ನವದೆಹಲಿ: ಬೆಂಗಳೂರಿನ ನಾಯಂಡನಹಳ್ಳೀ ರೇಲ್ವೆ ನಿಲ್ದಾಣದಲ್ಲಿ ಈ ಕೆಳಕಂಡ ನಾಲ್ಕು ರೈಲುಗಳನ್ನು ನಿಲುಗಡೆಗೊಳಿಸಲು ಅನುಮತಿ ನೀಡಿರುವುದಾಗಿ ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
೧) ರೈಲು ಸಂಖ್ಯೆ : 16215/16216 ; ಮೈಸೂರು – ಕೆ.ಎಸ್. ಆರ್. ಸಿಟಿ
೨) ರೈಲು ಸಂಖ್ಯೆ : 17307 /17308 – ಮೈಸೂರು –ಬಾಗಲಕೋಟೆ –ಬಸವ ಎಕ್ಸಪ್ರೆಸ್
೩) ರೈಲು ಸಂಖ್ಯೆ 16235/16236 : ಟುಟಿಕೋರಿನ್ – ಮೈಸೂರು ಎಕ್ಸಪ್ರೆಸ್
೪) ರೈಲು ಸಂಖ್ಯೆ 16535/16536 ; ಮೈಸೂರು – ಪಂಡಾರಪುರ ಗೊಲ್ಗುಂಬಜ್ ಎಕ್ಸಪ್ರೆಸ್
ಈ ರೈಲುಗಳನ್ನು ನಾಯಂಡನಹಳ್ಳಿ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸುವಂತೆ ಸಾರ್ವಜನಿಕರ ಒತ್ತಡವಿತ್ತು. ಹಲವು ಭಾರಿ ಸಾರ್ವಜನಿಕರ ನನ್ನಲ್ಲಿ ಮನವಿ ಮಾಡಿದ್ದರು. ಸಾರ್ವಜನಿಕರ ಮನವಿಯನ್ನು ಪರಿಗಣಿಸಲು ರೇಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರೈಲು ನಿಲುಗಡೆಗೆ ಕ್ರಮ ಜರುಗಿಸಲಾಗಿತ್ತು. ರೇಲ್ವೆ ಇಲಾಖೆ ಪ್ರಯಾಣಿಕರ ಹಿತದೃಷ್ಟಿಯಿಂದ ಮೇಲ್ಕಂಡ ನಾಲ್ಕು ರೈಲುಗಳಿಗೆ ನಾಯಂಡನಹಳ್ಳಿ ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಆದೇಶ ನೀಡಿದೆ ಎಂದು ಕೇಂದ್ರ ರೇಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆಯ ಸಚಿವ ಸೋಮಣ್ಣ ತಿಳಿಸಿದ್ದಾರೆ.
ಈ ರೈಲುಗಳ ನಿಲುಗಡೆಯಿಂದ ಬೆಂಗಳೂರಿನಿಂದ ಮೈಸೂರು, ಬಾಗಲಕೋಟೆ, ತಮಿಳುನಾಡು, ಹುಬ್ಬಳ್ಳಿ-ಧಾರವಾಡ, ಪಂಡರಾಪುರ ಹಾಗೂ ವಿಶೇಷವಾಗಿ ಬೆಂಗಳೂರು ಮತ್ತು ಮೈಸೂರಿನ ನಡುವೆ ದಿನನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ಬಹಳ ಅನುಕೂಲಕರವಾಗಲಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
ನಾಯಂಡನಹಳ್ಳಿ, ಚಂದ್ರಾಲೇಔಟ್, ಸುವರ್ಣ ಬಡಾವಣೆ, ಐ.ಟಿ.ಐ. ಲೇಜೌಟ್, ಪಂತ್ರಪಾಳ್ಯ, ವಿನಾಯಕ ಲೇಔಟ್, ನಾಗರಭಾವಿ, ಮೂಡಲಪಾಳ್ಯ, ಆರ್. ಆರ್. ನಗರ, ಕತ್ರಿಗುಪ್ಪೆ, ಹೊಸಕೆರೆಹಳ್ಳಿ, ವೀರಭದ್ರಯ್ಯ, ಕಮ್ಮಾರನಗರ, ಪ್ರಮೋದ ಲೇಔಟ್, ಕತ್ರಿಗುಪ್ಪೆ ಭಾಗದ ಸಾರ್ವಜನಿಕರಿಗೆ ಈ ರೈಲುಗಳ ನಿಲುಗಡೆಯಿಂದ ಪ್ರಯೋಜನವಾಗಲಿದೆಯೆಂದು ಕೇಂದ್ರ ಸಚಿವ ವಿ. ಸೋಮಣ್ಣ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರು ರೈಲು ಸೇವೆಗಳ ಸದುಪಯೋಗ ಪಡಿಸಿಕೊಳ್ಳವುಂತೆ ಕೇಂದ್ರ ರೈಲು ಮತ್ತು ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣನವರು ಮನವಿ ಮಾಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರೈಲು ಪ್ರಯಾಣಿಕರ ಹಿತಾಶಕ್ತಿಗಳನ್ನು ಗಮನದಲ್ಲಿರಿಸಿಕೊಂಡು ಹತ್ತಾರು ಅಭಿವೃದ್ದಿಪರ ಕೆಲಸ ಮಾಡುತ್ತಿದ್ದು, ನಾಯಂಡನಹಳ್ಳಿ ರೇಲ್ವೆ ನಿಲ್ದಾಣಗಳಲ್ಲಿ ಈ 4 ರೈಲುಗಳ ನಿಲುಗಡೆಗೆ ಅನುಮೋದನೆ ನೀಡಲು ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರದ ರೈಲು ಸಚಿವರಾದ ಅಶ್ವೀನಿ ವೈಷ್ಣವ್ ಅವರಿಗೆ ಈ ಭಾಗದ ಸಾರ್ವಜನಿಕರ ಪರವಾಗಿ ಕೇಂದ್ರ ಸಚಿವ ವಿ. ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.








