ಶಿವಮೊಗ್ಗ : ಆತ್ಮ ಯೋಜನೆಯಡಿ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ಸಿಬ್ಬಂದಿ ಸೇವೆ ಪಡೆಯಲು ಪ್ರಸಕ್ತ ಖಾಲಿ ಇರುವ ಮತ್ತು ಆರ್ಥಿಕ ವರ್ಷದಲ್ಲಿ ಹಾಗೂ 2023-24 ನೇ ಸಾಲಿಗೆ ಉದ್ಭವಿಸಬಹುದಾಗ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರು ಮತ್ತು ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

BREAKING: ಇಡಿಯಿಂದ ಛತ್ತೀಸಗಡ ಸಿಎಂ ಭೂಪೇಶ್ ಬಘೇಲ್ ಉಪಕಾರ್ಯದರ್ಶಿ ಬಂಧನ

ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ 01 ಹುದ್ದೆ, ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, 2 ವರ್ಷ ಅನುಭವ ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ 03 ಹುದ್ದೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ, 1 ವರ್ಷ ಅನುಭವ ಹೊಂದಿರಬೇಕು.

ಕೆಜಿಎಫ್ ಚಿತ್ರದ ಹಾಡು ತೆರವುಗೊಳಿಸಿದ ವಿಚಾರ: ಹೈಕೋರ್ಟ್ ನಿಂದ ರಾಹುಲ್ ಗಾಂಧಿ ಸೇರಿ ಹಲವು ಕೈ ನಾಯಕರಿಗೆ ನೋಟಿಸ್

ಅಭ್ಯರ್ಥಿಯ ವಯೋಮಿತಿ 45 ಮೀರಿರಬಾರದು. ಸೂಕ್ತ ವಿದ್ಯಾರ್ಹತೆ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಯೋಜನಾ ನಿರ್ದೇಶಕರು(ಆತ್ಮ) ಹಾಗೂ ಜಂಟಿ ಕೃಷಿ ನಿರ್ದೇಶಕರು, ಶಿವಮೊಗ್ಗ ಇವರ ಕಚೇರಿಯಲ್ಲಿ ಪಡೆದು ಸವಿವರಗಳೊಂದಿಗೆ ಡಿಸೆಂಬರ್ 17 ರೊಳಗೆ ಯೋಜನಾ ನಿರ್ದೇಶಕರು(ಆತ್ಮ) ಮತ್ತು ಜಂಟಿ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹಳೇ ತೀರ್ಥಹಳ್ಳಿ ರಸ್ತೆ, ಶಿವಮೊಗ್ಗ 5777202 ಇಲ್ಲಿ ಸಲ್ಲಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

BIG NEWS: ತುಮಕೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಸೂಕ್ತ ಸಮಯದಲ್ಲಿ ಮಗುವಿಗೆ ಚಿಕಿತ್ಸೆ ಸಿಗದೇ ಪೋಷಕರ ಕೈಯಲ್ಲೇ ಮಗು ಸಾವು

Share.
Exit mobile version