಯರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ.ಆಯುರ್ವೇದ ವೈದ್ಯರಾಗಲು ಅವರ ಕಲಿಕಾ ಹಂತಗಳು ಹಾಗು ಅವರು ಕಲಿಯುವ ವಿಷಯಗಳ ಬಗ್ಗೆ ಮಾಹಿತಿಗಾಗಿ ಮುಂದೆ ಓದಿ.

10 ನೇ ತರಗತಿ ಮುಗಿಸಿದ ನಂತರ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ದುಕೊಂಡ ವಿದ್ಯಾರ್ಥಿಗಳು ಯಾವುದೇ ವೈದ್ಯಕೀಯ ಕೋರ್ಸ್ ಮಾಡಲು ಅರ್ಹರಿರುತ್ತಾರೆ.ಇದರಲ್ಲಿ ಆಯುರ್ವೇದ ಶಾಸ್ತ್ರ(ವಿಜ್ಞಾನ) ವು ಒಳಗೊಂಡಿದೆ.

ನಂತರದಲ್ಲಿ ಆ ವಿದ್ಯಾರ್ಥಿಗಳು ಮೆಡಿಕಲ್ ಕೋರ್ಸ್ಗಗೆ ಅಂದರೆ MBBS /Ayush/BDS ಗೆ ಸೇರಲು ಪ್ರವೇಶ ಪರೀಕ್ಷೆಯಾದ ನೀಟ್ (National Eligibility cum Entrance Test) ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತಾ ಅಂಕಗಳನ್ನು ಗಳಿಸಬೇಕಾಗುತ್ತದೆ. ನಂತರ ಕೌನ್ಸಿಲಿಂಗ್ ಮುಖೇನ ವಿದ್ಯಾರ್ಥಿಗಳ ರ‍್ಯಾಂಕ್ ಗಳ ಆಧಾರಿಸಿ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶವನ್ನು ಪಡೆಯುತ್ತಾರೆ.

ಮೇಲಿನ ಹಂತವು ಎಲ್ಲಾ ವೈದ್ಯಕೀಯ ಕೋರ್ಸ್ ಗಳಿಗೆ ಅನ್ವಯಿಸುತ್ತದೆ. ನಂತರದಲ್ಲಿ ಅಭ್ಯರ್ಥಿಯು ಆಯ್ದುಕೊಂಡ ಕೋರ್ಸಗಳಿಗೆ ಅನುಗುಣವಾಗಿ ಅವರ ಪಠ್ಯಕ್ರಮಗಳು ಅಥವಾ ವಿಷಯಗಳ ಭಿನ್ನವಾಗಿರುತ್ತವೆ. ಈಗ ಆಯುರ್ವೇದ ವೈದ್ಯರು ಕಲಿಯುವ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ.

ಆಯುರ್ವೇದ ಪದವಿ ಕೋರ್ಸ್ ಒಟ್ಟಾರೆಯಾಗಿ 5.5 ವರ್ಷದಾಗಿರುತ್ತದೆ, 4.5 ವರ್ಷ ಕಲಿಕಾ /ಶೈಕ್ಷಣಿಕ ಹಂತ ಮತ್ತು 1 ವರ್ಷ ಇಂಟರ್ನ್ಶಿಪ್ (training).

ಕಡ್ಡಾಯವಾಗಿ 5.5 ವರ್ಷ ಪೂರ್ಣವಾದ ನಂತರದಲ್ಲಿ ಆಯುರ್ವೇದ ಪದವಿಯನ್ನು ನೀಡಲಾಗುತ್ತದೆ. ಆ 4.5 ವರ್ಷಗಳ ಶೈಕ್ಷಣಿಕ ಹಂತದಲ್ಲಿ ಆಯುರ್ವೇದ ಪದವಿ ಪಡೆಯುವ ವಿದ್ಯಾರ್ಥಿಗಳು ಒಟ್ಟಾರೆಯಾಗಿ 19 ವಿಷಯಗಳನ್ನು ಕಲಿಯುತ್ತಾರೆ. ಅವುಗಳೆಂದರೆ ರಚನಾ ಶಾರೀರ (Anatomy) , ಕ್ರಿಯಾ ಶಾರೀರ(Physiology, Biochemistry), ದ್ರವ್ಯಗುಣ(Pharmacology) ,ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ (Pharmaceutics and clinical Pharmacology) , ಅಗಧತಂತ್ರ(toxicology), ಕೌಮಾರಭೃತ್ಯ(Paediatrics), ರೋಗ ನಿಧಾನ(Pathology), ಸ್ವಸ್ಥವೃತ್ಥ(Preventive and Social Medicine), ಪ್ರಸೂತಿ ತಂತ್ರ ಮತ್ತು ಸ್ರೀರೋಗ (gynecology and Obstetrics) ,ಕಾಯಚಿಕಿತ್ಸಾ(Internal Medicine), ಶಲ್ಯ ತಂತ್ರ(Surgery), ಶಾಲಾಖ್ಯಾ ತಂತ್ರ (Ophthalmology and ENT), ಪಂಚಕರ್ಮ ಚಿಕಿತ್ಸೆ ಹಾಗೂ ಸಂಸ್ಕೃತ ಭಾಷೆ, ಆಯುರ್ವೇದ ಸಂಹಿತೆಗಳಾದ ಚರಕ ಸಂಹಿತೆ, ಅಷ್ಟಾಂಗ ಹೃದಯ ಮುಂತಾದವುಗಳು.

ಈ ವಿಷಯಗಳನ್ನು ಆಯುರ್ವೇದದಲ್ಲಿ ತಿಳಿಸಿರುವಂತೆ ತಿಳಿಯುವುದಲ್ಲದೆೇ, ಆಧುನಿಕ ಶಾಸ್ತ್ರದ ವಿಷಯಗಳ ಬಗ್ಗೆಯೂ ತಿಳಿಸಲಾಗುತ್ತದೆ ಮತ್ತು ಮೃತ ದೇಹ ಛೇದನ (Dissection), Laboratory(Physiology and Pathology), ರೋಗಿ ಪರೀಕ್ಷೆ ಮತ್ತು ರೋಗದ ಪರೀಕ್ಷೆ ಮುಂತಾದ ಪ್ರಾಯೋಗಿಕ ಶಿಕ್ಷಣವನ್ನು ನೀಡಲಾಗುತ್ತದೆ.

ತದನಂತರ ಆಯುರ್ವೇದ ಪದವಿ ಪಡೆದ ವೈದ್ಯರುಗಳು ಆಯಾ ರಾಜ್ಯದ / ದೇಶದ (state Or central) ವೈದ್ಯರ ಮಂಡಳಿಗಳ ನಿಯಮಾನುಸಾರವಾಗಿ ನೋಂದಣಿಯನ್ನು ಪಡೆದು, KPME(Karnataka Private Medical Establishment) ನೋಂದಣಿಯನ್ನು ಪಡೆದು ವೈದ್ಯ ವೃತ್ತಿಯನ್ನು ಪ್ರಾರಂಭಿಸುತ್ತಾರೆ.

ಆಯುರ್ವೇದ ಪದವಿಯನ್ನು ಪಡೆದ ವೈದ್ಯರುಗಳು , ಪ್ರವೇಶ ಪರೀಕ್ಷೆ ಯಾದ ಪಿಜಿ ನೀಟ್ (ALL INDIA AYUSH POST GRADUATE ENTRANCE TEST) ನಲ್ಲಿ ಅರ್ಹತಾ ಅಂಕವನ್ನು ಪಡೆದ ಅಭ್ಯರ್ಥಿ ಅವರವರ ಇಚ್ಛೆಗನುಗುಣವಾಗಿ ಮತ್ತು ರ‍್ಯಾಂಕ್ ಆಧಾರಿಸಿ ವಿವಿಧ ವಿಷಯಗಳಲ್ಲಿ 3 ವರ್ಷ ಅವಧಿಯ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ.

ಇಷ್ಟೆಲ್ಲಾ ಸುಮಾರು 9 ವರ್ಷಗಳ ಕಾಲ ವೈದ್ಯಕೀಯ ಶಿಕ್ಷಣ ಪಡೆದ ಆಯುಷ್ ವೈದ್ಯರನ್ನು ನಕಲಿ ಎನ್ನುವುದು ಎಷ್ಟು ಸರಿ?

ಆಯುಷ್ ವೈದ್ಯರ ಸೇವೆ

ಗ್ರಾಮೀಣ ಭಾಗದ ಜನರಿಗೆ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವುದು ಆಯುಷ್ ವೈದ್ಯರುಗಳೇ. ಕೋವಿಡ್ -19 ರ ಸಮಯದಲ್ಲೂ ಕೂಡ ಆಯುಷ್ ವೈದ್ಯರ ಸೇವೆ ಶ್ಲಾಘನೀಯ.

ಆಯುಷ್ ವೈದ್ಯರ ತೊಂದರೆಗಳು

ಸರ್ಕಾರವು ಆಯುಷ್ ಇಲಾಖೆ ಖಾಲಿ ಇರುವ ಹುದ್ದೆ ಗಳನ್ನು ಭರ್ತಿ ಮಾಡದಿರುವುದು.ಗುತ್ತಿಗೆ ಆಧಾರದ ಮೇಲೆ MBBS ಪದವಿ ಹೊಂದಿರುವ ವೈದ್ಯರುಗಳು ಲಭ್ಯವಿಲ್ಲದಿದ್ದಲ್ಲಿ ಆ ಹುದ್ದೆಗೆ BAMS ಪದವಿದರರನ್ನು ಕಡಿಮೆ ಸಂಬಳದೊಂದಿಗೆ ಭರ್ತಿ ಮಾಡಿಕೊಳ್ಳುತ್ತದೆ.

ನೆರೆ ರಾಜ್ಯಗಳಲ್ಲಿ ಆಯುಷ್ ವೈದ್ಯರು ಅಲೋಪತಿ ಚಿಕಿತ್ಸೆಯನ್ನು ನೀಡಬಹುದೆಂದು ಕಾನೂನುಬದ್ಧವಾಗಿ ಅವಕಾಶ ವನ್ನು ಕಲ್ಪಿಸಲಾಗಿದೆ.ಆದರೆ ನಮ್ಮ ರಾಜ್ಯದಲ್ಲಿ ಈ ತರಹದ ಕಾನೂನು ಇನ್ನು ಜಾರಿಯಲ್ಲಿಲ್ಲ.ಸರ್ಕಾರವು ಇಂಡಿಯನ್ ಮೆಡಿಸಿನ್ ಸೆಂಟ್ರಲ್ ಕೌನ್ಸಿಲ್ ನಿಯಮಾವಳಿಗಳು, 2016 ಅನ್ನು ತಿದ್ದುಪಡಿ ಮಾಡಿ, ಆಯುರ್ವೇದದಲ್ಲಿ M.S (Master of surgery) ಸ್ನಾತಕ ಪದವಿ ಪಡೆದ ವೈದ್ಯರುಗಳಿಗೆ ಸುಮಾರು 40ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ಗಳನ್ನು ಮಾಡಲು ಅವಕಾಶವನ್ನು ನೀಡಿದೆ.

ಆಯುರ್ವೇದ ವೈದ್ಯರುಗಳು ಆಯುರ್ವೇದ ಶಾಸ್ತ್ರ ಶಿಕ್ಷಣವನ್ನು ಪಡೆಯುವುದಲ್ಲದೇ, ಆಧುನಿಕ ಶಾಸ್ತ್ರ (ಅಲೋಪತಿ)ಬಗ್ಗೆಯೂ ಶಿಕ್ಷಣವನ್ನು ಪಡೆದುಕೊಂಡಿರುತ್ತಾರೆ.

ತುರ್ತು ಸಮಯದಲ್ಲಿ ಅಲೋಪತಿ ಚಿಕಿತ್ಸೆಯನ್ನು ನೀಡಿದ ಮಾತ್ರಕ್ಕೆ ಆಯುಷ್ ವೈದ್ಯರನ್ನು ನಕಲಿ ಎಂದು ಬಿಂಬಿಸಿ, ಸಮಾಜಕ್ಕೆ ತಪ್ಪು ಮಾಹಿತಿಯನ್ನು ನೀಡುವುದು ಸರಿಯಾದ ಕ್ರಮವಲ್ಲ. ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಎಲ್ಲಾ ವೈದ್ಯಕೀಯ ಶಾಸ್ತ್ರಗಳು ಅತ್ಯಗತ್ಯ ಮತ್ತು ಎಲ್ಲ ವೈದ್ಯರ ಧ್ಯೇಯ ರೋಗಿಯ ಗುಣಪಡಿಸುವುದೇ ಮುಖ್ಯ ಉದ್ದೇಶವಾಗಿರುತ್ತದೆ.

ಲೇಖನ: ಡಾ. ಪ್ರವೀಣ್ ಕುಮಾರ್ BAMS, MD(Ayu), ಆಯುರ್ವೇದ ವೈದ್ಯ, ಹಗರಿಬೊಮ್ಮನಹಳ್ಳಿ

ಕರ್ನಾಟಕದಲ್ಲಿ ‘ವೈದ್ಯರ ಸುರಕ್ಷತೆ’ಗೆ ಸರ್ಕಾರದಿಂದ ಈ ಮಹತ್ವ ಕ್ರಮಕ್ಕೆ ನಿರ್ಧಾರ

BIG NEWS: ಇನ್ಮುಂದೆ ಎಲ್ಲಾ ‘ಸರ್ಕಾರಿ ಕಟ್ಟಡ’ಗಳಿಗೆ ‘ಮೈಸೂರು ಪೇಂಟ್ಸ್’ : ಸಚಿವ ಎಂ.ಬಿ ಪಾಟೀಲ್

‘ಸಿದ್ದರಾಮಯ್ಯ’ ಅವರದು ಹೆದರುವ ರಕ್ತವಲ್ಲ, ಅದು ಅವರ ರಕ್ತದಲ್ಲಿಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

06/06/2025 9:43 PM1 Min Read

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM1 Min Read

ನನ್ನ ವಿರುದ್ಧ ಬೆಟ್ಟು ಮಾಡುತ್ತಿರುವುದೇಕೆ? ತೆರೆಮರೆಯಲ್ಲಿ ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ: ಡಿಸಿಎಂ ಡಿಕೆಶಿ

06/06/2025 8:44 PM2 Mins Read
Recent News

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

06/06/2025 9:43 PM

ಮಹಿಳೆಯರೇ ಗಮನಿಸಿ ; ತಲೆ ಸ್ನಾನ ಮಾಡಿದ ತಕ್ಷಣ ಇವುಗಳನ್ನ ತಿನ್ನಬೇಡಿ.! ತಿಂದ್ರೆ ನಿಮ್ಗೆ ತೊಂದ್ರೆ

06/06/2025 9:27 PM

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM

ವಿಜ್ಞಾನಿಗಳ ಅದ್ಭುತ ಆವಿಷ್ಕಾರ ; ‘ಮ್ಯಾಜಿಕ್ ಪ್ಲಾಸ್ಟಿಕ್’ ತಯಾರಿ, ನೀರಲ್ಲಿ ಹಾಕಿದ್ರೆ ತಕ್ಷಣ ಕರಗುತ್ತೆ

06/06/2025 9:03 PM
State News
KARNATAKA

ಬೆಂಗಳೂರಲ್ಲಿ ಕಾಲ್ತುಳಿತ ದುರಂತ: RCB, KSCA, DNA ಕಂಪನಿ ವಿರುದ್ಧ 3ನೇ FIR ದಾಖಲು

By kannadanewsnow0906/06/2025 9:43 PM KARNATAKA 1 Min Read

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ ಸಿಬಿ, ಕೆ ಎಸ್ ಸಿ ಎ, ಡಿಎನ್ಎ ಕಂಪನಿಗಳ…

BREAKING: ಬೆಂಗಳೂರಲ್ಲಿ ಮೆಟ್ರೋ ಪಿಲ್ಲರ್ ಗೆ ‘BMTC ಬಸ್’ ಡಿಕ್ಕಿ: 10ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

06/06/2025 9:18 PM

ನನ್ನ ವಿರುದ್ಧ ಬೆಟ್ಟು ಮಾಡುತ್ತಿರುವುದೇಕೆ? ತೆರೆಮರೆಯಲ್ಲಿ ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ: ಡಿಸಿಎಂ ಡಿಕೆಶಿ

06/06/2025 8:44 PM

ರಾಜ್ಯ ಸರ್ಕಾರದಿಂದ ‘ಆಡಳಿತ ಯಂತ್ರ’ಕ್ಕೆ ಮೇಜರ್ ಸರ್ಜರಿ: ಐವರು ‘IPS ಅಧಿಕಾರಿ’ಗಳ ವರ್ಗಾವಣೆ | IPS Officer Transfer

06/06/2025 8:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.